` oscar, - chitraloka.com | Kannada Movie News, Reviews | Image

oscar,

  • ಆಸ್ಕರ್ ಅರ್ಹತಾ ಸುತ್ತಿಗೆ 2 ಕನ್ನಡ ಸಿನಿಮಾ : ಕಿರೀಟ ಸಿಗೋ ಚಾನ್ಸ್ ಇದೆಯಾ?

    ಆಸ್ಕರ್ ಅರ್ಹತಾ ಸುತ್ತಿಗೆ 2 ಕನ್ನಡ ಸಿನಿಮಾ : ಕಿರೀಟ ಸಿಗೋ ಚಾನ್ಸ್ ಇದೆಯಾ?

    ಈ ಬಾರಿಯ ಆಸ್ಕರ್‍ನಲ್ಲಿ ಕನ್ನಡ ಚಿತ್ರಗಳ ಹೊಳಪು ಜೋರಾಗಿದೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಮೊದಲ ಸುತ್ತಿನ ಅರ್ಹತೆ ದಾಟಿದ್ದು 301 ಚಿತ್ರಗಳ ಲಿಸ್ಟ್ ಸೇರಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಹಾಗೂ ನಟ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ತಲುಪಿದೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡಾ ನಟನೆ ವಿಭಾಗದಲ್ಲಿಯೇ ಅರ್ಹತೆ ಗಿಟ್ಟಿಸಿದೆ.

    ರಾಜಮೌಳಿ ಅವರ ಆರ್.ಆರ್.ಆರ್. , ಅಲಿಯಾ ಭಟ್ ಅಭಿನಯದ ಗಂಗೂಬಾಯಿ ಕಟವಾಡಿ ಚಿತ್ರಗಳೂ ಅರ್ಹತೆಯ ಸುತ್ತು ದಾಟಿವೆ. ಹಿಂದಿಯಲ್ಲಿ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್, ಮಾಧವನ್ ನಟನೆಯ ವಿಜ್ಞಾನಿ ನಂಬಿಯಾರ್ ಬಯೋಪಿಕ್ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಕೂಡಾ ಆಯ್ಕೆಯಾಗಿವೆ. ತಮಿಳಿನ ಇರವಿನ್ ನಿಜಳ್, ಮಿ.ವಸಂತ ರಾವ್, ದಿ ಕನೆಕ್ಟ್ ಮಾರ್ನಿಂಗ್, ತುಝ್ಕಾ ಸಾಥಿ ಕೀ ನಹೀ ಚಿತ್ರಗಳೂ ಅರ್ಹತಾ ಸುತ್ತು ಪ್ರವೇಶಿಸಿವೆ. ಭಾರತೀಯ ಚಿತ್ರರಂಗದ ಅಧಿಕೃತ ಎಂಟ್ರಿಯಾಗಿರುವ ಗುಜರಾತಿ ಭಾಷೆಯ ಚಲ್ಲೋ ಶೋ ಚಿತ್ರ ಕೂಡಾ ಅರ್ಹತಾ ಸುತ್ತಿಗೆ ತಲುಪಿದೆ. ಒಟ್ಟಾರೆ 11 ಸಿನಿಮಾಗಳೂ ಸೇರಿದಂತೆ 15 ಭಾರತೀಯ ಚಿತ್ರ ಹಾಗೂ ಡಾಕ್ಯುಮೆಂಟರಿಗಳು ಪ್ರಶಸ್ತಿ ಸುತ್ತಿನ ಮೊದಲ ಅರ್ಹತೆ ಪಡೆದಿವೆ. ಒಟ್ಟಾರೆ 301 ಚಿತ್ರಗಳು. ಜನವರಿ 24ರಂದು ಶಾರ್ಟ್ ಲಿಸ್ಟ್ ಚಿತ್ರಗಳು ಅನೌನ್ಸ್ ಆಗಲಿವೆ.

  • ಆಸ್ಕರ್ ಆನೆ ನೋಡೋಕೆ ಬಂದವರು ಆಕೆಯನ್ನು ಮಾತ್ರ ಮಿಸ್ ಮಾಡಲ್ಲ..

    ಆಸ್ಕರ್ ಆನೆ ನೋಡೋಕೆ ಬಂದವರು ಆಕೆಯನ್ನು ಮಾತ್ರ ಮಿಸ್ ಮಾಡಲ್ಲ..

    ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆ ಇದು. ಬೊಮ್ಮನ್ ಮತ್ತು ಬೆಳ್ಳಿ ಎಂಬ ದಂಪತಿಯ ಆರೈಕೆಯಲ್ಲಿ ಬೆಳೆದ ರಘು ಎಂಬ ಅನಾಥ ಆನೆಯ ಕಥೆಯೇ ಎಲಿಫಂಟರ್ ವಿಸ್ಪರರ್ಸ್. ಈ ಕಥೆಯ ನಿರ್ದೇಶನ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮೂಲತಃ ತಮಿಳುನಾಡಿನ ಊಟಿಯವರು. ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆಗಿರುವ ಕಾರ್ತಿಕಿ, ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಈ ಹಿಂದೆ ಕ್ಯಾಮೆರಾ ಅಪರೇಟರ್ ಆಗಿ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್ಗಳಿಗೆ ಕಾರ್ತಿಕಿ ಕೆಲಸ ಮಾಡಿದ್ದಾರೆ. ಇದೀಗ 41 ನಿಮಿಷಗಳ ‘ದಿ ಎಲಿಫೆಂಟ್ ವಿಸ್ಪರರ್ಸ್’ ಮೂಲಕ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

    ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್' ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್  ನಿರ್ದೇಶನ ಮಾಡಿದ್ದಾರೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಗಿದೆ. ಈ ಸಾಕ್ಷ್ಯಚಿತ್ರವು ಆನೆ ಮತ್ತು ಆ ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಮಾತ್ರವಲ್ಲದೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ವರ್ಣಿಸುವ ಕಥೆ.

    ಈ ಸಾಕ್ಷ್ಯಚಿತ್ರ ಆಸ್ಕರ್ ಗೆದ್ದ ಸಂಭ್ರಮದಲ್ಲಿಯೇ ಮಾತನಾಡಿರುವ ಬೆಳ್ಳಿ, ಆನೆ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಕಷ್ಟಪಡಬೇಕು. ಆದರೆ ಆನೆಯ ಪ್ರೀತಿಯ ಮುಂದೆ ನನ್ನ ಕಷ್ಟ ಏನೂ ಅಲ್ಲ. ನನಗೆ ಆನೆಯ ಪ್ರೀತಿಯೇ ಮಿಗಿಲು.ಈಗ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಬಂದು ಮಾತನಾಡಿಸುತ್ತಾರೆ. ನಿಮ್ಮ ಚಿತ್ರ ನೋಡಿದ್ದೇವೆ ಎನ್ನುತ್ತಿದ್ದಾರೆ. ಬಹುತೇಕರು ಆನೆಯ ಫೋಟೋ ತೆಗೆಯುವ ಬದಲು ನನ್ನ ಜೊತೆ ನಿಂತು ಫೋಟೋ ತೆಗೆಯುತ್ತಿದ್ದಾರೆ. ಇದೀಗ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿರುವುದು ಅತೀವ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ ಬೆಳ್ಳಿ.

  • ಕೀರವಾಣಿಗೆ ಆಸ್ಕರ್ ಗ್ರೇಟ್ ಎನಿಸಿದ್ದು ರಾಮೋಜಿರಾವ್ ಕೇಳಿದಾಗಲಂತೆ..!

    ಕೀರವಾಣಿಗೆ ಆಸ್ಕರ್ ಗ್ರೇಟ್ ಎನಿಸಿದ್ದು ರಾಮೋಜಿರಾವ್ ಕೇಳಿದಾಗಲಂತೆ..!

    ಎಂ.ಎಂ.ಕೀರವಾಣಿ. ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.. ಆರ್.ಆರ್.ಆರ್. ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಗೆದ್ದ ಕೀರವಾಣಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆದರೆ ಕೀರವಾಣಿ ಅವರಿಗೆ ಆಸ್ಕರ್ ಎಂಬುದು ಅಷ್ಟೊಂದು ಮಹತ್ವದ್ದಲ್ಲ ಎನಿಸಿತ್ತಂತೆ. ಎಲ್ಲ ಪ್ರಶಸ್ತಿಗಳಂತೆಯೇ ಅದೂ ಒಂದು ಪ್ರಶಸ್ತಿ ಎಂಬ ಭಾವನೆ ಇತ್ತು. ಆಸ್ಕರ್`ನ ಮಹತ್ವದ ಬಗ್ಗೆ ಗೊತ್ತಿತ್ತು. ತೀರ ಆಸಕ್ತಿ ಇರಲಿಲ್ಲ ಎಂದಿರುವ ಕೀರವಾಣಿ

    ಆಸ್ಕರ್ ಗೆದ್ದಿದ್ದೇವೆ. ನಾನು ಮತ್ತು ಗಾಯಕ ಚಂದ್ರಭೋಸ್ ಉತ್ಸವ ಮೂರ್ತಿಗಳು. ಆದರೆ ಮೂಲ ದೇವರು ರಾಜಮೌಳಿ ಮತ್ತು ಪ್ರೇಮ್ ರಕ್ಷಿತ್ ಎಂದಿದ್ದಾರೆ. ನನ್ನ ಪತ್ನಿಗೆ ರಾಮೋಜಿರಾವ್ ಅವರೆಂದರೆ ತುಂಬಾ ಗೌರವ. ಅಭಿಮಾನ. ಆಸ್ಕರ್`ಗೆ ಹೊರಡುವ ಮುನ್ನ ರಾಮೋಜಿರಾವ್ ಅವರನ್ನು ಭೇಟಿ ಮಾಡಲು ಹೋದೆವು. ಅಸ್ಕರ್‍ನ್ನು ಮನೆಗೆ ತಂದು ತೋರಿಸು ಎಂದರು ರಾಮೋಜಿರಾವ್. ಅಂತಹ ರಾಮೋಜಿರಾವ್ ಆಸ್ಕರ್‍ಗೆ ಮಹತ್ವ ನೀಡುತ್ತಿದ್ದಾರೆಂದರೆ ಅದು ನಿಜವಾಗಿಯೂ ಶ್ರೇಷ್ಟ ಪ್ರಶಸ್ತಿಯೇ ಇರಬೇಕು ಎಂದು ಭಾವಿಸಿದೆ. ನಂತರ ರಾಮೋಜಿರಾವ್ ಅವರಿಗಾಗಿಯಾದರೂ ಆಸ್ಕರ್ ಬರಬೇಕು ಎಂದುಕೊಂಡೆ ಎಂದು ಹೇಳಿದ್ದಾರೆ ಕೀರವಾಣಿ.

    ಅಂದಹಾಗೆ ರಾಮೋಜಿರಾವ್ ಅವರ ತೆಲುಗು ಚಿತ್ರರಂಗ, ಉದ್ಯಮಿಗಳು ಹಾಗೂ ಪತ್ರಕರ್ತರ ವಲಯದಲ್ಲಿ ದೊಡ್ಡ ಹೆಸರು. ಈಟಿವಿ ಎಂಬ ಬೃಹತ್ ಸಂಸ್ಥೆಯನ್ನು ಹುಟ್ಟು ಹಾಕಿ ಯಶಸ್ವಿಗೊಳಿಸಿದ ರಾಮೋಜಿರಾವ್ ಪತ್ರಿಕೋದ್ಯಮಿಯೂ ಹೌದು. ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕರೂ ಹೌದು. ಹೊಸ ಪ್ರತಿಭೆಗಳನ್ನು ಹುಡುಕಿ ತೆಗೆಯುವುದರಲ್ಲಿ ನಿಸ್ಸೀಮರು.