` manvita kamath, - chitraloka.com | Kannada Movie News, Reviews | Image

manvita kamath,

  • ಟಗರು ಪುಟ್ಟಿ ಮಾನ್ವಿತಾ ಮಾಸ್ಟರ್ ಡಿಗ್ರಿ ಡಿಸ್ಟಿಂಕ್ಷನ್

    ಟಗರು ಪುಟ್ಟಿ ಮಾನ್ವಿತಾ ಮಾಸ್ಟರ್ ಡಿಗ್ರಿ ಡಿಸ್ಟಿಂಕ್ಷನ್

    ಕೆಂಡಸಂಪಿಗೆ ಮೂಲಕ ಬೆಳ್ಳಿತೆರೆಗೆ ಬಂದ ಮಾನ್ವಿತಾ ಕಾಮತ್ ಜರ್ನಲಿಸಂ ಪದವೀಧರೆ. ರೇಡಿಯೋ ಸೇರಿದಂತೆ ಕೆಲವೆಡೆ ಕೆಲಸ ಮಾಡಿಯೂ ಅನುಭವ ಇದ್ದ ಮಾನ್ವಿತಾ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದವರು. ಆದರೆ.. ಕೆಂಡಸಂಪಿಗೆ.. ನಂತರ ಟಗರು ಹಿಟ್ ಆದ ನಂತರ ಸಂಪೂರ್ಣ ಚಿತ್ರರಂಗದಲ್ಲೇ ಮುಳುಗಿದ್ದರು. ಇದರ ನಡುವೆ ಒಂದು ಆಸೆ ಹಾಗೆಯೇ ಉಳಿದುಕೊಂಡಿತ್ತು. ಅದು, ಮಾಸ್ಟರ್ ಡಿಗ್ರಿ ಕಂಪ್ಲೀಟ್ ಮಾಡುವ ಆಸೆ. ಆ ಆಸೆಯನ್ನೀಗ ಈಡೇರಿಸಿಕೊಂಡಿದ್ದಾರೆ ಮಾನ್ವಿತಾ.

    ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳೋದು.. ಮತ್ತು ನನ್ನ ಸೇವಿಂಗ್ಸ್ ಹಣದಲ್ಲೇ ಜೀವನ ಸಾಗಿಸೋದು.. ಜೊತೆಗೆ ಓದು. ಇವಿಷ್ಟೂ ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ, ನಾನೀಗ ಸಾಧಿಸಿದ್ದೇನೆ. ಮಾಸ್ಟರ್ ಡಿಗ್ರಿ ಡಿಸ್ಟಿಂಕ್ಷನ್‍ನಲ್ಲಿ ಆಗಿದೆ. ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ಇನ್ನು ಮುಂದೆ ಮತ್ತೆ ಸಿನಿಮಾ.. ಸಿನಿಮಾ.. ಸಿನಿಮಾ.. ಎಂದು ಬರೆದುಕೊಂಡಿದ್ದಾರೆ ಮಾನ್ವಿತಾ ಕಾಮತ್.

    ಸದ್ಯಕ್ಕೆ ಮಾನ್ವಿತಾ ಕಾಮತ್ ಅವರ ಶಿವ 143, ರಾಜಸ್ತಾನ್ ಡೈರೀಸ್ ಮತ್ತು ಹ್ಯಾಪಿ ಮ್ಯಾರೀಡ್ ಚಿತ್ರಗಳು ಸಿದ್ಧವಾಗಿವೆ. ಶಿವ 143 ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಮಾನ್ವಿತಾ. ಬಹುಶಃ ಶಿವ 143 ಮೊದಲ ರಿಲೀಸ್ ಆಗಬಹುದು.

  • ಪ್ರೇಮ್-ಮಾನ್ವಿತಾ ಚಿತ್ರಕ್ಕೆ ತಬಲಾ ನಾಣಿ ಪ್ರೊಡ್ಯೂಸರ್..!

    ಪ್ರೇಮ್-ಮಾನ್ವಿತಾ ಚಿತ್ರಕ್ಕೆ ತಬಲಾ ನಾಣಿ ಪ್ರೊಡ್ಯೂಸರ್..!

    ತಬಲಾ ನಾಣಿ ನಿರ್ಮಾಪಕರಾಗುತ್ತಿದ್ದಾರೆ. ನಿರ್ಮಾಣದ ಸಾಹಸದಲ್ಲಿ ತಬಲಾ ನಾಣಿ ಜೊತೆಗೆ ಅವರ ಸ್ನೇಹಿತರೂ ಕೈಜೋಡಿಸಿದ್ದಾರೆ. ಹೀರೋ ಆಗಿರೋದು ಪ್ರೇಮ್. ನಾಯಕಿ ಮಾನ್ವಿತಾ ಕಾಮತ್. ಡೈರೆಕ್ಟರ್ ಅಥರ್ವ್ ಆರ್ಯ. ಜೂಜಾಟ, ಗುಬ್ಬಚ್ಚಿ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇದೆ.

    ಇದು ತಂದೆ ಮಗಳ ಸಂಬಂಧ ಸಾರುವ ಕಥೆ. ತಂದೆಯೊಬ್ಬ ಕುಟುಂಬದಲ್ಲಿ ಮಹತ್ವ ಕಳೆದುಕೊಂಡಾಗ, ಪ್ರೀತಿಯಿಂದ, ಆರೈಕೆಯಿಂದ ವಂಚಿತನಾದಾಗ ಅನುಭವಿಸುವ ನೋವು ಹೇಗಿರುತ್ತೆ ಅನ್ನೋದೇ ಕಥೆ. ಇಲ್ಲಿ ಮಾನ್ವಿತಾಗೆ ತಬಲಾ ನಾಣಿ ತಂದೆ. ಸಂಜಯ್, ಜೀವಿತಾ, ರಂಗಿತರಂಗ ಖ್ಯಾತಿಯ ಅರವಿಂದ್, ವಿಜಯ್ ಚೆಂಡೂರ್, ಮಿಮಿಕ್ರಿ ಗೋಪಿ, ಅರುಣ್ ಬಾಲರಾಜ್, ಬಲರಾಜ್ವಾಡಿ, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಮೊದಲಾದವರು ನಟಿಸುತ್ತಿದ್ದಾರೆ. ಸಿನಿಮಾಗಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.

    ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪ್ರೇಮ್ ಮಾನ್ವಿತಾ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆ ಮಗಳ ಕಥೆಯಲ್ಲಿ ಹೀರೋ ಪಾತ್ರವೇನು ಎಂಬ ಕುತೂಹಲವಂತೂ ಖಂಡಿತಾ ಇದೆ.

  • ಶಿವನಿಗೆ ಬಹುಪರಾಕ್ ಎಂದ ಶಿವಣ್ಣ

    ಶಿವನಿಗೆ ಬಹುಪರಾಕ್ ಎಂದ ಶಿವಣ್ಣ

    ಶಿವರಾಜಕುಮಾರ್ ಮತ್ತು ಗೀತಾ ದಂಪತಿ ಶಿವ 143 ಚಿತ್ರ ನೋಡಿ ಫಿದಾ ಆಗಿದ್ದಾರೆ. ರಾಜ್ಯಾದ್ಯಂತ ಯಶಶ್ವಿ ಪ್ರದರ್ಶನ ಕಾಣುತ್ತಿರೋ ಚಿತ್ರಕ್ಕೆ ಕೆಜಿ ರಸ್ತೆಯಲ್ಲಿರೋ ಸಂತೋಷ್ ಮುಖ್ಯ ಚಿತ್ರಮಂದಿರ. ಅಲ್ಲಿಯೇ ಶಿವ 143 ಚಿತ್ರವನ್ನು ಅಭಿಮಾನಿಗಳ ಜೊತೆ ವೀಕ್ಷಿಸಿದರು ಶಿವಣ್ಣ ಮತ್ತು ಗೀತಾ.

    ಚಿತ್ರದಲ್ಲಿ ಹೀರೋನನ್ನು ದಾರಿ ತಪ್ಪಿದ ಮಗ ಎಂಬಂತೆ ತೋರಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ಮೊದಲು ಇಟ್ಟಿದ್ದ ಟೈಟಲ್ಲೇ ಅದು. ದಾರಿ ತಪ್ಪಿದ ಮಗ. ಅಲ್ಲದೆ ನಾಯಕಿಯ ಪಾತ್ರದ ಹೆಸರು ಮಧು. ಅದು ಓಂ ಚಿತ್ರದ ನಾಯಕಿಯ ಹೆಸರು. ಆ ಎರಡನ್ನೂ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪ್ಪಾಜಿಯವರ ದಾರಿ ತಪ್ಪಿದ ಮಗನಿಂದ ಶುರುವಾಗಿ ಓಂವರೆಗೆ ಲಿಂಕ್ ಮಾಡಿರುವುದು ಚೆನ್ನಾಗಿದೆ ಎಂದಿದ್ದಾರೆ ಶಿವಣ್ಣ.

    ಧಿರೇನ್ ಜ್ಯೂನಿಯರ್ ಶಿವಣ್ಣ ಆಗೋದು ಬೇಡ. ಅವನೂ ಸಿನಿಮಾದಲ್ಲಿ ಯಾರನ್ನೂ ಇಮಿಟೇಟ್ ಮಾಡಿಲ್ಲ. ಚೆನ್ನಾಗಿ ನಟಿಸಿದ್ದಾನೆ. ಅವನು ಧಿರೇನ್ ಆಗಿಯೇ ಜನಪ್ರಿಯನಾಗಲಿ ಎಂದು ಹಾರೈಸಿದ್ದಾರೆ ಶಿವಣ್ಣ. ಕ್ಲೈಮಾಕ್ಸ್‍ನಲ್ಲಿ ಒಂದೊಳ್ಳೆ ಸಂದೇಶವೂ ಇದೆ. ಅದು ಇಷ್ಟವಾಯಿತು ಎಂದಿದ್ದಾರೆ ಶಿವಣ್ಣ.