` srimurali, - chitraloka.com | Kannada Movie News, Reviews | Image

srimurali,

  • ನಿರ್ದೇಶಕ, ನಿರ್ಮಾಪಕರಿಗೆ ಶ್ರೀಮುರಳಿ ಕೊಟ್ಟ ಸರ್ಟಿಫಿಕೇಟ್ ಏನು..?

    srimurali applauds bharaate movie director and producer

    ಭರಾಟೆ ರಿಲೀಸ್ ಆಗಿರುವ ಹೊತ್ತಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿಯಿಂದ ಮೆಚ್ಚುಗೆಯ ಸರ್ಟಿಫಿಕೇಟ್ ಪಡೆದಿರುವುದು ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮತ್ತು ನಿರ್ಮಾಪಕ ಸುಪ್ರೀತ್. ಚೇತನ್ ಅವರಲ್ಲಿ ಶ್ರೀಮುರಳಿಗೆ ಇಷ್ಟವಾಗಿದ್ದು ಅವರ ಡಿಸಿಪ್ಲಿನ್. ಚೇತನ್ ಟೀಕೆ, ಸಲಹೆ, ವಿಮರ್ಶೆ ಎಲ್ಲದಕ್ಕೂ ಓಪನ್ ಆಗ್ತಾರೆ. ನಟರಿಗೆ ಕಂಫರ್ಟ್ ಝೋನ್ ಕಲ್ಪಿಸಿಕೊಡ್ತಾರೆ. ಅಷ್ಟೇ ಅಲ್ಲ, ಔಟ್ ಪುಟ್ ವಿಚಾರಕ್ಕೆ ರಾಜಿಯಾಗಲ್ಲ. ಎಲ್ಲ ನಿರ್ದೇಶಕರಿಗೂ ಇಂತಹ ಗುಣಗಳಿರಬೇಕು ಎನ್ನುವ ಶ್ರೀಮುರಳಿ, ನಿರ್ಮಾಪಕರಿಗೆ ಕೊಟ್ಟಿರುವ ಪ್ರಮಾಣ ಪತ್ರವೇ ಬೇರೆ.

    `ನಾನು ಇದುವರೆಗೆ ಕೆಲಸ ಮಾಡಿರುವ ಪ್ರೊಡಕ್ಷನ್ ಸಂಸ್ಥೆಗಳಲ್ಲಿ ಇದು ನಂ.1. ದಿ ಬೆಸ್ಟ್. ನಿರ್ಮಾಪಕ ಸುಪ್ರೀತ್ ಅವರ ನಂಬಿಕೆ, ಆತ್ಮವಿಶ್ವಾಸ ಹಾಗೂ ಧೈರ್ಯ ಇಷ್ಟವಾಯ್ತು ಎಂದಿದ್ದಾರೆ ಶ್ರೀಮುರಳಿ.

    ಎಲ್ಲರಂತೆಯೇ ಶ್ರೀಮುರಳಿ ಹೇಳಿರೋದು ಅದೇ ಮಾತು. ರಿಲೀಸ್ ಆಗುವವರೆಗೆ ಅದು ನಮ್ಮ ಸಿನಿಮಾ. ರಿಲೀಸ್ ಆದ ಮೇಲೆ ಅದು ಪ್ರೇಕ್ಷಕರ ಸಿನಿಮಾ. ಜನರೇ ಡಿಸೈಡ್ ಮಾಡಬೇಕು.

  • ಪ್ರಶಾಂತ್ ನೀಲ್ ಜೊತೆ ಶ್ರೀಮುರಳಿ ಹೊಸ ಸಿನಿಮಾ

    prahsnath neel and srimurali to pair up for a next film

    ಭರಾಟೆ ಚಿತ್ರದ ರಿಲೀಸ್ ಗುಂಗಿನಲ್ಲಿರುವ ಶ್ರೀಮುರಳಿ ಸುತ್ತ ಒಂದು ಹ್ಯಾಪಿ ಹ್ಯಾಪಿ ನ್ಯೂಸ್ ಹರಿದಾಡುತ್ತಿದೆ. ಆ ಹ್ಯಾಪಿ ನ್ಯೂಸ್ ನಿಜವಾಗಿದ್ದೇ ಆದರೆ, ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಮತ್ತೆ ಒಂದಾಗಲಿದ್ದಾರೆ.

    ಶ್ರೀಮುರಳಿ ವೃತ್ತಿ ಜೀವನಕ್ಕೆ ಅತಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರವದು. ಅವರೀಗ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಡೈರೆಕ್ಟರ್. ಸಂಬಂಧದಲ್ಲಿ ಶ್ರೀಮುರಳಿಯ ಭಾವ.

    ಪ್ರಶಾಂತ್ ನೀಲ್ ಕೆಜಿಎಫ್ ಮುಗಿಸಿಕೊಂಡ ನಂತರ ಶ್ರೀಮುರಳಿ ಅವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡುವ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಶ್ರೀಮುರಳಿ ಭರಾಟೆ ಮುಗಿದೊಡನೆ ಮದಗಜ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

  • ಫ್ಯಾಮಿಲಿ ಸ್ಟಾರ್ ಶ್ರೀಮುರಳಿ ಭರಾಟೆ

    sriimurali is a fmaily entertainer

    ಭರಾಟೆ, ಶ್ರೀಮುರಳಿ ಅಭಿನಯದ ಸಿನಿಮಾ. ನಿರ್ದೇಶಕ ಚೇತನ್ ಪ್ರಕಾರ, ಈ ಚಿತ್ರದಲ್ಲಿ ಕಾಣಿಸೋದು ಫ್ಯಾಮಿಲಿ ಎಂಟರ್‍ಟೈನರ್ ಶ್ರೀಮುರಳಿ. ಅದಕ್ಕೆ ಅವರು ಕಾರಣವನ್ನೂ ಕೊಡ್ತಾರೆ. ಚಂದ್ರಚಕೋರಿ, ಕಂಠಿ ಚಿತ್ರಗಳಲ್ಲಿ ಶ್ರೀಮುರಳಿ ಅವರದ್ದು ಕಂಟೆಂಟ್ ಓರಿಯಂಟೆಡ್ ಪಾತ್ರ. ಉಗ್ರಂ, ರಥಾವರ, ಮಫ್ತಿ ಚಿತ್ರಗಳಲ್ಲಿ ಕಂಪ್ಲೀಟ್ ರಗಡ್ ಲುಕ್. ಹೀಗಾಗಿ ಶ್ರೀಮುರಳಿಗೆ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಆಡಿಯನ್ಸ್ ಇದ್ದಾರೆ. ಭರಾಟೆಯಲ್ಲಿ ಆ ಎರಡು ವರ್ಗದವರೂ ಎಂಜಾಯ್ ಮಾಡ್ತಾರೆ ಎಂದಿದ್ದಾರೆ ಚೇತನ್.

    ಶ್ರೀಮುರಳಿ ಈ ಚಿತ್ರದಲ್ಲಿ ನಗುತ್ತಾ.. ನಗಿಸುತ್ತಾ.. ಥ್ರಿಲ್ ಕೊಡುತ್ತಾ. ಕೊನೆ ಕೊನೆಗೆ ಕಣ್ಣೀರನ್ನೂ ಹರಿಸ್ತಾರೆ ಎಂದಿದ್ದಾರೆ ಚೇತನ್. ಶ್ರೀಮುರಳಿಗೆ ಶ್ರೀಲೀಲಾ ಜೋಡಿಯಾಗಿದ್ದರೆ, ಸುಪ್ರೀತ್ ನಿರ್ಮಾಣ ಮಾಡಿದ್ದಾರೆ.

  • ಬಾಕ್ಸಾಫೀಸಲ್ಲಿ ಚೇತನ್-ಮುರಳಿ ಭರಭರ ಭರಾಟೆ : ಎಷ್ಟು ಕೋಟಿ ಕಲೆಕ್ಷನ್..?

    bharaate magic in box office

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ, ನಿರೀಕ್ಷಿಸಿದ್ದಂತೆಯೇ ಅಬ್ಬರಿಸುತ್ತಿದೆ. ಭರ್ಜರಿ ಚೇತನ್ ಮತ್ತೊಮ್ಮೆ ತಾವು ಬಾಕ್ಸಾಫೀಸ್ ಬಹದ್ದೂರ್ ಎಂದು ಸಾಬೀತು ಮಾಡಿದ್ದಾರೆ. ಶ್ರೀಲೀಲಾ 2ನೇ ಚಿತ್ರದಲ್ಲೂ ಲಕ್ಕಿ ಎಂದು ಸಾಬೀತು ಮಾಡಿದ್ದರೆ, ನಿರ್ಮಾಪಕ ಸುಪ್ರೀತ್ ಮೊದಲ ಚಿತ್ರದಲ್ಲಿಯೇ ಗೆದ್ದು ಬೀಗಿದ್ದಾರೆ. ಭರಾಟೆ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡ್ತಿದೆ.

    ರಿಲೀಸ್ ಆಗುವ ಮೊದಲೇ 30 ಕೋಟಿ ಬ್ಯುಸಿನೆಸ್ ಮಾಡಿದ್ದ ಭರಾಟೆ, ಮೊದಲ ವಾರ ಮುಗಿಯುವ ಮೊದಲೇ 25 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಮೊದಲ ದಿನ 8 ಕೋಟಿಗೂ ಹೆಚ್ಚು, 2ನೇ ದಿನ ಸುಮಾರು 7 ಕೋಟಿ ಹಾಗೂ 3ನೇ ದಿನ ಮತ್ತೆ 8 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. 

  • ಭರ ಭರ ಭರಾಟೆ ಗೆಲುವು : ಅಭಿಮಾನಿಗಳಿಗೆ ಶ್ರೀಮುರಳಿ ಧನ್ಯವಾದ

    bharaate success team

    ಶ್ರೀಮುರಳಿ, ಶ್ರೀಲೀಲಾ, ಭರ್ಜರಿ ಚೇತನ್, ಸಾಯಿ ಬ್ರದರ್ಸ್ ಕಾಂಬಿನೇಷನ್  ಭರ್ಜರಿಯಾಗಿಯೇ ಗೆದ್ದಿದೆ. ರಿಲೀಸ್ ಆದ 250ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಹೌಸ್‍ಫುಲ್ ಶೋ. ಅಭಿಮಾನಿಗಳ ಪ್ರೀತಿಗೆ ಸಿಕ್ಕ ಗೆಲುವಿಗೆ ಇಡೀ ತಂಡ ಫುಲ್ ಹ್ಯಾಪಿ. ಈ ಗೆಲುವು ಅಭಿಮಾನಿಗಳಿಗೆ ಅರ್ಪಣೆ ಎಂದಿರುವ ಶ್ರೀಮುರಳಿ, ಹೊಸ ಪ್ರಾಜೆಕ್ಟ್‍ನತ್ತ ಮುಖ ಮಾಡಿದ್ದಾರೆ.

    ನಿರ್ಮಾಪಕ ಸುಪ್ರೀತ್ ಮೊದಲ ಪ್ರಯತ್ನದಲ್ಲೇ ಗೆದ್ದ ಖುಷಿಯಲ್ಲಿದ್ದಾರೆ. ಸಾಯಿಕುಮಾರ್ ಅವರಿಗಂತೂ ಡಬಲ್ ಖುಷಿ. ಸೋದರರ ಜೊತೆ ನಟಿಸಿದ್ದ ಖುಷಿಯನ್ನು ಭರಾಟೆ ಭರಪೂರವಾಗಿ ಕೊಟ್ಟಿತ್ತು. ಈಗ ಸಿಕ್ಕಿರುವ ಗೆಲುವು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ ಸಾಯಿಕುಮಾರ್.

    ನಿರ್ದೇಶಕ ಚೇತನ್ ಕುಮಾರ್ ಆಗಲೇ ಜೇಮ್ಸ್ ಚಿತ್ರವನ್ನು ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಪುನೀತ್ ಜೊತೆಗಿನ ಮುಂದಿನ ಚಿತ್ರ ಆರಂಭಿಸುವ ಹೊತ್ತಿಗೆ ಸಿಕ್ಕಿರುವ ಭರಾಟೆ ಬೂಸ್ಟ್, ಚೇತನ್ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

  • ಭರಾಟೆ ೨೫ : ಸಕ್ಸಸ್ ಪಾರ್ಟಿ

    bharaat 25 days success celebrations

    ಭರಾಟೆ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರಾಟೆ ಎಬ್ಬಿಸಿದೆ. ೨೧೨ ಸೆಂಟರ್‌ಗಳಲ್ಲಿ ೨೫ ದಿನ ಪೂರೈಸಿದೆ. ಖುಷಿಯಾಗಿರುವ ಭರಾಟೆ ಟೀಂ ನವೆಂಬರ್ ೧೧ರ ಸೋಮವಾರದಂದೇ ಥಿಯೇಟರಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿತ್ತು. ಆದರೆ ಅಯೋಧ್ಯೆ ತೀರ್ಪು, ೧೪೪ ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ನವೆಂಬರ್ ೧೭ಕ್ಕೆ ಪ್ಲಾನ್ ಮಾಡಿದೆ ಭರಾಟೆ ತಂಡ.

    ನ.೧೭ರAದು ನರ್ತಕಿಯಲ್ಲಿ ಪ್ರೇಕ್ಷಕರ ಜೊತೆ ಸಂಭ್ರಮಾಚರಣೆ ಇದೆ. ಅಭಿಮಾನಿಗಳಿಂದ ಅನ್ನ ಸಂತರ್ಪಣೆ, ರಕ್ತದಾನಕ್ಕೂ ಪ್ಲಾನ್ ಮಾಡಲಾಗುತ್ತಿದೆ. ಶ್ರೀಲೀಲಾ ನಾಯಕಿಯಾಗಿರುವ ಭರಾಟೆ ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಮೂವರೂ ಸೋದರರು ಒಟ್ಟಿಗೇ ನಟಿಸಿ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದರು. ಭರ್ಜರಿ ಚೇತನ್ ಕುಮಾರ್ ಈಗ ಈ ಚಿತ್ರದಿಂದ ಭರಾಟೆ ಚೇತನ್ ಆಗಿದ್ದಾರೆ.

  • ಭರಾಟೆ ಚೇತನ್ ರೋಲ್‍ಮಾಡೆಲ್ ಯಾರು ಗೊತ್ತೇ..?

    2who is bharaate chethan's role model

    ಮೊದಲ ಚಿತ್ರದ ನಂತರ ಇವರನ್ನು ಪ್ರೇಕ್ಷಕರು ಗುರುತಿಸಿದ್ದು ಬಹದ್ದೂರ್ ಚೇತನ್ ಅಂತಾ. ಅದಾದ ಮೇಲೆ ಭರ್ಜರಿ ಬಂತು. ಭರ್ಜರಿ ಚೇತನ್ ಆದರು. ಈಗ ಭರಾಟೆ ಬರುತ್ತಿದೆ. ಪ್ರೇಕ್ಷಕರು ಆಗಲೇ ಭರಾಟೆ ಚೇತನ್ ಎನ್ನುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಂದ ಹೊಸಬರಲ್ಲಿ ಅಪ್ಪಟ ಕಮರ್ಷಿಯಲ್ ಡೈರೆಕ್ಟರ್ ಆಗಿ ಹೊರಹೊಮ್ಮಿದವರು ಚೇತನ್ ಕುಮಾರ್.

    ಇಷ್ಟಕ್ಕೂ ಚೇತನ್ ಅವರ ಸ್ಫೂರ್ತಿ ಯಾರು ಎಂದರೆ, ಅವರು ಈ ನಾಲ್ಕು ಹೆಸರು ಹೇಳ್ತಾರೆ. ಡಾ.ರಾಜ್‍ಕುಮಾರ್,

    ಪುಟ್ಟಣ್ಣ ಕಣಗಾಲ್, ತ್ರಿವಿಕ್ರಂ ಶ್ರೀನಿವಾಸ್ ಮತ್ತು ರೋಹಿತ್ ಶೆಟ್ಟಿ. ಈ ನಾಲ್ವರ ವಿಶೇಷವೇನು ಗೊತ್ತೇ.. ಇವರು ಒಳ್ಳೊಳ್ಳೆಯ ಸಿನಿಮಾಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಕೊಟ್ಟು ಗೆದ್ದವರು.

    ಹಾಡು ಮತ್ತು ಡೈಲಾಗ್ ನನ್ನ ಶಕ್ತಿ. ನನ್ನ ಚಿತ್ರದ ಕಥೆಗಳು ಕಮರ್ಷಿಯಲ್ ಆಗಿಯೇ ಇರುತ್ತವೆ. ಆದರೆ, ನನ್ನ ಇಡೀ ಚಿತ್ರವನ್ನು ಕ್ಯಾರಿ ಮಾಡುವುದು ಎಮೋಷನ್ಸ್ ಎನ್ನುತ್ತಾರೆ ಚೇತನ್. ಅಂದಹಾಗೆ ಸುಪ್ರೀತ್ ನಿರ್ಮಾಣದ ಭರಾಟೆ ರಿಲೀಸ್ ಆಗುವ ಮೊದಲೇ ಲಾಭದಲ್ಲಿದೆ. ಶ್ರೀಮುರಳಿ, ಶ್ರೀಲೀಲಾ ಜೋಡಿಯಾಗಿರೋ ಚಿತ್ರದಲ್ಲಿ ಸಾಯಿಕುಮಾರ್ ಬ್ರದರ್ಸ್ ವಿಲನ್ ಆಗಿರುವುದು ವಿಶೇಷ.

  • ಭರಾಟೆ ಟ್ರೇಲರ್ ಲಾಂಚ್ : ಅತಿಥಿಗಳ ಭರಾಟೆಯೋ ಭರಾಟೆ

    bharaate trailer launch event has big celebrity list

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ಪ್ರತಿ ಹಂತದಲ್ಲೂ ಬೊಂಬಾಟ್ ಸದ್ದು ಮಾಡ್ತಿದೆ. ಈಗ ಟ್ರೇಲರ್ ಬಿಡುಗಡೆಯಲ್ಲೂ ಭರ್ಜರಿ ಸದ್ದು ಮಾಡ್ತಿದೆ. ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಭರಾಟೆ ಚಿತ್ರದ ಟ್ರೇಲರ್ ಅಕ್ಟೋಬರ್ 1ರಂದು ಲಾಂಚ್ ಆಗುತ್ತಿದೆ. ಆ ದಿನ ಬರುತ್ತಿರುವ ಅತಿಥಿಗಳ ಪಟ್ಟಿ ನೋಡಬೇಕು.

    ನಟರಾದ ದುನಿಯಾ ವಿಜಯ್, ನೀನಾಸಂ ಸತೀಶ್, ಡಾಲಿ ಧನಂಜಯ್, ಧನ್ವೀರ್, ವಿಕ್ಕಿ ವರುಣ್‌, ರಾಜ್‌ ವರ್ಧನ್ ಜೊತೆಯಲ್ಲಿ, ನಿರ್ದೇಶಕರಾದ ಪವನ್‌ ಒಡೆಯರ್‌, ಸಿಂಪಲ್ ಸುನಿ, ಹರಿ ಸಂತೋಷ್‌, ಸತ್ಯ ಪ್ರಕಾಶ್‌ ಇರುತ್ತಾರೆ. ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್‌, ಉಮಾಪತಿ ಶ್ರೀನಿವಾಸ್, ಉದಯ್‌ ಕೆ. ಮೆಹ್ತಾ, ಟಿ.ಆರ್‌. ಚಂದ್ರಶೇಖರ್ ಕೂಡ ಕಾರ್ಯಕ್ರಮಕ್ಕೆ ಹಾಜರಿ ಹಾಕಲಿದ್ದಾರೆ. ವಿಶೇಷ ಅತಿಥಿ ಡಾ.ರಾಜ್ ಮೊಮ್ಮಗ ಯುವರಾಜ್ ಕುಮಾರ್.

    ಸುಪ್ರೀತ್ ನಿರ್ಮಾಣದ ಚಿತ್ರಕ್ಕೆ ಭರ್ಜರಿ ಚೇತನ್ ನಿರ್ದೇಶಕ. ಕಿಸ್ ಖ್ಯಾತಿಯ ಶ್ರೀಲೀಲಾ ನಾಯಕಿ. ರಚಿತಾ ರಾಮ್ ಅವರದ್ದು ಗೆಸ್ಟ್ ರೋಲ್. ಒಟ್ಟಿನಲ್ಲಿ ಭರಾಟೆ ಏನ್ ಮಾಡಿದ್ರೂ ಭರಾಟೆಯೇ..

  • ಭರಾಟೆ ಬೆಡಗಿ.. ಚಿತ್ರರಂಗದ ಎಬಿಡಿ

    bharathe heroine's surprise talents

    ಭರಾಟೆ. ಶ್ರೀಮುರಳಿ-ಚೇತನ್ ಕುಮಾರ್ ಕಾಂಬಿನೇಷನ್ ಸಿನಿಮಾ. ಈ ಚಿತ್ರದ ನಾಯಕಿ ಶ್ರೀಲೀಲಾ. ಅವರಿಗೆ ಇದು 2ನೇ ಸಿನಿಮಾ. ಮೊದಲ ಸಿನಿಮಾ ಕಿಸ್. ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ 2ನೇ ಚಿತ್ರ ಸಿಕ್ಕಿದೆ. ಅದೂ ಶ್ರೀಮುರಳಿ ಜೊತೆ ನಾಯಕಿಯಾಗಿ. ಅದಕ್ಕಿಂತ ಬೆರಗು ಹುಟ್ಟಿಸುವುದು ಶ್ರೀಲೀಲಾರ ಸಾಧನೆಗಳು. 

    ಶ್ರೀಲೀಲಾ ಮೂರೂವರೆ ವರ್ಷದ ಹುಡುಗಿಯಾಗಿದ್ದಾಗಿನಿಂದ ಶಾಸ್ತ್ರೀಯ ಸಂಗೀತ, ನೃತ್ಯದ ತರಬೇತಿ ಪಡೆದಿದ್ದಾರೆ. ಬ್ಯಾಲೆ ನೃತ್ಯದ ತರಬೇತಿಯೂ ಆಗಿದೆ. 8ನೇ ವಯಸ್ಸಿಗೇ ರಂಗ ಪ್ರವೇಶ ಮಾಡಿರುವ ಶ್ರೀಲೀಲಾ, ಸತತ ಎರಡೂವರೆ ಗಂಟೆ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ.

    ಶ್ರೀಲೀಲಾ ಕುದುರೆ ಸವಾರಿ ಚೆನ್ನಾಗಿ ಮಾಡ್ತಾರೆ. ಈಜಿಗೆ ಬಿದ್ದರೆ ಮೀನಿನಂತೆ ಈಜುತ್ತಾರೆ. ರನ್ನಿಂಗ್ ರೇಸ್‍ನಲ್ಲಿ ಕಾಲೇಜಿಗೆ ಹಲವು ಪದಕಗಳನ್ನು ಗೆದ್ದು ಕೊಟ್ಟಿರುವ ಕೀರ್ತಿ ಶ್ರೀಲೀಲಾಗೆ ಇದೆ. ಹಾಕಿ ಸ್ಟಿಕ್ ಆಡಿದರೆ, ಅಲ್ಲಿಯೂ ಸೈ ಎನ್ನಿಸಿಕೊಳ್ತಾರೆ ಶ್ರೀಲೀಲಾ.

    ಇಷ್ಟೆಲ್ಲ ಆಡ್ತಾರೆ ಅಂದ್ರೆ, ಓದಿನಲ್ಲಿ ಡಲ್ ಇರಬೇಕು ಅಂದ್ಕೊಂಡ್ರಾ.. ನೋ ಚಾನ್ಸ್. ಶ್ರೀಲೀಲಾ ಅವರ ಮಾರ್ಕುಗಳಲ್ಲಿ ಅತೀ ಕಡಿಮೆ 100/85. ಶೇ.85ಕ್ಕಿಂತ ಕಡಿಮೆ ಮಾರ್ಕು ತೆಗೆದವರೇ ಅಲ್ಲ ಶ್ರೀಲೀಲಾ.

    ನಿಮಗೆ ಎ.ಬಿ.ಡಿವಿಲಿಯರ್ಸ್ ನೆನಪಾದ್ರಾ..? ಅವರೂ ಹಾಗೇ.. ಕ್ರಿಕೆಟ್, ಆಥ್ಲೆಟ್, ಕುಸ್ತಿ ಪಟು, ರಗ್ಬಿ, ಈಜು, ಬೇಸ್‍ಬಾಲ್, ಸಿಂಗರ್, ಮ್ಯೂಸಿಕ್ ಡೈರೆಕ್ಟರ್ ಎಲ್ಲವೂ ಆಗಿರುವವರು. ಸ್ಸೋ.. ಶ್ರೀಲೀಲಾರನ್ನು ಚಿತ್ರಂಗದ ಎಬಿಡಿ ಅನ್ನಬಹುದೇನೋ..

  • ಭರಾಟೆ ಭರ್ಜರಿ : ಶ್ರೀಮುರಳಿ ಸಂಭಾವನೆ ಎಷ್ಟು ಕೋಟಿ ಆಯ್ತು..?

    did srimurali hike his remunaration after the success of bharaate

    ಭರಾಟೆ, ಭರ್ಜರಿಯಾಗಿಯೇ ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ. ಬಹದ್ದೂರ್, ಭರ್ಜರಿ ನಂತರ ನಿರ್ದೇಶಕ ಚೇತನ್, ಮತ್ತೊಂದು ಹಿಟ್ ಕೊಟ್ಟು ನಕ್ಕಿದ್ದಾರೆ. ನಿರ್ಮಾಪಕ ಸುಪ್ರೀತ್ ಮುಖದಲ್ಲೂ ಗೆಲುವಿನ ನಗು. ಆದರೆ, ಭರಾಟೆ ಹಿಟ್ ಆದ ಮೇಲೆ ಶ್ರೀಮುರಳಿ ಸಂಭಾವನೆ ಹೆಚ್ಚಾಗಿದೆಯಂತೆ.

    ಒಂದು ಮೂಲದ ಪ್ರಕಾರ ಶ್ರೀಮುರಳಿ ಸಂಭಾವನೆ 7 ಕೋಟಿ ಎನ್ನಲಾಗುತ್ತಿದೆ. ಮಾಸ್ ಮತ್ತು ಕ್ಲಾಸ್ ಎರಡೂ ವರ್ಗವನ್ನು ಆಕರ್ಷಿಸುವ ಶ್ರೀಮುರಳಿಗೆ 7 ಕೋಟಿ ಕೊಡೋಕೆ ಸ್ಟಾರ್ ನಿರ್ಮಾಪಕರು ಒಪ್ಪಿದ್ದಾರಂತೆ. ಆದರೆ, ಸದ್ಯದ ಮಟ್ಟಿಗೆ ಇದು ಅಂತೆ ಕಂತೆಯಷ್ಟೇ. ಅಧಿಕೃತವಾಗಿ ಶ್ರೀಮುರಳಿಯಂತೂ ಅನೌನ್ಸ್ ಮಾಡಿಲ್ಲ. ಅಫ್ಕೋರ್ಸ್.. ಸಂಭಾವನೆಯ ಗುಟ್ಟನ್ನು ಯಾವ ಹೀರೋನೂ ಬಿಟ್ಟುಕೊಡಲ್ಲ.

  • ಭರಾಟೆ ಸಸ್ಪೆನ್ಸ್ ಔಟ್

    bharaate suspense revealed

    ಭರಾಟೆ ಚಿತ್ರದಲ್ಲೊಂದು ಸಸ್ಪೆನ್ಸ್ ಥ್ರಿಲ್ ಇದೆ. ಅದು ಯಾವುದು ಎಂದು ನೀವೇ ನೋಡಿ. ಆ ಪಾತ್ರ ಇಡೀ ಚಿತ್ರಕ್ಕೊಂದು ದೈವಿಕ ಕಳೆ ತರಲಿದೆ. ಆ ಹೀರೋಗೆ ನೀವು ಫಿದಾ ಆಗ್ತೀರಿ ಎಂದು ತಲೆಗೆ ಹುಳ ಬಿಟ್ಟಿದ್ದರು ನಿರ್ದೇಶಕ ಚೇತನ್.

    ಆ ನಟ ಇರಬಹುದಾ..? ಈ ಹೀರೋ ಇರಬಹುದಾ..? ಎಂದು ಪ್ರೇಕ್ಷಕರೂ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರು. ಹಾಗೆ ತಲೆಕೆಡಿಸಿಕೊಂಡಿದ್ದವರಿಗೆಲ್ಲ ಹಿತವಾದ ಶಾಕ್ ಕೊಟ್ಟಿದ್ದಾರೆ ಚೇತನ್. ಆ ಸಸ್ಪೆನ್ಸ್ ಹೀರೋ ಯಾರೂ ಅಲ್ಲ... ಸಾಕ್ಷಾತ್ ಶ್ರೀಮುರಳಿಯೇ.

    ರೋರಿಂಗ್ ಸ್ಟಾರ್ ಆಗಿ ಇಡೀ ಚಿತ್ರದಲ್ಲಿ ಅಬ್ಬರಿಸಿ..ಬೊಬ್ಬಿರಿದು.. ನಕ್ಕು ನಗಿಸಿ.. ಕಣ್ಣೀರು ಸುರಿಸಿ ಮನಗೆದ್ದಿರುವ ಶ್ರೀಮುರಳಿ, ಈ ಚಿತ್ರದಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದಾರೆ. ರತ್ನಾಕರ ಎಂಬ ತಾತನ ಪಾತ್ರದಲ್ಲೂ ಮಿಂಚಿದ್ದಾರೆ ಶ್ರೀಮುರಳಿ. ಶ್ರೀಮುರಳಿಯ ದ್ವಿಪಾತ್ರಕ್ಕೆ ಫಿದಾ ಆಗಿರುವುದು ಪ್ರೇಕ್ಷಕ. ಸಿನಿಮಾಗೆ ಬರುತ್ತಿರೋ ರಿಪೋರ್ಟ್ ನೋಡಿ ಖುಷ್ ಆಗಿರುವುದು ನಿರ್ಮಾಪಕ ಸುಪ್ರೀತ್.

  • ಭರಾಟೆಯಲ್ಲಿರೋ ಆ ಇನ್ನೊಬ್ಬ ಸ್ಟಾರ್ ಕಲಾವಿದ ಯಾರು..?

    bharaate's another star is suspense

    ಭರಾಟೆ ಚಿತ್ರದಲ್ಲಿ ಹೀರೋ ಶ್ರೀಮುರಳಿ, ಹೀರೋಯಿನ್ ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ತಾರಾ, ಅವಿನಾಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ.. ಇದ್ದಾರೆ. ಭರ್ಜರಿ ಚೇತನ್ ನಿರ್ದೇಶಕ. ರಚಿತಾ ರಾಮ್ ಅತಿಥಿ ನಟಿಯಾಗಿ ಮಿಂಚು ಹರಿಸಲಿದ್ದಾರೆ. ಇದೆಲ್ಲದರ ಮಧ್ಯೆ ಅತೀ ದೊಡ್ಡ ಸಸ್ಪೆನ್ಸ್ ಒಂದು ಇದೆ.

    ಚಿತ್ರದಲ್ಲಿ ಕನ್ನಡದ ಇನ್ನೊಬ್ಬ ಸ್ಟಾರ್ ನಟ ನಟಿಸಿದ್ದಾರೆ. ಅವರು ತೆರೆ ಮೇಲೆ ಬಂದಾಗ ಪ್ರತಿಯೊಬ್ಬರೂ ಎದ್ದುನಿಂತು ನಮಸ್ಕಾರ ಮಾಡಬೇಕು ಎನ್ನುವಂತಿದೆ. ಹಾಗಿದೆಯಂತೆ ಆ ಪಾತ್ರ. ಅವರಷ್ಟೆ ಅಲ್ಲ, ಒಟ್ಟು ಐವರು ಪಾತ್ರಧಾರಿಗಳು ಸಸ್ಪೆನ್ಸ್ ಎಂಟ್ರಿ ಕೊಡಲಿದ್ದಾರೆ ಎಂದು ಭಯಂಕರ ಸಸ್ಪೆನ್ಸ್ ಹೇಳಿದ್ದಾರೆ ನಿರ್ದೇಶಕ ಚೇತನ್.

    ಅಂದಹಾಗೆ ಆ ದೊಡ್ಡ ನಟ ತೆರೆ ಮೇಲೆ ಬಂದಾಗ ಇಡೀ ಚಿತ್ರಮಂದಿರಕ್ಕೇ ಒಂದು ದೈವಿಕ ಕಳೆ ಬರುತ್ತದೆಯಂತೆ. ಯಾರು ಆ ನಟ.. ಗೆಸ್ ಮಾಡಿ. ಇನ್ನೂ 3 ದಿನ ಟೈಂ ಇದೆ.

  • ಮದಗಜ ನಂತರ ಪ್ರಶಾಂತ್ ನೀಲ್ ಚಿತ್ರ ರೋರಿಂಗ್

    srimurali plans for his next film with prashanth neel

    ರೋರಿAಗ್ ಸ್ಟಾರ್ ಶ್ರೀಮುರಳಿ, ಈಗ ಮದಗಜದಲ್ಲಿ ಬ್ಯುಸಿ. ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಚಿತ್ರ ಟೇಕಾಫ್ ಆಗಿದೆ. ಇದರ ಜೊತೆಯಲ್ಲೇ ಇನ್ನೊಂದು ಹೊಸ ಚಿತ್ರಕ್ಕೆ ಶ್ರೀಮುರಳಿ ರೆಡಿಯಾಗುತ್ತಿದ್ದಾರೆ.

    ನಿರ್ದೇಶಕ ಪ್ರಶಾಂತ್ ನೀಲ್ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಸ್ಕಿçಪ್ಟ್ ಕೆಲಸ ಮುಗಿದಿದೆ. ಈ ಮದಗಜ ಮುಗಿದ ನಂತರ ಆ ಸಿನಿಮಾ ಶುರುವಾಗಲಿದೆ. ಲಕ್ಕಿ ಖ್ಯಾತಿಯ ಡಾ.ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 6-5=2 ಚಿತ್ರತಂಡ, ಈ ಸಿನಿಮಾ ನಿರ್ಮಾಣ ಮಾಡಲಿದೆ.

  • ಮದಗಜ ಮೋಷನ್ ಪೋಸ್ಟರ್ ರೋರಿಂಗ್

    srimurali's madagaja motion poster creates thrill

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಮೊದಲ ಝಲಕ್ ಹೊರಬಿದ್ದಿದೆ. ದೇವರಿಗೆ ಕೈ ಮುಗಿಯುತ್ತಿರುವ ಶ್ರೀಮುರಳಿಯ ಮೋಷನ್ ಪಿಕ್ಚರ್ ಹೊರಬಿಟ್ಟಿದೆ ಮದಗಜ ಚಿತ್ರತಂಡ.

    ಹೆಬ್ಬುಲಿ ಉಮಾಪತಿ ನಿರ್ಮಾಣದ, ಅಯೋಗ್ಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರದ ಮೋಷನ್ ಪಿಕ್ಚರ್‍ಗೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

    ಗಜಗಳ ಪಳಗಿಸೋ ಇವನ ಭುಜಬಲ, ಮದವನು ಕರಗಿಸೋ ಮದಗಜ, ಶತ್ರುವ ಚದುರಿಸೋ ಇವನೇ ಮಹಾಬಲ, ಜಗವನು ಮೆಚ್ಚಿಸೋ ಮದಗಜ ಎಂಬ ಸಾಲುಗಳು ಮದಗಜದ ಟೀಸರ್‍ನ ಪವರ್ ಹೆಚ್ಚಿಸಿವೆ. 

  • ಮದಗಜನ ಜೋಡಿ ಕನ್ನಡತಿಯೇ.. ಯಾರದು..?

    madagaja heroine's name yet to be revealed

    ಮದಗಜ ಚಿತ್ರದ ಟೈಟಲ್ ವಿವಾದ ಕೊನೆಗೂ ಬಗೆಹರಿದಿದೆ. ಮದಗಜ ಚಿತ್ರದ ಫಸ್ಟ್‍ಲುಕ್‍ನ್ನು ಸ್ವತಃ ದರ್ಶನ್ ಅವರೇ ರಿಲೀಸ್ ಮಾಡಿ, ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಅದು ಗೆಳೆತನಕ್ಕೆ, ಶ್ರೀಮುರಳಿ ಹುಟ್ಟುಹಬ್ಬಕ್ಕೆ ದರ್ಶನ್ ನೀಡಿರುವ ಕಾಣಿಕೆ. ಮದಗಜ ಚಿತ್ರದ ನಿರ್ಮಾಪಕ ಉಮಾಪತಿ. ಒಂದಲ್ಲ..ಎರಡಲ್ಲ.. ಚಿತ್ರದ ನಂತರ ಉಮಾಪತಿ ನಿರ್ಮಿಸುತ್ತಿರುವ ಸಿನಿಮಾ ಮದಗಜ. ಅಯೋಗ್ಯ ನಂತರ ಮಹೇಶ್ ನಿರ್ದೇಶಿಸುತ್ತಿರುವ ಸಿನಿಮಾ ಮದಗಜ. ಸಂಕ್ರಾಂತಿ ನಂತರ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

    ಜನವರಿ 15ಕ್ಕೆ ಮದಗಜ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ನಾರ್ವೆ, ಜಾರ್ಜಿಯಾಗಳಲ್ಲಿ ಶೇ.40ರಷ್ಟು ಶೂಟಿಂಗ್. ರವಿಶಂಕರ್ ಮತ್ತು ಜಗಪತಿ ಬಾಬು ಚಿತ್ರದ ವಿಲನ್‍ಗಳು. ಅರ್ಜುನ್ ಜನ್ಯ ಮ್ಯೂಸಿಕ್, ಶ್ರೀಶ ಕ್ಯಾಮೆರಾ.. ಹೀಗೆ ಬಹುತೇಕ ಎಲ್ಲವೂ ಫಿಕ್ಸ್. 

    ನಾಯಕಿಯೂ ಫಿಕ್ಸ್. ಆದರೆ ಹೆಸರು ಹೇಳುತ್ತಿಲ್ಲ. ಕನ್ನಡದ ಬಹುಬೇಡಿಕೆಯ ನಟಿಯೊಬ್ಬರು ಚಿತ್ರದ ನಾಯಕಿಯಾಗುತ್ತಿದ್ದಾರೆ. ಪರಭಾಷೆ ನಟಿಯಂತೂ ಖಂಡಿತಾ ಅಲ್ಲ ಎಂದಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ಯಾರದು.. ಊಹೆ ನಿಮಗೇ ಬಿಟ್ಟಿದ್ದು.

  • ಮದಗಜನ ಮ್ಯಾಚೋ ಲುಕ್

    sri murali's new look for madagaja

    ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆಯ ನಂತರ ಮದಗಜನಾಗುತ್ತಿರುವುದು ಗೊತ್ತಿರೋ ವಿಷಯ. ಈ ಚಿತ್ರಕ್ಕಾಗಿ ಶ್ರೀಮುರಳಿ ಲುಕ್ ಕಂಪ್ಲೀಟ್ ಬದಲಾಗಿದೆ. ಮದಗಜ ಚಿತ್ರದಲ್ಲಿ ಮುರಳಿ ಮ್ಯಾಚೋ ಲುಕ್ಕಿನಲ್ಲಿ ಕಂಗೊಳಿಸಲಿದ್ದಾರೆ.

    ಇತ್ತೀಚೆಗೆ ಉದ್ದ ಕೂದಲು, ಗಡ್ಡದಲ್ಲಿ ಮಿಂಚಿದ್ದ ಶ್ರೀಮುರಳಿಯ ಗಡ್ಡ ಮತ್ತು ಕೂದಲು ಎರಡಕ್ಕೂ ಕತ್ತರಿ ಹಾಕಿಸಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ಉಮಾಪತಿ ನಿರ್ಮಾಣದ ಮದಗಜ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಜನವರಿಯಲ್ಲಿ ಶೂಟಿಂಗ್ ಶುರುವಾಗಲಿದೆ.

  • ಮದಗಜನಿಗೆ ನಟಸಾರ್ವಭೌಮನ ಚೆಲುವೆ

    anupama pairs opposite sri murali

    ನಟಸಾರ್ವಭೌಮ ಚಿತ್ರದಲ್ಲಿ ಇಷ್ಟಗಲ ಕನ್ನಡಕ ಹಾಕಿಕೊಂಡು ಕಣ್ಣಲ್ಲೇ ನಗುವನ್ನು ತುಳುಕಿಸಿ ಮೋಡಿ ಮಾಡಿದ್ದ ಚೆಲುವೆ ಅನುಪಮಾ ಪರಮೇಶ್ವರನ್. ಪುನೀತ್ ಜೊತೆ ತಾಜಾ ಸಮಾಚಾರ ಹೇಳಿದ್ದ ಹುಡುಗಿ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಮದಗಜ ಚಿತ್ರದ ಮೂಲಕ.

    ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಹೀರೋಯಿನ್ ಆಗಿ ಅನುಪಮಾ ಪರಮೇಶ್ವರನ್ ಫೈನಲ್ ಆಗಿದ್ದಾರೆ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರ ಮದಗಜ. ಮುಂದಿನ ತಿಂಗಳು ಸೆಟ್ಟೇರುತ್ತಿರುವ ಚಿತ್ರಕ್ಕೆ ಅನುಪಮಾ ಡೇಟ್ಸ್ ನೋಡಿಕೊಂಡು ಪ್ಲಾನ್ ಮಾಡಿಕೊಳ್ಳುತ್ತಿದೆ ಚಿತ್ರತಂಡ.

  • ಮದಗಜನಿಗೆ ಮಹಾನಟಿ..?

    keerthy suresh to act in madaga ?

    ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿಗಾಗಿ ಮದಗಜ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕೀರ್ತಿ ಸುರೇಶ್ ಅವರನ್ನು ಸಂಪರ್ಕಿಸಿದ್ದಾರೆ ಮಹೇಶ್. ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಭೇಟಿಯಾದ ಕೀರ್ತಿ ಸುರೇಶ್ ಅವರ ಬಳಿ ಮಹೇಶ್ `ನಿಮ್ಮ ಜೊತೆ ಸಿನಿಮಾ ಮಾಡುವ ಆಸೆಯಿದೆ' ಎಂದು ಹೇಳಿದ್ದಾರೆ. ಇದಕ್ಕೆ ಕೀರ್ತಿ ಸುರೇಶ್ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕಥೆಯನ್ನು ಮೇಲ್ ಮಾಡಿ, ತಮ್ಮ ತಾಯಿಯ ಜೊತೆ ಮಾತನಾಡುವಂತೆ ಹೇಳಿದ್ದಾರಂತೆ ಕೀರ್ತಿ ಸುರೇಶ್. ನನಗೆ ಭಾಷೆಯ ಗಡಿ ಇಲ್ಲ. ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿರಬೇಕು ಅಷ್ಟೆ ಎಂದಿದಾರಂತೆ ಕೀರ್ತಿ ಸುರೇಶ್. ಇದನ್ನೆಲ್ಲ ಖುಷಿಯಿಂದ ಹೇಳಿಕೊಂಡಿದ್ದಾರೆ ಮಹೇಶ್.

    ಅಂದಹಾಗೆ ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಕನ್ನಡದಲ್ಲಿ ಸಮಯದ ಗೊಂಬೆ ಚಿತ್ರದಲ್ಲಿ ನಟಿಸಿದ್ದರು. ಹೆಬ್ಬುಲಿ ಉಮಾಪತಿ ನಿರ್ಮಾಣದ ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪುರಸ್ಕøತಿ ಮಹಾನಟಿ ಕೀರ್ತಿ ಸುರೇಶ್ ಕನ್ನಡಕ್ಕೆ ಬರುತ್ತಾರಾ..? ನಿರೀಕ್ಷೆಯಂತೂ ಜೋರಾಗಿದೆ. 

  • ಮದಗಜನಿಗೆ ಸಿಎಂ ಬೊಮ್ಮಾಯಿ ಬಹುಪರಾಕ್

    madagaja image

    ಮದಗಜ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಇಲ್ಲಿ ಜೊತೆಯಾಗಿರುವ ಎಲ್ಲರದ್ದೂ ಹಿಂದಿನ ಚಿತ್ರಗಳಲ್ಲಿರೋದು ಗೆಲುವಿನ ಇತಿಹಾಸ. ನಿರ್ಮಾಪಕ ಉಮಾಪತಿ ಶ್ರೀನಿವಾಸ್`ಗೆ ರಾಬರ್ಟ್, ಶ್ರೀಮುರಳಿಗೆ ಭರಾಟೆ, ಅಯೋಗ್ಯ ಮಹೇಶ್ ಕುಮಾರ್‍ಗೆ ಅಯೋಗ್ಯ, ಅಶಿಕಾ ರಂಗನಾಥ್`ಗೆ ರ್ಯಾಂಬೋ 2 ಮತ್ತು ಇತ್ತೀಚಿನ ಪಟಾಕಿ ಪೋರಿಯೋ.. ಹಿಟ್ ಸಾಂಗು.. ಎಲ್ಲವೂ ಮತ್ತೊಮ್ಮೆ ರಿಪೀಟ್ ಆಗಲಿ ಎಂದು ಬಯಸುತ್ತಿರುವ ಚಿತ್ರ ಮದಗಜ. ಡಿಸೆಂಬರ್ 3ಕ್ಕೆ ರಿಲೀಸ್ ಆಗುತ್ತಿದ್ದು, ಚಿತ್ರದ ಟ್ರೇಲರ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.

    ಚಿತ್ರದ ಟ್ರೇಲರ್ ನೋಡಿದರೆ ಹಾಲಿವುಡ್ ರೇಂಜ್‍ನಲ್ಲಿದೆ. ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಸಿನಿಮಾ ಅನಿಸುತ್ತಿದೆ. ಚಿತ್ರ ರಿಲೀಸ್ ಆದಮೇಲೆ ಖಂಡಿತಾ ನೋಡುತ್ತೇನೆ. ಶ್ರೀಮುರಳಿಗೆ ಶುಭವಾಗಲಿ ಎಂದು ಹಾರೈಸಿದರು ಬೊಮ್ಮಾಯಿ.

    madagaja_pre_event_21.jpg

    ಅಪ್ಪು ಇಲ್ಲದ ನೋವನ್ನು ಎದೆಯಲ್ಲಿ ಹೊತ್ತುಕೊಂಡೇ ಮಾತನಾಡಿದ ಶ್ರೀಮುರಳಿ ಮಾಮ ಇಲ್ಲ ಅನ್ನೋ ನೋವು ನಾವು ಇರುವವರೆಗೂ ಇರುತ್ತೆ. ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಒಂದು ವಿಭಿನ್ನ ಪ್ರಯತ್ನ ಈ ಚಿತ್ರದಲ್ಲಾಗಿದೆ. ಹರಸಿ ಎಂದರು ಶ್ರೀಮುರಳಿ.

    ಸಿಟಿಯಲ್ಲಿಯೇ ಹುಟ್ಟಿ ಬೆಳೆದ ಅಶಿಕಾಗೆ ಚಿತ್ರದ ಪಲ್ಲವಿ ಪಾತ್ರ ಚಾಲೆಂಜಿಂಗ್ ಆಗಿತ್ತಂತೆ. ಕ್ರೆಡಿಟ್ ಎಲ್ಲವೂ ನಿರ್ದೇಶಕರಿಗೆ ಎಂದು ಮಹೇಶ್ ಅವರಿಗೆ ಥ್ಯಾಂಕ್ಸ್ ಹೇಳಿದರು ಅಶಿಕಾ. 

  • ಮಫ್ತಿ ನಂತರ ಮತ್ತೊಮ್ಮೆ ಶಿವಣ್ಣ-ಶ್ರೀಮುರಳಿ ಜೋಡಿ..!

    shivanna lends his voice for srimurali's bharaate

    ಭರಾಟೆ, ಶ್ರೀಮುರಳಿ ನಾಯಕರಾಗಿರುವ ಸಿನಿಮಾ. ಭರ್ಜರಿ ಚೇತನ್ ನಿರ್ದೇಶನದ ಚಿತ್ರಕ್ಕೀಗ ಶಿವಣ್ಣ ಸೇರಿಕೊಂಡಿದ್ದಾರೆ. ಆದರೆ, ತೆರೆಯ ಮೇಲಲ್ಲ. ತೆರೆಯ ಹಿಂದೆ. ಭರಾಟೆ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಶಿವರಾಜ್ ಕುಮಾರ್.

    ಶ್ರೀಮುರಳಿ-ಶ್ರೀಲೀಲಾ ಜೋಡಿಯಾಗಿರುವ ಚಿತ್ರಕ್ಕೆ ಸುಪ್ರೀತ್ ನಿರ್ಮಾಪಕ. ಶ್ರೀಮುರಳಿ ಜೊತೆಗೆ ಶ್ರೀಲೀಲಾ ನಾಯಕಿಯಾಗಿದ್ದು, ಚಿತ್ರದ ಟೀಸರ್, ಹಾಡು ಹವಾ ಸೃಷ್ಟಿಸಿವೆ. ಸುದೀರ್ಘ ಗ್ಯಾಪ್ ನಂತರ ಈ ಚಿತ್ರದ ಮೂಲಕ ಶ್ರೀಮುರಳಿ ಮತ್ತೊಮ್ಮೆ ಘರ್ಜಿಸಲು ಬರುತ್ತಿದ್ದಾರೆ.