` golden star ganesh, - chitraloka.com | Kannada Movie News, Reviews | Image

golden star ganesh,

  • ವೇರ್ ಈಸ್ ಮೈ ಕನ್ನಡಕ : ಗಣೇಶ್ ಅಲ್ಲ ದಿಗಂತ್..!

    diganth replaces ganesh in where is my kannadadka

    ವೇರ್ ಈಸ್ ಮೈ ಕನ್ನಡಕ ಅನ್ನೋ ಸಿನಿಮಾ ರೆಡಿಯಾಗುತ್ತಿದೆ. ಮುಂಬೈನ ರಾಜ್-ದಾಮಿನಿ ಜೋಡಿ ನಿರ್ದೇಶನವಿದೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಗಣೇಶ್ ಹೀರೋ, ಪತ್ರಲೇಖ ಅನ್ನೋ ಮುಂಬೈ ಹುಡುಗಿ ಹೀರೋಯಿನ್.. ಹೀಗೆ ಕೆಲವು ತಿಂಗಳ ಹಿಂದೆ ಭರ್ಜರಿಯಾಗಿಯೇ ಸುದ್ದಿಗಯಾಗಿತ್ತು ಈ ಸಿನಿಮಾ. 

    ಕಳೆದ ತಿಂಗಳು ಗಣೇಶ್ ಈ ಸಿನಿಮಾವನ್ನು ಕೈಬಿಟ್ಟಿರೋದಾಗಿ ತಿಳಿಸಿದ್ದರು. ಕಾರಣ ಹೇಳಿರಲಿಲ್ಲ. ಈಗ ಗಣೇಶ್ ಜಾಗಕ್ಕೆ ದೂದ್‍ಪೇಡ ದಿಗಂತ್ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ತಾರಾಗಣ ಮೊದಲಿನಂತೆಯೇ ಇದೆ. ಗಣೇಶ್ ಅವರೇ ತಮ್ಮ ಪಾತ್ರವನ್ನು ದಿಗಂತ್‍ಗೆ ಶಿಫಾರಸು ಮಾಡಿದರು ಎನ್ನಲಾಗಿದೆ. 

  • ಶುರುವಾಗೇ ಬಿಡ್ತು ಗಣೇಶ್ ಗೀತಾ - 3ನೇ ನಾಯಕಿ ಯಾರ್ ಗೊತ್ತಾ..?

    geetha movie launched

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ ಶುರುವಾಗಿಬಿಟ್ಟಿದೆ. ಚಿತ್ರದಲ್ಲಿ ಮೂವರು ನಾಯಕಿಯರು. ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್ ಅವರ ಜೊತೆಯಲ್ಲೇ ಶಾನ್ವಿ ಶ್ರೀವಾಸ್ತವ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರದ್ದೇ ಚಿತ್ರದಲ್ಲಿ ಪ್ರಧಾನ ಪಾತ್ರವಂತೆ.

    ಮುಗುಳುನಗೆ ಖ್ಯಾತಿಯ ಸೈಯದ್ ಸಲಾಂ ಮತ್ತು ಗೋಲ್ಡನ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕ. ಇವರು ರಾಜಕುಮಾರ, ಮಿಸ್ಟರ್ & ಮಿಸೆಸ್ ರಾಮಚಾರಿ ಚಿತ್ರದ ಸಹನಿರ್ದೇಶಕರಾಗಿದ್ದರು. ಸಂತೋಷ್ ಆನಂದ್‍ರಾಮ್‍ರ ಆಪ್ತಮಿತ್ರ. 

    ಹೀಗಾಗಿ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು, ಜಾಕ್ ಮಂಜು ಮೊದಲಾದವರು ಭಾಗವಹಿಸಿದ್ದರು.

  • ಸಕಲಕಲಾವಲ್ಲಭನ ಲವ್  ಸ್ಟೋರಿಗಳು..!

    ಸಕಲಕಲಾವಲ್ಲಭನ ಲವ್  ಸ್ಟೋರಿಗಳು..!

    ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳಲ್ಲಿ ಒಬ್ಬರಿಗಿಂತ ಹೆಚ್ಚು ಹೀರೋಯಿನ್ಸ್ ಇರುವುದು ಹೊಸದೇನಲ್ಲ. ಇತ್ತೀಚೆಗೆ ಮುಗುಳುನಗೆ ಚಿತ್ರದಲ್ಲಿ ಮೂರ್ ಮೂರು ಜನ ಹೀರೋಯಿನ್ಸ್ ಇದ್ದರು. ಆಶಿಕಾ ರಂಗನಾಥ್, ನಿಖಿತಾ ನಾರಾಯಣನ್, ಅಪೂರ್ವ ಅರೋರಾ ನಾಯಕಿಯರಾಗಿದ್ದರು. ಕೊನೆಯದಾಗಿ ಅಮೂಲ್ಯ 4ನೇ ನಾಯಕಿಯಾಗಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ಈಗ ಅದೇ ತ್ರಿಬ್ಬಲ್ ರೈಡಿಂಗ್ಲ್ಲೂ ಆಗುತ್ತಾ ಅನ್ನೋ ಕುತೂಹಲ ಹುಟ್ಟಿಸಿದ್ದಾರೆ ಡೈರೆಕ್ಟರ್ ಮಹೇಶ್ ಗೌಡ. ಅಂದಹಾಗೆ ಗಣೇಶ್ ಈ ಚಿತ್ರದಲ್ಲಿ ಸಕಲಕಲಾವಲ್ಲಭ. ಆತನ ಮಾತಿಗೆ..ಮೋಡಿಗೆ ಹುಡುಗಿಯರು ಫಿದಾ ಆಗುತ್ತಾರೆ. ಆದರೆ.. ಆಮೇಲೆ ಆಗುವುದೇ ಬೇರೆ.. 

    ಗಣೇಶ್ ಚಿತ್ರಗಳಲ್ಲಿ ಕಾಮಿಡಿ, ಲವ್ ಸ್ಟೋರಿ ಟ್ರ್ಯಾಕ್, ಚೆಂದವಾದ ಹಾಡುಗಳು, ಸುಂದರ ಹೀರೋಯಿನ್ ಇರುವ ನಿರೀಕ್ಷೆ ಇದೆ. ತ್ರಿಬ್ಬಲ್ ರೈಡಿಂಗ್ ಕೂಡಾ ಹಾಗೆಯೇ ಇದೆ. ತ್ರಿಬಲ್ ರೈಡಿಂಗ್ನಲ್ಲಿ ಈಗಾಗಲೇ ಒಬ್ಬರಲ್ಲ, ಮೂರ್ ಜನ ಇದ್ದಾರೆ. ಎಲ್ಲರ ಜೊತೆಯಲ್ಲೂ ಲವ್ ಟ್ರ್ಯಾಕ್ ಇದೆ. ಗಣೇಶ್ ಎದುರು ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಹೀರೋಯಿನ್ಸ್. ಇವರಲ್ಲದೆ ಚಿತ್ರದ ಕೊನೆಯಲ್ಲಿ ನಾಯಕಿ ಬರುತ್ತಾರೆ ಎಂದಿದ್ದಾರೆ ಮಹೇಶ್ ಗೌಡ. ಆ ನಾಯಕಿ ಯಾರು ಅನ್ನೋದನ್ನು ಸಸ್ಪೆನ್ಸ್ ಆಗಿಟ್ಟಿದ್ದಾರೆ. ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರುತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು.

    ಚಮಕ್ ನಂತರ ಟ್ರಿಬಲ್ ರೈಡಿಂಗ್ನಲ್ಲಿ ಗಣೇಶ್ ಮತ್ತೊಮ್ಮೆ ಡಾಕ್ಟರ್ ಆಗಿದ್ದಾರೆ. ಯೋಗರಾಜ್ ಭಟ್, ದುನಿಯಾ ಸೂರಿಯವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಹಿಂದೆ ವಿನೋದ್ ಪ್ರಭಾಕರ್ ಅವರಿಗೆ ರಗಡ್ ಚಿತ್ರವನ್ನು ನಿರ್ದೇಶಿಸಿದ್ದರು. ಆಗ ಆಕ್ಷನ್ ನೀಡಿದ್ದ ಡೈರೆಕ್ಟರ್, ಈಗ ಲವ್ ಬ್ರೇಕಪ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ ಗೋಪಾಲ್ ನಿರ್ಮಾಣದ ತ್ರಿಬಲ್ ರೈಡಿಂಗ್ ಈಗ ಥಿಯೇಟರಿನಲ್ಲಿದೆ. 4ನೇ ಹೀರೋಯಿನ್ ಯಾರು ಅನ್ನೋದು ಪ್ರೇಕ್ಷಕರಿಗೂ ಗೊತ್ತಾಗಿರುತ್ತೆ. ಅ ಥ್ರಿಲ್ನ್ನ ಥಿಯೇಟರಲ್ಲೇ ಅನುಭವಿಸಿ.

    ಎಲ್ಲರನ್ನೂ ಮೋಡಿ ಮಾಡೋ ಹುಡುಗ ಸಕಲಕಲಾವಲ್ಲಭ. ಈ ಚಿತ್ರದಲ್ಲಿಯೂ ಹಾಗೆಯೇ ಮೂರು ಹುಡುಗಿಯರನ್ನ  ಪ್ರೀತಿಯ ಬಲೆಗೆ ಬೀಳಿಸಿಕೊಳ್ಳೋ ಹುಡುಗ. ನಂತರ ಯಾವ ರೀತಿ ಆ ಪ್ರೀತಿಯ ಬಲೆಯಿಂದ ಹೊರ ಬರುತ್ತಾನೆ ಎನ್ನುವುದೇ ಚಿತ್ರದ ಕಥೆ. ಕಾಮಿಡಿ ಮತ್ತು ಪ್ರೀತಿ ಎರಡೂ ಸಖತ್ತಾಗಿದೆ ಎಂದಿದ್ದಾರೆ ಗಣೇಶ್

  • ಸಕ್ಸಸ್ ಸರದಾರರೆಲ್ಲ ಒಂದೇ ಕಡೆ ಸೇರಿಬಿಟ್ಟರು..!

    success stars

    ನವರಸ ನಾಯಕ ಜಗ್ಗೇಶ್. ಗೋಲ್ಡನ್ ಸ್ಟಾರ್ ಗಣೇಶ್. ನಿರ್ದೇಶಕ ಪಿ.ವಾಸು. ನಿರ್ಮಾಪಕ ಕೆ.ಎ.ಸುರೇಶ್. ಇವರೆಲ್ಲರೂ ಒಟ್ಟಿಗೇ ಸೇರುತ್ತಿದ್ದಾರೆ. ಒಂದೇ ಚಿತ್ರದಲ್ಲಿ. ಸುರೇಶ್ ನಿರ್ಮಾಣದ ಚಿತ್ರದಲ್ಲಿ ನಿರ್ದೇಶನ ಮಾಡುತ್ತಿರುವುದು ಪಿ.ವಾಸು. ನಟಿಸೋಕೆ ಜಗ್ಗೇಶ್ ಮತ್ತು ಗಣೇಶ್ ಒಪ್ಪಿಕೊಂಡಾಗಿದೆ. ಸಕ್ಸಸ್ ಸರದಾರರೆಲ್ಲ ಒಟ್ಟಿಗೇ ಸೇರಿದಾಗ ಅದ್ಭುತವೊಂದು ಸೃಷ್ಟಿಯಾದರೆ ಅಚ್ಚರಿ ಪಡಬೇಕಿಲ್ಲ.

    ಆಪ್ತಮಿತ್ರ, ದೃಶ್ಯ, ಶಿವಲಿಂಗದಂತಹ ಹಿಟ್ ಕೊಟ್ಟಿದ್ದ ಪಿ.ವಾಸುಗೆ ಗಣೇಶ್, ಜಗ್ಗೇಶ್ ಜೊತೆ ಇದು ಮೊದಲ ಸಿನಿಮಾ. ಶ್ರಾವಣಿ ಸುಬ್ರಹ್ಮಣ್ಯ, ಇನ್ನೇನು ಬಿಡುಗಡೆಯಾಗಲಿರುವ ರಾಜು ಕನ್ನಡ ಮೀಡಿಯಂನಂತಹ ಸಿನಿಮಾ ಕೊಟ್ಟಿರುವ ಸುರೇಶ್‍ಗೂ ಇದು ಬಿಗ್ ಚಾಲೆಂಜ್. ಅಂದಹಾಗೆ ಕನ್ನಡದ ಬಹುದೊಡ್ಡ ಸ್ಟಾರ್ ಜೊತೆ ನಟಿಸಲಿದ್ದೇನೆ ಎಂದು ಜಗ್ಗೇಶ್ ಹೇಳಿದ್ದುದು ಇದೇ ಚಿತ್ರದ ಬಗ್ಗೆ. ಶುಭವಾಗಲಿ ಎಂದು ಹಾರೈಸೋಣ.

    Related Articles :-

    Jaggesh To Act With Ganesh In P Vasu's New Film

  • ಸಖತ್ ಬಾಲು ಮಸ್ತ್ ಮಸ್ತ್

    ಸಖತ್ ಬಾಲು ಮಸ್ತ್ ಮಸ್ತ್

    ಸಿಂಪಲ್ಲಾಗಿದ್ದರೂ ಸಖತ್ ಆಗಿರೋದೇ ಸಖತ್ ಟೀಸರ್ ಹೆಗ್ಗಳಿಕೆ. ಚಿತ್ರದ ಟೀಸರ್‍ನಲ್ಲಿ ಎಂದಿನಂತೆ ಮುಗುಳುನಗೆ ಮೂಡುವಂತೆ ಮಾಡುತ್ತಲೇ ನಾನು ಹೊಸ ಕಥೆ ಹೇಳುತ್ತಿದ್ದೇನೆ ಎನ್ನುವುದನ್ನು ಸಾರಿಬಿಡುತ್ತಾರೆ ಸಿಂಪಲ್ ಸುನಿ.

    ಟೀಸರ್ ನೋಡಿದವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಂಧ ಹೌದೋ.. ಅಲ್ಲವೋ.. ಆತ ನಾಟಕ ಮಾಡುತ್ತಿದ್ದಾನೋ.. ನಾಯಕಿಗಾಗಿ ಇದನ್ನೆಲ್ಲ ಆಡ್ತಿದ್ದಾನಾ.. ಸಂಥಿಂಗ್ ಡ್ರಾಮಾ ಇದೆ ಅನ್ನೊದನ್ನು ತೋರಿಸಿಬಿಡ್ತಾರೆ ಸುನಿ. ಇದರ ಜೊತೆ ಒಂದು ಮರ್ಡರ್, ಕೋರ್ಟು.. ಎಲ್ಲವೂ ಬರುತ್ತೆ. ಕಥೆಯಲ್ಲಿ ಕೇವಲ ಕಾಮಿಡಿ ಅಷ್ಟೇ ಅಲ್ಲ, ಲವ್ ಸ್ಟೋರಿ ಅಷ್ಟೇ ಅಲ್ಲ.. ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಕೂಡಾ ಇದೆ.

    ಗಣೇಶ್ ಎದುರು ನಾಯಕಿಯಾಗಿರೋದು ನಿಶ್ವಿಕಾ ನಾಯ್ಡು. ಸಾಧು ಕಚಗುಳಿ ಇಡೋಕೆ ರೆಡಿ ಇದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ನವೆಂಬರ್ 12ಕ್ಕೆ ರಿಲೀಸ್ ಮಾಡೋಕೆ ಸಖತ್ ಆಗಿ ಪ್ಲಾನ್ ಮಾಡಿಕೊಂಡಿದೆ ಸಖತ್ ಟೀಂ.

  • ಸಖತ್ ಬಾಲುಗೆ ಅಕ್ಟೋಬರ್ 24ರ ಮುಹೂರ್ತ

    ಸಖತ್ ಬಾಲುಗೆ ಅಕ್ಟೋಬರ್ 24ರ ಮುಹೂರ್ತ

    ಚಮಕ್ ನಂತರ ಸಿಂಪಲ್ ಸುನಿ ಮತ್ತು ಗಣೇಶ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಸಖತ್. ಗಣೇಶ್ ಪಾತ್ರದ ಹೆಸರು ಬಾಲು. ಗಣೇಶ್‍ಗೆ ಸಖತ್ತಾಗಿ ಜೋಡಿಯಾಗಿರೋದು ನಿಶ್ವಿಕಾ ನಾಯ್ಡು. ಅವರ ಪಾತ್ರದ ಹೆಸರು ನಕ್ಷತ್ರ. ನಿಶ್ವಿಕಾ ಟೀಚರ್ ಆದರೆ, ಗಣೇಶ್ ರಿಯಾಲಿಟಿ ಶೋ ಸಿಂಗರ್.

    ಈಗ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಸುನಿ. ನಿಶಾ ವೆಂಕಟ್ ಸೋಣಂಕಿ ಮತ್ತು ಸುಪ್ರೀತ್ ನಿರ್ಮಾಣದ ಚಿತ್ರದ ಟೀಸರ್ ಅಕ್ಟೋಬರ್ 24ರಂದು ರಿಲೀಸ್ ಆಗಲಿದೆ. ಬೆಳಗ್ಗೆ 11 ಗಂಟೆ 24 ನಿಮಿಷಕ್ಕೆ.

    ಅಂದಹಾಗೆ ಸಿಂಪಲ್ ಸುನಿ ಕ್ರಿಕೆಟ್ ಪ್ರೇಮಿ. ಅದೇ ಅಕ್ಟೋಬರ್ 24ರಂದು ಇಂಡಿಯಾ ಪಾಕಿಸ್ತಾನ ವಿಶ್ವಕಪ್ ಪಂದ್ಯವೂ ಇದೆ. ಅದನ್ನೇನಾದರೂ ಟೀಸರಿನಲ್ಲಿ ತರುತ್ತಾರಾ..? ಸಿಂಪಲ್ ಸುನಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.

  • ಸಖತ್ ಸುನಿ ಸತ್ಯವನ್ನಲ್ಲದೆ ಬೇರೇನೂ ಹೇಳೋದಿಲ್ಲ..!

    ಸಖತ್ ಸುನಿ ಸತ್ಯವನ್ನಲ್ಲದೆ ಬೇರೇನೂ ಹೇಳೋದಿಲ್ಲ..!

    ಸಿಂಪಲ್ ಸುನಿ ಗೊತ್ತು. ಇದ್ಯಾರು ಸಖತ್ ಸುನಿ ಎನ್ನಬೇಡಿ. ಈಗ ರಿಲೀಸ್ ಆಗ್ತಿರೋ ಸಖತ್ ಸಿನಿಮಾದ ಸೃಷ್ಟಿಕರ್ತ ಇವರೇ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಸಖತ್. ನಿಶ್ವಿಕಾ ನಾಯ್ಡು ಮತ್ತು ಸುರಭಿ ನಾಯಕಿಯಾಗಿರೋ ಚಿತ್ರದಲ್ಲಿ ಗಣೇಶ್ ಕಟಕಟೆಯಲ್ಲಿರೋದೇ ಹೈಲೈಟ್. ಕಣ್ಣು ಕಾಣುತ್ತೊ.. ಕಾಣಲ್ವೋ.. ಅದನ್ನೆಲ್ಲ ಸಖತ್ ಆಗಿ ಚಿತ್ರಮಂದಿರದಲ್ಲೇ ತೋರಿಸ್ತಿದ್ದಾರೆ ಸಖತ್ ಸುನಿ.

    ಆ ಚಿತ್ರದ ಪ್ರಚಾರಕ್ಕಾಗಿಯೇ ಹೀಗೆ ಕಟಕಟೆಯೊಳಗೆ ನಿಂತಿರೋದು. ಸಿನಿಮಾ ರಿಲೀಸ್ ಆಗೋ ಪ್ರತಿ ಮಾಲ್‍ಗಳಲ್ಲೂ ಇಂಥಾದ್ದೊಂದು ಕಟಕಟೆ ನಿರ್ಮಿಸುತ್ತಿದ್ದಾರೆ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್‍ನ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್.

  • ಸನ್ ಆಫ್ ಗೋಲ್ಡನ್ ಸ್ಟಾರ್ ಸಿನಿಮಾ ಎಂಟ್ರಿ

    ganesh son vihaan's debut

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳು ಚಾರಿತ್ರ್ಯಾಳನ್ನು ಚಮಕ್ ಚಿತ್ರದಲ್ಲಿ ಈಗಾಗಲೇ ನೋಡಿದ್ದೀರಿ. ಗಣೇಶ್-ರಶ್ಮಿಕಾ ಜೋಡಿಯ ಮಗಳಾಗಿ ಕ್ಲೈಮಾಕ್ಸ್‍ನಲ್ಲಿ ಕಾಣಿಸಿಕೊಂಡಿದ್ದಳು ಚಾರಿತ್ರ್ಯಾ. ಈಗ ಅವರ ಮಗನ ಸರದಿ.

    ಗಣೇಶ್ ಅಭಿನಯದ ಗೀತಾ ಚಿತ್ರದ ಮೂಲಕ ಗಣೇಶ್ ಅವರ ಪುತ್ರ ವಿಹಾನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾನೆ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ವಿಹಾನ್, ಅಪ್ಪನ ಜೊತೆ ಕಾಣಿಸಿಕೊಂಡಿದ್ದಾನೆ. ಶಾನ್ವಿ ಶ್ರೀವಾಸ್ತವ್, ಪಾರ್ವತಿ ಮತ್ತು ಪ್ರಯಾಗ ಎಂಬ ಮೂವರು ನಾಯಕಿಯರಿರುವ ಚಿತ್ರ ಗೀತಾ. ಗೀತಾ ಚಿತ್ರದ ಮೂಲಕ ಗಣೇಶ್ ಪುತ್ರ ಎಂಟ್ರಿ ಕೊಟ್ಟಿರುವುದು ಚಿತ್ರದ ವಿಶೇಷ.

  • ಸಭ್ಯ ತುಂಟ ಪ್ರೇಮಿಗಳ ಮನಸು ಕದ್ದ ಮುಗುಳುನಗೆ ಹಾಡುಗಳು

    mugulunage

    ಅದೊಂಥರಾ ಹಾಗೆ. ಯೋಗರಾಜ ಭಟ್ಟರು ಮತ್ತು ಜಯಂತ್ ಕಾಯ್ಕಿಣಿ ಸೇರಿದರೆ, ತುಂಟತನ, ಅಮರ ಪ್ರೇಮ, ಪೋಲಿತನ, ಸಜ್ಜನಿಕೆಯ ಪ್ರೇಮ.. ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಬಿಡುತ್ತವೆ. ಮುಗುಳುನಗೆಯಲ್ಲೂ ಅದೇ ಆಗಿದೆ.

    ಮುಗುಳುನಗೆಯ ಹಾಡುಗಳು ಆನ್‍ಲೈನ್‍ನಲ್ಲಿ ಸದ್ದಿಲ್ಲದೇ ಸದ್ದು ಮಾಡುತ್ತಿವೆ. ಸಭ್ಯ ಪ್ರೇಮಿಗಳಿಗೆ ನಿರ್ಮಲ ಏಕಾಂತದಲ್ಲಿ ಇಷ್ಟವಾಗುವಂತಹ ಹಾಡುಗಳನ್ನು ಬರೆದ ಭಟ್ಟರು, ಕಾಯ್ಕಿಣಿ ಮೊದಲ ಸವಾಲು ಗೆದ್ದುಬಿಟ್ಟಿದ್ದಾರೆ.

    ರೂಪಸಿ ಹಾಡಿನಲ್ಲಿ ಪ್ರಿಯತಮೆಯನ್ನು ಹುಡುಕುವ ಸಾಚಾತನ, ಕೆರೆ ಏರಿ ಮ್ಯಾಲ್ ಹಾಡಿನಲ್ಲಿ ಕನಸಿನಲ್ಲಿ ಯಾರೊಬ್ಬರ ಮೈಮೇಲೂ ಬಟ್ಟೆ ನೋಡಿಲ್ಲ, ಕ್ಷಮಿಸಿ ಎನ್ನುವ ಪೋಲಿತನ... ನೋಡುಗರಿಗೆ ಇಷ್ಟವಾಗುತ್ತಿದೆ. ಹಾಡು ನೋಡಿದವರು, ಕೇಳಿದವರು ಮುಗುಳ್ನಗುತ್ತಲೇ ಎಂಜಾಯ್ ಮಾಡುತ್ತಿದ್ದಾರೆ.

    ಬಹುಶಃ, ಮುಗುಳುನಗೆಯ ಮೇಲೊಂದು ಹಾಡು ಬರೆಯುವ ಧೈರ್ಯವನ್ನು ಇದುವರೆಗೆ ಯಾರೂ ಮಾಡಿರಲಿಕ್ಕಿಲ್ಲವೇನೋ..ಅಂಥಾದ್ದೊಂದು ಧೈರ್ಯ ಮಾಡಿ ಗೆದ್ದಿದ್ದಾರೆ ಯೋಗರಾಜ್ ಭಟ್.

    ಇನ್ನು ಗಣೇಶ್ ಮತ್ತು ಭಟ್ಟರ ಕಾಂಬಿನೇಷನ್ 10 ವರ್ಷಗಳ ನಂತರ ಬರುತ್ತಿರುವುದೇ ಪ್ರೇಕ್ಷಕರಲ್ಲಿ ಏನೋ ರೋಮಾಂಚನ. ಆ ರೋಮಾಂಚನ ಥಿಯೇಟರಲ್ಲೂ ಸಿಕ್ಕುಬಿಟ್ಟರೆ, ಮತ್ತೊಂದು ಮುಂಗಾರು ಮಳೆ ಗ್ಯಾರಂಟಿ.

  • ಸಾವಿನ ನೋವಿನಲ್ಲೂ ಗಣೇಶ್ ನಟಿಸಿದ ಆ ಕಾಮಿಡಿ ಸೀನ್ ಯಾವುದು..?

    gimmick team reveals about ganesh's heart touching story

    ಇದೇ ವಾರ ರಿಲೀಸ್ ಆಗುತ್ತಿರುವ ಗಿಮಿಕ್ ಚಿತ್ರದಲ್ಲಿ ತಂದೆಯ ಸಾವಿನ ನೊವಿನಲ್ಲೂ ಕಾಮಿಡಿ ದೃಶ್ಯವೊಂದರಲ್ಲಿ ಗಣೇಶ್ ನಟಿಸಿದರು ಎನ್ನುವುದು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿರುವುದು ನಿಜ. ಹಲವರು ಗಣೇಶ್ ವೃತ್ತಿ ಪರತೆಯನ್ನು ಮೆಚ್ಚಿದ್ದಾರೆ. ಇಷ್ಟಕ್ಕೂ ಆ ದಿನ ಶೂಟಿಂಗ್ ಆದ ಆ ದೃಶ್ಯವೇನು ಗೊತ್ತೇ..?

    ಚಿತ್ರದ ನಾಯಕ ಗಣೇಶ್, ಶ್ರೀಮಂತರ ಮನೆಯ ಹುಡುಗಿಯನ್ನು ನೋಡಲು ಹೋಗುವ ದೃಶ್ಯ. ಚಿತ್ರದ ಅತ್ಯಂತ ಪ್ರಮುಖ ಸೀನ್ ಅದು. ಪ್ರೇಕ್ಷಕರಿಗೆ ಅಷ್ಟೇ ನಗು ತರಿಸುವ ಸೀನ್. ಆ ಸೀನ್‍ಗಾಗಿ ಎಲ್ಲ ಹಿರಿಯ ಕಿರಿಯ ಕಲಾವಿದರೂ ಅಲ್ಲಿದ್ದರು. ಅಕಸ್ಮಾತ್ ನಾನು ಆ ದೃಶ್ಯ ಮಾಡದೇ ಹೋಗಿದ್ದರೆ, ಅಷ್ಟೂ ಜನ ಕಲಾವಿದರ ಡೇಟ್ಸ್ ಹೊಂದಿಸುವುದಿದೆಯಲ್ಲ, ಅದು ಅತಿ ದೊಡ್ಡ ಸವಾಲಾಗುತ್ತಿತ್ತು ಎಂದಿದ್ದಾರೆ ಗಣೇಶ್.

    ಆ ದೃಶ್ಯವನ್ನು ನೋವಿನಲ್ಲೇ ನಟಿಸಿದೆ. ಡಬ್ಬಿಂಗ್ ಮಾಡುವಾಗಲೂ ಆ ದೃಶ್ಯ ಬಂದಾಗ ಕಣ್ಣೀರು ಬಂತು. ಕೆಲ ಸಮಯ ಡಬ್ಬಿಂಗ್ ಮಾಡೋಕೆ ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಗಣೇಶ್.

    ಅಷ್ಟೇ ಅಲ್ಲ, ಇಡೀ ಸೆಟ್‍ನಲ್ಲಿ ಗಣೇಶ್ ತಂದೆಯ ಸಾವಿನ ಸುದ್ದಿ ಗೊತ್ತಿದ್ದುದು ನಟ ರವಿಶಂಕರ್, ಗಣೇಶ್ ಹಾಗೂ ಚಿತ್ರದ ನಿರ್ಮಾಪಕ ದೀಪಕ್ ಸಾಮಿಯವರಿಗೆ ಮಾತ್ರ. ನಿರ್ದೇಶಕರಿಗೂ ತಿಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರಂತೆ ಗಣೇಶ್.

    Related Articles :-
    ಅಲ್ಲಿ ತಂದೆ ಸಾವು.. ಇಲ್ಲಿ ಕಾಮಿಡಿಯ ನೋವು.. ಗಣೇಶ್ ಹೇಳಿದ ಕಣ್ಣೀರ ಕಥೆ 

  • ಸಿಂಪಲ್ ಸುನಿ ಗಣೇಶ್ 3ನೇ ಬಾರಿಗೆ ಮತ್ತೊಮ್ಮೆ..

    simple suni ganesh's magic once again

    ಚಮಕ್ ಚಿತ್ರದ ಯಶಸ್ಸಿನ ನಂತರ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಆ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ಇದೇ ಜೋಡಿ 3ನೇ ಬಾರಿಗೆ ಜನುಮದ ಜೋಡಿಯಾಗುವ ಸೂಚನೆ ಕೊಟ್ಟಿದೆ.

    ಯೆಸ್, ಸುನಿ ಮತ್ತು ಗಣೇಶ್ `ದ ಸ್ಟೋರಿ ಆಫ್ ರಾಯಗಢ' ಅನ್ನೋ ಚಿತ್ರ ಮಾಡೋಕೆ ರೆಡಿಯಾಗಿದ್ದಾರೆ. ಗಣೇಶ್ ಹುಟ್ಟುಹಬ್ಬಕ್ಕಾಗಿ ಚಿತ್ರದ ಫಸ್ಟ್ ಲುಕ್ ಕೂಡಾ ಹೊರಬಿದ್ದಿದೆ.

    ಚಿತ್ರ ಓಕೆ ಆಗಿರುವುದು ನಿಜ. ಕಥೆ ಡಾರ್ಕ್ ಕಾಮಿಡಿ ಸಿನಿಮಾ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತೇವೆ ಎಂದಿರುವ ಸುನಿ ಚಿತ್ರವನ್ನು ಈಗಲೇ ಕೈಗೆತ್ತಿಕೊಳ್ಳೋದಿಲ್ಲ. ಅವತಾರ ಪುರುಷ ಮತ್ತು ಸಖತ್ ಎರಡೂ ಚಿತ್ರಗಳು ಮುಗಿಯಬೇಕು. ಅದಾದ ನಂತರ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಬ್ಯಾನರಿನಲ್ಲೇ ಮತ್ತೊಂದು ಚಿತ್ರಕ್ಕೆ ಕಮಿಟ್ ಆಗಿದ್ದೇನೆ. ಅತ್ತ ಗಣೇಶ್ ಕೂಡಾ ಬೇರೆ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಿದ್ದಾರೆ. ಹೀಗಾಗಿ ಈ ಚಿತ್ರ ಸ್ವಲ್ಪ ನಿಧಾನವಾಗಿ ಸೆಟ್ಟೇರಲಿದೆ ಎಂದಿದ್ದಾರೆ ಸಿಂಪಲ್ ಸುನಿ.

  • ಸಿಂಪಲ್ ಸುನಿ, ಗೋಲ್ಡನ್ ಗಣಿ ಮತ್ತೆ ಚಮಕ್..?

    is simple suni ganesh combination coming back

    ಚಮಕ್, 2017ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ ಸಿನಿಮಾ.

    ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ರೊಮ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಸಖತ್ತಾಗಿದ್ದು, ಸಿನಿಮಾವೂ ಬಾಕ್ಸಾಫೀಸ್‍ನಲ್ಲಿ ಗೆದ್ದಿತ್ತು. ಆ ಚಿತ್ರದಲ್ಲಿ ಸಾಧು ಕೋಕಿಲ ವಿಲನ್..!!! ಈಗ ಮತ್ತೊಮ್ಮೆ ಸುನಿ-ಗಣಿ ಜೋಡಿ ಅದೇ ಮ್ಯಾಜಿಕ್ ಮಾಡಲು ಹೊರಟಿದೆ ಎನ್ನೋ ಸುದ್ದಿ ಇದೆ.

    ಸುನಿ ಮಾಡಿರುವ ಕಥೆಯೊಂದು ಗಣೇಶ್ ಅವರಿಗೆ ಇಷ್ಟವಾಗಿದೆಯಂತೆ. ಸದ್ಯಕ್ಕೆ ಪುಷ್ಕರ್ ಬ್ಯಾನರಿನಲ್ಲಿ ಅವತಾರ ಪುರುಷ ಚಿತ್ರದಲ್ಲಿ ಬ್ಯುಸಿಯಾಗಿರುವ ಸುನಿ, ಆ ಚಿತ್ರ ಮುಗಿಸಿದ ನಂತರ ಈ ಚಿತ್ರಕ್ಕೆ ರೆಡಿಯಾಗಲಿದ್ದಾರಂತೆ. ಅಂತೆ ಕಂತೆಗಳಿಗೆಲ್ಲ ಅವರೇ ಹೌದು ಅಥವಾ ಇಲ್ಲ ಎನ್ನುವ ಉತ್ತರ ಕೊಡಬೇಕಿದೆ.

  • ಸ್ಮಶಾನದಲ್ಲಿ ಗೋಲ್ಡನ್ ಸ್ಟಾರ್ ಗಿಮಿಕ್

    ganesh's gimmick first look revealed

    ಗಣೇಶ್ ಎಂದರೆ ಕಾಮಿಡಿ.. ಗಣೇಶ್ ಎಂದರೆ ಸೆಂಟಿಮೆಂಟ್.. ಆ್ಯಕ್ಷನ್ ಸಿನಿಮಾ ಮಾಡಿದ್ದರೂ, ಗಣೇಶ್ ಚಿತ್ರರಸಿಕರ ಪಾಲಿಗೆ ನಮ್ಮನೆ ಹುಡ್ಗ. ಇಂತಹ ಗಣೇಶ್ ಇದೇ ಮೊದಲ ಬಾರಿಗೆ ಭಯ ಹುಟ್ಟಿಸೋಕೆ ಬರುತ್ತಿದ್ದಾರೆ. ಗಿಮಿಕ್ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದ್ದು, ದೆವ್ವ ಭೂತದ ಕಥೆ ಹೇಗಿದೆ ಎಂಬ ಕುತೂಹಲ ಹುಟ್ಟಿಸಿದೆ.

    ಸ್ಮಶಾನದಲ್ಲಿ, ಸಮಾಧಿಗಳ ಪಕ್ಕ ಲಾಟೀನು ಹಿಡಿದಿರುವ ಗಣೇಶ್.. ಬೆನ್ನ ಹಿಂದೆ ಆತ್ಮಗಳ ಆಕ್ರಮಣ.. ಫಸ್ಟ್‍ಲುಕ್‍ನಲ್ಲಿ ಕಾಣ್ತಿರೋದು ಇಷ್ಟೆ. ನಿರ್ದೇಶಕ ನಾಗಣ್ಣ ಅವರಿಗೂ ಹಾರರ್ ಸಿನಿಮಾ ಹೊಸ ಅನುಭವ.ಶ್ರೀಲಂಕಾ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೂಟಿಂಗ್ ಅಂತಿಮ ಹಂತದಲ್ಲಿದೆ. ದೀಪಕ್ ಸಾಮಿ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

  • ಹಳೆಯ ಕನ್ನಡ ಚಿತ್ರಗಳನ್ನು ನೋಡಿ ಗೀತಾಗೆ ರೆಡಿಯಾದರಂತೆ ಶಾನ್ವಿ..!

    shanvi talks about geetha movie

    ಶಾನ್ವಿ ಶ್ರೀವಾಸ್ತವ್ ತೆರೆ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ ವರ್ಷವಾಗಿದೆ. 2018ರಲ್ಲಿ ದಿ ವಿಲನ್ ಚಿತ್ರದ ಹಾಡಿನಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದೇ ಕೊನೆ. ಅದಕ್ಕೂ ಮುನ್ನ ಅವರು 2017ರಲ್ಲಿ ಮಫ್ತಿ ಮತ್ತು ತಾರಕ್‍ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಶಾನ್ವಿ ತೆರೆ ಮೇಲೆ ಕಾಣಿಸಿಲ್ಲ.

    ಈಗ ಸುದೀರ್ಘ ಗ್ಯಾಪ್ ನಂತರ ಈ ವಾರ ತೆರೆಗೆ ಬರುತ್ತಿದ್ದಾರೆ ಶಾನ್ವಿ. ಗೀತಾ ಚಿತ್ರದಲ್ಲಿ ಪ್ರಿಯಾ ಪಾತ್ರಧಾರಿಯಾಗಿ ಬರುತ್ತಿರುವ ಶಾನ್ವಿಗೆ, ಗಣೇಶ್ ಜೊತೆ ಇದು 2ನೇ ಸಿನಿಮಾ.

    ಈ ಚಿತ್ರದಲ್ಲಿ ನನ್ನದು ರೆಟ್ರೋ ಶೈಲಿಯ ಪಾತ್ರ. ಪಾತ್ರದಲ್ಲಿ ಎಲ್ಲ ಎಮೋಷನ್ಸ್ ಇವೆ. ಅದರಲ್ಲೂ ಚಿತ್ರದಲ್ಲಿ ನನ್ನದು ಆಗಿನ ಕಾಲದ ಮಾಡರ್ನ್ ಯುವತಿಯ ಪಾತ್ರ. ಮೊದಲೇ ನಾನು ಕನ್ನಡದವಳಲ್ಲ. ಕನ್ನಡದಲ್ಲಿ ಅದರಲ್ಲೂ ಆ ಪ್ರದೇಶದಲ್ಲಿ ಆಗಿನ ಕಾಲದ ಯುವತಿಯರು ಹೇಗಿರುತ್ತಿದ್ದರೋ ಗೊತ್ತಿರಲಿಲ್ಲ. ಅದಕ್ಕಾಗಿ ಹಲವು ಕನ್ನಡ ಚಿತ್ರಗಳನ್ನು ನೋಡಿ, ಅದೇ ಶೈಲಿಯಲ್ಲಿ ಸಿದ್ಧಳಾದೆ ಎಂದಿದ್ದಾರೆ ಶಾನ್ವಿ ಶ್ರೀವಾಸ್ತವ್.

    ಚಿತ್ರದಲ್ಲಿ ದಪ್ಪನೆಯ ಹೇರ್ ಬ್ಯಾಂಡ್, ಕಣ್ಣಿಗೆ ಗಾಢವಾದ ಕಾಡಿಗೆ, ಐ ಲೈನರ್‍ಗಳಲ್ಲಿ ನಟಿಸಿದ್ದಾರೆ ಶಾನ್ವಿ.

    ವಿಜಯ್ ನಾಗೇಂದ್ರ ನಿರ್ದೇಶನದ ಗೀತಾ ಸಿನಿಮಾಗೆ ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಪಕರು. 

  • ಹಾಡು ರಿಲೀಸ್‍ನಲ್ಲೇ ಮುಗುಳುನಗೆ ಕರ್ನಾಟಕ ಯಾತ್ರೆ

    mugulunage movie image

    ಯೋಗರಾಜ್ ಭಟ್ ಮತ್ತು ಗಣೇಶ್ ಪುನರ್ ಮಿಲನದ ಚಿತ್ರ ಮುಗುಳುನಗೆ. ಚಿತ್ರೀಕರಣ ಪೂರೈಸಿರುವ ಚಿತ್ರ, ಈಗ ರಾಜ್ಯಾದ್ಯಂತ ಟೂರ್ ಹೊಡೆಯಲು ಸಿದ್ಧವಾಗಿದೆ. ಅದು ಹಾಡುಗಳ ಬಿಡುಗಡೆಗಾಗಿ. ಈಗಾಗಲೇ ಹೊಡಿ ಒಂಭತ್ತ್ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲಾಗಿತ್ತು.

    ಇನ್ನೊಂದು ಹಾಡು ಬೆಂಗಲೂರಿನಲ್ಲೇ ಬಿಡುಗಡೆಯಾಗಿದೆ. ಗಣೇಶ್ ಮನೆಯಲ್ಲಿ. ಜುಲೈ 14ರಂದು ಶಿಲ್ಪಾ ಗಣೇಶ್ ಹುಟ್ಟುಹಬ್ಬ. ಆ ದಿನವೇ ಎರಡನೇ ಹಾಡು ರಿಲೀಸ್ ಆಗಲಿದೆ. 3ನೇ ಹಾಡು ಜುಲೈ 16ಕ್ಕೆ ದಾವಣಗೆರೆಯಲ್ಲಿ ಬಿಡುಗಡೆಯಾದರೆ, ನಾಲ್ಕನೇ ಹಾಡು ಜುಲೈ 18ಕ್ಕೆ ಬಿಡುಗಡೆಯಾಗಲಿದೆ.

    ಈ ನಾಲ್ಕನೇ ಹಾಡಿನ ಬಿಡುಗಡೆಯ ಸ್ಥಳ ನಿರ್ಧಾರವಾಗಿಲ್ಲ. 5 & 6ನೇ ಹಾಡು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಒಟ್ಟಿನಲ್ಲಿ ಹಾಡು ಬಿಡುಗಡೆಯ ಮೂಲಕವೇ ಚಿತ್ರಕ್ಕೆ ವಿಭಿನ್ನ ರೀತಿಯ ಪ್ರಚಾರ ನೀಡುತ್ತಿದೆ ಚಿತ್ರತಂಡ.

    Related Articles :-

    Hodi Ombatt Of Mugulu Nage Released In Hubli

    Mugulu Nage Shooting Completed With A Song

    Mugulu Nage Audio In July First Week

    Sharan Sings A Goan Song For Mugulu Nage

    Mugulu Nage Shooting Completed 

    Ganesh's New Look In Mugulu Nage Revealed

  • ಹಾರೈಕೆ ಇರಲಿ.. ಕ್ಷಮೆಯೂ ಇರಲಿ : ಗೋಲ್ಡನ್ ಸ್ಟಾರ್ ಗಣೇಶ್

    ಹಾರೈಕೆ ಇರಲಿ.. ಕ್ಷಮೆಯೂ ಇರಲಿ : ಗೋಲ್ಡನ್ ಸ್ಟಾರ್ ಗಣೇಶ್

    ಕೊರೊನಾ ಬಂದ ನಂತರ ಹಲವು ಸ್ಟಾರ್ ನಟರು ತಮ್ಮ ತಮ್ಮ ಹುಟ್ಟುಹಬ್ಬ ಆಚರಣೆ ಬಿಟ್ಟಿದ್ದಾರೆ. ಹೆಚ್ಚೂ ಕಡಿಮೆ 3 ವರ್ಷಗಳಾಗುತ್ತಿವೆ. ಇದರ ಮಧ್ಯೆ ಬ್ಯುಸಿ ಶೆಡ್ಯೂಲ್‍ಗಳೂ ಹುಟ್ಟುಹಬ್ಬ ಆಚರಣೆಯನ್ನು ದೂರ ಇಡುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಇದಕ್ಕಾಗಿಯೇ ಈ ಬಾರಿಯೂ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.

    ಜುಲೈ 2ಕ್ಕೆ ಗಣೇಶ್ ಹುಟ್ಟುಹಬ್ಬವಿದೆ. ಆ ದಿನ ನಾನು ಮನೆಯಲ್ಲಿ ಇರೋದಿಲ್ಲ.  ದಯವಿಟ್ಟು ಕ್ಷಮಿಸಿ. ನಿಮ್ಮ ಹಾರೈಕೆ ಇರಲಿ. ನನಗಾಗಿ ಆ ದಿನ ತರುವ ಹಾರ,  ತುರಾಯಿ, ಸಿಹಿಗಳನ್ನು ಅಗತ್ಯ ಇರುವವರಿಗೆ ತಲುಪಿಸಿ ಎಂದು ಮನವಿ ಮಾಡಿದ್ದಾರೆ ಗಣೇಶ್.

  • ಹಿಮಾಚಲದಲ್ಲೇ ಗಾಳಿಪಟ

    yogaraj bhat plans gaalipata 2 shooting in himachal pradesh

    ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ ಇಷ್ಟು ಹೊತ್ತಿಗೆ ಗಾಳಿಪಟ 2 ಚಿತ್ರ ವಿದೇಶದಲ್ಲೂ ಶೂಟಿಂಗ್ ಮುಗಿಸಿಕೊಂಡು ಬಂದು ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್‍ನಲ್ಲಿರುತ್ತಿತ್ತು. ಎಲ್ಲ ಯೋಜನೆಗಳನ್ನೂ ನುಂಗಿಹಾಕಿದ್ದು ಕಣ್ಣಿಗೆ ಕಾಣದ ಕೊರೊನಾ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ.

    `ಮೊದಲು ನಮ್ಮ ಪ್ಲಾನ್ ಇದ್ದದ್ದು ಉತ್ತರ ಭಾರತದಲ್ಲಿ ಶೂಟಿಂಗ್ ಅಂತ. ಆದರೆ ಅದು ಆನಂತರ ಯೂರೋಪ್‍ಗೆ ಶಿಫ್ಟ್ ಆಗಿತ್ತು. ಈಗ ವಿದೇಶಗಳಿಗೆ ಹೋಗೋ ಹಾಗಿಲ್ಲ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಮಾಡೋ ಪ್ಲಾನ್ ಇದೆ. ಲೊಕೇಷನ್ ಕೂಡಾ ಹೊಂದಾಣಿಕೆಯಾಗುತ್ತಿದೆ' ಎಂದಿದ್ದಾರೆ ಯೋಗರಾಜ್ ಭಟ್.

    ಗಣೇಶ್, ದಿಗಂತ್, ಲೂಸಿಯಾ ಪವನ್ ಮತ್ತು ಅನಂತ್ ನಾಗ್ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರವಿದು.

  • ಹೆಣ್ಮಕ್ಕಳಿಗಾಗಿ..ಹೆಣ್ಮಕ್ಕಳಿಗೆ ಮಾತ್ರ - ಮುಗುಳುನಗೆ ಸ್ಪೆಷಲ್

    mugulnage special

    ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದು ಬರೆದ ಯೋಗರಾಜ್ ಭಟ್ಟರು, ಮುಗುಳುನಗೆ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ಮುಗುಳುನಗೆ ಚಿತ್ರದ ಸ್ಪೆಷಲ್ ಶೋವೊಂದನ್ನು ಹೆಣ್ಣು ಮಕ್ಕಳಿಗಾಗಿಯೇ ಆಯೋಜಿಸುವ ಪ್ಲಾನ್ ಮಾಡಿದ್ದಾರೆ. 

    ಚಿತ್ರದಲ್ಲಿ ನಾಲ್ವರು ಹೆಣ್ಣುಮಕ್ಕಳ ಪಾತ್ರಗಳಿವೆ. ಭಟ್ಟರ ಮೇಲಿರೋ ಕಂಪ್ಲೇಂಟು ಎಂದರೆ, ಅವರ ಚಿತ್ರಗಳಲ್ಲಿ ಪಾತ್ರಗಳಿರುತ್ತವೆ, ಕಥೆಗಳಿರಲ್ಲ ಅನ್ನೋದು. ಅದೆಲ್ಲ ಸೇಡು ತೀರಿಸಿಕೊಳ್ಳುವವರ ಹಾಗೆ, ಈ ಚಿತ್ರದಲ್ಲಿ 5 ಕಥೆ ಹೇಳುತ್ತಾರಂತೆ ಭಟ್ಟರು.

    ಅದೇನೇ ಇರಲಿ, ಭಟ್ಟರ ಸ್ಟ್ರಾಂಗ್ ಹೆಣ್ಮಕ್ಕಳ ಪ್ರೀತಿಗೆ ಜಯವಾಗಲಿ.

  • ಹೇಳದೆ ಕೇಳದೆ ಜೀವವೂ ಜಾರಿದೆ.. - ಗಣೇಶ್-ಪಾರ್ವತಿ ಪ್ರೇಮ`ಗೀತ'

    geetha romantic song releasd

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಯುಗಳ ಗೀತೆಯಿದು. ಹೇಳದೆ ಕೇಳದೆ ಜೀವವೂ ಜಾರಿದೆ.. ಹಾಡಿನ ಲಿರಿಕಲ್ ವಿಡಿಯೋ ಹೊರಬಂದಿದೆ. ಗೌಸ್‍ಪೀರ್ ಸಾಹಿತ್ಯಕ್ಕೆ ರಾಜೇಶ್ ಕೃಷ್ಣನ್, ಅನನ್ಯಾ ಭಟ್ ಧ್ವನಿ ಕೊಟ್ಟಿದ್ದಾರೆ. ಅನೂಪ್ ರುಬೆನ್ಸ್ ಸಂಗೀತದಲ್ಲಿ ಮೂಡಿ ಬಂದಿರೋ ಇಂಪಾದ ಹಾಡು ಎಲ್ಲರ ಮನಗೆದ್ದಿದೆ.

    ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕ. 1980ರ ಕಾಲದ ಕಥೆ ಇದಾಗಿದ್ದು, ಗಣೇಶ್ ಶಂಕರ್‍ನಾಗ್ ಅಭಿಮಾನಿಯಾಗಿ, ಕನ್ನಡ ಹೋರಾಟಗಾರರಾಗಿ ನಟಿಸಿದ್ದಾರೆ.