` balaji photo studio, - chitraloka.com | Kannada Movie News, Reviews | Image

balaji photo studio,

  • ಬಾಲಾಜಿ ಫೋಟೋ ಸ್ಟುಡಿಯೋಸ್ : ಮಲೆನಾಡಿನ ಮತ್ತೊಂದು ಕಥೆ

    ಬಾಲಾಜಿ ಫೋಟೋ ಸ್ಟುಡಿಯೋಸ್ : ಮಲೆನಾಡಿನ ಮತ್ತೊಂದು ಕಥೆ

    ಮಲೆನಾಡಿನ ಕಥೆಗಳು ಜನರಿಗೆ ಇತ್ತೀಚೆಗೆ ಹೆಚ್ಚು ಹೆಚ್ಚು ಇಷ್ಟವಾಗುತ್ತಿವೆ. ಆ ಹಾದಿಯಲ್ಲಿ ಮಲೆನಾಡಿನ ಅಪರೂಪದ ಕಥೆಯೊಂದನ್ನು ಸಿದ್ಧ ಮಾಡಿಟ್ಟುಕೊಂಡು ಬಂದಿದೆ  ಬಾಲಾಜಿ ಫೋಟೋ ಸ್ಟುಡಿಯೋಸ್. ಇದು ಶಿರಸಿ, ಹೊನ್ನಾವರ ಭಾಗದಲ್ಲಿ ನಡೆಯುವ ಕಥೆ. ಒಬ್ಬ ಫೋಟೋಗ್ರಾಫರ್, ಆತನ ಫೋಟೋ ಸ್ಟುಡಿಯೋ ನಡುವಿನ ಸಂಬಂಧದ ಕಥೆ. ಒಂದು ಚೆಂದದ ಲವ್ ಸ್ಟೋರಿಯೂ ಅಲ್ಲಿದೆ. ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ.ರಾಮ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮಿ, ಬಿಗ್ ಬಾಸ್ ಖ್ಯಾತಿಯ ನಕುಲ್, ರಕ್ಷಿತ್, ರವಿ ಮೂರೂರು, ಶಿಶಿರ್.. ಹೀಗೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ನಟಿಸುವವರಲ್ಲಿ ಬಹುತೇಕರು ಕಿರುತೆರೆಯಲ್ಲಿ ಹೆಸರು ಮಾಡಿರುವ ಕಲಾವಿದರು.

    ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾದವರು. ನಟ ವಿಜಯ್ ರಾಘವೇಂದ್ರ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹಾಡು ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಛಾಯಾಗ್ರಾಹಕರಾಗಿರುವ ಅಶೋಕ್ ಕಶ್ಯಪ್ ಅವರಿಗೆ ಸಹಜವಾಗಿಯೇ ಚಿತ್ರದ ಫ್ರೇಮು, ಕ್ಯಾಮೆರಾವರ್ಕ್ ಇಷ್ಟವಾಯಿತು. ಇದೇ ತಂಡದ ಜೊತೆ ಕೆಲಸ ಮಾಡುವ ಆಸೆಯಿದೆ ಎಂದು ಬಯಕೆ ತೋಡಿಕೊಂಡರು ವಿಜಯ್ ರಾಘವೇಂದ್ರ.

    ಸೃಜನ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ವೆಂಕಟೇಶ್ವರ ರಾವ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿಯಿದೆ ಎಂದು ಖುಷಿಯಿಂದ ಹೇಳಕೊಂಡರು ವೆಂಕಟೇಶ್ವರ ರಾವ್. ನಿರ್ದೇಶಕ ರಾಜೇಶ್ ಧ್ರುವ ಚಿತ್ರದ ಚಿತ್ರೀಕರಣದ ಕಷ್ಟಗಳನ್ನು ಹೇಳಿಕೊಳ್ಳುತ್ತಲೇ ಅಂತಿಮ ಫಲಿತಾಂಶ ಬಂದಾಗ ಆಗುವ ಖುಷಿಯೇ ಬೇರೆ ಎಂದು ಅನುಭವ ಹಂಚಿಕೊಂಡರು. ಅಭಿಷೇಕ್ ಶಿರಸಿ ಪಲ, ಪೃಥ್ವಿಕಾಂತ್ ಪನ್ನಿ ಕಥೆ, ಚಿತ್ರಕಥೆಯಿದ್ದು ಅಜಿತ್ ಬೊಪ್ಪನಳ್ಳಿ ಸಂಭಾಷಣೆಯಿದೆ. ಶ್ರೀರಾಮ್ ಗಂಧರ್ವ ಸಂಗೀತ ನಿರ್ದೇಶನವಿದ್ದು, ಬಾಲಾಜಿ ಸ್ಟುಡಿಯೋಗೆ ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ.

  • ಬಾಲಾಜಿ ಸ್ಟುಡಿಯೋ : ಫೋಟೋಗ್ರಾಫರ್ ಸ್ಟೋರಿ

    ಬಾಲಾಜಿ ಸ್ಟುಡಿಯೋ : ಫೋಟೋಗ್ರಾಫರ್ ಸ್ಟೋರಿ

    ಶ್ರೀ ಬಾಲಾಜಿ ಸ್ಟುಡಿಯೋ ಎಂಬ ಹೊಸ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇದು ಹೊಸಬರ ಚಿತ್ರ. ಹೊಸತನದ ಕಥೆ. ಇದುವರೆಗೆ ಹಲವು ಚಿತ್ರಗಳಲ್ಲಿ ಹೀರೋ ಅಥವಾ ಮತ್ತಿತರರು ಕ್ಯಾಮೆರಾ ಹಿಡಿದು ಕೆಲಸ ಮಾಡೋದನ್ನು ನೋಡಿದ್ದೀರಿ. ಆದರೆ ಒಬ್ಬ ಫೋಟೋಗ್ರಾಫರ್ ಎದುರಿಸುವ ಸವಾಲು, ಸಮಸ್ಯೆಗಳನ್ನೇ ಮನರಂಜನಾತ್ಮಕವಾಗಿ ಹೇಳಿರುವ ಸಿನಿಮಾ ಬಾಲಾಜಿ ಸ್ಟುಡಿಯೋ. ಫೋಟೋಗ್ರಾಫರುಗಳೆಲ್ಲ ಇಷ್ಟಪಡುವ ಕಥೆ ಎನ್ನಬಹುದು. ಫೋಟೋಗ್ರಾಫರ್ ಒಬ್ಬನ ಕಥೆ ಆಧರಿಸಿದ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಹಿರಿಯ ಫೋಟೋಗ್ರಾಫರ್ ಕೆ.ಎನ್. ನಾಗೇಶ್ ಕುಮಾರ್ ಅವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಗಂಧದ ಗುಡಿ ಅಮೋಘವರ್ಷ ಚಿತ್ರಕ್ಕೆ ಶುಭ ಕೋರಿದರು.

    ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಮಾತನಾಡಿ ನಿರ್ದೇಶಕ ರಾಜೇಶ್ ಧ್ರುವ ಚಿತ್ರದ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ವೆಂಕಟೇಶ್ವರ್ ರಾವ್ ಅವರಂತೂ ಅಯ್ಯೋ.. ಸಿನಿಮಾಗೆ ಯಾಕೆ ಹೋಗ್ತೀರಾ ಎಂದು ಹೇಳಿದವರೇ ಜಾಸ್ತಿ ಎಂದು ಸ್ವಾರಸ್ಯವಾಗಿ ಹೇಳಿದರು. ಇಡೀ ಚಿತ್ರವನ್ನು ಶಿರಸಿ ಸುತ್ತಮುತ್ತಲೇ ಚಿತ್ರೀಕರಿಸಲಾಗಿದ್ದು, 23 ದಿನದ ಟೈಟ್ ಶೆಡ್ಯೂಲ್‍ನಲ್ಲಿ ಚಿತ್ರ ಮಾಡಿರುವುದು ವಿಶೇಷ. ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ರಾಜೇಶ್ ಧ್ರುವ, ರಾಧಿಕಾ ಅಚ್ಯುತ್ ರಾವ್, ಶಿಶಿರ್, ನಕುಲ್ ಶರ್ಮಾ, ಶುಭಲಕ್ಷ್ಮಿ, ರವಿ ಸಾಲಿಯಾನ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಕಥೆ ಚಿತ್ರಕಥೆ ಅಭಿಷೇಕ್ ಶಿರಸಿ, ಪೃಥ್ವಿರಾಜ ಪೆನ್ನು ಅವರದ್ದಾದರೆ, ಸಂಭಾಷಣೆ ಅಜಿತ್ ಬೊಪ್ಪನಳ್ಳಿಯವರದ್ದು. ಸ್ವಸ್ವಿಕ್ ಕಾರೆನಾಡ್ ಸಂಗೀತ ನಿರ್ದೇಶಕ.