` srimurali, - chitraloka.com | Kannada Movie News, Reviews | Image

srimurali,

  • ಮಫ್ತಿಯ ಮಹಾ ರಹಸ್ಯ ಏನು..?

    mufti movie image

    ಮಫ್ತಿ. ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಕಾಂಬಿನೇಷನ್‍ನ ಚಿತ್ರ ಹೆಸರು, ಟ್ರೇಲರ್‍ನಿಂದಲೇ ಸದ್ದು ಮಾಡಿದ ಚಿತ್ರ. ಆ ಚಿತ್ರದ ಕಥೆಯೇನು..? ಅದೇ ದೊಡ್ಡ ರಹಸ್ಯ. ಮೇಲ್ನೋಟಕ್ಕೆ ಅದು ಉಗ್ರಂ, ರಥಾವರ ಚಿತ್ರದಂತೆ ಕಂಡರೂ, ಇದು ಅದಲ್ಲ ಎನ್ನಿಸಿಬಿಡುತ್ತೆ. 

    ಮಫ್ತಿ ಎಂದರೆ ಪೊಲೀಸ್ ಭಾಷೆಯಲ್ಲಿ ಅಂಡರ್ ಕವರ್ ಅಂತಾ. ಈ ಚಿತ್ರದಲ್ಲಿ ಮಫ್ತಿಯಲ್ಲಿ ಇರೋವ್ರು ಯಾರು..? ಡಾನ್ ಯಾರು..? ಅನ್ನೋದೇ ಅಸಲಿ ಕಥೆ. ಪ್ರತಿಯೊಬ್ಬನಲ್ಲೂ ಎರಡು ಮುಖಗಳಿರುತ್ತವೆ. ರಾಮ ಹಾಗೂ ರಾವಣ ಒಬ್ಬನಲ್ಲೇ ಇರುತ್ತಾನೆ. ಅವರಿಗೆ, ಅವರು ಮಾಡುತ್ತಿರುವುದು ಸರಿಯಾಗಿಯೇ ಕಾಣುತ್ತೆ. ಈ ಭಾವನೆಗಳ ಜೊತೆ ಜೊತೆಯಲ್ಲಿಯೇ ಚಿತ್ರದ ಕಥೆ ಸಾಗಲಿದೆ.

    ಹಾಗಾದರೆ, ಪೊಲೀಸ್ ಯಾರು..? ಡಾನ್ ಯಾರು..? ಶಿವರಾಜ್ ಕುಮಾರ್ ಅಥವಾ ಶ್ರೀಮುರಳಿ. ಕುತೂಹಲಕ್ಕೆ ಉತ್ತರ ಬೇಕೆಂದರೆ, ಚಿತ್ರಮಂದಿರಕ್ಕೇ ಹೋಗಿ ನೋಡಿ. 

    ಸಿನಿಮಾ ದಾಖಲೆಯೆಂಬಂತೆ ಸುಮಾರು 400 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಜಯಣ್ಣ ಭೋಗೇಂದ್ರ ಜೋಡಿಯ ಈ ಚಿತ್ರಕ್ಕೆ ನಿರ್ದೇಶಕರು ಹೊಸಬರು. ನಿರ್ದೇಶಕ  ನರ್ತನ್‍ಗೆ ಇದು ಮೊದಲ ಚಿತ್ರ, ಮೊದಲ ಚಿತ್ರದಲ್ಲೇ ಸ್ಟಾರ್‍ಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನರ್ತನ್, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

     

  • ಮಾಮಾ.. ಚಾಲೆಂಜ್ ಓಕೆ.. ನೆಕ್ಸ್ಟ್.. ದರ್ಶನ್, ಗಣೇಶ್, ಪ್ರಜ್ವಲ್

    srimurali accepts puneeth's challenge

    ಫಿಟ್‍ನೆಸ್ ಚಾಲೆಂಜ್ ವೈರಲ್ ಆಗುತ್ತಿದೆ. ಸರಪಳಿಯಂತೆ ಬೆಳೆಯುತ್ತಲೇ ಹೋಗುತ್ತಿದೆ. ಪುನೀತ್ ರಾಜ್‍ಕುಮಾರ್ ಹಾಕಿದ್ದ ಫಿಟ್‍ನೆಸ್ ಚಾಲೆಂಜ್‍ನ್ನು ಸ್ವೀಕರಿಸಿರುವ ಶ್ರೀಮುರಳಿ, ಬೆರಗುಗೊಳಿಸುವಂತೆ ವ್ಯಾಯಾಮದ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.

    ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇನೆ.. ಪುನೀತ್ ರಾಜ್‍ಕುಮಾರ್ ಮಾಮಾ, ಆರೋಗ್ಯವೇ ಐಶ್ವರ್ಯ ಎಂದಿದ್ದಾರೆ. 

    ಶ್ರೀಮುರಳಿ, ಈಗ ಫಿಟ್‍ನೆಸ್ ಚಾಲೆಂಜ್‍ನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಜ್ವಲ್ ದೇವರಾಜ್, ಗೋಲ್ಡನ್ ಸ್ಟಾರ್ ಗಣೇಶ್‍ಗೆ ಪಾಸ್ ಮಾಡಿದ್ದಾರೆ.

    Related Articles :-

    ರಕ್ಷಿತ್, ಧ್ರುವಾ, ಶ್ರೀಮುರಳಿಗೆ ಅಪ್ಪು ಚಾಲೆಂಜ್

  • ಮಾಸ್ + ಮಾಸ್ = ಭರಾಟೆ ಕ್ಲಾಸ್

    bharathe first look

    ಭರಾಟೆ ಚಿತ್ರದ ಫಸ್ಟ್‍ಲುಕ್ ರಿಲೀಸ್ ಆಗಿದೆ. ಆಗಸ್ಟ್ 15ಕ್ಕೆ ಫಸ್ಟ್‍ಲುಕ್ ಬಿಡುಗಡೆ ಎಂದಿದ್ದ ಚಿತ್ರತಂಡ, 4 ದಿನ ಮೊದಲೇ ಫಸ್ಟ್‍ಲುಕ್ ತೋರಿಸಿದೆ. ಆಗಸ್ಟ್ 15ಕ್ಕೆ ಮೋಷನ್ ಪಿಕ್ಚರ್ ರಿಲೀಸ್ ಮಾಡೋದಾಗಿ ಹೇಳಿದೆ. ಚಿತ್ರದಲ್ಲಿ ರಾಜಸ್ಥಾನ್ ಗೆಟಪ್‍ನಲ್ಲಿ ಕಂಗೊಳಿಸುತ್ತಿದ್ದಾರೆ ಶ್ರೀಮುರಳಿ ಮತ್ತು ಶ್ರೀಲೀಲ.

    ಈ ಚಿತ್ರದ ವಿಶೇಷ ಏನ್ ಗೊತ್ತಾ..? ಉಗ್ರಂ, ರಥಾವರ, ಮಫ್ತಿಯಲ್ಲಿ ಶ್ರೀಮುರಳಿ ಪಕ್ಕಾ ಮಾಸ್. ಅತ್ತ, ನಿರ್ದೇಶಕ ಚೇತನ್ ಕೂಡಾ ಭರ್ಜರಿ, ಬಹದ್ದೂರ್ ಎಂಬ ಮಾಸ್ ಹಿಟ್ ಕೊಟ್ಟವರು. ಇಬ್ಬರೂ ಮಾಸ್ ಸ್ಟಾರ್‍ಗಳೂ ಒಂದಾಗಿ ಈಗ ಭರಾಟೆ ಮಾಡುತ್ತಿದ್ದಾರೆ. ಅದು ಕ್ಲಾಸ್ ಆಗಿರಬೇಕಲ್ಲ. ಹೀಗಾಗಿಯೇ ಈ ಲುಕ್ ಎನ್ನುತ್ತಾರೆ ಚೇತನ್.

    ಹಳೆಯ ಸಿನಿಮಾಗಳನ್ನು ಈ ಚಿತ್ರ ನೆನಪಿಸಬಾರದು. ಇದು ಕಂಪ್ಲೀಟ್ ಫ್ರೆಶ್ ಎನಿಸಬೇಕು ಅನ್ನೋದು ಚೇತನ್ ಆಸೆ. ಶ್ರೀಮುರಳಿ, ಚೇತನ್ ಹಾಗೂ ಅರ್ಜುನ್ ಜನ್ಯ, ಇದೇ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ಸುಪ್ರೀತ್ ನಿರ್ಮಾಣದ ಚಿತ್ರ, ಶೂಟಿಂಗ್‍ನ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುತ್ತಲೇ ಇದೆ.

  • ರಚಿತಾನಾ.. ರಶ್ಮಿಕಾನಾ.. ಆಶಿಕಾನಾ.. ಶ್ರೀನಿಧಿನಾ.. ಯಾರು ಮದಗಜ..?

    top 4 heroines and who will pair up wih madagaja

    ಮದಗಜ. ಶ್ರೀಮುರಳಿ, ಅನಿಲ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ. ಈ ಚಿತ್ರಕ್ಕೆ ನಾಯಕಿ ಯಾರು ಅಂದ್ರೆ, ನಾಲ್ವರ ಹೆಸರು ಕೇಳಿ ಬರ್ತಿದೆ.

    ಡಿಂಪಲ್ ಕ್ವೀನ್ ರಚಿತಾ ರಾಮ್, ರಥಾವರದಲ್ಲಿ ಶ್ರೀಮುರಳಿಗೆ ಜೋಡಿಯಾಗಿದ್ದವರು. ಅನಿಲ್ ಕುಮಾರ್ ಅವರ ಅಯೋಗ್ಯ ಚಿತ್ರದ ನಾಯಕಿಯೂ ಅವರೇ.

    ರಶ್ಮಿಕಾ ಮಂದಣ್ಣ ಹೆಸರೂ ಮುಂಚೂಣಿಯಲ್ಲಿಯೆ ಇದೆ. 

    ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕೂಡಾ ಕ್ಯೂನಲ್ಲಿದ್ದಾರೆ.

    ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿಗೂ ಡಿಮ್ಯಾಂಡ್ ಇದೆ.

    `ನಾಲ್ವರ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಯಾರು ಹೀರೋಯಿನ್ ಅನ್ನೋದನ್ನು ಫೈನಲ್ ಮಾಡ್ತೇವೆ' ಎಂದಿದ್ದಾರೆ ನಿರ್ದೇಶಕ ಅನಿಲ್ ಕುಮಾರ್.

    ಇದು ಹೆಬ್ಬುಲಿ ಉಮಾಪತಿ ನಿರ್ಮಾಣದ ಸಿನಿಮಾ. 

  • ರೀಮೇಕ್ ಮಾಡಲ್ಲ - ಶ್ರೀಮುರಳಿ ಶಪಥ

    no remakes for srimurali

    ಕನ್ನಡದಲ್ಲಿ ವೊರಿಜಿನಲ್ ಕಥೆಗಳಿಗೇನೂ ಬರವಿಲ್ಲ. ಸೂಪರ್ ಹಿಟ್ ಆಗಿರುವ ಚಿತ್ರಗಳಲ್ಲಿ ಸ್ವಮೇಕ್ ಚಿತ್ರಗಳೇ ಹೆಚ್ಚು. ಹಾಗೆಂದು ರೀಮೇಕ್ ಚಿತ್ರಗಳಿಗೇನೂ ಬರವಿಲ್ಲ. ಬಹುತೇಕ ಕನ್ನಡದ ಎಲ್ಲ ನಟರೂ ರೀಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಶಪಥ ಮಾಡಿ ಅದನ್ನು 10 ವರ್ಷಕ್ಕೂ ಹೆಚ್ಚು ಕಾಲ ಚಾಚೂತಪ್ಪದೆ ಪಾಲಿಸಿದವರು ಶಿವಣ್ಣ. ಈಗಷ್ಟೇ ಮಲಯಾಳಂನ ಒಪ್ಪಂ ಚಿತ್ರದ ಮೂಲಕ ತಮ್ಮ ಪ್ರತಿಜ್ಞೆ ಮುರಿದಿದ್ದಾರೆ. ಅಂಧನ ಪಾತ್ರದ ವಿಭಿನ್ನ ಅವಕಾಶವನ್ನು ಕಳೆದುಕೊಳ್ಳಲು ಇಷ್ಟವಾಗಲಿಲ್ಲ ಎನ್ನವುದು ಶಿವರಾಜ್ ಕುಮಾರ್ ವಿವರಣೆ.

    ಆದರೆ, ಬೇರೆ ಯಾವ ನಟರೂ ಬಹಿರಂಗವಾಗಿ ನಾನು ರೀಮೇಕ್ ಮಾಡಲ್ಲ ಎಂದು ಹೇಳಿಕೊಂಡಿಲ್ಲ. ಅಂಥಾದ್ದೊಂದು ಶಪಥ ಮಾಡಿರುವುದು ಶ್ರೀಮುರಳಿ. ಉಗ್ರಂ, ರಥಾವರ ಮತ್ತು ಮಫ್ತಿ ಚಿತ್ರಗಳ ಸತತ ಸಕ್ಸಸ್‍ನಿಂದ ಖುಷಿಯಾಗಿರುವ ಶ್ರೀಮುರಳಿ, ಇನ್ನು ಮುಂದೆ ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.

    ತೆಲುಗು, ತಮಿಳಿನಿಂದ ಬಂದ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿದರೆ ಏನೂ ಲಾಭವಿಲ್ಲ. ನೋಡುಗರ ಸಂಖ್ಯೆಯಂತೂ ಖಂಡಿತಾ ಹೆಚ್ಚಾಗುವುದಿಲ್ಲ. ನಮ್ಮದೇ ಆದ ಸ್ವಂತ ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತೇನೆ ಎನ್ನುವುದು ಶ್ರೀಮುರಳಿ ಮಾತಿನ ತಾತ್ಪರ್ಯ.

    ಅಂದಹಾಗೆ ಶ್ರೀಮುರಳಿಗೆ ಇದುವರೆಗೆ ಹಿಟ್ ಕೊಟ್ಟಿರುವ ಚಂದ್ರಚಕೋರಿ, ಕಂಠಿ, ಉಗ್ರಂ, ರಥಾವರ, ಮಫ್ತಿ.. ಎಲ್ಲವೂ ಸ್ವಮೇಕ್ ಚಿತ್ರಗಳೇ.

  • ರೋರಿಂಗ್ ಸ್ಟಾರ್ ಭರಾಟೆಗೆ ಚಾಲೆಂಜಿಂಗ್ ಸ್ಟಾರ್ ಪವರ್

    bharate teaser launched by darshan

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ಬಿಡುಗಡೆ ಧಮಾಕದ ಸಂಭ್ರಮವನ್ನು ಡಬಲ್ ಮಾಡಿರೋದು ದರ್ಶನ್. ಶ್ರೀಮುರಳಿಗಾಗಿ, ತಮಗಾಗಿ ರಿಜಿಸ್ಟರ್ ಮಾಡಿಸಿದ್ದ ಮದಗಜ ಟೈಟಲ್‍ನ್ನೇ ಗಿಫ್ಟ್ ಆಗಿ ಕೊಟ್ಟ ದರ್ಶನ್, ಭರಾಟೆ ಟೀಸರ್‍ನ್ನೂ ಬಿಡುಗಡೆ ಮಾಡಿ ಸಂಭ್ರಮಿಸಿದ್ದಾರೆ. 

    ಎಲ್ಲರೂ ಜೀವಿಸುತ್ತಾರೆ, ಕೆಲವರು ಮಾತ್ರ ಅಮರರಾಗುತ್ತಾರೆ ಎಂದು ಅಂಬರೀಷ್ ಅವರಿಗೆ ಶ್ರದ್ಧಾಂಜಲಿ ಹೇಳಿಯೇ ಟೀಸರ್ ಬಿಟ್ಟಿದೆ ಭರಾಟೆ ಟೀಂ. ಮಫ್ತಿ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಸಿನಿಮಾ ಭರಾಟೆ. ಭರ್ಜರಿ ನಂತರ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಸಿನಿಮಾ ಭರಾಟೆ. ಸುಪ್ರಿತ್ ನಿರ್ಮಾಣದ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಮುಂದಿನ ವರ್ಷ ಬೇಸಗೆ ರಜದ ಹೊತ್ತಿಗೆ ಥಿಯೇಟರುಗಳಲ್ಲಿ ಭರಾಟೆಯ ಸದ್ದು ಮೊಳಗಲಿದೆ.

  • ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ

    srimurali's new film title is bharathe

    ಶ್ರೀಮುರಳಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಫೈನಲ್ ಆಗಿದೆ. ಚಿತ್ರಕ್ಕೆ ಜೋರು ಎಂಬರ್ಥ ಬರುವ ಟೈಟಲ್ ಇಡಲಾಗಿದೆ ಎಂದು ಶ್ರೀಮುರಳಿ ಹೇಳಿಕೊಂಡಿದ್ದರು. ಆದರೆ, ಟೈಟಲ್ ಊಹಿಸಿ ಎಂದು ಅಭಿಮಾನಿಗಳಿಗೇ ಚಾಲೆಂಜ್ ಹಾಕಿದ್ದರು. ಅಭಿಮಾನಿಗಳು, ರಭಸ, ಆರ್ಭಟ, ಅಬ್ಬರ.. ಹೀಗೆ ಹಲವು ಶೀರ್ಷಿಕೆಗಳನ್ನು ಹೇಳಿದ್ದರು. ಈಗ ಕುತೂಹಲಕ್ಕೆ ತೆರೆ ಬಿದ್ದಿದೆ. ಚಿತ್ರದ ಹೆಸರು ಭರಾಟೆ.

    ಭರ್ಜರಿ ಖ್ಯಾತಿಯ ಚೇತನ್ ನಿರ್ದೇಶಿಸುತ್ತಿರುವ ಚಿತ್ರ, ಪಕ್ಕಾ ಮಾಸ್ ಎಂಟರ್‍ಟೈನ್‍ಮೆಂಟ್ ಎಂದಿದ್ದಾರೆ ಶ್ರೀಮುರಳಿ.

  • ಶಿವಣ್ಣ V/s ಸುದೀಪ್ V/s ರಕ್ಷಿತ್ ಶೆಟ್ಟಿ V/s ಶ್ರೀಮುರಳಿ

    its clash of legends in august

    ಆಗಸ್ಟ್ ತಿಂಗಳು ಸ್ಯಾಂಡಲ್‍ವುಡ್‍ನ ಪೈಪೋಟಿಯ ತಿಂಗಳಾಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. 2019ರ ಸೆಮಿಫೈನಲ್ ತಿಂಗಳು ಆಗಸ್ಟ್ ಆದರೆ ಅಚ್ಚರಿಯಿಲ್ಲ. ಏಕೆ ಗೊತ್ತೇ.. ಕನ್ನಡ ಚಿತ್ರರಂಗದ ಸ್ಟಾರ್ ನಟರ ಚಿತ್ರಗಳು ಅದೇ ತಿಂಗಳು ರಿಲೀಸ್ ಆಗುತ್ತಿವೆ.

    ವರಮಹಾಲಕ್ಷ್ಮಿ ಹಬ್ಬಕ್ಕೆ ಸುದೀಪ್ ಅಭಿನಯದ ಕೃಷ್ಣ ನಿರ್ದೇಶನದ ಪೈಲ್ವಾನ್ ತೆರೆಗೆ ಬರುತ್ತಿದೆ.

    ಅದೇ ತಿಂಗಳು ರಕ್ಷಿತ್ ಶೆಟ್ಟಿ ಅಭಿನಯದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರವೂ ರಿಲೀಸ್ ಆಗುತ್ತಿದೆ.

    ಪೈಲ್ವಾನ್ 9 ಭಾಷೆಗಳಲ್ಲಿ ರಿಲೀಸ್ ಆದರೆ, ಅವನೇ ಶ್ರೀಮನ್ನಾರಾಯಣ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

    ಈ ಇಬ್ಬರದ್ದಷ್ಟೇ ಅಲ್ಲ, ಆಗಸ್ಟ್ ಹೊತ್ತಿಗೆ ಶಿವರಾಜ್ ಕುಮಾರ್ ಅಭಿನಯದ ಆನಂದ್ ಕೂಡಾ ರಿಲೀಸ್ ಆಗಲಿದೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟಿಸಿರುವ, ವಾಸು ನಿರ್ದೇಶನದ ಸಿನಿಮಾ ಅದು. 

    ಇದಕ್ಕೆ ಕಳಶವಿಟ್ಟಂತೆ ಶ್ರೀಮುರಳಿ ಭರಾಟೆಯೂ ಅದೇ ತಿಂಗಳು ಶುರುವಾಗಲಿದೆ. ನಿರ್ದೇಶಕ ಚೇತನ್ ಕುಮಾರ್ ಬಹದ್ದೂರ್, ಭರ್ಜರಿ ನಂತರ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಸಿನಿಮಾ ಭರಾಟೆ.

    ಸದ್ಯಕ್ಕೆ ಆಗಸ್ಟ್ ಕ್ಯೂನಲ್ಲಿರುವ ಚಿತ್ರಗಳಿವು. ಇವುಗಳ ಜೊತೆಗೆ ಇನ್ನಷ್ಟು ಚಿತ್ರಗಳು ಜೊತೆಯಾದರೂ ಅಚ್ಚರಿಯಿಲ್ಲ.

  • ಶಿವಣ್ಣನಿಂದ ಶ್ರೀಮುರಳಿ ಕಲಿತ ಪಾಠವೇನು..?

    srimurali, shivanna in mufti

    ಮಫ್ತಿ, ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ ಸಿನಿಮಾ. ಸಿನಿಮಾ ಥಿಯೇಟರ್‍ಗೆ ಬರಲು ಸಿದ್ಧವಾಗಿದೆ. ಒಂಟಿ ಸಲಗದಂತೆ ಶ್ರೀಮುರಳಿ ಕಾಣಿಸಿಕೊಂಡಿದ್ದರೆ, ಡಾನ್ ಗೆಟಪ್‍ನಲ್ಲಿದ್ದಾರೆ ಶಿವರಾಜ್ ಕುಮಾರ್. ಚಿತ್ರದ ಟ್ರೇಲರ್ ಮಾಮೂಲಿ ಸ್ಟೈಲ್‍ಗಿಂತ ಭಿನ್ನವಾಗಿದ್ದುದು ಇಡೀ ಚಿತ್ರರಂಗದ ಗಮನ ಸೆಳೆದಿತ್ತು.

    ಗಣೇಶ್, ಯಶ್,ರಕ್ಷಿತ್ ಶೆಟ್ಟಿ, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ನಟರು, ಚಿತ್ರದ ಟ್ರೇಲರ್‍ಗೆ ಮೆಚ್ಚುಗೆ ಸೂಚಿಸಿದ್ದರು. ಚಿತ್ರದ ಶೂಟಿಂಗ್ ಅನುಭವ ಹೇಳಿಕೊಂಡಿರುವ ಮುರಳಿ, ಶಿವಣ್ಣ ಶೂಟಿಂಗ್‍ನಲ್ಲಿದ್ದಾಗ ನಿಂತ ಕಡೆ ನಿಲ್ಲೊದಿಲ್ಲ, ಕುಂತ ಕಡೆ ಕೂರೋದಿಲ್ಲ. ಸದಾ ಆ್ಯಕ್ಟಿವ್ ಇರುತ್ತಾರೆ. ಒಂದು ನಿಮಿಷವನ್ನೂ ವೇಸ್ಟ್ ಮಾಡಲ್ಲ ಎಂದಿದ್ದಾರೆ.

    ಅವರಿಗೆ ಹೋಲಿಸಿದ್ರೆ, ನಾವೇ ಸೋಮಾರಿಗಳು ಎಂದಿದ್ದಾರೆ ಶ್ರೀಮುರಳಿ. ಸಿನಿಮಾ ಸೂಪರ್ ಆಗಿ ಮೂಡಿಬಂದಿದೆ. ಉಗ್ರಂನಂತೆಯೇ ಇದೂ ಕೂಡಾ ಡಿಫರೆಂಟ್ ಅನುಭವ ನೀಡಲಿದೆ ಎಂಬ ಭರವಸೆಯಲ್ಲಿದ್ದಾರೆ ಶ್ರೀಮುರಳಿ.

  • ಶೂಟಿಂಗ್ ಸಮಯದಲ್ಲೇ.. ಭರ್ಜರಿ ಭರಾಟೆ

    high demand for bharaate movie right

    ಭರಾಟೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಚೇತನ್ ಕುಮಾರ್ ಕಾಂಬಿನೇಷನ್‍ನ ಸಿನಿಮಾ. ಸಿನಿಮಾದ ಶೂಟಿಂಗ್ ಬಿರುಸಾಗಿ ನಡೆಯುತ್ತಿರುವಾಗಲೇ ಚಿತ್ರಕ್ಕೆ ಪರಭಾಷೆಗಳಿಂದ ಡಿಮ್ಯಾಂಡ್ ಶುರುವಾಗಿದೆ. ಶ್ರೀಮುರಳಿ ಚಿತ್ರಕ್ಕೆ ಹಿಂದಿಯಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ. ಆದರೆ, ಈ ಬಾರಿ ಹಿಂದಿಯಷ್ಟೇ ಅಲ್ಲ, ಭೋಜ್‍ಪುರಿ (ಬಿಹಾರದ ಭಾಷೆ)ಯಲ್ಲೂ ಡಿಮ್ಯಾಂಡ್ ಶುರುವಾಗಿದೆ. ಹಿಂದಿ, ಭೋಜ್‍ಪುರಿ ಜೊತೆಗೆ ಉತ್ತರ ಭಾರತದ ಹಲವು ಭಾಷೆಗಳಲ್ಲೂ ಡಬ್ಬಿಂಗ್ ರೈಟ್ಸ್‍ಗೆ ಮಾತುಕತೆ ನಡೆಯುತ್ತಿದೆ. ಜೊತೆಗೆ ನೆಟ್‍ಫ್ಲಿಕ್ಸ್, ಆಮೆಜಾನ್‍ನವರೂ ಸಿನಿಮಾ ಖರೀದಿಗೆ ತುದಿಗಾಲಲ್ಲಿ ನಿಂತಿದ್ದಾರೆ.

    ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿದೆ. ಡಿಮ್ಯಾಂಡ್ ನೋಡಿ ಖುಷಿಯಾಗುತ್ತಿದೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎಂದಿದ್ದಾರೆ ಚೇತನ್. ನವೆಂಬರ್ 1ರಂದು ಚಿತ್ರದ ಟೀಸರ್ ಹೊರಬೀಳಲಿದೆ.

  • ಶ್ರೀಮುರಳಿ ಎಂಟ್ರಿ ಬೊಂಬಾಟ್

    srimurali roars in roarism

    ಭರಾಟೆ ಚಿತ್ರದ ಮೊದಲ ಹಾಡು ಹೊರಬಿದ್ದಿದೆ. ಚೇತನ್ ಸಾಹಿತ್ಯದ ಹಾಡನ್ನು ರ್ಯಾಪ್ ಶೈಲಿಯಲ್ಲಿ ಚಿತ್ರೀಕರಿಸಲಾಗಿದೆ. ಕಾಸ್ಟ್ಯೂಮ್, ಗೆಟಪ್ ಎಲ್ಲವೂ ರಾಜಸ್ಥಾನಿ ಸ್ಟೈಲ್. ಗಡ್ಡಧಾರಿ ಶ್ರೀಮುರಳಿ ಕ್ಯೂಟ್ ಆಗಿಯೂ, ರಫ್ & ಟಫ್ ಆಗಿಯೂ ಕಂಡು ಕಂಗೊಳಿಸಿದ್ದಾರೆ.

    ಇವ್ನು ಗೈಡ್.. ರಾಜಸ್ಥಾನ್ ಪ್ರೈಡ್.. ಸ್ವಲ್ಪ ರೂಡ್.. ಅನ್ನೋ ಹಾಡು, ಶ್ರೀಮರಳಿ ಕ್ಯಾರೆಕ್ಟರ್ ಪರಿಚಯ ಮಾಡಿಸುತ್ತೆ. ರಾಕ್ ಸ್ಟಾರ್ ಚಂದನ್ ಶೆಟ್ಟಿ ಹಾಡಿರುವ ರೋರಿಸಂ ಸಾಂಗ್‍ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಸುಪ್ರೀತ್ ನಿರ್ಮಾಣದ ಚಿತ್ರದಲ್ಲಿ ಶ್ರೀಮುರಳಿಗೆ ಶ್ರೀಲೀಲಾ ಹೀರೋಯಿನ್. 9 ಜನ ಖಳನಾಯಕರ ಎದುರು ಆರ್ಭಟಿಸಲಿರುವ ಶ್ರೀಮುರಳಿ, ಹಾಡಿನಲ್ಲಿ ತೋರಿಸಿರುವುದು ಅಕ್ಷರಶಃ ರೋರಿಸಂ.

  • ಶ್ರೀಮುರಳಿ ಎದುರಿಗೆ ತ್ರಿಮೂರ್ತಿ ಬ್ರದರ್ಸ್ ವಿಲನ್ನುಗಳು..!

    srimurali will fight with tirmurthi brothers on

    ಭರಾಟೆ. ಶ್ರೀಮುರಳಿ ಅಭಿನಯದ ಸಿನಿಮಾ. ಬಹದ್ದೂರ್ ಚೇತನ್ ನಿರ್ದೇಶನದ ಸಿನಿಮಾ. ಮಫ್ತಿ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಚಿತ್ರ. ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇದೇ ತಿಂಗಳು 11ನೇ ತಾರೀಕಿನಿಂದ ಕೊನೆಯ ಹಂತದ ಚಿತ್ರೀಕರಣಕ್ಕೆ ಮುಂದಾಗಿದೆ. ಈ ಹಂತದಲ್ಲಿಯೇ ಚಿತ್ರತಂಡಕ್ಕೆ ತ್ರಿಮೂರ್ತಿ ವಿಲನ್ ಸೋದರರು ಎಂಟ್ರಿಯಾಗುತ್ತಿದ್ದಾರೆ.

    ಅವರು ಬೇರಿನ್ಯಾರೂ ಅಲ್ಲ. ಸಾಯಿಕುಮಾರ್.. ರವಿಶಂಕರ್ ಮತ್ತು ಅಯ್ಯಪ್ಪ. ಚಿತ್ರದ ಕಥೆ ಮತ್ತು ಪಾತ್ರಗಳನ್ನು ಕೇಳಿ ಈಗಾಗಲೇ ರವಿಶಂಕರ್ ಮತ್ತು ಅಯ್ಯಪ್ಪ ಯೆಸ್ ಎಂದಿದ್ದಾರೆ. ಬಾಕಿ ಇರುವುದು ಸಾಯಿಕುಮಾರ್. 

    ಚಿತ್ರದ ಕಥೆ ಕೇಳಿ ಸಾಯಿಕುಮಾರ್ ಥ್ರಿಲ್ಲಾಗಿದ್ದಾರೆ. ಸೋದರರ ಜೊತೆ ನಟಿಸುವ ವಿಷಯಕ್ಕೂ ಎಕ್ಸೈಟ್ ಆಗಿದ್ದಾರೆ. ಆದರೆ ಡೇಟ್ಸ್ ಪ್ರಾಬ್ಲಂ ಹಿನ್ನೆಲೆಯಲ್ಲಿ ಇನ್ನೂ ಖಚಿತಪಡಿಸಿಲ್ಲ. ಡೇಟ್ಸ್ ಹೊಂದಿಸಿಕೊಂಡ ನಂತರ ಅವರು ಓಕೆ ಎನ್ನುವ ಚಾನ್ಸ್ ಇದೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್.

  • ಶ್ರೀಮುರಳಿ ನೋಡಿ ಶಾಕ್ ಆಗಿದ್ದರು ಶಿವಣ್ಣ

    shivarajkumar speaks about srimurali

    ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಶ್ರೀಮುರಳಿ ಜೊತೆ ನಟಿಸಿದ್ದಾರೆ. ಕನ್ನಡದಲ್ಲಿ ಬೇರೆ ಬೇರೆ ಸ್ಟಾರ್‍ಗಳ ಜೊತೆ ಅತಿ ಹೆಚ್ಚು ಸ್ಕ್ರೀನ್ ಹಂಚಿಕೊಂಡಿರುವ ಈಗಿನ ನಟರಲ್ಲಿ ಶಿವರಾಜ್ ಕುಮಾರ್ ನಂ.1. ಇನ್ನು ಶ್ರೀಮುರಳಿ, ಶಿವರಾಜ್ ಕುಮಾರ್‍ಗೆ ಸೋದರ ಸಂಬಂಧಿ. ಹೀಗಾಗಿ ಇಬ್ಬರೂ ಒಟ್ಟಿಗೇ ನಟಿಸಿರುವ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್, ಶ್ರೀಮುರಳಿ ನಟನೆ ನೋಡಿದ್ದಾರೆ.

    ಶ್ರೀಮುರಳಿ ತಮ್ಮ ಪಾತ್ರಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯುವ ಕಲಾವಿದ. ಅವನನ್ನು ಚಿಕ್ಕ ಮಗುವಾಗಿದ್ದಾಗಿನಿಂದ ನೋಡಿದ್ದೇನೆ. ಆದರೆ, ನಟಿಸುವಾಗಿನ ಆತನ ಶ್ರದ್ಧೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ನನ್ನ ಕಸಿನ್ ಎಂದು ಹೇಳುತ್ತಿಲ್ಲ. ಶ್ರೀಮುರಳಿ ಒಬ್ಬ ಅದ್ಭುತ ಕಲಾವಿದ ಎಂದು ಹೊಗಳಿದ್ದಾರೆ ಶಿವಣ್ಣ.

    ಚಿತ್ರದಲ್ಲಿ ಶಿವಣ್ಣ ಡಾನ್ ಕ್ಯಾರೆಕ್ಟರ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೀರೋ ಯಾರು..? ನೀವಾ..? ಮುರಳಿನಾ..? ಅಂದ್ರೆ.. ಶಿವಣ್ಣ ಹೇಳೊದು ಏನ್ ಗೊತ್ತಾ..? ಮಫ್ತಿ ಚಿತ್ರಕ್ಕೆ ಮಫ್ತಿ ಚಿತ್ರದ ಕಥೆಯೇ ಹೀರೋ.

  • ಶ್ರೀಮುರಳಿ ಭರಾಟೆಗೆ ನಾಯಕಿಯಾಗಿ ಆದಿತಿ ಪ್ರಭುದೇವ ಎಂಟ್ರಿ..!!!

    aditi prabhudeva joins srimurali's bharaate

    ಶ್ರೀಮುರಳಿ-ಶ್ರೀಲೀಲಾ ಅಭಿನಯದ ಭರಾಟೆ ಚಿತ್ರಕ್ಕೆ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಗೆಸ್ಟ್ ರೋಲ್‍ನಲ್ಲಿದ್ದಾರೆ. ಹೀಗಿರುವಾಗ ಆದಿತಿ ಪ್ರಭುದೇವ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅರೆ ಶ್ರೀಲೀಲಾ ನಾಯಕಿಯಾಗಿರೋವಾಗ ಇನ್ನೊಬ್ಬ ನಾಯಕಿ ಹೇಗೆ ಬರೋಕೆ ಸಾಧ್ಯ..? ಆಲ್‍ಮೋಸ್ಟ್ ಶೂಟಿಂಗ್ ಮುಗಿಸಿರುವ ಸಿನಿಮಾಗೆ ಹೊಸ ಹೀರೋಯಿನ್ ಹೇಗೆ ಬರ್ತಾರೆ ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಷ್ಟೆ.

    ಚಿತ್ರಕ್ಕೆ ಶ್ರೀಲೀಲಾ ಅವರೇ ನಾಯಕಿ. ನೋ ಡೌಟ್. ಆದರೆ ಶ್ರೀಲೀಲಾ ಪಾತ್ರಕ್ಕೆ ಡಬ್ ಮಾಡಿರುವುದು ಆದಿತಿ ಪ್ರಭುದೇವ. ನಾಯಕಿಯೊಬ್ಬರ ಪಾತ್ರಕ್ಕೆ ಇನ್ನೊಬ್ಬ ನಾಯಕಿ ಡಬ್ ಮಾಡಿರುವುದೇ ವಿಶೇಷ.

    ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರ ರಿಲೀಸ್‍ಗೂ ಮುನ್ನವೇ ದೊಡ್ಡ ಹವಾ ಎಬ್ಬಿಸಿದೆ. ನಿರ್ಮಾಪಕ ಸುಪ್ರೀತ್ ಚಿತ್ರವನ್ನು ಅಕ್ಟೋಬರ್‍ನಲ್ಲಿ ರಿಲೀಸ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ.

  • ಶ್ರೀಮುರಳಿಗೆ ವಿಲನ್‍ಗಳೆಷ್ಟು ಜನ..?

    so many villains for srimurli's bharathe

    ರೋರಿಂಗ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಎಷ್ಟು ಜನ ವಿಲನ್‍ಗಳಿರಬಹುದು..? ಒಂದು ಮೂಲದ ಪ್ರಕಾರ ಒಟ್ಟು ವಿಲನ್‍ಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 9 ವಿಲನ್‍ಗಳಿರುವ ಫ್ಯಾಮಿಲಿ ಎಂಟರ್‍ಟೈನರ್ ಚಿತ್ರದ ಕಥೆಯೇನು..? ಈಗಲೇ ಹೇಳಿಬಿಡ್ತೀವಾ.. ಸಿನಿಮಾ ರಿಲೀಸ್ ಆದಾಗ ಗೊತ್ತಾಗುತ್ತೆ ಬಿಡಿ ಅಂತಾರೆ ನಿರ್ದೇಶಕ ಚೇತನ್ ಕುಮಾರ್.

    ಈಗಾಗಲೇ ಆ ಪಾತ್ರಗಳಿಗಾಗಿ ಜಗಪತಿ ಬಾಬು, ಸಂಪತ್ ಕುಮಾರ್, ಸುಮನ್ ಮೊದಲಾದ ಟಾಲಿವುಡ್, ಬಾಲಿವುಡ್ ಕಲಾವಿದರನ್ನು ಸಂಪರ್ಕಿಸಲಾಗಿದೆಯಂತೆ.

    ರಾಜಸ್ಥಾನದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಚಿತ್ರದ ಫಸ್ಟ್‍ಲುಕ್ ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಶ್ರೀಲೀಲಾ ನಾಯಕಿಯಾಗಿರುವ ಚಿತ್ರದ ಫಸ್ಟ್‍ಲುಕ್‍ನ್ನು ರ್ಯಾಪ್ ಸಾಂಗ್ ಮೂಲಕ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.

  • ಶ್ರೀಮುರಳಿಗೆ ವೆಲ್‍ಕಂ ಹೇಳ್ತಾರೆ ಡಿಂಪಲ್ ಕ್ವೀನ್ 

    rachita ram to shake leg with srimurali in special song

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದಲ್ಲಿ ರಚಿತಾ ರಾಮ್ ಹಾಡಿ ಕುಣಿದು ಕುಪ್ಪಳಿಸೋಕೆ ರೆಡಿಯಾಗಿದ್ದಾರೆ. ಅರೆ.. ಆ ಚಿತ್ರದ ಹೀರೋಯಿನ್ ಶ್ರೀಲೀಲಾ ಅಲ್ವಾ ಅಂದ್ಕೋಬೇಡಿ. ಹೀರೋಯಿನ್ ಅವರೇ. ರಚಿತಾ ಹೆಜ್ಜೆ ಹಾಕೋದು ಹೀರೋ ಇಂಟ್ರೊಡಕ್ಷನ್ ಸಾಂಗ್‍ಗೆ.

    ಭರಾಟೆ ಚಿತ್ರದ ಕಥೆ, ಹೀರೋನ ಫೋರ್ಸ್ ಎಲ್ಲವನ್ನೂ ಒಳಗೊಂಡಿರೋ ಹಾಡಿಗೆ ಒಬ್ಬರು ಜನಪ್ರಿಯ ನಾಯಕಿ ಬೇಕು ಎಂದು ಯೋಚಿಸಿದಾಗ ಹೊಳೆದಿದ್ದು ರಚಿತಾ ರಾಮ್ ಹೆಸರು. ಅವರ ಎಂಟ್ರಿ, ಚಿತ್ರದ ಎನರ್ಜಿ ಹೆಚ್ಚಿಸಿದೆ ಅಂದಿದ್ದಾರೆ ಭರ್ಜರಿ ಚೇತನ್.

    ಶ್ರೀಮುರಳಿ ಜೊತೆ ರಥಾವರ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿರುವ ರಚಿತಾ ರಾಮ್, ಇತ್ತೀಚೆಗೆ ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಪುಟ್ಟ ಹಾಡಿಗೆ ಸ್ಟೆಪ್ ಹಾಕಿದ್ದರು. ಅದು ಬಿಟ್ಟರೆ ಈಗ ಭರಾಟೆಯಲ್ಲಿ ಸ್ಪೆಷಲ್ ಡ್ಯಾನ್ಸ್‍ಗೆ ಎಂಟ್ರಿ ಕೊಟ್ಟಿದ್ದಾರೆ.

  • ಶ್ರೀಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದ ಕೆಜಿಎಫ್ ಡೈರೆಕ್ಟರ್

    prashanth neel had planned to squash srimurali once

    ಶ್ರೀಮುರಳಿ, ಡೈರೆಕ್ಟರ್‍ಗಳ ಪಾಲಿಗೆ ಅಡ್ಜಸ್ಟ್‍ಮೆಂಟ್ ಹೀರೋ. ನಿರ್ದೇಶಕರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವ ನಟ. ಇಂತಹವರನ್ನು ನಿರ್ದೇಶಕರೊಬ್ಬರು ಹೊಡೆಯೋಕೆ ಸ್ಕೆಚ್ ಹಾಕಿದ್ರಂತೆ ಎಂದರೆ ಅಚ್ಚರಿಯಾಗಬಹುದು. ಆದರೆ, ಇದು ಸತ್ಯ. ಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದವರು ಬೇರೆ ಯಾರೋ ಅಲ್ಲ, ಉಗ್ರಂ ಮೂಲಕ ಶ್ರೀಮುರಳಿಗೆ ಅತಿ ದೊಡ್ಡ ಬ್ರೇಕ್ ಕೊಟ್ಟ, ಕೆಜಿಎಫ್ ಮೂಲಕ ದೇಶಾದ್ಯಂತ ಭರ್ಜರಿ ಸದ್ದು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್.

    ಅವರ್ಯಾಕೆ ಇವರನ್ನು ಹೊಡೆಯಬೇಕು ಎಂದರೆ, ಅದರ ಹಿಂದೊಂದು ಲವ್ ಸ್ಟೋರಿ ಇದೆ. ಶ್ರೀಮುರಳಿ ಲವ್ ಮಾಡ್ತಾ ಇದ್ದದ್ದು ಪ್ರಶಾಂತ್ ಅವರ ತಂಗಿಯನ್ನ. ಇದು ಗೊತ್ತಾಗಿ ಪ್ರಶಾಂತ್ ಮುರಳಿಗೆ ಹೊಡೆಯೋಕೆ ಸ್ಕೆಚ್ ಹಾಕಿದ್ದರಂತೆ. ಆಗ ಮುರಳಿ ತಪ್ಪಿಸಿಕೊಂಡು ಓಡಾಡ್ತಿದ್ದರಂತೆ. ಅದಾದ ಮೇಲೆ ಪ್ರಶಾಂತ್ ಅವರ ತಂಗಿ ವಿದ್ಯಾರನ್ನೇ ಮುರಳಿ ಮದುವೆಯಾದರು. ಈಗ ಪ್ರಶಾಂತ್ ನೀಲ್‍ಗೆ ಶ್ರೀಮುರಳಿ ಭಾವ.

    ಭಾವನಿಗೆ ವರದಕ್ಷಿಣೆಯಾಗಿ ಅವರು ಕೊಟ್ಟಿದ್ದು ಉಗ್ರಂ ಚಿತ್ರವನ್ನ. 

  • ಶ್ರೀಮುರಳಿಯ ಮದಗಜಕ್ಕೆ ಕೆಜಿಎಫ್ ಪ್ರಶಾಂತ್ ನೀಲ್ ಬಲ

    prashanth neel gives his suggestions to srimurali's madagaja script

    ರೋರಿಂಗ್ ಸ್ಟಾರ್ ಶ್ರೀಮುರಳಿ, ಭರಾಟೆಯ ಭರ್ಜರಿ ಸಕ್ಸಸ್ಸಿನ ಜೋಶ್ನಲ್ಲಿದ್ದಾರೆ. ಜೊತೆಯಲ್ಲೇ ಮದಗಜ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸೆಟ್ಟೇರುತ್ತಿರುವ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶಕ. ಈಗ ಈ ಚಿತ್ರದ ಕಥೆ, ಚಿತ್ರಕಥೆಗೆ ಪ್ರಶಾಂತ್ ನೀಲ್ ಬಲ ತುಂಬುತ್ತಿದ್ದಾರೆ. ಶ್ರೀಮುರಳಿಯ ಭಾವನೂ ಆಗಿರುವ ಪ್ರಶಾಂತ್, ಕಥೆಯಲ್ಲಿ ಒಂದಿಷ್ಟು ಬದಲಾವಣೆಗೆ ಸಲಹೆ ನೀಡಿದ್ದಾರೆ.

    ಮಹೇಶ್ ಅವರ ಜೊತೆ ಪ್ರಶಾಂತ್ ಸಂಪರ್ಕದಲ್ಲಿದ್ದಾರೆ. ಕೆಲವು ಸಲಹೆ ನೀಡಿದ್ದಾರೆ. ಸ್ಕ್ರಿಪ್ಟ್ ಇನ್ನೂ ಚೆನ್ನಾಗಿ ರೂಪುಗೊಳ್ಳುತ್ತಿದೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ. ಮದಗಜ ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆ ಆಗಿಲ್ಲ.

  • ಶ್ರೀಮುರಳಿಯಿಂದ ಶ್ರೀಲೀಲಾ ಕಲಿತಿದ್ದು ಏನು..?

    sreeleela learns important lesson from srimurali

    ಶ್ರೀಮುರಳಿ, ಭರ್ಜರಿ ಚೇತನ್ ಇದೇ ಮೊದಲ ಬಾರಿಗೆ ಜೋಡಿಯಾಗಿರೋ ಚಿತ್ರ ಭರಾಟೆ. ಇತ್ತೀಚೆಗೆ ಡಾರ್ಕ್ ಶೇಡ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಶ್ರೀಮುರಳಿ, ಇಲ್ಲಿ ಕಲರ್‍ಫುಲ್ ಆಗಿ ಮಿಂಚಿದ್ದಾರೆ. ಶ್ರೀಮುರಳಿಗೆ ಇಲ್ಲಿ ಶ್ರೀಲೀಲಾ ಜೋಡಿ. ನೀನೇ ಮೊದಲು ನೀನೇ ಕೊನೆ.. ಎಂದು ಪ್ರೇಕ್ಷಕರ ಎದೆಗೇ ಕಿಸ್ ಕೊಟ್ಟ ಚೆಲುವೆ, ಇಲ್ಲಿ ರಾಧಾ ಆಗಿದ್ದಾರೆ.

    ಮೊದಲ ಬಾರಿಗೆ ಶ್ರೀಮುರಳಿ ಜೊತೆ ನಟಿಸಬೇಕು ಎಂದಾಗ ನರ್ವಸ್ ಆಗಿದ್ದೆ. ಆಗ ನನ್ನ ಮೊದಲ ಚಿತ್ರವೇ ಇನ್ನೂ ಪೂರ್ತಿ ಆಗಿರಲಿಲ್ಲ. ಆದರೆ, ಚೇತನ್ ಅವರೇ ಧೈರ್ಯ ತುಂಬಿದ್ರು. ಆದರೆ, ಶ್ರೀಮುರಳಿಯವರ ಜೊತೆ ನಟಿಸುವಾಗ ಅವರ ಸಿಂಪ್ಲಿಸಿಟಿ ಮತ್ತು ತಾಳ್ಮೆ ಬಹಳ ಇಷ್ಟವಾಯ್ತು ಎನ್ನುವ ಶ್ರೀಲೀಲಾಗೆ, ಶ್ರೀಮುರಳಿಯವರ ಶಿಸ್ತು ಪಾಠವನ್ನೇ ಕಲಿಸಿದೆ.

    ಅವರು ಪಾತ್ರ ಮತ್ತು ಸನ್ನಿವೇಶಕ್ಕೆ ಎಷ್ಟು ಶ್ರಮ ಹಾಕ್ತಾರೆ ಅಂದ್ರೆ, ನಿರ್ದೇಶಕರು ಓಕೆ ಎನ್ನುವವರೆಗೂ ಬೇಸರ ಮಾಡಿಕೊಳ್ಳಲ್ಲ. ತಾಳ್ಮೆ ಕಳೆದುಕೊಳ್ಳಲ್ಲ. ಶಿಸ್ತು ತಪ್ಪಲ್ಲ. ನಿರ್ದೇಶಕರೇ ಫೈನಲ್. ಅವರ ಆ ಶಿಸ್ತು, ತಾಳ್ಮೆಯಿಂದ ನಮ್ಮಂತ ಹೊಸಬರು ಕಲಿತುಕೊಳ್ಳೋದು ತುಂಬಾ ಇದೆ ಎನ್ನುತ್ತಾರೆ ಶ್ರೀಲೀಲಾ.

    ಸುಪ್ರೀತ್ ನಿರ್ಮಾಣದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಸುತ್ತಮುತ್ತ ಹಬ್ಬದ ಭರಾಟೆ ಇದೆ.

  • ಹೊಂಬಾಳೆ ಬ್ಯಾನರ್‍ನಲ್ಲಿ ಶ್ರೀಮುರಳಿ

    srimurali's next with hombale films

    ಉಗ್ರಂ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಶ್ರೀಮುರಳಿ, ಈಗ ಹೊಂಬಾಳೆ ಬ್ಯಾನರ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಜಕುಮಾರ, ಕೆಜಿಎಫ್‍ನಂತ ದೊಡ್ಡ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಪ್ರೊಡಕ್ಷನ್ಸ್, ಶ್ರೀಮುರಳಿಗಾಗಿ ಸಿನಿಮಾ ನಿರ್ಮಿಸಲಿದೆ. 

    ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಬಂಗಾರ ಸ/ಒ ಬಂಗಾರದ ಮನುಷ್ಯ ಚಿತ್ರ ನಿರ್ದೇಶಿಸಿದ್ದ ಯೋಗಿ ಜಿ.ರಾಜ್. ಉಗ್ರಂ, ರಥಾವರ ಹಾಗೂ ಈಗ ಮಫ್ತಿ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಶ್ರೀಮುರಳಿಗೆ ಈಗ ದೊಡ್ಡ ಬ್ಯಾನರ್‍ನಿಂದ ಆಫರ್ ಸಿಕ್ಕಿದೆ. 

    ಸದ್ಯಕ್ಕೆ ಫೈನಲ್ ಆಗಿರುವುದು ಹೀರೋ & ನಿರ್ದೇಶಕ ಮಾತ್ರ. ಉಳಿದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.