` golden star ganesh, - chitraloka.com | Kannada Movie News, Reviews | Image

golden star ganesh,

  • ಗಣೇಶ್ ಗೆ ಅನಂತನಾಗ್ ಪ್ರಶಸ್ತಿ..!!!

    ಗಣೇಶ್ ಗೆ ಅನಂತನಾಗ್ ಪ್ರಶಸ್ತಿ..!!!

    ಅನಂತನಾಗ್ ಪ್ರಶಸ್ತಿ ಎಂದರೆ ಯಾವುದು? ಯಾರು ಕೊಟ್ಟರು? ಎಂದೆಲ್ಲ ಕನ್‍ಫ್ಯೂಸ್ ಆಗಬೇಡಿ. ಆದರೆ ಗಣೇಶ್ ಅವರಿಗೆ ಸಿಕ್ಕಿರೋ ಈ ಅವಾರ್ಡನ್ನು ಕೊಟ್ಟಿರೋದು ಸ್ವತಃ ಅನಂತನಾಗ್. ಗಣೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕರೂ ಈ ಪ್ರಶಸ್ತಿಯ ಮುಂದೆ ಅದು ಚಿಕ್ಕದೇ ಎನಿಸಿದರೆ ಅಚ್ಚರಿಯಿಲ್ಲ. ಇದೆಲ್ಲ ಆಗಿದ್ದು ಗಾಳಿಪಟ 2 ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ.

    ಗಾಳಿಪಟ 2ನಲ್ಲಿ ಅನಂತನಾಗ್ ಕನ್ನಡ ಮೇಷ್ಟ್ರು ಪಾತ್ರ ಮಾಡಿದ್ದಾರೆ. ಮೂವರು ಹೀರೋಗಳು, ಮೂವರು ಹೀರೋಯಿನ್ನುಗಳಿದ್ದರೂ ಅನಂತನಾಗ್ ಪಾತ್ರ ಪ್ರೇಕ್ಷಕರನ್ನು ಆವರಿಸಿಕೊಂಡು ಬಿಡುತ್ತದೆ. ಯೋಗರಾಜ್ ಭಟ್ಟರಂತೂ ತಮ್ಮ ಚಿತ್ರದ ಗೆಲುವಿಗೆ ತನ್ನನ್ನು ಸರಿದಾರಿಗೆ ಅನಂತನಾಗ್ ಅವರೇ ಕಾರಣ ಎಂದೂ ಹೇಳಿಬಿಟ್ಟರು. ಹೀಗಿರುವಾಗ..

    ಗಣೇಶ್ ಅವರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ.

    ಗಣೇಶ್ ಎದುರು ನಟಿಸುವಾಗ ನಾನು ಇನ್ನೂ ಚೆನ್ನಾಗಿ ನಟಿಸಬಹುದು. ಅವರು ಕೂಡಾ ನನ್ನಂತೆಯೇ ನಟಿಸುತ್ತಾರೆ.ಅವರಿಂದಾಗಿ ಅವರೊಂದಿಗಿನ ದೃಶ್ಯಗಳು ಎತ್ತರಕ್ಕೆ ಹೋಗುತ್ತವೆ... ಹೀಗೆ ಹೇಳಿದ್ದು ಬೇರಾರೋ ಅಲ್ಲ, ಸ್ವತಃ ಅನಂತನಾಗ್.

    ವೇದಿಕೆಯ ಕೆಳಗೆ ನಿಂತು ಅನಂತನಾಗ್ ಮಾತು ಕೇಳುತ್ತಿದ್ದ ಗಣೇಶ್ ಎಷ್ಟು ಭಾವುಕರಾದರೆಂದರೆ ತಕ್ಷಣ ಹೋಗಿ ಅನಂತನಾಗ್ ಅವರ ಕಾಲುಮುಟ್ಟಿ ನಮಸ್ಕರಿಸಿದರು.

    ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವ ನಟರಲ್ಲೊಬ್ಬರಾಗಿರುವ ಅನಂತನಾಗ್ ಅವರಿಂದ ಹೊಗಳಿಸಿಕೊಳ್ಳೋದಷ್ಟೇ ಅಲ್ಲ, ನನ್ನಂತೆಯೇ ನಟಿಸುತ್ತಾನೆ ಎಂದು ಹೇಳಿಸಿಕೊಳ್ಳೋದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ ಹೇಳಿ.. 

  • ಗಣೇಶ್ ಚೆಲುವೆಯರ ಚಿತ್ತಾರ

    ಗಣೇಶ್ ಚೆಲುವೆಯರ ಚಿತ್ತಾರ

    ಗೋಲ್ಡನ್ ಸ್ಟಾರ್  ಗಣೇಶ್ ಮೂರು ಜನ ಬ್ಯೂಟಿಫುಲ್ ಹೀರೋಯಿನ್ಸ್ ಜೊತೆ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ನಗುವಿನಲ್ಲೇ ಸಂಭ್ರಮದ ಅಲೆ ಎಬ್ಬಿಸೋ ಆದಿತಿ ಪ್ರಭುದೇವ, ಮುಗ್ಧತೆಯ ಮತ್ತೊಂದು ಅವತಾರ ರಚನಾ ಇಂದರ್, ಅಮಾಯಕತೆಯನ್ನು ಕಣ್ಣುಗಳಲ್ಲಿ ತುಂಬಿಕೊಂಡಿರೊ ಮೇಘಾ ಶೆಟ್ಟಿ ಜೊತೆ ಗಣೇಶ್ ತ್ರಿಬ್ಬಲ್ ರೈಡಿಂಗ್ ಮಾಡಿರುವುದು ಸ್ಪೆಷಲ್ಲು. ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ಕ್ಕೆ ಬೆಳ್ಳಿತೆರೆಗೆ ಬರಲಿದೆ. ಸಿನಿಮಾದ ಪ್ರಚಾರವನ್ನ ವಿಭಿನ್ನವಾಗಿ ಮಾಡಿರೋ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚೆಲುವಿನ ಚಿತ್ತಾರ ಸಿನಿಮಾದ ಸ್ಟೈಲ್ನಲ್ಲೇ ಅಭಿಮಾನಿಗಳ ಜೊತೆ ಸೇರಿ ಬೈಕ್ ರೈಡಿಂಗ್ ಮಾಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್, ಚೆಲುವೆಯರ ಚಿತ್ತಾರವಿದು. ಸ್ಟೈಲು, ಸ್ಮೈಲಿಗಷ್ಟೇ ಅಲ್ಲ, ಟ್ರೆಂಡ್ ಸೆಟ್ಟರ್ ಕೂಡ ಆಗಿರೋ ಗಣೇಶ್ ಈಗ ಬೈಕ್ ಕ್ರೇಜ್ ಸೃಷ್ಟಿಸಿದ್ದಾರೆ. ಮುಂಗಾರು ಮಳೆ ಸಿನಿಮಾ ಬಂದಾಗ ಗಣೇಶ್ ಹಾಕಿದ್ದ ಕಾಸ್ಟ್ಯೂಮ್ಗಳು ಟ್ರೆಂಡ್ ಆಗಿದ್ದರೆ, ಚೆಲುವಿನ ಚಿತ್ತಾರದಲ್ಲಿ ಗಣೇಶ್ ಬೈಕ್ ಓಡಿಸಿದ್ದ ಸ್ಟೈಲ್ ಟ್ರೆಂಡ್ ಆಗಿತ್ತು. ಈಗ ಅದೇ ಸ್ಟೈಲ್ನಲ್ಲಿ ತ್ರಿಬ್ಬಲ್ ರೈಡಿಂಗ್ ಮಾಡಿದ್ದಾರೆ ಗಣೇಶ್.

    ಮಹೇಶ್ ಹೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಯಟ್ಟ ಯಟ್ಟ ಅನ್ನೋ ಸಾಂಗ್ ಇದೆ. ಈ ಹಾಡಿನಲ್ಲಿ ಗಣಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಹುಕ್ ಸ್ಟೆಪ್ಸ್ ಯಾರು ಚನ್ನಾಗಿ ಡಾನ್ಸ್ ಮಾಡುತ್ತಾರೋ ಅವರಲ್ಲಿ 25 ಜನರನ್ನ ಆಯ್ಕೆ ಮಾಡಿಕೊಂಡು ಅವರ ಜೊತೆ ರೈಡಿಂಗ್ ಹೋಗುತ್ತೇನೆ ಅಂತ ಗಣೇಶ್ ಹೇಳಿದ್ರು. ಹೀಗಾಗಿ ಈ ಡೈಹಾರ್ಡ್ ಪ್ಯಾನ್ಸ್ ಜೊತೆ ಗಣಿ ಬೈಕ್ ರೈಡ್ ಮಾಡಿದ್ದಾರೆ ಎಲ್ಲ 25 ಜನರ ಜೊತೆಯಲ್ಲೂ ರೈಡಿಂಗ್ ಹೋಗಿದ್ದು ವಿಶೇಷ.

    ತ್ರಿಬಲ್ ರೈಡಿಂಗ್ ಹೀರೋಯಿನ್ಸ್ ಕೂಡ ನಾವೇನು ಕಮ್ಮಿ ಅನ್ನೋ ತರಾ  ಫ್ಯಾನ್ಸ್ ಜೊತೆ ಬೈಕ್ ಹತ್ತಿ ರೈಡ್ ಮಾಡಿದ್ದಾರೆ. ನಟಿ ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ರೈಡ್ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ ನಾಯಕಿಯರೆಲ್ಲ ಹುಡುಗರ ಜೊತೆ ರೈಡಿಂಗ್ ಹೋದರೆ, ಗಣೇಶ್ ಹುಡುಗರು-ಹುಡುಗಿಯರು ಎಂಬ ಭೇದ ಭಾವ ಮಾಡಲಿಲ್ಲ.

  • ಗಣೇಶ್ ಫಾರ್ಮ್ ಹೌಸ್ ನಿರ್ಮಾಣಕ್ಕೆ ಕೋರ್ಟ್ ತಡೆ

    ಗಣೇಶ್ ಫಾರ್ಮ್ ಹೌಸ್ ನಿರ್ಮಾಣಕ್ಕೆ ಕೋರ್ಟ್ ತಡೆ

    ಚಾಮರಾಜನರಗ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ನಟ ಗಣೇಶ್ ಫಾರ್ಮ್ ಹೌಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜಕ್ಕಳ್ಳಿ ಗ್ರಾಮದ ಸರ್ವೆ ನಂ.105ರಲ್ಲಿನ 1 ಎಕರೆ 24 ಗುಂಟೆ ಜಮೀನಿನಲ್ಲಿ ಫಾರ್ಮ್ ಹೌಸ್ ನಿರ್ಮಾಣ ಮಾಡುವುದು ಗಣೇಶ್ ಯೋಜನೆ. 2022ರ ಜುಲೈನಲ್ಲಿ ಖರೀದಿಸಿದ್ದ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ನಡೆಸುವ ಪ್ಲಾನ್ ಇತ್ತು. ಈ ಜಾಗದಲ್ಲೀಗ ವಸತಿ ಗೃಹ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಭಿಪ್ರಾಯ ಪಟ್ಟಿದ್ದ  ಬಂಡೀಪುರ ಪರಿಸರ ಸೂಕ್ಷ್ಮ ವಲಯ ನಿಗಾ ಸಮಿತಿ ಕಟ್ಟಡ ನಿರ್ಮಾಣಕ್ಕೆ ತಡೆ ಕೊಟ್ಟಿತ್ತು.

    ಇದನ್ನು ಪ್ರಶ್ನಿಸಿ ಗಣೇಶ್ ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಗಣೇಶ್ ಅವರಿಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಗಣೇಶ್ ಅವರ ವಿರುದ್ಧ ಬಲವಂತದ ಕ್ರಮವನ್ನೂ ತೆಗೆದುಕೊಳ್ಳಬಾರದು ಎಂದು ಬಂಡೀಪುರ ಪರಿಸರ ಸೂಕ್ಷ್ಮ ವಲಯ ನಿಗಾ ಸಮಿತಿಯವರಿಗೂ, ಕಟ್ಟಡ ನಿರ್ಮಾಣ ಮುಂದುವರಿಸದಂತೆ ಗಣೇಶ್ ಅವರಿಗೂ ಸೂಚನೆ ನೀಡಿದೆ. ಒಂದು ವಾರದೊಳಗೆ ಗಣೇಶ್ ದಾಖಲೆ ಸಲ್ಲಿಸುವಂತೆಯೂ, ಒಟ್ಟಾರೆ ಪ್ರಕರಣ ಒಂದು ತಿಂಗಳಲ್ಲಿ ಮುಗಿಸುವಂತೆಯೂ ಆದೇಶ ನೀಡಿದೆ.

    ಬಂಡೀಪುರ ಪರಿಸರ ಸೂಕ್ಷ್ಮ ವಲಯ ನಿಗಾ ಸಮಿತಿಯ ಪ್ರಕಾರ ಈ ಭಾಗದಲ್ಲಿ ಕಾಂಕ್ರೀಟ್ ಬಳಸಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಸ್ಟೀಲ್ ಬಳಸಿ ಮಾಡಬಹುದು. ಆದರೆ ಈ ಕಟ್ಟಡದಲ್ಲಿ ಕಾಂಕ್ರೀಟ್ ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಮಸ್ಯೆಯಾಗಿದೆ.

    ಆದರೆ ಗಣೇಶ್ ಪರ ವಕೀಲ  ಸಿ.ಕೆ. ನಂದಕುಮಾರ್ ಅವರು ಹೈಕೋರ್ಟ್ನಲ್ಲಿ ನಟ ಗಣೇಶ್ ಅವರು ಅರಣ್ಯ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುತ್ತಿಲ್ಲ. 10 ಕಿಲೋ ಮೀಟರ್ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಿಸಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ಈಗ ಮಾರ್ಪಾಟಾಗಿದೆ. ಕೇವಲ ಭೂಮಿ ಸಮತಟ್ಟು ಮಾಡಿ ಸ್ಥಳಾಂತರಿಸಬಹುದಾದ ಸ್ಟೀಲ್ ಕಟ್ಟಡವನ್ನಷ್ಟೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ನೋಟೀಸ್ಗೆ ತಡೆಯಾಜ್ಞೆ ನೀಡಬೇಕು  ವಾದ ಮಂಡಿಸಿದ್ದಾರೆ.

     

  • ಗಣೇಶ್ ಮಗಳೂ ಕೂಡಾ ಚಿತ್ರರಂಗಕ್ಕೆ..

    ganesh family

    ಮೊನ್ನೆ ಮೊನ್ನೆಯಷ್ಟೇ ನಟ ಉಪೇಂದ್ರ ಮಗಳು ಚಿತ್ರರಂಗಕ್ಕೆ ಬಂದ ಸುದ್ದಿ ಓದಿದ್ದೀರಿ. ನಟ ದರ್ಶನ್ ಮಗ ಕೂಡಾ ತೆರೆಯ ಮೇಲೆ ಕಾಣಿಸಿಕೊಂಡಿದ್ದಾಗಿದೆ. ಈಗ ಗಣೇಶ್ ಪುತ್ರಿಯ ಸರದಿ. ಗಣೇಶ್ ಮಗಳು ಚಾರಿತ್ರ್ಯ ಚಮಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲೊಂದು ಪುಟ್ಟ ಮಗುವಿನ ಪಾತ್ರಕ್ಕೆ ಕ್ಯೂಟ್ ಆಗಿರುವ ಚೂಟಿ ಹುಡುಗಿ ಬೇಕಿತ್ತು. ನಿರ್ದೇಶಕರು ಚಾರಿತ್ರ್ಯಳನ್ನೇ ಆಯ್ಕೆ ಮಾಡಿಕೊಂಡರು ಎಂದಿದ್ದಾರೆ ಗಣೇಶ್.

    ಹೇಗಿದ್ದಾಳೆ ಚಾರಿತ್ರ್ಯ ಎಂದು ತಲೆ ಕೆಡಿಸಿಕೊಳ್ಳಬೇಕಿ. ಸಣ್ಣ ಫ್ಲ್ಯಾಷ್‍ಬ್ಯಾಕ್ ನೆನಪು ಮಾಡಿಕೊಳ್ಳಿ. ಅಮೂಲ್ಯ ಮದುವೆಯಲ್ಲಿ ದೊಡ್ಡವರನ್ನೆಲ್ಲ ದಂಗುಬಡಿಸುವಂತೆ ಓಡಾಡಿದ್ದ, ಕುಣಿದು ಕುಪ್ಪಳಿಸಿದ್ದ ಆ ಪುಟಾಣಿಯೇ  ಹುಡುಗಿಯೇ ಚಾರಿತ್ರ್ಯ. 

  • ಗಣೇಶ್ ಮನೆಯಲ್ಲಿ ಹೊಸ ದೇವದಾಸ್..!

    devdas at ganesh house

    ಗಣೇಶ್​ಗೂ, ದೇವದಾಸ್​ಗೂ ಅವಿನಾಭಾವ ಸಂಬಂಧ. ಅದು ಮುಂಗಾರು ಮಳೆ ಎಫೆಕ್ಟ್. ಆ ಚಿತ್ರದಲ್ಲಿ ದೇವದಾಸು ಅನ್ನೋ ಮೊಲದ ಪಾತ್ರ ತುಂಬಾನೇ ಹಿಟ್ ಆಗಿತ್ತು. ಒಂದರ್ಥದಲ್ಲಿ ದೇವದಾಸ್ ಚಿತ್ರದ ಇನ್ನೊಂದು ಪೋಷಕ ನಟ ಅಂದರೆ ತಪ್ಪಾಗಲಿಕ್ಕಿಲ್ಲ. 

    ಗಣೇಶ್ ತಮ್ಮ ಮಗ ವಿಹಾನ್​ಗೆ ಒಂದು ಪುಟ್ಟ ಮೊಲವನ್ನ ಗಿಫ್ಟಾಗಿ ಕೊಟ್ಟಿದ್ದಾರೆ. ಆ ಮೊಲಕ್ಕೆ ದೇವದಾಸ್ ಅಂತಾನೇ ಹೆಸರಿಟ್ಟಿದ್ದಾರೆ.  ಮುಂಗಾರು ಮಳೆಯಲ್ಲಿ ದೇವದಾಸ್​ ಮೊಲಕ್ಕೆ ಗಣೇಶ್ ಹೊಡೆದಿದ್ದ ಡೈಲಾಗ್​ಗಳು ಹಿಟ್ ಆಗಿದ್ದವು. ಗಣೇಶ್ ಮಗ ವಿಹಾನ್ ಕೂಡಾ, ಅವನ ದೇವದಾಸ್​ಗೆ ಹಾಗೇ ಡೈಲಾಗ್ ಹೊಡೀತಾನಾ..? ಗೋಲ್ಡನ್ ಸ್ಟಾರೇ ಹೇಳಬೇಕು.

  • ಗಣೇಶ್ ವಾಕಿಂಗ್ ವಿತ್ ಲಾರಿ ಟೈರ್..!

    ganesh workout

    ಗೋಲ್ಡನ್ ಸ್ಟಾರ್​ ಯಾಕಪ್ಪಾ ಲಾರಿ ಟೈರ್ ಜೊತೆ ವಾಕ್ ಮಾಡೋಕೆ ಹೋದ್ರು ಅಂತಾ ಗಾಬರಿಯಾಗ್ಬೇಡಿ. ಅದು ಗೋಲ್ಡನ್ ಸ್ಟಾರ್ ತಮ್ಮ ಮುಂದಿನ ಚಿತ್ರಕ್ಕೆ ತಯಾರಾಗುತ್ತಿರುವ ಪರಿ. ದೇಹವನ್ನು ದಂಡಿಸಿ, ಫಿಟ್​ನೆಸ್ ಕಾಪಾಡಿಕೊಳ್ಳಲು ಬೆವರು ಸುರಿಸುತ್ತಿರುವ ಗಣೇಶ್, ಪ್ರತಿದಿನ ಬಸ್ ಅಥವಾ ಲಾರಿಯ ಟೈರ್​ನ್ನು ಹಿಡಿದು ವಾಕಿಂಗ್ ಮಾಡುತ್ತಿದ್ಧಾರೆ. ಅದು ದಿಬ್ಬದಿಂದ ಕೆಳಗಿಳಿಯೋದು, ಕೆಳಗಿನಿಂದ ದಿಬ್ಬ ಹತ್ತೋದ್ರ ಮೂಲಕ ಕೊಬ್ಬು ಕರಗಿಸುತ್ತಿದ್ದಾರೆ.

    ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯ ಎದುರೇ ಪ್ರತಿದಿನ ಲಾರಿ ಟೈರ್ ಜೊತೆ ಸರ್ಕಸ್ ಮಾಡುತ್ತಿರುವ ಗಣೇಶ್, ಜಿಮ್​ನಲ್ಲಿಯೂ ಬೆವರು ಹರಿಸುತ್ತಿದ್ದಾರೆ. ಸ್ಕಿಪ್ಪಿಂಗ್ ಕೂಡಾ ಮಾಡುತ್ತಿದ್ದಾರೆ. ಮುಗಳುನಗೆ ಯಶಸ್ಸಿನಲ್ಲಿ ತೇಲುತ್ತಿರುವ ಗಣೇಶ್, ಆರೆಂಜ್ ಮತ್ತು ಚಮಕ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  • ಗಣೇಶ್ ವಿರುದ್ಧ ಸಂಘಟನೆಗಳ ಧ್ವನಿ.. ಗಣೇಶ್ ಪರ ನಿಂತ ಗ್ರಾಮಸ್ಥರು..

    ಗಣೇಶ್ ವಿರುದ್ಧ ಸಂಘಟನೆಗಳ ಧ್ವನಿ.. ಗಣೇಶ್ ಪರ ನಿಂತ ಗ್ರಾಮಸ್ಥರು..

    ಗೋಲ್ಡನ್ ಸ್ಟಾರ್ ಗಣೇಶ್ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಪ್ರಕರಣ ಹೈಕೋರ್ಟ್ ಮೆಟ್ಟಿಲು ಕೂಡ ಏರಿದ್ದು, ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಈ ಮಧ್ಯೆ ನಾವು ಜಮೀನು ಕೊಟ್ಟಿದ್ದೇ ತಪ್ಪು, ಬೇಗ ವಾಪಸ್ ತಗೊಳ್ತೀವಿ ಅಂತಿದೆ ಸರ್ಕಾರ. ಇದರ ನಡುವೆ ರೈತ ಸಂಘ ಕಟ್ಟಡ ನಿರ್ಮಾಣವನ್ನು ವಿರೋಧಿಸುತ್ತಿದೆ. ಆದರೆ ಗ್ರಾಮಸ್ಥರೇ ಗಣೇಶ್ ಪರ ನಿಂತಿರುವುದು ವಿಶೇಷ.

    ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಗಣೇಶ್ ಮನೆ ಕಾಮಗಾರಿ ಮಾಡುತ್ತಿರುವ ಸ್ಥಳಕ್ಕೆ ರೈತ ಸಂಘದ ಕಾರ್ಯಕರ್ತರು ತೆರಳಿ ಪ್ರತಿಭಟನೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಜಕ್ಕಹಳ್ಳಿ ಹಾಗೂ ಮಂಗಲ ಗ್ರಾಮಸ್ಥರು ಘೇರವ್ ಹಾಕಿ ಈ ಸ್ಥಳಕ್ಕೆ ಹೋಗದಂತೆ ತಡೆದು ರೈತ ಸಂಘಟನೆಯ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಗಣೇಶ್ ಅವರ ಕಟ್ಟಡ ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆ ಆಗುತ್ತಿಲ್ಲ. ಇಲ್ಲಿನ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಏನಾದರೂ ನಿಮಗೆ ಮನವಿ ಮಾಡಿದ್ದೇವೆಯೇ? ನಮಗೆ ತೊಂದರೆ ಆದರೆ ನಾವೇ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತೇವೆ. ನಿಮ್ಮ ಅವಶ್ಯಕತೆ ನಮಗಿಲ್ಲ. ನಿಮಗೆ ಜಾಗ ವೀಕ್ಷಣೆ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಘೇರಾವ್ ಹಾಕಿ ಪ್ರತಿಭಟನಾಕಾರರಿಗೆ ಪ್ರಶ್ನೆ ಮಾಡಿದ್ದಾರೆ.

    ನಮಗೆ ಯಾವ ಪರಿಸರವಾದಿಗಳು ಪ್ರತಿಭಟಿಸಲು ಹೇಳಿಲ್ಲ. ಕಾಡಂಚಿನ ಜನರಿಗೆ ಮಾತ್ರ ಕಾನೂನು ಕೇಳುವ ಸರ್ಕಾರ ಹಣವಂತರಿಗೆ ಹೇಗೆ ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತು ಎಂದು ತಿಳಿದುಕೊಳ್ಳುವ ಸಲುವಾಗಿ ಬಂದಿದ್ದೇವೆ" ಎಂದು ಗ್ರಾಮಸ್ಥರಿಗೆ ಹೇಳಿದರೂ ಕೂಡ ಅಲ್ಲಿನ ಜನರು ಪ್ರತಿಭಟನೆ ಮಾಡಲು  ಬಿಟ್ಟಿಲ್ಲ.

    ರಿಯಲ್ ಪ್ರಾಬ್ಲಂ ಆಗಿರುವುದು ಪೊಲೀಸರಿಗೆ. ಹೈಕೋರ್ಟ್ ಪ್ರಕಾರ ಅವರು ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಪಡಿಸುವಂತಿಲ್ಲ. ಇತ್ತ ರೈತ ಸಂಘದವರ ಪ್ರತಿಭಟನೆಗೂ ಅಡ್ಡಿ ಮಾಡುವ ಹಾಗಿಲ್ಲ. ಎಲ್ಲವನ್ನೂ ಮೀರಿ ಗ್ರಾಮಸ್ಥರು ಗಣೇಶ್ ಪರ ಇದ್ದಾರೆ. ಕೊನೆಗೆ ಪೊಲೀಸರು ರೈತ ಸಂಘದವರನ್ನೇ ಸಮಾಧಾನ ಮಾಡಿ ಕಳುಹಿಸಿದ್ದಾರೆ.

  • ಗಣೇಶ್ ಸೋದರನಿಗೆ ರವಿಚಂದ್ರನ್ ಚಿತ್ರದ ಟೈಟಲ್

    ganesh's brother gets ravichandran movie title

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಇನ್ನೊಬ್ಬ ಸಹೋದರನ ಸಿನಿಮಾ ರಂಗ ಪ್ರವೇಶವಾಗಿದೆ. ಈಗಾಗಲೇ ಮಹೇಶ್ ಎಂಬ ಗಣೇಶ್ ಅವರ ಸೋದರ ಹೀರೋ ಆಗಿ ಬಂದಿದ್ದಾಗಿದೆ. ಈಗ ಮತ್ತೊಬ್ಬ ಸೋದರ ಸೂರಜ್ ಕೃಷ್ಣ ಚಿತ್ರರಂಗಕ್ಕೆ ಬಂದಿದ್ದಾರೆ. ಭಾರ್ಗವ ಅವರ ಶಿಷ್ಯ ಶ್ರೀನಿವಾಸ್ ಶಿವಾರ ನಿರ್ದೇಶನದ ಚಿತ್ರದಲ್ಲಿ ಸೂರಜ್ ಹೀರೋ. ಚಿತ್ರದ ಹೆಸರು ನಾನೇ ರಾಜ.

    ನಾನೇ ರಾಜ, ರವಿಚಂದ್ರನ್ ಆರಂಭಿಕ ದಿನಗಳಲ್ಲಿ ನಟಿಸಿದ್ದ ಕನ್ನಡ ಸಿನಿಮಾ. ರವಿಚಂದ್ರನ್, ಅಂಬಿಕಾ, ಅಂಬರೀಷ್ ನಟಿಸಿದ್ದ ಚಿತ್ರವದು. 1984ರಲ್ಲಿ ತೆರೆ ಕಂಡಿದ್ದ ಸಿನಿಮಾ. ಈಗ ಆ ಟೈಟಲ್ ಸಿನಿಮಾದಲ್ಲಿ ಗಣೇಶ್ ಸೋದರ ಸೂರಜ್ ನಟಿಸುತ್ತಿದ್ದಾರೆ. ಸೋನಿಕಾ ಗೌಡ ನಾಯಕಿಯಾಗಿದ್ದು, ಇದೊಂದು ಪಕ್ಕಾ ಹಳ್ಳಿ ಸ್ಟೋರಿ ಎನ್ನಲಾಗಿದೆ.

  • ಗಣೇಶ್ ಹಾರರ್ ಸಿನಿಮಾ ಮಾಡಲು ಅವಳೇ ಕಾರಣ..!

    ganesh's daughter is reason for his scceptance

    ಗಣೇಶ್ ಎಂದರೆ ನಗು, ಕಾಮಿಡಿ, ಗಣೇಶ್ ಎಂದರೆ ಲವ್, ರೊಮ್ಯಾನ್ಸ್.. ಗಣೇಶ್ ಚಿತ್ರಗಳೆಂದರೆ ಇಂಪಾದ ಹಾಡು, ಕಣ್ಣು ತಂಪಾಗಿಸುವ ಹಸಿರು.. ಆದರೆ, ಇಂತಿಪ್ಪ ಗಣೇಶ್ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡೋಕೆ ಹೊರಟಿದ್ದಾರೆ. ನಾಗಣ್ಣ ನಿರ್ದೇಶನದಲ್ಲಿ ಹಾರರ್ ಸಿನಿಮಾ ಮಾಡೋಕೆ ಗಣೇಶ್ ಒಪ್ಪಿಕೊಂಡುಬಿಟ್ಟಿದ್ದಾರೆ.

    ಇಷ್ಟಕ್ಕೂ ಗಣೇಶ್ ಇಂಥಾದ್ದೊಂದು ಹಾರರ್ ಸಿನಿಮಾ ಮಾಡೋಕೆ ಕಾರಣ ಅವರ ಮಗಳಂತೆ. ಗಣೇಶ್ ಇವತ್ತಿಗೂ ಒಬ್ಬನೇ ಕುಳಿತು ಹಾರರ್ ಸಿನಿಮಾ ನೋಡಲ್ಲ. ಅಂಥಾದ್ದರಲ್ಲಿ ಹಾರರ್ ಸಿನಿಮಾದಲ್ಲಿ ನಟಿಸ್ತಾರೆ ಅಂದ್ರೆ ಅದಕ್ಕೆ ಕಾರಣ ಅವರ ಮಗಳ ಡಿಮ್ಯಾಂಡು. ಮಗಳಿಗೆ ಹಾರರ್ ಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ ಅಪ್ಪನೂ ಹಾರರ್ ಸಿನಿಮಾ ಮಾಡಬೇಕು ಎಂದು ದುಂಬಾಲು ಬಿದ್ದಿದ್ದಾಳೆ. ಅದೇ ಸಮಯಕ್ಕೆ ನಾಗಣ್ಣನವರ ಕಡೆಯಿಂದ ಕಥೆ ಸಿಕ್ಕಿದೆ. ಗಣೇಶ್ ಓಕೆ ಎಂದುಬಿಟ್ಟಿದ್ದಾರೆ. 

    ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಇದನ್ನೆಲ್ಲ ಹಂಚಿಕೊಂಡಿದ್ದಾರೆ ಗಣೇಶ್. ಅಫ್‍ಕೋರ್ಸ್.. ಮಗಳ ಆಜ್ಞೆಯನ್ನು ನಿರಾಕರಿಸುವ ಅಪ್ಪ ಯಾವನಿದ್ದಾನು ಜಗದಲ್ಲಿ...

  • ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರ ಉಡುಗೊರೆ : 'ನಾನಾಡದ ಮಾತೆಲ್ಲವ ಕದ್ದಾಲಿಸು..

    ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರ ಉಡುಗೊರೆ : 'ನಾನಾಡದ ಮಾತೆಲ್ಲವ ಕದ್ದಾಲಿಸು..

    ಮಿಂಚಾಗಿ ನೀನು ಬರಲು.. ಹಾಡು ನೆನಪಿದೆ ತಾನೇ. ಮರೆಯೋಕಾದರೂ ಹೇಗೆ ಸಾಧ್ಯ ಅಲ್ವಾ? ಆ ಹಾಡಿನ ಜೋಡಿ ಯೋಗರಾಜ್ ಭಟ್-ಜಯಂತ್ ಕಾಯ್ಕಿಣಿ-ಗೋಲ್ಡನ್ ಸ್ಟಾರ್ ಗಣೇಶ್-ಸೋನು ನಿಗಮ್. ಅವರೀಗ ಮತ್ತೆ ಒಂದಾಗಿದ್ದಾರೆ. ಹೊಸ ಹಾಡು ಬಿಟ್ಟಿದ್ದಾರೆ. 'ನಾನಾಡದ ಮಾತೆಲ್ಲವ ಕದ್ದಾಲಿಸು… ಅನ್ನೋ ಹಾಡು ಗಾಳಿಪಟ 2ನಲ್ಲಿದೆ. ಆ ಹಾಡು ಗಣೇಶ್ ಹುಟ್ಟುಹಬ್ಬಕ್ಕಾಗಿ ಗಾಳಿಪಟ 2 ತಂಡ ನೀಡುತ್ತಿರುವ ಕಾಣಿಕೆ.

    ನಮ್ಮ ಗಣಿ ಜುಲೈ 2ಕ್ಕೆ ಊರಿನಲ್ಲಿರೋದಿಲ್ಲ. ಇದು ಗಣೇಶ್ ಹುಟ್ಟುಹಬ್ಬಕ್ಕೆ ನಮ್ಮ ತಂಡದ ಉಡುಗೊರೆ ಎಂದ ಯೋಗರಾಜ್ ಭಟ್, ಹಾಡಿನ ಪದಪದದ ಅರ್ಥವನ್ನೂ ವಿವರಿಸಿ ಬರೆದಿರುವ ಜಯಂತ್ ಕಾಯ್ಕಿಣಿಯವರಿಗೆ ಧನ್ಯವಾದ ಅರ್ಪಿಸಿದರು. ಮಿಂಚಾಗಿ ಹಾಡಿನಂತೆಯೇ ಈ ಹಾಡು ಕೂಡಾ ಹಿಟ್ ಆಗಲಿದೆ ಎಂದರು ಭಟ್. ಈ ಹಾಡು ಕೇಳಿ ನಾನು ಮತ್ತೆ 15 ವರ್ಷ ಹಿಂದಕ್ಕೆ ಹೋದೆ. ಕುದುರೆಮುಖದಲ್ಲಿ ಸುಮಾರು 200 ಜನ ನೃತ್ಯಗಾರರೊಂದಿಗೆ ಹಾಡಿನ ಚಿತ್ರೀಕರಣವಾಗಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅದ್ಧೂರಿ ಸೆಟ್ ಹಾಕಿಸಿದ್ದರು ಎಂದು ನಿರ್ಮಾಪಕರನ್ನು ಮನಸಾರೆ ಹೊಗಳಿದರು ಯೋಗರಾಜ್ ಭಟ್. ಕಲಾ ನಿರ್ದೇಶಕ ಪಂಡಿತ್, ಡಾನ್ಸ್ ಮಾಸ್ಟರ್ ಧನು ಅವರನ್ನೂ ಮೆಚ್ಚಿಕೊಂಡರು.

    ಹಾಡು ತುಂಬಾ ಚೆನ್ನಾಗಿದೆ. ನನ್ನ ಮಗಳು ಸದಾ ಕೇಳುವ ಹಾಡಿದು. ಹಾಡಿಗೆ ಬಳಸಿದ ಪ್ರತಿ ವಸ್ತುಗಳನ್ನೂ ಮನೆಗೆ ತರಿಸಿ ಇಟ್ಟುಕೊಂಡಿದ್ದೇನೆ ಎಂದವರು ರಮೇಶ್ ರೆಡ್ಡಿ.

  • ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..?

    ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..?

    ಗಾಳಿಪಟದಲ್ಲೂ ಅಷ್ಟೆ, ಗಣಿ ಪಾತ್ರಕ್ಕೆ ಕನ್ನಡ ಬರ್ತಾ ಇರಲ್ಲ. ಆದರೆ, ಟೀಚರ್ ಡೈಸಿ ಬೋಪಣ್ಣ ಮೇಲೆ ಪ್ರೀತಿ ಹುಟ್ಟುತ್ತೆ. ನನಗೆ ಕನ್ನಡ ಬರದೇ ಇರೋದಕ್ಕೆ ಕಾರಣ ನಾನಲ್ಲ, ನನ್ನ ಅಪ್ಪ ಎನ್ನುವ ನಾಯಕ ಕಷ್ಟಪಟ್ಟು ಕನ್ನಡ ಕಲಿತು ನಾಯಕಿಯ ಹೃದಯ ಗೆಲ್ತಾನೆ. ಇಲ್ಲಿಯೂ ಗಣಿ ಸ್ಟೂಡೆಂಟು.

    ಅಂದಹಾಗೆ ಗಣಿಯ ಎದುರು ಜೋಡಿಯಾಗಿರೋದು ವೈಭವಿ ಶಾಂಡಿಲ್ಯ. ಚಿತ್ರದಲ್ಲಿ ವೈಭವಿಯವರದ್ದು ಕನ್ನಡವನ್ನು ಪ್ರೀತಿಸುವ ವಿದ್ಯಾರ್ಥಿನಿಯ ಪಾತ್ರ. ಶ್ವೇತಾ ಅನ್ನೋದು ವೈಭವಿಯ ಹೆಸರು. ಭಾಷೆಯನ್ನು ಪ್ರೀತಿಸುವ, ಆರಾಧಿಸುವ ವ್ಯಕ್ತಿತ್ವ ಶ್ವೇತಾಳದ್ದು. ಸಿನಿಮಾದಲ್ಲಿ ಕನ್ನಡವನ್ನು ಪ್ರೀತಿಸುವ ಹುಡುಗಿಯ ಪಾತ್ರ ಮಾಡಿರುವ ವೈಭವಿಗೆ ರಿಯಲ್ ಲೈಫಲ್ಲಿ ಕನ್ನಡ ಬರಲ್ಲ.  ಏಕೆಂದರೆ ಮೂಲ ಮುಂಬೈ.

    ನನಗೆ ಕನ್ನಡ ಬರಲ್ಲ. ಆದರೆ ನಾನು ಮಾಡುವ ಚಿತ್ರ ಮತ್ತು ಪಾತ್ರದ ಕುರಿತು ತಿಳಿದುಕೊಳ್ಳೋದು ನನ್ನ ಆದ್ಯತೆಯಾಗಿತ್ತು. ಅದಕ್ಕಾಗಿಯೇ ಗಾಳಿಪಟ ಚಿತ್ರವನ್ನು ನೋಡಿದೆ. ಒಂದ್ಸಲ ಸಬ್ ಟೈಟಲ್ ಜೊತೆ ನೋಡಿ, ಇನ್ನೊಂದ್ಸಲ ಸಬ್ ಟೈಟಲ್ ಇಲ್ಲದೆ ನೋಡಿದೆ. ಚಿತ್ರ ಇಷ್ಟವಾಯಿತು. ಯೋಗರಾಜ್ ಭಟ್ ಅವರ ವರ್ಕಿಂಗ್ ಸ್ಟೈಲ್ ಕೂಡಾ ಗೊತ್ತಾಯ್ತು ಎಂದಿದ್ದಾರೆ ವೈಭವಿ.

    ಯೋಗರಾಜ್ ಭಟ್ ಅವರ ಬಳಿ ಸೀನ್ ಮತ್ತು ಡೈಲಾಗ್ ಮೊದಲೇ ತೆಗೆದುಕೊಂಡು ಸಂಪೂರ್ಣ ಸಿದ್ಧವಾಗಿಯೇ ಸೆಟ್‍ಗೆ ಹೋಗುತ್ತಿದೆ. ಅವರು ಬರೆಯುವ ಒಂದೊಂದು ಸಾಲೂ ಮುತ್ತು ಪೋಣಿಸಿದಂತೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ನನ್ನ ಬೆಸ್ಟ್ ಕೊಟ್ಟಿದ್ದೇನೆ ಎನ್ನುತ್ತಾರೆ ವೈಭವಿ.

    ಗಣೇಶ್ ಜೊತೆ ನಟಿಸಿದ್ದು ಒಂಥರಾ ಸುಂದರ ಅನುಭವ. ಈ ಚಿತ್ರ ನನಗೆ ಖಂಡಿತಾ ಬ್ರೇಕ್ ಕೊಡಲಿದೆ ಎನ್ನುವುದು ವೈಭವಿ ಅವರ ವಿಶ್ವಾಸ.

  • ಗಣೇಶ್`ಗೆ ಗಟ್ಟಿಮೇಳ ಸಾಹಿತ್ಯ ಜೋಡಿ..!

    ಗಣೇಶ್`ಗೆ ಗಟ್ಟಿಮೇಳ ಸಾಹಿತ್ಯ ಜೋಡಿ..!

    ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇತ್ತೀಚೆಗೆ ಡಬಲ್ ಡಬಲ್ ಧಮಾಕಾ. ಗಣೇಶ್ ಚಿತ್ರಗಳಲ್ಲಿ ಹೆಚ್ಚಾಗಿ ಇಬ್ಬಿಬ್ಬರು ಹೀರೋಯಿನ್ ಕಾಣಿಸುತ್ತಿದ್ದಾರೆ. ಕೃಷ್ಣಂ ಪ್ರಣಯ ಸಖಿ ಅನ್ನೋ ಹೊಸ ಚಿತ್ರದಲ್ಲೂ ಗಣೇಶ್ ಅವರಿಗೆ ಇಬ್ಬರು ಹೀರೋಯಿನ್ಸ್. ಇತ್ತೀಚೆಗೆ ಸಿನಿಮಾ ಸೆಟ್ಟೇರಿತ್ತು. ಮಾಳವಿಕಾ ನಾಯರ್ ನಾಯಕಿ ಎನ್ನಲಾಗಿತ್ತು. ಇದೀಗ ಎರಡನೇ ನಾಯಕಿಯಾಗಿ ಶರಣ್ಯ ಶೆಟ್ಟಿ ಎಂಬುವವರನ್ನು ಆಯ್ಕೆ ಮಾಡಿದ್ದಾರೆ ಡೈರೆಕ್ಟರ್ ಶ್ರೀನಿವಾಸ ರಾಜು.

    ಯಾರಿದು ಶರಣ್ಯ ಶೆಟ್ಟಿ ಅಂದ್ರೆ ಗಟ್ಟಿಮೇಳ ಧಾರಾವಾಹಿಯ ಸಾಹಿತ್ಯ ಪಾತ್ರಧಾರಿ.  ಪ್ರಿಯಾಂಕಾ ಉಪೇಂದ್ರ ಅಭಿನಯದ ‘1980’ ಚಲನಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಶರಣ್ಯ ಶೆಟ್ಟಿ, ‘ಹುಟ್ಟು ಹಬ್ಬದ ಶುಭಾಶಯಗಳು’, ‘ಪೆಂಟಗನ್’, ‘ರವಿ ಬೋಪಣ್ಣ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಇತ್ತೀಚೆಗೆ ದಂಡುಪಾಳ್ಯ ಸೇರಿದಂತೆ ರಕ್ತಸಿಕ್ತ ಚಿತ್ರಗಳನ್ನೇ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಶ್ರೀನಿವಾಸ ರಾಜು, ಈ ಚಿತ್ರದ ಮೂಲಕ ರೊಮ್ಯಾಂಟಿಕ್ ಮೂಡಿಗೆ ಬಂದಿದ್ದಾರೆ.

  • ಗಣೇಶ್`ಗೆ ಸಿಕ್ಕರು ಸಖತ್ ಟೀಚರ್

    ಗಣೇಶ್`ಗೆ ಸಿಕ್ಕರು ಸಖತ್ ಟೀಚರ್

    ಗೋಲ್ಡನ್ ಸ್ಟಾರ್ ಗಣೇಶ್‍ಗೆ ಹೊಸ ಟೀಚರ್ ಸಿಕ್ಕಿದ್ದಾರೆ. ನೋಡೋಕೆ ಸುಂದರಿ. ಹೆಸರು ನಕ್ಷತ್ರ. ಮಾನಸಿಕವಾಗಿ ಕುಗ್ಗಿದವರಿಗೆ ಭರವಸೆ ತುಂಬುವ ಶಕ್ತಿ ಆಕೆಯ ಮಾತು ಮತ್ತು ಕಣ್ಣ ನೋಟದಲ್ಲಿದೆ. ಇಂತಾ ಟೀಚರ್ ಎಂಟ್ರಿ ಕೊಟ್ಟ ಮೇಲೆ ಗಣೇಶ್ ಲೈಫು ಚೇಂಜ್ ಆಗಬೇಕು ಅಲ್ವೇ..

    ಚೇಂಜ್ ಆಗುತ್ತಾ.. ಇಲ್ವಾ.. ಅನ್ನೋದನ್ನ ಸಿಂಪಲ್ ಸುನಿ ಹೇಳಬೆಕು. ಅವರೇ ಗ್ರೀನ್ ಸಿಗ್ನಲ್ ಕೊಡದಿದ್ದರೆ ನಕ್ಷತ್ರ ಅಲಿಯಾಸ್ ನಿಶ್ವಿಕಾ ನಾಯ್ಡು ತಾನೇ ಏನ್ ಮಾಡೋಕಾಗುತ್ತೆ.. ಹೇಳಿ..

    ಅಂದಹಾಗೆ ಇದು ಸಖತ್ ಸಿನಿಮಾ ಸುದ್ದಿ. ಇತ್ತೀಚೆಗಷ್ಟೇ ಶರಣ್ ಚಿತ್ರಕ್ಕೆ ಹೀರೋಯಿನ್ ಆಗಿದ್ದ ನಿಶ್ವಿಕಾ ನಾಯ್ಡು, ಈಗ ಗಣೇಶ್ ಚಿತ್ರಕ್ಕೂ ಹೀರೋಯಿನ್ ಆಗಿದ್ದಾರೆ. ಸಖತ್ ಚಿತ್ರದಲ್ಲಿ ಅವರದ್ದು ನಕ್ಷತ್ರ ಅನ್ನೋ ಟೀಚರ್ ಪಾತ್ರ. ಮಾರ್ಚ್ 22ರಿಂದ ನಿಶ್ವಿಕಾ ನಾಯ್ಡು ಸಖತ್ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದ, ಹೆಡ್ ಮಾಸ್ಟರ್ ಸಿಂಪಲ್ ಸುನಿ ಹೇಳಿದಂತೆ ಪಾಠ ಮಾಡಲಿದ್ದಾರೆ.

  • ಗಣೇಶ್`ಗೇ ಚಮಕ್ಕಾ.. ಸುಂದರೀರ ಬೊಂಬಾಟ್ ಕಾಮಿಡಿ

    ಗಣೇಶ್`ಗೇ ಚಮಕ್ಕಾ.. ಸುಂದರೀರ ಬೊಂಬಾಟ್ ಕಾಮಿಡಿ

    ಚಿತ್ರದ ಟ್ರೇಲರ್ ನೋಡಿದವರಿಗೆ ಅನಿಸಿದ್ದೇ ಒಂದು. ಚಿತ್ರದಲ್ಲಿ ಇರೋದೇ ಇನ್ನೊಂದು. ಏಕೆಂದರೆ ಸಿನಿಮಾದಲ್ಲಿ ರಾಮ್`ನನ್ನು ಲವ್ ಮಾಡೋದು ರಮ್ಯಾ..ರಕ್ಷಿತಾ ಮತ್ತು ರಾಧಿಕಾ. ಜೊತೆ ರಶ್ಮಿಕಾ ಅನ್ನೋ ಇನ್ನೊಂದು ಪಾತ್ರವೂ ಇದೆ. ತ್ರಿಬ್ಬಲ್ ರೈಡಿಂಗ್‍ನಲ್ಲಿ ಗಣೇಶ್ ಸಕಲಕಲಾವಲ್ಲಭನೇ ಆದರೂ, ಆತನಿಗೆ ಆಟವಾಡಿಸೋದು ಆದಿತಿ ಪ್ರಭುದೇವ. ಮೇಘಾ ಶೆಟ್ಟಿ ಮತ್ತು ರಚನಾ ಇಂದರ್. ಗಣೇಶ್  ಜೊತೆ ಹುಡುಗಿಯರು ಆಡುವ ಲವ್ ಗೇಮ್‍ನಲ್ಲಿ ಲಾಜಿಕ್ ಇಲ್ಲ. ಭರಪೂರ ಮ್ಯಾಜಿಕ್ ಇದೆ. ಸೀರಿಯಸ್ ಸಾಕಪ್ಪಾ ಸಾಕು, ಒಂದಷ್ಟು  ಹೊತ್ತು ನಗೋಣ ಎಂದುಕೊಂಡು ಸಿನಿಮಾಗೆ ಹೋದವರಿಗೆ ಬಂಪರ್ ಬಹುಮಾನ.  

    ಗಣೇಶ್ ಜೊತೆ ನಟಿಸಿರೋ ಚೆಲುವೆಯರು ಗಣೇಶ್‍ಗೆ ಚಮಕ್ ಕೊಡೋದು ಕಿಕ್ ಕೊಡುತ್ತಾ ಹೋಗುತ್ತದೆ. ಗರುಡನ ಪಾತ್ರದಲ್ಲಿರೋ ಸಾಧು ಕೋಕಿಲ ಕಡೆಯವರೆಗೂ ನಗಿಸುತ್ತಾರೆ. ರವಿಶಂಕರ್ ಎಂಟ್ರಿ ಆದ ಮೇಲೆ ಧಾಂಧೂಂಮಜಾಕ. ಮಹೇಶ್ ಗೌಡ ನಕ್ಕು ನಗಿಸುತ್ತಲೇ ಬೊಂಬಾಟ್ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ಪ್ರೇಕ್ಷಕರಿಗೂ ಇಷ್ಟವಾಗಿದೆ.

  • ಗಣೇಶ್-ಸುನಿ ಸಖತ್

    ganesh - suni combination's next titled sakkath

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ನಿನ ಹೊಸ ಸಿನಿಮಾ ಸಖತ್ ಆಗಿದೆ. ಸಖತ್ತಾಗಿರುತ್ತೆ ಬಿಡ್ರಿ.. ಒಳ್ಳೆ ಕಾಂಬಿನೇಷನ್ನು.. ಅದೇ ರೀ ಸಖತ್..

    ಹೌದ್ರೀ.. ನಾನೂ ಅದನ್ನೇ ಹೇಳಿದ್ದು. ಆ ಸುನಿ ಪೆನ್ನಲ್ಲಿ ಸಖತ್ತು.. ಈ ಗಣೇಶು ಡೈಲಾಗಲ್ಲಿ ಸಖತ್ತು.. ಒಳ್ಳೆ ಕಾಂಬಿನೇಷನ್ನು.. ಅಯ್ಯೋ.. ಹಂಗಲ್ರೀ.. ಅವರ ಹೊಸ ಸಿನಿಮಾ ಟೈಟಲ್ಲೇ ಸಖತ್.

    ಅರೇ.. ಹೌದಾ.. ಈ ಸುನಿನೇ ಹಿಂಗೆ ಬಿಡಪ್ಪಾ.. ಏನೇನೋ ಮಾಡ್ತಿರ್ತಾರೆ.. ಅತ್ತ ಸುನಿ ಅವತಾರ ಪುರುಷನಿಗೆ ಫೈನಲ್ ಟಚ್ ಕೊಡುತ್ತಿದ್ದರೆ, ಇತ್ತ ಗಣೇಶ್ ಭಟ್ಟರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾರೆ. ಈ ಸೈಕಲ್  ಗ್ಯಾಪಲ್ಲೇ ಹೊಸ ಸುನಿ-ಗಣೇಶ್ ಹೊಸ ಚಿತ್ರ `ಸಖತ್'ಗೆ ಬುನಾದಿ ಹಾಕಿದ್ದಾರೆ. ಭರಾಟೆ ಸುಪ್ರೀತ್ ನಿರ್ಮಾಣದ `ಸಖತ್'ಗೆ ನಾಯಕಿಯಾಗಿರೋದು ಸುರಭಿ ಅನ್ನೋ ಚೆಲುವೆ.

     

  • ಗಣೇಶ್.. ಭಯ ಹುಟ್ಟಿಸ್ತಾರಂತೆ..!

    ganesh's next is horror movie

    ಗೋಲ್ಡನ್ ಸ್ಟಾರ್ ಗಣೇಶ್, ಮುಂಗಾರು ಮಳೆಯಿಂದ ಅಮರಪ್ರೇಮಿಯಾದವರು. ಅದಕ್ಕೂ ಮುನ್ನ ಕಾಮಿಡಿ ಟೈಂ ಗಣೇಶ್ ಆಗಿದ್ದವರು. ಶಾಲೆ, ಕಾಲೇಜು ದಿನಗಳಲ್ಲಿ ಎಚ್ಚಮನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದವರು. ಆದರೆ, ಚಿತ್ರರಂಗಕ್ಕೆ ಬಂದ ಮೇಲೆ ಗಣೇಶ್ ಹೃದಯಕ್ಕೆ ಕೈ ಹಾಕುವ ಪಾತ್ರಗಳಲ್ಲಿ ನಟಿಸಿದರೇ ಹೊರತು, ಹೃದಯ ಬಡಿತವನ್ನು ಹೆಚ್ಚಿಸುವ ಚಿತ್ರಗಳಲ್ಲಿ ನಟಿಸಲೇ ಇಲ್ಲ. ಈಗ ಅಂಥಾದ್ದೊಂದು ಅವಕಾಶ ಗಣೇಶ್ ಅವರನ್ನು ಹುಡುಕಿಕೊಂಡು ಬಂದಿದೆ.

    ಗಣೇಶ್, ಇದೇ ಮೊದಲ ಬಾರಿಗೆ ನಾಗಣ್ಣ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಯೆಸ್ ಎಂದಿದ್ದಾರೆ. ಅದು ಹಾರರ್ ಸಿನಿಮಾ. ಅರ್ಥಾತ್ ಭಯ ಹುಟ್ಟಿಸುವ ಚಿತ್ರ. 

    ಸದ್ಯಕ್ಕೆ ಗಣೇಶ್ ಆರೆಂಜ್ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ನಾಗಣ್ಣ ಕುರುಕ್ಷೇತ್ರದಲ್ಲಿ ಬ್ಯುಸಿ. ಜೂನ್ ಕೊನೆಯ ವಾರದಲ್ಲಿ ಗಣೇಶ್ ಹಾರರ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  • ಗಣೇಶ್‍ಗೆ 10 ವರ್ಷದ ಬಳಿಕೆ 75 ಲಕ್ಷ

    ganesh wins 75 lakhs compensation

    ಗೋಲ್ಡನ್ ಸ್ಟಾರ್ ಗಣೇಶ್‍ಗೆ 10 ವರ್ಷಗಳ ಹಿಂದೆಯೇ ಸಿಗಬೇಕಿದ್ದ 75 ಲಕ್ಷ, ಈಗ ಸಿಕ್ಕಿದೆ. 2008ರಲ್ಲಿ ತೆರೆಗೆ ಬಂದಿದ್ದ ಚೆಲುವಿನ ಚಿತ್ತಾರ ಚಿತ್ರ ನೆನಪಿದೆ ತಾನೇ.. ಆ ಚಿತ್ರದ ನಿರ್ಮಾಪಕರು ಹಾಗೂ ಮೋಕ್ಷ ಅಗರಬತ್ತಿ ಕಂಪೆನಿ ನಡುವೆ 3 ತಿಂಗಳ ಪ್ರಚಾರದ ಒಪ್ಪಂದವಾಗಿತ್ತು.  ಆದರೆ ಮೋಕ್ಷ ಅಗರಬತ್ತಿ ಕಂಪೆನಿಯವರು ಒಪ್ಪಂದ ಮುಗಿದ ನಂತರವೂ ಗಣೇಶ್ ಫೋಟೋ ಬಳಸುವುದನ್ನು ಕೈಬಿಡಲಿಲ್ಲ. ಹೀಗಾಗಿ ಗಣೇಶ್ ಕೋರ್ಟ್ ಮೆಟ್ಟಿಲೇರಿದ್ದರು.

    2008ರಲ್ಲಿಯೇ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದ ತೀರ್ಪು ಈಗ ಹೊರಬಿದ್ದಿದೆ. ಮೋಕ್ಷ ಅಗರಬತ್ತಿ ಕಂಪೆನಿಯವರು ಗಣೇಶ್‍ಗೆ 75 ಲಕ್ಷ ನೀಡುವಂತೆ ಕೋರ್ಟ್ ಆದೇಶ ಕೊಟ್ಟಿದೆ. ನಿರ್ದೇಶಕ ನಾರಾಯಣ್ ಇದಕ್ಕೆ ಹೊಣೆ ಎಂಬ ಮೋಕ್ಷ ಕಂಪೆನಿ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಒಟ್ಟಿನಲ್ಲಿ ಗಣೇಶ್‍ಗೆ 10 ವರ್ಷಗಳ ನಂತರ, ಅವರಿಗೆ ಬರಬೇಕಿದ್ದ 75 ಲಕ್ಷ ಸಿಗುತ್ತಿದೆ. ಜೊತೆಗೆ ಕಲಾವಿದರ ಫೋಟೋಗಳನ್ನು ಅವರ ಒಪ್ಪಿಗೆ ಇಲ್ಲದೆ ಬಳಸುವುದು ಅಪರಾಧ ಎಂಬ ಸಂದೇಶವನ್ನೂ ಈ ಆದೇಶ ನೀಡಿದೆ.

    Related Articles :-

    Ganesh Wins Compensation In Photo Misuse Case

  • ಗಾಳಿಪಟ 2 - ನಿರ್ಮಾಪಕ, ಕಲಾವಿದರ ಬದಲಾವಣೆಯ ಪ್ರವಾಹ..!

    ramesh reddy takes over gaalipata 2

    ಗಾಳಿಪಟ 2 ಚಿತ್ರ ತಂಡದಲ್ಲಿ ದಿಢೀರ್ ದಿಢೀರನೆ ಬದಲಾವಣೆಗಳಾಗುತ್ತಿವೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರ ಶುರುವಾದಾಗಲೇ ಹೀರೋಗಳ ಬದಲಾವಣೆಯಾಗಿತ್ತು. ಶರಣ್, ರಿಷಿ ಬದಲಾಗಿ.. ಗಣೇಶ್, ದಿಗಂತ್ ಬಂದಿದ್ದರು. ಈಗ ನಾಯಕಿಯರು ಹಾಗೂ ನಿರ್ಮಾಪಕರ ಬದಲಾವಣೆಯಾಗಿದೆ.

    ಆದಿತಿ ಪ್ರಭುದೇವ, ಸೋನಲ್ ಮಂಥೆರೋ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಹಾಗೂ ಸಂಯುಕ್ತಾ ಮೆನನ್ ಬಂದಿದ್ದಾರೆ. ಬದಲಾವಣೆಯಾಗದೆ ಉಳಿದಿರುವುದು ಶರ್ಮಿಳಾ ಮಾಂಡ್ರೆ.

    ನಿರ್ಮಾಪಕರಾಗಿದ್ದ ಮಹೇಶ್ ದಾನಣ್ಣವರ್ ಸ್ಥಾನಕ್ಕೆ ರಮೇಶ್ ರೆಡ್ಡಿ ನುಂಗ್ಲಿ ಬಂದಿದ್ದಾರೆ. ಪಡ್ಡೆಹುಲಿ, ನಾತಿಚರಾಮಿ, 100 ಚಿತ್ರಗಳ ನಿರ್ಮಾಪಕರಾಗಿರುವ ರಮೇಶ್ ರೆಡ್ಡಿ ನುಂಗ್ಲಿ ಸೂರಜ್ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಗಣೇಶ್ ಎದುರು ವೈಭವಿ ನಾಯಕಿ. ಇವರು ತಮಿಳು, ಮರಾಠಿಯಲ್ಲಿ ಹೆಸರು ಮಾಡಿರುವ ಹುಡುಗಿ. ಶರಣ್ ಎದುರು ರಾಜ್ ವಿಷ್ಣು ಚಿತ್ರದಲ್ಲಿ ನಾಯಕಿಯಾಗಿದ್ದವರು. ಸಂಯುಕ್ತಾ ಮೆನನ್, ಮಲಯಾಳಂ ಚೆಲುವೆ. ಇವರು ದಿಗಂತ್‍ಗೆ ಜೋಡಿಯಾಗಲಿದ್ದಾರೆ. ಶರ್ಮಿಳಾ ಮಾಂಡ್ರೆ, ಪವನ್‍ಗೆ ಜೋಡಿಯಾಗಲಿದ್ದು, ನಿಶ್ವಿಕಾ ನಾಯ್ಡು ಗೆಸ್ಟ್ ರೋಲ್‍ನಲ್ಲಿ ಬರಲಿದ್ದಾರೆ.

    ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.

    ಇಷ್ಟಕ್ಕೂ ಇಷ್ಟೆಲ್ಲ ಬದಲಾವಣೆಗೆ ಕಾರಣ, ಪ್ರವಾಹ. ಪ್ರವಾಹ ಬಂದು ಚಿತ್ರೀಕರಣ ತಡವಾಗಿ, ಡೇಟ್ಸ್‍ಗಳು ಹೊಂದಾಣಿಕೆಯಾಗದೆ ಅನಿವಾರ್ಯವಾಗಿ ಕಲಾವಿದರ ಬದಲಾವಣೆಯಾಗಿದೆ ಎಂದಿದ್ದಾರೆ ಯೋಗರಾಜ್ ಭಟ್

  • ಗಾಳಿಪಟ 2 : ಭಟ್ಟರು ನಗಿಸ್ತಾರಾ? ಅಳಿಸ್ತಾರಾ?

    ಗಾಳಿಪಟ 2 : ಭಟ್ಟರು ನಗಿಸ್ತಾರಾ? ಅಳಿಸ್ತಾರಾ?

    ಗಾಳಿಪಟ 2 ಚಿತ್ರದ ಟ್ರೇಲರ್ ನೋಡಿದವರಿಗೆ ಕಾಣುತ್ತಿರುವ ಮತ್ತು ಕಾಡುತ್ತಿರುವ ಅಂಶ ಇದೇ. ಚಿತ್ರದಲ್ಲಿ ಮೂವರು ಗೆಳೆಯರ ಮಜವಾದ ಲವ್ ಸ್ಟೋರಿಯನ್ನ ನಿಜವಾದ ಪನ್&ಫನ್‍ಗಳ ಮೂಲಕ ಹೇಳಿದ್ದಾರಂತೆ ಭಟ್ಟರು. ಎಂದಿನಂತೆ.. ಭಟ್ಟರು ಈ ಬಾರಿಯೂ ಹೊಸದೊಂದು ಕನಸಿನ ಕೋಟೆ ಕಟ್ಟಿದ್ದಾರೆ. ಗಾಳಿಪಟದಲ್ಲಿ ಮುಗಿಲ್‍ಪೇಟೆ ಸೃಷ್ಟಿಸಿದ್ದ ಯೋಗರಾಜ್ ಭಟ್, ಇಲ್ಲಿ ನೀರಕೋಟೆ ಅನ್ನೋ ಇನ್ನೊಂದು ಜಗತ್ತು ಸೃಷ್ಟಿಸಿದ್ದಾರೆ. ಅಲ್ಲೊಂದು ಶಾಲೆ.. ಆ ಶಾಲೆಯ ತುಂಟ ಹುಡುಗರೇ ಈ ಗಣಿ, ದಿಗ್ಗಿ ಮತ್ತು ಭೂಷಿ.  ಅವರ ಏಕಾಗ್ರತೆ ಕೆಡಿಸಲೆಂದು ಬರುವ ಅಪ್ಸರೆಯರೇ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ನಿಶ್ವಿಕಾ ನಾಯ್ಡು.. ಆದರೆ.. ಇಡೀ ಕಥೆ ಇದ್ದಕ್ಕಿದ್ದಂತೆ ಸೀರಿಯಸ್ ಆಗುತ್ತೆ.

    ಅನುಮಾನವೇ ಇಲ್ಲದಂತೆ ಅಲ್ಲೊಂದಿಷ್ಟು ಕಣ್ಣೀರು ಹಾಕಿಸುವ ಕಥೆಯೂ ಇದೆ. ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಜೋಡಿ ಕಣ್ಣೀರು ಹರಿಸಲೆಂದೇ ಬರುತ್ತಿದ್ದಾರೇನೋ ಎಂಬಂತೆ ನಗಿಸಿದ್ದಾರೆ. ಅನಂತ್ ನಾಗ್ ಹುಚ್ಚನಾ..? ಅಲ್ಲೇ ಇರೋದು ಟ್ವಿಸ್ಟು.

    ಸಿಂಪಲ್ಲಾಗ್ ಹೇಳ್ಬೇಕಂದ್ರೆ ಭಟ್ಟರು ಈ ಬಾರಿಯೂ ಎಂದಿನಂತೆ ಒಂದು ವಿಶಿಷ್ಟ ಕಥೆಯನ್ನ ವಿಶೇಷ ಶೈಲಿಯಲ್ಲಿ ಹೇಳೋಕೆ ಬಂದಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ಕು ಮ್ಯಾಜಿಕ್ ಮಾಡಿದರೆ, ಕಾಯ್ಕಿಣಿ ಸಾಹಿತ್ಯ ಕರಾಮತ್ತು ಮಾಡುತ್ತಿದೆ. ಚಿತ್ರದ ಟ್ರೇಲರ್`ನಲ್ಲೇ ಪುಟ್ಟದೊಂದು ಕಥೆ ಹೇಳಿರುವ ಭಟ್ಟರು ಮುಂದಿನ ವಾರ ಕಂಪ್ಲೀಟ್ ಸಿನಿಮಾ ತೋರಿಸಲಿದ್ದಾರೆ.

  • ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 

    ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 

    ಗಾಳಿಪಟ 2 ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ. ಎಲ್ಲೆಡೆ ಚಿತ್ರಮಂದಿರಗಳು ಹೌಸ್‍ಫುಲ್ ಆಗಿವೆ. ಕೆಲವು ಥಿಯೇಟರುಗಳಲ್ಲಂತೂ ಪ್ರೇಕ್ಷಕರು ಗೊಂದಲದಿಂದಾಗಿ ಗಲಾಟೆಯೂ ಆಗಿವೆ. ಮೊದಲ ದಿನವೇ ಭರ್ಜರಿ ಯಶಸ್ಸಿನ ಸುಳಿವು ಕೊಟ್ಟಿದ್ದಾರೆ ಭಟ್-ಗಣಿ ಜೋಡಿ. ಗಾಳಿಪಟ 2 ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡಿರುವ 4ನೇ ಸಿನಿಮಾ. ಈ ಹಿಂದಿನ ಎಲ್ಲ ಚಿತ್ರಗಳೂ ಸಕ್ಸಸ್ ಆಗಿರುವ ಹಿನ್ನೆಲೆಯಲ್ಲಿ ಗಾಳಿಪಟ 2 ಮೇಲೆ ಭರ್ಜರಿ ನಿರೀಕ್ಷೆಯೂ ಇತ್ತು.

    ಏಕೆಂದರೆ ಗಾಳಿಪಟ ಹೆಸರಿಗೇ ಅಂತದ್ದೊಂದು ಚರಿತ್ರೆ ಇದೆ. ಭಟ್-ಗಣೇಶ್ ಜೋಡಿಯ ಗಾಳಿಪಟ ಚಿತ್ರದ ಟೈಟಲ್ ಇಟ್ಟುಕೊಂಡ ಮೇಲೆ ಚಿತ್ರ ಯಾವುದೇ ಕಾರಣಕ್ಕೂ ಕಡಿಮೆ ಎನ್ನಿಸಬಾರದು ಅನ್ನೋದು ನನ್ನ ಆಸೆಯಾಗಿತ್ತು. ಅದರಂತೆಯೇ ಚಿತ್ರ ಚೆನ್ನಾಗಿ ಬಂದಿದೆ ಎಂದು ಖುಷಿ ಹಂಚಿಕೊಂಡಿರೋದು ರಮೇಶ್ ರೆಡ್ಡಿ. ಗಾಳಿಪಟ ಟೈಟಲ್`ಗೆ ಒಂದು ಘನತೆ ಇದೆ. ಅದಕ್ಕೆ ಅಪವಾದವಾಗದಂತೆ ಸಿನಿಮಾ ಮಾಡಿದ್ದೇವೆ ಎಂದಿರೋ ರಮೇಶ್ ರೆಡ್ಡಿ ಚಿತ್ರಕ್ಕೆ ದೇಶವಿದೇಸಗಳಲ್ಲಿ 800+ ಮತ್ತು ಕರ್ನಾಟಕವೊಂದರಲ್ಲೇ 225ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡಿದ್ದಾರೆ. ಗಾಳಿಪಟ ಅನ್ನೋದು ನನ್ನ ಪಾಲಿಗೆ ಸಿನಿಮಾ ಅಲ್ಲ. ಅದೊಂದು ಎಮೋಷನ್ ಎಂದಿದ್ದಾರೆ ಗಣೇಶ್.