` cm basavraj bommaiah, - chitraloka.com | Kannada Movie News, Reviews | Image

cm basavraj bommaiah,

  • 100% ಪ್ರೇಕ್ಷಕರಿಗೆ ಅವಕಾಶ : ಸಿಎಂ ಹೇಳಿದ್ದೇನು?

    100% ಪ್ರೇಕ್ಷಕರಿಗೆ ಅವಕಾಶ : ಶಿವಣ್ಣ ಮನವಿಗೆ ಸಿಎಂ ಹೇಳಿದ್ದೇನು?

    ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶವಿದೆ. ಆದರೆ, 50% ಪ್ರೇಕ್ಷಕರಿಗಷ್ಟೇ ಅವಕಾಶ ಇರುವ ಕಾರಣ ದೊಡ್ಡ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಈ ವಾರ ರಿಲೀಸ್ ಆದ ಕಲಿವೀರ ಚಿತ್ರಕ್ಕೆ ಪರವಾಗಿಲ್ಲ ಎನ್ನುವ ರೆಸ್ಪಾನ್ಸ್ ಇದ್ದರೂ, ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಕಡೆ ತಲೆ ಹಾಕುತ್ತಿಲ್ಲ. ಅದು ಆಗಬೇಕೆಂದರೆ ದೊಡ್ಡ ಚಿತ್ರಗಳು ರಿಲೀಸ್ ಆಗಬೇಕು.

    50% ಭರ್ತಿಗಷ್ಟೇ ಅವಕಾಶ ಇರೋದ್ರಿಂದ ಹೊಸ ಸಿನಿಮಾ ರಿಲೀಸ್ ಆಗುತ್ತಿಲ್ಲ. ದಯವಿಟ್ಟು 100% ಅವಕಾಶ ಕೊಡಿ ಎಂದು ಶಿವಣ್ಣ ನೇತೃತ್ವದ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚೇಂಜಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಎನ್‍ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ, ಕೆ.ಮಂಜು, ಶಾಸಕಿ ತಾರಾ ಅನುರಾಧಾ ಬೊಮ್ಮಾಯಿ ಅವರ ಬಳಿಗೆ ತೆರಳಿದ ನಿಯೋಗದಲ್ಲಿದ್ದರು.

    ತಜ್ಞರ ಸಮಿತಿ ವರದಿ ನೋಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ.  ತಜ್ಞರ ಸಮಿತಿ ಶಿಫಾರಸಿನ ಆಧಾರದಲ್ಲೇ ಕ್ರಮ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಈ ಮಾತು ಕೇಳಿದರೆ, ಬಹುತೇಕ 2021ರಲ್ಲಿ ಸಿನಿಮಾ ಮಂದಿರಗಳಿಗೆ 100% ಅವಕಾಶ ಸಿಗುವ ಸಾಧ್ಯತೆ ಇಲ್ಲ.

  • 100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

    100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

    ಯಾವಾಗ 100% ಪ್ರೇಕ್ಷಕರ ಭರ್ತಿಗೆ ಅವಕಾಶ ಸಿಗುವುದೋ ಕಾಯುತ್ತಿರುವ ಚಿತ್ರರಂಗ ಮತ್ತು ಚಿತ್ರಮಂದಿರ ಮಾಲೀಕರ ಮನವಿಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ. ಎಲ್ಲವನ್ನೂ ಓಪನ್ ಮಾಡಿರುವ ಸರ್ಕಾರ, ಚಿತ್ರಮಂದಿರಗಳನ್ನು ಮಾತ್ರ 50:50ಯಲ್ಲೇ ಇಟ್ಟಿದೆ. ಹಲವು ಬಾರಿ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಸೋಮವಾರ ಮತ್ತೊಮ್ಮೆ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 100% ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.

    ಫಿಲಮ್ ಚೇಂಬರ್ ಅಧ್ಯಕ್ಷ ಜೈರಾಜ್, ನಿರ್ಮಾಪಕ ಸಾ.ರಾ.ಗೋವಿಂದು, ಕಾರ್ಯದರ್ಶಿ ಎನ್.ಎಂ.ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿಯ ನಿಯೋಗ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿತು. ಬಿಡುಗಡೆಗೆ ಕಾದಿರುವ ಚಿತ್ರಗಳು, ಸಿನಿಮಾ ರಿಲೀಸ್ ಲೇಟ್ ಆದರೆ, ಸಂಪೂರ್ಣ ಅವಕಾಶ ಸಿಗದೇ ಇದ್ದರೆ ಎದುರಾಗುವ ಸಮಸ್ಯೆಗಳು, ಆಗುವ ನಷ್ಟ, ಕೊವಿಡ್ ಮಾರ್ಗಸೂಚಿ ಪಾಲನೆಯ ಭರವಸೆ.. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

    ನಿಯೋಗದಲ್ಲಿ ಹೋಗಿ ಬಂದವರ ಪ್ರಕಾರ ಚಿತ್ರಮಂದಿರಗಳಿಗೆ 100% ಅವಕಾಶ ಈ ವಾರ ಅರ್ಥಾತ್ ಈ ಶುಕ್ರವಾರದಿಂದ ಸಿಗಬಹುದು. ಅಕಸ್ಮಾತ್.. ಈ ವಾರ ಸಿಗದೇ ಹೋದರೆ ಫೆಬ್ರವರಿ 2ನೇ ವಾರದಿಂದ 1995 ಪ್ರೇಕ್ಷಕರ ಭರ್ತಿಘೆ ಅವಕಾಶ ಸಿಗುವುದು ಶತಃಸಿದ್ಧ. ಚಿತ್ರಗಳ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದು.

  • 777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

    777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ವಾನ ಪ್ರಿಯರು. ಅವರ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಾಗ ಅವರು ಮಗುವನ್ನೇ ಕಳೆದುಕೊಂಡವರಂತೆ ಕಣ್ಣೀರಿಟ್ಟಿದ್ದನ್ನು ಕರ್ನಾಟಕ ನೋಡಿದೆ. ಇದೇ ಪ್ರೀತಿಯಿಂದ 777 ಚಾರ್ಲಿ ನೋಡಿದ್ದಾರೆ ಸಿಎಂ ಬೊಮ್ಮಾಯಿ. ಬೊಮ್ಮಾಯಿ ಜೊತೆ ಸಚಿವರಾದ ಆರ್.ಅಶೋಕ್, ಡಿ.ಸುಧಾಕರ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್ ಸೇರಿದಂತೆ ಹಲವರು ಸಿನಿಮಾ ನೋಡಿದರು.

    ನನಗೆ ನಾಯಿಗಳೆಂದರೆ ಪ್ರೀತಿ. ನನ್ನ ಮನೆಯಲ್ಲೀಗ ದಿಯಾ ಅನ್ನೋ ಹೆಸರಿನ ನಾಯಿ ಇದೆ. ಸಿನಿಮಾದಲ್ಲಿ ಚಾರ್ಲಿ ಹೇಗೆ ಅಪ್ಪಿಕೊಳ್ಳುತ್ತದೋ.. ನಾನು ಮನೆಗೆ ಹೋದಾಗ ನನ್ನ ದಿಯಾ ಕೂಡಾ ಹಾಗೆಯೇ ಅಪ್ಪಿಕೊಳ್ಳುತ್ತದೆ ಎಂದರು ಬೊಮ್ಮಾಯಿ. ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಕರೆಯನ್ನೂ ಕೊಟ್ಟರು. ನಿರ್ದೇಶಕ ಕಿರಣ್ ರಾಜ್, ರಕ್ಷಿತ್ ಶೆಟ್ಟಿಯವರನ್ನು ಬಾಯ್ತುಂಬಾ ಹೊಗಳಿದರು.

  • 777 ಚಾರ್ಲಿಗೆ ಟ್ಯಾಕ್ಸ್ ಫ್ರೀ : ಮಂಸೋರೆ ವಿರೋಧ

    777 ಚಾರ್ಲಿಗೆ ಟ್ಯಾಕ್ಸ್ ಫ್ರೀ : ಮಂಸೋರೆ ವಿರೋಧ

    777 ಚಾರ್ಲಿ ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ನಿರ್ದೇಶಕ ಮಂಸೋರೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ಟ್ 1978, ನಾತಿಚರಾಮಿಯಂತಾ ಚಿತ್ರಗಳನ್ನು ಕೊಟ್ಟಿರುವ ಮಂಸೋರೆ ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಇಷ್ಟು.

    ಈ ಹಿಂದೆ ರಾಜ್ಯ ಸರ್ಕಾರ ಕನ್ನಡದ ಎಲ್ಲ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿತ್ತು. ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಿರಬೇಕು ಎಂಬ ಷರತ್ತಿನ ಮೇರೆಗೆ ಇದ್ದ ಅನುಕೂಲ ಅದು. ಅದಕ್ಕೂ ಮುನ್ನ ರಾಮಕೃಷ್ಣ ಹೆಗಡೆ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ತೆರಿಗೆ ವಿಧಿಸುವ ನಿರ್ಧಾರ ಮಾಡಿದ್ದಾಗ ಡಾ.ರಾಜ್ ಕುಮಾರ್ ವಿರೋಧಿಸಿದ್ದರು. ಚಿತ್ರರಂಗವನ್ನೇ ತೊರೆದು ಹಳ್ಳಿಯಲ್ಲಿ ನೆಲೆಸುವ ನಿರ್ಧಾರ ತೆಗೆದುಕೊಂಡಿದ್ದರು. ಆಗ ಖುದ್ದು ಹೆಗಡೆಯವರೇ ರಾಜ್ ಅವರ ಮನವೊಲಿಸಿ, ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರು. ಈಗಲೂ ಅಷ್ಟೆ, ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ಜಿಎಸ್‍ಟಿ ಹೆಸರಲ್ಲಿ ಹೇರಿರುವುದು ನಿಮ್ಮದೇ ಬಿಜೆಪಿ ಸರ್ಕಾರ. ಈಗ ವಿನಾಯಿತಿ ಘೋಷಿಸೋದ್ಯಾಕೆ? ಕೇವಲ ಒಂದು ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸುವುದು ಸರಿಯಲ್ಲ. ಈ ಹಿಂದೆ ನೀವು ಅನ್ಯಭಾಷೆಯ ಚಿತ್ರಕ್ಕೂ ತೆರಿಗೆ ವಿನಾಯಿತಿ ನೀಡಿದ ನೆನಪು ಇದೆ. (ಕಾಶ್ಮೀರ್ ಫೈಲ್ಸ್)

    ಕನ್ನಡದಲ್ಲಿ ಒಳ್ಳೆಯ ಮೌಲ್ಯ ಸಾರುವ ಹಲವು ಚಿತ್ರಗಳು ಬರುತ್ತಿವೆ. ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯಾ ವೈಕುಂಠಕೆ, ಅಮೃತಮತಿ, ನೀಲಿ ಹಕ್ಕಿ.. ಹೀಗೆ ಹಲವು ಚಿತ್ರಗಳಿವೆ. ಎಲ್ಲ ಚಿತ್ರಗಳಿಗೂ ಇದೇ ಅನೂಕೂಲ ನೀಡಿ. ತೆರಿಗೆ ವಿಧಿಸುವುದು ಅಣ್ಣಾವ್ರ ಆಶಯಕ್ಕೆ ವಿರುದ್ಧ.

    ಇದಿಷ್ಟೂ ಮಂಸೋರೆ ಅವರ ಪತ್ರದ ಸಾರಾಂಶ. 

  • Sudeep To Join BJP?

    Sudeep To Join BJP?

    There is intense speculation in State politics that Kannada star Kichcha Sudeep will join the BJP. Chitraloka spoke to the close associates of the Star on Tuesday night to confirm the issue but there is no clarity on it. In all likelihood the decision will be taken on Wednesday morning after a meeting between Sudeep, his close associates and the party's representatives at the actor's home.

    For the last few days political circles have been rife about this issue. It is learnt that the BJP was very keen on roping in Sudeep to its fold and also wants him to contest the upcoming Assembly elections scheduled in May. The party is said to have offered him a ticket to contest from a seat either in Chitradurga or Davangere. If Sudeep joins BJP and contests he will be the biggest star since Ambareesh to join politics in Karnataka. 

    Close associates of Sudeep Chitraloka confirmed the Wednesday morning meeting. If the meeting is successful, the actor will join the BJP officially on Wednesday or Thursday. However, sources in the BJP say the actor is likely to join the party on April 9 when Prime Minister Narendra Modi will visit Karnataka to participate in an official function to commemorate the 50th anniversary of Project Tiger. A party event is likely to be organized to officially induct Sudeep to the party. It may be recalled that Ambaresh had joined the Congress party in the presence of then Prime Minister PV Narasimha Rao who was visiting Bengaluru. 

    All end to the speculation about Sudeep joining BJP will be cleared by about 11.30 AM today.

  • ಏಕ್ ಲವ್ ಯಾ ನೋಡಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಏಕ್ ಲವ್ ಯಾ ನೋಡಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಏಕ್ ಲವ್ ಯಾ ಚಿತ್ರದ ಪ್ರಚಾರ ಜೋರಾಗುತ್ತಿದೆ. ನಿರೀಕ್ಷೆಯಂತೆಯೇ ಪ್ರೇಮ್ ತಮ್ಮ ಚಿತ್ರವನ್ನು ಅದ್ಧೂರಿಯಾಗಿ ಪ್ರಮೋಟ್ ಮಾಡುತ್ತಿದ್ದಾರೆ.  ಈ ಬಾರಿ ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತೆರೆಗೆ ತರುತ್ತಿರೋದು ತಮ್ಮ ಪತ್ನಿ ರಕ್ಷಿತಾ ಅವರ ತಮ್ಮ ರಾಣಾನನ್ನು. ಹೀಗಾಗಿ ಚಿತ್ರದ ಬಗ್ಗೆ ಅದ್ಧೂರಿ ಪ್ರಚಾರ ಕೈಗೊಂಡಿದ್ದಾರೆ.

    ಚಿತ್ರದ ಪ್ರೀಮಿಯರ್ ಷೋವನ್ನು ಫೆಬ್ರವರಿ 23ರಂದು ಇಟ್ಟುಕೊಂಡಿದ್ದಾರೆ. 24ಕ್ಕೆ ರಾಜ್ಯಾದ್ಯಂತ ರಿಲೀಸ್. ಆ ಪ್ರೀಮಿಯರ್ ಶೋಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ  ಪ್ರೇಮ್. ಜೊತೆಗೆ ಎಂದಿನಂತೆ ಪ್ರೇಮ್ ಅವರ ಚಿತ್ರರಂಗದ ಬಳಗ ಇರಲಿದೆ.

    ಏಕ್ ಲವ್ ಯಾ ಚಿತ್ರಕ್ಕೆ ರಾಣಾ ಹೀರೋ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಹೀರೋಯಿನ್ಸ್. ರಕ್ಷಿತಾ ಪ್ರೇಮ್ ನಿರ್ಮಾಪಕಿ. ಪ್ರೇಮ್ ಅವರೇ ಹೇಳಿರೋ ಹಾಗೆ ಚಿತ್ರದ ಇನ್ನೊಬ್ಬ ಹೀರೋ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಪ್ರೇಮ್ ಆಹ್ವಾನ ನೀಡಿದ್ದಾರೆ.

  • ಕಾಡಿನ ರಕ್ಷಣೆಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ..!

    ಕಾಡಿನ ರಕ್ಷಣೆಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ..!

    ಕಾಂತಾರ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್, ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದೈವನರ್ತಕರಿಗೆ ಮತ್ತು ಅವರ ಕುಟುಂಬಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ, ಜನಪದ ಕಲೆಗಳು ಮತ್ತು ಜನಪದರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಕಾಡಿನ ಪಕ್ಕದಲ್ಲೇ ವಾಸಿಸುವ ಅನೇಕರಿಗೆ ಏನೆಲ್ಲ ಕಷ್ಟ ಪಡುತ್ತಿದ್ದಾರೆ, ಅವರಿಗೆ ಏನೆಲ್ಲ ಪರಿಹಾರ ನೀಡಬಹುದು ಹಾಗೂ ಕಾಡು ಪ್ರಾಣಿಗಳಿಂದ ಯಾವ ರೀತಿಯಲ್ಲಿ ತೊಂದರೆ ಆಗುತ್ತಿದೆ ಮತ್ತು ಅರಣ್ಯ ಸಿಬ್ಬಂದಿ ಎಷ್ಟೆಲ್ಲ ಸಂಕಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ. ಸಿಎಂ ಕೂಡ ಕೂಡಲೇ ಅವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರಂತೆ.

    ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, 'ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ. ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

    ಅಂದಹಾಗೆ ರಿಷಬ್ ಶೆಟ್ಟಿ ಸದ್ಯಕ್ಕೆ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಹಭಾಗಿತ್ವದ ಸೇವ್ ವೈಲ್ಡ್ ಲೈಫ್ ಅಬಿಯಾನದ ರಾಯಭಾರಿಯಾಗಿದ್ದಾರೆ. ಕಾಂತಾರ 2 ಚಿತ್ರದ ಪ್ರಿ-ಪ್ರೊಡಕ್ಷನ್ ಮಧ್ಯೆಯೇ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲೂ ಪಾಲ್ಗೊಳ್ಳುತ್ತಿದ್ದಾರೆ.

  • ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ

    ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ

    ಪುನೀತ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿ. ಪರಿಸರ ಕಾಳಜಿಯಿಂದ ನಿರ್ಮಿಸಿದ ಗಂಧದ ಗುಡಿಗೆ ಎಲ್ಲ ರೀತಿಯ ಟ್ಯಾಕ್ಸ್ ಫ್ರೀ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ..

    ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಡೆಯ ಸಿನಿಮಾ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

    ಇಂತಹದ್ದನ್ನೆಲ್ಲ ಅಪ್ಪು ಮಾತ್ರ ಮಾಡೋಕೆ ಸಾಧ್ಯ. ನಿಸರ್ಗದ ಬಗ್ಗೆ ಪ್ರಕೃತಿ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅತ್ಯಗತ್ಯ ಅನಿವಾರ್ಯತೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪುನೀತ್ ಗಂಧದ ಗುಡಿಯಲ್ಲಿ ಮಾಡಿದ್ದಾರೆ ಎಂದು ಹೊಗಳಿದರು ಬೊಮ್ಮಾಯಿ.

    ಗಂಧದ ಗುಡಿ ಚಿತ್ರಕ್ಕಾಗಿ ಪುನೀತ್ ಕಾಡು ಮೇಡು ಸುತ್ತಿದ್ದಾರೆ. ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಇಡೀ ಕರುನಾಡಿನ ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಇದೊಂದು ವಿಶೇಷ ಪ್ರಯೋಗವೂ ಹೌದು. ಸಚಿನ್ ತೆಂಡೂಲ್ಕರ್ ಕುರಿತ ಡಾಕ್ಯುಮೆಂಟರಿ ಬಿಟ್ಟರೆ ಮಿಕ್ಕಾವ ಡಾಕ್ಯುಮೆಂಟರಿಯೂ ಸಿನಿಮಾ ರೀತಿ ಥಿಯೇಟರಿಗೆ ಬಿಡುಗಡೆಯಾಗಿಲ್ಲ. ಅಂತಹದ್ದೊಂದು ವಿಶೇಷ ಪ್ರಯೋಗ ಮಾಡಲು ಹೊರಟಿದ್ದರು ಪುನೀತ್. ಪುನೀತ್ ಅವರ ಆ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಅಶ್ವಿನಿ ಅವರೊಂದಿಗೆ ಇಡೀ ಕರುನಾಡಿನ ಚಿತ್ರರಂಗವೇ ನಿಂತಿದ್ದು ಇದೇ 28ರಂದು ರಿಲೀಸ್ ಆಗುತ್ತಿದೆ.

    ಸಾಕ್ಷ್ಯಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು 4 ಹಾಡುಗಳೂ ಇವೆ. ಡಾ.ರಾಜ್ ಕುಮಾರ್ ಅವರ ಗಂಧದ ಗುಡಿಯ ನಾವಾಡುವ ನುಡಿಯೇ ಕನ್ನಡ ನುಡಿ ಹಾಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ 3 ಹಾಡುಗಳಿವೆ. ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದು.

  • ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

    ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

    ಗುರು ಶಿಷ್ಯರು ಚಿತ್ರ ಇಷ್ಟವಾಗೋಕೆ ಹಲವು ಕಾರಣಗಳಿವೆ. ಚೆಂದದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ.. ಶರಣ್, ನಿಶ್ವಿಕಾ ಹಾಗೂ 12 ಹುಡುಗರ ಗತ್ತು ಗೈರತ್ತಿನ ಅಭಿನಯ.. ಇವೆಲ್ಲವನ್ನೂ ಮೀರಿ ಇಷ್ಟವಾಗಿದ್ದು ಖೋಖೋ ಆಟದ ಹಿನ್ನೆಲೆಯ ಕಥೆ ಇರುವ ಕಾರಣಕ್ಕೆ. ಚಿತ್ರವನ್ನು ಪ್ರೇಕ್ಷಕರು ಕೈಚಾಚಿ ಮನದುಂಬಿ ಅಪ್ಪಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಇಂಥಾದ್ದೊಂದು ಚಿತ್ರ ಕನ್ನಡದಲ್ಲಿ ಬರಬೇಕಿತ್ತು. ಇನ್ನು ಮುಂದೆಯೂ ಇಂತಹ ಚಿತ್ರಗಳು ಬರಲಿ ಎಂದು ಹಾರೈಸುತ್ತಿದ್ದಾರೆ.

    ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಶರಣ್, ನಿಶ್ವಿಕಾ  ನಾಯ್ಡು, ತರುಣ್ ಸುಧೀರ್ ಎಲ್ಲರೂ ಮೆಚ್ಚುಗೆಯ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ. ಚಿತ್ರ ಬಿಡುಗಡೆ ದಿನವೇ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಿಗೆ ತೋರಿಸುವುದಾಗಿ ಶರಣ್ ಹೇಳಿಕೊಂಡಿದ್ದರು. ಇದೀಗ ಶರಣ್ ಖುದ್ದು ಮುಖ್ಯಮಂತ್ರಿಗಳನ್ನು  ಭೇಟಿ ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.

    ಸಿನಿಮಾ ಬಗ್ಗೆ ಕೇಳಿದ್ದೇನೆ. ಖೋಖೋ ಆಟವನ್ನು ಹೈಲೈಟ್ ಮಾಡಿ ತೋರಿಸಿದ್ದೀರಂತೆ. ಖಂಡಿತಾ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡುತ್ತೇನೆ. ಇಂತಹ ಇನ್ನಷ್ಟು ಚಿತ್ರಗಳು ಬರಲಿ ಎಂದಿದ್ದಾರೆ ಬಸವರಾಜ ಬೊಮ್ಮಾಯಿ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಮ್ಮ ಚಿತ್ರತಂಡದ ಭೇಟಿಗೆ ಸಮಯ ನೀಡಿದ ಮುಖ್ಯಮಂತ್ರಿಗಳಿಗೆ ನಟ ಶರಣ್, ತರುಣ್ ಸುಧೀರ್, ಜಡೇಶ್ ಕುಮಾರ್ ಹಂಪಿ ಹಾಗೂ ಗುರು ಶಿಷ್ಯರು ಚಿತ್ರತಂಡ ಧನ್ಯವಾದ ಅರ್ಪಿಸಿದೆ.

  • ಚಿತ್ರರಂಗಕ್ಕೆ ಬಜೆಟ್`ನಲ್ಲಿ ಮಿಠಾಯಿ ಕೊಟ್ಟರಾ ಬೊಮ್ಮಾಯಿ?

    ಚಿತ್ರರಂಗಕ್ಕೆ ಬಜೆಟ್`ನಲ್ಲಿ ಮಿಠಾಯಿ ಕೊಟ್ಟರಾ ಬೊಮ್ಮಾಯಿ?

    ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಈ ಅವಧಿಯ ಕಟ್ಟಕಡೆಯ ಬಜೆಟ್ ಮಂಡಿಸಿದ್ದಾರೆ. ಇನ್ನೇನು ತಿಂಗಳಲ್ಲಿ ಘೋಷಣೆಯಾಗಲಿರೋ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅವರದ್ದೇ ಸರ್ಕಾರ. ಗೆಲ್ಲದೇ ಹೋದರೆ, ಕಾಂಗ್ರೆಸ್‍ನವರೋ.. ಜೆಡಿಎಸ್‍ನವರೋ.. ಅಥವಾ ಎರಡು ಪಕ್ಷಗಳು ಸೇರಿಯೋ.. ಯಾವುದೋ ಒಂದು ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ ಈ ಬಜೆಟ್ಟಿನಲ್ಲಿ ರಾಜ್ಯ ಸರ್ಕಾರ ಚಿತ್ರರಂಗಕ್ಕೆ ಏನಾದರೂ ಕೊಡಲಿದ್ದಾರೆ ಎಂಬ ನಿರೀಕ್ಷೆಯಂತೂ ಇತ್ತು. ಅಂಬರೀಷ್, ಪುನೀತ್ ರಾಜ್`ಕುಮಾರ್ ಸ್ಮಾರಕಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದರು ಬೊಮ್ಮಾಯಿ. ಚಿತ್ರರಂಗದ ಹಲವು ಸಮಸ್ಯೆಗಳಿಗೆ ಸರ್ಕಾರದ ಬಜೆಟ್`ನಲ್ಲಿ ಪರಿಹಾರ ಸಿಗುವ ಭರವಸೆಯಂತೂ ಇತ್ತು. ಸಿನಿಮಾ ಮಂದಿಯ ಜೊತೆ ಬೊಮ್ಮಾಯಿಯವರ ಒಡನಾಟ ಬೇರೆ ಸಿಎಂಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇದೆ. ಹೀಗಾಗಿಯೇ ನಿರೀಕ್ಷೆಯೂ ಹೆಚ್ಚಿನದಾಗಿಯೇ ಇತ್ತು. ಆದರೆ ಚಿತ್ರರಂಗಕ್ಕೆ ಸಿಕ್ಕಿದ್ದು ಎರಡೇ ಎರಡು ಘೋಷಣೆ.

    ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯದ ಖಿieಡಿ-2 ನಗರಗಳಲ್ಲಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಚಿತ್ರಮಂದಿರಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಹಿಂದೆಯೇ ಜನತಾ ಚಿತ್ರಮಂದಿರಗಳ ನಿರ್ಮಾಣದ ಬಗ್ಗೆ ಹಲವು ಬಾರಿ ಪ್ರಸ್ತಾಪವಾಗಿದ್ದರೂ, ಅಷ್ಟೇನೂ ಪರಿಣಾಮಕಾರಿಯಾಗಿ ಆ ಬಗ್ಗೆ ಕೆಲಸಗಳು ಆಗಿರಲಿಲ್ಲ. ಇದೀಗ ರಾಜ್ಯ ಸರ್ಕಾರವು ಮಿನಿ ಥಿಯೇಟರ್ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಪ್ರೋತ್ಸಾಹ ಎಂದು ಬಜೆಟ್`ನಲ್ಲಿ ಹೇಳಲಾಗಿದ್ದರೂ, ಕಾರ್ಯಯೋಜನೆ ರೂಪದಲ್ಲಿ ಇಲ್ಲ. ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿದೆ ಈ ಘೋಷಣೆ.

    ಆಟೋ ರಾಜ ಎಂದೇ ಜನಪ್ರಿಯರಾಗಿದ್ದವರು ನಟ ಶಂಕರ್ ನಾಗ್. ಈಗಲೂ ಕೂಡ ಪ್ರತಿಯೊಂದು ಆಟೋ ನಿಲ್ದಾಣದಲ್ಲ ಅವರ ಫೋಟೋ ಇದ್ದೇ ಇರುತ್ತದೆ. ಆಟೋಗಳ ಮೇಲೆ ಅವರ ಫೋಟೋಗಳನ್ನು ಹಾಕಿರುತ್ತಾರೆ. ಅಷ್ಟೊಂದು ಪ್ರೀತಿಯಿಂದ ಆಟೋ ಚಾಲಕರು ಶಂಕರ್ ನಾಗ್ ಅವರನ್ನು ಆರಾಧಿಸುತ್ತಾರೆ. ಇದೀಗ ರಾಜ್ಯ ಸರ್ಕಾರವು ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಹೊರಟಿದ್ದು, ಅದಕ್ಕೆ ಶಂಕರ್ ನಾಗ್ ಅವರ ಹೆಸರನ್ನೇ ಇರಿಸಿರುವುದು ವಿಶೇಷ. 'ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ ಖ್ಯಾತ ನಟರಾದ ದಿವಂಗತ ಶಂಕರ್ನಾಗ್ ರವರ ಹೆಸರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು..' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಮತ್ತೊಮ್ಮೆ ಇದೂ ಕೂಡಾ ಘೋಷಣೆಗೆ ಸೀಮಿತವಾಗಿದೆ. ಎಲ್ಲಿ, ಎಷ್ಟು ಕಡೆ, ಯಾವ್ಯಾವ ನಗರ/ಪಟ್ಟಣಗಳಲ್ಲಿ ಎಂಬ ಉಲ್ಲೇಖವೂ ಇಲ್ಲ. ಬಜೆಟ್ ಪುಸ್ತಕದಲ್ಲಿ ಒಟ್ಟಾರೆಯಾಗಿ ನಾಲ್ಕು ಲೈನಿನಲ್ಲಿ ಇಡೀ ಚಿತ್ರರಂಗ ಮುಗಿದು ಹೋಗುತ್ತದೆ.

    ಚಿತ್ರನಗರಿ ಸೇರಿದಂತೆ ಚಿತ್ರರಂಗದ ನಿರೀಕ್ಷೆಗಳು ದೊಡ್ಡದಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಕೂಡಾ ಬೆಂಗಳೂರಿಗೆ ಬಂದಿದ್ದಾಗ ಚಿತ್ರರಂಗದ ಗಣ್ಯರೊಂದಿಗೆ ಚರ್ಚಿಸಿದ್ದರು. ಇದೆಲ್ಲದರ ಫಲಿತಾಂಶ ಬಜೆಟ್`ನಲ್ಲಿ ಮೂಡಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಅದಾವುದೂ ಆಗಿಲ್ಲ. ಒಟ್ಟಿನಲ್ಲಿ ಎರಡು ಘೋಷಣೆ ಬಂದಿವೆ. ಮುಂದಿನ ಬಜೆಟ್`ನಲ್ಲಿಯೂ ಈ ಘೋಷಣೆಗಳು ಅಕ್ಷರಶಃ ಹೀಗೆಯೇ ಇದ್ದರೂ ಆಶ್ಚರ್ಯ ಪಡಬೇಕಿಲ್ಲ.

  • ನಿರ್ಮಾಪಕರ ಮೀಟಿಂಗ್ ಇಂಪ್ಯಾಕ್ಟ್ : ದೊಡ್ಡ ಚಿತ್ರಗಳ ರಿಲೀಸ್‍ಗೆ  ಮುಹೂರ್ತ ಫಿಕ್ಸ್ ಆಯ್ತಾ?

    ನಿರ್ಮಾಪಕರ ಮೀಟಿಂಗ್ ಇಂಪ್ಯಾಕ್ಟ್ : ದೊಡ್ಡ ಚಿತ್ರಗಳ ರಿಲೀಸ್‍ಗೆ  ಮುಹೂರ್ತ ಫಿಕ್ಸ್ ಆಯ್ತಾ?

    ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ, ವರಮಹಾಲಕ್ಷ್ಮಿ ಹಬ್ಬಕ್ಕೇ ರಿಲೀಸ್ ಆಗಬೇಕಿತ್ತು. ಆಗಲಿಲ್ಲ. ಗಣೇಶ ಹಬ್ಬಕ್ಕೂ ಬರಲಿಲ್ಲ. ಆದರೀಗ ಮುಹೂರ್ತ ಫಿಕ್ಸ್ ಮಾಡಿಕೊಂಡಿರೋ ಹಾಗಿದೆ. ಜೊತೆಯಲ್ಲೋ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡಾ ರಿಲೀಸ್ ಡೇಟ್ ಫೈನಲ್ ಮಾಡಿಕೊಂಡಿರೋ ಹಾಗಿದೆ.

    ಶುಕ್ರವಾರದ ಸಿನಿಮಾ ಜಾಹೀರಾತುಗಳಲ್ಲಿ ಎರಡೂ ಚಿತ್ರಗಳು ಈ ರೀತಿಯದ್ದೊಂದು ಹಿಂಟ್ ನೀಡಿವೆ.

    ವಿಶೇಷವೆಂದರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ಭಜರಂಗಿ 2 ನಿರ್ಮಾಪಕ ಜಯಣ್ಣ ಸೇರಿದಂತೆ ಕೆಲವು ನಿರ್ಮಾಪಕರು ಸೆ.21ರಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ್ದರು. ಅದಾದ ನಂತರ ಇಂದು ಅಂದರೆ ಸೆ.24ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಇಂದು ಥಿಯೇಟರ್‍ಗಳಿಗೆ 100% ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.

  • ನೈಟ್ ಕಫ್ರ್ಯೂ ಪ್ರಾಬ್ಲಂ ಸರಿ ಮಾಡುತ್ತಾ ಸರ್ಕಾರ?

    ನೈಟ್ ಕಫ್ರ್ಯೂ ಪ್ರಾಬ್ಲಂ ಸರಿ ಮಾಡುತ್ತಾ ಸರ್ಕಾರ?

    ಥಿಯೇಟರುಗಳು ಓಪನ್ ಆಗಿವೆ. 100% ಭರ್ತಿಗೆ ಅವಕಾಶಗಳೂ ಇವೆ. ಜನರೂ ಥಿಯೇಟರಿಗೆ ಬಂದಿದ್ದಾರೆ. ಹಬ್ಬದ ದಿನ ರಿಲೀಸ್ ಆದ ಸಲಗ ಮತ್ತು ಕೋಟಿಗೊಬ್ಬ 3 ಎರಡೂ ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಆದರೆ.. ಈಗಲೂ ಸಮಸ್ಯೆ ಬಗೆಹರಿದಿಲ್ಲ. ನೈಟ್ ಕಫ್ರ್ಯೂ ಜಾರಿಯಲ್ಲಿದ್ದು, ಥಿಯೇಟರ್ ಮಾಲೀಕರು ಮತ್ತು ಚಿತ್ರಮಂದಿರ ಮಾಲೀಕರನ್ನು ಸಂಕಷ್ಟಕ್ಕೆ ನೂಕಿದೆ.

    ರಾತ್ರಿ 10 ಗಂಟೆ ನಂತರ ನೈಟ್ ಕಫ್ರ್ಯೂ ಜಾರಿಯಲ್ಲಿದೆ. ಹೀಗಾಗಿ ಹಲವೆಡೆ ಸೆಕೆಂಡ್ ಶೋ ಸಾಧ್ಯವಾಗುತ್ತಿಲ್ಲ. ರಾತ್ರಿ 10 ಗಂಟೆ ನಂತರವೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೋಗಳಿರುತ್ತಿದ್ದವು. ನೈಟ್ ಕಫ್ರ್ಯೂನಿಂದಾಗಿ ರಾಜ್ಯದಲ್ಲಿರೋ 60+ ಮಲ್ಟಿಪ್ಲೆಕ್ಸ್‍ಗಳಲ್ಲಿ 10 ಗಂಟೆ ಶೋ ಇಲ್ಲ. 10 ಗಂಟೆ ಶೋಗಳಿದ್ದರೆ ಚಿತ್ರಗಳು 12 ರಿಂದ 13 ಕೋಟಿ ಬ್ಯುಸಿನೆಸ್ ಮಾಡುತ್ತಿದ್ದವು. ನಿರ್ಮಾಪಕರಿಗೆ 2ರಿಂದ 3 ಕೋಟಿ ಲಾಭ ಸಿಗುತ್ತಿತ್ತು. ದಯವಿಟ್ಟು ನೈಟ್ ಕಫ್ರ್ಯೂ ನಿರ್ಬಂಧ ತೆಗೆಯಿರಿ ಎನ್ನುವುದು ನಿರ್ಮಾಪಕರ ಮನವಿ.

    ಮುಖ್ಯಮಂತ್ರಿಗಳು ಬೈ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಇರೋದ್ರಿಂದ ನೇರವಾಗಿ ಮನವಿ ಸಲ್ಲಿಸೋಕೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಮನವಿ ಮಾಡುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು.

  • ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು : ಸಿಎಂ ಬಸವರಾಜ ಬೊಮ್ಮಾಯಿ

    ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು : ಸಿಎಂ ಬಸವರಾಜ ಬೊಮ್ಮಾಯಿ

    ಬಾನದಾರಿಯಲ್ಲಿ ಪುನೀತ್ ಪಯಣ. ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಇಟ್ಟಿದ್ದು ಹೆಸರು. ರಸ್ತೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿವಂಗತ ಡಾ ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಅದ್ಭುತ ಸ್ಮಾರಕ ಮಾಡಲಾಗುವುದು. 'ರೆಬೆಲ್ ಸ್ಟಾರ್' ಅಂಬರೀಷ್ ಸ್ಮಾರಕ ಕಾರ್ಯ ಪೂರ್ಣಗೊಂಡಿದ್ದು, ಅದನ್ನು ಮಾರ್ಚ್ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡುವ ಬಗ್ಗೆ ಕೂಡಾ ಮಾಹಿತಿ ನೀಡಿದರು.

    ನನ್ನ ಆತ್ಮೀಯ ಸ್ನೇಹಿತ ಅಂಬರೀಷ್ ಅವರ ಹೆಸರನ್ನು ರೇಸ್ಕೋರ್ಸ್ ರಸ್ತೆಗೆ ಇಡಲು ತೀರ್ಮಾನಿಸಿದ್ದೇನೆ. ಅವನ ಜೊತೆ ವಾರದಲ್ಲಿ ಏಳೂ ದಿನ ಜೊತೆಗಿರುತ್ತಿದ್ದೆವು. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು.

    ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡುವುದು ಸೂಕ್ತ ಎನಿಸುತ್ತದೆ ಎಂದು ಸಿಎಂ ಹೇಳಿದಾಗ ಕೆಲವು ಸಭಿಕರು ನಕ್ಕರು.ಅದಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ವನಗಬೇಡಿ, ಅಂಬರೀಷ್ ಬಗ್ಗೆ ಗೊತ್ತಿರುವವರು ಇದು ಸರಿಯಾದ ನಿರ್ಧಾರ ಎಂದು ಗುರುತಿಸುತ್ತಾರೆ. ಅವರು ಹೆಚ್ಚು ಸಮಯವನ್ನು ರೇಸ್ಕೋರ್ಸ್ನಲ್ಲಿ ಕಳೆಯುತ್ತಿದ್ದರು, ಅವರು ಕುದುರೆಗಳ ಮಾಲೀಕರೂ ಸಹ ಆಗಿದ್ದರು. ರೇಸ್ಕೋರ್ಸ್ ರಸ್ತೆಗೆ ಗಾಂಧಿ ನಗರವೂ ಹತ್ತಿರ ಇದೆ  ಹಾಗಾಗಿ ಅದೇ ರಸ್ತೆಗೆ ಅಂಬರೀಷ್ ಹೆಸರಿಡುವುದು ಸೂಕ್ತ ಎಂದು ಬೊಮ್ಮಾಯಿ ಸ್ಪಷ್ಟನೆಯನ್ನೂ ಕೊಟ್ಟರು.

    ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಸಂಸದ ತೇಜಸ್ವಿಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜ್ಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.

    ನಟ ಅಭಿಷೇಕ್ ಅಂಬರೀಷ್ ಮಾತನಾಡಿ ರಾಜ್ಯ ಸರ್ಕಾರದ ಸಮ್ಮುಖದಲ್ಲಿ ವಿಷ್ಣುವರ್ಧನ್ ಸ್ಮಾರಕ ಆಗಿದೆ. ಈಗ ಅಪ್ಪು ಹೆಸರನ್ನು ರಸ್ತೆಗೆ ಇಟ್ಟಿದ್ದಾರೆ. ನಮ್ಮ ಅಪ್ಪನ ಸ್ಮಾರಕವೂ ಮುಕ್ತಾಯ ಹಂತದಲ್ಲಿದ್ದು ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.

  • ವಿಷ್ಣುವರ್ಧನ್`ಗೆ ಕರ್ನಾಟಕ ರತ್ನ : ಸಿಎಂ ಬೊಮ್ಮಾಯಿ ಸುಳಿವು

    ವಿಷ್ಣುವರ್ಧನ್`ಗೆ ಕರ್ನಾಟಕ ರತ್ನ : ಸಿಎಂ ಬೊಮ್ಮಾಯಿ ಸುಳಿವು

    ಮೈಸೂರಿನಿನಿಂದ ಹೆಚ್.ಡಿ.ಕೋಟೆಗೆ ಹೋಗುವ ಮಾರ್ಗ ಮಧ್ಯೆ ಹಾಲಾಳು ಎಂಬ ಗ್ರಾಮವಿದೆ. ಅಲ್ಲಿ ಸುಮಾರು 11 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಮಾರಕವಿದು. ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಭವ್ಯ ಮೆರವಣಿಗೆ ನಡೆಸಿದ್ರು. ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗದಿಂದ ಸ್ಮಾರಕ ಸ್ಥಳಕ್ಕೆ ಅಭಿಮಾನಿಗಳು ಬೈಕ್ ಱಲಿ ಮೂಲಕ ತೆರಳಿದ್ರು. ಈ ವೇಳೆ ವಿಷ್ಣುವರ್ಧನ್ ಗೀತೆಗಳಿಗೆ ಫ್ಯಾನ್ಸ್ ಭರ್ಜರಿ ಡ್ಯಾನ್ಸ್ ಮಾಡಿದ್ದು, ಸಾಹಸ ಸಿಂಹನ ಪರ ಜೈಕಾರ ಕೂಗಿ ಸಂಭ್ರಮಿಸಿದ್ರು. ಹಲವು ವರ್ಷಗಳ ನಂತರ ನಮ್ಮ ಆಸೆ ಈಡೇರುತ್ತಿದೆ. ವಿಷ್ಣು ಸ್ಮಾರಕ ಮಾಡಿದ ಸರ್ಕಾರಕ್ಕೆ ಅಭಿನಂದನೆಗಳು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮಿಸಿದರು.

    ಒಟ್ಟು 2.75 ಎಕರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗಿದೆ. . ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ .ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ.ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ. ಆಡಿಟೋರಿಯಂ ಕೂಡ ಇಲ್ಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತು ನಾಟಕಗಳ ಚಟುವಟಿಕೆ ನಡೆಸುವ ಕುರಿತು ವಿಷ್ಣು ಕುಟುಂಬಸ್ಥರು ಯೋಜನೆ ರೂಪಿಸಿದ್ದಾರೆ.

    ಭಾರತಿ ವಿಷ್ಣುವರ್ಧನ್, ಅನಿರುದ್ಧ, ಪುತ್ರಿ ಕೀರ್ತಿ ವಿಷ್ಣುವರ್ಧನ್ ಹಾಗೂ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ವಿಷ್ಣುವರ್ಧನ್ ಅವರನ್ನು ಮನಸಾರೆ ಹೊಗಳಿಸಿದರು. 13 ವರ್ಷಗಳ ನಂತರ ನಿರ್ಮಾಣವಾಗಿರುವ ಈ ಸ್ಮಾರಕ ಪ್ರವಾಸಿ ತಾಣವಾಗಬೇಕು ಎಂದರು. ಪುಟ್ಟ ಮಗುವೊಂದು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂಬ ಮನವಿಯಿಟ್ಟರು. ಇವುಗಳಿಗೆ ವೇದಿಕೆಯಲ್ಲಿಯೇ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ ನೀವು ಬೋರ್ಡ್‍ಗಳ ಮೂಲಕ ಇಟ್ಟಿರುವ ಬೇಡಿಕೆಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲನೆ ಮಾಡಲಿದೆ ಎಂದರು. ಇದುವರೆಗೆ 10 ಮಂದಿಗೆ ಕರ್ನಾಟಕ ರತ್ನ ನೀಡಲಾಗಿದೆ. ಚಿತ್ರರಂಗದಿಂದ ಇಬ್ಬರು ಕರ್ನಾಟಕ ರತ್ನ ಪುರಸ್ಕøತರು. ಡಾ.ರಾಜ್ ಹಾಗೂ ಮರಣೋತ್ತರವಾಗಿ ಡಾ.ಪುನೀತ್ ರಾಜಕುಮಾರ್ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ.

  • ಸಿನಿಮಾ ಸಬ್ಸಿಡಿ : ಇನ್ ಮುಂದೆ 200 ಚಿತ್ರಗಳಿಗೆ..

    ಸಿನಿಮಾ ಸಬ್ಸಿಡಿ : ಇನ್ ಮುಂದೆ 200 ಚಿತ್ರಗಳಿಗೆ..

    ಇದು ಬೊಮ್ಮಾಯಿ ಬಜೆಟ್ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ. ಇದೂವರೆಗೆ ವರ್ಷಕ್ಕೆ 125 ಚಿತ್ರಗಳಿಗೆ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ ಅದನ್ನು 200 ಚಿತ್ರಗಳಿಗೆ ನೀಡಲಾಗುವುದು ಎಂದು ಬೊಮ್ಮಾಯಿ ಬಜೆಟ್‍ನಲ್ಲಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷ ಅಂದ್ರೆ 175 ಚಿತ್ರಗಳಿಗೆ ಸಬ್ಸಿಡಿ ನೀಡುವಂತೆ ಚಿತ್ರರಂಗ ಮನವಿ ಮಾಡಿತ್ತು. ಅದಕ್ಕೆ ಇನ್ನೂ 25 ಚಿತ್ರಗಳನ್ನು ಸೇರಿಸಿ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದಾರೆ ಬೊಮ್ಮಾಯಿ.

    ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಿನಿಮೋತ್ಸವದಲ್ಲಿ ಸಚಿವ ಮುನಿರತ್ನ ಈ ಬಗ್ಗೆ ಸುಳಿವು ಕೊಟ್ಟಿದ್ದರು. ಚಿತ್ರರಂಗಕ್ಕೆ ಬೊಮ್ಮಾಯಿ ಎಂದೂ ಮರೆಯಲಾಗದ ಕೊಡುಗೆ ಕೊಡಲಿದ್ದಾರೆ ಎಂದು ತಿಳಿಸಿದ್ದರು.

    ಸಬ್ಸಿಡಿ ನಿಯಮ ಮಾತ್ರ ಹಿಂದಿನಂತೆಯೇ ಇರಲಿದೆ. ಕಾದಂಬರಿ ಅಧರಿತ, ಸಂಸ್ಕøತಿ ಬಿಂಬಿಸುವ ಚಿತ್ರಗಳಿಗೆ 25 ಲಕ್ಷ. ಮಕ್ಕಳ ಸಿನಿಮಾ, ಬ್ಯಾರಿ, ಕೊಂಕಣಿ, ತುಳು ಭಾಷೆಯ ಚಿತ್ರಗಳಿಗೆ 15 ಲಕ್ಷ, ಮಿಕ್ಕ ಚಿತ್ರಗಳಿಗೆ 10 ಲಕ್ಷ ನೀಡಲಾಗುತ್ತದೆ. ಡಬ್ ಆದ ಚಿತ್ರಗಳು, ಅಶ್ಲೀಲ ಚಿತ್ರಗಳಿಗೆ ಸಬ್ಸಿಡಿ ಇರಲ್ಲ.

  • ಸುದೀಪ್ ರಾಜಕೀಯ ಹೆಜ್ಜೆ : ಸ್ವಾಗತಿಸಿದವರೆಷ್ಟು..? ವಿರೋಧಿಸಿದವರೆಷ್ಟು..?

    ಸುದೀಪ್ ರಾಜಕೀಯ ಹೆಜ್ಜೆ : ಸ್ವಾಗತಿಸಿದವರೆಷ್ಟು..? ವಿರೋಧಿಸಿದವರೆಷ್ಟು..?

    ನಟನಾಗಿದ್ದಾಗ ಪ್ರೀತಿಸುವುದೇ ಬೇರೆ. ಕಲಾವಿದನಾಗಿದ್ದಾಗ ಆರಾಧಿಸುವುದೇ ಬೇರೆ. ಆದರೆ ರಾಜಕೀಯ ಹಾಗಲ್ಲ. ಅಲ್ಲಿಗೆ ಬರುತ್ತೇನೆ ಎಂದರೆ ಕೆಸರು, ಹೊಲಸು ಎರಚೋಕೆ ಜನ ಕಾಯ್ತಿರುತ್ತಾರೆ. ಪಾಲಿಟಿಕ್ಸ್ ಈಸ್ ನಾಟ್ ಕ್ಲೀನ್. ರಾಜಕೀಯಕ್ಕೆ ಬಂದು ಶುದ್ಧನಾಗಿ, ಶುಭ್ರನಾಗಿ ಇರುವವರು ಇಲ್ಲವೇ ಇಲ್ಲ. ಸುದೀಪ್ ಅವರಿಗೂ ಈ ಅನುಭವ ಮೊದಲ ದಿನದಲ್ಲೇ ಆಗಿದೆ.

    ಸುದೀಪ್ ಬಿಜೆಪಿಗೆ ಸೇರ್ತಾರಂತೆ ಎನ್ನುವ ಸುದ್ದಿ ಖಚಿತವಾಗುವ ಮೊದಲೇ ನಟ ಪ್ರಕಾಶ್ ರೈ, ಸುದೀಪ್ ಮಾರಿಕೊಳ್ಳುವವರಲ್ಲ ಎಂದಿದ್ದರು. ಆ ಮೂಲಕ ಬಿಜೆಪಿ ಸೇರಿದರೆ ಮಾರಿಕೊಂಡಿರುತ್ತಾರೆ ಎಂಬ ಸಿಗ್ನಲ್`ನ್ನೂ ಕೊಟ್ಟಿದ್ದರು. ಸುದೀಪ್ ಏನೇ ಮಾತನಾಡಿರಲಿ, ಅವರೀಗ ಬಿಜೆಪಿ ನಾಯಕರಲ್ಲಿ ಒಬ್ಬರು. ಸುದೀಪ್ ಬಿಜೆಪಿಯ ಪ್ರಾಥಮಿಕ ಸದಸ್ಯರಲ್ಲದೇ ಇರಬಹುದು. ನಾನು ಬೊಮ್ಮಾಯಿ ಮಾಮ ಪರವಾಗಿರುತ್ತೇನೆ. ಅವರು ನನ್ನ ಕಷ್ಟ ಕಾಲದಲ್ಲಿ ಆಗಿರುವವರು. ನಾನು ಇಲ್ಲಿ ನಿಲುವುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಬಿಜೆಪಿ ಸೇರುತ್ತಿಲ್ಲ. ಸ್ಪರ್ಧೆ ಮಾಡುತ್ತಿಲ್ಲ.. ಹೀಗೆ ಯಾವ ಕಾರಣಗಳನ್ನೇ ಕೊಟ್ಟರೂ, ಸುದೀಪ್ ಉತ್ತರ ಕೊಡುವುದಕ್ಕೆ ಚೆನ್ನಾಗಿರುತ್ತದೆಯೇ ಹೊರತು, ಸುದೀಪ್ ಒಬ್ಬ ಬಿಜೆಪಿ `ನಾಯಕ’ನಾಗಿ ಹೊರಹೊಮ್ಮಿದ್ದಾರೆ. ಈ ವಿಷಯ ಹೊರಬಿದ್ದಿದ್ದೇ ತಡ.. ಹೇಗೆಲ್ಲ ಸುದೀಪ್ ಅವರನ್ನು ಟೀಕೆಗೆ ಗುರಿ ಮಾಡಬಹುದೋ.. ಎಲ್ಲವೂ ಆಗುತ್ತಿದೆ.

    ಸುದೀಪ್ ಆರಂಭದ ದಿನಗಳಲ್ಲಿ ಕಿಚ್ಚ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ನಿರುದ್ಯೋಗಿ ಯುವಕನೊಬ್ಬ ಕಾರ್ಪೊರೇಟರ್, ಎಮ್‍ಎಲ್‍ಎ, ಸಿಎಂ ಆಗುವ ಕಥೆ ಇತ್ತು. ಆ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಶಾಸಕರನ್ನು ಕಾಸು ಕೊಟ್ಟು ಖರೀದಿ ಮಾಡುವವರನ್ನು ಟೀಕಿಸುವ ಡೈಲಾಗ್ ಇತ್ತು. ಮೊದಲಿಗೆ ಹೊರ ಬಂದಿದ್ದೇ ಆ ವಿಡಿಯೋ.

    ಅದಾದ ಮೇಲೆ ಪ್ರಕಾಶ್ ರೈ ನನಗೆ ಕಳವಳವಾಗಿದೆ. ಆತಂಕವಾಗಿದೆ. ನೋವಾಗಿದೆ ಎಂದು ಹೇಳಿಕೆ ನೀಡಿದರೆ, ಸೋಷಿಯಲ್ ಮೀಡಿಯಾದಲ್ಲಂತೂ ಸುದೀಪ್ ಅವರನ್ನು ಹೇಗೆಲ್ಲ ಬೇಕೋ ಅಷ್ಟೂ ಲೇವಡಿ ಮಾಡಿಬಿಡಿದರು.

    ಸುದೀಪ್ ಅವರು ವಾಲ್ಮೀಕಿ ಜನಾಂಗದವರು. ಗೊತ್ತಿಲ್ಲದ ವಿಷಯವೇನೂ ಅಲ್ಲ. ರಾಜಕೀಯಕ್ಕೆ ಬರುತ್ತೇನೆ ಎಂದು ಸುದೀಪ್ ಹೇಳುತ್ತಿದ್ದಂತೆಯೇ ಜಾತಿಯನ್ನು ಎಳೆದು ತಂದು ಟೀಕೆ ಮಾಡಿದರು.

    ಸುದೀಪ್ ಕಟ್ಟಾ ಅಭಿಮಾನಿಗಳೂ ಕೂಡಾ ಬೇಸರ ಪಟ್ಟುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ರಾಜಕೀಯಕ್ಕೆ ಬರುವುದು ಬೇಡ ಎಂಬುದು ಟ್ರೆಂಡ್ ಆಗಿತ್ತು.

    ಇನ್ನು ಬಿಜೆಪಿ ಬೆಂಬಲಿಗರು ಇದು ಯಾವ ರೀತಿಯ ನಡೆ. ಒಂದೋ ಅಧಿಕೃತವಾಗಿ ಸೇರಿಬಿಡಿ. ಈ ರೀತಿ ಅಡ್ಡಗೋಡೆ ಮೇಲೆ ದೀಪ ಇಟ್ಟು ಆಟವಾಡಬೇಡಿ ಎಂದರೆ, ಬಿಜೆಪಿ ವಿರೋಧಿಗಳೂ ಕೂಡಾ ಇದೇ ಮಾತು ಹೇಳಿದ್ದು ವಿಶೇಷ. ಎರಡೂ ಕಡೆ ಇಲ್ಲದವರು ಸುದೀಪ್ ಅವರಿಗೆ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಹಕ್ಕಿದೆ. ಅಧಿಕಾರ ಇದೆ. ಆದರೆ ಅದನ್ನು ಸ್ಪಷ್ಟವಾಗಿ ಹೇಳಬೇಕು ಎಂದರು.

    ಇದರ ನಡುವೆ ಶಿವಮೊಗ್ಗದ ವಕೀಲ ಕೆ.ಪಿ.ಶ್ರೀಪಾಲ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ ಶೋಗಳು ಪ್ರಸಾರವಾಗದಂತೆ ಮತ್ತು ನಟಿಸಿರುವ ಜಾಹಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

    ರಾಜಕೀಯಕ್ಕೆ ಬರುತ್ತೇನೆ ಎಂದು ನಿರ್ಧಾರ ಮಾಡಿದ ಮೇಲೆ ಫೇಸ್ ಮಾಡಲೇಬೇಕು. ಕೆಸರು ಎರಚುತ್ತಾರೆ. ಒರೆಸಿಕೊಳ್ಳಲೇಬೇಕು. ಯಾವ್ಯಾವುದೋ ಸಂದರ್ಭದಲ್ಲಿ ಯಾವ ಕಾರಣಕ್ಕೋ ಮಾತನಾಡಿದ್ದ ವಿಡಿಯೋಗಳಿಗೆ ರಾಜಕೀಯದ ಟಚ್ ಕೊಟ್ಟು ಓಪನ್ ಮಾಡುತ್ತಾರೆ. ಟೀಕಿಸ್ತಾರೆ. ಟೀಕೆ ಸಹಿಸಿಕೊಳ್ಳಲೇಬೇಕು. ಏಕೆಂದರೆ ಇದು ರಾಜಕೀಯ.