ಬನಾರಸ್ ಮೂಲಕ ಹೀರೋ ಆಗುತ್ತಿರುವ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ದೇವಾಲಯ, ದರ್ಗಾ, ಚರ್ಚ್ಗಳಿಗೆ ಭೇಟಿ ನೀಡಿರುವುದು ವಿಶೇಷ. ಕೋಲಾರಕ್ಕೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಝೈದ್ ಖಾನ್, ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ದರ್ಗಾ ಹಾಗೂ ಚರ್ಚ್ಗೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಕೋಲಾರದ ಹೊರವಲಯದ ಕೊಂಡರಾಜನಹಳ್ಳಿ ಗೇಟ್ನ ದರ್ಗಾ ಬಳಿ ನಟ ಝೈದ್ ಖಾಖ್ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮಳೆಯಲ್ಲೇ ಕೋಲಾರ ನಗರದ ಹಲವು ಕಡೆ ಬೈಕ್ ರ್ಯಾಲಿ ಮೂಲಕ ಝೈದ್ ಖಾನ್ ರೌಂಡ್ಸ್ ಹಾಕಿದರು. ಮೊದಲಿಗೆ ಕ್ಲಾಕ್ ಟವರ್ ಬಳಿಯ ದರ್ಗಾಗೆ ನಟ ಝೈದ್ ಖಾನ್ ಭೇಟಿ ನೀಡಿದರು. ನಂತರ ಕೋಲಾರ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕೊನೆಯದಾಗಿ ಕೋಲಾರ ನಗರದ ಮಹಿಳಾ ಸಮಾಜ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬನಾರಸ್ ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾದರು.
ಬನಾರಸ್ ಚಿತ್ರದಲ್ಲಿ ಹಾಸ್ಯ, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನ ಥಿಯೇಟರಿನಲ್ಲೇ ನೋಡಿ. ಹಾರೈಸಿ ಎಂದು ಝೈದ್ ಖಾನ್ ಮನವಿ ಮಾಡಿದರು. ಝೈದ್ ಖಾನ್ ಜೊತೆ ಕಾಂಗ್ರೆಸ್ ಮುಖಂಡರಾದ ಗೌಸಿ, ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಾವೀದ್ ಸಚಿನ್, ಮೈನಾರಿಟಿ ಯೂಥ್ ಪ್ರೆಸಿಡೆಂಟ್ ಮೊಹಮ್ಮದ್ ನೂರ್, ಯೂಥ್ ಕಾಂಗ್ರೆಸ್ನ ಸಾಧಿಕ್ ಪಾಷಾ, ಮುಖಂಡರಾದ ಮುಸ್ತಫಾ, ಆಫ್ರಿದ್, ಭರತ್ ರಾಯ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಸೈಯದ್ ಗೋರು ಮಹಿಳಾ ಸಮಾಜ ಪ್ರಾಂಶುಪಾಲ ಮಂಜುನಾಥ್, ಮುಫೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬನಾರಸ್ ಝೈದ್ ಖಾನ್ ನಟನೆಯ ಮೊದಲ ಚಿತ್ರ. ಸೋನಲ್ ಮಂಥೆರೋ ನಾಯಕಿ. ಜಯತೀರ್ಥ ನಿರ್ದೇಶನದ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.