` turthu nirgamana, - chitraloka.com | Kannada Movie News, Reviews | Image

turthu nirgamana,

  • 12 ವರ್ಷದ ಬಳಿಕ ತುರ್ತು ಆಗಮನ : ಸುನಿಲ್ ರಾವ್ ಅನುಭವ

    12 ವರ್ಷದ ಬಳಿಕ ತುರ್ತು ಆಗಮನ : ಸುನಿಲ್ ರಾವ್ ಅನುಭವ

    ಬಹುಶಃ ಪ್ರೇಮಿಸಂ ಚಿತ್ರ ಇರಬೇಕು. 2010ರಲ್ಲಿ ರಿಲೀಸ್ ಆಗಿದ್ದ ಚಿತ್ರವದು. ಅದೂ ಕೂಡಾ ಸುನಿಲ್ ರಾವ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದ ಸಿನಿಮಾ. ಬಾಲನಟನಾಗಿ ಚಿತ್ರರಂಗಕ್ಕೆ ಬಂದು, ಸೀರಿಯಲ್, ಸಿನಿಮಾಗಳಲ್ಲಿ ನಟಿಸಿ ಗೆದ್ದು, ಗಾಯಕರಾಗಿಯೂ ಹೆಸರು ಮಾಡಿ.. ಎಕ್ಸ್‍ಕ್ಯೂಸ್ ಮಿ ನಂತರ ಸ್ಟಾರ್ ಆಗಿದ್ದ ಸುನಿಲ್ ರಾವ್ ದಿಢೀರನೆ ನಾಪತ್ತೆಯಾಗಿಬಿಟ್ಟರು. ಮತ್ತೆ ಬಂದಿರೋದು ತುರ್ತು ನಿರ್ಗಮನ ಚಿತ್ರದ ಮೂಲಕ.

    ಹಾಗೇನಿಲ್ಲ. ಸ್ವಲ್ಪ ಗ್ಯಾಪ್ ತೆಗೆದುಕೊಳ್ಳೋಣ ಎಂದುಕೊಂಡೆ. ಅದು ಐದಾರು ವರ್ಷವಾಗಿ.. 12 ವರ್ಷವೇ ಕಳೆದುಹೋಯ್ತು. ಇದರ ಮಧ್ಯೆ ಲೂಸ್ ಕನೆಕ್ಷನ್ ಅನ್ನೋ ವೆಬ್ ಸಿರೀಸ್ ಮೂಲಕ ನಟಿಸಿದೆ. ಈಗ ತುರ್ತು ನಿರ್ಗಮನ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದೇನೆ ಎನ್ನುತ್ತಾರೆ ಸುನಿಲ್ ರಾವ್.

    ಈ 12 ವರ್ಷಗಳಲ್ಲಿ ಚಿತ್ರರಂಗವೂ ಸಾಕಷ್ಟು ಬದಲಾಗಿದೆ. ಮೊದಲೆಲ್ಲ ಹೆಚ್ಚು ಟೇಕ್ ತೆಗೆದುಕೊಂಡರೆ ರೀಲ್ ವೇಸ್ಟ್ ಆಗುತ್ತೆ ಅನ್ನೋ ಭಯವಿತ್ತು. ಈಗ ಆ ಭಯ ಇಲ್ಲ. ಟೆಕ್ನಾಲಜಿ ಅಪ್‍ಡೇಟ್ ಆಗಿದೆ. ಈಗ ಹೆಚ್ಚು ಹೆಚ್ಚು ಪ್ಯಾಷನ್ ಇರೋವ್ರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಮ್ಮ ಹೇಮಂತ್ ಕುಮಾರ್ ಕೂಡಾ ಅಂತಹವರಲ್ಲಿ ಒಬ್ಬರು ಎನ್ನುತ್ತಾರೆ ಸುನಿಲ್ ರಾವ್.

    ಅಂದಹಾಗೆ ಇವತ್ತು ತುರ್ತು ನಿರ್ಗಮನ ಚಿತ್ರದ ಪ್ರೀಮಿಯರ್ ಶೋ ಇದೆ. ರಿಲೀಸ್ ಆಗುವುದಕ್ಕೂ ಮೊದಲೇ ಪತ್ರಕರ್ತರಿಗೂ ಸಿನಿಮಾ ತೋರಿಸುವ ಸಾಹಸ ಮಾಡುತ್ತಿದ್ದಾರೆ ಹೇಮಂತ್ ಕುಮಾರ್. ಕಾನ್ಫಿಡೆನ್ಸ್ ಅಂದ್ರೆ ಅದು.

  • ಏಕ್.. ದೋ.. ತೀನ್.. ಚಾರ್.. 4 ಸಿನಿಮಾ ಧನ್‍ಧನಾಧನ್

    ಏಕ್.. ದೋ.. ತೀನ್.. ಚಾರ್.. 4 ಸಿನಿಮಾ ಧನ್‍ಧನಾಧನ್

    ಈ ವಾರ 4 ಸಿನಿಮಾ ಸಖತ್ ಸೌಂಡ್ ಮಾಡುತ್ತಿವೆ. ಒಂದೊಂದು ಚಿತ್ರವೂ ಒಂದೊಂದು ರೀತಿಯಲ್ಲಿ. ಕಾನ್ಸೆಪ್ಟ್ ಬೇರೆ.. ಡೈರೆಕ್ಟರ್ ಬೇರೆ.. ಕಥೆಯ ಆತ್ಮವೇ ಬೇರೆ..

    ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಸಿನಿಮಾ. ಹಾಗಂತ ಈ ಚಿತ್ರಕ್ಕೆ ಅವರು ಡೈರೆಕ್ಟರ್ ಅಲ್ಲ, ಹೀರೋ ಮಾತ್ರ. ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ಎಂಬ ಇಬ್ಬರು ಹೊಸಬರಿಗೆ ಡೈರೆಕ್ಟರ್ ಕ್ಯಾಪ್ ತೊಡಿಸಿದ್ದಾರೆ. ವಿಡಂಬನೆ ಮತ್ತು ಹಾಸ್ಯದ ಟ್ರ್ಯಾಕ್‍ನಲ್ಲೇ ಸಾಗುವ ಕಥೆಯಲ್ಲಿ ರಿಷಬ್ ಎದುರು ರಚನಾ ಇಂದರ್ ಮತ್ತು ತಪಸ್ವಿನಿ ಪೂಣಚ್ಚ ಹೀರೋಯಿನ್ಸ್. ಹೊನ್ನವಳ್ಳಿ ಕೃಷ್ಣ ಮತ್ತು ಪ್ರಮೋದ್ ಶೆಟ್ಟಿ ಇನ್ನೆರಡು ಪ್ರಧಾನ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಹಾಡುಗಳು ಸಖತ್ ಹಿಟ್ ಆಗಿವೆ.

    ತುರ್ತು ನಿರ್ಗಮನ : ಒಬ್ಬ ವ್ಯಕ್ತಿ ಸಡನ್ ಆಗಿ ಸಾಯುತ್ತಾನೆ. ಸತ್ತ ಮೇಲೆ ಅವನಿಗೆ ಮತ್ತೆ ಬದುಕುವ ಆದರೆ ಮೂರೇ ಮೂರು ದಿನ ಮಾತ್ರ ಬದುಕುವ ಅವಕಾಶ ಸಿಗುತ್ತದೆ. ಆಗ ಆತ ಏನು ಮಾಡಬಹುದು? ಒಂದು ವಿಭಿನ್ನ ಕಥೆಯನ್ನು ಅಷ್ಟೇ ವಿಭಿನ್ನವಾಗಿ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಳ್ಳದೆ, ಔಟ್ ಆಫ್ ದಿ ಬಾಕ್ಸ್ ಶೈಲಿಯಲ್ಲಿ ಹೇಳಿರೋದು ಹೇಮಂತ್ ಕುಮಾರ್. ರಾಜ್ ಬಿ.ಶೆಟ್ಟಿ, ಸುನಿಲ್, ಸುಧಾರಾಣಿ.. ಹೀಗೆ ಪ್ರತಿಭಾವಂತರ ದಂಡೇ ಚಿತ್ರದಲ್ಲಿದೆ.

    ತ್ರಿವಿಕ್ರಮ : ಹೀರೋಯಿನ್ ಹೆಸರು ತ್ರಿಷಾ. ಹೀರೋ ವಿಕ್ರಂ. ಅವರಿಬ್ಬರ ಹೆಸರು ಕೂಡಿದಾಗ ಸೃಷ್ಟಿಯಾದ ಕಥೆಯೇ ತ್ರಿವಿಕ್ರಮ. ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅವರ ಮೊದಲ ಚಿತ್ರ. ಮಿಡ್ಲ್ ಕ್ಲಾಸ್ ಹುಡುಗನ ಲವ್ ಸ್ಟೋರಿ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾಗೆ ರಾಮ್ಕೋ ಸೋಮಣ್ಣ ಪ್ರೊಡ್ಯೂಸರ್. ರವಿಚಂದ್ರನ್ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ದೊಡ್ಡದಾಗಿದೆ.

    ಬಡ್ಡೀಸ್ : ಇದು ಕಾಲೇಜ್ ಸ್ಟೂಡೆಂಟ್ಸ್ ಲೈಫ್ ಸ್ಟೋರಿ. ಯೂಥ್‍ಫುಲ್ ಕಥೆ. ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಗುರುತೇಜ ಶೆಟ್ಟಿ ನಿರ್ದೇಶನದ ಸಿನಿಮಾ ವಿಶೇಷ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  • ಕ್ಯಾಬ್ ಡ್ರೈವರ್ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ

    ಕ್ಯಾಬ್ ಡ್ರೈವರ್ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ

    ಒಂದು ಮೊಟ್ಟೆಯ ಕಥೆ ನಂತರ ಹಲವು ಚಿತ್ರಗಳಲ್ಲಿ ಕಾಮಿಡಿ ಹಾಗೂ ಸಾಫ್ಟ್ ರೋಲ್‍ಗಳಲ್ಲಿ ನಟಿಸಿದ್ದ ರಾಜ್ ಬಿ.ಶೆಟ್ಟಿ, ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಸೈಕೋ ರೀತಿ ನಟಿಸಿ ಗೆದ್ದಿದ್ದರು. ಪ್ರೇಕ್ಷಕರಿಗೂ ಒಂದು ರೀತಿ ಭಯ ಹುಟ್ಟಿಸಿದ್ದ ರಾಜ್ ಬಿ.ಶೆಟ್ಟಿ ಈಗ ಸೀರಿಯಸ್ ಆಗಿ ಕ್ಯಾಬ್ ಡ್ರೈವರ್ ಆಗಿದ್ದಾರೆ. ತುರ್ತು ನಿರ್ಗಮನ ಚಿತ್ರದಲ್ಲಿ.

    ಒಂದು ಮೊಟ್ಟೆಯ ಕಥೆ ಮುಗಿದಾಗ ಈ ಚಿತ್ರದ ಆಫರ್ ಬಂದಿತ್ತು. ಆಗ ಎಲ್ಲರೂ ನನಗೆ ಕಾಮಿಡಿ ರೋಲ್‍ಗಳನ್ನೇ ಕೊಡುತ್ತಿದ್ದರು. ಹೀಗಾಗಿ ಈ ಸೀರಿಯಸ್ ಕ್ಯಾರೆಕ್ಟರ್ ಇಷ್ಟವಾಯಿತು. ಚಿತ್ರದಲ್ಲಿ ನನ್ನದು ಕ್ಯಾಬ್ ಡ್ರೈವರ್ ಪಾತ್ರ. ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡಿಕೊಂಡು.. ಇನ್ಯಾಕೆ ಬದುಕಬೇಕು ಎಂಬ ಚಿಂತೆಯಲ್ಲಿರೋ ಪಾತ್ರ ನನ್ನದು ಎಂದಿದ್ದಾರೆ ರಾಜ್ ಬಿ.ಶೆಟ್ಟಿ.

    ಸಾವನ್ನು ಪ್ರೀತಿಸುವವನು ಬದುಕನ್ನೂ ಪ್ರೀತಿಸುತ್ತಾನೆ ಎಂಬ ಸಂದೇಶವಿರೋ ಚಿತ್ರದಲ್ಲಿ ನಿರ್ದೇಶಕ ಹೇಮಂತ್ ಚೆನ್ನಾಗಿ ಕಥೆ ಹೇಳಿದ್ದಾರೆ. ವಿಕ್ರಂ ಹಾಗೂ ನನ್ನ ಪಾತ್ರದ ಮೂಲಕ ಕಥೆ ಸಾಗುತ್ತದೆ. ವಿಕ್ರಂ ಪಾತ್ರದಲ್ಲಿ ಸುನಿಲ್ ರಾವ್ ಇದ್ದಾರೆ ಎಂದಿದ್ದಾರೆ ರಾಜ್ ಬಿ.ಶೆಟ್ಟಿ.

    ಎಕ್ಸ್‍ಕ್ಯೂಸ್ ಮಿ ಸುನಿಲ್ ರಾವ್ ಸುದೀರ್ಘ ಗ್ಯಾಪ್ ನಂತರ ಈ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ. ಸುಧಾರಾಣಿ ಅವರಂತೂ ಈ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹಿಂದೆಂದೂ ಇಲ್ಲದಷ್ಟು ಎಕ್ಸೈಟ್ ಆಗಿದ್ದಾರೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. 

  • ತುರ್ತು ನಿರ್ಗಮನ : ಮಾಮೂಲಿ ಸಿನಿಮಾ ಖಂಡಿತಾ ಅಲ್ಲ..!

    ತುರ್ತು ನಿರ್ಗಮನ : ಮಾಮೂಲಿ ಸಿನಿಮಾ ಖಂಡಿತಾ ಅಲ್ಲ..!

    ಬಹುಶಃ ಸುಧಾರಾಣಿ ಇಷ್ಟೊಂದು ಎಕ್ಸೈಟ್ ಆಗಿ ಒಂದು ಸಿನಿಮಾದ ಬಗ್ಗೆ.. ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು ಅವರ 3 ದಶಕಗಳ ಹಿಸ್ಟರಿಯಲ್ಲಿ ಇದೇ ಮೊದಲಿರಬೇಕು. ಸುನಿಲ್ ರಾವ್ ಅವರಿಗೆ ಒಂದು ದೊಡ್ಡ ಗ್ಯಾಪ್ ನಂತರ ಮತ್ತೊಮ್ಮೆ ತೆರೆ ಮೇಲೆ ಬರುವ ಚಾನ್ಸ್ ಸಿಕ್ಕಿದೆ. ರಾಜ್ ಬಿ.ಶೆಟ್ಟಿ ಇದ್ದಾರೆ. ಚಿತ್ರದ ಮೇಕಿಂಗ್, ಟ್ರೇಲರ್ ನೋಡಿದವರಿಗೆ ಥಟ್ಟನೆ ಅನ್ನಿಸೋದು ಒಂದೇ.. ಇದು ಮಾಮೂಲಿ ಸಿನಿಮಾ ಅಲ್ವೇ ಅಲ್ಲ. ಹೇಮಂತ್ ಕುಮಾರ್ ವಿಭಿನ್ನತೆಯನ್ನೆಲ್ಲ ಚಿತ್ರದ ಕಾನ್ಸೆಪ್ಟ್‍ನಲ್ಲಿ ತುಂಬಿ ತರುತ್ತಿದ್ದಾರೆ.

    ಸತ್ತವನಿಗೆ ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕರೆ.. ಅದೂ ಸ್ವಲ್ಪವೇ ಸ್ವಲ್ಪ ಕಾಲ.. ಆದರೆ ಅವನಿಗೆ ಮತ್ತೊಮ್ಮೆ ಇಡೀ ಲೈಫ್ ಬದುಕುವ ಆಸೆ ಹುಟ್ಟಿಬಿಟ್ಟರೆ.. ಅದಕ್ಕಾಗಿ ಅವನು ಏನೇನೆಲ್ಲ ಮಾಡಬಹುದು.. ಸಿನಿಮಾ ಇಂಟ್ರೆಸ್ಟಿಂಗ್ ಅನ್ನಿಸೋದೇ ಈ ರೀತಿಯ ಕಾನ್ಸೆಪ್ಟ್‍ನಲ್ಲಿ.

    ಇದೊಂದು ಸೈ-ಫೈ ಅಂದ್ರೆ ಸೈಂಟಿಫಿಕ್ ಫಿಕ್ಷನ್ ಮೂವಿ. ಕನ್ನಡಕ್ಕೆ ಇದು ಹೊಸದು ಎನ್ನುತ್ತಿದ್ದಾರೆ ಡೈರೆಕ್ಟರ್ ಹೇಮಂತ್ ಕುಮಾರ್. ಸುಧಾರಾಣಿ ನರ್ಸ್ ಪಾತ್ರದಲ್ಲಿ, ರಾಜ್ ಬಿ.ಶೆಟ್ಟಿ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಜೂನ್ 24ಕ್ಕೆ ರಿಲೀಸ್.