` gurudev hoysala, - chitraloka.com | Kannada Movie News, Reviews | Image

gurudev hoysala,

  • Gurudev Hoysala Movie Review, Chitraloka Rating 4/5

    Hoysala Movie Review, Chitraloka Rating 4/5

    Film: Gurudev Hoysala

    Director: Vijay N

    Cast: Dhananjaya, Naveen Shankar, Amrutha Iyengar, Achyuth Kumar, Prathap Narayan

    Duration: 132 minutes

    Certificate: UA

    A modern cop classic 

    Mainstream Kannada film makers would easily accept the verdict of ‘guilty as charged’ when it comes to their aversion to addressing serious social issues. They cannot be blamed when anyone and everyone seems to be easily offended for even innocuous elements in movies. So, director Vijay N and his team should primarily be commended for blending an important concern into what is essentially a commercial potboiler. Of course, he plays it safe and makes sure names, places and references remain generic, but the risk taken is admirable. I won’t blow the gaff on the theme here. It is best experienced as part of the film.

    Gurudev Hoysala is the typical honest cop whose suitcases are best left unpacked. He arrives in Belagavi to investigate a missing police officer but soon gets embroiled in an issue that has the potential to flare up things beyond anybody’s control. Our hero has to set things right before the Pandora’s Box he has unwittingly opened threatens to shatter peace. Yes, of course we know he will win in the end, but does his actions till then entertain us is the question.

    The story is packed with loads of action befitting a cop saga. There are incidents and characters that would make any film meaningful and worth the watch. The characters portrayed by Achyuth Kumar, Naveen Shankar and Nagabushana for example keep the narrative engaging. What they lack is the complexity that makes some film characters household names. The characters are given very little time to mature in the minds of the audience. The director and the editor are in a hurry to keep the film around the two-hour mark. That perhaps is the need of the hour as well.

    The film has a taut storyline and a pacy narrative, but its generic conflicts make the progression predictable. How would an insane villain get back at the gritty cop? Of course, attack his family and friends. The easy way out of tricky situations is taken throughout and even in the climax. A few unpredictable actions by the protagonist would have made this film classier. Gurudev Hoysala is a good cop-action thriller no doubt. But it just stops short of propelling ‘Hoysala’ from becoming a cult.  

    A few more fleshed-out characters and scenes may have put Hoysala on the same footing as a Sangliyana or even a Police Story. A few more nuances and a few more subtle play up of emotions perhaps? It is not too much to ask for right?

    Hoysala is a pot-boiler of action, heroics, revenge, class conflict and emotions. It is entertaining and engaging too. It is a mass-masala police story whose underlying social theme gives it a broader and humane appeal. The film won’t disappoint and is a value-for-money proposition for audiences and is a worthy addition to Sandalwood’s cop genre movies.

  • ಡಾಲಿ ಧನಂಜಯ : ಒಂದಕ್ಕಿಂತ ಒಂದು ವಿಭಿನ್ನ 25 ಸಿನಿಮಾ ಜರ್ನಿ

    ಡಾಲಿ ಧನಂಜಯ : ಒಂದಕ್ಕಿಂತ ಒಂದು ವಿಭಿನ್ನ 25 ಸಿನಿಮಾ ಜರ್ನಿ

    ಡಾಲಿ ಧನಂಜಯ ಸ್ಟಾರ್ ಎಂದರೆ ಅವರೇ ನಕ್ಕು ಬಿಡ್ತಾರೆ. ಒಳಗೊಳಗೆ ಖುಷಿಪಡದಿರುವ ವ್ಯಕ್ತಿ ಯಾರಿಲ್ಲ. ಆದರೆ, ಸ್ಟಾರ್ ಪಟ್ಟ ಎನ್ನುವುದು ಸುಮ್ಮನೆ ಸಿಕ್ಕಲ್ಲ. ತಾರಾ ಪಟ್ಟ ಎನ್ನುವುದು ಯಾರೊಬ್ಬರಿಗೂ ಸುಲಭವಾಗಿ ಒಲಿದು ಬಂದಿಲ್ಲ. ಮೊದಲು ಅವಮಾನ.. ಆಮೇಲೆ ಅಭಿಮಾನ.. ತದನಂತರ ಸನ್ಮಾನ.. ಡಾ.ರಾಜ್ ಅವರಿಂದ ಹಿಡಿದು ಈಗಿನ ಡಾಲಿಯವರೆಗೆ ಎಲ್ಲರೂ ಅನುಭವಿಸಿರುವುದೇ ಇದು. ಡಾಲಿ ಎಂಬ ನಟನಿಗೆ ಸಿನಿಮಾಗೆ ಬರುವ ಅಗತ್ಯವೇ ಇರಲಿಲ್ಲ. ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಡಾಲಿ, ಆ ಫೀಲ್ಡಿನಲ್ಲೇ ಕಂಟಿನ್ಯೂ ಆಗಿದ್ದರೆ, ಆಗಿನ ಕಾಲಕ್ಕೆ ಲಕ್ಷ ಲಕ್ಷ ಸಂಬಳ ಗಿಟ್ಟಿಸಬಹುದಿತ್ತು. ಯಾವ ದೇಶದಲ್ಲೋ ಸೆಟ್ಲ್ ಆಗಬಹುದಿತ್ತು. ಆದರೆ ಸಿನಿಮಾ ಕೈಬೀಸಿ ಕರೆದು, ಸಿನಿಮಾಗಾಗಿ ಹಠ ಬಿದ್ದು ಬಂದ ಡಾಲಿ ಧನಂಜಯ, ಹೀರೋ ಆಗಿಯೇ ಸಿನಿಮಾಗೆ ಬಂದವರು.

    ಮೊದಲ ಪಿಕ್ಚರ್ ಡೈರೆಕ್ಟರ್ ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್. ಮಠ ಖ್ಯಾತಿಯ ಗುರು ಪ್ರಸಾದ್ ಚಿತ್ರವಾಗಿದ್ದ ಕಾರಣ, ಚಿತ್ರ ಸೌಂಡ್ ಮಾಡಿತು. ಅದಾದ ನಂತರ ರಾಟೆ ಬಂತು. ಮತ್ತೊಮ್ಮೆ ಒಳ್ಳೆಯ ಡೈರೆಕ್ಟರ್ ಸಿಕ್ಕರು. ಎ.ಪಿ.ಅರ್ಜುನ್ ರಾಟೆ ಕೂಡಾ ಸೌಂಡ್ ಮಾಡಿತು. ಆದರೆ, ಡೈರೆಕ್ಟರ್ ಸ್ಪೆಷಲ್ ಮತ್ತು ರಾಟೆ ಎರಡೂ ಕೂಡಾ ಆವರೇಜ್ ಹಿಟ್ ಆದವು. ಆದರೆ ಧನಂಜಯ ಭರವಸೆ ಹುಟ್ಟಿಸಿದ್ದರು.

    ಅದಾದ ನಂತರ ಬಂದಿದ್ದೇ ಬಾಕ್ಸರ್. ಕಂಪ್ಲೀಟ್ ಆಕ್ಷನ್ ಮೂವಿ. ಪ್ರೀತಂ ಗುಬ್ಬಿಯಂತಹಾ ಡೈರೆಕ್ಟರ್ ಮತ್ತು ಜಯಣ್ಣ-ಭೋಗೇಂದ್ರ ಅವರಂತಹ ಸ್ಟಾರ್ ನಿರ್ಮಾಪಕರಿದ್ದರೂ ಸಿನಿಮಾ ಹೇಳಿಕೊಳ್ಳುವ ಮಟ್ಟಕ್ಕೆ ಏಳಲಿಲ್ಲ. ಅದಾದ ಮೇಲೆ ಪವನ್ ಒಡೆಯರ್ ಜೊತೆಗೆ ಜೆಸ್ಸಿ ಚಿತ್ರ ಬಂದು. ಹಾಡುಗಳೂ ಹಿಟ್ ಆದವರು. ಸಿನಿಮಾ ಗಮನ ಸೆಳೆಯಿತು. ಆದರೆ ಅಷ್ಟು ಹೊತ್ತಿಗೆ ಗಾಂಧಿನಗರ ಧನಂಜಯ ಅವರಿಗೆ ಬೇರೆಯದೇ ಬ್ರಾಂಡ್ ಕಟ್ಟಾಗಿತ್ತು. ನಟಿಸಿದ್ದ ಪ್ರತಿ ಚಿತ್ರದಲ್ಲೂ ಡಾಲಿ ಧನಂಜಯ ಅವರ ಪ್ರತಿಭೆ ಗಮನ ಸೆಳೆದಿತ್ತು. ಲವರ್ ಬಾಯ್ ಆಗಿ, ಆಕ್ಷನ್ ಹೀರೋ ಆಗಿ, ಮುಗ್ಧನಾಗಿ, ದೆವ್ವವಾಗಿ.. ಗೆದ್ದಿದ್ದರು ಧನಂಜಯ. ಆಗ ಅವರಿನ್ನೂ ಡಾಲಿ ಆಗಿರಲಿಲ್ಲ.

    ಗುರುಪ್ರಸಾದ್ ಅವರ ಜೊತೆ ಎರಡನೇ ಸಲ, ಹ್ಯಾಪಿ ನ್ಯೂ ಇಯರ್, ಬದ್ಮಾಶ್.. ಹೀಗೆ ಹಲವು ಚಿತ್ರಗಳನ್ನು ಮಾಡಿದರು. ನಡುವೆ ಅಲ್ಲಮ ಚಿತ್ರದಲ್ಲಿ ವಚನಕಾರ ಅಲ್ಲಮಪ್ರಭು ಪಾತ್ರದಲ್ಲಿ ಗಮನ ಸೆಳೆದರು. ಡಾಲಿ ಧನಂಜಯ ಎಂತಹ ಪಾತ್ರಗಳಿಗೂ ಸೂಟ್ ಆಗ್ತಾನೆ ಕಣ್ರಿ ಎಂಬ ಭರವಸೆ ಹುಟ್ಟಿಸಿದರು. ಆದರೆ ಧನಂಜಯ ಅವರಿಗೆ ಅಂಟಿದ್ದ ಬೋರ್ಡು ಅವರನ್ನು ಅಷ್ಟೊತ್ತಿಗಾಗಲೇ ಚಿಕ್ಕ ಚಿಕ್ಕ ಪಾತ್ರಗಳಿಗೆ ಸೀಮಿತಗೊಳ್ಳುವ ಹಾಗೆ ಮಾಡಿತ್ತು. ಆ ವೇಳೆಗೆ ಬಂದ ಸಿನಿಮಾವೇ ಟಗರು.

    ಒಬ್ಬೊಬ್ಬರ ವೃತ್ತಿ ಜೀವನದಲ್ಲಿ ಒಂದೊಂದು ಟರ್ನಿಂಗ್ ಪಾಯಿಂಟ್ ಎಂಬಂತಹ ಸಿನಿಮಾ ಇರುತ್ತದೆ. ಡಾಲಿಗೆ ಆ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು ಟಗರು. ಹಾಗೆ ನೋಡಿದರೆ ಆ ಚಿತ್ರಕ್ಕೆ ಹೀರೋ ಶಿವಣ್ಣ. ಡೈರೆಕ್ಟರ್ ಸೂರಿ. ಹೀಗಿದ್ದರೂ ಧನಂಜಯ ಅವರ ಡಾಲಿ ಸೂಪರ್ ಡ್ಯೂಪರ್ ಹಿಟ್. ಅಭಿಮಾನಿಗಳಿಗಷ್ಟೇ ಅಲ್ಲ, ಸ್ವತಃ ಶಿವಣ್ಣ ಡಾಲಿಯ ನಟನೆಗೆ ಫಿದಾ ಆದರು. ಆಗ ಧನಂಜಯ ಹಿಂದೆ ಬಂದ ಹೆಸರೇ ಡಾಲಿ. ನಟರಾಕ್ಷಸ ಎಂಬ ಬಿರುದು ಹುಟ್ಟಿದ್ದೇ ಆಗ.

    ಇದಾದ ಮೇಲೆ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದು, ತೆಲುಗಿನಲ್ಲಿ ಭೈರವ ಗೀತ ಮಾಡಿದರು. ಸುಕುಮಾರ್ ಕಣ್ಣಿಗೆ ಬಿದ್ದು ಪುಷ್ಪಕ್ಕೆ ವಿಲನ್ ಆದರು. ದುನಿಯಾ ವಿಜಯ್ ಜೊತೆ ಸಲಗದಲ್ಲೊಂದು ಕ್ಯಾರೆಕ್ಟರ್ ಮಾಡಿದರು. ಪುನೀತ್ ಜೊತೆ ಯುವರತ್ನಕ್ಕೆ ವಿಲನ್ ಆದರು. ಹೀಗೆ ವಿಲನ್ ಪಾತ್ರಗಳಲ್ಲಿ ನಟಿಸುತ್ತಲೇ ಬಡವ ರಾಸ್ಕಲ್ ಚಿತ್ರವನ್ನು ನಿರ್ಮಾಣ ಕೂಡ ಮಾಡಿದರು. ಸಿನಿಮಾ ಸೂಪರ್ ಹಿಟ್.

    ರತ್ನನ್ ಪ್ರಪಂಚ, ಮಾನ್ಸೂನ್ ರಾಗ, ಭೈರಾಗಿ, ಹೆಡ್ ಬುಷ್.. ಹೀಗೆ ಪ್ರತಿ ಚಿತ್ರದಲ್ಲೂ ವಿಭಿನ್ನತೆಯ ಹಾದಿ ತುಳಿದ ಡಾಲಿ, ನಟನಷ್ಟೇ ಅಲ್ಲ, ಅವರೊಳಗೊಬ್ಬ ಸಾಹಿತಿಯೂ ಇದ್ದಾನೆ. ಡಾಲಿಯಾಗಿ ಪೊಲೀಸರಿಂದ ಹೊಡೆತ ತಿಂದಿದ್ದ ಧನಂಜಯ, ಈಗ ಗುರುದೇವ್ ಹೊಯ್ಸಳನಾಗಿ ಬಂದಿದ್ದಾರೆ. ಇದು ಅವರ 25ನೇ ಸಿನಿಮಾ.

    ಒಬ್ಬ ನಟನ ಕೆರಿಯರಿನಲಿ 25ನೇ ಸಿನಿಮಾ ಎನ್ನುವುದು ಒಂದು ಮೈಲುಗಲ್ಲೇ ಸರಿ. ಆ ಮೈಲುಗಲ್ಲಿನಲ್ಲಿ ಡಾಲಿಗೆ ದೊಡ್ಡ ಯಶಸ್ಸು ಸಿಗಲಿ.

  • ಡಾಲಿ..ಅಮೃತಾ ಅಯ್ಯಂಗಾರ್ ಲವ್ ಸ್ಟೋರಿ ರೀಲ್ ಮಾತ್ರ.. ರಿಯಲ್ ಅಲ್ಲ..!

    ಡಾಲಿ..ಅಮೃತಾ ಅಯ್ಯಂಗಾರ್ ಲವ್ ಸ್ಟೋರಿ ರೀಲ್ ಮಾತ್ರ.. ರಿಯಲ್ ಅಲ್ಲ..!

    ಹೀರೋ ಮತ್ತು ಹೀರೋಯಿನ್ ಒಟ್ಟೊಟ್ಟಿಗೇ ಮೂರು ಸಿನಿಮಾ ಮಾಡಿದರೆ ಸಹಜವಾಗಿಯೇ ಅಂಥಾದ್ದೊಂದು ರೂಮರ್ ಸೃಷ್ಟಿಯಾಗಿಬಿಡುತ್ತದೆ. ಜೊತೆಗೆ ಅವರಿಬ್ಬರೂ ಬ್ಯಾಚುಲರ್ ಆಗಿದ್ದರೆ ಮುಗಿದೇ ಹೋಯ್ತು. ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಆಗಿರುವುದೂ ಕೂಡಾ ಅದೇ. ಇತ್ತೀಚೆಗೆ ಹೊಯ್ಸಳ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್ ಡಾಲಿ ಮತ್ತು ಅಮೃತಾರನ್ನು ಕಾಲೆಳೆದರು.

    ನೀವು ಯಾಕೆ ಇವರೊಟ್ಟಿಗೆ ಜಾಸ್ತಿ ನಟಿಸ್ತೀರಿ..? ಬೇರೆ ಕಲಾವಿದರಿಗೂ ಡೇಟ್ಸ್ ಕೊಡಿ.. ಅವರ ಜೊತೆಗೆ ನಟಿಸಿ.. ಮೂರ್ ಮೂರು ಸಿನಿಮಾ ಇವರ ಜತೆಗೆ ಮಾಡಿದ್ರೆ, ಬೇರೆಯವರಿಗೆ ನೀವು ಸಿಗೋದು ಹೇಗೆ? ಅಮೃತಾ ಮೂರು ಸಿನಿಮಾ ಒಟ್ಟಿಗೆ ಮಾಡಿದ್ರೂ, ಅವರನ್ನು ವೇದಿಕೆ ಧನಂಜಯ ಹೊಗಳುತ್ತಿಲ್ಲ. ನಮ್ಮೊಟ್ಟಿಗೆ ಮಾಡಿದ್ರೆ, ನಾವು ಅರ್ಧ ಗಂಟೆ ಹೊಗಳುತ್ತಿದ್ವಿ…ಕಿಚ್ಚ ಸುದೀಪ್ ಈ ಮಾತು ಹೇಳುವುದಕ್ಕೆ ಕಾರಣವಿತ್ತು. ವೇದಿಕೆಯಲ್ಲಿದ್ದ ಎಲ್ಲರ ಬಗ್ಗೆ ಮಾತನಾಡಿದ ಡಾಲಿ, ಅಮೃತಾರನ್ನು ಇವರು ಚಿತ್ರದ ಹೀರೋಯಿನ್ ಎಂದು ಹೇಳಿ ಮಾತು ಮುಗಿಸಿದ್ದರು.

    ಸುದೀಪ್ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರ ಪಾಪ್ಕಾರ್ನ್ ಮಂಕಿ ಟೈಗರ್' ನೋಡಿ 'ಬಡವ ರಾಸ್ಕಲ್' ಸಿನಿಮಾಗೆ ನಿರ್ದೇಶಕ ಶಂಕರ್ ಗುರು ಮತ್ತೊಮ್ಮೆ ಜೋಡಿ ಮಾಡಿದ್ರು. ಬಡವ ರಾಸ್ಕಲ್ ಸಿನಿಮಾ ಹಿಟ್ ಆಯ್ತು ಅಂತ ನಮ್ಮ ಯೋಗಿ ಜಿ. ರಾಜ್, ಕಾರ್ತಿಕ್, ನಿರ್ದೇಶಕ ವಿಜಯ್ ಅವರು ಮತ್ತೆ ಅದೇ ಜೋಡಿಯನ್ನು ಕಂಟಿನ್ಯೂ ಮಾಡಿದರು.. ಎಂದು ಹೇಳಿದರು.

    ವಾಸ್ತವವಾಗಿ ಈ ಗುಲ್ಲು ಹಬ್ಬೋಕೆ ಕಾರಣವಾಗಿದ್ದು ಗಣೇಶ್ ನಡೆಸಿಕೊಡುತ್ತಿದ್ದ ಟಿವಿ ಶೋವೊಂದರಲ್ಲಿ ಅಮೃತಾ ಅವರು ಡಾಲಿಗೆ ಪ್ರಪೋಸ್ ಮಾಡಿದ್ದು. ಟಿವಿ ಶೋನಲ್ಲಿ ತಮಾಷೆಗಾಗಿ ಮಾಡಿದ ವಿಡಿಯೋವನ್ನು ಜನ ಮರೆಯಲೇ ಇಲ್ಲ. ಒಟ್ಟಿಗೇ ಸಿನಿಮಾ ಮಾಡುತ್ತಿರೋ ಕಾರಣ, ಸಹಜವಾಗಿಯೇ ಹೊರಗಡೆಯೂ ಸಿಗುವ ಜೋಡಿ ಮಧ್ಯೆ ಏನೋ ಇದೆ. ಏನೇನೋ ಇದೆ.. ಎಂಬ ಗಾಸಿಪ್ ಹಬ್ಬುತ್ತದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್ ಅಷ್ಟೇ ಎನ್ನುವ ಡಾಲಿ ಮತ್ತು ಅಮೃತಾ.. ಸ್ನೇಹವನ್ನು ಮಾತ್ರ ಕಾಯ್ದುಕೊಂಡೇ ಬಂದಿದ್ದಾರೆ.

    ಇದೆಲ್ಲದರ ಮಧ್ಯೆ ಹೊಯ್ಸಳ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ.

  • ಸ್ಯಾಂಡಲ್`ವುಡ್ ಟೈಟಲ್ ಸಂಕಟ : ಹೊಯ್ಸಳ ಈಗ ಗುರುದೇವ್ ಹೊಯ್ಸಳ

    ಸ್ಯಾಂಡಲ್`ವುಡ್ ಟೈಟಲ್ ಸಂಕಟ : ಹೊಯ್ಸಳ ಈಗ ಗುರುದೇವ್ ಹೊಯ್ಸಳ

    ಕನ್ನಡ ಚಿತ್ರರಂಗದಲ್ಲಿ ಟೈಟಲ್ ಸಮಸ್ಯೆ ಹೊಸದಲ್ಲ. ಯಾರೋ ಟೈಟಲ್ ಇಟ್ಟುಕೊಂಡು ಪ್ರಚಾರ ಮಾಡಿ ಸಿನಿಮಾ ಮಾಡಿ ಮುಗಿಸಿಯೂ ಬಿಡ್ತಾರೆ. ಆದರೆ ಇನ್ನೇನು ಸಿನಿಮಾ ರಿಲೀಸ್ ಆಗಬೇಕು.. ಆ ಹೊತ್ತಿಗೆ ಅದೇ ಟೈಟಲ್ಲಿನಲ್ಲಿ ಇನ್ಯಾರೋ ಸಿನಿಮಾ ರೆಡಿ ಮಾಡಿ ಸೆನ್ಸಾರ್ ಕೂಡಾ ಮಾಡಿಸಿಬಿಡ್ತಾರೆ. ಆಗ ರಿಲೀಸ್ ಆಗುವುದಕ್ಕೆ ರೆಡಿಯಾಗಿರುವ ಸ್ಟಾರ್ ಚಿತ್ರಗಳಿಗೆ ಪ್ರಾಬ್ಲಂ. ಇದೀಗ ಆ ಪ್ರಾಬ್ಲಂ ಹೊಯ್ಸಳ ಚಿತ್ರಕ್ಕೂ ಕಾಡಿ ಈಗ ಚಿತ್ರದ ಟೈಟಲ್ ಗುರುದೇವ್ ಹೊಯ್ಸಳ ಆಗಿ ಚೇಂಜ್ ಆಗಿದೆ.

    ಇಷ್ಟಕ್ಕೂ ಆಗಿದ್ದಿಷ್ಟೇ, ಸಿನಿಮಾ ರೆಡಿ ಮಾಡಿ ಸೆನ್ಸಾರ್‍ಗೆ ಹೋದಾಗ ಈಗಾಗಲೇ ಇನ್ನೊಂದು ಸಿನಿಮಾ ಹೊಯ್ಸಳ ಹೆಸರಲ್ಲಿ ಸೆನ್ಸಾರ್ ಆಗಿದೆ ಅನ್ನೋದು ಗೊತ್ತಾಗಿದೆ. ಫಿಲಂ ಚೇಂಬರಿನಲ್ಲಿ ರಿಜಿಸ್ಟರ್ ಮಾಡಿಸುವುದೇ ಬೇರೆ. ಸೆನ್ಸಾರ್ ಬೋರ್ಡಿನಲ್ಲಿ ಮಾಡಿಸುವುದೇ ಬೇರೆ. ಯಾವ ಸಿನಿಮಾ ಮೊದಲು ಸೆನ್ಸಾರ್ ಆಗಿರುತ್ತದೆಯೋ.. ಅವರಿಗೆ ಆ ಟೈಟಲ್ ಫೈನಲ್ ಆಗುತ್ತದೆ. ಇದು ರೂಲ್ಸ್ ವಿಚಾರ. ಹೊಯ್ಸಳ ಅನ್ನೋ ಟೈಟಲ್ ರಾಮು ಅವರ ಬಳಿ ಇತ್ತು. ನಂತರ ನಾವು ಮಾಲಾಶ್ರೀ ಮೇಡಂ ಜೊತೆ ಮಾತನಾಡಿ ಟೈಟಲ್ ತೆಗೆದುಕೊಂಡೆವು. ಶೂಟಿಂಗ್ ಆಗಿ ಸೆನ್ಸಾರ್`ಗೆ ಹೋಗುವ ವೇಳೆಗೆ ಹೊಯ್ಸಳ ಅನ್ನೋ ಹೆಸರಿನಲ್ಲಿ ಇನ್ನೊಂದು ಚಿತ್ರ ಸಿದ್ಧವಾಗಿ ಸೆನ್ಸಾರ್ ಕೂಡಾ ಆಗಿರುವುದು ಗೊತ್ತಾಯ್ತು. ಅವರು ಬಿಸಿನೆಸ್ ಮಾತನಾಡೋಣ ಎಂಬಂತೆ ಮಾತನಾಡಿದಾಗ ದುಡ್ಡು ಕೊಟ್ಟು ಬಗೆಹರಿಸಿ ಕೊಳ್ಳುವುದಕ್ಕೆ ಇಷ್ಟವಾಗಲಿಲ್ಲ. ಹೀಗಾಗಿ ಚಿತ್ರದ ಹೀರೋ ಹೆಸರು ಗುರುದೇವ್. ಅದನ್ನೇ ಚಿತ್ರದ ಟೈಟಲ್ಲಿಗೆ ಸೇರಿಸಿ ಸಿನಿಮಾ ಸೆನ್ಸಾರ್ ಮಾಡಿಸಿದ್ದೇವೆ ಎನ್ನುತ್ತದೆ ಚಿತ್ರತಂಡ.

    ಅಂದಹಾಗೆ ಇದು ಡಾಲಿ ಧನಂಜಯ್ ಅವರ 25ನೇ ಸಿನಿಮಾ. ಡಾಲಿ ಮತ್ತು ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ನಂತರ ಮತ್ತೊಮ್ಮೆ ಒಟ್ಟಾಗಿ ನಟಿಸುತ್ತಿರುವ ಸಿನಿಮಾ. ಡಾಲಿ ಅಮೃತಾ ಜೋಡಿಯ 3ನೇ ಸಿನಿಮಾ. ಹೀಗಾಗಿ ಅದೃಷ್ಟ ಪರೀಕ್ಷೆಯೂ ಇದೆ. ನಿರ್ದೇಶಕ ವಿಜಯ್ ಎನ್ ಅವರಿಗೆ ಇದು ಅಗ್ನಿಪರೀಕ್ಷೆ. ಅವರು ಗೆಲುವಿಗಾಗಿ ಕಾಯುತ್ತಿದ್ದಾರೆ.

    ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ಹೊಯ್ಸಳ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30ರಂದು ಬಿಡುಗಡೆಯಾಗಲಿದೆ.

     

  • ಹೊಯ್ಸಳ ಭರ್ಜರಿ ಕಲೆಕ್ಷನ್ : ಮೊದಲ ವಾರ ಎಷ್ಟು..?

    ಹೊಯ್ಸಳ ಭರ್ಜರಿ ಕಲೆಕ್ಷನ್ : ಮೊದಲ ವಾರ ಎಷ್ಟು..?

    ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರದಲ್ಲಿರೋ, ನವೀನ್ ಶಂಕರ್ ವಿಲನ್ ಆಗಿ ಆರ್ಭಟಿಸಿರುವ  ಹೊಯ್ಸಳ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ 2ನೇ ವಾರಕ್ಕೆ ಕಾಲಿಟ್ಟಿರುವ ಹೊಯ್ಸಳ ಚಿತ್ರ, ವಿಶೇಷವಾಗಿ ಉತ್ತರ ಕರ್ನಾಟದಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಇದು ಧಂಜಯ್ ನಟನೆಯ 25ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.

    ಟ್ವಿಟರ್ನಲ್ಲಿ ಒಬ್ಬರು ಹೊಯ್ಸಳ ಕಲೆಕ್ಷನ್ ಮೊದಲ ವಾರ 2.9 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರಿಯಾಕ್ಷನ್ ನೀಡಿರುವ ನಿರ್ಮಾಪಕ ಕಾರ್ತಿಕ್ ಗೌಡ ಇನ್ನೂ ಜಾಸ್ತಿ ಸರ್ ಎಂದು ರಿಯಾಕ್ಷನ್ ಕೊಟ್ಟಿದ್ಧಾರೆ.

    ಗುರುದೇವ್ ಹೊಯ್ಸಳ ಸಿನಿಮಾ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ. ಕನ್ನಡ ಭಾಷಾಭಿಮಾನದ ಜೊತೆ ಜೊತೆಗೆ ಮರ್ಯಾದ ಹತ್ಯೆಯಂತಹ ಸೂಕ್ಷ್ಮ ವಿಷಯವನ್ನೂ ಚಿತ್ರದಲ್ಲಿ ಸೂಕ್ಷ್ಮವಾಗಿ ಮನಮುಟ್ಟುವಂತೆ ತೋರಿಸಲಾಗಿದೆ. ದಕ್ಷ ಪೊಲೀಸ್ ಅಧಿಕಾರಿಯ ಕಾರ್ಯಾಚರಣೆಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ. ಹೊಯ್ಸಳನ ಪೊಲೀಸ್ಗಿರಿ ಹೇಗಿರುತ್ತದೆ ಅನ್ನೋದನ್ನು ಚಿತ್ರದಲ್ಲಿ ಸಖತ್ ಆಗಿ ತೋರಿಸಲಾಗಿದೆ.  ಬಿಗಿಯಾದ ನಿರೂಪಣೆ ಪ್ಷೇಕ್ಷಕರನ್ನು ಕುರ್ಚಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಚಿತ್ರತಂಡ ಮಾತ್ರ ಖುಷಿಯಾಗಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಮರು ದಿನವೇ ಡಾಲಿ ಧನಂಜಯಗೆ 1 ಕೋಟಿ ರೂ. ಮೌಲ್ಯದ ಟೊಯೋಟೊ ವೆಲ್ಫೈರ್ ಕಾರನ್ನು ನಿರ್ಮಾಪಕರು ಉಡುಗೊರೆಯಾಗಿ ನೀಡಿದ್ದರು.

  • ಹೊಯ್ಸಳ ಹಿಟ್.. ಡಾಲಿ ಧನಂಜಯಗೆ ಕೋಟಿ ಬೆಲೆಯ ಕಾರ್ ಗಿಫ್ಟ್

    ಹೊಯ್ಸಳ ಹಿಟ್.. ಡಾಲಿ ಧನಂಜಯಗೆ ಕೋಟಿ ಬೆಲೆಯ ಕಾರ್ ಗಿಫ್ಟ್

    ಒಂದು ಸಿನಿಮಾ ಹಿಟ್ ಆದರೆ ನಿರ್ಮಾಪಕರಿಗೆ ಲಾಭವಾಗೋದು ಸಹಜ. ಆ ಖುಷಿಯಲ್ಲಿಯೇ ಹೊಯ್ಸಳ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಾರ್ತಿಕ್ ಗೌಡ, ಹೊಯ್ಸಳ ಚಿತ್ರದ ಹೀರೋ ಡಾಲಿ ಧನಂಜಯಗೆ ಐಷಾರಾಮಿ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಹೊಯ್ಸಳ ಸಿನಿಮಾವು ಡಾಲಿ ಧನಂಜಯ್ರ 25ನೇ ಸಿನಿಮಾ. ಗುರುದೇವ್ ಹೊಯ್ಸಳ ಸಿನಿಮಾದಲ್ಲಿ ಡಾಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಗುರುದೇವ್  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿಗೆ ಮೂರನೇ ಬಾರಿ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ಸೌಂಡ್ ಮಾಡ್ತಿದೆ. `ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಗುಲ್ಟು ನವೀನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಕೆಜಿಎಫ್ ಖ್ಯಾತಿಯ ವಿಲನ್ ಆಂಡ್ರ್ಯೂ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗುವ ದಾರಿಯಲ್ಲಿದೆ. ಪ್ರೇಕ್ಷಕರೂ ಥ್ರಿಲ್ ಆಗಿದ್ದಾರೆ.  

    ಹೊಯ್ಸಳ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವ ಕಾರಣ ನಿರ್ಮಾಪಕ ಕಾರ್ತಿಕ್ ಗೌಡ, ನಟ ಡಾಲಿ ಧನಂಜಯ್ಗೆ ಒಂದು ಕೋಟಿ ಬೆಲೆಯ ಟೊಯೊಟಾ ವಿಲ್ಫೈರ್ ಹೆಸರಿನ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. . ಇದರ ಎಕ್ಸ್ ಶೋ ರೂಂ ಬೆಲೆ 96 ಲಕ್ಷ ರೂಪಾಯಿ ಇದೆ. ಆನ್ರೋಡ್ ಬೆಲೆ 1.19 ಕೋಟಿ ರೂಪಾಯಿ. 2492 ಸಿಸಿ ಇಂಜಿನ್ ಕಾರಿನ ಮೈಲೇಜ್ 16 ಕಿ.ಮೀ. 7 ಸೀಟರ್ ಕಾರಿನಲ್ಲಿ ಎಲ್ಲವೂ ಲಕ್ಷುರಿ. ಜೊತೆಗೆ ಮಿಂಚಿನ ಸ್ಪೀಡ್ ಇರುತ್ತೆ. 0ದಿಂದ 100 ಕಿ.ಮೀ. ವೇಗ ರೀಚ್ ಆಗಲು ಕೇವಲ 8 ಸೆಕೆಂಡ್ ಸಾಕು.

    ನಿರ್ಮಾಪಕರು ಕೊಟ್ಟ ಉಡುಗೊರೆಯ ಕಾರಿನ ವಿಷಯವನ್ನು ಸ್ವತಃ ಡಾಲಿ ಧನಂಜಯ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ನಿರ್ಮಾಪಕರಾದ ಯೋಗಿ ಬಿ.ರಾಜ್ ಮತ್ತು ಕಾರ್ತಿಕ್ ಗೌಡ ಇರುವುದೇ ವಿಶೇಷ.

     ಅಂದಹಾಗೆ ಧನಂಜಯಗೆ ಕಾರು ಸಿಕ್ಕ ಖುಷಿಗೆ ನಟಿ ರಮ್ಯಾ ಅವರಿಗೆ ಐಸ್ ಕ್ರೀಮ್ ಕೊಡಿಸಬೇಕಂತೆ. ಜೊತೆಗೆ ಹೊಸ ಕಾರಿನಲ್ಲಿ ರೌಂಡ್ಸ್ ಕರೆದುಕೊಂಡು ಹೋಗಬೇಕಂತೆ ರಮ್ಯ ಪ್ರೀತಿಯ ಧನು. ಹೊಯ್ಸಳ ಹಿಟ್ಟು.. ಹೊಸ ಕಾರು.. ಒಟ್ಟಿನಲ್ಲಿ ಧನುಗೆ ಇಗ ಎಲ್ಲವೂ ಹೊಸದೇ...