` golden star ganesh, - chitraloka.com | Kannada Movie News, Reviews | Image

golden star ganesh,

  • ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ

    ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ

    ಯೋಗರಾಜ್ ಭಟ್ ನಿರ್ದೇಶನದ ಇನ್ನೇನು ರಿಲೀಸ್ ಆಗಬೇಕಿರುವ ಚಿತ್ರ ಗಾಳಿಪಟ 2. ಮತ್ತೊಮ್ಮೆ ಗಣೇಶ್, ದಿಗಂತ್ ಜೊತೆಗೂಡಿ ನಿರ್ದೇಶಿಸಿರುವ ಸಿನಿಮಾ. ಲೂಸಿಯಾ ಪವನ್‍ರನ್ನು ಈ ಚಿತ್ರದಿಂದ ಹೀರೋ ಮಾಡುತ್ತಿರೋ ಭಟ್ಟರ ಜೊತೆಗೆ ಗಾಳಿಪಟ ಹಾರಿಸೋಕೆ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಇದ್ದಾರೆ. ಇವರೆಲ್ಲರಿಗೂ ಸೀನಿಯರ್ ಗುರುವಾಗಿ ಅನಂತ್ ನಾಗ್ ಇದ್ದಾರೆ. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು ಯು ಸರ್ಟಿಫಿಕೇಟ್ ಪಡೆದುಕೊಂಡಿದೆ.

    ಇದು ಹೊಸದೇನಲ್ಲ. ವಿಚಿತ್ರವೂ ಅಲ್ಲ. ಭಟ್ಟರ ಸಿನಿಮಾಗಳು ಸಕುಟುಂಬ ಸಮೇತರಾಗಿ ನೋಡುವಂತೆಯೇ ಇರುತ್ತವೆ. ದ್ವಂದ್ವಾರ್ಥ ಇರಲ್ಲ. ಅಶ್ಲೀಲತೆಯೂ ಇರಲ್ಲ. ಎಂದಿನಂತೆ ತಮಾಷೆಯಾಗಿಯೇ ಸೀರಿಯಸ್ ಕಥೆ ಹೇಳುವ ಭಟ್ಟರು ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ? ಅದನ್ನು ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ಹೇಳಬೇಕು.

  • ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್

    ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್

    ಕನ್ನಡ ಸಿನಿಮಾಗಳಿಗೆ ಈಗ ಇಡೀ ವಿಶ್ವದಾದ್ಯಂತ ದೊಡ್ಡ ಮಾರ್ಕೆಟ್ ಸೃಷ್ಟಿಯಾಗಿದೆ. ಹೀಗಾಗಿಯೇ ಗಣೇರ್ಶ ಮತ್ತು ಯೋಗರಾಜ್ ಭಟ್ ಜೋಡಿಯ ಗಾಳಿಪಟ 2 ಚಿತ್ರ ಆಸ್ಟ್ರೇಲಿಯಾ, ಅಮೆಇರಕ ಸೇರಿದಂತೆ ವಿಶ್ವದ ಹಲವೆಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಬುಕ್ಮೈ ಶೋನಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಅದೂ ಜೋರಾಗಿಯೇ ಇದೆ. ಭಟ್ಟರು ಮತ್ತು ಗಣಿ ಜೋಡಿ ಮತ್ತೊಮ್ಮೆ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಹೀಗಾಗಿಯೇ ಚಿತ್ರಕ್ಕೆ ಮಾರ್ನಿಂಗ್ ಶೋ 6 ಗಂಟೆಗೇ ಶುರು ಮಾಡಲು ಸಿದ್ಧತೆಯಾಗುತ್ತಿದೆ.

    ಗಣೇಶ್ & ಭಟ್ಟರ ಕಾಂಬಿನೇಷನ್ ಜೊತೆ ಶರ್ಮಿಳಾ ಮಾಂಡ್ರೆ-ಪವನ್, ದಿಗಂತ್-ಸಂಯುಕ್ತಾ ಮೆನನ್ ಜೋಡಿಯೂ ಇದೆ. ಗಾಳಿಪಟ ಬಂದಾಗ ಗಣೇಶ್ ಅವರಿಗೆ ಒಂದು ಕೋಟಿ ಸಂಭಾವನೆ ಕೊಡಲಾಗಿತ್ತು.ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ದಾಖಲೆ ಇವತ್ತಿಗೂ ಗಣೇಶ್ ಹೆಸರಲ್ಲೆ ಇದೆ. ಆ ಗಾಳಿಪಟ 175 ದಿನ ಓಡಿತ್ತು. ಈಗ ಈ ಗಾಳಿಪಟ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿ ನಿಂತಿದೆ.

    ಆಗಸ್ಟ್ 12ರಂದು ವಿಶ್ವದೆಲ್ಲೆಡೆ ಗಾಳಿಪಟ 2 ಹಾರಲಿದೆ. ಒಂದು ಕ್ಯೂಟ್ ಲವ್ ಸ್ಟೋರಿಯಂತೂ ಪಕ್ಕಾ. ಜೊತೆಗೆ ಸ್ನೇಹ ಸಂದೇಶವೂ ಇರಲಿದೆ. ಭಟ್ಟರ ಜೊತೆ ಈ ಬಾರಿ ಸಂಗೀತದ ಮೋಡಿ ಮಾಡಿರುವುದು ಅರ್ಜುನ್ ಜನ್ಯಾ. ಗಾಳಿಪಟ ಹಾರೋದು ನೋಡೋಕೆ ರೆಡಿಯಾಗಿ..

  • ಗೀತಾ ಕೊಟ್ಟ ಆತ್ಮವಿಶ್ವಾಸ.. ಕನ್ನಡತಿಯಾದರು ಶಾನ್ವಿ..!

    geetha movie gave me confidence

    ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ-ಪುಷ್ಕರ್ ಕಾಂಬಿನೇಷನ್ನಿನಲ್ಲಿ ಬರುತ್ತಿರೋ ಅತಿ ದೊಡ್ಡ ಸಿನಿಮಾ. 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಹೀರೋಯಿನ್. ಅವರು ಕಾಶಿಯ ಚೆಲುವೆ. ಕನ್ನಡ ಗೊತ್ತಿಲ್ಲ. ಆದರೆ ಗೀತಾ ಚಿತ್ರ ಕೊಟ್ಟಿರುವ ಕಾನ್ಫಿಡೆನ್ಸ್ ಹೇಗಿದೆ ಎಂದರೆ, ತಮ್ಮ ಚಿತ್ರಗಳಿಗೆ ತಾವೇ ಡಬ್ ಮಾಡೋಕೆ ಮುಂದಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಲಕ್ಷ್ಮಿ ಪಾತ್ರಕ್ಕೂ ಅವರೇ ಡಬ್ ಮಾಡಿದ್ದಾರೆ.

    ಗೀತಾ ಚಿತ್ರದಲ್ಲಿನ ಅವರ ವಾಯ್ಸ್‍ಗೆ ಸಿಕ್ಕ ಮೆಚ್ಚುಗೆಯೇ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಡಬ್ ಮಾಡಲು ಪ್ರೇರಣೆ ನೀಡಿದೆಯಂತೆ. ಡೈಲಾಗ್‍ಗಳು ಉದ್ದುದ್ದ ಇದ್ದವು. ಶೂಟಿಂಗ್ ವೇಳೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಈಗ ಡಬ್ ಮಾಡಿದ್ದೇನೆ. ನನಗೀಗ ಕನ್ನಡ ಚೆನ್ನಾಗಿಯೇ ಬರುತ್ತೆ ಎನ್ನುವ ಶಾನ್ವಿ ಶ್ರೀವಾಸ್ತವ್, ಈಗ ಕಾಶಿ ಹುಡುಗಿಯೇನಲ್ಲ. ಕನ್ನಡತಿಯೇ.

  • ಗೀತಾ ನಿರ್ಮಾಪಕರಿಗೆ ಪತ್ನಿ ಕೊಟ್ಟ ಶಾಕ್..!

    geetha movie producer's wife gives hima shock

    ಗೀತಾ. ಗಣೇಶ್ ಅಭಿನಯದ ಜನ ಮೆಚ್ಚುಗೆ ಪಡೆದಿರುವ ಈ ಚಿತ್ರಕ್ಕೆ ಪ್ರೇಕ್ಷಕ ಬಹುಪರಾಕ್ ಎಂದಿದ್ದಾನೆ. ಚಿತ್ರದ ಕಥೆ, ಗೋಕಾಕ್ ಕನ್ನಡ ಚಳವಳಿ, ಆ ಕಥೆಯನ್ನು ನವಿರಾದ ಪ್ರೇಮಕಥೆಯೊಂದಿಗೆ ಹೇಳಿರುವ ರೀತಿ, ನಿರ್ದೇಶಕ ವಿಜಯ್ ನಾಗೇಂದ್ರ ಅವರ ಪ್ರತಿಭೆಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ತಮ್ಮ ಸಿನಿಮಾ ವಿಭಿನ್ನವಾಗಿದೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ನಿರ್ಮಾಪಕ ಸೈಯದ್ ಸಲಾಂ ಅವರಿಗೆ ಅವರ ಪತ್ನಿ ಕೇಳಿರುವ ಆ ಒಂದು ಪ್ರಶ್ನೆ ಶಾಕ್ ಕೊಟ್ಟಿದೆ. ಹೌದಲ್ವಾ.. ನನಗ್ಯಾಕೆ ಇದು ಮೊದಲೇ ಹೊಳೀಲಿಲ್ಲ ಎಂದು ಯೋಚಿಸುವಂತೆ ಮಾಡಿದೆ.

    ಇಷ್ಟಕ್ಕೂ ಸೈಯದ್ ಸಲಾಂ ಅವರ ಪತ್ನಿ ಸೈಯದ್ ಹಸೀನಾ  ಸಲಾಂ ಕೇಳಿದ ಪ್ರಶ್ನೆ ಕುತೂಹಲಕಾರಿಯಾಗಿದೆ.

    `ಅದೇಕೆ ನೀವು ನಿಮ್ಮ ಮೂರು ಚಿತ್ರಗಳಲ್ಲಿ ಒಂದೇ ಕಥೆಯನ್ನು ಹೇಳಿದ್ದೀರಿ. ಬೇರೆ ಕಥೆ ಹೇಳಬಾರದೆ' ಎಂದಿದ್ದಾರೆ. ಅದು ಹೇಗೆ ಎಂದವರಿಗೆ ಹಸೀನಾ ಅವರು ಕೊಟ್ಟಿರುವ ವಿವರಣೆ ಶಾಕ್ ಕೊಟ್ಟಿದೆ.

    ಸೈಯದ್ ಸಲಾಂ ಅವರ ಮೊದಲ ಸಿನಿಮಾ ಲೈಫು ಇಷ್ಟೇನೇ. ಆ ಚಿತ್ರದಲ್ಲಿ ಹೀರೋ ದಿಗಂತ್‍ಗೆ ಲವ್ ಮೇಲೆ ಲವ್ವುಗಳಾಗುತ್ತವೆ. ಕೊನೆಗೆ

    ಹೀರೋ ಮದುವೆಯಾಗುವುದು 6ನೇ ಗರ್ಲ್ ಫ್ರೆಂಡ್ ಜೊತೆ.

    ಇನ್ನು 2ನೇ ಸಿನಿಮಾ ಮುಗುಳುನಗೆ. ಆ ಚಿತ್ರದಲ್ಲಿ ಗಣೇಶ್ ಮೂವರನ್ನು ಲವ್ ಮಾಡ್ತಾರೆ. ಅವರೆಲ್ಲರನ್ನೂ ಬಿಟ್ಟು.. ಮದುವೆಯಾಗುವುದು ನಾಲ್ಕನೇ ಗೆಳತಿ ಅಮೂಲ್ಯರನ್ನು.

    ಈಗ ನೋಡಿದರೆ.. ಗೀತಾದಲ್ಲಿ ಕೂಡಾ ಹಾಗೆಯೇ ಆಗಿದೆ. ಮೂವರು ಹೀರೋಯಿನ್ಸ್. ಪ್ರೀತಿ ಒಬ್ಬರ ಜೊತೆಗೆ.. ಮದುವೆ.. ???

    ಸೈಯದ್ ಸಲಾಂ ನಿರ್ಮಾಪಕರಾದರೂ ಒಳ್ಳೆಯ ಸಾಹಿತ್ಯ ಪ್ರೇಮಿ. ಕಥೆ, ಕಾದಂಬರಿ ಇಷ್ಟಪಡುವವರು. ಮನೆಯಲ್ಲೇ ಒಂದು ಲೈಬ್ರರಿ ಇಟ್ಟುಕೊಂಡಿರುವ ಸೈಯದ್ ಸಲಾಂ ಅವರಿಗೆ, ತಮಗೆ ಹೊಳೆಯದ ಈ ಹೋಲಿಕೆ ತಮ್ಮ ಪತ್ನಿಗೆ ಹೊಳೆದಿದ್ದು ನೋಡಿ ಖುಷಿಗೊಂಡಿದ್ದಾರೆ. ನನ್ನ ಚಿತ್ರಗಳ ಹೀರೋಯಿನ್ಸ್ ಎಷ್ಟೇ ಇರಲಿ, ನನಗೆ ನೀನೊಬ್ಬಳೇ ನಾಯಕಿ ಎಂದು ಪತ್ನಿಗೆ ಹೇಳಿದರಾ..? ಹೇಳಿರ್ತಾರೆ ಬಿಡಿ...

  • ಗೀತಾ ಪ್ರೀತಿ ಕಥೆನಾ..? ಕನ್ನಡ ಹೋರಾಟದ ಕಥೆನಾ..?

    geetha trailer released

    ಗೀತಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಒಬ್ಬರಲ್ಲ.. ಇಬ್ಬರಲ್ಲ.. ಮೂವರು ಹೀರೋಯಿನ್ಗಳಿರೋ ಚಿತ್ರವಿದು.ಗಣೇಶ್ ಎದುರು ಶಾನ್ವಿ ಶ್ರೀವಾಸ್ತವ, ಪ್ರಯಾಗ ಮಾರ್ಟಿನ್, ಪಾರ್ವತಿ ಅರೂಣ್ ಇದ್ಧಾರೆ. ದೇವರಾಜ್, ಸುಧಾರಾಣಿ, ರಂಗಾಯಣ ರಘು, ಅಚ್ಯುತ್ ಕುಮಾರ್.. ಹೀಗೆ ಘಟಾನುಘಟಿಗಳ ದಂಡೇ ಇದೆ. ವಿಜಯ್ ನಾಗೇಂದ್ರ ನಿರ್ದೇಶನದ ಚೊಚ್ಚಲ ಸಿನಿಮಾವಿದು.

    ಈಗಾಗಲೇ ಪುನೀತ್ ಹಾಡಿನಿಂದ ಕನ್ನಡಿಗ.. ಕನ್ನಡಿಗ.. ಎನ್ನುವ ಸೆನ್ಸೇಷನ್ ಸೃಷ್ಟಿಸಿರುವ ಗೀತಾ ಟ್ರೇಲರ್ ನೋಡಿದವರಿಗೆ ಒಂದು ಕುತೂಹಲ ಹುಟ್ಟುವುದು ಸಹಜ. ಚಿತ್ರದಲ್ಲಿರೋದು ಪ್ರೇಮ ಕಥೆನಾ..? ಅಥವಾ ಕನ್ನಡಿಗರ ಸ್ವಾಭಿಮಾನದ ಹೋರಾಟದ ಕಥೆನಾ..? ರಾಜ್ ಭಾಗವಹಿಸಿದ್ದ ಗೋಕಾಕ್ ಚಳವಳಿಗೂ, ಗೀತಾ ಚಿತ್ರಕ್ಕೂ ಏನು ಸಂಬಂಧ..? ಇದು 80ರ ದಶಕದ ಕಥೆನಾ.. ಅಥವಾ ಈಗಿನ ಕಾಲದ ಲವ್ ಸ್ಟೋರಿನಾ..?

    ಸೈಯದ್ ಸಲಾಂ, ಶಿಲ್ಪಾ ಗಣೇಶ್ ನಿರ್ಮಾಣದ ಗೀತಾ ಇಂತಹ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲಿಗೆ ಚಿತ್ರ ಅರ್ಧ ಗೆದ್ದಂತೆ. ಟ್ರೇಲರ್ ಉದ್ದೇಶವೇ ಅದು, ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುವುದು. ಸೆನ್ಸಾರ್ ಮೆಚ್ಚುಗೆ ಪಡೆದಿರುವ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ 27ನೇ ತಾರೀಕು ರಿಲೀಸ್ ಆಗುತ್ತಿದೆ.

  • ಗೀತಾ ಹೆಸರೊಂದೇ ಅಲ್ಲ.. ಹೀರೋನಲ್ಲೂ ಶಂಕರ್ ನೆನಪು..!

    link between ganesh and shankaer nag in geetha

    ಗೀತಾ ಸೆ.26ರಂದು ರಿಲೀಸ್ ಆಗುತ್ತಿರುವ ಚಿತ್ರ. ಗೀತಾ, ಕನ್ನಡ ಚಿತ್ರರಂಗದ ಕ್ಲಾಸಿಕ್‍ಗಳಲ್ಲಿ ಒಂದು. ಶಂಕರ್‍ನಾಗ್ ನಟಿಸಿ ನಿರ್ದೇಶಿಸಿದ್ದ ಚಿತ್ರವದು. ಇಂದಿಗೂ ಆ ಚಿತ್ರ, ಕಥೆ, ಹಾಡು ಪ್ರೇಕ್ಷಕರ ಮನಸ್ಸಿನಲ್ಲಿ ಅಮರವಾಗಿರುವಾಗ ಅದೇ ಹೆಸರಿನ ಚಿತ್ರದಲ್ಲಿ ಗಣೇಶ್ ಅಭಿನಯಿಸಿದ್ದು ಸಹಜವಾಗಿಯೇ ಶಂಕರ್ ನಾಗ್ ನೆನಪು ತರಿಸಿತ್ತು.

    ಆ ಗೀತಾ ಚಿತ್ರದಲ್ಲಿ ಶಂಕರ್ ನಾಗ್ ಹೆಸರು ಸಂಜಯ್. ಆದರೆ, ಈ ಗೀತಾ ಚಿತ್ರದಲ್ಲಿ ಹೀರೋ ಗಣೇಶ್ ಹೆಸರೇ ಶಂಕರ್. ಆ ಮೂಲಕ ಶಂಕರ್ ಆಗಿ ನಟಿಸಿರುವ ಗಣೇಶ್, ಶಂಕರ್ ನಾಗ್‍ರನ್ನು ಆ ಮೂಲಕ ನೆನಪಿಸಿಕೊಂಡಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಗೋಕಾಕ್ ಚಳವಳಿಯ ಕಥೆಯೂ ಇದೆ.

    ಇನ್ನೂ ಒಂದು ವಿಶೇಷವೆಂದರೆ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದವರು ಡಾ.ರಾಜ್. ಆಗಿನ ಕಾಲದ ದೃಶ್ಯಗಳೂ ಇವೆ. ಡಾ.ರಾಜ್ ಅವರಷ್ಟೇ ಅಲ್ಲ, ಶಂಕರ್ ನಾಗ್ ಸೇರಿದಂತೆ ಆಗಿನ ಎಲ್ಲ ಸ್ಟಾರ್‍ಗಳೂ ಚಳವಳಿಯಲ್ಲಿ ನಟಿಸಿದ್ದರು.

    ಮತ್ತೊಂದು ವಿಶೇಷ, ಶಂಕರ್‍ನಾಗ್‍ರ ಗೀತಾ ಚಿತ್ರಕ್ಕೆ ಅರುಂಧತಿ ನಾಗ್ ಜೊತೆಯಾಗಿದ್ದರು. ಚಿತ್ರಕಥೆಯಲ್ಲಿ ಅರುಂಧತಿ ನಾಗ್ ಕೆಲಸ ಮಾಡಿದ್ದರು. ಗಣೇಶ್‍ರ ಈ ಗೀತಾ ಚಿತ್ರಕ್ಕೆ ಗಣೇಶ್ ಅವರ ಪತ್ನಿ ಶಿಲ್ಪಾ ಕೆಲಸ ಮಾಡಿದ್ದಾರೆ. ನಿರ್ಮಾಪಕಿಯಾಗಿ.

  • ಗೋಕಾಕ್ ಚಳವಳಿಯಲ್ಲಿ ಕಣ್ಣೀರಿಟ್ಟಿದ್ದರು ಡಾ.ರಾಜ್. ಇಂದು..?

    gokak movement and dr rajkumar emotions in geetha movie

    ಡಾ.ರಾಜ್ ಕುಮಾರ್, ಕನ್ನಡದ ಧ್ರುವತಾರೆ. ಕನ್ನಡವನ್ನು, ಕನ್ನಡತನವನ್ನು ಎತ್ತಿ ಹಿಡಿದ ಕಲಾವಿದ. ಇಂತಹ ಡಾ.ರಾಜ್, ಗೋಕಾಕ್ ಚಳವಳಿಯ ಕಾಲದಲ್ಲಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದರು. ಅವರ ಕಣ್ಣಿರಿಗೆ ಕಾರಣವೂ ಇತ್ತು.

    `ಕರ್ನಾಟಕದಲ್ಲಿ ಕನ್ನಡಿಗರು, ಕನ್ನಡಿಗರಾದ ನಾವೇ.. ಕನ್ನಡವನ್ನು ಉಳಿಸಿ ಎಂದು ಕನ್ನಡಿಗರನ್ನೇ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರದಲ್ಲಿರುವುವವರು ಕನ್ನಡಿಗರೇ ಆದರೂ ಬಾಯಿಬಡಿದುಕೊಂದು ಕೇಳಬೇಕಾದ ಪರಿಸ್ಥಿತಿ ಬರಬಾರದಿತ್ತು' ಎಂದು ಚಳವಳಿಯಲ್ಲಿ ಬಹಿರಂಗ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದರು ರಾಜ್.

    ಅದೆಲ್ಲವನ್ನೂ ಗೀತಾ ಚಿತ್ರದಲ್ಲಿ ಪರಿಣಾಮಕಾರಿಯಾಗಿಯೇ ಬಳಸಿಕೊಳ್ಳಲಾಗಿದೆ. 1982ರಲ್ಲಿ ಕನ್ನಡ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಕೂಗೆದ್ದಿತ್ತು. ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆಗಲೂ ಕನ್ನಡ ವಿರೋಧಿ ಮನಸ್ಸುಗಳು ಕರ್ನಾಟಕದಲ್ಲಿದ್ದವು. ಈಗಲೂ ಇವೆ. ಹೀಗಾಗಿಯೇ ಗೀತಾ ಚಿತ್ರ ಅತ್ಯಂತ ಪ್ರಸ್ತುತವೆನ್ನಿಸುವುದು.

    ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ಗೋಕಾಕ್ ಚಳವಳಿಯ ಹಿನ್ನೆಲೆಯನ್ನು ಚೆಂದವಾಗಿ ಕಟ್ಟಿಕೊಡಲಾಗಿದೆ. ಸಿನಿಮಾ ಥಿಯೇಟರುಗಳಲ್ಲಿದೆ. 

  • ಗೋಲ್ಡನ್ ಬಾನ ದಾರಿಗೆ ಸಪ್ತ ಸಾಗರದ ಸುಂದರಿ..

    ಗೋಲ್ಡನ್ ಬಾನ ದಾರಿಗೆ ಸಪ್ತ ಸಾಗರದ ಸುಂದರಿ..

    ಗೋಲ್ಡನ್‌ ಸ್ಟಾರ್‌  ಗಣೇಶ್‌ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿಯ ನಾಲ್ಕನೇ ಸಿನಿಮಾ ಬಾನ ದಾರಿಯಲ್ಲಿ.. ಈ ಚಿತ್ರಕ್ಕೀಗ ಸಪ್ತ ಸಾಗರದಾಚೆಯ ಚೆಲುವೆ ಬಂದಿದ್ದಾರೆ. ಗಣೇಶ್ ಎದುರು ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಬೀರ್ ಬಲ್ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರುಕ್ಮಿಣಿ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಕಾಂಬಿನೇಷನ್ನಿನ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲೂ ನಟಿಸಿದ್ದಾರೆ. ಆ ಚಿತ್ರ ತೆರೆಗೆ ಬರುವ ಮುನ್ನವೇ ಬಾನ ದಾರಿಯಲ್ಲಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ರುಕ್ಮಿಣಿ.

    ಬಾನ ದಾರಿಯಲ್ಲಿ ರೊಮ್ಯಾಂಟಿಕ್‌ ಡ್ರಾಮಾ ಮೂವಿ. ಪ್ರೀತಮ್ ಮತ್ತು ಗಣೇಶ್ ಅವರ ಜೊತೆ ಜೊತೆಯಲಿ ಮತ್ತು 99 ಚಿತ್ರಗಳನ್ನು ನೋಡಿದೆ. ಇಷ್ಟವಾಯಿತು. ಚಿತ್ರದಲ್ಲಿ ನಾನು ವಾಟರ್‌ ಸ್ಪೋರ್ಟ್ಸ್ ಆಟಗಾರ್ತಿಯಾಗಿದ್ದೇನೆ. ಆ ಆಟ ಯಾವುದು ಎಂದು ಈಗಲೇ ಹೇಳೋಕಾಗಲ್ಲ. ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ರುಕ್ಮಿಣಿ ವಸಂತ್.

    ಮೇ 2ನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ಆಫ್ರಿಕಾ, ಬೆಂಗಳೂರು ಮತ್ತು ಚೆನ್ನೈಯಲ್ಲಿ ಚಿತ್ರೀಕರಣ ನಡೆಯಲಿದೆ. ರುಕ್ಮಿಣಿ ವಸಂತ್ ಅವರು ನಾನು ಬರೆದ ಕಥೆಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಹೀಗಾಗಿಯೇ ಅವರನ್ನು ಸೆಲೆಕ್ಟ್ ಮಾಡಿದೆ. ಪರ್ಫಾಮೆನ್ಸ್ಗೆ ಒಳ್ಳೆಯ ಅವಕಾಶ ಇದೆ ಎಂದಿದ್ದಾರೆ ಪ್ರೀತಂ.

  • ಗೋಲ್ಡನ್ ಬಾನದಾರಿಗೆ ಏಕ್ ಲವ್ ಯಾ ರೀಷ್ಮಾ

    ಗೋಲ್ಡನ್ ಬಾನದಾರಿಗೆ ಏಕ್ ಲವ್ ಯಾ ರೀಷ್ಮಾ

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್‍ನ ಬಾನದಾರಿಯಲ್ಲಿ.. ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಓದಿದ್ದಿರಿ. ಚಿತ್ರದಲ್ಲಿ ಇನ್ನೂ ಒಬ್ಬ ನಾಯಕಿಯಿರೋ ಸಂಗತಿಯೂ ಇತ್ತು. ಈಗ ಆ ಪಾತ್ರಕ್ಕೆ ರೀಷ್ಮಾ ನಾಣಯ್ಯ ಬಂದಿದ್ದಾರೆ.

    ಪ್ರೀತಮ್ ಸರ್ ನನಗೆ ಮೊದಲು ಕಥೆ ಹೇಳಿದಾಗ ಥ್ರಿಲ್ ಆದೆ. ಚಿತ್ರದಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರ. ಗಣೇಶ್ ಸರ್ ನನ್ನ ಇಷ್ಟದ ನಟ. ಅವರೊಂದಿಗೆ ನಟಿಸೋಕೆ ಥ್ರಿಲ್ ಆಗಿದ್ದೇನೆ ಎಂದಿದ್ದಾರೆ ರೀಷ್ಮಾ ನಾಣಯ್ಯ.

    ಏಕ್ ಲವ್ ಯಾ ಮಾಡಬೇಕಾದರೇ ಹಲವು ಅವಕಾಶಗಳು ಬಂದವು. ಏಕ್ ಲವ್ ಯಾ ರಿಯಾಕ್ಷನ್ ನೋಡಿಕೊಂಡೇ ಮುಂದಿನ ಹೆಜ್ಜೆ ಇಡೋಣ ಎಂದು ನಿರ್ಧರಿಸಿದ್ದೆ. ಪ್ರೇಮ್ ಸರ್ ಮತ್ತು ರಕ್ಷಿತಾ ಮ್ಯಾಡಂ ನನಗೆ ನೀಡಿದ ಬೆಂಬಲಕ್ಕೆ ಸದಾ ಋಣಿ ಎಂದಿದ್ದಾರೆ ರೀಷ್ಮಾ ನಾಣಯ್ಯ.

  • ಗೋಲ್ಡನ್ ಸ್ಟಾರ್ ಗಣೇಶ್ ಅದೃಷ್ಟ ನೋಡ್ರಿ.. ಮತ್ತೆ ಮೂವರು ಹೀರೋಯಿನ್ಸ್ ಜೊತೆ..

    ganesh to romance three heroine once again

    ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅದೇನು ಅದೃಷ್ಟವೋ ಏನೋ.. ಇತ್ತೀಚೆಗೆ ಅವರ ಚಿತ್ರಗಳಲ್ಲಿ ನಾಯಕಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಮುಗುಳುನಗೆ, ಗೀತಾ ನಂತರ ಈಗ ಮತ್ತೊಮ್ಮೆ ಮೂವರು ಹೀರೋಯಿನ್ಸ್ ಜೊತೆ ಡ್ಯುಯೆಟ್ ಹಾಡೋಕೆ ರೆಡಿಯಾಗಿದ್ದಾರೆ.

    ಗಣೇಶ್ ಅಭಿನಯದ ಹೊಸ ಚಿತ್ರದ ಹೆಸರು ತ್ರಿಬಲ್ ರೈಡಿಂಗ್. ವಿನೋದ್ ಪ್ರಭಾಕರ್ ಅವರ ರಗಡ್ ಚಿತ್ರ ನಿರ್ದೇಶಿಸಿದ್ದ ಮಹೇಶ್ ಗೌಡ, ಈ ಚಿತ್ರಕ್ಕೆ ಡೈರೆಕ್ಟರ್. ಜನವರಿ ಕೊನೆಯ ಹೊತ್ತಿಗೆ ಟೀಂ ಸೇರಿಕೊಳ್ತಾರಂತೆ ಗಣೇಶ್. ಸದ್ಯಕ್ಕೆ ಗಣೇಶ್ ಗಾಳಿಪಟ-2ನಲ್ಲಿ ಬ್ಯುಸಿಯಾಗಿದ್ದಾರೆ.

     

  • ಗೋಲ್ಡನ್ ಸ್ಟಾರ್ ಗಣೇಶ್ ಗಿಮಿಕ್

    ganesh naganna film titled gimmick

    ಗಣೇಶ್ ಯಾವಾಗ ಗಿಮಿಕ್ ಮಾಡ್ತಾರ್ರೀ.. ಸೀದಾ ಸಾದಾ ಇರ್ತಾರೆ. ಏನ್ರಿ ಇದೆಲ್ಲ ಅಂತಾ ಕನ್‍ಫ್ಯೂಸ್ ಆಗ್ಬೇಡ್ರಿ. ಇದು ಗಣೇಶ್ ಅವರ ಹೊಸ ಚಿತ್ರದ ಟೈಟಲ್ಲು. ನಾಗಣ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ಗಣೇಶ್ ನಟಿಸಲಿದ್ದಾರೆ ಅನ್ನೋದು ಗೊತ್ತಿದೆಯಷ್ಟೆ. ಆ ಚಿತ್ರಕ್ಕೆ ಗಿಮಿಕ್ ಅಂತಾ ಹೆಸರಿಡಲಾಗಿದೆ.

    ಚಿತ್ರದ ಶೂಟಿಂಗ್‍ಗೆ ಲೊಕೇಷನ್ ನೋಡಲೆಂದೇ ಶ್ರೀಲಂಕಾಗೆ ಹೋಗಿ ಬಂದಿದ್ದಾರೆ. ಇದುವರೆಗೆ ಯಾರೂ ತೋರಿಸದ ಲೊಕೇಷನ್‍ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಾಗಣ್ಣ. ದೀಪಕ್ ಸುನಿ ನಿರ್ಮಾಣದ ಸಿನಿಮಾಗೆ ಪಂಜಾಬಿ ಬೆಡಗಿ ರೋನಿಕಾ ಸಿಂಗ್ ನಾಯಕಿ.

  • ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಕೃಷ್ಣಂ ಪ್ರಣಯ ಸಖಿ

    ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಕೃಷ್ಣಂ ಪ್ರಣಯ ಸಖಿ

    ಗಣೇಶ್ 41ನೇ ಸಿನಿಮಾ ಇದು. ಬಾನದಾರಿಯಲ್ಲಿ ಮತ್ತು ದಿ ಸ್ಟೋರಿ ಆಫ್ ರಾಯಘಡ ಸಿನಿಮಾ ಜೊತೆಗೆ ಸದ್ದಿಲ್ಲದೆ ಶುರುವಾಗಿದೆ ಕೃಷ್ಣಂ ಪ್ರಣಯ ಸಖಿ. ಹೆಸರು ವಿಭಿನ್ನವಾಗಿದೆ. ಡೈರೆಕ್ಟರ್ ಶ್ರೀನಿವಾಸ ರಾಜು. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕಾ ನಾಯರ್ ನಟಿಸುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ ನಟಿಸಿದ್ದಾರೆ.

    ತ್ರಿಶೂಲ್ ಎಂಟರ್ಟೇನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಗಣೇಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ.

  • ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್

    dr ganesh as luv uvacha

    ನಿಮಗೆ ಲೈಂಗಿಕ ಸಮಸ್ಯೆಗಳಿವೆಯೇ.. ಸ್ತ್ರೀ ರೋಗ ಸಮಸ್ಯೆಗಳಿವೆಯೇ.. ವೈದ್ಯರು ಸಿಗುತ್ತಿಲ್ಲವೇ.. ತಡಮಾಡಬೇಡಿ. ಇದೇ ಶುಕ್ರವಾರದಿಂದ ನಿಮಗೆ ಹೊಸ ಡಾಕ್ಟರ್ ಸಿಗುತ್ತಿದ್ದಾರೆ. ಅವರ ಹೆಸರು ಡಾ.ಗಣೇಶ್. ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್ ಆಗಿದ್ದಾರೆ. ಅವರೀಗ ಗೈನಕಾಲಜಿಸ್ಟ್. ಸ್ತ್ರೀರೋಗ ತಜ್ಞರು. ಗರ್ಭಧಾರಣೆ, ಶಿಶುಪಾಲನೆ, ಹೆರಿಗೆ ಎಲ್ಲದಕ್ಕೂ ಅವರು ಚಿಕಿತ್ಸೆ ಕೊಡ್ತಾರೆ. ಚಿಕಿತ್ಸೆ ಕೊಡದೇ ಹೋದರೂ ಚಮಕ್ ಅಂತೂ ಗ್ಯಾರಂಟಿ.

    ನಗಬೇಡಿ, ಇದೂ ಚಮಕ್ಕೇ. ಚಮಕ್‍ನಲ್ಲಿ ಸಿಂಪಲ್ ಸುನಿ, ರಿಯಲ್ ಲೈಫಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್ ಒದಿರುವ ಗಣೇಶ್‍ರನ್ನು ಎಂಬಿಬಿಎಸ್ ಓದಿಸಿ ಡಾಕ್ಟರ್ ಮಾಡಿಸಿದ್ದಾರೆ. ಸ್ಟೆತಾಸ್ಕೋಪು ಹಿಡಿಯೋದು, ಮೆಡಿಕಲ್ ಸ್ಟೋರ್‍ನವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಪ್ರಿಸ್ಕಿಪ್ಷನ್ ಬರೆಯೋದು ಮೊದಲಾದ ಡಾಕ್ಟರ್ ಕಸುಬುದಾರಿಕೆಗಳನ್ನು ಗಣೇಶ್ ಕಲಿತಿದ್ದಾರೆ.

    ಈ ಡಾಕ್ಟರ್‍ಗೆ ಚಮಕ್ ಕೊಡೋದು ಅಂದ, ಅದೃಷ್ಟದ ಗೊಂಬೆ ರಶ್ಮಿಕಾ. ಇವರೆಲ್ಲರನ್ನೂ ಒಟ್ಟಿಗೇ ಕೂರಿಸಿರೋದು ಚಂದ್ರಶೇಖರ್. ಚಮಕ್, ಚಮಕ್ ಕೊಡೋಕೆ ರೆಡಿ.

  • ಗೋಲ್ಡನ್ ಸ್ಟಾರ್ ಗೆ ಮತ್ತೊಮ್ಮೆ ಮಗಧೀರನ ವಿಲನ್

    orange film shooting completed

    ಗಣೇಶ್ ಅಭಿನಯದ ಆರೆಂಜ್ ಸಿನಿಮಾ ಶೂಟಿಂಗ್ ಮುಗಿಯುತ್ತಿರುವಂತೆಯೇ ಚಿತ್ರದ ವಿಲನ್ ಯಾರು ಅನ್ನೋ ಸೀಕ್ರೆಟ್ ಕೂಡಾ ಬಯಲಾಗಿದೆ. ಮಗಧೀರ ಚಿತ್ರದ ಖಳ ದೇವ್‍ಗಿಲ್, ಇಲ್ಲಿ ಗಣೇಶ್‍ಗೆ ವಿಲನ್ ಆಗಿದ್ದಾರೆ. ಝೂಮ್ ಚಿತ್ರದಲ್ಲೂ ನಟಿಸಿದ್ದ ದೇವ್‍ಗಿಲ್‍ಗೆ ಇದು ಗಣೇಶ್ ಎದುರು 2ನೇ ಸಿನಿಮಾ.

    ರಾಜಕುಮಾರ ಖ್ಯಾತಿಯ ಪ್ರಿಯಾ ಆನಂದ್, ಗಣೇಶ್‍ಗೆ ನಾಯಕಿ. ಇದು ಲವ್ ಕಂ ಆ್ಯಕ್ಷನ್ ಸಿನಿಮಾ. ಗಣೇಶ್ ಅವರದ್ದು ಇಲ್ಲಿ ರಾಬಿನ್ ಹುಡ್ ಶೈಲಿಯ ಪಾತ್ರವಂತೆ. ಪ್ರಶಾಂತ್ ರಾಜ್, ಈ ಚಿತ್ರದ ಮೂಲಕ ಗಣೇಶ್ ಇಮೇಜ್‍ನ್ನೇ ಬದಲಿಸಲಿದ್ದಾರಾ..?-- 

  • ಗೋಲ್ಡನ್ ಸ್ಟಾರ್ ಹೇಮಂತ್.. ಜಾಕಿ ಸಮೀಕ್ಷಾ.. @99

    golden star hemanth and ajckie sameeksha in 99

    ಗೋಲ್ಡನ್ ಸ್ಟಾರ್ ಅಂದ್ರೆ ಗಣೇಶ್. ಇದ್ಯಾರು ಇದು ಹೇಮಂತ್.. ಜಾಕಿ ಅಂದ್ರೆ ಭಾವನಾ. ಈ ಸಮೀಕ್ಷಾ ಯಾರು..? ಅನುಮಾನವಿದ್ದರೆ, ಪ್ರಶ್ನೆಗಳಿದ್ದರೆ ನೀವು ಪ್ರೀತಂ ಗುಬ್ಬಿ ಅವರನ್ನೇ ಕೇಳಬೇಕು.

    ಅಂದಹಾಗೆ ಇದು 99 ಸಿನಿಮಾದ ಕಥೆ. ಈ ಚಿತ್ರದಲ್ಲಿ ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಯಕಿ ಜಾಕಿ ಭಾವನಾ. ಸಿನಿಮಾದಲ್ಲಿ ಇವರಿಬ್ಬರ ಯಂಗ್ ಏಜ್ ಪಾತ್ರಗಳು ಬರುತ್ತವೆ. ಆ ಪಾತ್ರಗಳಿಗೆ ಆಯ್ಕೆಯಾಗಿರುವುದೇ ಈ ಹೇಮಂತ್ ಮತ್ತು ಸಮೀಕ್ಷಾ.

    ಈ ಹೇಮಂತ್ ಯಾರು ಅಂದ್ರೆ, ಇವರು ಜೂನಿಯರ್ ರಾಮಾಚಾರಿ. ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಯಶ್ ಬಾಲಕನ ಪಾತ್ರದಲ್ಲಿ ಮಿಂಚಿದ್ದ ಹುಡುಗನನ್ನು ನೆನಪಿಸಿಕೊಳ್ಳಿ. ಅವನೇ.. ಇವರು. ಇನ್ನು ಸಮೀಕ್ಷಾ ಧಾರಾವಾಹಿ ಕಲಾವಿದೆ. 

    99 ಚಿತ್ರದ ಚಿತ್ರೀಕರಣ ಮಂಗಳೂರು, ಪುತ್ತೂರು, ತೀರ್ಥಹಳ್ಳಿ ಕಡೆ ಸಾಗುತ್ತಿದೆ. ಡಿಸೆಂಬರ್‍ನಲ್ಲಿ ಸೆಟ್ಟೇರಿರುವ ಸಿನಿಮಾ, ಮಾರ್ಚ್ ವೇಳೆಗೆ ಥಿಯೇಟರಿಗೆ ಬರಲಿದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಆದ ಕಾರಣ, ದೃಶ್ಯಗಳಿಗೆ ತಕ್ಕಂತೆ ಲೊಕೇಷನ್ ಹುಡುಕಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಪ್ರೀತಂ ಗುಬ್ಬಿ.

  • ಗೋಲ್ಡನ್ ಸ್ಟಾರ್‍ಗೆ ರಾಜಕುಮಾರಿ

    priya anand for orange

    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಷನ್‍ನ ಆರೆಂಜ್ ಚಿತ್ರಕ್ಕೆ ನಾಯಕಿಯಾಗಿ ರಾಜಕುಮಾರಿಯೇ ಸಿಕ್ಕಿದ್ದಾಳೆ. ಈ ರಾಜಕುಮಾರಿ ಬೇರ್ಯಾರೂ ಅಲ್ಲ. `ರಾಜಕುಮಾರ'ನ ನಾಯಕಿ ಪ್ರಿಯಾ ಆನಂದ್.

    ಚಿತ್ರದ ಕಥೆಗೆ ಪ್ರಿಯಾ ಆನಂದ್ ಸೂಕ್ತ ಎನಿಸಿತು. ಅವರಿಗೆ ಕಥೆ ಹೇಳಿದೆವು. ಅವರಂತೂ ತಮ್ಮ ಪಾತ್ರದ ಬಗ್ಗೆ ಎಕ್ಸೈಟ್ ಆಗಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

    ಚಿತ್ರದಲ್ಲಿ ನಾಯಕಿಯ ಪಾತ್ರ, ಸಂಪತ್ತಿಗೆ ಸವಾಲ್ ಮಂಜುಳಾ ಅವರನ್ನು ನೆನಪಿಸುತ್ತಂತೆ. ಅಲ್ಲಿಗೆ ರಾಜಕುಮಾರನ ರಾಜಕುಮಾರಿ, ಗಣೇಶ್ ಪಾಲಿನ ದುರ್ಗೆಯಾಗುತ್ತಿದ್ದಾರೆ.

     

  • ಚಮಕ್ ಇಟಲಿಯಲ್ಲಿ ಹೆಡ್‍ಲೈನ್ ನ್ಯೂಸ್ ಆದಾಗ..

    chamak movie image

    ಚಮಕ್, ತಿಂಗಳ ಕೊನೆಯಲ್ಲಿ ಡಿ.29ಕ್ಕೆ ತೆರೆಗೆ ಬರುತ್ತಿದೆ. ಚಿತ್ರದ ಟೀಸರ್, ಹಾಡುಗಳು, ತರಲೆ, ತಮಾಷೆಗಳ ಕಥೆಗಳು ಪ್ರೇಕ್ಷಕರಲ್ಲಿ ವಿಚಿತ್ರ ಕುತೂಹಲ ಹುಟ್ಟುಹಾಕಿವೆ. ಜೊತೆಗೆ ಡಿ.29, ರಶ್ಮಿಕಾ ಹಾಗೂ ಗಣೇಶ್‍ಗೆ ಲಕ್ಕಿ ದಿನಗಳು ಬೇರೆ. ಇಂಥ ಸಂಭ್ರಮಗಳ ನಡುವೆ ಚಮಕ್ ಇಟಲಿಯ ಸ್ಥಳೀಯ ಪತ್ರಿಕೆಗಳಲ್ಲಿ ಹೆಡ್‍ಲೈನ್ ಆಗಿದ್ದ ಕಥೆ  ಗೊತ್ತಾ..?

    ಇಟಲಿಯಲ್ಲಿ ಚಮಕ್ ಚಿತ್ರದ ಹಾಡುಗಳ ಶೂಟಿಂಗ್ ಆಗಿದೆ. ಚಿತ್ರತಂಡ ಎಲ್ಲ ಕಡೆ ಸಾರ್ವಜನಿಕ ಸಾರಿಗೆಯನ್ನೇ ಬಳಸಿರುವುದು ವಿಶೇಷ. ಇಟಲಿಯ ಬೆಲಾಜಿಯೋ ಎಂಬ ಹಳ್ಳಿಯಲ್ಲಿ, ಟೊರಿನೋ, ಕೊಮೊ, ಮಿಲನ್ ಎಂಬ ಸರೋವರಗಳ ಸುತ್ತ ಶೂಟಿಂಗ್ ಆಗಿದೆ. ಗಣೇಶ್ ಇಂಟ್ರೊಡಕ್ಷನ್ ಸೀನ್ ಹಾಗೂ ಚಿತ್ರದ ಕ್ಲೈಮಾಕ್ಸ್ ಸೀನ್ ಶೂಟಿಂಗ್ ಆಗಿರುವುದು ಅಲ್ಲೆ. ಅಲ್ಲಿಯ ವಿಶೇಷವೆಂದರೆ, ಸೂರ್ಯ ರಾತ್ರಿ 9 ಗಂಟೆಯವರೆಗೂ ಮುಳುಗುವುದಿಲ್ಲ. ಹಗಲಿನ ವಾತಾವರಣವೇ ಇರುತ್ತದಂತೆ. 

    ಹೀಗೆ ಅಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ ಚಿತ್ರತಂಡಕ್ಕೊಂದು ಅಚ್ಚರಿ ಕಾದಿತ್ತು. ಇಟಲಿಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಗಣೇಶ್ ಅವರ ಬಗ್ಗೆ ಲೇಖನ ಬಂದಿತ್ತು. ಕನ್ನಡ ಮೂವೀ ಸ್ಟಾರ್ ಎಂದು ಬಣ್ಣಿಸಲಾಗಿತ್ತು. ಅದನ್ನು ಚಿತ್ರತಂಡ ಕನ್ನಡದ ಮಾಧ್ಯಮಗಳಿಗೂ ತಿಳಿಸಿ ಖುಷಿ ಪಟ್ಟಿತ್ತು. ಆದರೆ, ಕೆಲವು ದಿನಗಳ ನಂತರ ಗೊತ್ತಾಗಿದ್ದೇನೆಂದರೆ, ಆ ಲೇಖನದಲ್ಲಿ ಗಣೇಶ್ ಅವರನ್ನು ಹೊಗಳುವ ಸುದ್ದಿಯೇನೂ ಇರಲಿಲ್ಲ. ಬದಲಿಗೆ ಚಿತ್ರತಂಡ ಅನುಮತಿಯನ್ನೇ ಪಡೆಯದೆ ಶೂಟಿಂಗ್ ಮಾಡಿದೆ ಎಂದು ವರದಿಯಾಗಿತ್ತು. 

    ಅನುಮತಿಯನ್ನು ಪಡೆದೇ ಚಿತ್ರೀಕರಣ ಮಾಡಿದ್ದ ಚಮಕ್ ಟೀಂಗೆ ಅದು ಶಾಕಿಂಗ್ ನ್ಯೂಸ್. ಹಾಗೆಂದು ಟೆನ್ಷನ್ ಮಾಡಿಕೊಳ್ಳಲು ಹೋಗಲಿಲ್ಲವಂತೆ. ಏಕೆಂದರೆ ಅಷ್ಟು ಹೊತ್ತಿಗೆ ಶೂಟಿಂಗೇ ಮುಗಿದಿತ್ತಂತೆ. ಅಲ್ಲಿಯೇ ಚಿತ್ರೀಕರಿಸಿರುವ ಖುಷಿಖುಷಿ ಹಾಡು ಹಿಟ್  ಆಗಿರುವ ವೇಳೆ ನಿರ್ದೇಶಕ ಸುನಿ ಇವೆಲ್ಲ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

  • ಚಮಕ್ ಜೋಡಿಯ ಭರಭರ ಭರಾಟೆ

    bharaate producer to produce simpla suni's next

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಮತ್ತೊಮ್ಮೆ ಒಟ್ಟಿಗೇ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯ ಅಪ್‍ಡೇಟ್ ಇದು. ಈ ಚಿತ್ರಕ್ಕೆ ಭರಾಟೆ ನಿರ್ಮಾಪಕ ಸುಪ್ರೀತ್ ಬಂಡವಾಳ ಹೂಡುತ್ತಿದ್ದಾರೆ. ಉಳಿದಂತೆ ಕಲಾವಿದರು, ತಂತ್ರಜ್ಞರ ಆಯ್ಕೆ ಆಗಬೇಕಿದೆ.

    ಇದೊಂದು ಕಾಮಿಡಿ ಥ್ರಿಲ್ಲರ್. ಸಿನಿಮಾ ಶುರುವಾದಾಗಿನಿಂದ ಕೊನೆಯಾಗುವವರೆಗೆ ನಕ್ಕು ನಲಿಸುವ ಕಥೆ ಎಂದಿದ್ದಾರೆ ಸುನಿ. ಆದರೆ, ಈ ಚಿತ್ರ ಸೆಟ್ಟೇರುವ ಮುನ್ನ ಗಣೇಶ್ ಗಾಳಿಪಟ2 ಚಿತ್ರೀಕರಣ ಮುಗಿಸಬೇಕು, ಇತ್ತ ಸುನಿ ಅವತಾರ್ ಪುರುಷ ಕಂಪ್ಲೀಟ್ ಮಾಡಿ ತೆರೆಗೆ ತರಬೇಕು. ಅಲ್ಲಿಯವರೆಗೆ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುತ್ತವೆ.

  • ಚಮಕ್‍ಗೆ ರಶ್ಮಿಕಾ ಲಕ್

    chamak image

    ಚಮಕ್, ಇದೇ ತಿಂಗಳು ಅಂದರೆ ಡಿಸೆಂಬರ್ 29ರಂದು ಬಿಡುಗಡೆಯಾಗ್ತಿದೆ. ಈ ಡಿಸೆಂಬರ್ ರಶ್ಮಿಕಾಗೆ ಲಕ್ಕಿ. ಕಳೆದ ವರ್ಷ ಡಿಸೆಂಬರ್ 30ಕ್ಕೆ ಕಿರಿಕ್ ಪಾರ್ಟಿ ರಿಲೀಸ್ ಆಗಿತ್ತು. ಈಗ, ಒಂದು ದಿನ ಮುಂಚಿತವಾಗಿ ಚಮಕ್ ರಿಲೀಸ್ ಆಗ್ತಿದೆ.

    ಅಷ್ಟೇ ಅಲ್ಲ, ಗಣೇಶ್‍ಗೂ ಡಿಸೆಂಬರ್ ಲಕ್ಕಿ ತಿಂಗಳು. ಮುಂಗಾರು ಮಳೆ ರಿಲೀಸ್ ಆಗಿದ್ದುದೇ ಡಿಸೆಂಬರ್‍ನಲ್ಲಿ. ಹೀಗಾಗಿ ಎರಡು ಲಕ್ಕುಗಳ ಜೊತೆ ತುಂಟ ನಿರ್ದೇಶಕ ಎಂದೇ ಫೇಮಸ್ ಆಗಿರೋ ಸುನಿ ನಿರ್ದೇಶನದ ಚಮಕ್ ರಿಲೀಸ್ ಆಗ್ತಿದೆ.

  • ಚಮಕ್‍ನಲ್ಲಿ ಜಗ್ಗೇಶ್ ಚಮಕ್ಕೂ ಇದೆ..!

    jaggesh's commentary in chamak

    ಸಿಂಪಲ್ ಸುನಿ ಚಮಕ್ ಸುನಿ ಆಗ್ತಾರಾ..? ಅಂಥಾದ್ದೊಂದು ನಿರೀಕ್ಷೆ ಹುಟ್ಟಿಸಿದೆ ಈ ಸಿನಿಮಾ. ಚಿತ್ರಕ್ಕೆ ಯು ಸರ್ಟಿಫಿಕೇಟು ಸಿಕ್ಕಿರುವುದನ್ನೂ ಫುಲ್ ಜೋಶ್‍ನಿಂದ ಹೇಳಿಕೊಂಡಿದೆ ಚಮಕ್ ಟೀಮು. ಸುನಿ ಸಹವಾಸವೋ ಏನೋ.. ಚಿತ್ರದಲ್ಲಿ ಭಾಗಿಯಾಗಿದ್ದವರೆಲ್ಲ ಇಷ್ಟಿಷ್ಟೇ ತುಂಟರಾಗುತ್ತಿದ್ದಾರೆ.

    ಈತ ತುಂಟಾಟದ ಮಹಾರಾಜ ಜಗ್ಗೇಶ್ ಕೂಡಾ ಚಮಕ್ ಟೀಂನಲ್ಲಿದ್ದಾರಂತೆ. ಚಿತ್ರದಲ್ಲಿ ಜಗ್ಗೇಶ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಕನ್ನಡಿಗರಿಗೆ ರಸಗವಳ ಸಾಕಿದೆ ಎಂದು ಹೇಳಿರೋ ಜಗ್ಗೇಶ್, ಅಭಿಮಾನಿಗಳ ಕಿವಿಗೆ ರಸಗವಳದ ಸುನಾಮಿಯ ಸೂಚನೆ ಕೊಟ್ಟಿದ್ದಾರೆ.

    ಚಂದ್ರಶೇಖರ್ ನಿರ್ಮಾಣದ ಸಿನಿಮಾ, ಚಿತ್ರ ನರ್ತಕಿ ಥಿಯೇಟರ್‍ನಲ್ಲಿ ರಿಲೀಸಾಗುತ್ತಿದೆ. ಎಲ್ಲ ಟೈಮಲ್ಲೂ ಕರೆಂಟು ಬರಲಿ ಅಂತೇನಿಲ್ಲ, ಕರೆಂಟು ಹೋಗಲಿ ಎಂದು ಕೂಡಾ ಬೇಡಿಕೊಳ್ಳಬೇಕಾಗುತ್ತೆ ಎಂದು ಟ್ವೀಟ್ ಮಾಡಿರೋ ಸುನಿ, ಅದೇನೇನು ಚಮಕ್ ಇಟ್ಟಿದ್ದಾರೋ.. ಏನೋ..