` naresh babu, - chitraloka.com | Kannada Movie News, Reviews | Image

naresh babu,

  • ಪವಿತ್ರ ಲೋಕೇಶ್ ಮದುವೆಗೆ ಅವಕಾಶ ಕೊಡಲ್ಲ : ರಮ್ಯಾ

    ಪವಿತ್ರ ಲೋಕೇಶ್ ಮದುವೆಗೆ ಅವಕಾಶ ಕೊಡಲ್ಲ : ರಮ್ಯಾ

    ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಇಬ್ಬರೂ ಈ ವರ್ಷದ ಆರಂಭಕ್ಕೆ ಪರಸ್ಪರ ಮುತ್ತು ಕೊಟ್ಟು ಹೊಸ ಜೀವನ ಆರಂಭ ಮಾಡುತ್ತಿದ್ದೇವೆ ಎಂಬ ಸುಳಿವು ಕೊಟ್ಟಿದ್ದರು. ಪವಿತ್ರಾ ಮತ್ತು ನರೇಶ್ ನಡುವಿನ ಬಾಂಧವ್ಯ ಬೀದಿಗೆ ಬಂದಿದ್ದು ಕಳೆದ ವರ್ಷದ ಜುಲೈನಲ್ಲ. ಮೈಸೂರಿನ ಹೋಟೆಲ್ಲೊಂದರಲ್ಲಿ ವಾಸ್ತವ್ಯ ಹೂಡಿದ್ದ ಪವಿತ್ರಾ ಮತ್ತು ನರೇಶ್ ಅವರನ್ನು ಮೀಡಿಯಾಗಳ ಮುಂದೆ ಬೆತ್ತಲು ಮಾಡಿದ್ದರು ನರೇಶ್ ಅವರ ಪತಿ ರಮ್ಯಾ. ಇಬ್ಬರ ಮಧ್ಯೆ ಅನೈತಿಕ ಸಂಬಂಧವಿದೆ. ನಮ್ಮ ಸಂಸಾರಕ್ಕೆ ಪವಿತ್ರ ಹುಳಿ ಹಿಂಡಿದ್ದಾರೆ ಎಂದು ಕೆಂಡ ಕಾರಿದ್ದರು ರಮ್ಯಾ. ನರೇಶ್ ಅವರ ಅಧಿಕೃತ ಪತ್ನಿಯ ಆರೋಪಕ್ಕೆ ಪವಿತ್ರ ಲೋಕೇಶ್ ಕೊಟ್ಟಿದ್ದ ಉತ್ತರವೇ ಬೇರೆ. ಹೌದು ಎಂದು ಕೂಡಾ ಹೇಳಿರಲಿಲ್ಲ. ಸಂಬಂಧ ಇಲ್ಲವೇ ಇಲ್ಲ ಎಂದು ನಿರಾಕರಿಸಿರಲೂ ಇಲ್ಲ. ಈಗ ಮುತ್ತಿನ ಪ್ರಕರಣ ಮತ್ತೊಮ್ಮೆ ಹಳೆದ ವಿವಾದ ನೆನಪಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ನರೇಶ್ ಪತ್ನಿ ರಮ್ಯಾ..

    2022ರ ಏಪ್ರಿಲ್‍ನಲ್ಲಿ ನರೇಶ್ ಡೈವೋರ್ಸ್‍ಗೆ ಅರ್ಜಿ ಹಾಕಿಕೊಂಡಿದ್ದರು. ನನ್ನ ಗಮನಕ್ಕೇ ತಾರದೆ ಅದನ್ನು ಎಕ್ಸ್-ಪರೇಟ್ ಮೂಲಕ ಗೆಲ್ಲುವ ಸಂಚು ಹೂಡಿದ್ದರು. (ಎಕ್ಸ್-ಪರೇಟ್ ಎಂದರೆ ಕೋರ್ಟಿನಲ್ಲಿ ಪ್ರತಿವಾದಿಯ ಗಮನಕ್ಕೆ ಬಾರದಂತೆ ಕೇಸು ತಮ್ಮ ಪರ ಆಗುವಂತೆ ಮಾಡಿಕೊಳ್ಳುವುದು. ಹಾಗೆಂದು ಇದು ಕೋರ್ಟ್ ಮಾಡುವ ಪ್ರಕ್ರಿಯೆ ಅಲ್ಲ. ಪ್ರತಿವಾದಿಯ ಗಮನಕ್ಕೆ ಕೋರ್ಟ್ ಆಚರಣೆಗಳು, ನೋಟಿಸುಗಳೂ ಸೇರಿದಂತೆ ಯಾವುದೂ ತಿಳಿಯದಂತೆ ನೋಡಿಕೊಳ್ಳುವುದು. ಒಮ್ಮೆ ಆದೇಶ ಬಂದ ಮೇಲೆ ಪ್ರತಿವಾದಿ ಮೇಲ್ಮನವಿ ಅರ್ಜಿ ಹಾಕಿಕೊಳ್ಳಬಹುದೇ ಹೊರತು, ಹಳೆಯ ಆದೇಶ ಅನೂರ್ಜಿತವಾಗುವುದಿಲ್ಲ.) ಹೇಗೋ ಅದೃಷ್ಟವಶಾತ್ ಅದು ನನ್ನ ಗಮನಕ್ಕೆ ಬಂತು. ಈ ವರ್ಷದ ಮಾರ್ಚ್‍ನಲ್ಲಿ ವಿಚಾರಣೆ ಇದೆ. ಹೀಗಿರುವಾಗ ಇವರು ಈ ರೀತಿ ಮಾಡಿದ್ದಾರೆ. ನಾನು ನನ್ನ ಕುಟುಂಬ ನಿರ್ವಹಣೆಗೆ ಹಣ ಕೇಳುತ್ತಿದ್ದೇನೆ ಅಷ್ಟೆ ಎಂದಿದ್ದಾರೆ ರಮ್ಯಾ  ನರೇಶ್.

    ಇದು ಸಿನಿಮಾ ಪ್ರಮೋಷನ್`ಗಾಗಿ ಮಾಡಿದ ವಿಡಿಯೋ ಅಲ್ಲ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂದಿರುವ ಪವಿತ್ರಾ ಲೋಕೇಶ್ ವಿವಾದ ಹೆಚ್ಚುವಂತೆ ಮಾಡಿದ್ದಾರೆ. ಅಧಿಕೃತವಾಗಿ ಡೈವೋರ್ಸ್ ಆಗಿಲ್ಲದ ನರೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದಿರುವುದು ಕಾನೂನು ಹೋರಾಟದಲ್ಲಿ ಯಾವ ತಿರುವು ಪಡೆಯಲಿದೆಯೋ ನೋಡಬೇಕು.

  • ಪವಿತ್ರಾ ಲೋಕೇಶ್ ಅಲ್ಲಲ್ಲ.. ಪವಿತ್ರಾ ನರೇಶ್ ಮದುವೆಯಾದರಾ?

    ಪವಿತ್ರಾ ಲೋಕೇಶ್ ಅಲ್ಲಲ್ಲ.. ಪವಿತ್ರಾ ನರೇಶ್ ಮದುವೆಯಾದರಾ?

    ಹೊಸ ಪಯಣ. ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ನಿಮ್ಮ ಆಶೀರ್ವಾದ ಇರಲಿ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು, ನಿಮ್ಮ ಆಶೀರ್ವಾದವನ್ನು ಕೋರಿ. ನಿಮ್ಮ ಪವಿತ್ರಾ ನರೇಶ್

    ಹೀಗೊಂದು ಟ್ವೀಟ್ ಮಾಡುವ ಮೂಲಕ ತಮ್ಮ ಮದುವೆಯನ್ನು ಜಗತ್ತಿಗೆ ಸಾರಿದ್ದಾರೆ ಪವಿತ್ರಾ ಲೋಕೇಶ್. ಇವರ ಮದುವೆ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ನರೇಶ್ ಹಾಗೂ ಪವಿತ್ರಾ ಹೈದರಾಬಾದ್ನಲ್ಲಿ ಮದುವೆ ಆಗಿದ್ದಾರೆ ಎನ್ನಲಾಗಿದೆ.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ ನರೇಶ್. ಸಪ್ತಪದಿ ತುಳಿಯುವುದರಿಂದ ಹಿಡಿದ ಮದುವೆಯಲ್ಲಿ ಮಾಡಬಹುದಾದ ಎಲ್ಲ ಸಂಪ್ರದಾಯಗಳನ್ನು ಮಾಡಿದ್ದಾರೆ. ಆ ಕ್ಷಣಗಳನ್ನು ವಿಡಿಯೋ ಮಾಡಿ, ಪೋಸ್ಟ್ ಮಾಡಿದ್ದಾರೆ.

    ಪವಿತ್ರಾ ಲೋಕೇಶ್ ಅವರಿಗೆ ಇದು ಮೊದಲನೇ ಮದುವೆ. ಸುಚೇಂದ್ರ ಪ್ರಸಾದ್ ಅವರ ಜೊತೆ ಮದುವೆ ಆಗಿರಲಿಲ್ಲ. ಲಿನ್ ಇನ್ ಟುಗೆದರ್`ನಲ್ಲಿದ್ದರು. ಆದರೆ ನರೇಶ್ ಅವರಿಗೆ ಇದು 4ನೇ ಮದುವೆ. ನರೇಶ್ ಅವರು ಈ ಮೊದಲು ಮೂರು ಮದುವೆ ಆಗಿದ್ದರು. ಮೂರನೇ ಪತ್ನಿ ರಮ್ಯಾ ರಘುಪತಿ ಜೊತೆ  ಅವರಿಂದ ಇನ್ನೂ ವಿಚ್ಚೇದನ ಪಡೆದಿಲ್ಲ. ರಮ್ಯಾ ರಘುಪತಿ ಹಾಗೂ ನರೇಶ್ ಪ್ರೀತಿಸಿ ಮದುವೆ ಆದವರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಮಗನಿಗೋಸ್ಕರ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಪತಿ ಜೊತೆ ಇರ್ತೀನಿ. ನಾನು ಏನೇ ಮಾಡಿದರೂ ಅವರಿಗೆ ವಿಚ್ಛೇದನ ಕೊಡಲ್ಲ ಎಂದು ಹೇಳಿದ್ದರು ರಮ್ಯ.

    ಕಾನೂನು ಸಮಸ್ಯೆ ಎದುರಾಗಲಿದೆಯಾ?

    ಮದುವೆ ಆಗಿ, ಅದನ್ನು ನೋಂದಣಿ ಮಾಡಿಸಿದ ನಂತರ ಹೆಣ್ಣು/ಗಂಡು ಬೇರೆ ಮದುವೆ ಆಗಬೇಕು ಎಂದರೆ ವಿಚ್ಛೇದನ ನೀಡಲೇಬೇಕು. ಕಾನೂನಾತ್ಮಕವಾಗಿ ಬೇರೆ ಆದ ಬಳಿಕವೇ ಗಂಡು/ಹೆಣ್ಣು ಬೇರೆ ಮದುವೆ ಆಗಬಹುದು. ವಿಚ್ಛೇದನ ಪಡೆಯದೇ ಬೇರೆ ಮದುವೆ ಆದರೆ, ಅದನ್ನು ಮದುವೆ ಎಂದು ಪರಿಗಣಿಸಲು ಕಾನೂನಿಂದ ಸಾಧ್ಯವಿಲ್ಲ. ನರೇಶ್ ಅವರು ಮೂರನೇ ಪತ್ನಿಯಿಂದ ವಿಚ್ಛೇದನ ಪಡೆಯದೇ ಈಗ 4ನೇ ಮದುವೆ ಆಗಿದ್ದಾರೆ. ಈ ಮದುವೆಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಈ ಸಂಬಂಧ ರಮ್ಯಾ ಅವರು ಮಾತ್ರ ದೂರು ಕೊಡಬಹುದು. ಬೇರೆಯವರು ದೂರು ನೀಡಿದರೆ ಆ ದೂರಿಗೂ ಮಾನ್ಯತೆ ಇಲ್ಲ ಎನ್ನಲಾಗಿದೆ. ದೂರು ನೀಡಿದರೆ ನರೇಶ್ ಮತ್ತು ಪವಿತ್ರಾ ಇಬ್ಬರೂ ಅಪರಾಧ ಎಸಗಿದಂತೆ ಆಗುತ್ತದೆ.

    ಈ ಮದುವೆ ವಿರುದ್ಧ ರಮ್ಯಾ ಕೋರ್ಟಿಗೆ ಹೋದರೆ, ಅದು ಸಿನಿಮಾಗಾಗಿ ತಗೆದಿರುವ ದೃಶ್ಯವೆಂದು ಹೇಳಿ ಬಚಾವ್ ಆಗಬಹುದು. ರಮ್ಯಾ ಸುಮ್ಮನಾದರೆ ಅದನ್ನೇ ಮದುವೆ ಎಂದು ಅಂದುಕೊಳ್ಳಬಹುದು ಎನ್ನುವ ಮಾತುಗಳು ಕೂಡ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ.

  • ರಿಯಲ್ ಸ್ಟೋರಿಯನ್ನೇ ರೀಲ್ ಸಿನಿಮಾ ಮಾಡಿದ್ರಾ ಪವಿತ್ರಾ ಲೋಕೇಶ್..ನರೇಶ್..?

    ರಿಯಲ್ ಸ್ಟೋರಿಯನ್ನೇ ರೀಲ್ ಸಿನಿಮಾ ಮಾಡಿದ್ರಾ ಪವಿತ್ರಾ ಲೋಕೇಶ್..ನರೇಶ್..?

    ಮಳ್ಳಿ ಪೆಳ್ಳಿ ಅನ್ನೋ ತೆಲುಗು ಸಿನಿಮಾ ಭಾರಿ ಸುದ್ದಿಯಾಗುತ್ತಿದೆ. ಕನ್ನಡದಲ್ಲಿ ಈ ಸಿನಿಮಾ ಮತ್ತೆ ಮದುವೆ ಹೆಸರಿನಲ್ಲಿಯೂ ಬರುತ್ತಿದೆ. ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಕಾರಣ ಚಿತ್ರದ ಟೀಸರ್. ಟೀಸರ್`ನಲ್ಲಿರುವ ದೃಶ್ಯಗಳು  ಡೈಲಾಗ್ಸ್ ಮತ್ತು ಸೀನ್ಗಳನ್ನು ನೋಡಿದರೆ, ಇದು ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ರಿಯಲ್ ಲೈಫ್ ಕಥೆಯೇ ಎಂಬ ಅನುಮಾನ ಮೂಡುವಂತಿದೆ.

    ಟೀಸರ್ ಆರಂಭವಾಗುತ್ತಿದ್ಧಂತೆ ತೆಲುಗು ಇಂಡಸ್ಟ್ರೀಯವರು ಕನ್ನಡದವರ ಮೇಲೆ ಕಣ್ಣು ಹಾಕ್ತಾ ಇದ್ದಾರಲ್ಲ ಅನ್ನೋ ಡೈಲಾಗ್ ಕೂಡ ಇದೆ. ಓರ್ವ ಮಹಿಳೆ ಮಾಧ್ಯಮಗಳ ಎದುರು ಕುಳಿತು ನನ್ನ ಗಂಡನಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪ ಮಾಡುತ್ತಿರುತ್ತಾಳೆ. ನನ್ನ ಸಂಸಾರಕ್ಕೆ ಬೆಂಕಿ ಹಾಕಬೇಡ ಎಂದು ಕೇಳಿಕೊಳ್ಳುತ್ತೇನೆ ನನ್ನ ಮಗನ ಭವಿಷ್ಯದ ಜತೆಗೆ ಆಟಬೇಡ ಅಂತ ಬೇಡಿಕೊಳ್ತಿನಿ' ಎಂದು ಮಾಧ್ಯಮಗಳ ಮುಂದೆ ಪವಿತ್ರಾ ಲೋಕೇಶ್ ನಟಿಸಿರುವ ಪಾತ್ರಕ್ಕೆ ಮನವಿ ಮಾಡುತ್ತಾರೆ.

    ಕಳೆದ ವರ್ಷ  ಮೈಸೂರಿನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ವಾಸ್ತವ್ಯ ಹೂಡಿದ್ದ ಹೋಟೆಲ್  ಎದುರು ಹೈಡ್ರಾಮಾವೇ ನಡೆದಿತ್ತು. ಅವರಿಬ್ಬರು ಇದ್ದ ಸ್ಥಳಕ್ಕೆ ನರೇಶ್ ಪತ್ನಿ ರಮ್ಯಾ ರಘುಪತಿ ಹೋಗಿ ಗಲಾಟೆ ಮಾಡಿದ್ದರು. ಅದೇ ಥರದ ಯಥಾವತ್ ಸೀನ್ ಈ ಟೀಸರ್ನಲ್ಲಿದೆ. ಅಂದು ನರೇಶ್ ಮತ್ತು ಪವಿತ್ರಾ ಯಾವ ರೀತಿ ನಡೆದುಕೊಂಡಿದ್ದರೋ, ಅದೇ ಥರದ ಸೀನ್ ಅನ್ನು 'ಮತ್ತೆ ಮದುವೆ' ಟೀಸರ್ನಲ್ಲೂ ನೋಡಬಹುದಾಗಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಕಿಸ್ಸಿಂಗ್ ಸೀನ್ ಕೂಡ ಇದರಲ್ಲಿದೆ.

    ಈ ಚಿತ್ರಕ್ಕೆ ನಿರ್ಮಾಪಕರೂ ನರೇಶ್ ಅವರೇ. ಎಂ.ಎಸ್.ರಾಜು ಎಂಬ ಖ್ಯಾತ ನಿರ್ದೇಶಕರೇ ಚಿತ್ರಕ್ಕೆ ಆಕ್ಷನ್ ಕಟ್  ಹೇಳಿದ್ದಾರೆ. ನರೇಶ್, ಪವಿತ್ರಾ ಜೊತೆ ಶರತ್ ಬಾಬು, ಜಯಸುಧಾ, ವನಿತಾ ವಿಜಯ್ ಕುಮಾರ್, ಅನನ್ಯಾ ನಗಲ್ಲಾ.. ಹೀಗೆ ಹಲವು ಕಲಾವಿದರು ನಟಿಸಿದ್ದಾರೆ.