` kari haida kari ajja, - chitraloka.com | Kannada Movie News, Reviews | Image

kari haida kari ajja,

  • ಕರಿಹೈದ ಕರಿಯಜ್ಜ : ಇದು ಗುಳಿಗನ ಕಥೆ

    ಕರಿಹೈದ ಕರಿಯಜ್ಜ : ಇದು ಗುಳಿಗನ ಕಥೆ

    ಕರಿಹೈದ ಕರಿಯಜ್ಜ. ಇದು ದೈವ ಮತ್ತು ಗುಳಿಗದ ಕಥೆ. ಕಾಂತಾರದ ನಂತರ ಈ ರೀತಿಯ ಚಿತ್ರಗಳು ಕುತೂಹಲ ಮೂಡಿಸುತ್ತಿವೆ. ಆದರೆ ಇದು ಕಾಂತಾರದ ಯಶಸ್ಸಿನಿಂದ ಪ್ರೇರಣೆಗೊಂಡು ಶುರುವಾದ ಸಿನಿಮಾ ಅಲ್ಲ. ಆದರೆ ಕಾಕತಾಳೀಯವೆಂಬಂತೆ ಈ ಚಿತ್ರ ಶುರುವಾಗುವುದಕ್ಕೂ ಕಾಂತಾರ ಹಿಟ್ ಆಗುವುದಕ್ಕೂ ಸಮಯ ಸರಿಹೋಯ್ತು. ಚಿತ್ರವನ್ನು ಅದ್ಧೂರಿಯಾಗಿಯೇ ತೆರೆಗೆ ತಂದಿರುವ ಚಿತ್ರತಂಡ ಈಗ ಚಿತ್ರೀಕರಣವನ್ನೂ ಪೂರೈಸಿದೆ.

    ಬಾಲಿವುಡ್ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅವರಿಗಂತೂ ಕರಿಹೈದ ಕರಿಯಜ್ಜ ವಿಶೇಷ ಅನುಭವವನ್ನೇ ಕೊಟ್ಟಿದೆ. ಕೆಲವು ಅನುಭವಗಳನ್ನು ಬಾಯಿ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ. ಚಿತ್ರದಲ್ಲಿ ನನ್ನದು ಗುಳಿಗ ದೈವದ ಪಾತ್ರ. ಈ ಪಾತ್ರದ ಚಿತ್ರೀಕರಣವೇ ಒಂದು ಅತಿಮಾನುಷ ಅನುಭವ. ಭೂತದ ಗಗ್ಗರ ಹಿಡಿದು ಅಭಿನಯಿಸುವಾಗ ವಿಚಿತ್ರ ಅನುಭವವಾಯಿತು. ನಿರ್ದೇಶಕರು  ಕಟ್ ಹೇಳಿದ ತಕ್ಷಣ ಕುಸಿಯತೊಡಗಿದೆ ಎನ್ನುತ್ತಾರೆ ಸಂದೀಪ್.

    ಸುಧೀರ್ ಅತ್ತಾವರ್ ನಿರ್ದೇಶಿಸಿರುವ ಸಿನಿಮಾ ಇದು. ಶೂಟಿಂಗ್ ಮುಗಿದ ಮರುದಿನವೇ ಕೋಲ ನಡೆಸಲು ಅವಕಾಶ ಸಿಕ್ಕಿತು. ಅದೂ ಒಂದು ಪವಾಡವೇ. ಚಿತ್ರೀಕರಣದ ವೇಳೆ ಸ್ಫೂರ್ತಿಗೊಳ್ಳಬಾರದು, ಪ್ರೇರಣೆಗೊಳ್ಳಬಾರದು ಎಂಬ ಉದ್ದೇಶದಿಂದಲೇ ಸುಧೀರ್, ಕಾಂತಾರ ನೋಡಿಲ್ಲವಂತೆ. ಕೊರಗ ಜನಾಂಗದವರೇ ಹೇಳಿದ ಕಥೆಯಿಂದ ಸಿನಿಮಾ ಮಾಡಲಾಗಿದೆ. ಅನುಮತಿಯನ್ನೂ ಪಡೆಯಲಾಗಿದೆ ಎನ್ನುತ್ತಾರೆ ಸುಧೀರ್. ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಚಿತ್ರೀಕರಣವನ್ನು ಅದ್ಧೂರಿಯಾಗಿಯೇ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಭವ್ಯಾ, ಶೃತಿ ಕೂಡಾ ನಟಿಸಿದ್ದಾರೆ.

  • ಕೊರಗಜ್ಜನ ಚಿತ್ರಕ್ಕೆ ಅಡ್ಡಿಗಳ ಸರಮಾಲೆ : ಗುಳಿಗ ದೈವಕ್ಕೆ ಗುಡಿ ಕಟ್ಟಿದ ಚಿತ್ರತಂಡ

    ಕೊರಗಜ್ಜನ ಚಿತ್ರಕ್ಕೆ ಅಡ್ಡಿಗಳ ಸರಮಾಲೆ : ಗುಳಿಗ ದೈವಕ್ಕೆ ಗುಡಿ ಕಟ್ಟಿದ ಚಿತ್ರತಂಡ

    ಒಂದು ಸಿನಿಮಾ ಶುರುವಾಗುವುದು, ಅಡ್ಡಿ ಆತಂಕಗಳು ಎದುರಾಗುವುದು ಹೊಸದೇನಲ್ಲ. ಆದರೆ ಕರಿಹೈದ ಕೊರಗಜ್ಜ ಚಿತ್ರಕ್ಕೆ ಅಡ್ಡಿಗಳ ಸರಮಾಲೆಯೇ ಎದುರಾಗಿದೆಯಂತೆ. ಸಿನಿಮಾದ ಚಿತ್ರೀಕರಣಕ್ಕೆ ಹಲವು ಬಗೆಯ ಅಡೆ-ತಡೆಗಳಾದ್ದರಿಂದ ಚಿತ್ರತಂಡವು ಗುಳಿಗನ ಮೊರೆ ಹೋಗಿದೆ. ಗುಳಿಗ ದೈವಕ್ಕೆ ಗುಡಿಯನ್ನೇ ಕಟ್ಟಿ ಹರಕೆ ತೀರಿಸಿದೆ.

    ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ವಿರ್ಮಾಣದ ವೇಳೆ. ಸೆಟ್ ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳಿಯರು ಅರಶಿನ ನೀರನ್ನು ಪ್ರೋಕ್ಷಿಸಿ , ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಮುಂದೆ ಬರಲಿಲ್ಲ. ಸೆಟ್ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ “ಗುಳಿಗ”ನ ಸ್ಥಳ ವೆಂದು ಸ್ಥಳಿಯರು ತಿಳಿಸಿದರು. ದೈವದ ಮೇಲಿನ ಗೌರವ-ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸೆಟ್ ಕೆಲಸವನ್ನು ಸ್ಥಳಾಂತರ ಗೊಳಿಸಲಾಯಿತು ಎನ್ನುವುದು ಚಿತ್ರತಂಡದ ಮಾತು.

    ಗುಳಿಗ ದೈವದ ಪಾತ್ರವನ್ನು ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾದವಂತೆ. ಹಿರಿಯರಲ್ಲಿ ವಿಚಾರಿಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ರವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು , ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿಲ್ಲ. ಪಾಳು ಬಿದ್ದಕಾರಣ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದಿರುವ ವಿಚಾರ ಬೆಳಕಿಗೆ ಬಂತು. ಹೀಗಾಗಿ

    ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದ್ದಾರೆ.

    ಹಿರಿಯ ನಟಿ ಭವ್ಯ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರುಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತು. ಕೊರಗಜ್ಜ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.