ಗೋಲ್ಡನ್ ಸ್ಟಾರ್ ಗಣೇಶ್ ಅಭಿನದಯ ಗೀತಾ ರಿಲೀಸ್ಗೆ ರೆಡಿಯಾಗುತ್ತಿದೆ. ಸಿನಿಮಾ ರಿಲೀಸ್ಗೂ ಮೊದಲೇ ದೊಡ್ಡ ಸಂಚಲನ ಸೃಷ್ಟಿಸಿರುವುದು ಸಿನಿಮಾದ ಕನ್ನಡವೇ ಸತ್ಯ ಎಂಬ ಹಾಡು. ಸಂತೋಷ್ ಆನಂದರಾಮ್ ಬರೆದಿರುವ ಹಾಡನ್ನು ಪುನೀತ್ ರಾಜ್ಕುಮಾರ್ ಹಾಡಿದ್ದಾರೆ. ಹಾಡಿಗೆ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರೆ, ಚಿತ್ರರಂಗದ ಸ್ಟಾರ್ಗಳು ಚಪ್ಪಾಳೆ ಹೊಡೆಯುತ್ತಿದ್ದಾರೆ.
ಚಿತ್ರದ ಹಾಡಿಗೆ ನಿರ್ದೇಶಕರಾದ ಯೋಗರಾಜ್ ಭಟ್, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ರಘುರಾಮ್, ಪೈಲ್ವಾನ್ ಕೃಷ್ಣ, ಎ.ಪಿ.ಅರ್ಜುನ್, ತರುಣ್ ಸುಧೀರ್, ನಾಗಶೇಖರ್, ಪವನ್ ಒಡೆಯರ್, ಚೇತನ್, ಆರ್.ಜೆ.ಮಯೂರ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟರಾದ ಕಿಚ್ಚ ಸುದೀಪ್, ಜಗ್ಗೇಶ್, ರಮೇಶ್ ಅರವಿಂದ್, ಶರಣ್, ಪ್ರೇಮ್, ಯುವರಾಜ್ಕುಮಾರ್, ಅಶಿಕಾ ರಂಗನಾಥ್, ಡಾಲಿ ಧನಂಜಯ್, ಹರ್ಷಿಕಾ ಪೂಣಚ್ಚ, ಬಾಲಾಜಿ,
ರವಿಶಂಕರ್ ಗೌಡ, ಜುಡಾನ್ ಸ್ಯಾಂಡಿ, ಧೀರನ್ ರಾಮ್ಕುಮಾರ್ ಹಾಗೂ ನಿರ್ಮಾಪಕರಾದ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ಕೆ.ಪಿ.ಶ್ರೀಕಾಂತ್ ಹಾಡನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.