` saptami gowda, - chitraloka.com | Kannada Movie News, Reviews | Image

saptami gowda,

  • 100 ಕೋಟಿ ಕ್ಲಬ್‍ನತ್ತ ಕಾಂತಾರ :ಸೃಷ್ಟಿಸಿದ ದಾಖಲೆಗಳೆಷ್ಟು? ಕನ್ನಡದಲ್ಲಿ ಮಾತ್ರ...

    100 ಕೋಟಿ ಕ್ಲಬ್‍ನತ್ತ ಕಾಂತಾರ :ಸೃಷ್ಟಿಸಿದ ದಾಖಲೆಗಳೆಷ್ಟು? ಕನ್ನಡದಲ್ಲಿ ಮಾತ್ರ...

    ಕಾಂತಾರ. ಕನ್ನಡಿಗರೆಲ್ಲರೂ ಎದೆಗೆ ಅಪ್ಪಿಕೊಂಡು ಪ್ರೀತಿಸುತ್ತಿರುವ ಸಿನಿಮಾ. ರಿಷಬ್ ಶೆಟ್ಟಿ ಚಿತ್ರದ ಮೂಲಕ ತಾವೂ ಬೇರೆಯ ಎತ್ತರಕ್ಕೆ ಹೋದರು. ಚಿತ್ರರಂಗವನ್ನೂ ಎತ್ತಿಕೊಂಡು ಹೋದರು. ಈಗ 100 ಕೋಟಿ ಕ್ಲಬ್ ಸನಿಹ ಬಂದಿದೆ.

    ಉ.ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಕಾಂತಾರ. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆದ ಕೆಜಿಎಫ್, ವಿಕ್ರಾಂತ್ ರೋಣ ಸೇರಿದಂತೆ ಹಲವು ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿವೆ. ಆದರೆ ಕೇವಲ ಕನ್ನಡದಲ್ಲಿ ಮಾತ್ರವೇ ರಿಲೀಸ್ ಆಗಿ ದಾಖಲೆ ಮಾಡಿದ್ದು ಕಾಂತಾರ.

    ತಮಿಳುನಾಡು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಕಾಂತಾರ. ಕಲೆಕ್ಷನ್‍ನಲ್ಲೂ ನಂ.1 . ಮುಂಬೈನಲ್ಲಿ 100ಕ್ಕೂ ಹೆಚ್ಚು ಶೋ ಕಂಡ ಮೊದಲ ಕನ್ನಡ ಸಿನಿಮಾ ಕಾಂತಾರ.

    ಅಮೆರಿಕ, ಕೆನಡಾ, ಬ್ರಿಟನ್, ಅರಬ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ಕಲೆಕ್ಷನ್ ಮಾಡಿದ್ದು ದಾಖಲೆ

    100 ಕೋಟಿ ಕ್ಲಬ್ ಸೇರುವುದು ಖಚಿತ. ಅಧಿಕೃತ ಮಾಹಿತಿ ಬಂದಿಲ್ಲವಾದರೂ 100 ಕೋಟಿಗೆ ಹತ್ತಿರದಲ್ಲಿದೆ ಎಂಬ ಸುದ್ದಿಯಂತೂ ಇದೆ.

    ರಿಷಬ್ ಶೆಟ್ಟಿಯವರ ಕಿರಿಕ್ ಪಾರ್ಟಿ ಚಿತ್ರದ ಜೀವಮಾನದ ಗಳಿಕೆಯನ್ನು ಈಗಾಗಲೇ ಕಾಂತಾರ ಹಿಂದೆ ಹಾಕಿದೆ. ವಿಕ್ರಾಂತ್ ರೋಣ, ಮಿಸ್ಟರ್ & ಮಿಸೆಸ್ ರಾಮಾಚಾರಿ, ರಾಜಕುಮಾರ, ಚಾರ್ಲಿ 777 ಚಿತ್ರದ ದಾಖಲೆಯನ್ನೂ ಹಿಂದೆ ಹಾಕಿದೆ.

    ಬುಕ್ ಮೈ ಶೋನಲ್ಲಿ ಚಿತ್ರವನ್ನು ಮೆಚ್ಚಿದವರ ಸಂಖ್ಯೆ 99%ಗೂ ಹೆಚ್ಚು. ವೋಟಿಂಗ್ ಮಾಡಿದವರ ಸಂಖ್ಯೆ ಕೂಡಾ ಅಷ್ಟೆ. 30 ಸಾವಿರಕ್ಕೂ ಹೆಚ್ಚು. ಇದೂ ದಾಖಲೆಯೇ.

    ಈಗ ಹಿಂದಿಯಲ್ಲಿ ಅಕ್ಟೋಬರ್ 17ಕ್ಕೆ ರಿಲೀಸ್ ಆಗುತ್ತಿದೆ. ಹಿಂದಿ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ತೆಲುಗಿನಲ್ಲಿ ಅಕ್ಟೋಬರ್ 15ಕ್ಕೆ ಬಿಡುಗಡೆಯಾಗುತ್ತಿದೆ. ತೆಲುಗಿನ ಟ್ರೇಲರ್‍ಗೂ ಉತ್ತಮ ರಿಯಾಕ್ಷನ್ ಸಿಕ್ಕಿದೆ.

    ದಂತಕತೆಯ ಸಕ್ಸಸ್ ಸ್ಟೋರಿಗೆ ಕೊಟ್ಟಿರುವ ಹೆಸರು ಡಿವೈನ್ ಹಿಟ್ ಎನ್ನುವುದು. ಅಫ್‍ಕೋರ್ಸ್.. ಇದು ಖಂಡಿತ ದೈವೀಕ ಯಶಸ್ಸು.

  • 200 ಕೋಟಿ ಕ್ಲಬ್ ಸೇರಿದ ಕಾಂತಾರ

    200 ಕೋಟಿ ಕ್ಲಬ್ ಸೇರಿದ ಕಾಂತಾರ

    ದಿನ ದಿನಕ್ಕೂ ಕಾಂತಾರ ಕ್ರೇಜ್ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಕ್ರೇಜ್‍ನ್ನು ರಿಲೀಸ್ ಆದ 4 ವಾರದ ನಂತರವೂ ಉಳಿಸಿಕೊಂಡ ಇನ್ನೊಂದು ಚಿತ್ರ ಇಲ್ಲ. ಈಗಾಗಲೇ ಚಿತ್ರ ನೋಡಿದವರ ಸಂಖ್ಯೆಯಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮೀರಿ ಮುನ್ನುಗ್ಗುತ್ತಿರುವ ಚಿತ್ರ ಕಾಂತಾರ. ಇನ್ನು ಕೆಲವೇ ದಿನಗಳಲ್ಲಿ 1 ಕೋಟಿ ಪ್ರೇಕ್ಷಕರ ಸಂಖ್ಯೆ ಗಡಿ ದಾಟಲಿದೆ. ಹೊಂಬಾಳೆ, ರಿಷಬ್ ಶೆಟ್ಟಿ ಇಬ್ಬರೂ ದಾಖಲೆಗಳ ಸರದಾರರಾಗುತ್ತಿದ್ದಾರೆ.

    ಕಾಂತಾರ ಕನ್ನಡದಲ್ಲಿಯೇ 120 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದೂ ಕೂಡಾ ಕರ್ನಾಟಕದಲ್ಲಿಯೇ ಎನ್ನವುದು ವಿಶೇಷ. ವಿಶ್ವದಾದ್ಯಂತ ಸೇರಿ 150 ಕೋಟಿ ದಾಟಿದೆ ಎನ್ನುವುದು ಒಂದು ಅಂದಾಜು.

    ಹಿಂದಿಯಲ್ಲಿ ವಿಶ್ವದಾದ್ಯಂತ 27 ಕೋಟಿ ಕಲೆಕ್ಷನ್ ಮಾಡಿದ್ದು ದಿನೇ ದಿನೇ ಕಲೆಕ್ಷನ್ ಏರುತ್ತಲೇ ಇದೆ. ವಿಶೇಷವೆಂದರೆ ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ ಈ ಕಲೆಕ್ಷನ್ ಒಂದು ದಾಖಲೆಯೇ. ಡಬ್ ಆದ ಸಿನಿಮಾವೊಂದು ಪ್ರತಿ ದಿನವೂ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ದಾಖಲೆ. ಹಿಂದಿಯಲ್ಲೇ 50 ಕೋಟಿ ಕಲೆಕ್ಷನ್ ದಾಟುವ ಸಾಧ್ಯತೆ ಇದೆ.

    ಕನ್ನಡ ಮತ್ತು ಹಿಂದಿ ಬಿಟ್ಟರೆ ಅತಿ ಹೆಚ್ಚು ಕಲೆಕ್ಷನ್ ಆಗಿರುವುದು ತೆಲುಗಿನಲ್ಲಿ. ತೆಲುಗಿನಲ್ಲಿ 25 ಕೋಟಿ ದಾಟಿದೆ ಕಾಂತಾರ ಕಲೆಕ್ಷನ್.

    ತಮಿಳು ಹಾಗೂ ಮಲಯಾಳಂ ಬಾಕ್ಸಾಫೀಸಿನಲ್ಲೂ ಇತಿಹಾಸ ಬರೆಯುತ್ತಿದೆ. ಆದರೆ ಪಕ್ಕಾ ಲೆಕ್ಕ ಸಿಕ್ಕಿಲ್ಲ.

    ಅಮೆರಿಕದಲ್ಲಿ 1 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ಕೆಜಿಎಫ್ ಬಿಟ್ಟರೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಸಿಂಗಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ತಮಿಳು ವರ್ಷನ್ ಇವತ್ತು ರಿಲೀಸ್ ಆಗುತ್ತಿದೆ.

  • 31 ದಿನ 305 ಕೋಟಿ : ಕಾಂತಾರ ರೆಕಾರ್ಡ್

    31 ದಿನ 305 ಕೋಟಿ : ಕಾಂತಾರ ರೆಕಾರ್ಡ್

    ಸತತ 6ನೇ ವಾರವೂ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಹಿಂದೆಂದು ಸೃಷ್ಟಿಯಾಗಿದ್ದಿಲ್ಲ. ಈಗ 300 ಕೋಟಿಯ ಗಡಿಯನ್ನೂ ದಾಟಿರುವ ಕಾಂತಾರ 31ನೇ ದಿನಕ್ಕೆ 305 ಕೋಟಿ ಬ್ಯುಸಿನೆಸ್ ಮಾಡಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆದ ಚಿತ್ರಕ್ಕೆ ದಸರಾ ಹಬ್ಬದ ಓಪನಿಂಗ್ ಸಿಕ್ಕಿತ್ತು. ಆಯುಧಪೂಜೆ, ವಿಜಯದಶಮಿ, ಗಾಂಧಿ ಜಯಂತಿ, ದೀಪಾವಳಿ ಸೇರಿದಂತೆ ಸಾಲು ಸಾಲು ರಜೆಗಳಲ್ಲಿ ಪ್ರೇಕ್ಷಕರು ಚಿತ್ರ ನೋಡಲು ಮುಗಿಬಿದ್ದರು. ಈಗ ನೋಡಿದರೆ 300 ಕೋಟಿಯನ್ನೂ ದಾಟಿ ದಾಖಲೆ ಬರೆದಿದೆ.

    ಕೆಜಿಎಫ್ ಚಾಪ್ಟರ್ 2 ನಂತರ ಕಾಂತಾರ ನಂ.2 ಸಿನಿಮಾ ಎನ್ನಿಸಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾದ ಪಂಜುರ್ಲಿ ದೈವ ಹಾಗೂ ಗುಳಿಗ ಈಗ ಮನೆ ಮನೆ ಮಾತು. ಶಿವ-ಲೀಲಾ ರೊಮ್ಯಾನ್ಸ್‍ಗೆ ಕಚಗುಳಿಯಿಟ್ಟುಕೊಂಡವರಷ್ಟೋ.. ಚಿತ್ರದ ಒಂದೊಂದು ಪಾತ್ರ ಸನ್ನಿವೇಶವನ್ನೂ ಜನ ಎಂಜಾಯ್ ಮಾಡುತ್ತಿದ್ದಾರೆ.

    ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶ್ರೀಶ್ರೀಶ್ರೀ ರವಿಶಂಕರ್, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸೂಪರ್ ಸ್ಟಾರ್ ರಜನಿಕಾಂತ್, ಕ್ರಿಕೆಟ್ ಆಟಗಾರ ಎಬಿ ಡೆವಿಲಿಯರ್ಸ್, ಅನಿಲ್ ಕುಂಬ್ಳೆ.. ಹೀಗೆ ಸಿನಿಮಾ ಹೊರತಾದ ದಿಗ್ಗಜರೂ ನೋಡಿ ಮೆಚ್ಚಿದ ಸಿನಿಮಾ ಕಾಂತಾರ.

    ಕನ್ನಡದಲ್ಲಿಯೇ 160 ಕೋಟಿ ಕಲೆಕ್ಷನ್ ಮಾಡಿದ್ದು, ತೆಲುಗು ಹಾಗೂ ಹಿಂದಿಯಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳು, ಮಲಯಾಳಂನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಮತ್ತೊಂದು ದಾಖಲೆ ಸೃಷ್ಟಿಸಿದೆ.

  • ೩ನೇ ವಾರಕ್ಕೆ ಕಾಂತಾರ.. ೧೦೦ ಕೋಟಿ ಸಿಂಗಾರ : ದಾಖಲೆಗಳ ಡಂಗುರ

    ೩ನೇ ವಾರಕ್ಕೆ ಕಾಂತಾರ.. ೧೦೦ ಕೋಟಿ ಸಿಂಗಾರ : ದಾಖಲೆಗಳ ಡಂಗುರ

    ಕಾಂತಾರ ಒಂದು ದಂತಕಥೆ. ಈ ಚಿತ್ರ ಕನ್ನಡದಲ್ಲಿ ದಂತಕಥೆಯೇ ಆಗುತ್ತಿದೆ. ರಿಷಬ್ ಶೆಟ್ಟಿ ನಟರಾಗಿ, ನಿರ್ದೇಶಕರಾಗಿ ದಂತಕಥೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಹೊಂಬಾಳೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್. ಆದರೆ ಇದು ಸ್ವಲ್ಪ ವಿಭಿನ್ನ. ದೈವೀಕ ಹಿಟ್ ಆದ ಸಂಭ್ರಮ. ಕರಾವಳಿಯ ನೆಲದ ಸಂಸ್ಕೃತಿಯ ನೆಲೆಯಲ್ಲಿ ತೆರೆದುಕೊಳ್ಳುವ ಕಾಂತಾರ ಈಗ ಕರಾವಳಿಯ ಮಣ್ಣಿನ ಕಥೆಯಷ್ಟೇ ಅಲ್ಲ. ಕರ್ನಾಟಕದ ಎಲ್ಲ ಕಡೆ ಸಿಕ್ಕ ಓಪನಿಂಗ್, ಮೆಚ್ಚುಗೆಯ ಮಹಾಪೂರ ಚಿತ್ರವನ್ನೀಗ ಗಡಿಯಾಚೆಗೂ ವಿಸ್ತರಿಸಿದೆ.

    ಕೆಜಿಎಫ್ ಚಾಪ್ಟರ್ ೧ ಹಾಗೂ ಚಾಪ್ಟರ್ ೨ ನಂತರ ಕಾಂತಾರ ಕೂಡಾ ೧೦೦ ಕೋಟಿ ದಾಖಲೆ ಬರೆದಿದೆ. ಅಂದಹಾಗೆ ಕಾಂತಾರ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆಯೇ ಹೊರತು, ರಿಲೀಸ್ ಆದಾಗ ಆಗಿರಲಿಲ್ಲ. ರಿಲೀಸ್ ಆಗಿದ್ದು ಕನ್ನಡದಲ್ಲಿ ಮಾತ್ರ. ಭರಪೂರ ನಿರೀಕ್ಷೆಗಳಿಲ್ಲದೆಯೇ ಕನ್ನಡದಲ್ಲಿಯೇ ರಿಲೀಸ್ ಆಗಿ ೧೦೦ ಕೋಟಿ ದಾಟಿದ ಸಿನಿಮಾ ಕಾಂತಾರ ಎನ್ನಬಹುದು.

    ಇವತ್ತು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಹೊಣೆ ಹೊತ್ತಿದ್ದು ಇನ್ನೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಹಿಂದಿಯಲ್ಲಿ ನಾಳೆ ರಿಲೀಸ್ ಆಗುತ್ತಿದೆ. ಒಟ್ಟಿನಲ್ಲಿ ಕಾಂತಾರ ದಾಖಲೆಗಳ ಸುರಿಮಳೆಯನ್ನೇ ಸುರಿಸುತ್ತಿದೆ.

  • 400 ಕೋಟಿಯ ಬಾರ್ಡರ್ ದಾಟಿದ ಕಾಂತಾರ

    400 ಕೋಟಿಯ ಬಾರ್ಡರ್ ದಾಟಿದ ಕಾಂತಾರ

    ಸೆ.30ರಂದು ರಿಲೀಸ್ ಆದ ಕಾಂತಾರದ ಆರ್ಭಟ..ದೈವೀಕ ಯಾತ್ರೆ.. 400 ಕೋಟಿಯ ಗಡಿಯನ್ನೂ ದಾಟಿದೆ. ರಿಷಬ್ ಶೆಟ್ಟಿ, ಹೊಂಬಾಳೆಯ ಜೋಡಿ ಮತ್ತೊಂದು ಹೊಸ ದಾಖಲೆ ಬರೆದಿದೆ. 50 ದಿನಗಳನ್ನು 400 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ಬರೆದಿದೆ. ಅಬ್ಬರದ ಪಬ್ಲಿಸಿಟಿ ಬದಲು ಸಿನಿಮಾ ನೋಡಿದವರ ಮೌತ್ ಪಬ್ಲಿಸಿಟಿಯಿಂದಲೇ ಗೆದ್ದ ಕಾಂತಾರದ 400 ಕೋಟಿಯ ದಾಖಲೆ ವಿಶೇಷಗಳಲ್ಲಿ ವಿಶೇಷ.

    ಕರ್ನಾಟಕ ಬಿಟ್ಟರೆ, ಹಿಂದಿ ಬೆಲ್ಟ್ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ ಹಿಂದಿ ವರ್ಷನ್ ಸುಮಾರು 96 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನೂ ಹೌಸ್ ಫುಲ್ ರನ್ನಿಂಗ್ ಕಾಣುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ 60 ಕೋಟಿ ರೂ. ತಮಿಳುನಾಡಿನಲ್ಲಿ 12.70 ಕೋಟಿ ರೂ. ಕೇರಳದಲ್ಲಿ 19.20 ಕೋಟಿ ರೂ. ಹಾಗೇ ವಿದೇಶದಲ್ಲಿ ಸುಮಾರು 44.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಮೂಲಗಳು ಹೇಳುತ್ತಿವೆ. ಕನ್ನಡದಲ್ಲಿ ಕೆಜಿಎಫ್ ಚಾಪ್ಟರ್ 2ನ 186 ಕೋಟಿಯ ಗಡಿ ದಾಟಿದ್ದು, 200 ಕೋಟಿಯನ್ನೂ ಮೀರಿ ಮುನ್ನಡೆಯುತ್ತಿದೆ.

    ಮೇನ್ ಥಿಯೇಟರ್ ನರ್ತಕಿ ಒಂದನ್ನು ಬಿಟ್ಟರೆ ದೇಶದ ಎಲ್ಲ ಮೆಟ್ರೋ ಸಿಟಿಗಳಲ್ಲಿ 50 ದಿನ ಪೂರೈಸಿದ ಸಿನಿಮಾ ಕಾಂತಾರ. ವಿದೇಶದಲ್ಲಿ ಕೂಡಾ 50 ದಿನ ಪೂರೈಸಿದ 2ನೇ ಕನ್ನಡ ಸಿನಿಮಾ ಕಾಂತಾರ. ಬೆಂಗಳೂರಿನ ಊರ್ವಶಿ, ಕಾವೇರಿ ಥಿಯೇಟರ್ಗಳಲ್ಲಿ ಕಳೆದ 20 ವರ್ಷಗಳಲ್ಲಿ 50 ದಿನ ಪ್ರದರ್ಶನ ಕಂಡ ಮೊದಲ ಸಿನಿಮಾ ಕಾಂತಾರ.

    ಬಾಕ್ಸಾಫೀಸ್ನಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ನಂ.1 ಕನ್ನಡ ಸಿನಿಮಾ, ಕೆಜಿಎಫ್ ಚಾಪ್ಟರ್ 2 ಈಗ ನಂ.2 ಸ್ಥಾನ ಗಳಿಸಿದೆ. ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಸಿನಿಮಾ ಕಾಂತಾರ. 1 ಕೋಟಿಗೂ ಹೆಚ್ಚು ಜನ ನೋಡಿರುವುದು ಕೂಡಾ ದಾಖಲೆಯೇ.  

    ಕಾಂತಾರದ ನಂತರ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಬಿರುದು ಪಡೆದರೆ, ಹೊಸ ಕ್ರಷ್ ಆಗಿ ಹೊರಹೊಮ್ಮಿರುವುದು ಸಪ್ತಮಿ ಗೌಡ. ಚಿತ್ರದೊಂದಿಗೆ ಕರಾವಳಿಯ ಸಂಸ್ಕೃತಿ ದೈವಗಳು, ಭೂತಕೋಲ ಇಡೀ ಜಗತ್ತಿಗೆ ಪರಿಚಿತವಾಗಿದೆ

  • 50 ಕೋಟಿ ದಾಟಿದ ಕಾಂತಾರ

    50 ಕೋಟಿ ದಾಟಿದ ಕಾಂತಾರ

    ಸಾವಿರ ದೈವದ ಮನ ಸಂಪ್ರೀತ ಬೇಡುತ ನಿಂದೆವು ಆರಾಧಿಸುತ...

    ಸ್ಯಾಂಡಲ್ವುಡ್ನಲ್ಲಿ ಕೋಟಿಗಳ ಮಿಂಚು ಹರಿಯುತ್ತಿದೆ. ಇದು ಪಾನ್ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿಯೇ ಬಿಡುಗಡೆಗೊಂಡು ದಾಖಲೆ ಬರೆಯುತ್ತಿರುವ ಸಿನಿಮಾ. ನಮ್ಮ ನೆಲದ ಒಂದು ಸಂಸ್ಕತಿಯ ಅದ್ಭುತ ಕಥೆಯ ಡಿವೈನ್ ಬ್ಲ್ಯಾಕ್ ಬಾಸ್ಟರ್ ಹಿಟ್. ಸಿನಿಮಾ ರಿಲೀಸ್ ಆಗಿ ಆರೇ ದಿನದಲ್ಲಿ 50 ಕೋಟಿ ಕ್ಲಬ್ ದಾಟಿ ಮುನ್ನುಗ್ಗುತ್ತಿದೆ.

    ರಾಜಕುಮಾರ, ಯುವರತ್ನ, ಕೆಜಿಎಫ್ ಸಿನಿಮಾ  ನಿರ್ಮಾಣ ಮಾಡಿದ್ದ ಹೊಂಬಾಳೆ ಸಂಸ್ಥೆಯ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತಿದೆ ಕಾಂತಾರ. ಸಿನಿಮಾ ಸಕ್ಸಸ್ ಯಾತ್ರೆ ನಡೆಸುತ್ತಿರುವ ಕಾಂತಾರ ಮ್ಯಾಜಿಕ್ ಮಾಡಿದೆ. ಬುಕ್ ಮೈ ಶೋನಲ್ಲೇ 22 ಸಾವಿರಕ್ಕೂ ಹೆಚ್ಚು ಜನ ಚಿತ್ರ ವಿಮರ್ಶೆ ಮಾಡಿದ್ದು ಶೇ.99 ಅಂಕ ಕೊಟ್ಟಿದ್ದಾರೆ. ವೀರೇಶ್ ಚಿತ್ರಮಂದಿರದಲ್ಲಿ ಮೊದಲ ವಾರದ ಎಲ್ಲ ಶೋಗಳೂ ಹೌಸ್ ಫುಲ್ ಎನ್ನುವುದು ಒಂದು ದಾಖಲೆ.

    ಕೆಜಿಎಫ್ ಕನ್ನಡದಲ್ಲಿ ಹೇಗೆ ಕಲೆಕ್ಷನ್ ಮಾಡಿತ್ತೋ ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿರೋ ಕಾಂತಾರ 10 ದಿನದಲ್ಲಿ 100 ಕೋಟಿ ಕ್ಲಬ್ ಸೇರೋ ಚಾನ್ಸ್ ಹೆಚ್ಚಿದೆ.

    ಕಾಂತಾರ ರಿಷಬ್ ಶೆಟ್ಟಿ ಸಿನಿ ಕೆರಿಯರ್ನಲ್ಲೇ ಮೈಲುಗಲ್ಲಾಗಲಿದೆ. ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ದೈವವೊಂದು ಆರ್ಭಟಿಸುತ್ತಾ ಕುಣಿಯುತ್ತಿದೆ. ಆಯುಧಪೂಜೆ, ವಿಜಯದಶಮಿ ನಡುವೆಯೂ ಜನಜಂಗುಳಿ ಥಿಯೇಟರ್ ಮುಂದಿದೆ. ದಸರಾ ಹಬ್ಬದ ಸಾಲು ಸಾಲು ರಜೆಯನ್ನ ಕಾಂತಾರದ ಡಿವೈನ್ ಲೋಕಕ್ಕೆ ಹೋಗಿ ಪ್ರೇಕ್ಷಕರು ಮಜಾ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರುಗೆ ಬಂಪರ್ ಜಾಕ್ ಪಾಟ್. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಎಲ್ಲರಿಗೂ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ.

  • 50ನೇ ದಿನದತ್ತ ಕಾಂತಾರ : ಹೊಸ ಇತಿಹಾಸ

    50ನೇ ದಿನದತ್ತ ಕಾಂತಾರ : ಹೊಸ ಇತಿಹಾಸ

    ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇರುವ ಕಾಂತಾರ ಹಲವು ದಾಖಲೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಕಾಂತಾರ ಈಗ ಕನ್ನಡದಲ್ಲೇ ಅತೀ ಹೆಚ್ಚು ಬಾಕ್ಸಾಫೀಸ್ ಗಳಿಕೆ ಮಾಡಿದ ಚಿತ್ರ ಹಾಗೂ ಥಿಯೇಟರಿನಲ್ಲಿ ಅತೀ ಹೆಚ್ಚು ಜನ ನೋಡಿದ ಚಿತ್ರವೂ ಹೌದು. ಈಗ 50ನೇ ದಿನದತ್ತ ಕಾಲಿಟ್ಟಿದೆ. ಈ ಶನಿವಾರಕ್ಕೆ 50ನೇ ದಿನದ ಗುರಿ ಮುಟ್ಟಲಿದೆ ಕಾಂತಾರ.

    ಇದು ವಿಶೇಷವೂ ಹೌದು. ಏಕೆಂದರೆ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಅರ್ಧಶತಕ ಪೂರೈಸುತ್ತಿರುವುದು ವಿಶೇಷ ದಾಖಲೆ. 300ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿದೆ. ಬೆಂಗಳೂರಿನಲ್ಲೇ ಮಲ್ಟಿಪ್ಲೆಕ್ಸ್ ಬಿಟ್ಟು 30ಕ್ಕೂ ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿರುವುದು ವಿಶೇಷ.

    ಆದರೆ ಮೇನ್ ಥಿಯೇಟರ್ ನರ್ತಕಿಯಲ್ಲಿ ಮಾತ್ರ ಹಾಗಾಗುತ್ತಿಲ್ಲ. ನರ್ತಕಿ ಕಾಂತಾರ ಚಿತ್ರದ ಮೇನ್ ಥಿಯೇಟರ್. ಆದರೆ ನರ್ತಕಿಯಲ್ಲಿ 48ನೇ ದಿನಕ್ಕೆ ಕಾಂತಾರ ನಿರ್ಗಮಿಸಲಿದೆ. ಕಾಂತಾರ ಬಿಡುಗಡೆಯಾದ 49ನೇ ದಿನ ನರ್ತಕಿಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ರಿಲೀಸ್ ಆಗಲಿದೆ. ಹೀಗಾಗಿ ಮೇನ್ ಥಿಯೇಟರಿನಲ್ಲಿಯೇ ದಾಖಲೆ ಬರೆಯಲಾಗುತ್ತಿಲ್ಲ ಕಾಂತಾರ.

    ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಥಿಯೇಟರಿನಲ್ಲಿ ಈಗಲೂ ಜನ ಬರುತ್ತಿದ್ದಾರೆ. ಕೆಜಿಎಫ್ ಮೂಲಕ ಸುನಾಮಿ ಹಿಟ್ ಕಂಡಿದ್ದ ಹೊಂಬಾಳೆ, ಕಾಂತಾರ ಮೂಲಕ ಡಿವೈನ್ ಹಿಟ್ ಸಾಧಿಸಿದೆ.

  • 95 ಸೆಂಟರ್`ಗಳಲ್ಲಿ ಇವತ್ತೇ ಕಾಂತಾರ ಭರ್ಜರಿ ಶೋ

    95 ಸೆಂಟರ್`ಗಳಲ್ಲಿ ಇವತ್ತೇ ಕಾಂತಾರ ಭರ್ಜರಿ ಶೋ

    ಕಾಂತಾರ ರಿಲೀಸ್ ಆಗುವುದು ನಾಳೆಗೆ. ಸೆ.30ರಂದು ರಿಲೀಸ್ ಆಗಬೇಕಿದ್ದ ಕಾಂತಾರ ಚಿತ್ರದ ಪ್ರೀಮಿಯರ್ ಶೋ ಇವತ್ತೇ ಶುರುವಾಗುತ್ತಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಮೊದಲ ಚಿತ್ರ ಕಾಂತಾರ. ಹೊಂಬಾಳೆಯವರ ಜೊತೆ ಮೊದಲ ಸಿನಿಮಾ. ಚಿತ್ರ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಆದರೆ ಇಂಗ್ಲಿಷ್ ಸಬ್ ಟೈಟಲ್ಲಿನಲ್ಲಿ ಬಿಡುಗಡೆಯಾಗುತ್ತಿದೆ.

    ಚಿತ್ರದ ಪ್ರೀಮಿಯರ್ ಶೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 95 ಕೇಂದ್ರಗಳಲ್ಲಿ ಪ್ರೀಮಿಯರ್ ಶೋ ನಡೆಯಲಿವೆ. ಕರ್ನಾಟಕದಲ್ಲಿ 50 ಕಡೆ, ಹೈದರಾಬಾದ್, ಚೆನ್ನೈ, ಕೊಚ್ಚಿ, ಮುಂಬೈ, ಪೂನಾ, ದೆಹಲಿ, ಪಟ್ನಾ ಸೇರಿದಂತೆ ದಕ್ಷಿಣ ಭಾರತದಲ್ಲಿ 25 ಹಾಗೂ ಉತ್ತರ ಭಾರತದಲ್ಲಿ 20 ಕಡೆ ಪ್ರೀಮಿಯರ್ ಶೋಗಳಿವೆ.

    ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಘಟಾನುಘಟಿಗಳಿದ್ದಾರೆ. ಪ್ರೀಮಿಯರ್ ಶೋ ಹೊರತುಪಡಿಸಿ ದೇಶ ವಿದೇಶಗಳಲ್ಲೂ ಸೆ.30ರಂದೇ ರಿಲೀಸ್ ಆಗುತ್ತಿದೆ ಕಾಂತಾರ. ಎಲ್ಲೆಡೆ ಭರ್ಜರಿ ಬುಕಿಂಗ್ ಆಗಿದೆ.

    ನಮ್ಮ ಹೊಂಬಾಳೆ ಸಂಸ್ಥೆ ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಒಂದೊಳ್ಳೆಯ ಸಂದೇಶ ಕೊಟ್ಟಿದ್ದಾರೆ. ನಮ್ಮ ಇತರೆ ಚಿತ್ರಗಳಂತೆ ಕಾಂತಾರ ಕೂಡಾ  ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ವಿಜಯ್ ಕಿರಗಂದೂರು .

  • Kantara Movie Review, Chitraloka Rating 4/5

    Kantara Movie Review, Chitraloka Rating 4/5

    Film: Kantara

    Director: Rishab Shetty

    Cast: Rishab Shetty, Sapthami Gowda, Kishore Achyuth Kumar, Pramod Shetty

    Duration: 2 hours 30 minutes

    Certificate: U/A

    Rating: 4

    Kantara is an out-of-this-world experience for which Rishab Shetty and his team needs to be commended. At the end of this film, it is very hard to come out of the trance-like environment he has created. In the film, Rishab’s character, Shiva, is haunted by nightmares. For the audience watching the film, it will be Rishab’s performance in the climax that will repeatedly haunt them. Kantara reminds you of the films of Shankar Nag. In another time, this could well have been a film directed and performed by the late actor.

    Folk stories, with their blend of the supernatural, strange characters, unsolved mysteries and surprises have kept people spellbound for generations. How do you create a new folk story that combines all these elements? Kantara has the answer. And has it worked? It has succeeded beyond expectations.

    Combining the rituals and sports of the coast to a not-so-surprising story of a three-cornered land dispute, Kantara blends the mysterious with the practical and creates a world you will fall in love with. This is a world that drags you in and won’t let go, even after you are done with the film.

    It is nice to see the predictable start to folklore with a ‘once upon a time, there lived a king’ story. This king, in eternal distress, trades his land for peace of mind. He makes a pact with a ‘daiva’, which is accompanied with a warning. Cut to another period (1990) his descendants are trying to undo the deal, threatening to unleash the wrath of the Gods. Unsuspectingly placed in the middle of this war is our hero.

    Most films that talk about nativity end their efforts with the costumes and a stressed accent. Kantara however gives so much attention to every detail that you are literally transported to the place. It will leave you wanting to book a ticket to the place. I would not be surprised if this film results in people making a beeline to watch the ‘daiva’ culture similar to what Nammora Mandara Hoove did to Yaana and Yograj Bhat’s films did to Jog Falls and ‘Mugil Pete.’

    Kola, Kambala, hunting, food, beliefs and rituals are all packed into this film. They provide a unique backdrop for the story on hand. The story is simple enough but the attributes around it that makes it special. While the main characters like the angry Shiva, the sly landlord, the irritable forest officer and the damsel in distress do their job, the minor characters like the feudal henchmen, the amorous friend, the stoned workman, the cautionary higher officers fill up the detailed world of Kantara.

    The brilliant cinematography captures this world in vivid detail. The camera work transports you to the middle of the action which has been made more than a little realistic than possible by the art work. In the meantime Ajaneesh Loknath has rented your mind full time with the background score.

    Kantara is an experience more than a film. This film is where good intentions have been brought to life by a great support. The commitment of the producers cannot be underplayed here. In the end, the team has provided the Kannada audience with a memorable product. Cheers to that.

    -S Shyam Prasad

     

  • ಅದೊಂದು ತಪ್ಪು ಮಾಡಬೇಡಿ : ಕಾಂತಾರ ನೋಡಿದವರಿಗೆ ರಿಷಭ್ ಶೆಟ್ಟಿ ಮನವಿ

    ಅದೊಂದು ತಪ್ಪು ಮಾಡಬೇಡಿ : ಕಾಂತಾರ ನೋಡಿದವರಿಗೆ ರಿಷಭ್ ಶೆಟ್ಟಿ ಮನವಿ

    ಕಾಂತಾರ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆದ ಬೆನ್ನಲ್ಲೇ ಕೆಲವರು ಕೊಂಕನ್ನೂ ತೆಗೆದಿದ್ದಾರೆ. ಆದರೆ ಸಿನಿಮಾ ನೋಡಿದ ಚಿತ್ರರಸಿಕರ ಪಾಲಿಗೆ ಕಾಂತಾರ ಸಿನಿಮಾ ಹಬ್ಬ. ಮಾಸ್ಟರ್ ಪೀಸ್. ಪ್ರೇಕ್ಷಕರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ. ಸಿದ್ಧಾಂತಗಳಿಗಿಂತ ಸಿನಿಮಾ ಕೊಡುವ ಮನರಂಜನೆ ಮುಖ್ಯ ಎನ್ನುವವರು ಅವರು. ಸರಿ ತಪ್ಪುಗಳನ್ನು ಬೇರೆಯವರಿಗಿಂತ ಹೆಚ್ಚಾಗಿ ತಮಗೆ ತಾನೇ ನಿರ್ಧರಿಸುವವರು. ಅವರಿಗೆಲ್ಲ ಸಿನಿಮಾ ಖುಷಿ ಕೊಟ್ಟಿದೆ. ಆದರೆ ಈ ಖುಷಿಯ ಜೊತೆಯಲ್ಲೇ ಅತ್ಯುತ್ಸಾಹದಲ್ಲಿ ಮಾಡುತ್ತಿರುವ ಒಂದು ತಪ್ಪನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ಎತ್ತಿ ತೋರಿಸಿದ್ದಾರೆ. ಆ ರೀತಿ ಮಾಡದಂತೆ ಮನವಿ ಮಾಡಿದ್ದಾರೆ.

    ಸಿನಿಮಾದಲ್ಲಿ ನನ್ನ ಪಾತ್ರ ದೈವಾವೇಶದಲ್ಲಿ ಬೊಬ್ಬೆಯಿಡುವ ದೃಶ್ಯವಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ಅದು ದೈವಾರಾಧನೆಯ  ಒಂದು ಭಾಗ, ನಂಬಿಕೆಯ ವಿಷಯ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕೋದನ್ನು ಯಾರೂ ಅನುಕರಣೆ ಮಾಡಬಾರದು ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.

    ಸಾಮಾನ್ಯವಾಗಿ ದೇವರು ಕುರಿತಾದ ಪಾತ್ರಗಳನ್ನು ಮಾಡುವವರು ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಮಾಂಸ ಸೇವನೆ, ಧೂಮಪಾನ, ಮದ್ಯಪಾನಗಳನ್ನೆಲ್ಲ ಬಿಟ್ಟು ಬದುಕುತ್ತಾರೆ. ಅದೇ ರೀತಿ ರಿಷಬ್ ಶೆಟ್ಟಿಯವರು ಕೂಡಾ ಈ ಪಾತ್ರ ಮಾಡುವಾಗ ತಾವು ಅನುಸರಿಸಿದ ಸಂಪ್ರದಾಯ, ನಂಬಿಕೆ, ಆಚರಣೆಗಳ ಬಗ್ಗೆ ಹೇಳಿದ್ದಾರೆ. ಆ ರೀತಿ ಇಲ್ಲದೆ ಹೋದರೆ ಅಪಚಾರವಾಗುತ್ತದೆ. ಕೆಡುಕಾಗುತ್ತದೆ ಎನ್ನುವುದು ನಂಬಿಕೆ. ಸ್ವತಃ ಕರಾವಳಿ ಕಡೆಯವರಾದ ರಿಷಬ್ ಶೆಟ್ಟಿಯವರಿಗೆ ಆ ನಂಬಿಕೆಯೂ ಇದೆ. ಹೀಗಾಗಿಯೇ ಉತ್ಸಾಹದಲ್ಲಿ ದೈವದಂತೆ ಕೂಗು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

    ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಕಿಶೋರ್ ಪ್ರಮುಖ ಪಾತ್ರದಲ್ಲಿರುವ ಕಾಂತಾರ ಗೆಲುವಿನ ದಶಮಿ ಆಚರಿಸುತ್ತಿದೆ. ಹೊಂಬಾಳೆ ಫಿಲಮ್ಸ್ ಮತ್ತೊಮ್ಮೆ ಜಯಭೇರಿ ಮೊಳಗಿಸಿದೆ.

  • ಆಸ್ಕರ್ ರೇಸ್ : ಅಧಿಕೃತ ಎಂಟ್ರಿ ಪಡೆದ ಕಾಂತಾರ

    ಆಸ್ಕರ್ ರೇಸ್ : ಅಧಿಕೃತ ಎಂಟ್ರಿ ಪಡೆದ ಕಾಂತಾರ

    ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆ, ಇತಿಹಾಸ ಬರೆದ ಕಾಂತಾರ, ಆಸ್ಕರ್ ಪ್ರಶಸ್ತಿಗೆ ಇನ್ನಷ್ಟು ಸಮೀಪ ಹೋಗಿದೆ. ಕನ್ನಡದ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಆಸ್ಕರ್ ಅಂಗಳಕ್ಕೆ ಅಧಿಕೃತ ಪ್ರವೇಶ ಗಿಟ್ಟಿಸಿದೆ. ಕಾಂತಾರ ಚಿತ್ರವನ್ನು ಖಾಸಗಿಯಾಗಿ ಆಸ್ಕರ್ಗೆ ನಾಮನಿರ್ದೇಶನ ಸಲ್ಲಿಸಿದ್ದ ಹೊಂಬಾಳೆ ಸಂಸ್ಥೆಯೇ ಅಧಿಕೃತ ಎಂಟ್ರಿಯನ್ನೂ ಘೋಷಿಸಿದೆ.

    ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದೆ ಹೊಂಬಾಳೆ. ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಆಸ್ಕರ್ಗೆ ಅರ್ಹತೆ ಪಡೆದಿದೆ.

    ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದರೆ ಒಂದು ಇತಿಹಾಸ. ಪ್ರಶಸ್ತಿಯನ್ನು ಗೆದ್ದೂಬಿಟ್ಟರೆ ಅದೊಂದು ಹೊಸ ಇತಿಹಾಸ. ಒಟ್ಟು 301 ಚಿತ್ರಗಳಲ್ಲಿ ಒಂದಾಗಿ ಕಾಂತಾರ ಅರ್ಹತೆ ಪಡೆದಿದ್ದು, ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ.

    ಕಾಂತಾರ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಚಿತ್ರ. ರಿಷಬ್ ಶಿವನಾಗಿ, ನಾಯಕಿ ಸಪ್ತಮಿ ಗೌಡ ಲೀಲಾ ಆಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಕಾಂತಾರ, 400 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಹಾಗೂ ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ಕಾಂತಾರ.

  • ಆಸ್ಕರ್ ರೇಸ್‍ಗೆ ಕಾಂತಾರ

    ಆಸ್ಕರ್ ರೇಸ್‍ಗೆ ಕಾಂತಾರ

    ಆಸ್ಕರ್. ಪ್ರತಿಯೊಬ್ಬ ಚಿತ್ರ ನಿರ್ಮಾಪಕ, ನಿರ್ದೇಶಕ,ಕಲಾವಿದ, ತಂತ್ರಜ್ಞರ ಗುರಿ. ಕನಸು. ಈ ಕನಸಿನಲ್ಲಿ ಈ ಬಾರಿ ಭಾರತೀಯ ಚಿತ್ರರಂಗದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಚಿತ್ರ ಗುಜರಾತಿ ಚಿತ್ರ ಚೆಲ್ಲೋ ಶೋ (ದಿ ಲಾಸ್ಟ್ ಶೋ). ಫಿಲ್ಮ್ ಫೆಡರೇಷನ್ ಇಂಡಿಯಾ ವತಿಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಚಿತ್ರವಿದು. ಇತ್ತೀಚೆಗೆ ಆರ್.ಆರ್.ಆರ್. ಸಿನಿಮಾ ಕೂಡಾ ಆಸ್ಕರ್ ರೇಸ್‍ಗೆ ಲಗ್ಗೆಯಿಟ್ಟಿದೆ. ಫಾರ್ ಯುವರ್ ಕನ್ಸಿಡರೇಷನ್ ವಿಭಾಗದಲ್ಲಿ ಪ್ರತ್ಯೇಕವಾಗಿಯೇ ಎಂಟ್ರಿ ಕೊಟ್ಟಿದೆ. ಹಿಂದಿಯ ಗಂಗೂಬಾಯಿ ಕಟಿವಾಡಿ ಚಿತ್ರ ಇದೇ ವಿಭಾಗದಲ್ಲಿ ಸ್ಪರ್ಧೆಗಿಳಿದಿದೆ. ಈಗ ಈ ವಿಭಾಗಕ್ಕೆ ಕಾಂತಾರ ಕೂಡಾ ಎಂಟ್ರಿ ಕೊಟ್ಟಿದೆ.

    ನಾವು ಚಿತ್ರವನ್ನು ಆಸ್ಕರ್ ರೇಸ್‍ಗೆ ಕಳಿಸಿದ್ದೇವೆ. ಅಧಿಕೃತವಾಗಿ ಅಪ್ಲಿಕೇಷನ್ ಹಾಕಿದ್ದೇವೆ. ಫೈನಲ್ ಲಿಸ್ಟ್‍ಗಾಗಿ ಕಾಯುತ್ತಿದ್ದೇವೆ. ಕಾಂತಾರ ಈ ನೆಲದ ಮಣ್ಣಿನ ಕಥೆಯಾದರೂ ಯುನಿವರ್ಸಲ್ ಗುಣಗಳನ್ನು ಹೊಂದಿದೆ ಎಂದು ಇಂಡಿಯಾ ಟುಡೇಗೆ ಹೇಳಿಕೆ ನೀಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

    ಕಾಂತಾರ ಮೊದಲು ಕನ್ನಡದಲ್ಲಿಯಷ್ಟೇ ನಿರ್ಮಾಣವಾದ ಸಿನಿಮಾ. ನಂತರ ಚಿತ್ರದ ಸಕ್ಸಸ್ ಹಾಗೂ ಡಿಮ್ಯಾಂಡ್ ಕಂಡು ಬೇರೆ ಭಾಷೆಗಳಿಗೆ ಡಬ್ ಮಾಡಲಾಯಿತು. ಎಲ್ಲ ಭಾಷೆಗಳಲ್ಲಿಯೂ ಸಕ್ಸಸ್ ಕಂಡ ಸಿನಿಮಾ ಗಳಿಸಿದ್ದು 400 ಕೋಟಿಗೂ ಹೆಚ್ಚು. ಅಷ್ಟೇ ಅಲ್ಲ, ಇಂಗ್ಲಿಷಿಗೂ ಡಬ್ ಆಗಿ ನೆಟ್ ಫ್ಲಿಕ್ಸ್‍ನಲ್ಲಿ ರಿಲೀಸ್ ಆಗಿದೆ. ಅಲ್ಲಿಯೂ ಟ್ರೆಂಡಿಂಗ್‍ನಲ್ಲಿದೆ.

    ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಚಿತ್ರ ಕರಾವಳಿಯಲ್ಲಿ ನಡೆಯುವ ಪ್ರಕೃತಿ ಮತ್ತು ಮನುಷ್ಯರ ನಡುವಿನ ಹೋರಾಟದ ಕಥೆಯನ್ನು ಹೇಳಿತ್ತು. ಚಿತ್ರದ ಕ್ಲೈಮಾಕ್ಸ್ ಚಿತ್ರಕ್ಕೊಂದು ದೈವೀಕ ಸೊಬಗು ನೀಡಿತ್ತು. ಆಸ್ಕರ್ ಕೂಡಾ ಗೆದ್ದರೆ.. ವ್ಹೋ.. ಎನ್ನಲು ಅಡ್ಡಿಯಿಲ್ಲ.

  • ಇಂದಿನಿಂದ ತುಳು ಕಾಂತಾರ ಚಿತ್ರಮಂದಿರದಲ್ಲಿ..

    ಇಂದಿನಿಂದ ತುಳು ಕಾಂತಾರ ಚಿತ್ರಮಂದಿರದಲ್ಲಿ..

    ಅಭೂತಪೂರ್ವ ಯಶಸ್ಸು ಕಂಡ ಕಾಂತಾರ ಚಿತ್ರ ಈಗಾಗಲೇ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡು ದಾಖಲೆ ಬರೆದಿದೆ. ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ, ಅತೀ ಹೆಚ್ಚು ಜನ ನೋಡಿದ ಸಿನಿಮಾ, ಅತೀ ಹೆಚ್ಚು ಶೋ ಕಂಡ ಸಿನಿಮಾ.. ಹೀಗೆ ಹಲವು ದಾಖಲೆಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆಗಿದ್ದರೆ, ಸಪ್ತಮಿ ಗೌಡ ಕರ್ನಾಟಕದ ಕ್ರಷ್ ಆಗಿದ್ದಾರೆ. ಹಿಂದಿಯಲ್ಲಿ ಕೂಡಾ ದಾಖಲೆ ಬರೆದು ಪುಷ್ಪ ದಾಖಲೆಯನ್ನೂ ಹಿಂದಿಕ್ಕಿದೆ. ಒಟಿಟಿಯಲ್ಲಿ ರಿಲೀಸ್ ಆಗಿದ್ದರೂ, ಚಿತ್ರಮಂದಿರದಲ್ಲಿ ಕ್ರೇಜ್ ಕಡಿಮೆಯಾಗಿಲ್ಲ.

    ಕನ್ನಡ ಭಾಷೆಯಲ್ಲಿ ಯಶಸ್ಸು ಗಳಿಸುತ್ತಿದ್ದಂತೆಯೇ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ಕಾಂತಾರವನ್ನು ಬಿಡುಗಡೆ ಮಾಡಲಾಯಿತು. ಅಲ್ಲಿಯೂ ಸೂಪರ್ ಡ್ಯೂಪರ್ ಬಂಪರ್ ಸಕ್ಸಸ್. ಇದೀಗ ತುಳು ಆವೃತ್ತಿಯು ಕೂಡ ಕರ್ನಾಟಕದಾದ್ಯಂತ ಸುಮಾರು 50 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ  ಕನ್ನಡ ಆವೃತ್ತಿಯಲ್ಲಿಯೂ 50 ಹೆಚ್ಚುವರಿ ಚಿತ್ರಮಂದಿರಗಳೊಂದಿಗೆ 250 ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣಲಿದೆ.

    ಸಿನಿಮಾದಲ್ಲಿನ ವರಾಹ ರೂಪಂ ಹಾಡನ್ನು ಥಿಯೇಟರ್ ಮತ್ತು ಒಟಿಟಿ ಆವೃತ್ತಿಯಲ್ಲಿ ಬದಲಿಸಲಾಗಿದೆ. ಆದರೆ ಇದು ಚಿತ್ರದ ಕಲೆಕ್ಷನ್ ಮತ್ತು ಕ್ರೇಜ್ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಜನ ಬೇಸರಗೊಂಡಿದ್ದರೂ ಕಾಂತಾರವನ್ನು ನೋಡುತ್ತಿದ್ದಾರೆ.

    ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತೂಮಿನಾಡ್, ಸ್ವರಾಜ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿರುವ ಕಾಂತಾರ ತುಳು ನಾಡಿನದ್ದೇ ಕಥೆ. ಈಗ ತುಳುವಿನಲ್ಲೇ ಬರುತ್ತಿದೆ.

  • ಕಾಂತಾರ : ರಿಷಬ್ ಶೆಟ್ಟಿ & ತಂಡಕ್ಕೆ ಸಿಕ್ಕ ಸಂಭಾವನೆ ಎಷ್ಟು?

    ಕಾಂತಾರ : ರಿಷಬ್ ಶೆಟ್ಟಿ & ತಂಡಕ್ಕೆ ಸಿಕ್ಕ ಸಂಭಾವನೆ ಎಷ್ಟು?

    ಕಾಂತಾರ ಅಭೂತಪೂರ್ವ ಯಶಸ್ಸು ಗಳಿಸಿದೆ. 16 ಕೋಟಿಯ ಬಜೆಟ್ ಸಿನಿಮಾ ಥಿಯೇಟರಿನಲ್ಲಿ ಗಳಿಸಿದ್ದೇ 400 ಕೋಟಿಗೂ ಹೆಚ್ಚು. ಜಸ್ಟ್ 16 ಕೋಟಿ. ಹೊಂಬಾಳೆಯವರ ಕೆಜಿಎಫ್ ಸಿನಿಮಾ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತಾದರೂ, ಹಾಕಿದ ಬಂಡವಾಳಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ಆದರೆ ಕಾಂತಾರದ್ದು ಬೇರೆ. ಹಾಕಿದ್ದ ಬಂಡವಾಳಕ್ಕೆ ಹೋಲಿಸಿದರೆ 25 ಪಟ್ಟು ಹೆಚ್ಚು. ಹೀಗಿರುವಾಗ ಚಿತ್ರತಂಡಕ್ಕೆ ಸಿಕ್ಕಿರುವ ಸಂಭಾವನೆ ಎಷ್ಟು?

    ಮೂಲಗಳ ಪ್ರಕಾರ ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಹಾಗೂ ತಂತ್ರಜ್ಞರಿಗೆ ಒಳ್ಳೆಯ ಸಂಭಾವನೆಯೇ ಸಿಕ್ಕಿದೆ. ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ ಕಿಶೋರ್ ಅವರಿಗೆ 60 ಲಕ್ಷ ರೂ. ವಿಲನ್ ಪಾತ್ರಧಾರಿ ಅಚ್ಯುತ್ ಕುಮಾರ್ ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ. ನಾಯಕಿ ಸಪ್ತಮಿ ಗೌಡ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ. ನಟನೆ ಹಾಗೂ ನಿರ್ದೇಶನ ಎರಡನ್ನೂ ನಿಭಾಯಿಸಿದ ರಿಷಬ್ ಶೆಟ್ಟಿಯವರಿಗೆ 4 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಇದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿರೋ ಮಾಹಿತಿ.

    ಇತ್ತೀಚೆಗೆ ಚಿತ್ರದಲ್ಲಿ ರಾಂಪ ಪಾತ್ರಧಾರಿ ಕನ್ನಡದ ಟಿವಿ ಚಾನೆಲ್ಲೊಂದರಲ್ಲಿ ಮಾತನಾಡುತ್ತಾ, ಚಿತ್ರದ ಸಕ್ಸಸ್ ನಂತರ ಇಡೀ ಚಿತ್ರತಂಡದ ಎಲ್ಲ ತಂತ್ರಜ್ಞರಿಗೂ ಮತ್ತೊಮ್ಮೆ ಸಂಭಾವನೆ ನೀಡಲಾಯಿತು. ಗೌರವಿಸಲಾಯಿತು ಎಂಬ ಮಾಹಿತಿ ಹಂಚಿಕೊಂಡಿದ್ದರು. ಅಧಿಕೃತವಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಅವರಾಗಲೀ, ಕಾರ್ತಿಕ್ ಗೌಡ ಅವರಾಗಲೀ, ರಿಷಬ್ ಶೆಟ್ಟಿಯವರಾಗಲೀ ಅಧಿಕೃತವಾಗಿ ಹೇಳಿಲ್ಲ. ಆದರೆ ವಿಜಯ್ ಕಿರಗಂದೂರು ಯಶಸ್ಸನ್ನು ಹಂಚುವ ವ್ಯಕ್ತಿತ್ವ ನೋಡಿದವರಿಗೆ ಇದು ವಿಶೇಷವೆಂದು ಅನಿಸುವುದಿಲ್ಲ.

  • ಕಾಂತಾರ : ವರಾಹರೂಪಂ ಹಾಡು ಡಿಲೀಟ್

    ಕಾಂತಾರ : ವರಾಹರೂಪಂ ಹಾಡು ಡಿಲೀಟ್

    ಕಾಂತಾರದ ವಿಶ್ವರೂಪವನ್ನು ಜಗತ್ತಿಗೇ ಪರಿಚಯಿಸಿದ್ದು ಕಾಂತಾರದ ವರಾಹರೂಪಂ. ಆದರೆ ಸಿನಿಮಾ ಬಿಡುಗಡೆಯಾಗದ ಕೆಲವೇ ದಿನಗಳಲ್ಲಿ ವರಾಹರೂಪಂ ಹಾಡು ವೊರಿಜಿನಲ್ ಅಲ್ಲ, ಕಾಪಿ ಮಾಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಕೇರಳದ ತೈಕ್ಕುಡಂ ಬ್ರಿಡ್ಜ್ ತಂಡದವರು ಹಾಡಿನ ವಿರುದ್ಧ ಕಾಪಿ ರೈಟ್ ಉಲ್ಲಂಘನೆ ಕೇಸು ಹಾಕಿದ್ದರು. ತೈಕ್ಕುಡಂ ತಂಡದ ನವರಸಂ ಮ್ಯೂಸಿಕ್ ಆಲ್ಬಂನ ಯಥಾವತ್ ಕಾಪಿ ಈ ಹಾಡು ಎಂದು ದೂರಿದ್ದರು.

    ವರಾಹರೂಪಂ ಹಾಡು ನಮ್ಮದು. ನವರಸಂ ಮ್ಯೂಸಿಕ್‍ನ್ನು ಯಥಾವತ್ ಕಾಪಿ ಮಾಡಿ ವರಾಹರೂಪಂ ಹಾಡು ಸೃಷ್ಟಿಸಲಾಗಿದೆ. ನಮಗಿನ್ನೇನೂ ಬೇಡ, ಕ್ರೆಡಿಟ್ ಕೊಡಿ ಎಂದು ಕೇಳಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪರವಾಗಿಯೇ ನಿಂತಿದ್ದು ಕೋರ್ಟಿನಲ್ಲಿ ಗೆಲ್ಲುವುದಕ್ಕೆ ಹೋರಾಡುತ್ತಿದ್ದಾರೆ. ಇದರ ಮಧ್ಯೆಯೇ ಹಾಡು ಡಿಲೀಟ್ ಆಗಿದೆ.

    ಕೇರಳದ ಕೊಯಿಕ್ಕೋಡ್ ನ್ಯಾಯಾಲಯ ಹಾಡಿಗೆ ಸ್ಟೇ ಕೊಟ್ಟಿತ್ತು. ಈಗ ಆ ಹಾಡನ್ನು ಹೊಂಬಾಳೆ ಯೂಟ್ಯೂಬ್ ಚಾನೆಲ್ಲಿಂದ ಡಿಲೀಟ್ ಮಾಡಲಾಗಿದೆ.

    ಕೋರ್ಟ್ ಅದೇಶ ನೀಡಿದ 2 ವಾರಗಳ ನಂತರ ಹಾಡನ್ನು ಡಿಲೀಟ್ ಮಾಡಲಾಗಿದೆ. ಈಗಲೂ ಈ ಕ್ಷಣಕ್ಕೂ ಹೊಂಬಾಳೆ ತಂಡ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡು ತಮ್ಮ ವೊರಿಜಿನಲ್ ಸೃಷ್ಟಿಯೇ ಹೊರತು ಕದ್ದಿದ್ದಲ್ಲ ಎಂದು ವಾದಿಸುತ್ತಿದ್ದಾರೆ. ಇದುವರೆಗೆ ಈ ಹಾಡನ್ನು ಮೂರೂವರೆ ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು.

  • ಕಾಂತಾರ 2 ಆಯ್ತು..ಕಾಂತಾರ 1ಗೆ ಸಿದ್ಧರಾಗಿ

    ಕಾಂತಾರ 2 ಆಯ್ತು..ಕಾಂತಾರ 1ಗೆ ಸಿದ್ಧರಾಗಿ

    ಎಂಥ ಹೇಳ್ತಿರೂದು.. ನಾವ್ 2022ರಾಗ್ ನೋಡಿದ್ ಕಾಂತಾರ ಅಲ್ವಾ.. ಫಸ್ಟ್ ಬರೋದು ಫಸ್ಟ್ ಅಲ್ವಾ.. ಈಗ ಅದು ಹೇಗೆ ಂಆಡ್ತಾರೆ ಕಾಂತಾರ 1 ಚಿತ್ರವನ್ನ.. ಹಾಗಂತ ತಲೆ ಕೆಡಿಸಿಕೊಳ್ಳಬೇಡಿ. ಸುಮ್ನ ತಲೆ ಬೊಜ್ಜ ಆಗ್ತದ ಅಷ್ಟ.. ಕಾಂತಾರ ಚಿತ್ರದ ಇನ್ನೊಂದು ಪಾರ್ಟ್ ಬರೋದು ಪಕ್ಕಾ. ಆದರೆ ಅದು ಸೀಕ್ವೆಲ್ ಅಲ್ಲ, ಪ್ರೀಕ್ವೆಲ್. ಹೀಗಾಗಿ ನೀವು ನೋಡಿರೋದು ಕಾಂತಾರ 2. ಮುಂದೆ ಬರೋದು ಕಾಂತಾರ 1. ಇದನ್ನು ಖುದ್ದು ಹೇಳಿದ್ದು ಕಾಂತಾರ ಸೃಷ್ಟಿಕರ್ತ, ನಿರ್ದೇಶಕ ಮತ್ತು ನಾಯಕ ರಿಷಬ್ ಶೆಟ್ಟಿ.

    ಕಾಂತಾರ ಚಿತ್ರ ಈಗಾಗಲೇ ಭಾರತದಾದ್ಯಂತ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಆಸ್ಕರ್ ಅಂಗಳಕ್ಕೂ ಕಾಲಿಟ್ಟು ಬಂದಿದೆ. ಆಸ್ಕರ್ ಕಿರೀಟ ಸಿಕ್ಕದೇ ಹೋದರೂ .. ಜನಮನ್ನಣೆಗಂತೂ ಕಡಿಮೆ ಇಲ್ಲ. ಅತೀ ಹೆಚ್ಚು ಪ್ರೇಕ್ಷಕರು ಚಿತ್ರಂದಿರದಲ್ಲಿ ನೋಡಿದ ಸಿನಿಮಾ ಕಾಂತಾರ ಎಂಬ ದಾಖಲೆಯೂ ಅವರದ್ದೇ. ಒಟಿಟಿಯಲ್ಲಿ, ಟಿವಿಯಲ್ಲಿ ರೇಟಿಂಗ್ ದಾಖಲೆ ಬರೆದ ಕಾಂತಾರ ಚಿತ್ರದ ಇನ್ನೊಂದು ಭಾಗ ಮಾಡಬೇಕು ಎಂಬ ಡಿಮ್ಯಾಂಡ್ ಶುರುವಾಗಿದೆ. ಈಗಾಗಲೇ ಕಾಂತಾರ ಚಿತ್ರವನ್ನ ನೆಟ್`ಫ್ಲಿಕ್ಸ್‍ನವರು ಖರೀದಿ ಮಾಡಿದ್ದು, ಅವರು ಇಂಗ್ಲಿಷಿನಲ್ಲಿ ಕಾಂತಾರವನ್ನು ತರಲಿದ್ದಾರೆ. ಅಲ್ಲಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ತುಳುವಿನಲ್ಲಿ ಬಂದಿದ್ದ ಕಾಂತಾರ, ಇಂಗ್ಲಿಷಿನಲ್ಲೂ ರಿಲೀಸ್ ಆದರೆ 7 ಭಾಷೆಗಳಲ್ಲಿ ರಿಲೀಸ್ ಆದ ದಾಖಲೆ ಬರೆಯಲಿದೆ. ಚಿತ್ರ ಶತದಿನೋತ್ಸವ ಆಚರಿಸಿದ್ದ ಹಿನ್ನೆಲೆಯಲ್ಲಿ ಚಿತ್ರತಂಡ ಬೆಂಗಳೂರು ಭಂಟರ ಭವನದಲ್ಲಿ ಶತದಿನೋತ್ಸವ ಸಮಾರಂಭ ಆಯೋಜಿಸಿತ್ತು.

    ತುಳುನಾಡಿನ ಸಂಪ್ರದಾಯದಂತೆ ಅಲಂಕರಿಸಲ್ಪಟ್ಟಿದ್ದ ವೇದಿಕೆಯಲ್ಲಿ ಚಿತ್ರತಂಡದ ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ವಿತರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಸೇರಿದ್ದರು. ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ, ಇಡೀ ಚಿತ್ರತಂಡ ಒಟ್ಟಿಗೇ ಊಟ ಮಾಡಿ ಕಾಂತಾರ ಶತದಿನೋತ್ಸವವನ್ನು ಹಬ್ಬದಂತೆ ಸಂಭ್ರಮಿಸಿತು.

    ಈ ಚಿತ್ರದ ಯಶಸ್ಸಿಗೆ ನಾನೊಬ್ಬನೇ ಕಾರಣ ಅಲ್ಲ. ನಮ್ಮ ತಂಡ, ಕಲಾವಿದರು, ತಂತ್ರಜ್ಞರು, ಪ್ರಚಾರಕರ್ತರು, ಅಭಿಮಾನಿಗಳು, ಮಾಧ್ಯಮಗಳು, ಪ್ರೇಕ್ಷಕರು.. ಹೀಗೆ ಹಲವರ ಪಾತ್ರವಿದೆ. ಕುಂದಾಪುರದ ಕೆರಾಡಿಯಲ್ಲಿ ಹುಟ್ಟಿದ ಕಥೆಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗಲು ಕಾರಣವಾಗಿದ್ದು ಹೊಂಬಾಳೆ. ನೀವು ಇದುವರೆಗೆ ನೋಡಿದ್ದು ಕಾಂತಾರ 2. ಇನ್ನು ಮುಂದೆ ಬರುವುದು ಕಾಂತಾರ 1 ಎಂದ ರಿಷಬ್ ಶೆಟ್ಟಿ, ಮತ್ತೊಂದು ಕಾಂತಾರವನ್ನು ಅಧಿಕೃತವಾಗಿಯೇ ಘೋಷಿಸಿದರು.

    ಕಾಂತಾರ 300 ಕೇಂದ್ರಗಳಲ್ಲಿ 50 ದಿನ ಪೂರೈಸಿದ್ದರೆ, 250 ಚಿತ್ರಮಂದಿರಗಳಲ್ಲಿ 75 ದಿನ ಪೂರೈಸಿದೆ. 100 ದಿನ ಪೂರೈಸಿದ ಚಿತ್ರಮಂದಿರಗಳ ಸಂಖ್ಯೆ 100ಕ್ಕೂ ಹೆಚ್ಚು.

  • ಕಾಂತಾರ 2ಗೆ ದೈವದ ಅಪ್ಪಣೆ

    ಕಾಂತಾರ 2ಗೆ ದೈವದ ಅಪ್ಪಣೆ

    ರಿಷಬ್ ಶೆಟ್ಟಿ ಕಾಂತಾರ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಾಂತಾರ ನಂತರ ಮತ್ತೊಮ್ಮೆ ಕಾಂತಾರ. ಅಷ್ಟೆ. ರಿಷಬ್ ಶೆಟ್ಟಿ ಮತ್ತು ತಂಡ ಕಾಂತಾರ ಚಿತ್ರದ ಸೀಕ್ವೆಲ್ ಮಾಡಲು ನಿರ್ಧರಿಸಿದ್ದು, ಕಾಂತಾರ 2 ಸ್ಕ್ರಿಪ್ಟ್ ವರ್ಕ್ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ 2 ಬರುತ್ತಾ ಎನ್ನುವ ಪ್ರಶ್ನೆಯ ಜೊತೆಯಲ್ಲೇ ದೈವಗಳ ಕುರಿತು ಸಿನಿಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರು. ಹೀಗಾಗಿ ಕಾಂತಾರ 2 ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು. ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು. ದೈವ ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

    ಮಂಗಳೂರು ಹೊರವಲಯದಲ್ಲಿ ನಡೆದ  ಪಂಜುರ್ಲಿ ಕೋಲದಲ್ಲಿ ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.

    ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿನಿಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ಕಾಂತಾರ 2 ಸೆಟ್ಟೇರಲಿದೆ ಎನ್ನಲಾಗಿದೆ.

  • ಕಾಂತಾರ ಕರ್ನಾಟಕ ಯಾತ್ರೆ : ಇದು ನಮ್ಮ ಸಿನಿಮಾ

    ಕಾಂತಾರ ಕರ್ನಾಟಕ ಯಾತ್ರೆ : ಇದು ನಮ್ಮ ಸಿನಿಮಾ

    ಕಾಂತಾರ ಕರ್ನಾಟಕದ ಸಿನಿಮಾ ಪ್ರೇಮಿಗಳನ್ನೆಲ್ಲ ಬಡಿದೆಬ್ಬಿಸಿದೆ. ಲವ್, ರೌಡಿಸಂ, ಕಾಮಿಡಿ ಜಾನರ್ ಚಿತ್ರಗಳ ಮಧ್ಯೆ ಬಂದಿರೋ ಕಾಂತಾರ ಇದು ನಮ್ಮ ಸಿನಿಮಾ ಎಂಬ ಭಾವನೆ ಹುಟ್ಟಿಸಿದೆ. ಆ ಪ್ರೀತಿಯೇ ಹೊಸ ದಾಖಲೆ ಬರೆಯುವಂತೆ ಮಾಡುತ್ತಿದೆ. ಕಾಂತಾರ ಕನ್ನಡದ ಮಣ್ಣಿನ ಕಥೆ ಎನ್ನುವುದೇ ಚಿತ್ರದ ಒಂದು ಪ್ಲಸ್ ಪಾಯಿಂಟ್.

    ಹೊಂಬಾಳೆ ಫಿಲಮ್ಸ್ ಚಿತ್ರಕ್ಕೆ ಹಾಕಿದ ಬಜೆಟ್ ಸುಮಾರು 16 ಕೋಟಿ. ಚಿತ್ರದ ಆರಂಭದ ಎರಡು ದಿನಗಳಲ್ಲೇ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಿದೆ. ರಿಷಬ್ ಶೆಟ್ಟಿ ಹೀರೋ ಆಗಿ ಮತ್ತು ಡೈರೆಕ್ಟರ್ ಆಗಿ ಗೆದ್ದಿದ್ದಾರೆ. ರಿಷಬ್ ಮತ್ತು ಸಪ್ತಮಿ ತುಂಟಾಟಗಳು, ಕಿಶೋರ್ ಆರ್ಭಟ, ಅಚ್ಯುತ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಎಲ್ಲರದ್ದೂ ಅಮೋಘ ಅಭಿನಯ. ಅಜನೀಶ್ ಲೋಕನಾಥ್ ಸಂಗೀತ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತಿದೆ.

    ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ನೋಡುವುದನ್ನೇ ಬಿಟ್ಟಿದ್ದವರನ್ನೂ ಮತ್ತೆ ಚಿತ್ರಮಂದಿರಕ್ಕೆ ಕರೆತರುತ್ತಿರುವುದು ಕಾಂತಾರ ಹೆಗ್ಗಳಿಕೆ. ಕಾಂತಾರ ಈಗ ಹೊಂಬಾಳೆ ಅಥವಾ ರಿಷಬ್ ಶೆಟ್ಟಿ ಸಿನಿಮಾ ಅಲ್ಲ. ಇದು ನಮ್ಮ ಸಿನಿಮಾ ಎಂಬ ಭಾವನೆ ಮೂಡುವಂತೆ ಮಾಡಿದೆ. ಹೀಗಾಗಿಯೇ ಇನ್ನೊಂದು ವಾರ ಕಾಂತಾರ ಕರ್ನಾಟಕ ಯಾತ್ರೆ ಶುರು ಮಾಡುತ್ತಿದೆ. ನಿಮ್ಮ ಊರಿಗೂ ಬರ್ತಾರೆ..

  • ಕಾಂತಾರ ಕರ್ನಾಟಕದಲ್ಲಿ 1 ಕೋಟಿ ದಾಖಲೆ

    ಕಾಂತಾರ ಕರ್ನಾಟಕದಲ್ಲಿ 1 ಕೋಟಿ ದಾಖಲೆ

    ಕಾಂತಾರ ಚಿತ್ರ ಮತ್ತೊಂದು ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ನಿರೀಕ್ಷೆಗೂ ಮೀರಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. 6ನೇ ವಾರದಲ್ಲಿ ಮುನ್ನುಗ್ಗುತ್ತಿರುವ ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಕಾಂತಾರದ್ದು ದೈವೀಕ ಹಿಟ್. ಈಗ ಈ ಚಿತ್ರ ಕರ್ನಾಟಕದಲ್ಲಿ ಒಂದು ವಿಶೇಷ ದಾಖಲೆ ಬರೆದಿದೆ.

    ಕರ್ನಾಟಕದಲ್ಲಿ ಕಾಂತಾರ ನೋಡಿದವರ ಸಂಖ್ಯೆ 1 ಕೋಟಿ ದಾಟಿದೆ. ಇದು ಇದುವರೆಗೆ ಕಂಡು ಕೇಳಿಲ್ಲದ ದಾಖಲೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಕಾಂತಾರ 25 ದಿನದಲ್ಲಿ ಕೆಜಿಎಫ್ 2 ದಾಖಲೆ ಬ್ರೇಕ್ ಮಾಡಿತ್ತು. 77 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಅದು ಒಂದು ದಾಖಲೆ. ತನ್ನದೇ ದಾಖಲೆಯನ್ನು ಮುರಿಯುತ್ತಾ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಟಿಕೆಟ್ ಸೇಲ್ ಆಗಿರುವ ಸಂಖ್ಯೆ 1 ಕೋಟಿ ದಾಟಿದೆ. ಇದು ಕೇವಲ ಕರ್ನಾಟಕದ ಲೆಕ್ಕ.

    ಕಾಂತಾರದ ಪ್ರಮುಖ ಚಿತ್ರಮಂದಿರ ವೀರೇಶ್ ಸಿನಿಮಾಸ್‍ನಲ್ಲಿಯೇ 1.30 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೇಲ್ ಆಗಿವೆಯೆಂದರೆ ಅದು ಕಾಂತಾರ ಪವಾಡ. ತೆಲುಗು ಹಾಗೂ ಹಿಂದಿಯಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಕಾಂತಾರ ಹಿಂದಿಯಲ್ಲಿ ಆಗಲೇ 70 ಕೋಟಿ ಹತ್ತಿರದಲ್ಲಿದೆ. ಅಧಿಕೃತ ಅಥವಾ ಸೋರ್ಸ್ ಲೆಕ್ಕವೂ ಸಿಗದೇ ಇರುವುದು ತಮಿಳು ಹಾಗೂ ಮಲಯಾಳಂನಲ್ಲಿ ಮಾತ್ರ. ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಢಿದ ಮೊದಲ ಕನ್ನಡ ಸಿನಿಮಾ. ಹಾಗೆ ನೋಡಿದರೆ ಅತೀ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ ಕಾಂತಾರದ್ದು ನಿಜವಾದ ಯಶಸ್ಸು.

  • ಕಾಂತಾರ ಕ್ರೇಜ್ ಸ್ಟಾರ್ಟ್ : ತುಳುವಿನಲ್ಲೂ ರಿಲೀಸ್

    ಕಾಂತಾರ ಕ್ರೇಜ್ ಸ್ಟಾರ್ಟ್ : ತುಳುವಿನಲ್ಲೂ ರಿಲೀಸ್

    ರಿಷಬ್ ಶೆಟ್ಟಿ ಹೀರೋ ಮತ್ತು ನಿರ್ದೇಶಕ. ಹೊಂಬಾಳೆ ಬ್ಯಾನರ್‍ನ ಸಿನಿಮಾ.. ಇಷ್ಟಿದ್ದ ಮೇಲೆ ಕ್ರೇಜ್ ಶುರುವಾಗುತ್ತದೆಂದೇ ಲೆಕ್ಕ. ನಿರೀಕ್ಷೆ  ಸುಳ್ಳಾಗಿಲ್ಲ. ಬುಕ್ಕಿಂಗ್ ಶುರುವಾಗಿದ್ದೇ ತಡ.. ಪ್ರೇಕ್ಷಕರು ರೆಡಿಯಾಗುತ್ತಿದ್ದಾರೆ.

    ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿರೋ ಚಿತ್ರ ಕಾಂತಾರ. ಕಾಡು ಮತ್ತು ಮನುಷ್ಯರ ನಡುವಿನ ಹೊಡೆದಾಟದ ಕಥೆಯಲ್ಲಿ ಕರಾವಳಿಯ ಸಂಸ್ಕøತಿ ಇದೆ. ಸೊಗಡು ಇದೆ.

    ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿವೆ. ಬೆಂಗಳೂರು, ಮೈಸೂರು, ಮಂಗಳೂರು,  ಶಿವಮೊಗ್ಗ, ಉಡುಪಿ, ಕುಂದಾಪುರದಲ್ಲಿ ಪ್ರೀಮಿಯರ್ ಶೋಗಳಿವೆ. ವಿಶೇಷವೆಂದರೆ ಕೇರಳದ ಕಾಸರಗೋಡಿನಲ್ಲೂ ಪ್ರೀಮಿಯರ್ ಶೋ ಇರೋದು. ಚೆನ್ನೈ,  ಹೈದರಾಬಾದ್, ಕೊಚ್ಚಿಯಲ್ಲೂ ಪ್ರೀಮಿಯರ್ ಶೋಗಳಿವೆ.

    ಕನ್ನಡದ ಜೊತೆಗೆ ತುಳುವಿನಲ್ಲೂ ಬರುತ್ತಿರುವುದು ವಿಶೇಷ. ಸುಮಾರು ಸಿನಿಮಾ ರಿಲೀಸ್ ಆಗುವ ಥಿಯೇಟರ್, ಮಲ್ಟಿಪ್ಲೆಕ್ಸುಗಳ ಕಥೆ ಬಿಡಿ.. ಹೆದ್ದಾರಿಗಳಲ್ಲೂ 150ಕ್ಕೂ ಹೆಚ್ಚು ಕಟೌಟ್ ಹಾಕಲಾಗಿದೆ.

    ಚಿತ್ರದ ಹಾಡು, ಟ್ರೇಲರ್, ಮೇಕಿಂಗ್ ದೃಶ್ಯಗಳ ಕಂಟೆಂಟ್ ಬಿಟ್ಟಿದ್ದೇವೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದೆಲ್ಲವೂ ಈಗ ಟಿಕೆಟ್ಟುಗಳಾಗಿ ಬದಲಾಗಬೇಕಿದೆ ಎಂದಿದ್ದಾರೆ ರಿಷಬ್ ಶೆಟ್ಟಿ