` golden star ganesh, - chitraloka.com | Kannada Movie News, Reviews | Image

golden star ganesh,

  • ಜೈ ಮುಂಗಾರು ಮಳೆ.. ಜೈ ಜನತೆ.. ಜೈ ಜೀವನ.. : ಗಣಪ-ಯೋಗ್ರಾಜ್ ಭಟ್

    Mungaru Male Completes 14 Years

    ಡಿಸೆಂಬರ್ 29, 2004. ಆ ಚಿತ್ರವೂ ರಿಲೀಸ್ ಆಗಿತ್ತು. ಇಬ್ಬರು ಸ್ಟಾರ್‍ಗಳೂ ಉದಯಿಸಿದ್ದರು. ಆ ಚಿತ್ರಕ್ಕೀಗ 14ನೇ ವರ್ಷದ ಮುಂಗಾರು. ಕನ್ನಡ ಚಿತ್ರರಂಗದಲ್ಲಿ ಸಿಡಿಲು, ಗುಡುಗು ಇಲ್ಲದೆಯೇ ಮಿಂಚು ಹರಿಸಿದ, ದಾಖಲೆಗಳ ಪ್ರವಾಹ ಸೃಷ್ಟಿಸಿದ ಮುಂಗಾರು ಮಳೆಯ 14ನೇ ಹುಟ್ಟುಹಬ್ಬವನ್ನು ಯೋಗರಾಜ್ ಭಟ್ ಮತ್ತು ಗಣೇಶ್ ಇಬ್ಬರೂ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

    ನಾವಿಬ್ಬರೂ.. ಜೊತೆಗೆ ಇಡೀ ತಂಡ

    ಆಗ ತಾನೇ ಕಣ್ತೆರೆದ

    ಶಿಶುಗಳಂತೆ ಮಂಗಾರು ಮಳೆ

    ಚಿತ್ರ ಮಾಡಿ, ಜನತೆಗೆ ಅರ್ಪಿಸಿ

    ಇಂದಿಗೆ 14 ವರ್ಷಗಳಾಗಿವೆ.

    ಚಿತ್ರಕ್ಕಷ್ಟೇ ಅಲ್ಲದೆ.. ನಮ್ಮಿಬ್ಬರಿಗೂ

    ಇದು ಒಂದು ರೀತಿಯ ಹುಟ್ಟುಹಬ್ಬ

    ಕೆಲಸ ಕಲಿಸಿದ, ಬದುಕು ಕೊಟ್ಟ

    ಪ್ರೀತಿ ತಿಳಿಸಿದ, ನಾಡು ನಲಿಸಿದ

    ಈ ಪ್ರೇಕ್ಷಕರ ಆಸ್ತಿಯಂತಹ

    ಮಹಾನ್ ಚಿತ್ರಕ್ಕೆ ನಮ್ಮಿಬ್ಬರ

    ದೀರ್ಘದಂಡ ನಮಸ್ಕಾರಗಳು

    ಜೈ ಮುಂಗಾರು ಮಳೆ..

    ಜೈ ಜನತೆ..

    ಜೈ ಜೀವನ..

    ಗಣಪ-ಯೋಗ್ರಾಜ್ ಭಟ್

  • ಜೊತೆ ಜೊತೆಯಲಿ ಅನುಗೆ ಗೋಲ್ಡನ್ ಚಾನ್ಸ್..!

    Jothe Jotheyali Fame Anushree Paired Opposite Ganesh In 'Triple Riding'

    ಜೊತೆ ಜೊತೆಯಲಿ, ಝೀ ಕನ್ನಡದಲ್ಲಿ ಪ್ರಸಾರಾವಾಗುತ್ತಿರೋ ಅತ್ಯಂತ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಅನಿರುದ್ಧರಷ್ಟೇ ಜನಪ್ರಿಯರಾಗಿರೋದು ನಾಯಕಿ ಅನು ಅಲಿಯಾಸ್ ಮೇಘಾ ಶೆಟ್ಟಿ. ಅವರಿಗೀಗ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಮೇಘಾ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರಕ್ಕೆ ನಾಯಕಿಯಾಗಿ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ನನ್ನದು ಹೋಮ್ಲಿ ಕ್ಯಾರೆಕ್ಟರ್. ಚಿತ್ರದ ಕಥೆಯನ್ನು ನಾನಿನ್ನೂ ಪೂರ್ತಿ ಕೇಳಿಲ್ಲ. ನನ್ನ ತಂಗಿ ಕಥೆ ಕೇಳಿ ಓಕೆ ಮಾಡಿದ್ಲು. ಅಕ್ಟೋಬರ್ 2ನೇ ವಾರದಿಂದ ಶೂಟಿಂಗ್ ಶುರು ಎಂದಿದ್ದಾರೆ ಮೇಘಾ ಶೆಟ್ಟಿ.

    ಮಹೇಶ್ ಗೌಡ ಚಿತ್ರದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದರೂ, ಜೊತೆ ಜೊತೆಯಲಿ ಧಾರಾವಾಹಿ ಬಿಡಲ್ಲ ಎಂದಿದ್ದಾರೆ ಮೇಘಾ.

  • ಟಾಕೀಸ್​ಗೆ ಬಂತು ಮುಗುಳುನಗೆ ಹಾಡು

    mugulunage image

    ಮುಗುಳುನಗೆ ಸಿನಿಮಾ ಹಿಟ್ ಆಗುವ ಹಾದಿಯಲ್ಲಿದೆ. ಮುಂಗಾರು ಮಳೆ ದಾಖಲೆ ಮುರಿದರೂ ಆಶ್ಚರ್ಯವಿಲ್ಲ. ಆದರೆ, ಸಿನಿಮಾ ನೋಡಿದವರಿಗೆ ಚಿತ್ರದ ಟೈಟಲ್ ಸಾಂಗ್ ಮಿಸ್ಸಾಗಿದೆ ಎಂಬ ಬೇಸರ ಕಾಡಿತ್ತು. ಚಿತ್ರ ನೋಡಿದ ಹಲವರು ಈ ಬಗ್ಗೆ ಬೇಸರ ತೋಡಿಕೊಂಡಿದ್ದರು. 

    ಪ್ರೇಕ್ಷಕರಿಗೆ ಇಷ್ಟೊಂದು ಇಷ್ಟವಾಗಿದ್ದ ಆ ಹಾಡನ್ನು ಈಗ ಚಿತ್ರತಂಡ ಥಿಯೇಟರಿಗೆ ಬಿಟ್ಟಿದೆ. ಮೊದಲ ವಾರದಲ್ಲಿ ಮಿಸ್ ಆಗಿದ್ದ ಮುಗುಳುನಗೆಯ ಹಾಡು ಇನ್ನು ಮೇಲೆ ಚಿತ್ರಮಂದಿರದಲ್ಲೂ ಕಾಣಿಸಲಿದೆ.ಪ್ರೇಕ್ಷಕರ ಒತ್ತಾಯದ ಮೇರೆಗೆ ಚಿತ್ರದಲ್ಲಿ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಶೀರ್ಷಿಕೆ ಗೀತೆಯನ್ನ ಸೇರಿಸಲಾಗಿದೆ.

  • ಟೀಚರ್ ಸ್ಟೂಡೆಂಟ್ ಲವ್ ಸ್ಟೋರಿ ಮಿಸ್ಟರಿ ಏನು?

    ಟೀಚರ್ ಸ್ಟೂಡೆಂಟ್ ಲವ್ ಸ್ಟೋರಿ ಮಿಸ್ಟರಿ ಏನು?

    ಗಾಳಿಪಟದಲ್ಲಿ ಡೈಸಿ ಬೋಪಣ್ಣ ಟೀಚರ್. ಗಣೇಶ್ ಸ್ಟೂಡೆಂಟ್ ಅಲ್ಲ. ಅಲ್ಲಿ ಅದೊಂಥ....ರಾ ಲವ್ ಸ್ಟೋರಿಯಿತ್ತು. ಇಲ್ಲಿ ಪವನ್ ಸ್ಟೂಡೆಂಟ್. ಶರ್ಮಿಳಾ ಮಾಂಡ್ರೆ ಟೀಚರ್. ಇದು ಇನ್ನೊಂದ್‍ತರಾ ಲವ್ ಸ್ಟೋರಿ... ಇದು ಭಟ್ಟರ ಗಾಳಿಪಟ 2.

    ಟೀಚರ್ ಹೌದು. ಹಾಗಂತ ತುಂಬಾ ವಯಸ್ಸಾದ ಟೀಚರ್ ಅಲ್ಲ. ಹಾಗಂತ ಇದು ಕಂಪ್ಲೀಟ್ ಸ್ಟೂಡೆಂಟ್ ಟೀಚರ್ ಲವ್ ಸ್ಟೋರಿಯೂ ಅಲ್ಲ. ಪವನ್ ಕುಮಾರ್ ಪಾಯಿಂಟ್ ಆಫ್ ವ್ಯೂನಿಂದ ಲವ್ ಶುರುವಾಗುತ್ತೆ. ಶಾಲೆ, ಕಾಲೇಜುಗಳಲ್ಲಿ ಪ್ರತಿಯೊಬ್ಬರಿಗೂ ಟೀಚರ್ ಮೇಲೆ ಕ್ರಷ್ ಇರುತ್ತದೆ. ಅದನ್ನೇ ಯೋಗರಾಜ್ ಭಟ್ರು ತೆರೆ ಮೇಲೆ ಲವಲವಿಕೆಯಿಂದ ತಂದಿದ್ದಾರೆ ಎಂದಿರೋದು ಶರ್ಮಿಳಾ ಮಾಂಡ್ರೆ.

    ಜೊತೆಗೆ ಗಾಳಿಪಟದಲ್ಲಿ ಶರ್ಮಿಳಾ ಮಾಡಿರೋ ಫಿಶ್ ಡೈ ಸಖತ್ತಾಗಿ ಕ್ಲಿಕ್ ಆಗಿದೆ. ಗಾಳಿಪಟಕ್ಕೂ ನಾನೇ ಹೀರೋಯಿನ್ ಆಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು. ಈಗ ಮತ್ತೊಮ್ಮೆ ಗಾಳಿಪಟ 2ನಲ್ಲಿ ಹೀರೋಯಿನ್. ಅದೇ ಖುಷಿ. ನನಗೂ ತೆರೆ ಮೇಲೆ ಬಂದು ತುಂಬಾ ವರ್ಷಗಳಾಗಿವೆ. ಹೀಗಾಗಿ ನನಗೂ ಕ್ಯೂರಿಯಾಸಿಟಿ ಇದೆ ಎಂದಿದ್ದಾರೆ ಶರ್ಮಿಳಾ ಮಾಂಡ್ರೆ.

    ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಬೇರೆಯದೇ ಕ್ರೇಜ್ ಸೃಷ್ಟಿಸಿದೆ.

  • ಟ್ಟಾ.. ಯಟ್ಟಾ.. ಯಟ್ಟಾ.. : ಮೂವರು ಹೀರೋಯಿನ್ಸ್ ಜೊತೆ ಗಣೇಶ್ ತ್ರಿಬಲ್ ರೈಡಿಂಗ್

    ಟ್ಟಾ.. ಯಟ್ಟಾ.. ಯಟ್ಟಾ.. : ಮೂವರು ಹೀರೋಯಿನ್ಸ್ ಜೊತೆ ಗಣೇಶ್ ತ್ರಿಬಲ್ ರೈಡಿಂಗ್

    ಆದಿತಿ ಪ್ರಭುದೇವ..

    ಮೇಘಾ ಶೆಟ್ಟಿ...

    ರಚನಾ ಇಂದರ್..

    ಮೂವರೂ ಮುದ್ದು ಮುದ್ದಾಗಿ ಬಂದು ಗಣೇಶ್ ಕೆನ್ನೆ ಹಿಂಡುತ್ತಾರೆ. ಗಣೇಶ್ ನಾಚಿಕೊಳ್ತಾರೆ. ಇದು ತ್ರಿಬಲ್ ರೈಡಿಂಗ್ ಚಿತ್ರದ ಯಟ್ಟಾ..ಯಟ್ಟಾ..ಯಟ್ಟಾ.. ಸಾಂಗು.

    ಇದು ಮಹೇಶ್ ಗೌಡ ನಿರ್ದೇಶನದ ಸಿನಿಮಾ. ಚಿತ್ರದ ಮೊದಲ ಝಲಕ್ ತೋರಿಸಿದ್ದಾರೆ ಮಹೇಶ್. ರಾಮ್‍ಗೋಪಾಲ್ ನಿರ್ಮಾಣದ ಚಿತ್ರದ ಈ ಹಾಡಿಗೆ ಸಾಹಿತ್ಯ ಒದಗಿಸಿರೋದು ಚಂದನ್ ಶೆಟ್ಟಿ. ತಮ್ಮದೇ ಸಾಹಿತ್ಯಕ್ಕೆ ಧ್ವನಿಯೂ ಅವರದ್ದೇ. ಚಂದನ್ ಶೆಟ್ಟಿ ಜೊತೆ ಮಾದಕವಾಗಿ ಹಾಡಿರೋದು ಮಂಗ್ಲಿ. ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನವಿದೆ.

  • ಟ್ವಿಂಕಲ್ ಟ್ವಿಂಕಲ್ ರೀಲ್ಸ್ ಮಾಡಿ.. ಅವರ ಜೊತೆ ರೈಡ್ ಹೋಗಿ..

    ಟ್ವಿಂಕಲ್ ಟ್ವಿಂಕಲ್ ರೀಲ್ಸ್ ಮಾಡಿ.. ಅವರ ಜೊತೆ ರೈಡ್ ಹೋಗಿ..

    ಗೋಲ್ಡನ್ ಸ್ಟಾರ್ ಗಣೇಶ್. ಆದಿತಿ ಪ್ರಭುದೇವ. ಮೇಘಾ ಶೆಟ್ಟಿ. ರಚನಾ ಇಂದರ್.. ಇವರೆಲ್ಲರ ಜೊತೆ ರೈಡ್ ಹೋಗಬಹುದು. ಬೈಕಿನಲ್ಲೇ. ನೀವು ಮಾಡಬೇಕಾದ್ದು ಇಷ್ಟೆ. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡಿನಲ್ಲಿ ಗಣೇಶ್ ಅವರು ಹಾಕಿರೋ ಸಿಂಪಲ್ ಸ್ಟೆಪ್ಸ್‍ನ ರೀಲ್ಸ್ ಮಾಡಬೇಕು. ಸ್ಟೆಪ್ ಸಖತ್ತಾಗಿದ್ದರೆ ಗಣೇಶ್, ಆದಿತಿ ಮತ್ತು ಮೇಘಾ ಅವರ ಜೊತೆ ರೈಡ್ ಹೋಗಬಹುದು. ತ್ರಿಬಲ್ ರೈಡಿಂಗ್ ಚಿತ್ರದ ಆಫರ್ ಇದು.

    ಮುಗುಳುನಗೆ ನಂತರ ಗಣೇಶ್ ಚಿತ್ರದಲ್ಲಿ ಇಷ್ಟೊಂದು ಹೀರೋಯಿನ್ಸ್ ಇದ್ದಾರೆ. ಕಾಮಿಡಿ ರೊಮ್ಯಾಂಟಿಕ್ ಮೂವಿಗೆ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ತ್ರಿಬಲ್ ರೈಡಿಂಗ್ ನವೆಂಬರ್ 25ರಂದು ರಿಲೀಸ್ ಆಗುತ್ತಿದೆ.

    ಗೂಗಲ್ಲಿನಲ್ಲೂ ಇಲ್ಲ.. ಅಂತೋನು ಈ ರಂಗೀಲ..

    ಎಲ್ಲಾನೂ ಖುಲ್ಲಂಖುಲ್ಲಾ..

    ಈ ಸೆಂಚುರಿ ಸುಂದರ ನಮ್ ಗಣಪ.. ಎಂದು ಶುರುವಾಗುವ ಹಾಡನ್ನ ಕ್ಯಾರಿ ಮಾಡುವುದೇ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್. ಹೀ ಈಸ್ ದ ಗೋಲ್ಡನ್ ಸ್ಟಾರ್.. ರಿದಮ್.

    ಸಾಯಿ ಕಾರ್ತಿಕ್ ಸಂಗೀತ ಕುಣಿದು ಕುಪ್ಪಳಿಸುವಂತ ಮ್ಯೂಸಿಕ್ಕಿದೆ. ವಿಜಯ್ ಪ್ರಕಾಶ್ ಹಾಡಿರುವ ಹಾಡಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಕೊಟ್ಟಿದ್ದಾರೆ.

  • ಡಿ.7ಕ್ಕೆ ಗೋಲ್ಡನ್ ಸ್ಟಾರ್ V/s ಹ್ಯಾಟ್ರಿಕ್ ಹೀರೋ

    shivanna's kavachan and ganesh;s orange to clash on same day

    2019ರ ಡಿಸೆಂಬರ್ ಸ್ಟಾರ್ ವಾರ್‍ಗೆ ಸಾಕ್ಷಿಯಾಗುತ್ತಾ..? ಅಂಥಾದ್ದೊಂದು ಲೆಕ್ಕಾಚಾರ, ನಿರೀಕ್ಷೆಗಳು ಗರಿಗೆದರುತ್ತಿವೆ. ಡಿಸೆಂಬರ್ 21ಕ್ಕೆ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅದೇ ದಿನ ಉಪೇಂದ್ರ-ರಚಿತಾ ರಾಮ್-ಎ.ಪಿ.ಅರ್ಜುನ್ ಕಾಂಬಿನೇಷನ್‍ನ ಐ ಲವ್ ಯು ತೆರೆ ಕಾಣುವ ಸಾಧ್ಯತೆ ಇದೆ. ಹೀಗಿರುವಾಗಲೇ ಅದಕ್ಕೂ ಮೊದಲು ಡಿಸೆಂಬರ್ 7ಕ್ಕೆ ಶಿವಣ್ಣ ಮತ್ತು ಗಣೇಶ್ ಚಿತ್ರಗಳು ಮುಖಾಮುಖಿಯಾಗಲಿವೆ.

    ಡಿಸೆಂಬರ್ 7ಕ್ಕೆ ಗಣೇಶ್ ಅಭಿನಯದ ಆರೆಂಜ್ ರಿಲೀಸ್ ಆಗುತ್ತಿದೆ. ಅದೇ ದಿನ ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರವೂ ರಿಲೀಸ್ ಆಗುವ ಸಾಧ್ಯತೆ ಇದೆ.

    ಆರೆಂಜ್, ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ. ರಾಜಕುಮಾರಿ ಪ್ರಿಯಾ ಆನಂದ್ ನಾಯಕಿ. ಜೂಮ್ ಚಿತ್ರದ ನಂತರ ಗಣೇಶ್-ಪ್ರಶಾಂತ್ ರಾಜ್ ಒಂದಾಗಿರುವ ಸಿನಿಮಾ ಇದು.

    ಇನ್ನು ಕವಚ, ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಹಲವು ವರ್ಷಗಳ ನಂತರ ಶಿವಣ್ಣ ಇಷ್ಟಪಟ್ಟು ನಟಿಸಿರುವ ರೀಮೇಕ್ ಸಿನಿಮಾ. ಇಶಾ ಕೊಪ್ಪಿಕರ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಶಿವಣ್ಣ, ಅಂಧನಾಗಿ ನಟಿಸಿದ್ದಾರೆ. 

    ಇಬ್ಬರು ಸ್ಟಾರ್‍ಗಳ ಸಿನಿಮಾ ಒಂದೇ ದಿನ ಬಂದರೆ, ಡಿಸೆಂಬರ್ 7 ಧಮಾಕಾ ಸೃಷ್ಟಿಸಲಿದೆ.

  • ಡಿಜಿಟಲ್ ಮಾರ್ಕೆಟ್ಟಿನಲ್ಲಿ ಗೀತಾಗೆ ಬಂಪರ್

    ganesh's geeth gets good price at digital market

    ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶ್ರೀವಾಸ್ತವ್ ಅಭಿನಯಿಸುತ್ತಿರುವ ಗೀತಾ ಸಿನಿಮಾ, ರಿಲೀಸ್ ಆಗುವುದಕ್ಕೂ ಮೊದಲೇ ಭರ್ಜರಿಯಾಗಿ ಸೇಲ್ ಆಗುತ್ತಿದೆ. ವಿಜಯ್ ನಾಗೇಂದ್ರ ಚೊಚ್ಚಲ ನಿರ್ದೇಶನದ ಗೀತಾ, ಟೈಟಲ್ ಕಾರಣದಿಂದಾಗಿಯೇ ದೊಡ್ಡ ನಿರೀಕ್ಷೆ ಮೂಡಿಸಿದೆ. 

    ಶಂಕರ್‍ನಾಗ್ ಅವರ ಕ್ಲಾಸಿಕ್ ಸಿನಿಮಾಗಳಲ್ಲಿ ಗೀತಾ ಕೂಡಾ ಒಂದು. ಅದೇ ಟೈಟಲ್ಲಿನಲ್ಲಿ ಮತ್ತೆ ಬರುತ್ತಿರುವ ಚಿತ್ರದಲ್ಲಿ ಗಣೇಶ್‍ಗೆ ಶಾನ್ವಿ ಒಬ್ಬರೇ ಅಲ್ಲ, ಇನ್ನೂ ಇಬ್ಬರು ನಾಯಕಿಯರಿದ್ದಾರೆ. ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ಕೂಡಾ ನಾಯಕಿಯರು.

    ಈ ಚಿತ್ರ ಈಗ ಅಮೇಜಾನ್‍ಗೆ 2.75 ಕೋಟಿಗೆ ಸೇಲ್ ಆಗಿದೆಯಂತೆ. ಶೂಟಿಂಗ್ ಮುಗಿದು, ಪ್ರಥಮ ಪ್ರತಿ ಬರುವುದಕ್ಕೂ ಮೊದಲು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಚಿತ್ರದ ನಿರ್ಮಾಪಕರ ಖುಷಿ ಹೆಚ್ಚಿಸಿದೆ. 

  • ತೆಲುಗಿಗೂ ಚಮಕ್ ಚಮಕ್ ಚಲೋ..

    chamak in telugu

    ಚಮಕ್. ಗಣೇಶ್, ರಶ್ಮಿಕಾ ಅಭಿನಯದ ಸಿನಿಮಾ ಈಗ ಸೂಪರ್ ಹಿಟ್. ನಿರ್ದೇಶಕ ಸುನಿ ಪ್ರೇಕ್ಷಕರ ಹೃದಯಗಳಲ್ಲಿ ಕಚಗುಳಿ ಇಡುವುದರಲ್ಲಿ ಗೆದ್ದುಬಿಟ್ಟಿದ್ದಾರೆ. ಚಿತ್ರ ಈಗ ಹೊರರಾಜ್ಯ, ವಿದೇಶಗಳಲ್ಲೂ ತೆರೆ ಕಾಣುತ್ತಿದೆ. ಹೀಗಿರುವಾಗಲೇ ಚಮಕ್ ಚಿತ್ರವನ್ನು ತೆಲುಗಿನಲ್ಲೂ ನಿರ್ಮಿಸಲು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮುಂದಾಗಿದ್ದಾರೆ.

    ಸಿನಿಮಾವನ್ನು ತೆಲುಗಿಗೆ ರೀಮೇಕ್ ಮಾಡಲು ಹಲವರು ರೈಟ್ಸ್ ಕೇಳಿಕೊಂಡು ಬಂದಿದ್ದರಂತೆ. ಆದರೆ, ಯಾರಿಗೂ ಸಿನಿಮಾ ಹಕ್ಕುಗಳನ್ನು ಕೊಡದ ಚಂದ್ರಶೇಖರ್, ತೆಲುಗಿನಲ್ಲಿಯೂ ತಾವೇ ಚಿತ್ರ ನಿರ್ಮಿಸಲು ನಿರ್ಧರಿಸಿದ್ದಾರೆ. ತೆಲುಗಿಗೆ ಪರಿಚಯವಾಗುತ್ತಿರುವ ರಶ್ಮಿಕಾ ಅವರನ್ನೇ ತೆಲುಗು ಚಮಕ್‍ನಲ್ಲೂ ಮುಂದುವರಿಸಲು ತೀರ್ಮಾನಿಸಿರುವ ಚಂದ್ರಶೇಖರ್, ಹೀರೋ ಪಾತ್ರಕ್ಕೆ ನಾನಿ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆಯಲ್ಲಿದ್ದಾರೆ.

    ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ. ತಂತ್ರಜ್ಞರನ್ನೂ ಸೇರಿದಂತೆ ಕೆಲವರನ್ನು ಸಂಪರ್ಕಿಸಲಾಗಿದೆ. ಸದ್ಯಕ್ಕೆ ಚಮಕ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಮಲ್ಟಿಪ್ಲೆಕ್ಸ್‍ಗಳಲ್ಲಿ ಚಿತ್ರದ ಶೋಗಳನ್ನು ಹೆಚ್ಚಿಸಲಾಗಿದೆ. ಅಮೆರಿಕದಲ್ಲಿ 30 ಹಾಗೂ ಕೆನಡಾದಲ್ಲಿ 2 ಕೇಂದ್ರಗಳಲ್ಲಿ ಕೂಡಾ ಚಮಕ್ ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. 

  • ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್

    ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್

    ಹೊಲ್ಟೋಗಿರೋ ಹುಡ್ಗೀರೆಲ್ಲ ಹಂಗೇ ವಾಪಸ್ ಬಂದವ್ರಲ್ಲ..

    ಪ್ರೀತಿಸ್ಬೇಕಾ... ಪ್ರೀತಿಸ್ಬಾರ್ದಾ ಕರೆಕ್ಟಾಗಿ ಹೇಳು ದೇವ್ಲೇ ..

    ಮಕಾಡೆ ಮಲ್ಲಿಕ್ಕಂಡ್ರೆ ತುಕಾಲಿ ಕನಸುಗಳು.. ಅಂಗಾತ ಮಲ್ಲಿಕ್ಕಂಡ್ರೆ ಫ್ಲಾಷ್ ಬ್ಯಾಕೆಲ್ಲ ಬೆಂಕಿ ದೇವ್ಲೇ..

    ಗಟ ಗಟ ಬೀರು.. ಕುಡಿದರೆ ನೀರು..

    ನಾವು ಎಣ್ಣೇ ಬಿಟ್ರೂ ಎಣ್ಣೆ ನಮ್ಮನ್ ಬಿಡ್ತಾ ಇಲ್ಲ..

    ಭಟ್ಟರ ಫಿಲಾಸಫಿಯನ್ನು ಎಣ್ಣೆಯೊಂದಿಗೆ ಬೆರೆಸಿ ಕ್ಲಾಸಿಕ್ ಎಣ್ಣೆ ಸಾಂಗ್ ಕೊಟ್ಟಿದ್ದಾರೆ ಭಟ್ಟರು.

    ಭಟ್ಟರ ಸಾಹಿತ್ಯಕ್ಕೆ ಅಷ್ಟೇ ಖಡಕ್ಕಾಗಿ.. ಫುಲ್ ಟೈಟಾಗಿ ಹಾಡಿರೋದು ವಿಜಯ್ ಪ್ರಕಾಶ್. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಗಣೇಶ್-ದಿಗಂತ್-ಪವನ್ ಜೋಡಿ ಕುಣಿದಾಡಿದೆ.

    ಭಟ್ಟರ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ಇದ್ದರೆ ಸಾಕು. ಹಾಗೆಯೇ ಕಿಕ್ಕೇರಿಸುತ್ತೆ. ಎಣ್ಣೆ ಹೊಡೀಬೇಕಿಲ್ಲ ಅನ್ನೋದು ಗಣೇಶ್ ಕಾಂಪ್ಲಿಮೆಂಟು. ಈ ಮೊದಲಿನ ಎಣ್ಣೆ ಸಾಂಗುಗಳಿಗಿಂತ ಈ ಹಾಡು ಸ್ವಲ್ಪ ಡಿಫರೆಂಟ್ ಎನ್ನಿಸೋದು ರ ಜಾಗದಲ್ಲಿ ಲ ಸೇರಿಸಿರೋದು. ಅದನ್ನು ಸೇರಿಸಿದ ಮೇಲೆ ಹಾಡಿಗೆ ಬೇರೆಯದ್ದೇ ಖದರ್ ಬಂತು ಅಂತಾರೆ ಭಟ್ಟರು.

  • ನ.25ಕ್ಕೆ ತ್ರಿಬಲ್ ರೈಡಿಂಗ್

    ನ.25ಕ್ಕೆ ತ್ರಿಬಲ್ ರೈಡಿಂಗ್

    ಗಾಳಿಪಟ 2 ಸಕ್ಸಸ್ ಜೋಷ್‍ನಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಆದಿತಿ ಪ್ರಭುದೇವ, ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ಜೊತೆ ತ್ರಿಬಲ್ ರೈಡಿಂಗ್ ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್‍ಗೆ ಮೂರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸು ಸಿಕ್ಕಿದೆ. ಆಫರ್ ಕೊಡಿಸಿರುವುದು ಡೈರೆಕ್ಟರ್ ಮಹೇಶ್ ಗೌಡ ಮತ್ತು ಪ್ರೊಡ್ಯೂಸರ್ ವೈ.ಎಂ.ರಾವ್.

    ನ.25ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಚಾರವೂ ಶುರುವಾಗಿದೆ. ಮೇಕಿಂಗ್ ಅದ್ಧೂರಿಯಾಗಿದ್ದು ನಿರ್ದೇಶಕ ಮಹೇಶ್ ಗೌಡ ಬಗ್ಗೆ ಪ್ರೀತಿಯ ಮಾತು ಹೇಳಿದ್ದಾರೆ ಗಣೇಶ್. ಮುಂಗಾರು ಮಳೆಯಿಂದ ಶುರುವಾದ ಪರಿಚಯ 15 ವರ್ಷಗಳ ನಂತರ ಸಿನಿಮಾ ಮಾಡುವುದಕ್ಕೆ ಪ್ರೇರೇಪಿಸಿದೆ. ಇಡೀ ಸಿನಿಮಾ ಕಾಮಿಡಿ.. ಕಾಮಿಡಿ.. ಕಾಮಿಡಿ.. ಕೊನೆಯ 20 ನಿಮಿಷವಂತೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ ಎಂಬ ಭರವಸೆ ಕೊಟ್ಟಿದ್ದಾರೆ ಗಣೇಶ್.

    ಚಿತ್ರದಲ್ಲಿ ಮೇಘಾ ಶೆಟ್ಟಿ ಡಾಕ್ಟರ್. ರಚನಾ ಇಂದರ್ ಹಠಮಾರಿ  ಹುಡುಗಿ. ಸಾಯಿ ಕಾರ್ತಿಕ್ ಸಂಗೀತದಲ್ಲಿ ಯಟ್ಟಾಸಟ್ಟಾ.. ಹಾಡು ಈಗಾಗಲೇ ಹಿಟ್ ಆಗಿದೆ.

  • ನಗು..ನಗು..ನಗು.. ರರರಾ.. ಮದ್ಯೆ ರಾಮ ಸೃಷ್ಟಿಸುವ ನಗುವಿನ ದಂಗೆ..

    ನಗು..ನಗು..ನಗು.. ರರರಾ.. ಮದ್ಯೆ ರಾಮ ಸೃಷ್ಟಿಸುವ ನಗುವಿನ ದಂಗೆ..

     ಒಬ್ಬರಲ್ಲ..ಇಬ್ಬರಲ್ಲ..ಮೂವರು.. ಮೂವರೂ ಸುಂದರಿಯರೇ.. ಮೂವರೂ ಆತನಿಗೆ ಐ ಲವ್ ಯೂ ಹೇಳ್ತಾರೆ.. ರಮ್ಯಾ..ರಕ್ಷಿತಾ..ರಾಧಿಕಾ.. ಹೆಸರಿಗೆ ತಕ್ಕಂತೆಯೇ ಸೌಂದರ್ಯ ದೇವತೆಯರು. ಆ ಮೂರೂ ಜನ ಐ ಲವ್ ಯೂ ಎಂದರೂ ಆತ ಮಾತ್ರ ಏನೂ ಮಾಡೋಕಾಗಲ್ಲ..

    ರಮ್ಯಾ, ರಕ್ಷಿತಾ, ರಾಧಿಕಾ..ಅಂತಾ ಹೀರೋಯಿನ್ಸ್‍ಗೆ ಹೆಸರು ಕೊಟ್ಟು ನನ್ನನ್ನು ಮಾತ್ರ ರಾಮನನ್ನಾಗಿ ಮಾಡಿಬಿಟ್ಟಿದ್ದಾರೆ ಎಂದಿದ್ದಾರೆ ಗಣೇಶ್. ಗಣೇಶ್ ರೊಮ್ಯಾಂಟಿಕ್ ಹೀರೋ. ಕಾಮಿಡಿ ಗಣೇಶ್ ಪಾಲಿನ ಬ್ರಹ್ಮಾಸ್ತ್ರ. ಈ ಎರಡನ್ನೂ ಢಾಳಾಗಿ ತುಂಬಿಕೊಂಡಿರೋ ತ್ರಿಬ್ಬಲ್ ರೈಡಿಂಗ್ ಈ ವಾರ ರಿಲೀಸ್ ಆಗುತ್ತಿದೆ. ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿರೋ ಚಿತ್ರವಿದು. ಮಹೇಶ್ ಗೌಡ ನಿರ್ದೇಶನದಲ್ಲಿ ತಯಾರಾಗಿದೆ.

    ಮಹೇಶ್ ನನ್ನ ಬಳಿ ಎರಡು ಸ್ಟೋರಿ ತಂದರು. ಒಂದನ್ನು ನಾನು ಇಷ್ಟಪಟ್ಟೆ. ಅದನ್ನು ಡೆವಲಪ್ ಮಾಡಿ, ಚಿತ್ರಕಥೆಯೊಂದಿಗೆ ಬಂದರು. ಇನ್ನೂ ಇಷ್ಟವಾಯಿತು. ಸಿನಿಮಾ ನೋಡುವವರಿಗೆ ನಗುವಿನ ದಂಗೆಯೇಳುತ್ತದೆ. ಇದೊಂದು ರೀತಿ ಸಿನಿಮಾ ಶುರುವಾದಾಗಿನಿಂದ ಮುಗಿಯುವವರೆಗೆ ನಗುವೇ ನಗು. ಕೊನೆಯ 15 ನಿಮಿಷದಲ್ಲಂತೂ ನಗುವುದಕ್ಕೆ ಪುರುಸೊತ್ತು ಸಿಗುವುದಿಲ್ಲ. ಸಿನಿಮಾ ಬಂದರೆ ಹೋಗುವಾಗ ನಗು ನಗುತ್ತಾ ಹೋಗುತ್ತಾರೆ ಎನ್ನುವುದು ಗಣೇಶ್ ಕೊಡುವ ಕಾನ್ಫಿಡೆನ್ಸ್.

  • ನೋ ಲಾಸ್.. ನೋ ಪ್ರಾಫಿಟ್.. ಗೀತಾ ರಿಪೋರ್ಟ್

    geetha movie producer talks about geetha box office collecion

    ಗೀತಾ, ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ಅರಳಿದ ಪ್ರೇಮಕಥೆಯ ಸಿನಿಮಾ. ಕಥೆ, ಚಿತ್ರಕಥೆ ವಿಭಿನ್ನವಾಗಿದ್ದ ಕಾರಣಕ್ಕೆ ಪ್ರೇಕ್ಷಕರು ಇಷ್ಟಪಟ್ಟ ಸಿನಿಮಾ. ಗಣೇಶ್,ಶಾನ್ವಿ ಜೋಡಿಯ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕರು. ಈಗ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಕೊಟ್ಟಿದ್ದಾರೆ ನಿರ್ಮಾಪಕ ಸೈಯದ್ ಸಲಾಂ. ನೋ ಬಿಲ್ಡಪ್.. ನಥಿಂಗ್. ಇದ್ದದ್ದನ್ನು ಇದ್ದಂಗೆ ಹೇಳಿ ತಾವೇಕೆ ಡಿಫರೆಂಟ್ ಎಂದೂ ತೋರಿಸಿದ್ದಾರೆ.

    ಗೀತಾ ಚಿತ್ರದಿಂದ ನಂಗೆ ಲಾಸ್ ಆಗಿಲ್ಲ. ಲಾಭವೂ ಬಂದಿಲ್ಲ. ಹಾಕಿದ್ದ ಖರ್ಚಿನಷ್ಟು ಗಳಿಕೆಯಾಗಿದೆ. ಅಲ್ಲಿಗಲ್ಲಿಗೆ ಸರಿ ಹೋಗಿದೆ ಎಂದಿದ್ದಾರೆ ಸೈಯದ್.

    ನಟ ಗಣೇಶ್ ಮತ್ತು ನಿರ್ಮಾಪಕ ಸೈಯದ್ ಸಲಾಂ ಇಬ್ಬರದ್ದೂ ಒಂದೇ ಮಾತು, ಒಳ್ಳೆಯ ಚಿತ್ರ ಕೊಟ್ಟ ತೃಪ್ತಿ ಇದೆ. ಒಬ್ಬ ನಟನಾಗಿ ಇಂತಹ ಚಿತ್ರ ಕೊಟ್ಟಿದ್ದಕ್ಕೆ ನನಗಂತೂ ಹೆಮ್ಮೆಯಿದೆ. ಎಷ್ಟೋ ಬಾರಿ ಹಿಟ್ ಆದರೂ ಮನಸ್ಸಿಗೆ ತೃಪ್ತಿ ಇರಲ್ಲ. ಆದರೆ, ಗೀತಾ ಹಾಗಲ್ಲ, ಮನಸ್ಸಿಗೆ ಖುಷಿ ಕೊಟ್ಟ ಸಿನಿಮಾ ಎಂದಿದ್ದಾರೆ ಗಣೇಶ್.

    ಮೊದಲ ವಾರ 5 ಕೋಟಿ ಬ್ಯುಸಿನೆಸ್ ಮಾಡಿದ್ದ ಗೀತಾ, ಈಗಲೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ನಾನು ಹ್ಯಾಪಿ ಎಂದಿದ್ದಾರೆ ಸೈಯದ್ ಸಲಾಂ.

  • ಪರಭಾಷೆ ಚಿತ್ರಗಳಿಗೆ ಗಣೇಶ್ ಕೊಟ್ಟ ಎಚ್ಚರಿಕೆ

    ganesh talks about other language films

    ಗಣೇಶ್ ಅಭಿನಯದ ಗೀತಾ ತೆರೆಗೆ ಸಿದ್ಧವಾಗಿದೆ. ಇಡೀ ಚಿತ್ರದಲ್ಲಿ ಮೈ ರೋಮಾಂಚನಗೊಳಿಸುವ ಹಾಡು, ಪುನೀತ್ ಹಾಡಿರುವ ಕನ್ನಡಿಗ.. ಕನ್ನಡಿಗ.. ಎಂಬ ಹಾಡು. ಎಂತಹವರನ್ನೂ ಬಡಿದೆಬ್ಬಿಸುವಂತಿರುವ ಹಾಡಿನಲ್ಲಿ ಕನ್ನಡ ಹೋರಾಟದ ಧ್ವನಿಯಿದೆ. ಸ್ಫೂರ್ತಿ ಇದೆ. ಗೀತಾ ಚಿತ್ರದ ಕಥೆಯಲ್ಲಿ ಗೋಕಾಕ್ ಚಳವಳಿಯ ನೆರಳಿದೆ. ಅಂಥಾದ್ದೊಂದು ಚಿತ್ರವನ್ನು ತೆರೆಗೆ ತರುತ್ತಿರುವ ಗಣೇಶ್, ಪರಭಾಷೆ ಚಿತ್ರಗಳಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

    ಗೀತಾ ನಾಳೆ ರಿಲೀಸ್ ಆಗುತ್ತಿದ್ದರೆ, ಮುಂದಿನ ವಾರ ಚಿರಂಜೀವಿ ಅಭಿನಯದ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿ ಬರಲಿದೆ. ಜೊತೆಗೆ ಹೃತಿಕ್ ರೋಷನ್, ಟೈಗರ್ ಶ್ರಾಫ್ ಅಭಿನಯದ ಹಿಂದಿ ಸಿನಿಮಾ ವಾರ್ ರಿಲೀಸ್ ಆಗುತ್ತಿದೆ. ಸಾಮಾನ್ಯವಾಗಿ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬಂದಾಗ ಮೊದಲು ಹೊಡೆತ ತಿನ್ನುವುದೇ ಕನ್ನಡ ಚಿತ್ರಗಳು. ಚಿತ್ರವನ್ನು ಹೆಚ್ಚು ಹೆಚ್ಚು ಶೋಗಳಲ್ಲಿ ತೋರಿಸಿ, ಅರ್ಜೆಂಟ್ ಅರ್ಜೆಂಟಾಗಿ ಬಾಕ್ಸಾಫೀಸ್ ಭರ್ತಿ ಮಾಡಿಕೊಳ್ಳುವುದು ಬೇರೆ ಭಾಷೆ ನಿರ್ಮಾಪಕರ ವ್ಯವಹಾರ ತಂತ್ರ. ಈ ತಂತ್ರಕ್ಕೆ ಗಣೇಶ್ ಅಭಿನಯದ ಗೀತಾ ಕೂಡಾ ಬಲಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿಯೇ ಗಣೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

    ಗೀತಾ ಅಪ್ಪಟ ಕನ್ನಡ ಸಿನಿಮಾ. ಕನ್ನಡ ಪರವಾದ ಸಿನಿಮಾ. ಗೋಕಾಕ್ ಚಳವಳಿಯ ಕಥೆ ಇರುವ ಸಿನಿಮಾ. ಬೇರೆ ಭಾಷೆ ಚಿತ್ರಗಳಿಗೆ ಏನಾಗುತ್ತೋ.. ಏನೋ.. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಚಿತ್ರದ ತಂಟೆಗೆ ಬಂದರೆ ಸುಮ್ಮನಿರಲ್ಲ. ನನ್ನ ಚಿತ್ರಕ್ಕೆ ಬೇರೆ ಭಾಷೆ ಚಿತ್ರಗಳು ತೊಂದರೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ' ಎಂದಿದ್ದಾರೆ. ಆದರೆ, ಕನ್ನಡ ಚಿತ್ರ ತೆರೆಗೆ ಬಂದರೆ ಸಮಸ್ಯೆಯಿಲ್ಲ, ಪರಭಾಷೆ ಚಿತ್ರದಿಂದ ಮಾತ್ರ ನನ್ನ ಚಿತ್ರಕ್ಕೆ ಧಕ್ಕೆಯಾಗಬಾರದು ಎನ್ನುವುದು ಗಣೇಶ್ ಎಚ್ಚರಿಕೆ.

  • ಪವರ್ ಫುಲ್ ಕಂಠಕ್ಕೆ ಕೆಚ್ಚೆದೆಯ ಕನ್ನಡಿಗರ ಕರತಾಡನ

    puneeth's powerful voice for geetha song

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಹಾಡು ಹೊರಬಿದ್ದಿದೆ. ಕನ್ನಡ ಕನ್ನಡ ಕನ್ನವಡವೇ ಸತ್ಯ.. ಎಂಬ ಈ ಹಾಡನ್ನು ಬರೆದಿರೋದು ಬೊಂಬೆ ಹೇಳುತೈತೆ ಖ್ಯಾತಿಯ ಸಂತೋಷ್ ಆನಂದರಾಮ್. ತಮ್ಮ ಗೆಳೆಯ ಮತ್ತು ಶಿಷ್ಯ ಎರಡೂ ಆಗಿರುವ ವಿಜಯ್ ನಾಗೇಂದ್ರ ಅವರಿಗಾಗಿ ಬರೆದಿರುವ ಗೀತೆಯಿದು.

    ಇನ್ನು ಈ ಹಾಡಿಗೆ ಅಷ್ಟೇ ಪವರ್‍ಫುಲ್ಲಾಗಿ ಹಾಡಿರೋದು ಪುನೀತ್ ರಾಜ್‍ಕುಮಾರ್. ಪುನೀತ್ ಗಟ್ಟಿ ಧ್ವನಿ, ಹಾಡನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿದೆ. ಹಾಡು ಭರ್ಜರಿ ಸದ್ದು ಮಾಡ್ತಿದೆ. ಸೈಯ್ಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ನಿರ್ಮಾಣದ ಗೀತಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.

  • ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ..

    ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ..

    ಯೋಗರಾಜ್ ಭಟ್ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳಿಗೆ ನಾಂದಿ ಹಾಡಿದವರು. ಭಟ್ಟರು ಮತ್ತು ಗಣೇಶ್ ಇಬ್ಬರದ್ದೂ ಸೂಪರ್ ಹಿಟ್ ಕಾಂಬಿನೇಷನ್. ಈ ಜೋಡಿ 4ನೇ ಬಾರಿಗೆ ಒಂದಾಗಿರುವ ಚಿತ್ರವೇ ಗಾಳಿಪಟ 2. ಈ ಚಿತ್ರದ ಹಾಡುಗಳು ಈಗಾಗಲೇ ಗುಂಗು ಹಿಡಿಸುತ್ತಿವೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಪ್ರಚಾರವನ್ನೂ ಜೋರಾಗಿಯೇ ಇಟ್ಟುಕೊಂಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.

    ಇವತ್ತು ಅಂದ್ರೆ ಜುಲೈ 26ನೇ ತಾರೀಕು ಸಂಜೆ 5 ಗಂಟೆ 2 ನಿಮಿಷಕ್ಕೆ ಗಾಳಿಪಟ 2 ಚಿತ್ರದ ಮೊದಲ ಟೀಸರ್ ಹೊರಬೀಳಲಿದೆ. ಅದರಲ್ಲಿ ಗಣೇಶ್ ಪಾತ್ರದ ಕಥೆ ಇರಲಿದೆಯಂತೆ. ಅದನ್ನ ರಿಲೀಸ್ ಮಾಡೋದು ಉಪ್ಪಿ.

    ನಾನಾಡದ ಮಾತೆಲ್ಲವ ಕದ್ದಾಲಿಸು..

    ದೇವ್ಲೇ ದೇವ್ಲೇ..

    ನೀನು ಬಗೆಹರಿಯದ ಹಾಡು..

    ಹಾಗೂ ಎಕ್ಸಾಂ ಸಾಂಗ್‍ಗಳು ಹಿಟ್ ಆಗಿವೆ. ಈಗ ಮೊದಲ ಟೀಸರ್ ಬರಲಿದೆ. ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಸಂಯುಕ್ತಾ ಮೆನನ್, ಪವನ್, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್, ಬುಲೆಟ್ ಪ್ರಕಾಶ್ ಸೇರಿದಂತೆ ಬೃಹತ್ ತಾರಾಗಣದ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು.

  • ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

    ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

    ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

    ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.

    ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ  ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.

  • ಪೈಲ್ವಾನ್ ಪಾಠ : ಗೀತಾ ಮುನ್ನೆಚ್ಚರಿಕೆ

    geetha movie team takes precautionary measures

    ಪೈಲ್ವಾನ್ ಚಿತ್ರವನ್ನು ಪೈರಸಿ ಕ್ರಿಮಿನಲ್ಸ್ ಕಾಡಿದ್ದಾರೆ. ಪೈರಸಿಯಿಂದಾಗಿಯೇ ಪೈಲ್ವಾನ್ ಟೀಂ 5 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ. ಪೈರಸಿ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಲಿಂಕುಗಳನ್ನು ಡಿಲೀಟ್ ಮಾಡಲಾಗಿದೆ. ಹೋರಾಟ ಚಾಲ್ತಿಯಲ್ಲಿದೆ. ಇದೆಲ್ಲದರಿಂದ ಎಚ್ಚೆತ್ತುಕೊಂಡಿರುವುದು ಗೀತಾ ಟೀಂ.

    ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಖಾಸಗಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿರುವ ಗೀತಾ ನಿರ್ಮಾಪಕರು, ಪೈರಸಿ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಪೈರಸಿ ಲಿಂಕ್‍ಗಳು ಸೃಷ್ಟಿಯಾದ ತಕ್ಷಣ ಡಿಲೀಟ್ ಮಾಡುವ ವ್ಯವಸ್ಥೆ ಅದು. ಪೈರಸಿ ವಿಡಿಯೋಗಳ ವೆಬ್‍ಸೈಟ್ ಲಿಂಕುಗಳನ್ನು ಡಿಲೀಟ್ ಮಾಡುವುದು  ಆ ಕಂಪೆನಿ ಕೆಲಸ. ಜೊತೆಗೆ ಪ್ರತಿ ಚಿತ್ರಮಂದಿರದಲ್ಲೂ ಗೀತಾ ಟೀಂನವರಿರುತ್ತಾರೆ. ಸೈಬರ್ ಪೊಲೀಸರಿಗೂ ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ.

    ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶಾನ್ವಿ ಶ್ರೀವಾಸ್ತವ್, ಸುಧಾರಾಣಿ ಅಭಿನಯದ ಗೀತಾ ಚಿತ್ರಕ್ಕೆ ಶಿಲ್ಪಾ ಗಣೇಶ್ ಮತ್ತು ಸೈಯದ್ ಸಲಾಂ ನಿರ್ಮಾಪಕರು. ವಿಜಯ್ ನಾಗೇಂದ್ರ ನಿರ್ದೇಶನದ ಮೊದಲ ಚಿತ್ರವಿದು. ಮೊದಲ ಚಿತ್ರದಲ್ಲೇ 1980ರ ದಶಕದ ಗೋಕಾಕ್ ಚಳವಳಿ, ಪ್ರೇಮಕಥೆ ಇರುವ ಗಟ್ಟಿ ಕಥೆ ಕೈಗೆತ್ತಿಕೊಂಡಿದ್ದಾರೆ ವಿಜಯ್ ನಾಗೇಂದ್ರ.

  • ಪ್ರಾಯಶಃ.. ಇಂತ ಹಾಡು ಬಂದು ವರ್ಷಗಳಾಗಿರಬಹುದು..

    ಪ್ರಾಯಶಃ.. ಇಂತ ಹಾಡು ಬಂದು ವರ್ಷಗಳಾಗಿರಬಹುದು..

    ನಾನು ಬದುಕಿರಬಹುದು..

    ಪ್ರಾಯಶಃ ಇಲ್ಲ ಕನಸಿರಬಹುದಿದು..

    ಪ್ರಾಯಶಃ ಇಲ್ಲ ಸರಿ ಇರಬಹುದು.

    ಭಾಗಶಃ ಇಲ್ಲ ಸೆರೆ ಇರಬಹುದಿದು.

    ಮೂಲತಃ ಜೀವ ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ.. ಪ್ರಾಯಶಃ..

    ಹಾಡಿನ ಸಾಹಿತ್ಯ ಕೇಳಿದವರಿಗೆ ಇದು ಜಯಂತ ಕಾಯ್ಕಿಣಿಯವರದ್ದೇನೋ ಅನ್ನಿಸಿದರೂ.. ಅದು ಸುಳ್ಳು. ಸಾಹಿತ್ಯ ಯೋಗರಾಜ್ ಭಟ್ಟರದು. ಇತ್ತೀಚೆಗೆ ಇಂತಹ ಮಾಧುರ್ಯದ ಗೀತೆಗಳನ್ನು ಬರೆಯದೆ ಸ್ವಲ್ಪ ದೂರವೇ ಉಳಿದಿದ್ದ ಕವಿ ಯೋಗರಾಜ್ ಭಟ್ ಮತ್ತೊಮ್ಮೆ ಬಂದಿದ್ದಾರೆ. ಪ್ರಾಯಶಃ..

    ಗಾಳಿಪಟ 2 ಚಿತ್ರದ ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್ ಇಂತಹ ಹಾಡನ್ನು ಕೇಳದೆ ಯಾವುದೋ ಕಾಲವಾಗಿತ್ತು ಎಂದ ಮಾತಿನಲ್ಲಿ ಪ್ರಾಯಶಃ ಅತಿಶಯೋಕ್ತಿ ಇರಲಿಲ್ಲ.

    ಭಟ್ಟರ ಭಾವತೀವ್ರತೆಯ ಪದಗಳಿಗೆ ಪ್ರಾಯಶಃ ಅದ್ಭುತ ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ ಅವರಾದರೆ.. ಪ್ರಾಯಶಃ ಅಷ್ಟೇ ತೀವ್ರತೆಯಿಂದ ಹಾಡಿರೋದು ಸೋನು ನಿಗಮ್. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಗಾಳಿಪಟ 2, ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್-ಶರ್ಮಿಳಾ ಮಾಂಡ್ರೆ ಜೋಡಿಯಾಗಿರೋ ಚಿತ್ರದಲ್ಲಿ ಚೆಂದದ ಪ್ರೇಮಕಥೆಯೊಂದು ಕೈ ಬೀಸಿ ಕರೆಯುತ್ತಿದೆ.

  • ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ

    ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ

    ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಎಂದ ಕೂಡಲೇ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬಿಡುಗಡೆಯಾದ ಹಾಡುಗಳು, ಟ್ರೇಲರ್ ಹೊಸ ಲೆವೆಲ್ಲಿನಲ್ಲಿದ್ದವು. ಆ ನಿರೀಕ್ಷೆಗೆ ತಕ್ಕಂತೆಯೇ ಭಟ್ ಮತ್ತು ಗಣಿ ಜೋಡಿ ಗೆಲುವಿನ ನಗು ಬೀರಿದೆ. ಮೊದಲ ದಿನದ ಕಲೆಕ್ಷನ್ 20 ಕೋಟಿಯ ಗಡಿ ದಾಟಿದೆ.

    ಗಾಳಿಪಟ 2 ಮಲ್ಟಿಪ್ಲೆಕ್ಸ್‍ಗಳಲ್ಲಿ 250ಕ್ಕೂ ಹೆಚ್ಚು ಶೋ ಕಂಡರೆ, 150 ಸಿಂಗಲ್ ಸ್ಕ್ರೀನ್‍ಗಳಲ್ಲಿ 600+ ಶೋ ಪ್ರದರ್ಶನಗೊಂಡಿದೆ. ಎಲ್ಲ ಶೋಗಳೂ ಹೌಸ್‍ಫುಲ್ ಅನ್ನೋದು ರಮೇಶ್ ರೆಡ್ಡಿಯವರ ಖುಷಿಗೆ ಕಾರಣ. ಹೊರರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಶೋಗಳಿದ್ದವರು. ವಿದೇಶಗಳಲ್ಲಿ 50+ ಶೋಗಳಿದ್ದವು. ಎಲ್ಲೆಡೆ ಚಿತ್ರಮಂದಿರ ತುಂಬಿದೆ ಸಂದೇಶಗಳು ಬಂದಿವೆ. ಒಂದು ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ ಹೆಚ್ಚೂ ಕಡಿಮೆ 20 ಕೋಟಿ ಎನ್ನಲಾಗಿದೆ. ಗಾಳಿಪಟದ ಜೊತೆ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ.. ಆ ಎರಡೂ ಚಿತ್ರಗಳ ದೊಡ್ಡ ಮಾರುಕಟ್ಟೆಯನ್ನೂ ಮೀರಿ ಗಾಳಿಪಟ ಕಲೆಕ್ಷನ್ ಮಾಡಿದೆ.

    ಇದು ಇಡೀ ಗಾಳಿಪಟ 2 ತಂಡದ ಗೆಲುವು. ನನ್ನ ಮತ್ತು ಭಟ್ಟರ ಕಾಂಬಿನೇಷನ್ ಗೆಲ್ಲಬೇಕು ಎನ್ನುವ ಕನಸನ್ನು ಪ್ರೇಕ್ಷಕರು ಎತ್ತಿ ಹಿಡಿದಿದ್ದಾರೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಗಣೇಶ್.