` yogaraj bhat, - chitraloka.com | Kannada Movie News, Reviews | Image

yogaraj bhat,

  • ಭಟ್ಟರ ಅದೊಂದು ಕರೆಗಾಗಿ ಕಾಯುತ್ತಿದ್ದರಂತೆ ಪ್ರಣಯರಾಜ

    ಭಟ್ಟರ ಅದೊಂದು ಕರೆಗಾಗಿ ಕಾಯುತ್ತಿದ್ದರಂತೆ ಪ್ರಣಯರಾಜ

    ಪ್ರಣಯರಾಜ ಶ್ರೀನಾಥ್ ಚಿತ್ರರಂಗದ ಸೀನಿಯರ್ ಕಲಾವಿದ. ನಾಯಕರಾಗಿ, ಪೋಷಕ ನಟರಾಗಿ.. ತಮ್ಮದೇ ಛಾಪು ಮೂಡಿಸಿರುವ ಕಲಾವಿದ. ಪುಟ್ಟಣ್ಣ ಕಣಗಾಲರ ಶಿಷ್ಯ. ವೃತ್ತಿ ಜೀವನದಲ್ಲಿ ಹಲವು ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಈ ನಟ ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದರಂತೆ.

    ನಾನು ಮುಂಗಾರು ಮಳೆ ನೋಡಿದ ದಿನದಿಂದ ಕಾಯುತ್ತಿದ್ದೆ. ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯೊಂದು ಒಳಗೊಳಗೇ ಮೂಡಿತ್ತು. ಗಾಳಿಪಟ 2 ಚಿತ್ರದಲ್ಲಿ ನನ್ನದು ಅತಿಥಿ ನಟನ ಪಾತ್ರ. ಕಾಲೇಜ್ ಪ್ರಿನ್ಸಿಪಾಲ್ ಕ್ಯಾರೆಕ್ಟರ್. ಆದರೇನಂತೆ.. ಯೋಗರಾಜ್ ಭಟ್ ಅವರ ಒಂದು ಕರೆಗಾಗಿ ಕಾಯುತ್ತಿದ್ದವನಿಗೆ ಪಾತ್ರ ಯಾವುದಾದರೇನು? ಎರಡು ದಿನದ ಶೆಡ್ಯೂಲ್ ಇತ್ತು. ಯೋಗರಾಜ್ ಭಟ್ ಅವರಿಂದ ಹಲವು ಹೊಸತು ಕಲಿತೆ ಎಂದಿದ್ದಾರೆ ಶ್ರೀನಾಥ್.

    ಗಾಳಿಪಟ 2, ಒಂದು ರೀತಿಯಲ್ಲಿ ಶ್ರೀನಾಥ್ ಅವರಿಗೆ ಕಮ್ ಬ್ಯಾಕ್ ಸಿನಿಮಾ. ಇತ್ತೀಚೆಗೆ ಅವರು ನಟನೆಯಿಂದ ದೂರವೇ ಉಳಿದಿದ್ದರು. ನನಗೇನೂ ವಯಸ್ಸಾಗಿಲ್ಲ. ನಟಿಸುವ ಶಕ್ತಿಯೂ ಇದೆ. ಮೆಮೊರಿ ಪವರ್ ಕೂಡಾ ಚೆನ್ನಾಗಿದೆ. ಗಾಳಿಪಟ 2 ನಂತರ ಹೊಸ ಹೊಸ ಅವಕಾಶಗಳು ಬರಬಹುದು ಎನ್ನುತ್ತಾರೆ ಶ್ರೀನಾಥ್.

    ಅಷ್ಟು ಹಿರಿಯ ಕಲಾವಿದನಾಗಿ ನಿರ್ದೇಶಕರನ್ನು ಹೊಗಳುವುದು ಅವರ ದೊಡ್ಡತನ. ಅಷ್ಟು ಹಿರಿಯ ಕಲಾವಿದರೊಬ್ಬರು ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವುದಕ್ಕಾಗಿ ಕಾದಿದ್ದರು ಎನ್ನುವುದು ಯೋಗರಾಜ್ ಭಟ್ ಅವರ ಕಿರೀಟಕ್ಕೆ ಸಿಕ್ಕ ಗರಿ. ಸದ್ಯಕ್ಕೆ ಎಲ್ಲರೂ ಗಾಳಿಪಟ 2 ಎದುರು ನೋಡುತ್ತಿದ್ದಾರೆ.

    ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್ ಮತ್ತು ಭಟ್ಟರು 4ನೇ ಬಾರಿಗೆ ಒಂದುಗೂಡಿರುವ ಚಿತ್ರ ಗಾಳಿಪಟ 2. ಗಾಳಿಪಟದಲ್ಲಿದ್ದ ದಿಗಂತ್, ಅನಂತ್ ನಾಗ್, ಪದ್ಮಜಾ  ರಾವ್, ರಂಗಾಯಣ ರಘು, ಜಯಂತ ಕಾಯ್ಕಿಣಿ, ಸೋನು ನಿಗಮ್ ಎಲ್ಲರೂ ಈ ಗಾಳಿಪಟ 2ನಲ್ಲೂ ಇದ್ದಾರೆ.

  • ಭಟ್ಟರ ಕನ್ನಡದ ತಪ್ಪಿನಲ್ಲೂ ಒಪ್ಪುವಂಥಾದ್ದೊಂದು ಮಾತಿದೆ..!

    yogaraj bhat clarifies rumors

    ಹುದ್ದಿಟಹಬ್ಬದ ಶುಶಾಭಯ..

    ಇದು ಯೋಗರಾಜ್ ಭಟ್ಟರು ಗಾಳಿಪಟ 2 ಚಿತ್ರದಿಂದ ಗಣೇಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಜಾಹೀರಾತು. ಭಟ್ಟರಿಗೆ ಕನ್ನಡ ಗೊತ್ತಿಲ್ಲ ಎನ್ನುವಂತಿಲ್ಲ. ಸರಿಗನ್ನಡದ ಬಗ್ಗೆ.. ಕರ್ನಾಟಕದ ರಾಜ್ಯದಲ್ಲಿ ಬಳಕೆಯಲ್ಲಿರೋ ಕನ್ನಡವನ್ನು ಅಲ್ಲಲ್ಲಿನ ಪ್ರಾದೇಶಿಕ ಸೊಗಡಿನ ಸಮೇತ ವಿವರಿಸಬಲ್ಲ ಪಾಂಡಿತ್ಯವಿದೆ. ಅದನ್ನವರು ತಮ್ಮ ಸಾಹಿತ್ಯದಲ್ಲಿ ತೋರಿಸಿಯೂ ಇದ್ದಾರೆ. ಹೀಗಿರುವಾಗ.. ಭಟ್ಟರು ತಪ್ಪು ಮಾಡಿದ್ದೇಕೆ..? ಅದಕ್ಕೆ ಭಟ್ಟರೇ ಉತ್ತರ ಕೊಟ್ಟಿದ್ದಾರೆ.

    ಇದು ಗಾಳಿಪಟ 2 ಚಿತ್ರದ ಕಥೆಯ ಅಂಶವೂ ಹೌದು. ಗಾಳಿಪಟ 2 ಚಿತ್ರದಲ್ಲಿ ಕನ್ನಡದ ತಪ್ಪಾದ ಬಳಕೆಯೂ ಒಂದು ಭಾಗ. ಅದನ್ನು ಸೂಚಿಸುವ ಸಲುವಾಗಿ ಹೀಗೆ ಬರೆಯಲಾಯ್ತು. ಗಾಳಿಪಟ ಚಿತ್ರದಲ್ಲಿ ದಯವಿಟ್ಟು ಪದವನ್ನು ನಾಯಕ ದಯವಿಣ್ಣು ಎಂದು ಬರೆದಿರುತ್ತಾನೆ. ಅದನ್ನು ಜನ ಎಂಜಾಯ್ ಮಾಡಿದ್ದರು. ಇಲ್ಲಿಯೂ ಅಂತಹ ಮಜವಾದ ಅನೇಕ ಸಂಗತಿಗಳಿವೆ. ಈಗಿನ ಯುವಕರ ಕನ್ನಡದ ಬಳಕೆ, ಅವರ ಐಲುತನಗಳು, ಯೋಚನೆಗಳೆಲ್ಲವೂ ಈ ಚಿತ್ರದಲ್ಲಿರುತ್ತದೆ. ದಯವಿಟ್ಟು ಇದರ ಹಿಂದಿರುವ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ ಭಟ್ಟರು.

    ಸಿರಿಗನ್ನಡಂ ಗೆಲ್ಗೆ.. ಸರಿಗನ್ನಡಂ ಬಾಳ್ಗೆ ಅನ್ನೋದು ಭಟ್ಟರ ಕನ್ನಡ ಘೋಷ. ಭಟ್ಟರ ಈ ಜಾಹೀರಾತು ಕೆಲವರಿಗೆ ಇಷ್ಟವಾಗಿದೆ. ಕೆಲವರಿಗೆ ಇಷ್ಟವಾಗಿಲ್ಲ.

  • ಭಟ್ಟರ ಗರಡಿಗೆ ಕೌರವ ಪಾಟೀಲ್ ಎಂಟ್ರಿ

    ಭಟ್ಟರ ಗರಡಿಗೆ ಕೌರವ ಪಾಟೀಲ್ ಎಂಟ್ರಿ

    ಬಿ.ಸಿ.ಪಾಟೀಲ್. ಈಗ ಕೇವಲ ಶಾಸಕರಷ್ಟೇ ಅಲ್ಲ. ಕೃಷಿ ಸಚಿವರೂ ಹೌದು. ಇದೆಲ್ಲದರ ಮಧ್ಯೆಯೇ ಬಿಡುವು ಮಾಡಿಕೊಂಡು ಗರಡಿ ಚಿತ್ರ ನಿರ್ಮಿಸುತ್ತಿರೋ ಬಿ.ಸಿ.ಪಾಟೀಲ್ ಚಿತ್ರದಲ್ಲೊಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗರಡಿ ಮನೆಯ ಗುರುವಾಗಿ ನಟಿಸುತ್ತಿರೋ ಬಿ.ಸಿ.ಪಾಟೀಲ್ ಈಗ ಅಖಾಡಕ್ಕೂ ಧುಮುಕಿದ್ದಾರೆ.

    ಗರಡಿ ಯೋಗರಾಜ್ ಭಟ್ಟರ ಸಿನಿಮಾ. ಯಶಸ್ ಹೀರೋ. ಸೋನಲ್ ಮಂಥೆರೋ ಹೀರೋಯಿನ್. ಬಿ.ಸಿ.ಪಾಟೀಲ್ ಜೊತೆಗೆ ಇನ್ನೊಬ್ಬ ಸಚಿವ ಎಸ್.ಟಿ.ಸೋಮಶೇಖರ್ ಕೂಡಾ ನಟಿಸುತ್ತಿರೋದು ವಿಶೇಷ.

    ನಟಿಸಲೆಂದೇ ಪೊಲೀಸ್ ಕೆಲಸ ಬಿಟ್ಟು ಬಂದವನು ನಾನು. ನಟಿಸುವುದು ನನ್ನ ಗೀಳು. ಕಲೆ ಬಗ್ಗೆ ವಿಶೇಷ ಆಸಕ್ತಿ ಇದೆ. ಹಾಗಾಗಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಗರಡಿ ಮನೆ ಯಜಮಾನ ರಂಗಪ್ಪ ಎಂಬ ಪಾತ್ರ  ಎನ್ನುತ್ತಾರೆ ಬಿ.ಸಿ.ಪಾಟೀಲ್. ಅಂದಹಾಗೆ ಈ ಚಿತ್ರಕ್ಕೆ ಪಾಟೀಲ್ ಪುತ್ರ ಸೌಮ್ಯ ಪಾಟೀಲ್ ನಿರ್ಮಾಪಕಿ.

  • ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್

    ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್

    ರಾಜಕೀಯದಲ್ಲಿ ಬ್ಯುಸಿಯಾಗಿರುವ ಸಚಿವ ಬಿ.ಸಿ.ಪಾಟೀಲ್, ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಪಾಟೀಲರ ಸಿನಿಮಾ ಎಂಟ್ರಿಗೆ ಕಥೆ ರೆಡಿ ಮಾಡಿರೋದು ಯೋಗರಾಜ್ ಭಟ್. ಈ ಚಿತ್ರಕ್ಕೆ ಅವರೇ ನಿರ್ಮಾಪಕರು. ಹೀರೋ ಆಗಿರೋದು ಯಶಸ್ ಸೂರ್ಯ.

    ಉತ್ತರ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿರೋ ಗರಡಿ ಮನೆಗಳ ಸುತ್ತಲೇ ಭಟ್ಟರು ರೂಪಿಸಿರೋ ಕಥೆಯೇ ಗರಡಿ. ಹಾವೇರಿಯ ಹಿರೇಕರೂರಿನಲ್ಲಿ ಸಿನಿಮಾಗೆ ಓಂಕಾರವೂ ಬಿದ್ದಿದೆ. 

  • ಭಟ್ಟರ ಗರಡಿಗೆ ರಚಿತಾ ರಾಮ್

    ಭಟ್ಟರ ಗರಡಿಗೆ ರಚಿತಾ ರಾಮ್

    ಯೋಗರಾಜ್ ಭಟ್ ಮತ್ತು ಬಿ.ಸಿ.ಪಾಟೀಲ್ ಮೊದಲ ಬಾರಿಗೆ ಜೊತೆಯಾಗಿರುವ ಗರಡಿ ಚಿತ್ರಕ್ಕೆ ಈಗ ನಾಯಕಿಯಾಗಿ ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವ ಚಿತ್ರ ಗರಡಿ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ರಚಿತಾ, ಭಟ್ಟರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಗರಡಿ ಚಿತ್ರಕ್ಕೆ ಯಶಸ್ ಸೂರ್ಯ ಹೀರೋ. ಪಕ್ಕಾ ಹಳ್ಳಿ ಸೊಗಡಿನ ಗರಡಿ ಮನೆಯ ಕಥೆ ಇರೋ ಗರಡಿ ಚಿತ್ರದಲ್ಲಿ ರಚಿತಾ ರಾಮ್ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಲಿದ್ದಾರೆ.  

  • ಭಟ್ಟರ ಗಾಳಿಪಟಕ್ಕೆ ದಾರವಾಯ್ತು ಕೆವಿಎನ್ ಪ್ರೊಡಕ್ಷನ್ಸ್

    ಭಟ್ಟರ ಗಾಳಿಪಟಕ್ಕೆ ದಾರವಾಯ್ತು ಕೆವಿಎನ್ ಪ್ರೊಡಕ್ಷನ್ಸ್

    ಯೋಗರಾಜ್ ಭಟ್ ಮತ್ತು ಗಣೇಶ್ ಮತ್ತೊಮ್ಮೆ ಒಂದಾಗಿರುವ ಸಿನಿಮಾ ಗಾಳಿಪಟ 2. ಭಟ್ಟರ ವೃತ್ತಿಜೀವನದ 3ನೇ ಸಿನಿಮಾ ಆಗಿದ್ದ ಗಾಳಿಪಟ ಆಗಿನ ಕಾಲಕ್ಕೆ ದಾಖಲೆ ಬರೆದಿದ್ದ ಸಿನಿಮಾ. ಈಗ ಗಾಳಿಪಟ 2 ರೆಡಿಯಾಗಿದೆ. ಟ್ರೇಲರ್ ಹೊರಬಂದಿದೆ. ಗಾಳಿಪಟದಲ್ಲಿ ಯೋಗರಾಜ್ ಭಟ್, ಗಣೇಶ್, ದಿಗಂತ್, ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು ಇಲ್ಲಿ ಕೂಡಾ ಕಂಟಿನ್ಯೂ ಆಗಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್ ಇಲ್ಲಿ ಹೊಸದಾಗಿ ಸೇರಿದ್ದಾರೆ. ನಿರ್ಮಾಪಕರಾಗಿ ರಮೇಶ್ ರೆಡ್ಡಿ ಇದ್ದರೆ, ಸಂಗೀತ ನಿರ್ದೇಶಕನ ಸ್ಥಾನ ಅಲಂಕರಿಸಿರುವುದು ಅರ್ಜುನ್ ಜನ್ಯಾ.

    ಈಗ ಚಿತ್ರದ ವಿತರಣೆಗೆ ಮುಂದಾಗಿರೋದು ಕೆವಿಎನ್ ಪ್ರೊಡಕ್ಷನ್ಸ್. ಆರ್.ಆರ್.ಆರ್. ನಂತರ ಕೆವಿಎನ್ ವಿತರಣೆ ಮಾಡುತ್ತಿರೋ ದೊಡ್ಡ ಚಿತ್ರ ಗಾಳಿಪಟ 2. ಒಂದೆಡೆ ಸಿನಿಮಾ ನಿರ್ಮಾಣದಲ್ಲಿ ಬ್ಯಸಿಯಾಗಿರೋ ಕೆವಿಎನ್, ಮತ್ತೊಂದೆಡೆ ಚಿತ್ರದ ವಿತರಣೆಯಲ್ಲೂ ದೊಡ್ಡ ಹೆಜ್ಜೆ ಇಡುತ್ತಿದೆ.

  • ಭಟ್ಟರ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ಕು..!

    arjun janya's music for bhat's panchatantra

    ಪಂಚತಂತ್ರ ಚಿತ್ರದಿಂದ, ಶೃಂಗಾರದ ಹೊಂಗೆಮರದಲ್ಲಿ ಹೂ ಬಿಡಿಸಿ, ಚಳಿಗಾಲದಲ್ಲೂ ಮೈ ಬೆಚ್ಚಗಾಗಿಸಿರುವ ಯೋಗರಾಜ್ ಭಟ್, ಹೊಸ ಸಿನಿಮಾ ಆರಂಭಿಸುತ್ತಿದ್ದಾರೆ. ಗಾಳಿಪಟ-2. ಶರಣ್, ಪವನ್ ಕುಮಾರ್ (ಯು ಟರ್ನ್ ನಿರ್ದೇಶಕ), ರಿಷಿ (ಅಲಮೇಲಮ್ಮ ಖ್ಯಾತಿ) ಗಾಳಿಪಟ 2 ಹೀರೋಗಳು. ತಮ್ಮದೇ ನಿರ್ದೇಶನದ, ದಾಖಲೆ ಬರೆದಿದ್ದ ಗಾಳಿಪಟ ಚಿತ್ರದ ಟೈಟಲ್‍ನ್ನು ಮತ್ತೊಮ್ಮೆ ತಾವೇ ಕೈಗೆತ್ತಿಕೊಂಡಿದ್ದಾರೆ ಯೋಗರಾಜ್ ಭಟ್.

    ವಿಶೇಷದ ಮೇಲೆ ವಿಶೇಷವೆಂದರೆ, ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ. 

    ಭಟ್ಟರ ಚಿತ್ರಗಳಿಗೆ ಇದುವರೆಗೆ ಸಂಗೀತ ನೀಡಿರುವುದು ಮನೋಮೂರ್ತಿ, ಸಂದೀಪ್ ಚೌಟ ಹಾಗೂ ಭಟ್ಟರ ಆಪ್ತಮಿತ್ರರೂ ಆಗಿರುವ ಹರಿಕೃಷ್ಣ. ಭಟ್ಟರು ಮತ್ತು ಹರಿಕೃಷ್ಣ ಕಾಂಬಿನೇಷನ್, ಹಲವು ಚಿತ್ರಗಳ ನಂತರ ಇದೇ ಮೊದಲ ಬಾರಿಗೆ ಗ್ಯಾಪ್ ಆಗುತ್ತಿದೆ. 

    ಹಾಗಂತ ಅರ್ಜುನ್ ಜನ್ಯಾ, ಭಟ್ಟರಿಗೆ ಹೊಸಬರೇನಲ್ಲ. ಭಟ್ಟರ ಕ್ಯಾಂಪಿನ ಹಲವರ ಜೊತೆ ಜನ್ಯಾ ಕೆಲಸ ಮಾಡಿದ್ದಾರೆ. ಅರ್ಜುನ್ ಜನ್ಯಾ ಅವರ ಹಲವಾರು ಸೂಪರ್ ಹಿಟ್ ಹಾಡುಗಳಿಗೆ ಭಟ್ಟರು ಸಾಹಿತ್ಯ ಕೊಟ್ಟಿದ್ದಾರೆ. ಅವರ ನಿರ್ದೇಶನಕ್ಕೆ, ಇವರ ಸಂಗೀತ ನಿರ್ದೇಶನವಷ್ಟೇ ಓಂ ಪ್ರಥಮ.

    ಇದೆಲ್ಲದರ ಜೊತೆಗೆ ಚಿತ್ರದ ನಿರ್ಮಾಪಕ ಮಹೇಶ್ ದಾನಣ್ಣವರ್ ಹಾಗೂ ಅರ್ಜುನ್ ಜನ್ಯಾ, ಆಪ್ತಸ್ನೇಹಿತರು. ಇದೂ ಕೂಡಾ ಭಟ್ಟರ ಚಿತ್ರಕ್ಕೆ, ಅರ್ಜುನ್ ಜನ್ಯಾ ಸಂಗೀತ ನೀಡಲು ಕಾರಣವಾಗಿದೆ. 

     

  • ಭಟ್ಟರ ಚೆಕ್ ಬೌನ್ಸ್ - ಕನಕಪುರ ಶ್ರೀನಿವಾಸ್ ಹೇಳಿದ್ದೇನು..?

    cheque bounce case

    ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವಣ ಚೆಕ್ ಬೌನ್ಸ್ ಕೇಸ್ ಈಗ ಕೋರ್ಟ್‍ನಲ್ಲಿದೆ. ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೆ ಕೊಡಬೇಕಾದ ಸಂಭಾವನೆ ಚುಕ್ತಾ ಮಾಡಿಲ್ಲ. ಹಲವು ಬಾರಿ ಕೊಡುತ್ತೇನೆ ಎಂದು ಹೇಳಿ ಕೊಟ್ಟಿಲ್ಲ. ಕೊಟ್ಟಿದ್ದ ಚೆಕ್‍ಗಳೂ ಬೌನ್ಸ್ ಆಗಿವೆ ಎಂದು ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಫಿಲಂ ಚೇಂಬರ್ ಸಂಧಾನವೂ ಯಶಸ್ವಿಯಾಗಲಿಲ್ಲ ಅನ್ನೋದು ಈಗಾಗಲೇ ಗೊತ್ತಿರುವ ವಿಚಾರ.  ಈ ಕುರಿತಂತೆ ಶ್ರೀನಿವಾಸ್ ಮಾತನಾಡಿದ್ದಾರೆ.

    ನಾನು 3 ತಿಂಗಳು ಟೈಂ ಕೇಳಿದ್ದೆ. ಕೊಡಲಿಲ್ಲ. ಆಗ ಅವರು ಕೋರ್ಟ್‍ಗೆ ಹೋಗ್ತೀನಿ ಅಂದ್ರು. ಹೋಗಿ ಅಂದೆ. ಅಷ್ಟೆ.. ಎಂದಿದ್ದಾರೆ ಶ್ರೀನಿವಾಸ್. ದನಕಾಯೋನು ಚಿತ್ರದಿಂದ ನನಗೆ ಲಾಭವಾಗಲಿಲ್ಲ ಎಂದು ಕೂಡಾ ಹೇಳಿಕೊಂಡಿದ್ದಾರೆ.

     

  • ಭಟ್ಟರ ಪಂಚತಂತ್ರಕ್ಕೆ ಜೋಗಿ ಪ್ರೇಮ್ ಜಬರ್ದಸ್ತ್ ಹಾಡು

    panchatantra title rack gets prem's voice

    ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಚಿತ್ರ ಪಂಚತಂತ್ರಕ್ಕೆ ಜೋಗಿ ಪ್ರೇಮ್ ಹಾಡು ಬರೆದಿದ್ದಾರೆ. ಇದು ಎಂತಹ ಕಾಂಬಿನೇಷನ್ ಗೊತ್ತಾ..? ಪ್ರೇಮ್ ಅಂದ್ರೆ ರಾ.. ಕಾಯ್ಕಿಣಿ ಅಂದ್ರೆ ಕಾವ್ಯ. ಭಟ್ಟರು ಉಪ್ಪಿನಕಾಯ್ ಆದ್ರೆ ಹರಿಕೃಷ್ಣ ಮಸಾಲೆ.. ಹೀಗೆ.. ವಿಭಿನ್ನ ಶೈಲಿಯವರೆಲ್ಲ ಒಟ್ಟಿಗೇ ಮಿಕ್ಸ್ ಆಗಿ ಪಂಚತಂತ್ರದ ಟೈಟಲ್ ಸಾಂಗ್ ಆಗಿದೆ. ಆ ಹಾಡನ್ನು ಹಾಡಿರೋದು ಜೋಗಿ ಪ್ರೇಮ್ ಅನ್ನೊದೇ ವಿಶೇಷ.

    ಅಲೆಲೆಲಾ.. ಆಮೆ ಮೊಲ.. ಓಡ್ತಾವ್ ನೋಡ್ಲಾ.. ಎಂದು ಶುರುವಾಗೋ ಹಾಡಿನಲ್ಲಿ ಫುಲ್ ಜೋಶ್ ತುಂಬಿದ್ದಾರೆ ಪ್ರೇಮ್ ಮತ್ತು ಹರಿಕೃಷ್ಣ. ಇದು ಪಂಚತಂತ್ರದ ಥೀಮ್ ಸಾಂಗ್ ಎಂದೂ ಹೇಳಬಹುದು. 

    ವಿಹಾನ್, ಸೋನಲ್ ಜೋಡಿಯಾಗಿ ನಟಿಸಿರುವ ಚಿತ್ರದಲ್ಲಿ ಈಗಾಗಲೇ ಶೃಂಗಾರದ ಹೊಂಗೇ ಮರ ಹಾಡು ಚಳಿ ಬಿಡಿಸಿದ್ದರೆ, ಈ ಹಾಡು ಹುಚ್ಚೆಬ್ಬಿಸುತ್ತಿದೆ.

  • ಭಟ್ಟರ ಪಂಚತಂತ್ರದ ಕಗ್ಗ

    yogaraj bhat;s mankuthimma song

    ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಯಾವುದೇ ಭಗವದ್ಗೀತೆ, ಈಸೋಪನ ನೀತಿ ಕಥೆಗಳು, ವಚನಾಮೃತಕ್ಕೂ ಕಡಿಮೆಯಿಲ್ಲ. ಅಂತಹ ಮಂಕುತಿಮ್ಮನನ್ನು ಪಂಚತಂತ್ರದ ಹಾಡಿಗೆ ತಂದಿದ್ದಾರೆ ಯೋಗರಾಜ್ ಭಟ್ಟರು. 

    ನೀನೇ ಹೇಳೋ ಮಂಕುತಿಮ್ಮ.. ಎಂದು ಶುರುವಾಗುವ ಈ ಹಾಡು, ಭಟ್ಟರ ಅಭಿಮಾನಿ ಬಳಗವನ್ನಷ್ಟೇ ಅಲ್ಲ, ಸಾಹಿತ್ಯಾಸಕ್ತರನ್ನೂ ಸೆಳೆಯುತ್ತಿದೆ. ಒನ್ಸ್ ಎಗೇಯ್ನ್, ಭಟ್ಟರು ಹೊಸದೊಂದು ಪ್ರೇಕ್ಷಕ ವರ್ಗಕ್ಕೆ ರೀಚ್ ಆಗುವತ್ತ ಹೆಜ್ಜೆಯಿಟ್ಟಿದ್ದಾರೆ.

    ಈ ಹಾಡಿಗಾಗಿ ಇದೇ ಮೊದಲ ಬಾರಿಗೆ ಯೋಗರಾಜ್ ಭಟ್, ಹರಿಕೃಷ್ಣ ಜೊತೆ ರಘು ದೀಕ್ಷಿತ್ ಕೂಡಾ ಸೇರಿದ್ದಾರೆ. 

  • ಭಟ್ಟರ ಪಂಚತಂತ್ರದಲ್ಲಿ ಮತ್ತೊಮ್ಮೆ ಅಂಬಿ

    bhat wants to vreate bombe adsornu magic once again

    ನಿರ್ದೇಶಕ ಯೋಗರಾಜ್ ಭಟ್, ಪಂಚತಂತ್ರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಆ ಚಿತ್ರಕ್ಕೆ ರೆಬಲ್‍ಸ್ಟಾರ್ ಟಚ್ ಕೂಡಾ ಸಿಕ್ಕಿದೆ. ಚಿತ್ರದ ಹಾಡೊಂದರಲ್ಲಿ ಅಂಬರೀಷ್ ನಟಿಸಲಿದ್ದು, ಅದು ಅಂಬರೀಷ್ ಅವರಿಗೆ ಸೂಟ್ ಆಗುವ ಹಾಡು ಎಂದಿದ್ದಾರೆ ಯೋಗರಾಜ್ ಭಟ್.

    ಭಟ್ಟರ ಡ್ರಾಮಾ ಚಿತ್ರದಲ್ಲಿ ಅಂಬರೀಷ್, ಬೊಂಬೆ ಆಡಿಸುವವನ ಪಾತ್ರದಲ್ಲಿ ನಟಿಸಿದ್ದರು. ಬೊಂಬೆ ಆಡ್ಸೋನು ಹಾಡು ಅಂಬರೀಷ್‍ಗೆ ಹೊಸ ಲುಕ್ ಕೊಟ್ಟಿತ್ತು. ಈಗ ಪಂಚತಂತ್ರದಲ್ಲಿ ಅದಕ್ಕಿಂತ ಭಿನ್ನವಾದ, ಅಂಬರೀಷ್ ಅವರಿಗೆ ಸೂಟ್ ಆಗುವ ಹಾಡಿದೆ ಎಂದಿದ್ದಾರೆ ಯೋಗರಾಜ್ ಭಟ್.

    ಅಂಬರೀಷ್ ಗ್ರೀನ್ ಸಿಗ್ನಲ್ ಕೊಟ್ಟರೆ, ತಕ್ಷಣ ಹಾಡಿನ ಶೂಟಿಂಗ್ ಶುರುವಾಗಲಿದೆ.

  • ಭಟ್ಟರ ಹೊಸ ಚಿತ್ರಕ್ಕೆ ಪೃಥ್ವಿ ಶಾಮನೂರು ಹೀರೋ

    ಭಟ್ಟರ ಹೊಸ ಚಿತ್ರಕ್ಕೆ ಪೃಥ್ವಿ ಶಾಮನೂರು ಹೀರೋ

    ಪದವಿಪೂರ್ವ ಚಿತ್ರ ಗೆದ್ದಿದೆ. ಆ ಖುಷಿಯಲ್ಲೇ ಯೋಗರಾಜ್ ಭಟ್ ಮತ್ತು ಚಿತ್ರತಂಡ ಸಕ್ಸಸ್ ಮೀಟ್ ಕರೆದಿತ್ತು. ಯೋಗರಾಜ್ ಭಟ್ ಅವರಂತೂ ಚಿತ್ರದ ಹೀರೋ ಪೃಥ್ವಿ ಶಾಮನೂರು ಅಭಿನಯಕ್ಕೆ ಮಾರು ಹೋಗಿದ್ದರು. ಹೀಗಾಗಿಯೇ ಪೃಥ್ವಿ ಜೊತೆ ತಾನೊಂದು ಚಿತ್ರ ಮಡುವುದಾಗಿ ಘೋಷಿಸಿಯೂ ಬಿಟ್ಟರು. ಹೊಸಬರಲ್ಲೇ ಏನಾದರೂ ಹುಟ್ಟೋದು ಅನ್ನೋದು ಭಟ್ಟರ ದಿವ್ಯಮಂತ್ರ. ಆ ಮಂತ್ರಕ್ಕೆ ಬದ್ಧರಾಗಿರುವ ಭಟ್ಟರು ಪೃಥ್ವಿಯ ಹೊಸ ಸಿನಿಮಾ ಘೋಷಿಸಿದರು.

    ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣದ ಚಿತ್ರಕ್ಕೆ ಪೃಥ್ವಿ ಹೀರೋ. ಅಂಜಲಿ ಹೀರೋಯಿನ್. ಹರಿಪ್ರಸಾದ್ ಜಯಣ್ಣ ನಿರ್ದೇಶಕರು. ಇವರೆಲ್ಲರನ್ನೂ ಒಟ್ಟಿಗೇ ಕೂರಿಸಿಕೊಂಡಿದ್ದ ಭಟ್ಟರು ಸಕ್ಸಸ್‍ನ್ನು ತಮ್ಮದೇ ಶೈಲಿಯಲ್ಲಿ ಬಣ್ಣಿಸಿದರು. ಬಡ ಕುಟುಂಬದ ತಂದೆ ಮಗಳನ್ನು ಆಗರ್ಭ ಶ್ರೀಮಂತನಿಗೆ ಮದುವೆ ಮಾಡಿಕೊಟ್ಟು ಇಷ್ಟೆಲ್ಲವನ್ನು ನನ್ನ ಮಗಳು ಹೇಗೆ ನಿಭಾಯಿಸುತ್ತಾಳೋ ಎಂದು ತಲೆ ಮೇಲೆ ಟವೆಲ್ ಹಾಕಿಕೊಂಡು ಒಂದಿಷ್ಟು ಆತಂಕ, ಒಂದಿಷ್ಟು ಸಂಭ್ರಮದಲ್ಲಿರುತ್ತಾನಲ್ಲ.. ಅಂತಹ ತಂದೆಯ ಸ್ಥಿತಿ ನನ್ನದು ಎಂದರು. ಭಟ್ಟರು ಮಾತನಾಡುವುದೇ ಹೀಗೆ.

    ಹರಿಪ್ರಸಾದ್ ಜಯಣ್ಣ ಕೂಡಾ ಭಟ್ಟರ ಚಿತ್ರ ಮುಗಿದ ಮೇಲೆ ಇನ್ನೊಂದು ಚಿತ್ರವನ್ನು ಪೃಥ್ವಿಗಾಗಿಯೇ ಮಾಡುತ್ತೇನೆ ಎಂದರು. ಪದವಿ ಪೂರ್ವ ಚಿತ್ರ ಗೆಲುವಿನ ಹಾದಿಯಲ್ಲಿದೆ. ಡೈರೆಕ್ಟರ್ ಹರಿಪ್ರಸಾದ್ ಜಯಣ್ಣ ಹಾಗೂ ನಾಯಕ ಪೃಥ್ವಿ ಶಾಮನೂರು ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿದೆ.

  • ಭಟ್ಟರಿಗೆ ದನಕಾಯೋನಿಂದ ಮೂರಕ್ಕೆ ಮೂರೂ ಮೋಸ

    yograj bhat cheated by kanakpura srinivas

    ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ದನಕಾಯೋನು ಚಿತ್ರ ನಿರ್ದೇಶಿಸಿದ್ದಕ್ಕೆ ಬರಬೇಕಿದ್ದ ಸಂಭಾವನೆ ಇನ್ನೂ ಬಂದಿಲ್ಲ. ನಿರ್ಮಾಪಕ ಕನಕಪುರ ಶ್ರೀನಿವಾಸ್ ಚಿತ್ರವನ್ನು ರಿಲೀಸ್ ಮಾಡಿ, ಲಾಭವನ್ನು ಮಾಡಿಕೊಂಡರಾದರೂ ತಂತ್ರಜ್ಞರಿಗೆ ಕೊಡಬೇಕಾದ ಸಂಭಾವನೆಯನ್ನೇ ಕೊಡದೆ ಕೈ ಎತ್ತಿಬಿಟ್ಟಿದ್ದಾರೆ.

    ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವ ಸುಳಿವು ಕೊಟ್ಟಿದ್ದರು ಯೋಗರಾಜ್ ಭಟ್. ಏಕೆಂದರೆ, ಅದೇ ಕನಕಪುರ ಶ್ರೀನಿವಾಸ್ ಅವರ ಭರ್ಜರಿ ಚಿತ್ರ ರಿಲೀಸ್‍ಗೆ ರೆಡಿಯಾಗಿತ್ತು. ಆಗ ಮತ್ತೊಮ್ಮೆ ಸಂಧಾನಕ್ಕೆ ಬಂದ ಕನಕಪುರ ಶ್ರೀನಿವಾಸ್, ಫಿಲಂ ಚೇಂಬರ್‍ನಲ್ಲಿ ಭಟ್ಟರಿಗೆ ಮೂರು ಚೆಕ್ ಕೊಟ್ಟು, ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದರು. ಭಟ್ಟರೂ ಕೂಡಾ ಭರವಸೆಯಿಲ್ಲದಿದ್ದರೂ ದೊಡ್ಡವರ ಮಾತಿಗೆ ಮಣಿದಿದ್ದರು.

    ಈಗ ಶ್ರೀನಿವಾಸ್ ಕೊಟ್ಟಿದ್ ಮೂರೂ ಚೆಕ್‍ಗಳು ಬೌನ್ಸ್ ಆಗಿವೆಯಂತೆ. ಇನ್ನು ಮುಂದಿನ ದಾರಿ ಕಾನೂನು ಹೋರಾಟ ಮಾತ್ರ ಎಂದಿದ್ದಾರೆ ಯೋಗರಾಜ್ ಭಟ್. ನ್ಯಾಯಾಲಯದ ಮೆಟ್ಟಿಲೇರುವುದು ಭಟ್ಟರಿಗೆ ಈಗ ಅನಿವಾರ್ಯವಾಗಿದೆ. ಅತ್ತ ಕನಕಪುರ ಶ್ರೀನಿವಾಸ್ ಭಟ್ಟರಿಗಾಗಲೀ, ಫಿಲಂ ಚೇಂಬರ್‍ನವರಿಗಾಗಲೀ ಕೈಗೆ ಸಿಗದೆ ಓಡಾಡಿಕೊಂಡಿದ್ದಾರೆ.

  • ಭಟ್ಟರಿಗೆ ಮುತ್ತು ಕೊಡಬೇಡ್ರಪ್ಪಾ.. : ಭಟ್ರ ಮಗಳ ರಿಕ್ವೆಸ್ಟು..

    ಭಟ್ಟರಿಗೆ ಮುತ್ತು ಕೊಡಬೇಡ್ರಪ್ಪಾ.. : ಭಟ್ರ ಮಗಳ ರಿಕ್ವೆಸ್ಟು..

    ಯೋಗರಾಜ್ ಭಟ್ಟರೀಗ ಫುಲ್ ಖುಷಿ ಮೂಡಿನಲ್ಲಿದ್ದಾರೆ. ಗಾಳಿಪಟ 2 ಭರ್ಜರಿಯಾಗಿಯೇ ಗೆದ್ದಿದೆ. 2ನೇ ದಿನ ಮತ್ತಷ್ಟು ಶೋಗಳು ಸೇರ್ಪಡೆಯಾಗಿರೋದು ಚಿತ್ರ ಹಿಟ್ ಆಗಿರುವುದಕ್ಕೆ ಸಾಕ್ಷಿ. ಎಲ್ಲ ಕಡೆಯೂ ಹೌಸ್‍ಫುಲ್ ಆಗಿರುವುದು ಗಣಿ-ಭಟ್ಟರ ಮೋಡಿಗೆ ಪ್ರೇಕ್ಷಕರು ಬಿದ್ದಿರೋದಕ್ಕೆ ಸಾಕ್ಷಿ.

    ವೀರೇಶ್ ಥಿಯೇಟರಿಗೆ ಪ್ರೇಕ್ಷಕರನ್ನು ನೋಡಲು ಬಂದಿದ್ದ ಭಟ್ಟರಿಗೆ ಅಭಿಮಾನಿಯೊಬ್ಬರು ಕಾಲಿಗೆ ಬಿದ್ದರು. ಭಟ್ಟರೂ ಕಾಲಿಗೆ ಬಿದ್ದರು. ಅಭಿಮಾನಿಯ ಪ್ರೀತಿ ಅಷ್ಟಕ್ಕೇ ನಿಲ್ಲಲಿಲ್ಲ. ಭಟ್ಟರನ್ನು ಅಪ್ಪಿಕೊಂಡು ಲಿಪ್ ಲಾಕ್ ಮಾಡಿಬಿಟ್ಟರು. ಅದಕ್ಕೇ ಈಗ ಭಟ್ಟರ ಮಗಳು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಪ್ಲೀಸ್ ಡೋಂಟ್ ಕಿಸ್ ಹಿಮ್ ಎಂದಿದ್ದಾರೆ. ಜೊತೆಗೆ ಭಟ್ಟರನ್ನು ಮಗಳು ಪುನರ್ವಸು ಹಾಗೂ ಪತ್ನಿ ರೇಣುಕಾ ಭಟ್ ಇಬ್ಬರೂ ಕಾಮಿಡಿ ಮಾಡುತ್ತಿರೋ ವಿಡಿಯೋವನ್ನು ಗಣೇಶ್ ಶೇರ್ ಮಾಡಿದ್ದಾರೆ. ನೋಡಿ.. ಭಟ್ರು ಲೂಸ್ ಆಗಿದ್ದಾರೆ ಅಂತಾ ನಾನು ಹೇಳಿದ್ರೂ ಯಾರೂ ನಂಬಲಿಲ್ಲ. ಈಗ ಭಟ್ರ ಹೆಂಡತಿ, ಮಗಳೇ ಕನ್ಫರ್ಮ್ ಮಾಡಿದ್ದಾರೆ. ಗಾಳಿಪಟ ನೋಡಿದ ಅಭಿಮಾನಿಗಳು ತೋರಿಸ್ತಿರೋ ಪ್ರೀತಿಗೆ ಭಟ್ರು ಹೆಂಗೆಂಗೋ ಆಗವ್ರೆ.. ಕಂಟ್ರೋಲ್‍ಗೆ ಸಿಗ್ತಾ ಇಲ್ಲ. ದಯವಿಟ್ಟು ಭಟ್ರ ಕೈಗೆ ತಮಟೆ ಕೊಡಬೇಡಿ ಪ್ಲೀಸ್ ಅಂತಾ ರಿಕ್ವೆಸ್ಟ್ ಮಾಡಿದ್ದಾರೆ.

    ಗಾಳಿಪಟದ ಕಲೆಕ್ಷನ್ ಮಾತ್ರ ಕಂಟ್ರೋಲ್‍ಗೆ ಸಿಗದಂತೆ ಏರುತ್ತಿದೆ. ರಮೇಶ್ ರೆಡ್ಡಿ ಪ್ರಾಯಶಃ ಅಲ್ಲ.. ಫುಲ್ ಖುಷ್ ಹುವಾ.. 

  • ಭಟ್ಟರಿಂದ ಮತ್ತೊಂದು ಗಾಳಿಪಟ

    yogaraj bhat ready for gaalipata sequel

    ಯೋಗರಾಜ್ ಭಟ್ಟರು ಗಾಳಿಪಟ ಹಾರಿಸೋಕೆ ರೆಡಿಯಾಗಿದ್ದಾರೆ. ಎರಡನೇ ಬಾರಿ. ಈ ಬಾರಿ ಗಾಳಿಪಟ ಹಾರಿಸೋಕೆ ಭಟ್ಟರು ಅಯ್ದುಕೊಂಡಿರೋದು ಶರಣ್, ಲೂಸಿಯಾ ಪವನ್ ಮತ್ತು ಅಲಮೇಲಮ್ಮ ಖ್ಯಾತಿಯ ರಿಷಿಯನ್ನು. ಅನುಮಾನವೇ ಇಲ್ಲ, ಇದು ಗಾಳಿಪಟ ಚಿತ್ರದ ಸೀಕ್ವೆಲ್.

    ಗಾಳಿಪಟದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣ, ಡೈಸಿ ಬೋಪಣ್ಣ, ನೀತೂ, ಭಾವನಾ ರಾವ್ ಇದ್ದರು. ಈ ಗಾಳಿಪಟದಲ್ಲಿ ಸಂಪೂರ್ಣ ಹೊಸ ತಂಡ. ಭಟ್ಟರು ಈಗಾಗಲೇ ಕಥೆಯನ್ನೂ ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಪಂಚತಂತ್ರ ಮುಗಿಸಿದ ತಕ್ಷಣ, ಗಾಳಿಪಟ ಹಾರಿಸೋಕೆ ಭಟ್ಟರು ರೆಡಿಯಾಗಿದ್ದಾರೆ.

    2008ರಲ್ಲಿ ತೆರೆಕಂಡಿದ್ದ ಗಾಳಿಪಟ, ಸೂಪರ್ ಹಿಟ್ ಸಿನಿಮಾ. ಸರಿಯಾಗಿ 10 ವರ್ಷಗಳ ನಂತರ ಗಾಳಿಪಟ 2ಗೆ ಶ್ರೀಕಾರ ಹಾಕಿದ್ದಾರೆ ಭಟ್ಟರು. ಸದ್ಯಕ್ಕೆ ಪಂಚತಂತ್ರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಭಟ್ಟರು ಗಾಳಿಪಟ ಹಾರಿಸೋಕೆ ಮುಹೂರ್ತ ಫಿಕ್ಸ್

    ಭಟ್ಟರು ಗಾಳಿಪಟ ಹಾರಿಸೋಕೆ ಮುಹೂರ್ತ ಫಿಕ್ಸ್

    ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ರಿಲೀಸ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 12ಕ್ಕೆ ಗಾಳಿಪಟ 2 ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಾಳಿಪಟದಲ್ಲಿದ್ದ ಗಣೇಶ್, ದಿಗಂತ್ ಮತ್ತು ಅನಂತ್ ನಾಗ್ ಮುಂದವರೆದಿದ್ದರೆ, ಪವನ್ ಕುಮಾರ್ ಹೊಸದಾಗಿ ಸೇರಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರು.

    2008ರ ಜನವರಿಯಲ್ಲಿ ಗಾಳಿಪಟ ರಿಲೀಸ್ ಆಗಿತ್ತು.

    ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣ ಹೀರೋ ಆಗಿದ್ದರೆ, ಡೈಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ನಾಯಕಿಯಾಗಿದ್ದರು. ಜೊತೆಗೆ ಅನಂತ್ ನಾಗ್, ಪದ್ಮಜಾ ರಾವ್ ಇದ್ದರು. ಮುಂಗಾರು ಮಳೆ ಭರ್ಜರಿ ಹಿಟ್ ಆದ ಮೇಲೆ ರಿಲೀಸ್ ಆಗಿದ್ದ ಸಿನಿಮಾ ಗಾಳಿಪಟ. ಆಗಿನ ಕಾಲಕ್ಕೆ 12 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರವದು.

    ಗಾಳಿಪಟಕ್ಕೆ ಹರಿಕೃಷ್ಣ ಸಂಗೀತವಿತ್ತು. ಗಾಳಿಪಟ 2ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಡಿಸೆಂಬರ್ 2, 2019ರಲ್ಲಿ ಸೆಟ್ಟೇರಿದ ಗಾಳಿಪಟ 2 ಕೋವಿಡ್ 19ನಿಂದಾಗಿ ವಿಳಂಬವಾಗಿತ್ತು. ಈಗ ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ನಿರೀಕ್ಷೆಗಳು ದೊಡ್ಡದಾಗಿವೆ.

  • ಭಟ್ಟರು ಸತೀಶ್ ಡಿಎನ್‍ಎ ಒಂದಾಯ್ತು..!

    ಭಟ್ಟರು ಸತೀಶ್ ಡಿಎನ್‍ಎ ಒಂದಾಯ್ತು..!

    ನೀನಾಸಂ ಸತೀಶ್ ಭಟ್ಟರ ಕ್ಯಾಂಪಿನ ಹುಡುಗರೇ. ಯೋಗರಾಜ್ ಭಟ್ಟರ ಚಿತ್ರಗಳಿಂದಲೇ ಹೀರೋ ಆದ ನೀನಾಸಂ ಸೀಶ್ ಈಗ ಸ್ಟಾರ್ ನಟ. ಅವರಿಬ್ಬರೂ ಈಗ ಇನ್ನೊಬ್ಬ ಹೊಸ ಪ್ರತಿಭೆಗಾಗಿ ಒಂದಾಗಿರುವುದೇ ಡಿಎನ್‍ಎ ವಿಶೇಷ.

    ಪ್ರಕಾಶ್ ಮೆಹು ರಾಜ್ ಎಂಬುವವರು ನಿರ್ದೇಶಿಸಿರುವ ಸಿನಿಮಾ ಡಿಎನ್‍ಎ. ಚಿತ್ರರಂಗದಲ್ಲಿ 25 ವರ್ಷ ಕೆಲಸ ಮಾಡಿದ ನಂತರ ಈಗ ನಿರ್ದೇಶಕರಾಗಿದ್ದಾರೆ. ಮಾತೃಶ್ರೀ ಬ್ಯಾನರಿನಲ್ಲಿ ಮೈಲಾರಿ ನಿರ್ಮಿಸಿರುವ ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರೇ ಹೀರೋ.  ಸಂಬಂಧಗಳ ಕುರಿತು ಇರುವ ಚಿತ್ರವಿದು ಎಂದಿದ್ದಾರೆ ಡೈರೆಕ್ಟರ್.

    ಅಂದಹಾಗೆ ಈ ಚಿತ್ರಕ್ಕೆ ಯೋಗರಾಜ್ ಭಟ್ ನಾವ್ಯಾರು.. ಎಲ್ಲಿಂದ ಬಂದಿದ್ದೀವಿ.. ನಾವ್ಯಾಕೆ ಸ್ವಾಮಿ.. ಹಿಂಗಿದ್ದೀವಿ..

    ಅನ್ನೋ ಹಾಡು ಬರೆದಿದ್ದಾರೆ. ಅವರದ್ದೇ ಸ್ಟೈಲಿನ ಫಿಲಾಸಫಿ ಸಾಹಿತ್ಯದ ಹಾಡು. ಈ ಹಾಡನ್ನು ಹಾಡಿರುವುದು ನೀನಾಸಂ ಸತೀಶ್ ಎನ್ನುವುದು ವಿಶೇಷ.

  • ಭಟ್ಟರು, ಹರಿಯ ಶೃಂಗಾರ ಶತಕ

    yograj bhatt's sringara kavya

    ಭರ್ತೃಹರಿಯ ಶೃಂಗಾರ ಶತಕ, ಶೃಂಗಾರ ಕಾವ್ಯಗಳಲ್ಲಿ ಬಹುದೊಡ್ಡ ಕೃತಿ. ಈಗ ಅಂತಾದ್ದೊಂದು ಶೃಂಗಾರ ಕಾವ್ಯ ಸೃಷ್ಟಿಸಿದ್ದಾರೆ ಯೋಗರಾಜ ಭಟ್ಟರು. ಭಟ್ಟರ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲೊಂದು ಶೃಂಗಾರ ಲೋಕ ಸೃಷ್ಟಿಸಿದ್ದಾರೆ ಯೋಗರಾಜ್ ಭಟ್.

    ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ

    ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ

    ಕಳ್ಳಾಟಕ್ಕೆ ಮಳ್ಳಾ ಮನ ಛೀ ಎಂದಿದೆ

    ಚೆಲ್ಲಾಟಕೆ ಚೆಲುವು ಹೂ ಎಂದಿದೆ..

    ಹೀಗೆ ಶುರುವಾಗುವ ಹಾಡಿನಲ್ಲಿ ಎಲ್ಲಿಯೂ ಪೋಲಿತನವಿಲ್ಲ. ಪ್ರಣಯದ ದಿವ್ಯಾನುಭೂತಿಯ ಸ್ಪರ್ಶವಿದೆ. ಹಾಡಿಗೆ ಹಾಲಿವುಡ್ ಶೈಲಿಯ ಕಂಟೆಂಪೊರರಿ ನೃತ್ಯ ಸಂಯೋಜಿಸಿದ್ದಾರೆ ಇಮ್ರಾನ್ ಸರ್ದಾರಿಯಾ.

    ಶೃಂಗಾರ ಕಾವ್ಯದಲ್ಲಿ ವಿಹಾನ್ ಮತ್ತು ಸೋನಲ್ ಮೊಂತೆರೋ ಬಾಗಿ ಬಳುಕಿದ್ದಾರೆ. ಬಿಳಿ ಬಣ್ಣದ ತೆಳು ಬಟ್ಟೆಯಲ್ಲಿ ದೃಶ್ಯ ಶ್ರೀಮಂತಿಕೆಯ ಜೊತೆಗೆ ಶೃಂಗಾರ ವೈಭವವೂ ಎದ್ದು ಕಾಣುವಂತಿದೆ.

  • ಭಟ್ರ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ರಾಜಕುಮಾರಿ ಪ್ರಿಯಾ ಮತ್ತು ನಿಶ್ವಿಕಾ ನಾಯ್ಡು

    ಭಟ್ರ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ರಾಜಕುಮಾರಿ ಪ್ರಿಯಾ ಮತ್ತು ನಿಶ್ವಿಕಾ ನಾಯ್ಡು

    ರಾಜಕುಮಾರ ಚಿತ್ರದಿಂದ ಕನ್ನಡಿಗರ ಹೃದಯಕ್ಕೇ ಲಗ್ಗೆಯಿಟ್ಟಿದ್ದ ಪ್ರಿಯಾ ಆನಂದ್ ಯೋಗರಾಜ್ ಭಟ್ಟರ ಚಿತ್ರಕ್ಕೆ ಸೇರಿಕೊಂಡಿದ್ದಾರೆ. ಗಾಳಿಪಟ 2ನಲ್ಲಿಯೂ ಮಿಂಚು ಹರಿಸಿದ್ದ ನಿಶ್ವಿಕಾ ನಾಯ್ಡು ಮತ್ತೊಮ್ಮೆ ಭಟ್ಟರ ಕ್ಯಾಂಪ್ ಸೇರಿದ್ದಾರೆ. ಶಿವಣ್ಣ ಮತ್ತು ಪ್ರಭುದೇವ ಅವರೊಂದಿಗೆ ಭಟ್ಟರು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.

    ಸದ್ಯಕ್ಕೆ ಗಾಳಿಪಟ 2 ಸಕ್ಸಸ್ ಸಂಭ್ರಮದಲ್ಲಿರುವ ಯೋಗರಾಜ್ ಭಟ್, ಶಿವಣ್ಣ-ಪ್ರಭುದೇವ ಜೋಡಿಯ ಚಿತ್ರದ ಚಿತ್ರೀಕರಣಕ್ಕೆ ಚಿಕ್ಕ ಬ್ರೇಕ್ ಕೊಟ್ಟಿದ್ದಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನವರ ಈ ಚಿತ್ರಕ್ಕೆ ಸದ್ಯಕ್ಕೆ ಕುಲದಲ್ಲಿ ಕೀಳ್ಯಾವುದೋ ಅನ್ನೋ ಟೈಟಲ್ ಇಡಲಾಗಿದೆ.

    ಪ್ರಿಯಾ ಆನಂದ್ ರಾಜಕುಮಾರ ಹಾಗೂ ಜೇಮ್ಸ್ ಚಿತ್ರದಲ್ಲಿ ಪುನೀತ್ ಎದುರು ನಾಯಕಿಯಾಗಿ ನಟಿಸಿದ್ದವರು. ಗಣೇಶ್ ಜೊತೆಯಲ್ಲೂ ನಟಿಸಿದ್ದ ಪ್ರಿಯಾಗೆ ಶಿವಣ್ಣನ ಜೊತೆ ಇದು ಮೊದಲ ಸಿನಿಮಾ.

    ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಪ್ರಭುದೇವಗೆ ನಾಯಕಿ. ಭಟ್ಟರ ಜೊತೆ ಅವರದ್ದು 2ನೇ ಸಿನಿಮಾ. ಹಾಗೆ ನೋಡಿದರೆ ಶಿವಣ್ಣಗೂ ಕೂಡಾ ಭಟ್ಟರ ಜೊತೆ ಇದು ಮೊದಲ ಸಿನಿಮಾ.

  • ಭಟ್ರ ಕ್ವಾಟ್ರುಗೆ ಕಿಕ್ ಕೊಡೋರು ಯಾರಂತ ಗೊತ್ತಾ..?

    yogaraj bhat's yenne song in victory 2

    ವಿಕ್ಟರಿ 2 ಚಿತ್ರದ ನಾವ್ ಮನೆಗ್ ಹೋಗೋದಿಲ್ಲ ಅನ್ನೋ ಹಾಡು ಹಿಟ್ಟಾಗಿದ್ದೇ ತಡ, ಈಗ ಎಲ್ಲರಲ್ಲೂ ಒಂದೇ ಪ್ರಶ್ನೆ. ಇದೊಂಥರಾ ಕುಡುಕರ ಕಾಂಬಿನೇಷನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅಷ್ಟರಮಟ್ಟಿಗೆ ಟೀಮು ಒಟ್ಟಾಗಿಬಿಟ್ಟಿದೆ. 

    ಖಾಲಿ ಕ್ವಾಟ್ರು ಹಾಡು ಬರೆದಿದ್ದು ಭಟ್ಟರು. ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಹೊಡಿ ಒಂಭತ್.. ಹೀಗೆ ಎಣ್ಣೆ ಹಾಡುಗಳನ್ನು ಕಿಕ್ಕು ಹೊಡೆದವರಂತೆ ಕೊಡುತ್ತಿದ್ದಾರೆ. ಈಗ ವಿಕ್ಟರಿ 2ನಲ್ಲಿ..  ನಾವ್ ಮನೆಗ್ ಹೋಗೋದಿಲ್ಲ ಹಾಡು.

    ಇಲ್ಲಿ ಇವರೊಬ್ಬರೇ ಅಲ್ಲ, ಖಾಲಿ ಕ್ವಾಟ್ರು ಹಾಡಿಗೆ ಸಂಗೀತ ಕೊಟ್ಟಿದ್ದ ಅರ್ಜುನ್ ಜನ್ಯಾ, ಅದೇ ಹಾಡಿಗೆ ಹೆಜ್ಜೆ ಹಾಕಿದ್ದ ಶರಣ್, ಕಿಕ್ಕಿನ ಹಾಡುಗಳಿಗೆ ಕಂಠದಾನ ಮಾಡಿದ್ದ ವಿಜಯ್ ಪ್ರಕಾಶ್.. ಎಲ್ಲವೂ ಸೇಮ್ ಟು ಸೇಮ್ ಕಾಂಬಿನೇಷನ್. ಕಿಕ್ ಹೊಡೆಸೋದು ಯಾರು ಅನ್ನೋದು ಅಭಿಮಾನಿಗಳ ಪ್ರಶ್ನೆ. ವಿಕ್ಟರಿ 2 ನೋಡಿದ್ರೆ, ಅದಕ್ಕೂ ಉತ್ತರ ಸಿಗುತ್ತೆ.