` golden star ganesh, - chitraloka.com | Kannada Movie News, Reviews | Image

golden star ganesh,

  • ಇರೋವ್ರು ಮೂರು : ಗಣೇಶ್ ಹೃದಯ ಗೆಲ್ಲೋ ಚೆಲುವೆ ಯಾರು..?

    3 beauties race to win ganesh's heart in geetha

    ರಿಲೀಸ್ ಆಗೋಕೆ ರೆಡಿಯಾಗಿ ನಿಂತಿರೋ ಗೀತಾ ಚಿತ್ರದಲ್ಲಿ ಒಬ್ಬರಲ್ಲ.. ಇಬ್ಬರಲ್ಲ.. ಮೂರು ಮೂರು ಹೀರೋಯಿನ್ಸ್. ಮೂರು ಪಾತ್ರಗಳೂ ಸಿನಿಮಾದ ಒಂದೊಂದು ಪಿಲ್ಲರ್ ಎನ್ನುತ್ತಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ. ಮೂವರು ನಾಯಕಿಯರ ಪೈಕಿ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಮುಖ ಶಾನ್ವಿ ಶ್ರೀವಾಸ್ತವ್.

    ಶಾನ್ವಿಯದ್ದು ಚಿತ್ರದಲ್ಲಿ 2 ಶೇಡ್ ಪಾತ್ರವಿದೆ. 80ರ ದಶಕದಲ್ಲಿ ವೆಸ್ಟರ್ನ್ ಕಲ್ಚರ್‍ಗೆ ಮಾರು ಹೋದ ಹುಡುಗಿಯಾಗಿ ಒಂದು ಪಾತ್ರ ಮತ್ತು ಈಗಿನ ಜನರೇಷನ್ನಿನ ಸಾಫ್ಟ್‍ವೇರ್ ಎಂಜಿನಿಯರ್ ಪಾತ್ರ.

    ಇನ್ನು ಪ್ರಯಾಗ ಮಾರ್ಟಿನ್ ಅವರೇ ಚಿತ್ರದ ಗೀತಾ. ಅವರ ಪಾತ್ರದ ಹೆಸರು. ಚಿತ್ರದ ಟೈಟಲ್ ಪಾತ್ರವಾದ್ದರಿಂದ ಕುತೂಹಲ ಹೆಚ್ಚೇ ಇದೆ.

    ಇನ್ನು ಪಾರ್ವತಿ ಅರುಣ್ ಹೆಸರು ಗೀತಾಂಜಲಿ ಅನ್ನೋ ಪಾತ್ರ. ಬೇರೆ ಭಾಷೆಯ ಹುಡುಗಿ.

    ಮೂರು ಬೇರೆ ಬೇರೆ ಭಾಷೆಯ ಹುಡುಗಿಯರು ಇರೋದು ಯಾಕೆ ಅನ್ನೋದು ಕೂಡಾ ಒಂದು ಸಸ್ಪೆನ್ಸ್. ಭಾಷೆ, ಪ್ರೀತಿ ಎರಡರ ನಡುವೆ ಏನ್ ಕಥೆ..? ಗಣೇಶ್ ಯಾರಿಗೆ ಒಲಿತಾರೆ.. ಇನ್ನೊಂದು ವಾರ ಕುತೂಹಲ ಕಾಯ್ದಿಟ್ಟುಕೊಂಡರೆ ಉತ್ತರ ಸಿಗಲಿದೆ.

  • ಉದಯೋನ್ಮುಖ ಪ್ರೇಮಿಗೆ ಮೇಡಮ್ ಮೇಲೇ ಪ್ರೀತಿ..

    ಉದಯೋನ್ಮುಖ ಪ್ರೇಮಿಗೆ ಮೇಡಮ್ ಮೇಲೇ ಪ್ರೀತಿ..

    ಯೋಗರಾಜ್ ಭಟ್ಟರು ಪ್ರೀತಿ ಮಾಡಿಸೋಕೆ ಹೊರಟರೆ ಹಾಗೇ.. ಗಣೇಶ್, ದಿಗಂತ್, ರಾಜೇಶ್ ಕೃಷ್ಣ ಅವರಿಗೆಲ್ಲ ಪ್ರೇಮ ಪಾಠ ಕಲಿಸಿದ ಲವ್ ಮೇಷ್ಟ್ರು ಭಟ್ಟರು. ಈ ಬಾರಿ ಭಟ್ಟರ ಕೈಗೆ ಸಿಕ್ಕಿರುವ ಉದಯೋನ್ಮುಖ ಪ್ರೇಮಿ ಪವನ್ ಕುಮಾರ್. ಗಾಳಿಪಟ 2 ಚಿತ್ರದ ಉದಯೋನ್ಮುಖ ಪ್ರೇಮಿಯಾಗಿ ನಟಿಸಿರುವುದು ಲೂಸಿಯಾ ಪವನ್. ಹೀರೋ ಆಗಿ ಅವರಿಗಿದು ಮೊದಲ ಸಿನಿಮಾ.

    ಇಲ್ಲಿ ಅವರು ಕಾಲೇಜ್ ಸ್ಟೂಡೆಂಟ್ ಆಗಿ ಲೆಕ್ಚರರ್`ಗೇ ಲೈನ್ ಹಾಕ್ತಾರೆ. ಸ್ಟೂಡೆಂಟ್ ಲವ್ ಮಾಡೋಕೆ ಕಷ್ಟವಾಗಿ ಲೆಕ್ಚರರ್ ಶರ್ಮಿಳಾ ಮಾಂಡ್ರೆ ಮನೆಯ ಬಾಗಿಲು ಕ್ಲೋಸ್ ಮಾಡ್ತಾರೆ. ಮನಸ್ಸಿನ ಬಾಗಿಲೂ ಕ್ಲೋಸ್ ಆಗಿ ಹೋಯ್ತಾ.. ಆಗಸ್ಟ್ 12ಕ್ಕೆ ಥಿಯೇಟರಿಗೆ ಹೋದರೆ ಪೂರ್ತಾ ಕಥೆಯನ್ನ ಅಲ್ಲೇ ಹೇಳ್ತಾರೆ ಯೋಗರಾಜ್ ಭಟ್ರು.

    ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ , ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್ ಜೋಡಿ ಜೋಡಿಯಾಗಿ ನಟಿಸಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಅಂದಹಾಗೆ ನಾಳೆ ಅಂದ್ರೆ ಜುಲೈ 31ಕ್ಕೆ ಗಾಳಿಪಟ 2 ಚಿತ್ರದ ಟ್ರೇಲರ್ ಹಾರಿಸಲಿದ್ದಾರೆ.

  • ಎಂಗೇಜ್ ಹುಡ್ಗೀರ್ ಹಿಂದೆ ಬೀಳೋ ಗಣೇಶ್ ಪಾಡು

    orange is typical ganesh style movie

    ಎಂಗೇಜ್‍ಮೆಂಟ್ ಆದ ಹುಡುಗಿಯನ್ನು ನೋಡೋದು, ಇಷ್ಟಪಡೋದು ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಡ್‍ಮಾರ್ಕ್ ಆಗಿಬಿಟ್ಟಿದೆ. ಸುಮ್ಮನೆ ನೆನಪಿಸಿಕೊಳ್ಳಿ, ಮುಂಗಾರು ಮಳೆ - ಎಂಗೇಜ್‍ಮೆಂಟ್ ಆಗಿದ್ದ ನಂದಿನಿ ಪೂಜಾ ಗಾಂಧಿ ಮೇಲೆ ಲವ್ವು. ಹುಡುಗಾಟ -

    ಗಣೇಶ್‍ನ ಇಷ್ಟ ಪಡೋ ಹೊತ್ತಿಗೆ ರೇಖಾಗೆ ಇನ್ನೊಂದು ಲವ್ವಾಗಿರುತ್ತೆ.ಗಾಳಿಪಟ - ಗಣಿ ಲವ್ ಮಾಡೋ ಡೈಸಿ ಬೋಪಣ್ಣ ಅವರದ್ದು ವಿಧವೆಯ ಪಾತ್ರಅರಮನೆ - ಗಣೇಶ್‍ಗೆ ಹೀರೋಯಿನ್ ಸಿಗೋದೇ ಇಲ್ಲಶ್ರಾವಣಿ ಸುಬ್ರಹ್ಮಣ್ಯ - ಅಮೂಲ್ಯ ಗಣೇಶ್‍ಗೆ ಸಿಕ್ಕೊದೇ ಲವ್ವರ್ ಜೊತೆ ಓಡಿ ಬಂದಾಗ..ಮಳೆಯಲಿ ಜೊತೆಯಲಿ - ಅವರೇ ನಿರ್ದೇಶಿಸಿದ ಚಿತ್ರದಲ್ಲೂ ಅಷ್ಟೆ.. ನೋ ಚೇಂಜ್ ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂಥರಾ, ಮದುವೆ, ದಿಲ್ ರಂಗೀಲಾ, ಖುಷಿ ಖುಷಿಯಾಗಿ, ಮುಗುಳುನಗೆ .. ಹೀಗೆ ಗಣೇಶ್ ಚಿತ್ರಗಳಲ್ಲಿ ಅವರ ಪಾತ್ರದ ಸ್ಟೈಲೇ ಹಾಗೆ..

    ಆರೆಂಜ್ ಚಿತ್ರದಲ್ಲೂ ಹಾಗೇ.. ಹೀರೋಯಿನ್ ಚೆಲುವೆ ಪ್ರಿಯಾ ಆನಂದ್. ಈ ರಾಜಕುಮಾರಿಗೂ ಚಿತ್ರದಲ್ಲಿ ಆಗಲೇ ಎಂಗೇಜ್‍ಮೆಂಟ್ ಆಗಿ, ಆರೆಂಜ್‍ನಿಂದ ಏನೇನೋ ಆಗಿ.. ಲವ್ವಾಗುತ್ತೆ. ಪ್ರಶಾಂತ್ ರಾಜ್ ಕಾಮಿಡಿ ಲವ್ ಸ್ಟೋರಿ ಹೇಳಿದ್ದಾರೆ. ಜಸ್ಟ್ ಎಂಜಾಯ್.

  • ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..!

    ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..!

    ಇದು ಖಂಡಿತಾ ಟೈಪಿಂಗ್ ಮಿಸ್ಟೇಕ್ ಅಲ್ಲ. ತಡವರಿಸುವಿಕೆಗೆ ದಿವ್ಯೌಷಧಿ ಸಿಗದೇ ಹುಡುಕಾಡಿದಾಗ ಡಾಕ್ಟರ ಹಿಡಿತಕ್ಕೂ ಸಿಗದೆ ಆದ ದುಷ್ಟ್ಪರಿಣಾಮವಿದು. ಅಂದಹಾಗೆ ಇವತ್ತು.. ಅಂದ್ರೆ ಆಗಸ್ಟ್ 14ನೇ ತಾರೀಕು ಸಂಜೆ 5ಕ್ಕೆ ರಿಲೀಸು.

    ಬರೆದಿರೋದು ಯೋಗರಾಜ್ ಭಟ್ಟರು. ಹಾಡಿರೋದು ವಿಜಯ್ ಪ್ರಕಾಶ್. ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.

    ಯೋಗರಾಜ್ ಭಟ್ ಎಣ್ಣೆ ಸಾಂಗು ಎಂದರೆ.. ಕುಡುಕರು ನಮ್ಮನ್ನೂ ಸೀರಿಯಸ್ ಆಗಿ ತಗೊಳ್ಳೋವ್ರು ಇದ್ದಾರಲ್ಲ ಎಂದು ಖುಷಿಯಾಗಿ ಎರಡು ಪೆಗ್ ಹೆಚ್ಚಿಗೇ ಹಾಕ್ತಾರೆ. ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..

    ನಾವ್ ಮನೆಗ್ ಹೋಗೋದಿಲ್ಲ..

    ಬಾಯಾರಿದೆ ಬೈಬೇಡಿ.. ಒಂಚೂರೇ ನಾ ಕುಡಿದೆನು..

    ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ..

    ಹಾಲು ಕುಡ್ದ ಮಕ್ಳೆ ಬದುಕಲ್ಲ..

    ಹೊಡಿ ಒಂಭತ್..

    ಹೀಗೆ ಎಣ್ಣೆ ಹೊಡೆಯುವವರಿಗಾಗಿಯೇ ಹಲವು ಹಾಡುಗಳಿವೆ. ಆದರೆ.. ಭಟ್ಟರ ಹಾಡುಗಳ ಕಿಕ್ಕೇ ಬೇರೆ. ಈಗ ಗಾಳಿಪಟ 2 ಚಿತ್ರದ ದೇವ್ಲೇ ದೇವ್ಲೇ ಹಾಡು ರಿಲೀಸ್ ಆಗುತ್ತಿದೆ.

    ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು. ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿರೋ ಗಾಳಿಪಟ 2 ಚಿತ್ರ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನಿಂದಾಗಿಯೇ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ.

  • ಎಲ್ಲರೂ ಪ್ರೀತಿಸಿದ್ರೆ.. ಮೂವರಲ್ಲಿ ಗಣಪ ಸಿಕ್ಕೋದ್ಯಾರಿಗೆ?

    ಎಲ್ಲರೂ ಪ್ರೀತಿಸಿದ್ರೆ.. ಮೂವರಲ್ಲಿ ಗಣಪ ಸಿಕ್ಕೋದ್ಯಾರಿಗೆ?

    ಒಬ್ಬಳು ಭಾವುಕತೆಯಲ್ಲೇ ಮಿಂದೇಳುವವಳು. ಮೇಘಾ ಶೆಟ್ಟಿ. ಅವಳು ಐ ಲವ್ ಯೂ ಅಂತಾಳೆ. ಮತ್ತೊಬ್ಬಳು ಪಟಾಕಿ. ತರಲೆ. ಬೋಲ್ಡ್. ಆದಿತಿ ಪ್ರಭುದೇವ. ಅವಳೂ ಐ ಲವ್ ಯೂ ಅಂತಾಳೆ.

    ಮತ್ತೊಬ್ಬಳು ಮುಗ್ಧತೆಯನ್ನೇ ಮುಖವಾಡದಂತೆ ಹೊತ್ತು ಬದುಕುವವಳು. ಆಕ್ಚುವಲಿ ಮುಗ್ದೆ. ಇನ್ನೋಸೆಂಟ್. ರಚನಾ ಇಂದರ್. ಅವಳೂ ಐ ಲವ್ ಯೂ ಅಂತಾಳೆ. ಅವರಿಬ್ಬರ ಪ್ರೀತಿ ಸ್ವೀಕರಿಸಬೇಕಾದವನು ಒಬ್ಬನೇ. ಗೋಲ್ಡನ್ ಸ್ಟಾರ್ ಗಣೇಶ್.

    ತ್ರಿಬ್ಬಲ್ ರೈಡಿಂಗ್ ಚಿತ್ರದ ಟ್ರೇಲರ್ ನೋಡಿದವರಿಗೆ ಒಂದು ಮಜಾಕ್ ನಕ್ಕೊಂಡ್ ಬರೋಣು ಎನ್ನಿಸಿದ್ರೆ ಅದು ಸಹಜ. ಮಹೇಶ್ ಗೌಡ ಕಾಮಿಡಿಯನ್ನೇ ಆಯ್ಕೆ ಮಾಡಿಕೊಂಡು ನಗಿಸೋ ಕಾಯಕ ಮಾಡಿದ್ದಾರೆ. ಹಾಗಂತ ಆಕ್ಷನ್, ಡ್ರಾಮಾ, ಚೇಸಿಂಗ್, ಫೈಟಿಂಗು ಇಲ್ಲ ಎಂದಲ್ಲ. ಎಲ್ಲವೂ ಇದೆ. ಹದವಾಗಿ ಬೆರೆಸಿ ತ್ರಿಬ್ಬಲ್ ರೈಡಿಂಗ್ ಮಾಡಲಾಗಿದೆ. ಸಾಧುಕೋಕಿಲ, ರವಿಶಂಕರ್.. ಹೀಗೆ ಎಲ್ಲರೂ ಇದ್ದಾರೆಂದ ಮೇಲೆ ಇದೊಂದು ಫ್ಯಾಮಿಲಿ ಪ್ಯಾಕೇಜ್ ಎನ್ನುವುದರಲ್ಲಿ ಅನುಮಾನವಿಲ್ಲ. ನವೆಂಬರ್ 16ಕ್ಕೆ ತ್ರಿಬ್ಬಲ್ ರೈಡಿಂಗ್ ರಿಲೀಸ್ ಆಗಲಿದೆ.

  • ಕಥೆಯಲ್ಲೇ ಇದೆ ಚಮಕ್ ಥ್ರಿಲ್..!

    producer liked chamak's story

    ಚಮಕ್ ಚಿತ್ರ, ಪ್ರೇಕ್ಷಕರಿಗೆ ಚಮಕ್ ಕೊಡೋಕೆ ರೆಡಿಯಾಗಿ ನಿಂತಿದೆ. ಚಮಕ್ ಕೊಡೋರ್ಯಾರು..? ಗಣೇಶ್‍ಗೆ ರಶ್ಮಿಕಾ ಕೊಡ್ತಾರಾ..? ರಶ್ಮಿಕಾಗೆ ಗಣೇಶ್ ಕೊಡ್ತಾರಾ..? ಗೊತ್ತಾಗೋದು ಶುಕ್ರವಾರ. ಸುನಿಯವರಂತೂ ಚಮಕ್ ಕೊಟ್ಟಾಗಿದೆ. ಆದ್ರೆ ಸುನಿ ನಿಜಕ್ಕೂ ಮೊದಲು ಚಮಕ್ ಕೊಟ್ಟಿದ್ದು ಚಿತ್ರದ ನಿರ್ಮಾಪಕರಿಗೆ. 

    ಚಿತ್ರದ ನಿರ್ಮಾಪಕ ಚಂದ್ರಶೇಖರ್, ಉದ್ಯಮಿಯಷ್ಠೇ ಅಲ್ಲ, ಸಾಹಿತ್ಯ, ಸಂಘಟನೆಗಳಲ್ಲೂ ಸಕ್ರಿಯರಾಗಿರುವವರು. ಚಂದ್ರಶೇಖರ್ ಅವರಿಗೆ ಮೊದಲು ಇಷ್ಟವಾಗಿದ್ದೇ ಚಿತ್ರದ ಕಥೆ. ಚಿತ್ರದ ಕಥೆ ಹೇಗಿತ್ತೋ.. ಅದನ್ನು ಅಷ್ಟೇ ಚೆಂದವಾಗಿ ತೆರೆಯ ಮೇಲೆ ತಂದಿದ್ದಾರಂತೆ ಸುನಿ. ಅದನ್ನು ಪ್ರೀತಿಯಿಂದ ಹೇಳಿಕೊಳ್ಳುವ ಚಂದ್ರಶೇಖರ್, ಇದು ಕನ್ನಡದ ಸಿನಿಮಾ ಎಂದು ಹೆಮ್ಮೆಯಿಂದ ಬಣ್ಣಿಸುತ್ತಾರೆ. 

    ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಪರಭಾಷೆಯ ಗಾಯಕರ ಕೈಲಿ ಹಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ, ಈ ಚಿತ್ರದಲ್ಲಿ ಅದನ್ನು ಮುರಿದಿದ್ದಾರೆ ಚಂದ್ರಶೇಖರ್. ಚಿತ್ರದ ಎಲ್ಲ ಹಾಡುಗಳನ್ನು ಕನ್ನಡದವರಿಂದಲೇ ಹಾಡಿಸಿದ್ದಾರೆ. ಚಿತ್ರದಲ್ಲಿ ಪರಭಾಷಿಕರಿಲ್ಲ ಎನ್ನುವುದು ವಿಶೇಷ.

    ಉತ್ತಮ ಮನರಂಜನೆ, ಉತ್ತಮ ಸಂದೇಶ ಎರಡೂ ಇರುವ ಚಮಕ್, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗಲಿದೆ ಎನ್ನುವುದು ನಿರ್ಮಾಪಕರ ವಿಶ್ವಾಸ.

  • ಕನ್ನಡ ಪ್ರೇಮಿ.. ಪರಭಾಷಾ ದ್ವೇಷಿಯಲ್ಲ ಈ ಶಂಕರ್

    ganesh clarifies on geetha doubts

    ಗೀತಾ ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಎದ್ದಿರುವ ಪ್ರಶ್ನೆ ಇದು. ಚಿತ್ರದಲ್ಲಿ ಗೋಕಾಕ್ ಚಳವಳಿಯ ಪ್ರಸ್ತಾಪ, ಗಣೇಶ್ ಅವರ ಸಿಡಿಲಿನಂತಾ ಮಾತುಗಳು.. ಇವೆಲ್ಲವನ್ನೂ ಕೇಳಿದವರಿಗೆ ಇದು ಪರಭಾಷಾ ದ್ವೇಷಿ ಸಿನಿಮಾನ ಎಂಬ ಅನುಮಾನ ಮೂಡಿರಲಿಕ್ಕೂ ಸಾಕು. ಇದೆಲ್ಲ ಅನುಮಾನಗಳಿಗೂ ಗಣೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

    `ಚಿತ್ರದ ನಾಯಕ ಶಂಕರ್, ಅಪ್ಪಟ ಕನ್ನಡ ಪ್ರೇಮಿ. ಆದರೆ, ಪರಭಾಷಾ ದ್ವೇಷಿಯಲ್ಲ. ಪರಭಾಷೆಗಳನ್ನು ದ್ವೇಷಿಸುವ ಸಣ್ಣ ಅಂಶವೂ ಚಿತ್ರದಲ್ಲಿಲ್ಲ. ಭಾಷೆಯ ವಿಚಾರ ಬಂದಾಗ ಅಭಿಮಾನವನ್ನೇ ಹೋರಾಟವಾಗಿ ಬದಲಿಸುವಂತಹ ಸೂಕ್ಷ್ಮ ಶಕ್ತಿ ಚಿತ್ರದ ಕಥೆಯಲ್ಲಿದೆ ಎಂದಿದ್ದಾರೆ ಗಣೇಶ್.

    ವಿಜಯ್ ನಾಗೇಂದ್ರ ನಿರ್ದೇಶಿಸಿರುವ ಚಿತ್ರಕ್ಕೆ ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಪಕರು.

  • ಕನ್ನಡದ ಚಮಕ್, ತೆಲುಗಿನಲ್ಲಿ ಗೀತಾ ಚಲೋ

    chamak is geetha chalo in telugu

    ಕನ್ನಡದಲ್ಲಿ ಯಶಸ್ವಿಯಾದ ಸಿನಿಮಾ ಚಮಕ್. ಸಿಂಪಲ್ ಸುನಿ ನಿರ್ದೇಶನದ ಚಮಕ್ ಮೂಲಕ ಗಣೇಶ್-ರಶ್ಮಿಕಾ ಜೋಡಿ ಹಿಟ್ ಆಗಿತ್ತು. ಈಗ ಅದೇ ಸಿನಿಮಾವನ್ನು ತೆಲಗಿನಲ್ಲಿ ತರಲು ಹೊರಟಿದ್ದಾರೆ. ತೆಲುಗಿನಲ್ಲಿ ಚಿತ್ರದ ಹೆಸರು ಗೀತಾ ಚಲೋ.

    ಅಂದಹಾಗೆ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ಚಲೋ. ಸೂಪರ್ ಡ್ಯೂಪರ್ ಹಿಟ್ ಚಿತ್ರ ಗೀತಗೋವಿಂದಂ. ಎರಡೂ ಚಿತ್ರಗಳ ಟೈಟಲ್‍ನ್ನು ಮಿಕ್ಸ್ ಮಾಡಿ ಗೀತಾ ಚಲೋ ಎಂದು ನಾಮಕರಣ ಮಾಡಿ, ತೆಲುಗಿನಲ್ಲಿ ರಿಲೀಸ್ ಮಾಡಲಾಗುತ್ತಿದೆ.

    ಅಂದಹಾಗೆ ಏಪ್ರಿಲ್ 26ರಂದು ಗಣೇಶ್ ಅಭಿನಯದ 99 ತೆರೆಗೆ ಬರುತ್ತಿದೆ. ಅದೇ ದಿನ, ತೆಲುಗಿನ ಗೀತಾ ಚಲೋ ಚಿತ್ರವೂ ರಿಲೀಸ್ ಆಗುತ್ತಿದೆ.

  • ಕನ್ನಡವೇ ಸತ್ಯ ಎಂದ ಗೀತಾಗೆ ಸ್ಟಾರ್ಸ್ ಚಪ್ಪಾಳೆ

    sandalwood stars appreciate geetha movie song

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನದಯ ಗೀತಾ ರಿಲೀಸ್‍ಗೆ ರೆಡಿಯಾಗುತ್ತಿದೆ. ಸಿನಿಮಾ ರಿಲೀಸ್‍ಗೂ ಮೊದಲೇ ದೊಡ್ಡ ಸಂಚಲನ ಸೃಷ್ಟಿಸಿರುವುದು ಸಿನಿಮಾದ ಕನ್ನಡವೇ ಸತ್ಯ ಎಂಬ ಹಾಡು. ಸಂತೋಷ್ ಆನಂದರಾಮ್ ಬರೆದಿರುವ ಹಾಡನ್ನು ಪುನೀತ್ ರಾಜ್‍ಕುಮಾರ್ ಹಾಡಿದ್ದಾರೆ. ಹಾಡಿಗೆ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರೆ, ಚಿತ್ರರಂಗದ ಸ್ಟಾರ್‍ಗಳು ಚಪ್ಪಾಳೆ ಹೊಡೆಯುತ್ತಿದ್ದಾರೆ.

    ಚಿತ್ರದ ಹಾಡಿಗೆ ನಿರ್ದೇಶಕರಾದ ಯೋಗರಾಜ್ ಭಟ್, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ರಘುರಾಮ್, ಪೈಲ್ವಾನ್ ಕೃಷ್ಣ, ಎ.ಪಿ.ಅರ್ಜುನ್, ತರುಣ್ ಸುಧೀರ್, ನಾಗಶೇಖರ್, ಪವನ್ ಒಡೆಯರ್, ಚೇತನ್, ಆರ್.ಜೆ.ಮಯೂರ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಟರಾದ ಕಿಚ್ಚ ಸುದೀಪ್, ಜಗ್ಗೇಶ್, ರಮೇಶ್ ಅರವಿಂದ್, ಶರಣ್, ಪ್ರೇಮ್, ಯುವರಾಜ್‍ಕುಮಾರ್, ಅಶಿಕಾ ರಂಗನಾಥ್, ಡಾಲಿ ಧನಂಜಯ್, ಹರ್ಷಿಕಾ ಪೂಣಚ್ಚ, ಬಾಲಾಜಿ, 

    ರವಿಶಂಕರ್ ಗೌಡ, ಜುಡಾನ್ ಸ್ಯಾಂಡಿ, ಧೀರನ್ ರಾಮ್‍ಕುಮಾರ್ ಹಾಗೂ ನಿರ್ಮಾಪಕರಾದ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ಕೆ.ಪಿ.ಶ್ರೀಕಾಂತ್ ಹಾಡನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

  • ಕಪಿಲ್ ಶರ್ಮಾ ಶೋನಲ್ಲಿ ಗಣೇಶ್ : ಗೋಲ್ಡನ್ ಸ್ಟಾರ್ ಸೀಕ್ರೆಟ್ ಬಯಲಾಯ್ತು..!

    ಕಪಿಲ್ ಶರ್ಮಾ ಶೋನಲ್ಲಿ ಗಣೇಶ್ : ಗೋಲ್ಡನ್ ಸ್ಟಾರ್ ಸೀಕ್ರೆಟ್ ಬಯಲಾಯ್ತು..!

    ಗೋಲ್ಡನ್ ಸ್ಟಾರ್. ಈ ಬಿರುದು ಹೊಂದಿರುವ ಇಂಡಿಯನ್ ಸಿನಿಮಾದ ಏಕೈಕ ನಟ ಗಣೇಶ್. ಗಣೇಶ್ ಅವರಿಗೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಕರುಳು ಕಿವುಚಿ ಬರುವಂತೆ ಅಳಿಸಿಯೂ ಅಳಿಸ್ತಾರೆ. ನಗುನಗುತ್ತಲೇ ಅಳಿಸುವ ಅಪರೂಪದ ಕಲಾವಿದ ಗಣೇಶ್ ಅವರಿಗೆ ಈ ಗೋಲ್ಡನ್ ಸ್ಟಾರ್ ಬಿರುದು ಸಿಕ್ಕಿದ್ದು ಹೇಗೆ? ಕೊಟ್ಟವರು ಯಾರು? ಈ ಪ್ರಶ್ನೆ ಉದ್ಭವವಾದರೂ ಕರೆಕ್ಟ್ ಕಾರಣ ಗೊತ್ತಾಗಿರಲಿಲ್ಲ. ಇದಕ್ಕೆ ಕೊನೆಗೆ ಗಣೇಶ್ ಅವರೇ ಉತ್ತರ ಕೊಟ್ಟಿದ್ದಾರೆ, ಕಪಿಲ್ ಶರ್ಮಾ ಶೋನಲ್ಲಿ. ಅಂದಹಾಗೆ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ಎರಡನೇ ನಟ ಗಣೇಶ್. ಮೊದಲಿಗೆ ಈ ಶೋಗೆ ಹೋಗಿದ್ದವರು ಕಿಚ್ಚ ಸುದೀಪ್ ಮಾತ್ರ.

    2003ರಲ್ಲಿ ಟಿವಿಯಲ್ಲಿ ಕಾಮಿಡಿ ಟೈಂ ಶೋ ಮಾಡುತ್ತಿದ್ದೆ. ಅದು ದೊಡ್ಡ ಹಿಟ್ ಆಗಿತ್ತು. ಅದಾದ ಮೇಲೆ ಸಿನಿಮಾ ನಟನಾದೆ. ನಾನು ಯಾವ ಸಿನಿಮಾ ಮಾಡಿದರೂ ಹಿಟ್ ಆಗುತ್ತಿದ್ದವು. ಅವುಗಳನ್ನು ನೋಡಿ ಜನ ಮತ್ತು ಚಿತ್ರರಂಗದವರು ಗೋಲ್ಡನ್ ಸ್ಟಾರ್ ಎಂದು ಕರೆಯೋಕೆ ಶುರು ಮಾಡಿದರು.. ಎಂದಿದ್ದಾರೆ ಗಣೇಶ್.

    ಗಣೇಶ್ ಚಿತ್ರರಂಗಕ್ಕೆ ಮೊದಲಿಗೆ ನಾಯಕರಾಗಿ ಬಂದವರಲ್ಲ. ಟಪೋರಿ, ಹುಡುಗಿಗಾಗಿ, ಬಾ ಬಾರೋ ರಸಿಕ, ಅಹಂ ಪ್ರೇಮಾಸ್ಮಿ, ಮ್ಯಾಜಿಕ್ ಅಜ್ಜಿ, ಮಸಾಲಾ, ಅಮೃತಧಾರೆ.. ಮೊದಲಾದ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದವರು. ಹೀರೋ ಆಗಿದ್ದು ಚೆಲ್ಲಾಟ ಚಿತ್ರದಿಂದ. ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ.. ಹೀಗೆ ಹಿಟ್ ಆದ ಚಿತ್ರಗಳೇ ಎಲ್ಲ. ಮುಂಗಾರು ಮಳೆಯಂತೂ ಚಿತ್ರರಂಗದಲ್ಲಿ ಸೃಷ್ಟಿಸಿದ್ದು ಹೊಸ ಇತಿಹಾಸ. ಅದರ ಜೊತೆ ಸಂಭಾವನೆಯಲ್ಲೂ ಗಣೇಶ್ ದಾಖಲೆ ಬರೆದವರೇ. ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ಖ್ಯಾತಿ ಗಣೇಶ್ ಅವರ ಹೆಸರಲ್ಲಿದೆ. ಹೀಗೆ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿಯೇ ಗೋಲ್ಡನ್ ಸ್ಟಾರ್ ಆದ ಕಥೆಯನ್ನು ಗಣೇಶ್ ಕಪಿಲ್ ಶರ್ಮಾ ಶೋನಲ್ಲಿ ಬಿಚ್ಚಿಟ್ಟಿದ್ದಾರೆ.

  • ಕಾಡಿದ್ದ ಸಿನಿಮಾವನ್ನೇ ನಿರ್ದೇಶಿಸಿದ ಪ್ರೀತಂ ಗುಬ್ಬಿ

    preetham gubbi talks about 99 movie

    96, ಕಳೆದ ವರ್ಷ ತೆರೆ ಕಂಡಿದ್ದ ತಮಿಳು ಸಿನಿಮಾ. ವಿಜಯ್ ಸೇತುಪತಿ, ತ್ರಿಷಾ ಅಭಿನಯದ ಚಿತ್ರ, ನಿರ್ದೇಶಕ ಪ್ರೀತಂ ಗುಬ್ಬಿಯವರನ್ನು ಬಹುವಾಗಿ ಕಾಡಿತ್ತಂತೆ. ಸಿನಿಮಾ ನೋಡಿದ ಮೇಲೆ, ಇದನ್ನು ಕನ್ನಡದಲ್ಲಿ ಮಾಡಿದರೆ ಯಾರು ನಟಿಸಬಹುದು ಎಂದುಕೊಂಡಾಗ, ಮನಸ್ಸಿಗೆ ಬಂದವರೇ ಗಣೇಶ್. ತಕ್ಷಣ ಗಣೇಶ್ ಅವರಿಗೆ ಫೋನ್ ಮಾಡಿದ ಪ್ರೀತಂ,  ಈ ಸಿನಿಮಾವನ್ನು ಯಾರಾದರೂ ಕನ್ನಡದಲ್ಲಿ ಮಾಡುತ್ತೇನೆ ಎಂದು ಬಂದರೆ, ಸುಮ್ಮನೆ ಒಪ್ಪಿಕೊಂಡು ಬಿಡಿ, ನಿಮಗೆ ಈ ಕ್ಯಾರೆಕ್ಟರ್ ಅದ್ಭುತವಾಗಿ ಸೂಟ್ ಆಗುತ್ತೆ ಎಂದಿದ್ದರಂತೆ. 

    ಇಲ್ಲಿ ಒಂದು ವಿಷಯ ಹೇಳಬೇಕು, ಇದೆಲ್ಲ ಆಗುವಾಗ 96 ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುವ ಐಡಿಯಾ ರಾಮು ಅವರಿಗಾಗಲೀ, ನಿರ್ದೇಶಿಸುತ್ತೇನೆ ಎಂಬ ಕಲ್ಪನೆ ಪ್ರೀತಂ ಗುಬ್ಬಿಯವರಿಗಾಗಲೀ ಇರಲಿಲ್ಲ.

    ಅನಂತರದ ದಿನಗಳಲ್ಲಿ ಎಲ್ಲವೂ ನಡೆದು ಹೋಗಿ, ಗಣೇಶ್ ಹೀರೋ ಆಗಿ, ಭಾವನಾ ನಾಯಕಿಯಾಗಿ, ಪ್ರೀತಂ ಗುಬ್ಬಿಯವರೇ ನಿರ್ದೇಶಕರಾಗಿ 99 ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಈಗ ಸಿನಿಮಾ ತೆರೆಗೆ ಸಿದ್ಧವಾಗಿದೆ. ದಟ್ ಈಸ್ ಮ್ಯಾಜಿಕ್.

  • ಕಾಮಿಡಿ ಕಿಲಾಡಿಗಳ ಜೊತೆ ಗೋಲ್ಡನ್ ಸ್ಟಾರ್

    ganesh talks about geetha movie

    ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿಗೆ ಫೇಮಸ್. ಗಣೇಶ್ ಅವರ ಟೈಮಿಂಗಿಗೆ ಸರಿಸಾಟಿಯಾಗುವುದು ಸುಲಭವಲ್ಲ. ಅಂತಹ ಗಣೇಶ್ ಕಾಮಿಡಿ ಕಿಲಾಡಿಗಳಿಗೆ ಹೋದರೆ ಹೇಗಿರುತ್ತೆ..?

    ಗೀತಾ ಚಿತ್ರದ ರಿಲೀಸ್ ಸಂಭ್ರಮದಲ್ಲಿರುವ ಗಣೇಶ್, ಕಾಮಿಡಿ ಕಿಲಾಡಿಗಳು ಶೋಗೆ ಹಾಜರಿ ಹಾಕಿದ್ದಾರೆ. ಯೋಗರಾಜ್ ಭಟ್, ಜಗ್ಗೇಶ್, ರಕ್ಷಿತಾ ಪ್ರೇಮ್ ಜಡ್ಜ್ ಆಗಿರುವ ಶೋನಲ್ಲಿ ಆನಂದ್ ನಿರೂಪಕ. ಪ್ರತಿ ವರ್ಷ ಹೊಸ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾಮಿಡಿ ಶೋನಲ್ಲಿ ಗಣೇಶ್ ಉಪಸ್ಥಿತಿ, ಸ್ಪರ್ಧಿಗಳಿಗೆ ಸ್ಫೂರ್ತಿ ತುಂಬುವುದೂ ಪಕ್ಕಾ.

    ಶೋನಲ್ಲಿ ತಮ್ಮ ಗೀತಾ ಚಿತ್ರದ ಹಲವು ಸ್ಪೆಷಲ್ ಸಂಗತಿ ಹೇಳಲಿದ್ದಾರೆ ಗಣೇಶ್. ಗೋಕಾಕ್ ಚಳವಳಿ, ಕನ್ನಡಿಗರ ಹೋರಾಟ, ಪ್ರೀತಿ, ಭಾಷಾಭಿಮಾನ.. ಹೀಗೆ ಹಲವು ವಿಚಾರಗಳನ್ನಿಟ್ಟುಕೊಂಡು ಬರುತ್ತಿರುವ ಗೀತಾ ಚಿತ್ರ, ಕುತೂಹಲ ಸೃಷ್ಟಿಸಿದೆ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಪ್ರಯಾಗ ಮಾರ್ಟಿನ್, ಪಾರ್ವತಿ ನಾಯಕಿಯರು. ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ.

  • ಕಾಯ್ಕಿಣಿಯ ಪ್ರೀತಿಯ ಸಂಗೀತ ನಿರ್ದೇಶಕ ಗಾಳಿಪಟ ನೋಡಿ ಕಣ್ಣೀರಿಟ್ಟಾಗ..

    ಕಾಯ್ಕಿಣಿಯ ಪ್ರೀತಿಯ ಸಂಗೀತ ನಿರ್ದೇಶಕ ಗಾಳಿಪಟ ನೋಡಿ ಕಣ್ಣೀರಿಟ್ಟಾಗ..

    ಜಯಂತ ಕಾಯ್ಕಿಣಿ. ಅಪರೂಪದ ಕಥೆಗಳ ಸಾಹಿತಿ ಹಾಗೂ ಅಪರೂಪದ ಪ್ರೇಮಕವಿ. ಎಂದಿನಂತೆ ಗಾಳಿಪಟ 2 ಚಿತ್ರದ ಹಾಡುಗಳೂ ವಿಶಿಷ್ಟವಾಗಿ.. ಹೃದಯ ತಟ್ಟಿವೆ. ಪ್ರೇಮಿಗಳ ಎದೆಯ ಬಾಗಿಲು ಮುಟ್ಟಿವೆ. ಒಂದೆಡೆ ಚಿತ್ರವೂ ಸಕ್ಸಸ್. ಸೂಪರ್ ಸಕ್ಸಸ್ ಆಗಿದೆ. ಇದೇ ವೇಳೆ ಜಯಂತ ಕಾಯ್ಕಿಣಿಯವರಿಗೆ ಅವರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರು ಗಾಳಿಪಟ 2 ನೋಡಿ, ಫೋನ್ ಮಾಡಿ ಕಣ್ಣೀರಿಟ್ಟರಂತೆ.

    ಕೆಲಸವಿಲ್ಲದೆ, ಕೊರೊನಾದಲ್ಲಿ ಇನ್ನಷ್ಟು ಜರ್ಝರಿತರಾಗಿದ್ದ ಮನಸ್ಸುಗಳನ್ನು ಈ ಚಿತ್ರ ತಟ್ಟಿದೆ ಎಂದು ಕಣ್ಣೀರಿಟ್ಟರಂತೆ. ಅಂದಹಾಗೆ ಕಾಯ್ಕಿಣಿಯವರ ಮೆಚ್ಚಿನ ಸಂಗೀತ ನಿರ್ದೇಶಕ ಯಾರು ಅಂದ್ಕೊಂಡ್ರಾ? ಪೂರ್ಣಚಂದ್ರ ತೇಜಸ್ವಿ.

    ಲೂಸಿಯಾ, ಬಬ್ರೂ, ಯು ಟರ್ನ್‍ನಂತ ಚಿತ್ರಗಳಿಗೆ ಸಂಗೀತ ನೀಡಿರುವ ಪೂರ್ಣಚಂದ್ರ ಗಾಳಿಪಟ 2 ಚಿತ್ರವನ್ನು ನೋಡಿ ಖುಷಿ ಪಟ್ಟು ಕಣ್ಣಿರಿಟ್ಟು ಫೋನ್ ಮಾಡಿದ್ದರಂತೆ.

    ಗಾಳಿಪಟ 2 ಹಾಗೆಯೇ ಇದೆ. ನಗುತ್ತಾ.. ನಗಿಸುತ್ತಾ.. ಅಳುತ್ತಾ.. ಅಳಿಸುತ್ತಾ.. ಸಾಗುವ ಕಥೆ ಪ್ರೇಕ್ಷಕರ ಹೃದಯ ಕಣ್ಣೀರಿಡುವಂತೆ ಮಾಡಿದೆ. ಆದರೆ.. ಯೋಗರಾಜ್ ಭಟ್-ಗಣೇಶ್ ಜೋಡಿಯ ಸಕ್ಸಸ್ ರಮೇಶ್ ರೆಡ್ಡಿಯವರಿಗೆ ಖುಷಿ ಕೊಟ್ಟಿದೆ. ಸಿನಿಮಾ ಗೆದ್ದಾಗ ಖುಷಿ ಪಡುವ ಮೊದಲ ವ್ಯಕ್ತಿ ನಿರ್ಮಾಪಕ ಅಲ್ವಾ?

  • ಕಾಶಿ ಕುಮಾರಿ ಕನ್ನಡತಿಯಾಗೇಬಿಟ್ರು..!

    shanvi srivatsav dubs in kannada for the first time

    ಶಾನ್ವಿ ಶ್ರೀವಾಸ್ತವ್ ಕನ್ನಡಿಗರಿಗೆ ಚಿರಪರಿಚಿತ ಮುಖ. ಈಗಾಗಲೇ ದರ್ಶನ್, ಯಶ್, ಶ್ರೀಮುರಳಿ, ರಮೇಶ್, ಚಿರಂಜೀವಿ ಸರ್ಜಾ.. ಹೀಗೆ ಹಲವು ನಾಯಕರ ಜೊತೆ ನಟಿಸಿದ್ದಾರೆ.ಆದರೆ ಶಾನ್ವಿಯವರ ಮೂಲ ಕರ್ನಾಟಕ ಅಲ್ಲ. ಉತ್ತರ ಪ್ರದೇಶದ ಪುಣ್ಯಸ್ಥಳ ಕಾಶಿ, ಶಾನ್ವಿಯವರ ಹುಟ್ಟೂರು.

    ಈ ಕಾಶಿ ಕುಮಾರಿ ಕನ್ನಡಕ್ಕೆ ಬಂದಿದ್ದು ಚಂದ್ರಲೇಖ ಚಿತ್ರದ ಮೂಲಕ. ಅದಾದ ಮೇಲೆ ಹಲವು ಚಿತ್ರಗಳಲ್ಲಿ ನಟಿಸಿದ ಶಾನ್ವಿ, ಕನ್ನಡ ಕಲಿತರಾದರೂ.. ಕನ್ನಡದಲ್ಲಿಯೇ ಡಬ್ ಮಾಡುವಷ್ಟು ವಿಶ್ವಾಸ ಬಂದಿಲ್ಲ. ಆದರೆ ಮುಂದೊಂದು ದಿನ ಕನ್ನಡದಲ್ಲಿ ಡಬ್ ಮಾಡಿಯೇ ಮಾಡ್ತೀನಿ ಎಂದಿದ್ದರು. ಈಗ ಆ ಮಾತು ಉಳಿಸಿಕೊಂಡಿದ್ದಾರೆ.

    ಗಣೇಶ್ ಜೊತೆಗೆ ಗೀತಾ ಚಿತ್ರದಲ್ಲಿ ಶಾನ್ವಿಯವರದ್ದು ಮೇಯ್ನ್ ರೋಲ್. ಪ್ರಿಯಾ ಅನ್ನೋ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿರುವ ಶಾನ್ವಿ, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಗೀತಾ ಚಿತ್ರದಲ್ಲಿ ಕನ್ನಡ ಚಳವಳಿಯ ಪಾತ್ರವೂ ದೊಡ್ಡದು. ವಿಜಯ ನಾಗೇಂದ್ರ ನಿರ್ದೇಶನದ ಗೀತಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಕಿಚ್ಚನೂ, ಗಣಿನೂ.. ಸಂಬಂಧಿಕರಂತೆ..!

    sudeep, ganesh are relatives

    ಕಿಚ್ಚ ಸುದೀಪ್ ಮತ್ತು ಗಣೇಶ್ ಬಂಧುಗಳು. ಅದರಲ್ಲೇನಿದೆ ವಿಶೇಷ. ಚಿತ್ರರಂಗದಲ್ಲಿರೋವ್ರೆಲ್ಲ ಹಾಗೆಯೇ ಇದ್ದಾರೆ ಅಂದ್ಕೊಂಡ್ರೆ ಅದು ತಪ್ಪು. ಇದು ಬಂಧು ಬಳಗದ ಬಂಧುತ್ವದ ಕಥೆ. ಇತ್ತೀಚೆಗೆ ಕೆಸಿಸಿ ಟೂರ್ನಿಯಲ್ಲಿ ಜೊತೆಯಲ್ಲಿದ್ದ ವೇಳೆ, ಸುದೀಪ್‍ಗೆ ಗೊತ್ತಾಗಿರುವ ಸತ್ಯ ಇದು.

    ಗಣೇಶ್, ಸುದೀಪ್ ಅವರಿಗೆ ದೂರದ ಸಂಬಂಧಿಯಾಗಬೇಕಂತೆ. ಅದನ್ನು ಖುಷಿಯಿಂದ ಹಂಚಿಕೊಂಡಿರೋ ಸುದೀಪ್, ನನ್ನ ಮನೆಯಲ್ಲೀಗ ಗೋಲ್ಡ್ ಇದೆ. ನಾನೀಗ ಶ್ರೀಮಂತ ಎಂದಿದ್ದಾರೆ.

  • ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?

    ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಅತಿ ದೊಡ್ಡ ಆಸ್ತಿ ಅವರ ನಗು ಮತ್ತು ಕಣ್ಣು. ಈಗ ಅವರ ಕಣ್ಣುಗಳಿಗೇ ಕಣ್ಣು ಹಾಕಿಬಿಟ್ರಾ ಸಿಂಪಲ್ ಸುನಿ ಅನ್ನೋ ಅನುಮಾನ ಬಂದಿದೆ. ಕಾರಣ ಇಷ್ಟೆ, ಗಣೇಶ್ ಹಂಚಿಕೊಂಡಿರೋ ಒಂದು ಫೋಟೋ. ಕಟಕಟೆಯಲ್ಲಿ ಅಂಧರು ಹಾಕಿಕೊಳ್ಳುವ ಕಪ್ಪು ಕನ್ನಡಕ ಮತ್ತು ಕುರುಡರು ಬಳಸುವ ವಾಕಿಂಗ್ ಸ್ಟಿಕ್ ಹಿಡಿದಿರೋ ಗಣೇಶ್, ಅದಕ್ಕೆ ಸಖತ್ ಫಿಲ್ಮ್ ಅನ್ನೋ ಹ್ಯಾಷ್ ಟ್ಯಾಗ್ ಕೊಟ್ಟಿದ್ಧಾರೆ.

    ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ.. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ. ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಚೆಂದವಾಗಿ ಬರೆದೂ ಇದ್ಧಾರೆ.ಅದನ್ನು ಸುನಿ ರೀಟ್ವೀಟ್ ಮಾಡಿದ್ದಾರೆ.

    ಸಖತ್, ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರಕ್ಕೆ ಇತ್ತೀಚೆಗಷ್ಟೇ ನಿಶ್ವಿಕಾ ನಾಯ್ಡು ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದರು ಸುನಿ. ಈಗ ಅಂತಹ ಚೆಲುವೆಯ ಎದುರು ನಿಲ್ಲೋ ನಾಯಕನ ಕಣ್ಣಿನ ಮೇಲೇ ಸಖತ್ ಆಗಿ ಕಣ್ಣಿಟ್ಟುಬಿಟ್ರಾ..?

    ಚಿತ್ರದಲ್ಲಿ ಗಣೇಶ್ ಅಂಧರಾಗಿದ್ದು, ಗಾಯಕನ ಪಾತ್ರ ಮಾಡಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ನಡೆಯುವ ಕಥೆಯೇ ಸಿನಿಮಾ. ಗಣೇಶ್‍ಗೂ ಇಂತಹ ಪಾತ್ರ ಇದೇ ಮೊದಲು. 

  • ಗಣೇಶ್ ಕನ್ನಡಕ ಹುಡುಕೋ ಕೆಲಸ ಶುರು

    where is my kannadaka launched

    ಗೋಲ್ಡನ್ ಸ್ಟಾರ್ ಗಣೇಶ್, ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಒಟ್ಟಿಗೇ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ವೇರ್ ಈಸ್ ಮೈ ಕನ್ನಡಕ ಚಿತ್ರ ಶುರುವಾಗಿಬಿಟ್ಟಿದೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿರೋ ಪಂಚಮುಖಿ ದೇವಸ್ಥಾನದಲ್ಲಿ ಶುಭ ಮುಹೂರ್ತದಲ್ಲಿ ಚಿತ್ರ ಶುರುವಾಗಿದೆ. ಗಣೇಶ್ ಹಿರೋಯಿನ್ ಯಾರು ಗೊತ್ತಾ..? ಪತ್ರಲೇಖ ಎಂಬ ಬಾಲಿವುಡ್ ಚೆಲುವೆ.

    ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರೋ ರಾಜ್-ದಾಮಿನಿ ದಂಪತಿ ಚಿತ್ರದ ನಿರ್ದೇಶಕರು. ನನಗೆ ತುಂಬಾ ಇಂಪ್ರೆಸ್ ಮಾಡಿದ್ದು ಚಿತ್ರದ ಕಥೆ ಎಂದು ಹೇಳಿದ್ದಾರೆ ಗಣೇಶ್. ಅರ್ಬಾಜ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮುಹೂರ್ತ ಈಗಲೇ ಆಗಿದ್ದರೂ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಲ್ಲಿ. 

  • ಗಣೇಶ್ ಕನ್ನಡಕಕ್ಕೆ ಸಲ್ಮಾನ್ ಖಾನ್ ಅಣ್ಣ

    arbaaz khan enters film industry through where is my kannadaka

    ವೇರ್ ಈಸ್ ಮೈ ಕನ್ನಡಕ ಚಿತ್ರಕ್ಕೆ ಗಣೇಶ್ ಹೀರೋ. ಈಗ ಆ ಚಿತ್ರದ ಇನ್ನೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ.

    ರಾಜ್ ಮತ್ತು ದಾಮಿನಿ ಜೋಡಿ ನಿರ್ದೇಶನದ ಚಿತ್ರದ ಚಿತ್ರೀಕರಣ ಏಪ್ರಿಲ್‍ನಿಂದ ಶುರುವಾಗಲಿದೆ. ಸಲ್ಮಾನ್ ಖಾನ್ ಅಭಿನಯದ ದಬಾಂಗ್ 2 ನಿರ್ದೇಶಿಸಿದ್ದ ಅರ್ಬಾಜ್ ಖಾನ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

    Related Articles :-

    Ganesh's New Film Is 'Where Is My Kannadaka'

  • ಗಣೇಶ್ ಗೀತಾಗೆ ಆಟೋ ಸ್ಟಾರ್ಸ್ ಪ್ರಚಾರ

    auto drivers campaign for geetha

    ಗೋಲ್ಡನ್ ಸ್ಟಾರ್ ಅಭಿನಯದ ಗೀತಾ ಚಿತ್ರದ ಪ್ರಚಾರಕ್ಕೆ ಗಣೇಶ್ ಅವರಿಗಿಂತ ಮೊದಲು ಆಟೋ ಸ್ಟಾರ್ಸ್ ಕೈ ಹಾಕಿದ್ದಾರೆ. ಸೆ.27ರಂದು ರಿಲೀಸ್ ಆಗುತ್ತಿರುವ ಚಿತ್ರವನ್ನು ಆಟೋ ಚಾಲಕರೇ ಪ್ರಚಾರ ಮಾಡುತ್ತಿದ್ದಾರೆ.

    ಅದಕ್ಕೆ ಕಾರಣ ಚಿತ್ರದ ಟೈಟಲ್ ಗೀತಾ. ಗೀತಾ, ಶಂಕರ್ ನಾಗ್ ಚಿತ್ರ. ಹೀಗಾಗಿಯೇ ಶಂಕರ್ ನಾಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವ ಆಟೋ ಚಾಲಕರು ಗೀತಾ ಚಿತ್ರದ ಪೋಸ್ಟರ್ ಮೆರವಣಿಗೆ ಮಾಡಿದ್ದಾರೆ. ಗಣೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಶುಭ ಕೋರಿದ್ದಾರೆ.

  • ಗಣೇಶ್ ಗೀತಾಗೆ ಪವರ್ ಸ್ಟಾರ್ ಕನ್ನಡ ಪವರ್

    puneeth sings a song for ganesh's geetha

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ, ಸೆಪ್ಟೆಂಬರ್ ಕೊನೆ ವಾರ ರಿಲೀಸ್ ಆಗಲು ಸಜ್ಜಾಗಿದೆ. ಹೀಗಾಗಿ ಚಿತ್ರದ ಫೈನಲ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಈಗ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾಥ್ ಕೊಟ್ಟಿದ್ದಾರೆ.

    ಚಿತ್ರದಲ್ಲಿ `ಕನ್ನಡ ಕನ್ನಡ ಕನ್ನಡವೇ ಸತ್ಯ.. ಎಂಬ ಹಾಡಿದೆ. ಆ ಹಾಡಿಗೆ ಧ್ವನಿ ನೀಡಿದ್ದಾರೆ ಪುನೀತ್. ಅಂದಹಾಗೆ ಗೀತಾ ಸಿನಿಮಾ ಲವ್ ಸ್ಟೋರಿಯೇ ಆದರೂ, ಇಡೀ ಚಿತ್ರ ನಡೆಯುವುದು ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ. ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಜೊತೆಗೆ ಶಂಕರ್‍ನಾಗ್ ಕ್ಲಾಸಿಕ್ ಚಿತ್ರದ ಟೈಟಲ್ ಬೇರೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕ.

    ತಮ್ಮ ಜೊತೆ ಸಹಾಯಕ ನಿರ್ದೇಶಕರಾಗಿದ್ದ, ಗೆಳೆಯ ವಿಜಯ್ ನಾಗೇಂದ್ರ ಅವರ ಈ ಚಿತ್ರಕ್ಕೆ, ಈ ಹಾಡು ಬರೆದಿರುವುದು ಸಂತೋಷ್ ಆನಂದ್‍ರಾಮ್. ಗೆಳೆಯನ ಸಾಹಸಕ್ಕೆ ಬೆನ್ನೆಲುಬಾಗಿದ್ದಾರೆ ಸಂತೋಷ್. ಶಿಲ್ಪಾ ಗಣೇಶ್ ಅವರೇ ನಿರ್ಮಾಣದ ಹೊಣೆ ಹೊತ್ತಿದ್ದು, ಹಾಡು, ಸಿನಿಮಾ ಎರಡೂ ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಗಣೇಶ್‍ಗೆ ಒಬ್ಬರಲ್ಲ.. ಇಬ್ಬರಲ್ಲ.. ಮೂವರು ಹೀರೋಯಿನ್ಸ್. ಶಾನ್ವಿ ಶ್ರೀವಾಸ್ತವ್, ಪ್ರಗ್ಯಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್.