` kantarab shetty - chitraloka.com | Kannada Movie News, Reviews | Image

kantarab shetty

  • ರಾಜ್ ಬ್ಯಾನರಿಗೆ ಹೊಂಬಾಳೆ ಹೋಲಿಕೆ : ಕಾರಣ ಕಾಂತಾರ

    ರಾಜ್ ಬ್ಯಾನರಿಗೆ ಹೊಂಬಾಳೆ ಹೋಲಿಕೆ : ಕಾರಣ ಕಾಂತಾರ

    ಡಾ.ರಾಜ್ ಕುಮಾರ್ ಬ್ಯಾನರ್ ಚಿತ್ರಗಳೆಂದರೆ ಕನ್ನಡ ಪ್ರೇಕ್ಷಕರಿಗೆ ಒಂದು ಹೆಮ್ಮೆ. ಅಭಿಮಾನ. ಕೇವಲ ಅದು ಡಾ.ರಾಜ್ ಬ್ಯಾನರ್ ಎಂಬ ಕಾರಣಕ್ಕಲ್ಲ.. ಅದಕ್ಕೆ ಕಾರಣವಾಗಿದ್ದು ರಾಜ್ ಬ್ಯಾನರ್ ಸಿನಿಮಾಗಳು ಉಳಿಸಿಕೊಂಡ ಘನತೆ. ವಜ್ರೇಶ್ವರಿ, ಪೂರ್ಣಿಮಾ ಕಂಬೈನ್ಸ್ ಅಡಿಯಲ್ಲಿ ಅತೀ ಹೆಚ್ಚು ಕಾದಂಬರಿ ಆಧರಿಸಿದ ಚಿತ್ರ ನಿರ್ಮಿಸಿರುವ ಹೆಮ್ಮೆ ರಾಜ್ ಬ್ಯಾನರ್ ಚಿತ್ರಗಳದ್ದು. ಕನ್ನಡ ಹಾಗೂ ಈ ನೆಲದ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಚಿತ್ರಗಳು ವಿಭಿನ್ನವಾಗಿರುತ್ತಿದ್ದವು. ಕುಟುಂಬ ಸಮೇತ ನೋಡುವಂತಿರುತ್ತಿದ್ದವು. ಆ ಬ್ಯಾನರ್‍ಗೆ ಈಗ ಹೊಂಬಾಳೆಯನ್ನು ಹೋಲಿಸುತ್ತಿದ್ದಾರೆ ಪ್ರೇಕ್ಷಕರು. ಅದಕ್ಕೆಲ್ಲ ಕಾರಣವಾಗಿದ್ದು ಕಾಂತಾರ.

    ಹೊಂಬಾಳೆ ಇದುವರೆಗೆ ರಾಜಕುಮಾರ, ಯುವರತ್ನ, ಕೆಜಿಎಫ್ ಭಾಗ 1&2 ಮೊದಲಾದ ಚಿತ್ರಗಳನ್ನು ನಿರ್ಮಿಸಿದೆ. ಈಗ ಕಾಂತಾರ ಬಿಡುಗಡೆಯಾಗಿದೆ. ನಾನು ರಿಷಬ್ ಶೆಟ್ಟಿಯವರ ಹಳೆಯ ಸಿನಿಮಾ ನೋಡಿದ್ದೆ. ಆದರೆ ನನಗೆ ಸ್ವಲ್ಪ ಬೇಸರವಿತ್ತು. ರಿಷಬ್ ಶೆಟ್ಟಿಯವರ ಪ್ರತಿಭೆ ಹಾಗೂ ಶಕ್ತಿಯನ್ನು ಇವರ್ ಯಾರೂ ಸರಿಯಾಗಿ ಬಳಸಿಕೊಂಡಿಲ್ಲ ಎನಿಸುತ್ತಿತ್ತು. ಅದೇ ವೇಳೆಗೆ ಕನ್ನಡದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಮನಸ್ಸು ಮಾಡಿದೆವು. ಹೀಗಾಗಿ ರಿಷಬ್ ಶೆಟ್ಟಿಯವರಿಗೆ ಆಹ್ವಾನ ಕೊಟ್ಟೆವು. ಚಿತ್ರಕ್ಕೆ ವ್ಯಕ್ತವಾದ ಮೆಚ್ಚುಗೆಯೇನಿದ್ದರೂ ನಿರ್ದೇಶಕರಿಗೆ ಸಲ್ಲಬೇಕು ಎನ್ನುತ್ತಾರೆ ವಿಜಯ್ ಕಿರಗಂದೂರು.

    ಮೊದಲಿಗೆ ರಿಷಬ್ ಶೆಟ್ಟಿಯವರು ಕಥೆ ಹೇಳಿದ್ದು ಪುನೀತ್ ರಾಜಕುಮಾರ್ ಅವರಿಗೆ. ಪುನೀತ್ ಅವರು ನನಗೆ ಈ ಸಿನಿಮಾ ಮಾಡುವಂತೆ ಸಜೆಸ್ಟ್ ಮಾಡಿದರು. ರಿಷಬ್ ಅವರಿಂದಲೇ ಡೈರೆಕ್ಷನ್ ಮತ್ತು ಹೀರೋ ರೋಲ್ ಮಾಡಿಸುವಂತೆ ಸಲಹೆ ಕೊಟ್ಟರು. ನನಗೂ ರಿಷಬ್ ಶೆಟ್ಟಿಯವರ ಮೇಲೆ ಕಾನ್ಫಿಡೆನ್ಸ್ ಇತ್ತು ಎನ್ನುತ್ತಾರೆ ವಿಜಯ್ ಕಿರಗಂದೂರು.

    500 ವರ್ಷಗಳ ಹಿಂದಿನಿಂದ ಇಲ್ಲಿಯವರೆಗೆ ನಡೆಯುವ ಕಥೆ ಹಾಗೂ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಭೂತಕೋಲದಲ್ಲಿ ಬರುವ ರಿಷಬ್ ಶೆಟ್ಟಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.