` zee studios, - chitraloka.com | Kannada Movie News, Reviews | Image

zee studios,

  • ಗೀತಾ ಶಿವ ರಾಜಕುಮಾರ್ ಹುಟ್ಟುಹಬ್ಬಕ್ಕೊಂದು ಶುಭ ವೇದ ಸುದ್ದಿ

    ಗೀತಾ ಶಿವ ರಾಜಕುಮಾರ್ ಹುಟ್ಟುಹಬ್ಬಕ್ಕೊಂದು ಶುಭ ವೇದ ಸುದ್ದಿ

    ಝೀ ಸ್ಟುಡಿಯೋದವರು ಒಂದು ಟ್ವೀಟ್ ಮಾಡಿದ್ರು. ಡೋಂಟ್ ಫಿಯರ್.. ಡೋಂಟ್ ಫರ್ಗಿವ್. ಹೆದರಬೇಡ.. ಕ್ಷಮಿಸಬೇಡ.. ಅನ್ನೋದಷ್ಟೇ ಅದರ ಅರ್ಥ. ಗುರುವಾರ ರಾತ್ರಿ 8ಕ್ಕೆ ಬ್ರೇಕ್ ಮಾಡಲಿದ್ದೇವೆ ಎಂದಿದ್ದೇ ತಡ.. ಗಾಂಧಿನಗರ ಮತ್ತು ಪ್ರೇಕ್ಷಕರು ಚುರುಕಾಗಿ ಹೋದರು. ಕೆಲವೇ ಗಂಟೆಗಳಲ್ಲಿ ಸುದ್ದಿ ಬ್ರೇಕ್ ಆಗಿತ್ತು.

    ಗೀತಾ ಸ್ಟುಡಿಯೋಸ್ ಮೂಲಕ ಶಿವಣ್ಣ ಮೊದಲ ಬಾರಿಗೆ ನಿರ್ಮಾಪಕರಾಗಿರೋ ಸಿನಿಮಾ. ಶಿವಣ್ಣ ಅಭಿನಯದ 125ನೇ ಸಿನಿಮಾದ ಬ್ರೇಕಿಂಗ್ ನ್ಯೂಸ್ ಇದು. ವೇದ ಈಗ ಝೀ ಸ್ಟುಡಿಯೋಸ್ ಮಡಿಲಿಗೆ ಹೋಗಿದೆ.

    ಎ. ಹರ್ಷ ನಿರ್ದೇಶನದ ಚಿತ್ರವಿದು. ಶಿವಣ್ಣ ಜೊತೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ನಿರ್ದೇಶನ ಮಾಡಿ ಮೂರೂ ಚಿತ್ರಗಳಲ್ಲಿ ಗೆದ್ದಿರುವ ಹರ್ಷ ಈಗನ ಅವರ 4ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆಯೊಂದನ್ನು ಹೆಣೆದಿದ್ದಾರೆ ಹರ್ಷ. ಭರ್ಜರಿ ಸ್ಟುಡಿಯೋ ಸೆಟ್ ಹಾಕಿರುವ ಹರ್ಷ, ಚಿತ್ರದ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಎಲ್ಲವೂ ಸಸ್ಪೆನ್ಸ್. ಈಗಲೂ ಅಷ್ಟೆ, ಇಡೀ ಚಿತ್ರತಂಡ ಸೀಕ್ರೆಟ್ ಆಗಿಟ್ಟುಕೊಂಡಿದ್ದರೆ ಹೇಗೋ ಒಂದು ಸೀಕ್ರೆಟ್ ಹೊರಬಿದ್ದಿದೆ. ಅಧಿಕೃತವಾಗೋದು ರಾತ್ರಿ 8 ಗಂಟೆಗೆ. ಅಂದಹಾಗೆ ಇವತ್ತು ಗೀತಾ ಶಿವರಾಜಕುಮಾರ್ ಹುಟ್ಟುಹಬ್ಬ.

  • ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

    ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

    ವೇದ. ಗೀತಾ ನಿರ್ಮಾಪಕರಾಗಿರುವ ಮೊದಲ ಹಾಗೂ ಶಿವಣ್ಣ ಅವರ 125ನೇ ಸಿನಿಮಾ. ಸಿನಿಮಾ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೆ ರಾಜ್ ಅವರ ಕುಟುಂಬವೇ ಬಂದಿತ್ತು. ಅನಂತನಾಗ್, ಅನಿಲ್ ಕುಂಬ್ಳೆ, ದುನಿಯಾ ವಿಜಯ್ ಕೂಡಾ ಇದ್ದರು. ಬ್ಯಾನರ್ ಲಾಂಚ್ ಮಾಡಿದವರೆಲ್ಲ ಗೀತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

    ಅನಂತ್ ನಾಗ್ : ರಾಜ್ ಯಾರಿಗೂ ಏನೂ ಹೇಳ್ತಾ ಇರಲಿಲ್ಲ. ತಮ್ಮ ನಡವಳಿಕೆ, ಅಭಿನಯದಲ್ಲೇ ಎಲ್ಲವನ್ನೂ ಕಲಿಸಿಕೊಟ್ಟರು. ಅವರೊಂದಿಗೆ ಒಂದು ಸೃಜನಶೀಲ ತಂಡವೇ ಇತ್ತು. ಸಮಾಜಕ್ಕೆ ಧೈರ್ಯ ಹೇಳೋ ಸಿನಿಮಾ ಮಾಡ್ತಿದ್ರು. ಶಿವರಾಜಕುಮಾರ್ ಕೂಡಾ ಆ ಹಾದಿಯಲ್ಲೆ ಸಾಗಲಿ.

    ಅನಿಲ್ ಕುಂಬ್ಳೆ : ಶಿವರಾಜಕುಮಾರ್ ಅವರನ್ನ ಒಳ್ಳೆ ಟೆಸ್ಟ್ ಪ್ಲೇಯರ್ ಅಂತಾ ಹೇಳಬಹುದು. ಶಿವಣ್ಣ, ಅಪ್ಪು ನಮ್ಮನ್ನೆಲ್ಲ ಮಾತನಾಡಿಸೋಕೆ ಸ್ಟೇಡಿಯಂಗೆ ಬರ್ತಾ ಇದ್ರು. ಒಂದ್ಸಲ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆಗಿದ್ದಾಗ, ನಾವು ಅಣ್ಣಾವ್ರ ಮನೆಗೆ ಹೋಗಿ ಎರಡು ಗಂಟೆ ಮಾತನಾಡಿಕೊಂಡು ಬಂದಿದ್ವಿ. ಈಗ ಗೀತಾ ಸಿನಿಮಾ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

    ಶಿವರಾಜಕುಮಾರ್ : ನನ್ನ ಸಕ್ಸಸ್‍ಗೆ ಕಾರಣ ನನ್ನ ಕುಟುಂಬ.

    ಗೀತಾ ಶಿವರಾಜಕುಮಾರ್ : ಅವರು.. ಅವರ ಹಿಂದಿನ ಸಕ್ಸಸ್ ಶಕ್ತಿ ನಾನು ಅಂತಾರೆ. ನಾನಲ್ಲ. ಅದು ಅಪ್ಪಾಜಿ. ಅಮ್ಮ, ರಾಘು, ಅಪ್ಪು, ಅವರ ತಂಗಿಯರು. ಅಭಿಮಾನಿ ದೇವರುಗಳು. ಈಗ ವೇದ ಸಿನಿಮಾ ಬರ್ತಿದೆ. ಅದು ನಿಮ್ಮದು.

    ಕಾರ್ಯಕ್ರಮದ ಕೊನೆಯಲ್ಲಿ ಇಡೀ ಕುಟುಂಬವನ್ನು ವೇದಿಕೆಗೆ ಕರೆದು ತಂದರು ಶಿವಣ್ಣ. ಅಶ್ವಿನಿ ಪುನೀತ್ ಮತ್ತು ಅವರ ಮಕ್ಕಳನ್ನು ತಮ್ಮ ಅಕ್ಕಪಕ್ಕ ಕೂರಿಸಿಕೊಂಡು ಫ್ಯಾಮಿಲಿ ಫೋಟೋ ತೆಗೆಸಿಕೊಂಡ ಕ್ಷಣ ಭಾವುಕರನ್ನಾಗಿಸಿದ್ದು ನಿಜ.