` yogaraj bhat, - chitraloka.com | Kannada Movie News, Reviews | Image

yogaraj bhat,

  • ಭಟ್ರಿಗೇ ಚಾಲೆಂಜಾ..? ನಾವ್ ಮನೇಲಿರೋದಿಲ್ಲ ಅಂತಾವ್ರೆ ಹೆಣ್ಮಕ್ಳು..!

    naavu manelirodilla song thrills yogaraj bhatt

    ಯೋಗರಾಜ್ ಭಟ್ಟರು, ವಿಕ್ಟರಿ-2 ಚಿತ್ರಕ್ಕೆ ಬರೆದಿದ್ದ ಹಾಡು `ನಾವ್ ಮನೆಗ್ ಹೋಗೋದಿಲ್ಲ.. ' ಹಾಡು ಬೊಂಬಾಟಾಗಿ ಹಿಟ್ ಆಗಿತ್ತು. ಆ ಹಾಡಿನ ಚಿತ್ರ ವಿಚಿತ್ರ ವರ್ಷನ್‍ಗಳೂ ಬಂದಿದ್ವು. ಆದರೆ, ಈಗ ಬಂದಿರೋ ಈ ವರ್ಷನ್ ಇದ್ಯಲ್ಲ.. ಪಕ್ಕಾ ಭಟ್ಟರಿಗೆ ಚಾಲೆಂಜ್ ಹಾಕೋವಂತಹದ್ದು. 

    ನಾವ್ ಮನೆಲ್ ಇರೋದಿಲ್ಲ.. ಎಂದು ಶುರುವಾಗೋ ಹಾಡಿನಲ್ಲಿ ಗಂಡಂದಿರನ್ನು ಕಾಲೆಳೆಯುವ ಹೆಂಡತಿಯರಿದ್ದಾರೆ. ಕೇಳುಗರು ಹಾಡು ಕೇಳಿ ಥ್ರಿಲ್ಲಾಗಿದ್ದಾರೆ. ಭಟ್ಟರು ನಕ್ಕಿದ್ದಾರೆ. ಶರಣ್, ಸಾಧುಕೋಕಿಲ , ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಎಲ್ಲರೂ ಹಾಡನ್ನು ಹಿಂಗೂ ಬರೆಯಬಹುದಾ ಎಂದುಕೊಂಡಿದ್ದಾರೆ.

    ಅಂದಹಾಗೆ ಕ್ವಾಟ್ಲೆ ಸಿನಿಮಾ ನಿರ್ದೇಶಿಸಿದ್ದ ಚಂದ್ರಕಲಾ ಅವರು ಬರೆದಿರೋ ಸಾಹಿತ್ಯಕ್ಕೆ, ವರ್ಷಾ ಸುರೇಶ್ ಮತ್ತು ಚಂದ್ರಕಲಾ ಅವರೇ ಧ್ವನಿ ಕೊಟ್ಟಿದ್ದಾರೆ. ಹೆಂಗಸ್ರು ಕೇಳ್ತಾ ಅವ್ರೆ.. ಉತ್ರ ಕೊಡ್ರಪ್ಪಾ..

  • ಭಟ್ರು, ಗಣೇಶ್, ದುನಿಯಾ ವಿಜಿ ಅಪೂರ್ವ ಸಂಗಮ ಯಾವಾಗ..?

    yogaraj bhatt, golden star ganesh & duniya viji combination movie

    ಕನ್ನಡದಲ್ಲಿ ಮಲ್ಟಿಸ್ಟಾರ್​ಗಳ ಚಿತ್ರಗಳ ಪರ್ವ ಮತ್ತೊಮ್ಮೆ ಶುರುವಾಗಿದೆ. ಶಿವಣ್ಣ-ಸುದೀಪ್ ಅಭಿನಯದ ವಿಲನ್ ಚಿತ್ರ ಭರ್ಜರಿ ನಿರೀಕ್ಷೆ ಹುಟ್ಟಿಸಿರುವಾಗಲೇ ಇನ್ನೊಂದು ಮಲ್ಟಿಸ್ಟಾರ್ ಚಿತ್ರದ ಕನಸು ಚಿಗುರೊಡೆದಿದೆ. ಹೀಗೆ ಒಂದಾಗುವ ಸುಳಿವು ನೀಡಿರುವುದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಿ.

    ಇಬ್ಬರೂ ಚಿತ್ರರಂಗದಲ್ಲಿ ದಾಖಲೆ ಬರೆದವರೇ. ಮುಂಗಾರು ಮಳೆ ಹಿಟ್ ಆದ ಹೊತ್ತಿನಲ್ಲೇ ದುನಿಯಾ ವಿಜಿ ಟ್ರೆಂಡ್ ಸೆಟ್ ಮಾಡಿತ್ತು. ಎಲ್ಲಕ್ಕೂ ಮಿಗಿಲಾಗಿ ಇಬ್ಬರು ಭಟ್ಟರ ಕ್ಯಾಂಪಿನ ಹುಡುಗರು. 

    ಈಗ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮುಗುಳುನಗೆ ಚಿತ್ರ ಸಿದ್ಧವಾಗುತ್ತಿರುವಾಗಲೇ, ಹೊಸ ಸುದ್ದಿಯೊಂದು ಭಟ್ಟರ ಕ್ಯಾಂಪಿನಿಂದ ಬಂದಿದೆ. 20 ವರ್ಷಗಳಿಂದ ಗೆಳೆಯರಾಗಿರುವ ಗಣೇಶ್ ಮತ್ತು ದುನಿಯಾ ವಿಜಿ ಒಟ್ಟಿಗೇ ಸಿನಿಮಾ ಮಾಡ್ತಾರಂತೆ. ಐಡಿಯಾ ಬಂದ ತಕ್ಷಣ, ಆ ಚಿತ್ರಕ್ಕೆ ಭಟ್ಟರೇ ನಿರ್ದೇಶನ ಮಾಡಿದರೆ ಚೆಂದ ಅನ್ನೋದೂ ಹೊಳೆದಿದೆ. 

    ಕಥೆ ಏನು..? ಯಾವಾಗ..? ಊಹೂಂ..ಯಾವುದೂ ಗೊತ್ತಿಲ್ಲ. ಸದ್ಯಕ್ಕೆ ಇದು ಐಡಿಯಾ ಅಷ್ಟೆ. ಎಲ್ಲ ಗೊತ್ತಾಗೋಕೆ ಆ ಅಪೂರ್ವ ಸಂಗಮ ಆಗುವವರೆಗೆ ಕಾಯಬೇಕಷ್ಟೆ.

  • ಮಲ್ಟಿ ಸ್ಟಾರ್ ಅಲ್ಲ.. ಮಲ್ಟಿ ಸ್ಟಾರ್ ಡೈರೆಕ್ಟರ್ಸ್ ಸಿನಿಮಾ..!

    its mult directors movie time in sandalwood

    ಹಲವು ಸ್ಟಾರ್ ನಟರೂ ಒಂದೇ ಚಿತ್ರದಲ್ಲಿ ನಟಿಸಿದರೆ, ಅದು ಮಲ್ಟಿ ಸ್ಟಾರ್ ಸಿನಿಮಾ. ಹಲವು ನಿರ್ದೇಶಕರು ಒಂದೇ ಚಿತ್ರದಲ್ಲಿ ತೊಡಗಿಸಿಕೊಂಡರೆ.. ಅದನ್ನು ಮಲ್ಟಿ ಸ್ಟಾರ್ ಡೈರೆಕ್ಟರ್ ಸಿನಿಮಾ ಎನ್ನಬೇಕಾ..? ಕನ್ನಡ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕರ ಸಿನಿಮಾದಲ್ಲಿ, ಇನ್ನೊಬ್ಬ ನಿರ್ದೇಶಕರು ಹಾಡು ಬರೆಯೋದು, ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸೋದು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿಕೊಂಡು, ಚಿತ್ರವನ್ನು ನಿರ್ಮಾಣ ಮಾಡಿ, ಆ ಚಿತ್ರದ ನಿರ್ದೇಶನದ ಹೊಣೆಯನ್ನು ಮತ್ತೊಬ್ಬ ಹೊಸ ಪ್ರತಿಭೆಗೆ ನೀಡೋದಿದ್ಯಲ್ಲ.. ಅದು ಹೊಸದು. ಅಂಥಾದ್ದೊಂದು ಸಾಹಸಕ್ಕೆ ಪ್ರೀತಿಯಿಂದ ಕೈ ಹಾಕಿರೋದು ಯೋಗರಾಜ ಭಟ್ ಮತ್ತು ಶಶಾಂಕ್.

    shashank_yogaraj_bhatt_new_.jpgಯೋಗರಾಜ್ ಭಟ್ ಮತ್ತು ಶಶಾಂಕ್, ಇಬ್ಬರೂ ಕನ್ನಡದ ಸ್ಟಾರ್ ನಿರ್ದೇಶಕರು. ಈಗ ಈ ಇಬ್ಬರೂ ಒಟ್ಟಿಗೇ ಒಂದೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಕಥೆ, ಯೋಗರಾಜ್ ಭಟ್ಟರದ್ದು. ಅವರು ಕಥೆ ಹೇಳಿದ್ದು ನಟ ರಿಷಿಗೆ. ರಿಷಿ ಆ ಕಥೆಯನ್ನು ಶಶಾಂಕ್ ಅವರ ಬಳಿ ಹಂಚಿಕೊಂಡಿದ್ದಾರೆ. ಶಶಾಂಕ್, ನೇರವಾಗಿ ಭಟ್ಟರ ಬಳಿ ಬಂದು ಸಿನಿಮಾ ಮಾಡುವ ಪ್ಲಾನ್ ಇಟ್ಟಿದ್ದಾರೆ. ಅಲ್ಲಿಗೆ.. ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬಿದ್ದಿದೆ.

    ಶಶಾಂಕ್ ಮತ್ತು ಯೋಗರಾಜ್ ಭಟ್ ಜಂಟಿ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶಕ, ಭಟ್ಟರ ಗರಡಿಯ ಹುಡುಗ ಮೋಹನ್ ಸಿಂಗ್. ನಾಯಕ ರಿಷಿ. 

    ಚಿತ್ರಕಥೆಯ ಕೆಲಸ ಶುರುವಾಗಿದ್ದು, ಜೂನ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ.

  • ಮುಂಗಾರು ಮಳೆಯಾಗುತ್ತಾ.. ಮುಗುಳುನಗೆ..?

    mugulunage image

    ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನ ಮುಗುಳುನಗೆ ಚಿತ್ರ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಇಬ್ಬರೂ ಮೊದಲು ಜೋಡಿಯಾಗಿದ್ದು ಮುಂಗಾರುಮಳೆಯಲ್ಲಿ. ಅದು ಕನ್ನಡದಲ್ಲಿ ದಾಖಲೆಯನ್ನೇ ಬರೆಯಿತು. ಎರಡನೇ ಚಿತ್ರ ಗಾಳಿಪಟ ಕೂಡಾ ಸೂಪರ್ ಹಿಟ್. ಅದಾದ ಮೇಲೆ ಇಬ್ಬರೂ ಒಟ್ಟಾಗಿರುವ ಚಿತ್ರ ಮುಗುಳುನಗೆ.

    ನಾಲ್ವರು ನಾಯಕಿಯರ ಜೊತೆ ನಟಿಸಿರುವ ಗಣೇಶ್‍ಗೆ ಈ ಚಿತ್ರದಲ್ಲಿ ಅಮೂಲ್ಯ ಮಾರ್ಗದರ್ಶನ ನೀಡುತ್ತಾರೆ ಎನ್ನುವ ವಿಚಾರವೇ ಕುತೂಹಲ ಮೂಡಿಸಿದೆ. ಮುಂಗಾರುಮಳೆಯಲ್ಲಿ ನಟಿಸಿದ್ದ ಅನಂತ್ ನಾಗ್, ಅದ್ಭುತ ಹಾಡು ಕೊಟ್ಟಿದ್ದ ಜಯಂತ್ ಕಾಯ್ಕಿಣಿ ಈ ಚಿತ್ರದಲ್ಲೂ ಇದ್ದಾರೆ. ನಟ ಜಗ್ಗೇಶ್ ಪುಟ್ಟದೊಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

    ರಂಗಾಯಣ ರಘು, ಅಚ್ಯುತ್ ಕುಮಾರ್, ರಾಮರಾಮಾ ರೆ ಧರ್ಮಣ್ಣ, ಚಂದನ್, ಮಂಜುನಾಥ್ ಹೆಗ್ಡೆ, ಸಾಗರ್..ಹೀಗೆ ತಾರಾಬಳಗ ದೊಡ್ಡದಾಗಿಯೇ ಇದೆ.

    ಮುಗುಳುನಗೆಯೇ ನೀ ಹೇಳು, ಕೆರೆ ಏರಿ ಮ್ಯಾಲೆ, ರೂಪಸಿ ಸುಮ್ಮನೆ, ಹೊಡಿ ಒಂಭತ್.. ಹಾಡುಗಳು ಜನಪ್ರಿಯವಾಗಿವೆ. ಸಾಹಿತ್ಯವನ್ನು ಅಭಿಮಾನಿಗಳು ಈಗಾಗಲೇ ಗುನುಗತೊಡಗಿದ್ದಾರೆ. ಸೈಯ್ಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.

    Related Articles :-

    ಹೆಣ್ಮಕ್ಕಳಿಗಾಗಿ..ಹೆಣ್ಮಕ್ಕಳಿಗೆ ಮಾತ್ರ - ಮುಗುಳುನಗೆ ಸ್ಪೆಷಲ್

    ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು

    ನಿಮ್ಮ ನಿಮ್ಮ ಪ್ರೀತಿ ಹುಡುಕಿಕೊಳ್ಳಿ.. ಮುಗುಳುನಗೆಯಲಿ..

    ಹಾಡು ರಿಲೀಸ್‍ನಲ್ಲೇ ಮುಗುಳುನಗೆ ಕರ್ನಾಟಕ ಯಾತ್ರೆ

    Jaggesh Dances For Mugulunage

    Mugulunage Shooting In Pondicherry

    Yogaraj Bhatt's New Film Titled Mugulunage

  • ಮೂವರು ಚೆಲುವರಿಗೆ ಐವರು ಚೆಲುವೆಯರು.. ಫಾರಿನ್ ಶೂಟಿಂಗ್.. ಭಟ್ಟರ 2ನೇ ಗಾಳಿಪಟದ ಕಥೆ..

    yogaaj bhat's gaalipata 2

    ಗಾಳಿಪಟ 2 ಚಿತ್ರವನ್ನ ಭಟ್ಟರೇ ಮಾಡುತ್ತಿದ್ದಾರೆ ಅನ್ನೋದು ಈಗ ಗುಟ್ಟೇನಲ್ಲ. ಯೋಗರಾಜ್ ಭಟ್ಟರೇ ಅದನ್ನು ಹೇಳಿಕೊಂಡಿದ್ದರು. ಈಗ ಚಿತ್ರದ ಇನ್ನೊಂದಿಷ್ಟು ಕುತೂಹಲಗಳನ್ನು ಹೊರಹಾಕಿದ್ದಾರೆ. ಗಾಳಿಪಟ 2 ಅನ್ನೋದು ಮೂವರು ನಾಯಕರ ಕಥೆ. ಒಬ್ಬ ಮೇಲ್ವರ್ಗ, ಒಬ್ಬ ಮಧ್ಯಮ ವರ್ಗ ಹಾಗೂ ಒಬ್ಬ ಕೆಳವರ್ಗದ ಹುಡುಗನ ಕಥೆ. ಅವರೇ ಶರಣ್, ರಿಷಿ ಹಾಗೂ ಲೂಸಿಯಾ ಪವನ್.

    ಆ ಮೂವರಿಗೆ ಐವರು ಚೆಲುವೆಯರು. ಶರ್ಮಿಳಾ ಮಾಂಡ್ರೆ, ಸೋನಲ್ ಆಯ್ಕೆ ಫೈನಲ್ ಆಗಿದೆ. ಇನ್ನುಳಿದವರಿಗೆ ಅಡಿಷನ್ ನಡೆಯುತ್ತಿದೆ. ಭಟ್ಟರಿಗೀಗ ಒಬ್ಬ ಚೈನೀಸ್ ಹುಡುಗಿ, ಒಬ್ಬ ಬೆಂಗಾಳಿ ಹುಡುಗಿ ಮತ್ತೊಬ್ಬಳು ವಿದೇಶಿ ಮಾಡೆಲ್ ಬೇಕಿದೆ. ಅನುಮಾನವೇ ಇಲ್ಲದಂತೆ ಇದೊಂದು ಪಕ್ಕಾ ಲವ್ ಸ್ಟೋರಿ.

    ಗಾಳಿಪಟದಲ್ಲಿ ಮಲೆನಾಡನ್ನು ಚೆಂದವಾಗಿ ತೋರಿಸಿದ್ದ ಭಟ್ಟರು, ಗಾಳಿಪಟ 2ನಲ್ಲಿ ವಿದೇಶಕ್ಕೆ ಹಾರುತ್ತಿದ್ದಾರೆ. ಗುಜರಾತಿ ಸಿನಿಮಾಗಳಲ್ಲಿ ಹೆಸರು ಮಾಡಿರುವ ನಿರ್ಮಾಪಕ ಮಹೇಶ್ ಧಾನನ್ನವರ್ ಚಿತ್ರದ ನಿರ್ಮಾಪಕ. ಈ ಮಹೇಶ್, ಬೆಳಗಾವಿಯವರು ಅನ್ನೋದು ಮತ್ತೊಂದು ವಿಶೇಷ.

  • ಮೈಸೂರಿನ ಗರಡಿ ಮನೆಗೆ ಯೋಗರಾಜ್ ಭಟ್

    ಮೈಸೂರಿನ ಗರಡಿ ಮನೆಗೆ ಯೋಗರಾಜ್ ಭಟ್

    ಬಿ.ಸಿ.ಪಾಟೀಲ್ ನಿರ್ಮಾಣದಲ್ಲಿ ಶುರುವಾಗಿರುವ ಗರಡಿ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವುದು ಗೊತ್ತಿದೆ ತಾನೇ.. ಈಗ ಆ ಗರಡಿಗಾಗಿ ಗರಡಿಮನೆ ಹುಡುಕಾಟದಲ್ಲಿದ್ದಾರೆ ಯೋಗರಾಜ್ ಭಟ್.

    ಗರಡಿ ಚಿತ್ರದ ಸಾಹಸ ನಿರ್ದೇಶಕರೂ ಆಗಿರುವ ಕೌರವ ವೆಂಕಟೇಶ್ ಅವರ ಜೊತೆ ಮೈಸೂರಿನ ಗರಡಿ ಮನೆಗಳಿಗೆ ಭೇಟಿ ಕೊಡುತ್ತಿದ್ದಾರೆ ಭಟ್ಟರು. ಅಲ್ಲಿನ ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

    ಗರಡಿ ಮನೆಯ ಕುರಿತು ಸಿನಿಮಾ ಭಟ್ಟರಿಗೂ ಹೊಸದು. ಹಾಗಂತ ಗರಡಿ ಮನೆಗಳ ಬಗ್ಗೆ ಗೊತ್ತೇ ಇಲ್ಲ ಎಂದೇನಲ್ಲ. ಈ ಬಾರಿ ಭಟ್ಟರ ಜೊತೆ ಯಶಸ್ ಸೂರ್ಯ, ರಚಿತಾ ರಾಮ್ ಕೂಡಾ ಇದ್ದಾರೆ.

  • ಯಜಮಾನನ ಬಸಣ್ಣಿ.. ಹಾಡು. ಎಲ್ಲಿಟ್ಟಿದ್ರಿ ಭಟ್ರೆ ಇಂಥಾ ಪದಗಳನ್ನ..?

    yogaraj bhatt thrills youth again

    ಯಜಮಾನ ಚಿತ್ರದ ಮೂರನೇ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಬಸಣ್ಣಿ ಹಾಡಿನ ಸಾಹಿತ್ಯ ಕೇಳಿದವರು ಭಟ್ಟರು ಇಂಥ ಪದಗಳನ್ನ ಅದೆಲ್ಲಿಟ್ಟಿದ್ರು ಅಂತಾ ಬೆರಗುಗೊಂಡಿದ್ದಾರೆ.

    ಹಾಡಿನಲ್ಲಿ ಭಟ್ಟರು ಗಾದೆ, ನಾಣ್ಣುಡಿ, ಆಡುಮಾತು, ಪೋಲಿಮಾತು ಎಲ್ಲವನ್ನೂ ಹದವಾಗಿ ಬೆರೆಸಿ ಕಟ್ಟಿಕೊಟ್ಟಿದ್ದಾರೆ.

    ಹುಡ್ಗೀನ ಕೈ ತೊಳ್ಕೊಂಡು ಮುಟ್ಬೇಕು.. ಸಂಬಂಧ ಫಿಕ್ಸ್ ಮಾಡೋಕೆ ಬಂದೀನಿ.. ಲಕ್ಸು ಸೋಪ್ ಹಾಕ್ಕೊಂಡು ಜಳಕ ಮಾಡೀನಿ.. ಉಳ್ಳಾಗಡ್ಡಿ ತಿನ್ನೋದು ಯಾಕೆ ಅನ್ನೋದೂ ಹಾಡಿನ ಪದವಾಗಿದೆ.

    ಇಳಕಲ್ ಸೀರೆ ಮೊಣಕಾಲಿನ ಮೇಲೆ ಉಡೋದ್ಯಾಕೆ, ಮಕಮಲ್ ಟೋಪಿ, ತಮ್ಮ ಶ್ರೀದೇವಿ ಮೇಲಿನ ಪ್ರೀತಿ.. ಎಲ್ಲವನ್ನೂ ಹಾಡಿಗೆ ತಂದಿದ್ದಾರೆ.  ದರ್ಶನ್ ಅವರಿಗಾಗಿ ಭಟ್ಟರು ಡಿಫರೆಂಟ್ ಡಿಫರೆಂಟ್ ಪದಗಳ ಹಾಡನ್ನು ಸೃಷ್ಟಿಸಿ ಒನ್ಸ್ ಎಗೇಯ್ನ್ ಹಾಡನ್ನು ಗೆಲ್ಲಿಸಿದ್ದಾರೆ.

    ಅಪ್ಪಟ ತುಂಡೈಕ್ಳ ಹಾಡಿಗೆ ಹರಿಕೃಷ್ಣ ಸಂಗೀತ ಜೋಡಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಚಿತ್ರಕ್ಕೆ ಶೈಲಜಾ ನಾಗ್ ನಿರ್ಮಾಪಕಿ. ಹಾಡು ಹಿಟ್ಟಾಗಿದೆ. ವೈರಲ್ಲಾಗಿದೆ.

  • ಯಬಸ್ ಅಂದ್ರ ಏನಂತ ಗೊತ್ತೇನ್ರಿ.. ಭಟ್ರು ಹೇಳಾರ ತಿಳ್ಕೋರಿ..

    yogaraj bhatt explains the meaning of yaabaas

    ಯೋಗರಾಜ ಭಟ್ಟರೇ ಹಾಗೆ.. ನೋಡುಗರು, ಓದುಗರು, ವೀಕ್ಷಕರ ತಲೆಗೆ ಒಂದು ಹುಳದ ಬಿಡದೆ ಇದ್ದರೆ.. ಅವರು ಭಟ್ಟರೇ ಅಲ್ಲ. ಪಂಚತಂತ್ರ ಸುರುವಾತಿನಿಂದ ಇಂಥದ್ದೇ ಒಂದು ಹುಳ ಬಿಟ್ಟಿದ್ದರು ಭಟ್ಟರು. ಅದು ಯಬಸ್. 

    ಏನ್ರೀ ಅದು ಯಬಸ್ ಅಂದ್ರ ಮಳ್ಳಗೆ ನಕ್ಕು ಸುಮ್ಮನಾಗುತ್ತಿದ್ದ ಭಟ್ಟರು, ಈಗ ಆ ಪದದ ಅರ್ಥವನ್ನೆಲ್ಲ ಹೇಳಿದ್ದಾರೆ. ಯಬಸ್ ಅನ್ನೋದು ಉತ್ತರ ಕರ್ನಾಟಕದ ಪದ. ಧಾರವಾಡ ಆ ಪದದ ಹುಟ್ಟೂರು. ಯಬಸ್ ಅಂದ್ರೆ ಬೇರೇನಲ್ಲ.. ಎಬ್ಬಿಸು ಅಥವಾ ನುಗ್ಗು ಎಂದರ್ಥ.

    ನಾವು ಅದನ್ನ ಆಟದಲ್ಲಿ ಬಳಸ್ತಾ ಇದ್ವಿ. ಲೆಟ್ಸ್ ಡು ಸಂಥಿಂಗ್, ಎದ್ದೇಳಿಸು.. ಸುಮ್ಮನೆ ಕೂರೋದು ಬೇಡ. ಏನಾದರೂ ಮಾಡೋಣ.. ಅನ್ನೋ ಅರ್ಥದಲ್ಲಿ ಈ ಪದದ ಬಳಕೆ ಇದೆ. ಈ ಪದದ ಸೃಷ್ಟಿಕರ್ತ ಯಾರೋ ನನಗೆ ಗೊತ್ತಿಲ್ಲ. ಉತ್ತರ ಕರ್ನಾಟಕದ ಕೆಲವು ಮಂದಿಗಾದರೂ ಈ ಪದ ಗೊತ್ತಿರುತ್ತೆ ಎಂದಿದ್ದಾರೆ ಭಟ್ಟರು.

    ಧಾರವಾಡದ ಪದಗಳ ಮಾಂತ್ರಿಕ ಶಕ್ತಿಯೇ ಅದು.

  • ಯುವಕರು V/s ಮುದುಕರ ಸಿನಿಮಾ ಪಂಚತಂತ್ರ

    youth vs old age generation in panchatantra

    ಯೋಗರಾಜ್ ಭಟ್ಟರ ಚಿತ್ರಗಳಲ್ಲಿ ಅದೇನೇ ಡೈಲಾಗುಗಳ ಸುರಿಮಳೆಯಾದರೂ, ಅಲ್ಲೊಂದು ಜೀವನ ಪ್ರೀತಿಯ ಸಂದೇಶ ಇದ್ದೇ ಇರುತ್ತೆ. ಮಣಿ ಚಿತ್ರದಿಂದಲೂ ಭಟ್ಟರನ್ನು ಭಟ್ಟರ ಸಿನಿಮಾಗಳನ್ನು ನೋಡುತ್ತಾ ಬಂದವರಿಗೆ ಅದು ಕಣ್ಣಿಗೆ ಬಿದ್ದಿರುತ್ತೆ. ತಾವು ಹೇಳಬೇಕಾದ್ದನ್ನು ವಿಡಂಬನೆ, ವ್ಯಂಗ್ಯ, ಹಾಸ್ಯ ಹಾಗೂ ಭಾವುಕತೆಯಲ್ಲಿ ಹೇಳುವುದು ಭಟ್ಟರ ಶೈಲಿ. ಭಟ್ಟರ ನಿರ್ದೇಶನದ ಹೊಸ ಸಿನಿಮಾ ಪಂಚತಂತ್ರ. ಈಗಾಗಲೇ ಶೇ.70ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರದಲ್ಲಿರುವುದು ಯುವಕರು ಮತ್ತು ಮುದುಕರ ನಡುವಿನ ಹೋರಾಟದ ಕಥೆ.

    ಕಥೆಯಲ್ಲಿ ಗ್ಯಾರೇಜ್ ಮತ್ತು ಒಂದು ಕಾಂಪ್ಲೆಕ್ಸ್ ಪ್ರಮುಖ ಪಾತ್ರ ವಹಿಸುತ್ತೆ. ಯುವಕನ ಪ್ರೇಮ, ಕಾಮ, ಜೋಷ್ ಹಾಲಿವುಡ್ ಶೈಲಿಯಲ್ಲಿದ್ದರೆ, ಮುದುಕರ ಜೀವನ ಹಳೆ ಅಂಬಾಸಿಡರ್ ಕಾರ್ ಥರ ಇರುತ್ತೆ. ಇವರಿಬ್ಬರ ನಡುವಿನ ಜನರೇಷನ್ ಗ್ಯಾಪ್‍ನ್ನು ತೆಳು ಹಾಸ್ಯದ ಮೂಲಕ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ ಭಟ್ಟರು.

    ಚಿತ್ರದ ಕಥೆಗೆ ಹೊಸಬರೇ ಬೇಕು ಎನಿಸಿತು. ಹೀಗಾಗಿ ವಿಹಾನ್ ಗೌಡ, ಅಕ್ಷರ ಗೌಡ, ಸೋನಾಲ್ ಮಾಂಥೆರೋ ಮೊದಲಾದವರಿದ್ದಾರೆ. ರಂಗಾಯಣ ರಘು, ಕರಿಸುಬ್ಬು ಮೊದಲಾದ ಸೀನಿಯರ್ಸ್ ಕೂಡಾ ಇದ್ದಾರೆ. ಯೋಗರಾಜ್ ಭಟ್ ಸಿನಿಮಾಸ್ ಬ್ಯಾನರ್‍ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹರಿಪ್ರಸಾದ್ ಜಯಣ್ಣ ಹಾಗೂ ಸನತ್ ಕುಮಾರ್ ಚಿತ್ರದ ನಿರ್ಮಾಪಕರು.

  • ಯೋಗರಾಜ್ ಭಟ್ ಅವರಿಂದ ಚುನಾವಣಾ ಗೀತೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ

    election song shot in bengaluru

    ಬೆಂಗಳೂರು, ಮಾರ್ಚ್ 30, 2018: ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಲಿದೆ. ಈ ಚುನಾವಣಾ ಗೀತೆ ಪಾರದರ್ಶಕ ಮತದಾನ ಉತ್ತೇಜಿಸಲಿದ್ದು ಹೆಚ್ಚು ಮತದಾರರನ್ನು ಸೆಳೆಯಲಿದೆ. ಈ ಗೀತೆಯನ್ನು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶಿಸುತ್ತಿದ್ದಾರೆ. ಯೋಗರಾಜ್ ಭಟ್ ತಮ್ಮ ಜನಪ್ರಿಯ ಗೀತರಚನೆಗೆ ಪ್ರಸಿದ್ಧರಾಗಿದ್ದು ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ. ಚುನಾವಣಾ ಗೀತೆಗೆ ಸಂಗೀತ ಸಂಯೋಜನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಮಾಡಲಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡದ ಗಾಯಕರು ಹಾಡಲಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದಾರೆ. 

    ಈ ಚುನಾವಣಾ ಗೀತೆಯನ್ನು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಿಸಲಾಗುತ್ತಿದೆ. ಶುಕ್ರವಾರ ಕಂಠೀರವ ಸ್ಟೇಡಿಯಂ ಮತ್ತು ವಿಧಾನಸೌಧಗಳಲ್ಲಿ ಚಿತ್ರೀಕರಿಸಲಾಯಿತು. ಕರ್ನಾಟಕದ ನೂರಾರು ಸಾಂಸ್ಕøತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. `ಈ ಚುನಾವಣಾ ಗೀತೆಯ ಎಲ್ಲ ಗೌರವ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಸಲ್ಲಬೇಕು. ಅವರು ಈ ಚುನಾವಣೆಗಳಿಗೆ ಚುನಾವಣಾ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿದರು. ನಾವು ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಈ ಚುನಾವಣಾ ಗೀತೆಯ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದೇವೆ' ಎಂದರು. 

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್, `ಈ ಚುನಾವಣಾ ಗೀತೆ ಆಯೋಗದ ಧ್ಯೇಯ- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳ ಅನುಸಾರ ಇದೆ. `ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ ಮತ್ತು ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ಗೀತೆಯನ್ನು ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ' ಎಂದರು. 

    ನಿರ್ದೇಶಕ ಯೋಗರಾಜ್ ಭಟ್ ಈ ಯೋಜನೆ ಕುರಿತು ಬಹಳ ಸಂತೋಷ ವ್ಯಕ್ತಪಡಿಸಿ, `ಈ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ. ಈ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗ್ರಹಿಸಲು ಸುಲಭ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವುದರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಚಿತ್ರಗೀತೆಗಳನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ' ಎಂದರು. 

  • ರಂಗಾಯಣ ರಘು ಶೃಂಗಾರದ ಹೊಂಗೆ ಮರದ ಕಥೆ

    rangayana raghu's sringaradha hongemara

    ಶೃಂಗಾರದ ಹೊಂಗೆ ಮರ.. ಹಾಡು ಚಿತ್ರಿತವಾಗಿರೋದು ವಿಹಾನ್ ಮತ್ತು ಸೋನಲ್ ಮೇಲೆ. ಶೃಂಗಾರದ ಹೊಂಗೆ ಮರ ಹಾಡಿನ ಮೋಡಿ, ಜೋಡಿ.. ಮೈನವಿರೇಳಿಸಿರುವುದು, ರೋಮಾಂಚನಗೊಳಿಸಿರುವುದು ನಿಮಗೆಲ್ಲ ಗೊತ್ತಿರುವ ಕಥೆ. ಆದರೆ, ಈ ಶೃಂಗಾರದ ಹೊಂಗೆ ಮರಕ್ಕೂ ರಂಗಾಯಣ ರಘುಗೂ ಏನ್ ಸಂಬಂಧ..? ಸಂಬಂಧ ಇದೆ.

    ಚಿತ್ರದಲ್ಲಿ ವೃದ್ಧನ ಪಾತ್ರದಲ್ಲಿ, ರೇಸ್ ಮಾಡೋಣ ಬಾ ಎಂದು ಚಾಲೆಂಜ್ ಹಾಕುವ ಪಾತ್ರದಲ್ಲಿ ನಟಿಸಿರುವ ರಘು, ಈ ಚಿತ್ರದಲ್ಲಿ ಒಂದು ಪೋಲಿ ಪುಸ್ತಕ ಬರೀತಿರ್ತಾರೆ. ಆ ಪೋಲಿ ಪುಸ್ತಕದ ಹೆಸರೇ.. ಶೃಂಗಾರದ ಹೊಂಗೆ ಮರ.

    ಆ ಶೃಂಗಾರದ ಹೊಂಗೆ ಮರದ ಪಂಚತಂತ್ರ ಥಿಯೇಟರಿಗೆ ಬರುತ್ತಿದೆ. ಭಟ್ಟರು ಮತ್ತೊಮ್ಮೆ ಹೊಸಬರೊಂದಿಗೆ ಕೈ ಜೋಡಿಸಿ, ಗೆಲ್ಲುವ ಉತ್ಸಾಹದಲ್ಲಿದ್ದಾರೆ. 

  • ರಾಕ್ ಲೈನ್ ಪ್ರೊಡಕ್ಷನ್ಸ್ #47ಗೆ ಮುಹೂರ್ತ

    ರಾಕ್ ಲೈನ್ ಪ್ರೊಡಕ್ಷನ್ಸ್ #47ಗೆ ಮುಹೂರ್ತ

    ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಹೊಸ ಸಿನಿಮಾ, 47ನೇ ಸಿನಿಮಾಗೆ ಮುಹೂರ್ತ ನೆರವೇರಿದೆ. ಈ ಚಿತ್ರದ ಹೈಲೈಟ್ ಶಿವಣ್ಣ ಮತ್ತು ಪ್ರಭುದೇವ ಒಟ್ಟಿಗೇ ನಟಿಸುತ್ತಿರುವುದು. ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರೋದು.

    ರಾಕ್`ಲೈನ್ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಮೊದಲ ಸೀನ್‍ಗೆ ಕ್ಲಾಪ್ ಮಾಡಿದ್ದು ಗೀತಾ ಶಿವರಾಜಕುಮಾರ್. ಕ್ಯಾಮೆರಾಗೆ ಚಾಲನೆ ಕೊಟ್ಟವರು ಪುಷ್ಪಕುಮಾರಿ ವೆಂಕಟೇಶ್.  

    ರಾಕ್‍ಲೈನ್ ಸಂಸ್ಥೆ ನಮ್ಮದೇ ಸಂಸ್ಥೆ. ನಮ್ಮ ಮನೆಯ ಸಂಸ್ಥೆ ಇದ್ದಂತೆ. ರಾಕ್`ಲೈನ್ ನನಗೆ ಸ್ನೇಹಿತರಾಗಿ ಬಂದರು. ನಂತರ ನಿರ್ಮಾಪಕರಾದರು. ಅವರ ಸಂಸ್ಥೆಯಲ್ಲಿ ನಟಿಸುತ್ತಿದ್ದೇನೆ. ಯೋಗರಾಜ್ ಭಟ್ ನಿರ್ದೇಶನ, ಪ್ರಭುದೇವ ಅವರ ಜೊತೆ ನಟಿಸುತ್ತಿರೋದು.. ಎಲ್ಲವೂ ಖುಷಿಯೇ ಎಂದವರು ಶಿವಣ್ಣ.

    ಹೆಚ್2ಒ ನಂತರ ನಾನು ಕನ್ನಡದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರೋ ಸಿನಿಮಾ ಇದು. ಶಿವಣ್ಣ ಜೊತೆ ಮೊದಲ ಬಾರಿಗೆ ಸಿನಿಮಾ ಮಾಡ್ತಿದ್ದೇನೆ. ಎಕ್ಸೈಟ್ ಆಗಿದ್ದೇನೆ ಎಂದವರು ಪ್ರಭುದೇವ.

    ಚಿತ್ರದ ಚಿತ್ರೀಕರಣ ಜುಲೈನಲ್ಲಿ ಶುರುವಾಗಲಿದೆ.

  • ರಾಜಕೀಯ ಹಿಂಸೆಗೆ ಕಂಗಾಲಾದ ಯೋಗರಾಜ್ ಭಟ್

    yogaraj bhat upset over his lyrics being misused

    ಯೋಗರಾಜ್ ಭಟ್ಟರು ಬಿಡುವಾಗಿಯೇನೂ ಇಲ್ಲ. ಪಂಚತಂತ್ರ ಚಿತ್ರದ ರಿಲೀಸ್‍ನಲ್ಲಿ ಬ್ಯುಸಿಯಾಗಿದ್ದಾರೆ. ಗಾಳಿಪಟ-2ಗೆ ರೆಡಿಯಾಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬೇರೆ ನಿರ್ದೇಶಕರ ಚಿತ್ರಗಳಿಗೆ ಹಾಡು, ಪುಟ್ಟ ಪುಟ್ಟ ಪಾತ್ರಗಳಲ್ಲಿ ಬಿಡುವಿಲ್ಲದ ಜೀವನ ಅವರದ್ದು. ಅಂತಹವರಿಗೂ ಈ ರಾಜಕೀಯ ಸುಮ್ಮನೆ ಬಿಟ್ಟಿಲ್ಲ. ಹಿಂಸೆ ಕೊಟ್ಟಿದೆ.

    ಎಲ್ಲರಿಗೂ ಗೊತ್ತಿರೋ ಹಾಗೆ ಭಟ್ಟರ ಮಾತಿನಲ್ಲಿ ಹಾಸ್ಯ, ವಿಡಂಬನೆ, ಸಣ್ಣದೊಂದು ಕೊಂಕು, ದೊಡ್ಡದೊಂದು ಸಂದೇಶ ಎಲ್ಲವೂ ಇರುತ್ತೆ. ಅಂತಹ ತಮಾಷೆ, ಗಾದೆಗಳನ್ನು ಸೃಷ್ಟಿಸೋದ್ರಲ್ಲಿ ಭಟ್ಟರ್ ಎಕ್ಸ್‍ಪರ್ಟ್. ಆದರೆ, ಆ ಪದ, ಸಾಲುಗಳನ್ನೇ ಕೆಲವು ರಾಜಕೀಯ ಪಕ್ಷಗಳು ತಮ್ಮದೆಂಬಂತೆ ಬಿಂಬಿಸುತ್ತಿವೆ. ಭಟ್ಟರಿಗೆ ಹಿಂಸೆಯಾಗಿರುವುದು ಇದೇ..

    ಹೀಗಾಗಿಯೇ ಭಟ್ಟರು ತಾವು ಯಾವುದೇ ಪಕ್ಷ, ಜಾತಿ, ಧರ್ಮ, ಎಡ, ಬಲಕ್ಕೆ ಸೇರಿದವನಲ್ಲ. ನನ್ನ ರಾಜಕೀಯ ನಿರ್ಲಿಪ್ತತೆಯನ್ನು ಕಾಪಾಡಿ ಎಂದು ಪ್ರಾರ್ಥಿಸಿದ್ದಾರೆ.

  • ವರ್ಷದ ಕೊನೆಯ ವಾರದ ರಿಲೀಸ್

    ವರ್ಷದ ಕೊನೆಯ ವಾರದ ರಿಲೀಸ್

    2022 ಅಂತಿಮ ಹಂತದಲ್ಲಿದೆ. ಈ ವಾರ ವರ್ಷದ ಕೊನೆಯ ವಾರ. ವರ್ಷದ ಮೊದಲ  ವಾರದ ಚಿತ್ರ ಹಾಗೂ ಕೊನೆಯ ವಾರದ ಚಿತ್ರ. ಈ ಎರಡರಲ್ಲೂ ಲೂಸ್ ಮಾದ ಯೋಗಿ ಇದ್ದಾರೆ. ಕಳೆದ ವರ್ಷದ ಕೊನೆಯ ಚಿತ್ರ ಹಾಗೂ ಈ ವರ್ಷದ ಕೊನೆಯ ಚಿತ್ರಗಳೆರಡರಲ್ಲೂ ಡಾಲಿ ಧನಂಜಯ ಇದ್ದಾರೆ. ಕೊನೆಯ ವಾರದ ಸಿನಿಮಾಗಳ ಪಟ್ಟಿಯಲ್ಲಿ ಯೋಗರಾಜ್ ಭಟ್, ಡಾಲಿ ಧನಂಜಯ, ಆದಿತಿ ಪ್ರಭುದೇವ, ಲೂಸ್ ಮಾದ ಯೋಗಿ ಇದ್ದಾರೆ.

    ಪದವಿ ಪೂರ್ವ : ಇದು ಯೋಗರಾಜ್ ಮೂವೀಸ್ ಸಿನಿಮಾ. ಪೃಥ್ವಿ ಶಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್ ನಟನೆಯ ಸಿನಿಮಾ. ಭಟ್ಟರ ಗರಡಿಯ ಹರಿಪ್ರಸಾದ್ ಜಯಣ್ಣ ಚಿತ್ರದ ಡೈರೆಕ್ಟರ್. ಹೊಸಬರ ಚಿತ್ರಕ್ಕೆ ಯೋಗರಾಜ್ ಭಟ್, ರವಿ ಶಾಮನೂರು ಬಂಡವಾಳ ಹಾಕಿದ್ದಾರೆ. ಚಿತ್ರದ ಟ್ರೇಲರ್ ಫ್ರೆಶ್ ಎನಿಸುವಂತಿದ್ದು, ಭರವಸೆ ಹುಟ್ಟಿಸಿದೆ.

    ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ : ಇದು ಡಾಲಿ ಧನಂಜಯ್, ಆದಿತಿ ಪ್ರಭುದೇವ ಸಿನಿಮಾ. ಡಾಲಿ ಮತ್ತು ಆದಿತಿ ಇಬ್ಬರಿಗೂ ಈ ವರ್ಷದ 6ನೇ ಸಿನಿಮಾ. ಈ ವರ್ಷ ಇವರಿಬ್ಬರ ಅತೀ ಹೆಚ್ಚು ಚಿತ್ರಗಳು ರಿಲೀಸ್ ಆಗಿವೆ.

    ನಾನು ಅದು ಮತ್ತು ಸರೋಜ : ಈ ವರ್ಷದ ಒಂಬತ್ತನೇ ದಿಕ್ಕು ಚಿತ್ರದ ಮೂಲಕ ಖಾತೆ ತೆರೆದಿದ್ದರು ಯೋಗಿ. ವರ್ಷದ ಕೊನೆಗೆ ನಾನು ಅದು ಮತ್ತು ಸರೋಜ ಮೂಲಕ ತೆರೆಗೆ ಬರುತ್ತಿದ್ದಾರೆ.

    ಮೇಡ್ ಇನ್ ಬೆಂಗಳೂರು : ಇದು ಹೊಸಬರ ಸಿನಿಮಾ. ಹಿರಿಯ ಕಲಾವಿದರಿದ್ದರೂ ಫ್ರೆಶ್ ಎನಿಸುವ ಕಥೆಯ ಮೂಲಕ ಗಮನ ಸೆಳೆಯುತ್ತಿದೆ. ಇವುಗಳಲ್ಲಿ ಅಚ್ಚುಕಟ್ಟಾದ ಪ್ರಚಾರವನ್ನೂ ಮಾಡಿರುವುದು ಪದವಿ ಪೂರ್ವ. ಒಂದು ಹಂತಕ್ಕೆ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಉಳಿದಂತೆ ನಾನು ಅದು ಮತ್ತು ಸರೋಜ ಮತ್ತು ಮೇಡ್ ಇನ್ ಬೆಂಗಳೂರು ಸೋಷಿಯಲ್ ಮೀಡಿಯಾ ಪ್ರಚಾರ ನಂಬಿಕೊಂಡು ತೆರೆಗೆ ಬರುತ್ತಿವೆ. ದ್ವಿಪಾತ್ರ, ಜೋರ್ಡನ್, ಅಲ್ಫಾ, ಲವ್ ಸ್ಟೋರಿ 1998, ರುಧೀರ ಕಣಿವೆ.. ಎಂಬ ಚಿತ್ರಗಳೂ ಸದ್ದೇ ಇಲ್ಲದೆ ತೆರೆಗೆ ಬರುತ್ತಿವೆ.

    ಇವೆಲ್ಲವುಗಳ ಮಧ್ಯೆ ಥಿಯೇಟರುಗಳಲ್ಲಿ ನಿರಾತಂಕವಾಗಿ.. ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವುದು ವೇದ. ಶಿವಣ್ಣ ಅವರ ಹಿಂದಿನ ಎಲ್ಲ ಚಿತ್ರಗಳ ಬಾಕ್ಸಾಫೀಸ್ ದಾಖಲೆಯನ್ನೂ ಪುಡಿ ಪುಡಿ ಮಾಡಿ ಭರ್ಜರಿ ಕಲೆಕ್ಷನ್ ಮಾಡಿದೆ.

  • ವಿಧಾನಸೌಧದ ಎದುರು ಭಟ್ಟರ ಮತಜಾಗೃತಿ ಶೂಟಿಂಗ್

    after a decade yogaraj bhatt shots in vidhana soudha

    2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಜವಾಬ್ದಾರಿ ನೀಡಿದೆ. ಅಂಥಾದ್ದೊಂದು ಹೊಣೆ ನನಗೆ ಸಿಕ್ಕಿರುವ ಅದೃಷ್ಟ ಎನ್ನುತ್ತಿರುವ ಯೋಗರಾಜ್ ಭಟ್, ಮತದಾನ ಜಾಗೃತಿಗಾಗಿ ವಿಶೇಷ ಗೀತೆಯೊಂದನ್ನು ಬರೆದು ಚಿತ್ರೀಕರಿಸುತ್ತಿದ್ದಾರೆ. 

    ಎಷ್ಟೋ ವರ್ಷಗಳ ಹಿಂದೆ ವಿಧಾನಸೌಧದ ಎದುರು ಯಾವುದೇ ಚಿತ್ರೀಕರಣವನ್ನು ನಿಷೇಧಿಸಲಾಗಿತ್ತು. ಸುದ್ದಿ ಮಾಧ್ಯಮಗಳಿಗೆ ಬಿಟ್ಟರೆ, ಬೇರ್ಯಾರಿಗೂ ವಿಶೇಷ ಚಿತ್ರೀಕರಣಕ್ಕೆ ಅವಕಾಶ ಇರಲಿಲ್ಲ. ಈಗ ಅಂತಾದ್ದೊಂದು ವಿಶೇಷ ಚಿತ್ರೀಕರಣಕ್ಕೆ ಭಟ್ಟರಿಗೆ ಅವಕಾಶ ಸಿಕ್ಕಿದೆ.

    ವಿಭಿನ್ನ ಪರಿಕಲ್ಪನೆಯ ಈ ಗೀತೆ, ಪ್ರತಿಯೊಬ್ಬರಿಗೂ ಮತದಾನ ಮಾಡಲೇಬೇಕೆಂಬ ಉತ್ಸಾಹ ನೀಡಲಿದೆ. ಮತದಾನದಿಂದ ದೂರವೇ ಉಳಿದಿರುವ ಸಮೂಹದಲ್ಲಿ ಶೇ.5ರಷ್ಟಾದರೂ ಜನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ, ನನ್ನ ಶ್ರಮ ಸಾರ್ಥಕ ಎಂದಿದ್ದಾರೆ ಯೋಗರಾಜ್ ಭಟ್.

    ಒಟ್ಟು 4 ನಿಮಿಷದ ಈ ಹಾಡಿಗೆ ಸಂಗೀತ ನೀಡಿರುವುದು ಹರಿಕೃಷ್ಣ. ಹಾಡಿರುವುದು ವಿಜಯಪ್ರಕಾಶ್. ನೃತ್ಯ ಸಂಯೋಜನೆ ಇಮ್ರಾನ್ ಸರ್ದಾರಿಯಾ ಅವರದ್ದು. ವಿಧಾನಸೌಧದಲ್ಲಷ್ಟೇ ಅಲ್ಲ, ರಾಜ್ಯದ 30 ಜಿಲ್ಲೆಗಳಲ್ಲೂ ಈ ಹಾಡಿಗೆ ಚಿತ್ರೀಕರಣ ನಡೆಯಲಿದೆ.

    ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ, ಆಯೋಗದ ಧ್ಯೇಯ ಹಾಗೂ ನೈತಿಕತೆ ಅನುಸಾರ ಇದೆ ಎಂದಿದ್ದಾರೆ.

    ಮತದಾನ ಜಾಗೃತಿಗಾಗಿ ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ಇಂಥಾದ್ದೊಂದು ವಿಶೇಷ ಗೀತೆ ಸಂಯೋಜಿಸುತ್ತಿರುವುದು ಚುನಾವಣಾ ಆಯೋಗದ ಹೆಗ್ಗಳಿಕೆ.

  • ಶಿವಣ್ಣ-ಯೋಗರಾಜ್ ಭಟ್-ಪ್ರಭುದೇವ ಕಾಂಬಿನೇಷನ್`ನಲ್ಲಿ ಸಿನಿಮಾ..!

    ಶಿವಣ್ಣ-ಯೋಗರಾಜ್ ಭಟ್-ಪ್ರಭುದೇವ ಕಾಂಬಿನೇಷನ್`ನಲ್ಲಿ ಸಿನಿಮಾ..!

    ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡಬೇಕು ಅನ್ನೋದು ಯೋಗರಾಜ್ ಭಟ್ ಅವರ ಕನಸು.  ಆ ಕನಸು ಈಗ ನನಸಾಗುತ್ತಿದೆ. ಶಿವಣ್ಣ ಜೊತೆ ಹೊಸ ಚಿತ್ರಕ್ಕೆ ಭಟ್ಟರು ರೆಡಿಯಾಗಿದ್ದಾರೆ. ಶಿವಣ್ಣ ಕೂಡಾ ಓಕೆ ಎಂದಿದ್ದಾರಂತೆ. ವಿಶೇಷವೆಂದರೆ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಕೂಡಾ ಆ ಚಿತ್ರದಲ್ಲಿ ನಟಿಸೋಕೆ ಓಕೆ ಎಂದಿರೋದು.

    ಶಿವಣ್ಣ ಮತ್ತು ಪ್ರಭುದೇವ ಇಬ್ಬರೂ ಇರುತ್ತಾರೆ ಎಂದರೆ ಅದು ಡ್ಯಾನ್ಸ್ ಕಾನ್ಸೆಪ್ಟ್ ಸಿನಿಮಾನೇ ಇರಬೇಕು ಎನ್ನುವುದು ನಿರೀಕ್ಷೆ. ಸದ್ಯಕ್ಕೆ ಇದು ನಿರೀಕ್ಷೆ ಮಾತ್ರ. ಅಧಿಕೃತ ಅಲ್ಲ.

    ಭಟ್ಟರು ಗಾಳಿಪಟ 2 ಪೋಸ್ಟ್ ಪ್ರೊಡಕ್ಷನ್ ಮತ್ತು ಗರಡಿ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ. ಅತ್ತ ಶಿವಣ್ಣ ವೇದ, ಬೈರಾಗಿ, ನೀ ಸಿಗೋವರೆಗೂ ಚಿತ್ರಗಳಲ್ಲಿ ಬ್ಯುಸಿ. ಅವರ ಲಿಸ್ಟು ಸಿಕ್ಕಾಪಟ್ಟೆ ದೊಡ್ಡದು.

    ಬಹುಶಃ ತ್ರಿಮೂರ್ತಿಗಳ ಕಾಂಬಿನೇಷನ್ ಸಿನಿಮಾ ಮೇ ಹೊತ್ತಿಗೆ ಸೆಟ್ಟೇರಬಹುದು.

  • ಶೃಂಗಾರದ ಹೊಂಗೆಮರ ನಾಳೆ ಹೂ ಬಿಡುತ್ತೆ..!

    panchantantra's first single song tomorrow

    ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ... ನಾಚಿಕೆಯು ನಮ್ಮ ಜೊತೆ ಠೂ ಬಿಟ್ಟಿದೆ.. ಯೋಗರಾಜ್ ಭಟ್ಟರ ಈ ಶೃಂಗಾರ ಕವಿತೆ ಹಾಡಾಗಿದೆ. ಕನಸಾಗಿದೆ. ಹದಿ ಹರೆಯದ ಮನಸ್ಸುಗಳಿಗೆ ಕಿಚ್ಚಿಟ್ಟಿದೆ. ಕನಸುಗಳು ಮೊಗ್ಗಾಗಿವೆ. ನಾಳೆ ಹೂ ಬಿಡಬೇಕು.

    ಪಂಚತಂತ್ರ ಚಿತ್ರದ ಈ ಹಾಡಿಗೆ ಧ್ವನಿಯಾಗಿರುವುದು ವಿಜಯ್ ಪ್ರಕಾಶ್. ಡಿ ಬೀಟ್ಸ್‍ನಲ್ಲಿ ನಾಳೆ ಹಾಡನ್ನು ಚಿತ್ರರಸಿಕರಿಗೆ ಕೇಳಿಸಲಿದ್ದಾರೆ ಭಟ್ಟರು. ಹಾಡು ಕೇಳಿದ ಮೇಲೆ ಪ್ರೇಮಿಗಳು ನಾಚಿಕೆ ಬಿಟ್ಟು ಹೂ ಬಿಡಿಸೋಕೆ ಹೋಗೋದು ಗ್ಯಾರಂಟಿ. ಕಿವಿಗೆ ಶೃಂಗಾರ ತುಂಬಿಕೊಳ್ಳೋಕೆ ಸಿದ್ಧರಾಗಿ.

  • ಸಾವಲ್ಲ.. ಇದು ಮರುಹುಟ್ಟು - ಭಟ್ಟರ ನುಡಿನಮನ

    yogaraj bhat writes on ambareesh

    ಯೋಗರಾಜ್ ಭಟ್. ರೆಬಲ್ಸ್ಟಾರ್ ಅಂಬರೀಷ್ ಇಮೇಜ್ ಬದಲಿಸಿದ ನಿರ್ದೇಶಕ. ಅಂಬಿ ಪೋಷಕ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದು ಹೆಚ್ಚಾಗಿ ಪುಟ್ಟಣ್ಣನವರ ಚಿತ್ರಗಳಲ್ಲಿ. ನಾಗರಹಾವು, ರಂಗನಾಯಕಿ, ಶುಭ ಮಂಗಳ, ಮಸಣದ ಹೂವು.. ಹೀಗೆ.. ಅವುಗಳನ್ನು ಬಿಟ್ಟರೆ, ಪೋಷಕ ಪಾತ್ರದಲ್ಲಿ ಅಂಬಿಗೆ ಅತೀ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಡ್ರಾಮಾ ಚಿತ್ರದ ಬೊಂಬೆ ಮಾಮನ ಪಾತ್ರ. 

    ಅಂಬರೀಷ್ಗೆ ಭಟ್ಟರು ಇಷ್ಟವಾಗೋಕೆ ಕಾರಣಗಳಿದ್ದವು. ಭಟ್ಟರದ್ದೂ ಕೂಡಾ ಹೆಚ್ಚೂ ಕಡಿಮೆ ಅಂಬಿಯ ಮನಸ್ಥಿತಿಯೇ. ಸಹಜವಾಗಿಯೇ ಭಟ್ಟರಿಗೆ ಅಂಬಿ ಇಷ್ಟವಾಗಿಬಿಟ್ಟಿದ್ದರು. ಅಂಬರೀಷ್ ಅವರನ್ನು ಕಳೆದುಕೊಂಡ ನೋವಿನಲ್ಲಿಯೇ ಅವರೊಂದು ನುಡಿ ನಮನ ಸಲ್ಲಿಸಿದ್ದಾರೆ. ಅಂಬಿ ಎಲ್ಲಿಯೂ ಹೋಗಿಲ್ಲ. ಅವರು ಮತ್ತೆ ಹುಟ್ಟಿದ್ದಾರೆ ಎಂದಿದ್ದಾರೆ ಭಟ್ಟರು.

    ತುಂಬಾ ಸಂತಸದ ಜೀವನ ಬಾಳಿದ ದೊಡ್ಡ ವ್ಯಕ್ತಿ ಹೋದಾಗ ಅದನ್ನ ಸಾವು ಅಂತ ಅನ್ನಬಾರದು… ಹುಟ್ಟು ಅನ್ನಬೇಕು… ಸಾವಲ್ಲ ಇದು ಅಂಬರೀಷ್ ಅಣ್ಣನ ಹುಟ್ಟು.

    ಅವರು ಎಲ್ಲೂ ಹೋಗಿಲ್ಲ, ಹೋಗೋದೂ ಇಲ್ಲ, ಸದಾಕಾಲ ನಮ್ಮೆಲ್ಲರ ಮನದಾಳದಲ್ಲಿ ಜೀವಂತವಾಗಿದ್ದಾರೆ, ಮುಂದೆಯೂ ಜೀವಂತವಾಗಿಯೇ ಇರುತ್ತಾರೆ…

    ನನ್ನ ಪ್ರಕಾರ ಈಗ ಅವರು ಸಾವಿಗೆ ಬಯ್ಯುತ್ತಾ ಕೂತಿದ್ದಾರೆ. “ನನ್ಮಗ್ನೆ ಮಾಡಕ್ ಕೆಲ್ಸ ಇಲ್ಲ ನಿಂಗೆ” ಅಂತ ಸಾವನ್ನು ಮುದ್ದಾಗಿ ಗದರಿಸುವ ತಾಕತ್ತು ಅವರೊಬ್ಬರಿಗೇ ಇರೋದು…

    ಯಾರನ್ನೂ ಬಿಡದ ಸಾವಿಗೆ ಅಂಬರೀಷಣ್ಣನ ದೋಸ್ತಿ ಮಾಡೋ ಅಸೆ ಯಾಕಾದ್ರೂ ಬಂತೋ 

    “ಬೊಂಬೆ ಆಡ್ಸೋನು” ಡ್ರಾಮ ಟೈಮ್ ಅವರ ಜೊತೆ ಇದ್ದ ನೆನಪು 

    ಮೊನ್ನೆ ಅವರಿಗೆ ನಾನು ಮತ್ತು ರಾಕ್ಲೈನ್ ವೆಂಕಟೇಶ್ ಹೆಡ್ ಮಸಾಜ್ ಮಾಡಿದ ನೆನಪು 

    ಅವರ ಕನಸಲ್ಲಿ ನಾನು ಹೋಗಿದ್ದಕ್ಕೆ ಅವರು ಕರೆದು ಬೈದ ನೆನಪು

    ಯಶ್ ರಾಧಿಕ ಸೀಮಂತದಲ್ಲಿ ಅವರು ಜೋಕ್ ಮಾಡುತ್ತಾ ಕೂತಿದ್ದ ನೆನಪು 

    ಜೊತೆಗೆ ಅಸಂಖ್ಯ ನೆನಪಿನ ಚಿತ್ರಗಳು

    ನೋ ವೇ… ಚಾನ್ಸೇ ಇಲ್ಲ… ಅವ್ರು ಹೋಗಿಲ್ಲ

    ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ

    ನಮನ.. ನಮನ.. ನಮನ..

    ಯೋಗರಾಜ್ ಭಟ್

  • ಹಂಸಲೇಖ ಹೇಳಿದ ಕರಿ ಕಾರ್ನಾಡ್ ಯಾರು..?

    hamsalekha's title to yogaraj bhat

    ತುಂಬ ವರ್ಷಗಳ ಹಿಂದೆಯೇ ಹಂಸಲೇಖ ಅವರಿಗೊಂದು ಹೆಸರಿಟ್ಟಿದ್ದರು. ಕೆಕೆ ಎಂದು ಕರೆಯುತ್ತಿದ್ದರು. ಏಕೆಂದರೆ, ಅವರನ್ನು ನೋಡಿದಾಗಲೆಲ್ಲ ಹಂಸಲೇಖ ಅವರಿಗೆ ಗಿರೀಶ್ ಕಾರ್ನಾಡ್ ನೆನಪಾಗುತ್ತಿತ್ತು. ಆದರೆ, ಇವರು ಅವರಷ್ಟು ಕಲರ್ ಇಲ್ಲ. ಸ್ವಲ್ಪ ಕಪ್ಪು. ಹೀಗಾಗಿಯೇ ಕೆಕೆ ಎಂದು ಹೆಸರಿಟ್ಟಿದ್ದರು ಹಂಸಲೇಖ. ಅಂದಹಾಗೆ ಹಂಸಲೇಖ ಹಾಗೆ ಕೆಕೆ ಎಂದು ನಾಮಕರಣ ಮಾಡಿದ್ದು ಯಾರಿಗೆ ಅಂದುಕೊಂಡಿದ್ದೀರಿ.. ಯೋಗರಾಜ್ ಭಟ್ಟರಿಗೆ. ಕೆಕೆ ಎಂದರೆ ಕರಿ ಕಾರ್ನಾಡ್ ಎಂದರ್ಥ.. ಅಷ್ಟೆ.

    ಭಟ್ಟರ ಪಂಚರಂಗಿ ಆಡಿಯೋ ಕಂಪೆನಿ ಉದ್ಘಾಟನೆ ವೇಳೆ ಈ ಮಾತು ಹೇಳಿಕೊಂಡ ಹಂಸಲೇಖ, ತಮ್ಮ ಹಾಗೂ ಭಟ್ಟರ ನಡುವಿನ ಸಾಮ್ಯತೆಯನ್ನು ಹೇಳಿಕೊಂಡರು.  ಚಿ.ಉದಯಶಂಕರ್ ಬರೆದದ್ದನ್ನೇ ನಾನು ಬರೆಯಬಾರದು, ಹೊಸದೇನನ್ನಾದರೂ ಬರೆಯಬೇಕು ಎಂಬ ಹಠಕ್ಕೆ ಬಿದ್ದು ನಾನು ಬರೆದೆ. ಹಂಸಲೇಖ ಬರೆದಿದ್ದನ್ನು ನಾನು  ಬರೆಯಬಾರದು ಎಂದು ಹಠ ತೊಟ್ಟವರಂತೆ ಯೋಗರಾಜ್ ಭಟ್ ಬರೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ ಹಂಸಲೇಖ.

  • ಹಂಸಲೇಖಾಗೆ ಭಟ್ಟರಿಂದ ಹಾರ್ಮೋನಿಯಂ ಕಾಣಿಕೆ

    yogaraj bhatt starts new venture with hamsalekha

    ಯೋಗರಾಜ್ ಭಟ್ಟರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪಂಚರಂಗಿ ಅನ್ನೋ ಸಿನಿಮಾ ನಿರ್ದೇಶಿಸುತ್ತಿರುವ ಯೋಗರಾಜ್ ಭಟ್, ಈಗ ಅದೇ ಹೆಸರಿನಲ್ಲಿ ಆಡಿಯೋ ಕಂಪೆನಿ ಹುಟ್ಟುಹಾಕಿದ್ದಾರೆ. ಆ ಕಂಪೆನಿ ಉದ್ಘಾಟಿಸಿದ್ದು ನಾದಬ್ರಹ್ಮ ಹಂಸಲೇಖ ಅನ್ನೋದು ವಿಶೇಷ. ಹಾಗೆ ತಮ್ಮ ಆಡಿಯೋ ಕಂಪೆನಿ ಉದ್ಘಾಟಿಸಿದ ಸಂಗೀತ ಸಾಮ್ರಾಟನಿಗೆ ಯೋಗರಾಜ್ ಭಟ್ ಕೊಟ್ಟ ಉಡುಗೊರೆ ಹಾರ್ಮೋನಿಯಂ.

    ಕಂಪೆನಿಯಿಂದ ಮೊದಲನೆಯದಾಗಿ ಬಿಡುಗಡೆಯಾದ ಆಡಿಯೋ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಮೂಲಕ ಭಟ್ಟರು ಹೊಸ ಸಾಹಸ ಆರಂಭಿಸಿಬಿಟ್ಟಿದ್ದಾರೆ. ಶುಭವಾಗಲಿ.