` head bush, - chitraloka.com | Kannada Movie News, Reviews | Image

head bush,

  • Headbush Move Review, Chitraloka Rating 3.5/5

    Headbush Move Review, Chitraloka Rating 3.5/5

    Film: Head Bush

    Director: Shoonya

    Cast: Dhananjaya, Yogish, Vasishta N Simha, Raghu Mukherjee, Devaraj, Payal Rajput, Shruti Hariharan 

    Duration: 138 minutes

    Certificate: A

    Platform: Theatres

    Stars: 3.5/5

    A perfect blend of class and mass 

    The saga of Bengaluru's first underworld don gets a biopic series and the first part of Head Bush sets the stage for it perfectly. Combining the narrative finesse of Agni Sridhar's writing and the powerhouse performance of Dhananjaya, the film hits the bulls eye with its fast pace and a racy no-nonsense approach. 

    Even though this is just the first of three parts, the film has a whole story in itself. It is not just about the rowdyism of MP Jayaraj, but the entire political situation of the State and country that Agni Sridhar manages to bring to the table. The social undercurrents of the 1970s when the deprived castes asserted their political power is given a cinematic touch. 

    What stands out in the film apart from Sridhar's writing is the raw energy and powerful performances of Dhananjaya especially and the ensemble of actors who make up the supporting cast. Loose Mada Yogi's unassuming act, Vasishta's presence, Devaraj's class act and Raghu Mukherjee's nuanced performance adds to the film's appeal. 

    Though there are dozens of important characters, all of them get their chance to come to the forefront. Even the two important female characters played by Shruti Hariharan and Payal Rajput get their moments of glory. 

    The film briefly dwells with the childhood of MP Jayaraj and his friends; chief among them are Samson and Ganga. The entire film can also be looked at from the angel of this friendship between them. From another angle the film is a political drama as well as they become pawns in the power play between Urs, the chief minister and his opponents in the Congress party. 

    So if you like politics and political history there is a lot of interesting details in the film. Even if you don't like politics this film has enough interest generating cinematic excellence to keep you hooked. 

    Apart from the fine script and performances, the technical work will appeal to audience. Badal Nanjundaswamy manages to create the perfect 1970s environment with his art work. Charan Raj scores another success with his music while the cinematography by Sunoj captures the space of nostalgia to perfection. 

    This film is a perfect blend of class and mass and a worthy addition to Dhananjaya repository.

  • Payal Rajput Selected As The Heroine For Dhananjay's 'Head Bush'

    Payal Rajput Selected As The Heroine For Dhananjay's 'Head Bush'

    Actress Payal Rajput who has acted in Hindi, Punjabi, Telugu and Tamil films is all set to make her debut in Kannada through Dhananjay starrer 'Head Bush' which is all set to be launched on Monday in Bangalore.

    'Head Bush' which is based on the life of former Bangalore don M P Jayaraj was supposed to have launched last year. Due to lockdown the project got postponed various times and is now finally being launched. Ashu Bedra who was supposed to produce the film originally has walked out of the film and now Dhananjay along with Somanna is producing the film.

    Agni Sreedhar who is famous for his underworld films has written the story, screenplay and dialogues for the film. Debutante Shoonya will be directing the film. 'Head Bush' is a PAN Indian film to be released in Kannada, Telugu, Tamil, Hindi and Malayalam continuously. 

  • ಅಕ್ಟೋಬರ್‍ಗೆ ಬರ್ತಾನೆ ಡಾನ್ ಡಾಲಿ

    ಅಕ್ಟೋಬರ್‍ಗೆ ಬರ್ತಾನೆ ಡಾನ್ ಡಾಲಿ

    ಡಾಲಿ ಧನಂಜಯ್ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಡಾಲಿ, ಡಾನ್ ಜಯರಾಜ್ ಆಗಿ ನಟಿಸಿರೋ ಸಿನಿಮಾ ಹೆಡ್ ಬುಷ್. ಸೋಮಣ್ಣ ಟಾಕಿಸ್ ಬ್ಯಾನರ್‍ನಲ್ಲಿ ಬರುತ್ತಿರೋ ಚಿತ್ರದಲ್ಲಿ ಡಾಲಿ ಒಬ್ಬರೇ ಅಲ್ಲ, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಪಾಯಲ್ ರಜಪೂತ್, ರಘು ಮುಖರ್ಜಿ, ಶೃತಿ ಹರಿಹರನ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿ.ರವಿಚಂದ್ರನ್ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸುತ್ತಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ಶೂನ್ಯ ನಿರ್ದೇಶನದ ಚಿತ್ರಕ್ಕೆ ಡಾಲಿ ಧನಂಜಯ್ ನಿರ್ಮಾಪಕರೂ ಹೌದು.

    ಸಿನಿಮ ಅಕ್ಟೋಬರ್ 21ರಂದು ಥಿಯೇಟರ್‍ಗೆ ಬರೋದಾಗಿ ಘೋಷಿಸಿದೆ. ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವುದು ಅಗ್ನಿ ಶ್ರೀಧರ್. ಅಂದಹಾಗೆ ಅದು ದೀಪಾವಳಿ ಸಮಯ. ಸ್ಸೋ.. ಪಟಾಕಿ ಹೊಡೆಯೋಕೆ ರೆಡಿಯಾಗಿ..

  • ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..!

    ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..!

    ಡಾಲಿ ಧನಂಜಯ್ ಮತ್ತು ಶೃತಿ ಹರಿಹರನ್ ಜೋಡಿ ಎಂದರೆ ಥಟ್ಟನೆ ನೆನಪಾಗುವ ಸಿನಿಮಾ ರಾಟೆ. ಆ ಜೋಡಿ ಈಗ ಮತ್ತೊಮ್ಮೆ ಒಂದಾಗುತ್ತಿದೆ. ಅದು ಹೆಡ್ ಬುಷ್ ಚಿತ್ರದಲ್ಲಿ. ಸ್ವತಃ ಡಾಲಿ ಧನಂಜಯ್ ನಿರ್ಮಾಣ ಮಾಡ್ತಿರೋ ಚಿತ್ರವಿದು. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

    ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೇ ಕಾರಣವೇ ಅಗ್ನಿ ಶ್ರೀಧರ್ ಕಥೆ ಅನ್ನೋದು. ನಮ್ಮ ನಡುವೆ ಇರೋ ಒಳ್ಳೆಯ ಕಥೆಗಾರ ಅಗ್ನಿ ಶ್ರೀಧರ್. ಇನ್ನು ತಂಡದಲ್ಲಿರೋ ಎಲ್ಲರೂ ನನಗೆ ಒಳ್ಳೆ ಫ್ರೆಂಡ್ಸ್ ಕೂಡಾ. ಕಥೆ ಚೆನ್ನಾಗಿದೆ. ನಮ್ಮ ನಡುವೆಯೇ ಬದುಕಿರುವವರ ಪಾತ್ರವನ್ನು ಮಾಡೋದು ದೊಡ್ಡ ಸವಾಲು ಎಂದಿದ್ದಾರೆ ಶೃತಿ ಹರಿಹರನ್. ಅಂದಹಾಗೆ ಇದು ಬೆಂಗಳೂರಿನ ಒಂದು ಕಾಲದ ಡಾನ್ ಎಂಪಿ ಜೈರಾಜ್ ಬಯೋಪಿಕ್.

    ಈಗಾಗಲೇ ಹೆಡ್ ಬುಷ್ ಸಿನಿಮಾ ದೊಡ್ಡ ದೊಡ್ಡವರಿಂದ ತುಂಬಿ ತುಳುಕುತ್ತಿದೆ. ಧನಂಜಯ್, ವಸಿಷ್ಠ ಸಿಂಹ, ಪ್ರಕಾಶ್ ಬೆಳವಾಡಿ, ಪಾಯಲ್ ರಜಪೂತ್ ಜೊತೆಗೆ ಈಗ ಶೃತಿ ಹರಿಹರನ್ ಕೂಡಾ ಸೇರಿದ್ದಾಗಿದೆ.

  • ಇದು ರಮ್ಯಾ ಕ್ರೇಜ್ ಅಂದ್ರೆ..

    ಇದು ರಮ್ಯಾ ಕ್ರೇಜ್ ಅಂದ್ರೆ..

    ರಮ್ಯಾ ಚಿತ್ರರಂಗದಲ್ಲಿ ನಟಿಸಿ ದಶಕಗಳೇ ಆಗಿವೆ. ವಯಸ್ಸು 40 ದಾಟಿದೆ. ಆದರೆ ಮೋಹಕತಾರೆಯ ಮೇಲಿನ ಕನ್ನಡಿಗರ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ರಾಜಕೀಯಕ್ಕೆ ಹೋಗಿ ಕಾಂಗ್ರೆಸ್ ಸೇರಿ ಸಂಸದೆಯಾದಾಗ ರಾಜಕೀಯ ಕಾರಣಕ್ಕಾಗಿ ವಿರೋಧಿಸಿದವರಿದ್ದರು. ಆದರೆ ರಮ್ಯಾ ರಮ್ಯಾನೇ. ಅದೇನೇ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಸಮರ್ಥನೆಗೆ ಬರುವವರ ಸಂಖ್ಯೆ ಕಡಿಮೆಯೇನಿಲ್ಲ. ಈಗ ಮತ್ತೊಮ್ಮೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿರುವ ರಮ್ಯಾ ಅವರ ಸ್ಯಾಂಡಲ್‍ವುಡ್ ಕ್ವೀನ್ ಅನ್ನೋ ಬಿರುದು ಇನ್ನೂ ಹಾಗೆಯೇ ಇದೆ. ಅದು ಮತ್ತೊಮ್ಮೆ ಪ್ರೂವ್ ಆಗಿದ್ದು ದಾವಣಗೆರೆಯಲ್ಲಿ.

    ದಾವಣಗೆರೆಯಲ್ಲಿ ಭಾನುವಾರ ಹೆಡ್ ಬುಷ್ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಪ್ರೀ-ಈವೆಂಟ್ ಶೋ ಕೂಡಾ ನಡೆದಿತ್ತು. ಆ ಈವೆಂಟ್‍ನ ಮುಖ್ಯ ಆಕರ್ಷಣೆ ದಿವ್ಯ ಸ್ಪಂದನ. ಶೋಗೆ ಬಂದವರಿಗೆ ಹ್ಹೋ.. ಎಂದು ಚಪ್ಪಾಳೆ ತಟ್ಟಿ ಸ್ವಾಗತಿಸಿದರು ರಮ್ಯಾ. ಲಕ್ಕಿ ಹುಡುಗರಿಗೆ ಅಪ್ಪುಗೆಯ ಕಾಣಿಕೆಯೂ ಇತ್ತು. ಇದಾದ ಮೇಲೆ ಹೆಡ್ ಬುಷ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ರಮ್ಯಾ ನಾನು ಇವತ್ತು ಇಲ್ಲೇ ಇರ್ತೇನೆ. ಬರುವಾಗ ಬೆಣ್ಣೆ ದೋಸೆ ತಿನ್ನೋಕೆ ಆಗಲಿಲ್ಲ. ನಾಳೆ ಬೆಣ್ಣೆ ದೋಸೆ ತಿಂದ್ಕೊಂಡೇ ಹೋಗೋದು ಎಂದ್ರು. ಅದರಂತೆಯೇ ರಮ್ಯಾ ಸೋಮವಾರ ಬೆಳಗ್ಗೆ ಬೆಣ್ಣೆ ದೋಸೆ ತಿನ್ನೋಕೆ ಹೋದ್ರು.

    ರಮ್ಯಾ ದೋಸೆ ತಿಂತೀವಿ ಅಂದಿದ್ರು ಅಷ್ಟೆ. ಎಲ್ಲಿ ಅನ್ನೋದನ್ನ ಹೇಳಿರಲಿಲ್ಲ. ಆದರೆ ಫ್ಯಾನ್ಸ್ ಟ್ರ್ಯಾಕ್ ಮಾಡ್ತಾನೆ ಇದ್ರು. ಯಾವಾಗ ರಮ್ಯಾ ಕೊಟ್ಟೂರೇಶ್ವರ ಹೋಟೆಲ್‍ಗೆ ಬೆಣ್ಣೆ ದೋಸೆ ತಿನ್ನೋಕೆ ಬಂದಿದ್ದಾರೆ ಅನ್ನೋದು ಗೊತ್ತಾಯ್ತೋ.. ಆಗ  ಶುರುವಾಯ್ತು ನೋಡಿ ಅಭಿಮಾನಿಗಳ ದಂಡಯಾತ್ರೆ. ನೂರಾರು ಜನ ಹೋಟೆಲ್‍ನತ್ತ ಓಡಿ ಬಂದರು. ನೂರು ಸಾವಿರವಾಯ್ತು. ಕೊನೆಗೆ ಟ್ರಾಫಿಕ್ ಜಾಮ್ ಆಗುವಂತಾಯ್ತು. ರಮ್ಯಾ ಕ್ರೇಜ್ ಹಾಗಿದೆ.

  • ಇನ್ಮೇಲೆ ಎಲ್ರೂ ನನ್ನ ಗಂಗಾ ಎಂದೇ ಕರೆಯುತ್ತಾರೆ : ಲೂಸ್ ಮಾದ ಯೋಗಿ

    ಇನ್ಮೇಲೆ ಎಲ್ರೂ ನನ್ನ ಗಂಗಾ ಎಂದೇ ಕರೆಯುತ್ತಾರೆ : ಲೂಸ್ ಮಾದ ಯೋಗಿ

    ದುನಿಯಾ ಚಿತ್ರ ಇಬ್ಬರ ಹೆಸರಿಗೆ ಚಿತ್ರದ ಟೈಟಲ್‍ನ್ನೇ ಬಿರುದಾಗಿ ಕೊಟ್ಟಿತು. ದುನಿಯಾ ಸೂರಿ ಮತ್ತು ದುನಿಯಾ ವಿಜಯ್. ಅದೇ ಚಿತ್ರದ ಪುಟ್ಟ ಪಾತ್ರದ ಮೂಲಕ ನಟಿಸಿದ ಯೋಗಿ ಲೂಸ್ ಮಾದ ಎಂದೇ ಫೇಮಸ್ ಆದರು. ಅದಾದ ಮೇಲೆ ಹೀರೋ ಆಗಿಯೇ ಹಲವು ಹಿಟ್ ಕೊಟ್ಟಿದ್ದರೂ ಜನ ಇವತ್ತಿಗೂ ಅವರನ್ನು ಗುರುತಿಸೋದು ಲೂಸ್ ಮಾದ ಯೋಗಿ ಎಂದೇ. ಯೋಗೇಶ್ ಎಂದು ಕರೆಯುವವರು ಕೂಡಾ ಕಡಿಮೆ. ಅಭಿಮಾನಿಗಳ ಪಾಲಿಗೆ ಲೂಸ್ ಮಾದ ಯೋಗಿಯೇ. ಅದು ಈ ಚಿತ್ರದಿಂದ ಬದಲಾಗಲಿದೆ. ಹೆಡ್ ಬುಷ್ ರಿಲೀಸ್ ಆದ ಮೇಲೆ ಎಲ್ಲರೂ ನನ್ನನ್ನು ಗಂಗಾ ಎಂದೇ ಕರೆಯುತ್ತಾರೆ ಎನ್ನುವುದು ಯೋಗಿ ಕಾನ್ಫಿಡೆನ್ಸ್.

    ಗಂಗಾ ಪಾತ್ರವು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಗಂಗಾ ಪಾತ್ರವು ನನಗೆ ಇಲ್ಲಿಯವರೆಗೆ ಸಿಕ್ಕಿರುವ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ನನ್ನನ್ನು ಸಾಮಾನ್ಯವಾಗಿ ಲೂಸ್ ಮಾದ ಎಂದು ಸಂಬೋಧಿಸುವ ಜನ ಹೆಡ್ ಬುಷ್ ನಂತರ ನನ್ನನ್ನು ಗಂಗಾ ಎಂದು ಕರೆಯಲು ಪ್ರಾರಂಭಿಸುತ್ತಾರೆ' ಎಂದು ಯೋಗಿ ಹೇಳುತ್ತಾರೆ.

    ಅಕ್ಟೋಬರ್ 21 ರಂದು ಹೆಡ್ ಬುಷ್ ಬಿಡುಗಡೆಯಾಗುತ್ತಿದೆ. ಕೆಲ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವಾಗ ನನ್ನ ದೃಷ್ಟಿಕೋನ ಮತ್ತು ಚಿಂತನೆಯ ಪ್ರಕ್ರಿಯೆಯು ಬದಲಾಗಿದೆ. 'ನಟರಾಗಿದ್ದಾಗ ನಾವು ಯಾವುದೇ ಪಾತ್ರವಾದರೂ ಅದಕ್ಕೆ ಹೊಂದಿಕೊಳ್ಳಲು ಅವಕಾಶವಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ, ಅದು ನಾಯಕನ ಪಾತ್ರದಲ್ಲಿ ನಟಿಸುವಾಗ ಆಗುವುದಿಲ್ಲ. ಹಾಗಾಗಿ, ಈಗ ಹೀರೋ ಆಗುವುದಕ್ಕಿಂತ ಒಳ್ಳೆಯ ಪಾತ್ರಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಯೋಗಿ.

    ಧನಂಜಯ್ ಮತ್ತು ನಿರ್ದೇಶಕ ಶೂನ್ಯ ಅವರ  ಚಾಯ್ಸ್ ನಾನೇ ಆಗಿದ್ದೆ. ಅದೇ ನನಗೆ ಖುಷಿಯ ವಿಚಾರ. ಗಂಗಾ ಧೈರ್ಯಶಾಲಿ. ಮೊಂಡ. ನೇರ ಮತ್ತು ಜಯರಾಜನ ಆತ್ಮೀಯ ಗೆಳೆಯ. ಒಬ್ಬರಿಗೊಬ್ಬರು ನಿಲ್ಲುವ ಪರಿ ನಿಜಕ್ಕೂ ಉತ್ತಮವಾಗಿ ಮೂಡಿಬಂದಿದೆ ಅನ್ನೋದು ಯೋಗಿ ಮಾತು. ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಹಾಗೂ ಮೇ ಡೇಸ್ ಇನ್ ದಿ ಅಂಡರ್‍ವಲ್ರ್ಡ್ ಪುಸ್ತಕವನ್ನು ಓದಿರುವ

    ಯೋಗಿ ನಾನು ಹುಟ್ಟಿದ್ದು ಬೆಂಗಳೂರಿನಲ್ಲೇ.. ಬೆಳೆದಿದ್ದೂ ಬೆಂಗಳೂರಿನಲ್ಲೇ. ಭೂಗತ ಜಗತ್ತಿನ ಬಗ್ಗೆ ಕೇಳಿದ್ದೇನೆ ಹಾಗೂ ನೋಡಿದ್ದೇನೆ ಎನ್ನುತ್ತಾರೆ.

    ಹೆಡ್ ಬುಷ್ ಇದೇ 21ರಂದು ರಿಲೀಸ್ ಆಗುತ್ತಿದೆ. ಜೈರಾಜ್, ಕೊತ್ವಾಲ್, ಗಂಗಾ ಹಾಗೂ ಭೂಗತ ಜಗತ್ತಿನ ಜೊತೆ ಥಳುಕು ಹಾಕಿಕೊಂಡ ಇನ್ನಿತರ ಪಾತ್ರಗಳ ಮೂಲ ನೈಜವಾದ ಕಥೆಯನ್ನೇ ಹೆಡ್ ಬುಷ್ ತೆರೆಗೆ ತರುತ್ತಿದೆ.

  • ಕರಗದ ವಿವಾದಾತ್ಮಕ ಡೈಲಾಗ್ ಮ್ಯೂಟ್ : ವಿವಾದಕ್ಕೆ ಅಂತ್ಯ

    ಕರಗದ ವಿವಾದಾತ್ಮಕ ಡೈಲಾಗ್ ಮ್ಯೂಟ್ : ವಿವಾದಕ್ಕೆ ಅಂತ್ಯ

    ಕೊನೆಗೂ ಹೆಡ್ ಬುಷ್ ಚಿತ್ರದ ವಿವಾದ ಬಗೆಹರಿದಿದೆ. ವೀರಗಾಸೆ ಕುಣಿತದವರು ಮೊನ್ನೆ ಚಿತ್ರದ ಕುರಿತು ಒಳ್ಳೆಯ ಮಾತನಾಡಿದ್ದರು. ಚಿತ್ರದಲ್ಲಿ ನಟಿಸಿದ್ದ ವೀರಗಾಸೆ ಕುಣಿತದವರೇ ದೃಶ್ಯದ ವಿವರಣೆ ಕೊಟ್ಟಿದ್ದರು. ಅದಾದ ನಂತರ ಪ್ರತಿಭಟನೆಗೆ ಬಂದಿದ್ದವರೂ ಸುಮ್ಮನಾಗಿದ್ದರು. ಈಗ ಕರಗದ ಸದಸ್ಯರೂ ಕೂಡಾ ಹೆಡ್‍ಬುಷ್ ಚಿತ್ರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕರಗದವರ ಆಕ್ಷೇಪಕ್ಕೆ ಕಾರಣವಾಗಿದ್ದುದು ಜುಜುಬಿ ಕರಗ ಎಂಬ ಪದದ ಬಳಕೆ. ಆ ಪದವನ್ನು ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿಕೊಂಡಿದೆ.

    ಫಿಲ್ಮ್ ಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳಲು ಬಂದಿದ್ದ ಚಿತ್ರತಂಡ ವಿವಾದಕ್ಕೆ ಅವಕಾಶ ಕೊಡಲಿಲ್ಲ. ತಿಗಳರ ಸಮುದಾಯದ ಅಧ್ಯಕ್ಷ ಸುಬ್ಬಣ್ಣ ಚಿತ್ರದ ಒಂದು ಭಿನ್ನಭಿಪ್ರಾಯವಿತ್ತು. ಕರಗದ ಬಗ್ಗೆ ಇದ್ದ ಕೆಟ್ಟ ಪದ ತೆಗೆಯಲು ಚಿತ್ರತಂಡ ಒಪ್ಪಿದೆ. ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿದರು.

    ಧರ್ಮರಾಯ ಸ್ವಾಮಿ ದೇವಸ್ಥಾನ ಸಂಘದ ಅಧ್ಯಕ್ಷರೂ ಚಿತ್ರದ ಸಿನಿಮಾದಲ್ಲಿನ ಜುಜುಬಿ ಕರಗಾ ಅನ್ನೋ ಡೈಲಾಗ್ ತೆಗೆಯಲು ಒಪ್ಪಿರುವುದಕ್ಕೆ ಖುಷಿ ಪಟ್ಟು ಸಿನಿಮಾ ನೋಡಿ ಎಂದರು.

    ಡಾಲಿ ದನಂಜಯ್ ಎಲ್ಲ ಹಿರಿಯರು ಕುಳಿತು ವಿವಾದ ಬಗೆಹರಿಸಿದ್ದು ಖುಷಿ ಕೊಟ್ಟಿತು. ಕರಗದ ಡೈಲಾಗ್ ಮ್ಯೂಟ್ ಮಾಡ್ತೇನೆ. ವೀರಗಾಸೆ ವಿವಾದವೂ ಬಗೆಹರಿದಿದೆ. ಸಿನಿಮಾನ ಸಿನಿಮಾ ತರ ನೋಡಿ. ನಾನು ಬಡವ ಎಂದು ಎಲ್ಲೂ ಹೇಳಿಕೊಂಡಿಲ್ಲ. ಬಡವ ರಾಸ್ಕಲ್, ಹೆಡ್ ಬುಷ್ ಚಿತ್ರದಲ್ಲಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದರು.

  • ಡಾನ್ ಡಾಲಿ ಪರ ಜಯರಾಜ್ ಸೋದರಿ.. ವಿರುದ್ಧ ಸೊಸೆ : ಹೆಡ್ ಬುಷ್ ಜೂಟಾಟ

    ಡಾನ್ ಡಾಲಿ ಪರ ಜಯರಾಜ್ ಸೋದರಿ.. ವಿರುದ್ಧ ಸೊಸೆ : ಹೆಡ್ ಬುಷ್ ಜೂಟಾಟ

    ಡಾಲಿ ಧನಂಜಯ್ ನಟಿಸಿ ನಿರ್ಮಿಸುತ್ತಿರುವ ಸಿನಿಮಾ ಹೆಡ್ ಬುಷ್. ಇದು ಅಂಡರ್‍ವಲ್ರ್ಡ್ ಕಥೆಯಾಗಿದ್ದು ಡಾನ್ ಜಯರಾಜನ ಪಾತ್ರದಲ್ಲಿ ಡಾಲಿ ನಟಿಸಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ್ ಡಾನ್ ಜಯರಾಜ್ ಗೆಟಪ್ಪಿನಲ್ಲಿ ದುಬೈಗೆ ಹೊರಡುವ ದೃಶ್ಯದ ಪುಟ್ಟದೊಂದು ವಿಡಿಯೋ ಹಾಕಿದ್ದರು. ಡಾನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಧನಂಜಯ್ ಬಗ್ಗೆ ಫ್ಯಾನ್ಸ್ ಥ್ರಿಲ್ಲಾದರೆ.. ಜಯರಾಜನ ಫ್ಯಾಮಿಲಿಯಲ್ಲಿ ಪರ ವಿರೋಧ ಮಾತುಗಳು ಶುರುವಾಗಿವೆ.

    ಚಿತ್ರ ಶುರುವಾದಾಗ ಚಿತ್ರದ ಬಗ್ಗೆ ಪಾಸಿಟಿವ್ ಆಗಿಯೇ ಇದ್ದರು ಎನ್ನಲಾಗಿದ್ದ ಜಯರಾಜ್ ಪುತ್ರ ಅಜಿತ್ ಚಿತ್ರವನ್ನು ವಿರೋಧಿಸಿದ್ದರು. ಈಗ ಈ ವಿಡಿಯೋ ರಿಲೀಸ್ ಆದ ಮೇಲೆ ಜಯರಾಜ್ ಸೊಸೆ ಅಂದ್ರೆ ಅಜಿತ್ ಅವರ ಪತ್ನಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ರಾಜ ಯಾವಾಗಲೂ ರಾಜನಾಗಿಯೇ ಇರುತ್ತಾನೆ. ಕೆಲವರು ನಿಮ್ಮ ರೀತಿ ಆಗಲು ಹೋಗಿ ಸೋಲುತ್ತಾರೆ. ನಿಮ್ಮ ಅಜಿತ್ ನಿಮ್ಮನ್ನು ಎಂದಿಗೂ ಸೋಲೋಕೆ ಬಿಡೋದಿಲ್ಲ ಎಂಬ ಸ್ಟೇಟಸ್ ಹಾಕಿದ್ದಾರೆ ಇಂಪನಾ ಅಜಿತ್. ಇಂಪನಾ ಜಯರಾಜ್ ಅವರ ಮಗ ಅಜಿತ್ ಅವರ ಪತ್ನಿ.

    ಆದರೆ.. ಅಜಿತ್ ಅವರ ಸೋದರಿ ಹೇಮಾವತಿ ಹೇಳೋದೇ ಬೇರೆ. ಹೆಡ್ ಬುಷ್ ಮಾಡುತ್ತಿರುವವರು ನನ್ನ ಸೋದರರು. ನನ್ನ ಅಣ್ಣನ ವ್ಯಕ್ತಿತ್ವ ಹೇಳುವುದು ನನ್ನ ಸೋದರರು. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ ಹೇಮಾವತಿ.

    ಅಂದಹಾಗೆ ಚಿತ್ರವನ್ನು ಡಾಲಿ ಧನಂಜಯ್ ಅವರೇ ನಿರ್ಮಿಸುತ್ತಿದ್ದಾರೆ. ಡಾಲಿ ಜೊತೆಗೆ ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದೇವರಾಜ್, ರಘು ಮುಖರ್ಜಿ.. ಅಲ್ಲದೆ ಅತಿಥಿ ನಟರಾಗಿ ವಿ.ರವಿಚಂದ್ರನ್ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಬರೆದಿದ್ದು ಶೂನ್ಯ ಡೈರೆಕ್ಟರ್. ಅಕ್ಟೋಬರ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ

  • ಡಾಲಿ ವಿರುದ್ಧ ದೂರು. ಹಿಂದೆ ಇರೋದು ಯಾರು?

    ಡಾಲಿ ವಿರುದ್ಧ ದೂರು. ಹಿಂದೆ ಇರೋದು ಯಾರು?

    ಹೆಡ್ ಬುಷ್. ಇದು ಡಾಲಿ ಧನಂಜಯ್ ನಿರ್ಮಾಪಕರಾಗಿರೋ ಇನ್ನೊಂದು ಸಿನಿಮಾ. ಈಗಾಗಲೇ ಶೂಟಿಂಗ್ ಕೂಡಾ ಮುಗಿದಿದೆ. ಡಾಲಿ ಜೊತೆ ಚಿತ್ರದಲ್ಲಿ ಘಟಾನುಘಟಿಗಳೇ ನಟಿಸಿದ್ದಾರೆ. 5 ಭಾಷೆಗಳಲ್ಲಿ ಬರುತ್ತಿರೋ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರೋದು ಒಂದಾನೊಂದು ಕಾಲದಲ್ಲಿ ಡಾನ್ ಎಂ.ಪಿ. ಜಯರಾಜ್ ಲೈಫ್‍ನ್ನು ಹತ್ತಿರದಿಂದ ನೋಡಿರೋ ಅಗ್ನಿ ಶ್ರೀಧರ್. ಡಾಲಿ ಚಿತ್ರದಲ್ಲಿ ಎಂ.ಪಿ.ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಶೂನ್ಯ ಚಿತ್ರದ ಡೈರೆಕ್ಟರ್. ಕ್ರೇಜಿ ಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ರಘು ಮುಖರ್ಜಿ, ಪಾಯಲ್ ರಹ್ತೋಗಿ ಸೇರಿದಂತೆ ಹಲವರು ನಟಿಸಿರೋ ಚಿತ್ರದ ವಿರುದ್ಧ ಈಗ ಫಿಲಂ ಚೇಂಬರ್`ಗೆ ದೂರು ಹೋಗಿದೆ. ದೂರು ನೀಡಿರೋದು ಜಯರಾಜ್ ಪುತ್ರ ಅಜಿತ್.

    ನನ್ನ ತಂದೆಯ ಬಯೋಪಿಕ್ ಮಾಡುವಾಗ ಮಾಡುವಾಗ ನನ್ನ ಅನುಮತಿ ತೆಗೆದುಕೊಂಡಿಲ್ಲ. ಅವರಿಗೆ ಬೇಕಾದಂತೆ ಕಥೆ ಮಾಡಿಕೊಂಡಿದ್ದಾರೆ. ಸಿನಿಮಾ ಶುರುವಾದ ಕೂಡಲೇ ಚಿತ್ರತಂಡದವರನ್ನು ಕಾಂಟ್ಯಾಕ್ಟ್ ಮಾಡೋಕೆ ಪ್ರಯತ್ನ ಪಟ್ಟೆ. ಆಗಲಿಲ್ಲ. ಈಗ ರಿಲೀಸ್ ಆಗಿರುವ ಟ್ರೇಲರಿನಲ್ಲಿ ನನ್ನ ತಂದೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನನ್ನ ಅಪ್ಪನ ಎದುರು ನಿಂತು ಮಾತನಾಡೋಕೂ ಹೆದರುತ್ತಿದ್ದವರು ಈಗ ಅವನು.. ಇವನು ಅಂತೆಲ್ಲ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ನೋವಾಗಿದೆ. ಚಿತ್ರದ ಬಿಡುಗಡೆಗೆ ಅವಕಾಶ ಕೊಡಬಾರದು ಎನ್ನುವುದು ಅಜಿತ್ ಜಯರಾಜ್ ವಾದ. ಆದರೆ ವಿವಾದಗಳು ಬೆಳೆದು ಬಂದ ಹಾದಿ ನೋಡಿದರೆ ಹಲವು ಪ್ರಶ್ನೆಗಳೇಳುತ್ತವೆ. ಡಾಲಿ ಧನಂಜಯ್ ಕೂಡಾ ಅದೇ ಮಾತು ಕೇಳ್ತಾರೆ. ಡಾಲಿ ಪ್ರಕಾರ..

    ``ಸಿನಿಮಾ ಸೆಟ್ಟೇರುವುದು ಎಲ್ಲರಿಗೂ ಗೊತ್ತಿತ್ತು. ಹೆಡ್ ಬುಷ್ ಶುರುವಾದಾಗ ಅಜಿತ್ ಕೂಡಾ ವಿಷ್ ಮಾಡಿದ್ದರು. ಆದರೆ ಈಗ ವಿವಾದ ಮಾಡುತ್ತಿದ್ದಾರೆ. ನನಗೆ ಅಜಿತ್ ಒಳ್ಳೆಯ ಫ್ರೆಂಡ್. ಅವರ ಒಂದು ಚಿತ್ರಕ್ಕೆ ನಾನು ವಾಯ್ಸ್ ಕೊಟ್ಟಿದ್ದೇನೆ. ಸಿನಿಮಾ ಶುರುವಾದಾಗ ಜೊತೆಯಲ್ಲಿದ್ದು ಈಗ ಕುಂಭಳಕಾಯಿ ಒಡೆದ ಮೇಲೆ ತಗಾದೆ ತೆಗೆದಿದ್ದಾರೆ. ಚಿತ್ರಕ್ಕೆ ಕಥೆ ಬರೆದಿರೋದು ಅಗ್ನಿ ಶ್ರೀಧರ್. ಅವರ ಬಳಿ ನಾನು ಹಕ್ಕು ಖರೀದಿಸಿದ್ದೇನೆ. ಒಬ್ಬ ನಿರ್ಮಾಪಕನಾಗಿ ಚಿತ್ರಕ್ಕೆ ಹಣ ಮತ್ತು ಶ್ರಮ ಹಾಕಿದ್ದೇನೆ. ಈ ಹಂತದಲ್ಲಿ ಚಿತ್ರದ ಬಿಡುಗಡೆ ಮಾಡಬಾರದು ಎಂದು ದೂರು ಕೊಡೋದರ ಹಿಂದೆ ಬೇರೆ ಯಾರೋ ಇದ್ದಾರೆ''

    ಹೌದು ಎನ್ನಿಸೋಕೆ ಕಾರಣಗಳೂ ಇವೆ.

    ಅಜಿತ್ ಮಾತಿನಲ್ಲಿ ಟ್ರೇಲರಿನಲ್ಲಿ ಜಯರಾಜ್ ಅವರನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುತ್ತಾರೆ. ಆದರೆ, ಹೆಡ್ ಬುಷ್ ಟ್ರೇಲರ್ ಇನ್ನೂ ರಿಲೀಸ್ ಆಗಿಲ್ಲ.

    ದೈವಾಂಶ ಸಂಭೂತನಂತೆ ಜಯರಾಜ್`ನನ್ನ ತೋರಿಸೋಕೆ ಆತನೇನು ದೈವಾಂಶ ಸಂಭೂತ ವ್ಯಕ್ತಿಯಲ್ಲ. ರೌಡಿಯಾಗಿದ್ದವನು. ಕ್ರಿಮಿನಲ್ ಹಿಸ್ಟರಿ ಇದೆ.

    ವೈಯಕ್ತಿಕವಾಗಿ ಸ್ನೇಹಿತರಾಗಿದ್ದೂ ಡಾಲಿ ಧನಂಜಯ್ ಜೊತೆ ಮಾತನಾಡದೆ, ಅವರ ವಿರುದ್ಧ ನೇರವಾಗಿ ಚೇಂಬರ್`ಗೆ ಬಂದು ದೂರು ಕೊಟ್ಟಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

    ಸದ್ಯಕ್ಕೆ ಹೆಡ್ ಬುಷ್ ಚಿತ್ರಕ್ಕೆ ವಿವಾದವೊಂದು ಸುತ್ತಿಕೊಂಡಿದೆ. ಬೇಗ ಬಗೆಹರಿಯಲಿ.

  • ದಾವಣಗೆರೆಯಲ್ಲಿ ಹೆಡ್ ಬುಷ್ ಬೆಣ್ಣೆ ದೋಸೆ : ರಾಜರಾಣಿಯರ ಸೈನ್ಯ

    ದಾವಣಗೆರೆಯಲ್ಲಿ ಹೆಡ್ ಬುಷ್ ಬೆಣ್ಣೆ ದೋಸೆ : ರಾಜರಾಣಿಯರ ಸೈನ್ಯ

    ಸ್ಯಾಂಡಲ್ವುಡ್ ಕ್ವೀನ್ ಮೋಹಕತಾರೆ ರಮ್ಯಾ. ಡಿಂಪಲ್ ಕ್ವೀನ್ ಬುಲ್ಬುಲ್ ರಚಿತಾ ರಾಮ್. ಬಡವ ರಾಸ್ಕಲ್, ಲವ್ ಮಾಕ್ಟೇಲ್ ಖ್ಯಾತಿಯ ಅಮೃತಾ ಅಯ್ಯಂಗಾರ್. ಸಲಗನ ಚೆಲುವೆ ಸಂಜನಾ ಆನಂದ್. ಕಾಂತಾರದ ಸಿಂಗಾರ ಸಿರಿ ಸಪ್ತಮಿ ಗೌಡ. ಶೃತಿ ಹರಿಹರನ್ ಮತ್ತು ಹಬೀಬಿ ಪಾಯಲ್ ರಜಪೂತ್. ಇವರೆಲ್ಲ ರಾಣಿಯರಾದರೆ ಕ್ರೇಜಿ ಸ್ಟಾರ್ ರವಿಚಂದ್ರನ್. ಡೈನಮಿಕ್ ಸ್ಟಾರ್ ದೇವರಾಜ್.ಲೂಸ್ ಮಾದ ಯೋಗಿ. ಕೊತ್ವಾಲ್ ವಸಿಷ್ಠ ಸಿಂಹ. ರಘು ಮುಖರ್ಜಿ. ಬಾಬು ನಾಗೇಂದ್ರ ಜೊತೆ ಡಾನ್ ಎಂಪಿ ಜಯರಾಜ್ ಡಾಲಿ ಧನಂಜಯ್. ಇವರೆಲ್ಲ ರಾಜ. ರಾಜ ರಾಣಿಯರ ಅದ್ಧೂರಿ ಸೈನ್ಯದೊಂದಿಗೆ ದಾವಣಗೆರೆಯಲ್ಲಿ ಹೆಡ್ ಬುಷ್ ಬೆಣ್ಣೆ ದೋಸೆ ಹಾಕೋಕೆ ರೆಡಿಯಾಗಿದ್ದಾರೆ.ಅಕ್ಟೋಬರ್ 16ಕ್ಕೆ ನಕ್ಷತ್ರಗಳೆಲ್ಲ ಅಂದು ದಾವಣಗೆರೆಯಲ್ಲಿ ಮೇಳೈಸುತ್ತಿವೆ.

    ಡಾಲಿ ಜಯರಾಜ್ ಪಾತ್ರದಲ್ಲಿ. ಯೋಗಿ ಗಂಗಾ ಪಾತ್ರದಲ್ಲಿ. ಬಾಲು ಸ್ಯಾಮ್ಸನ್ ಪಾತ್ರದಲ್ಲಿ.ವಸಿಷ್ಠ ಸಿಂಹ ಕೊತ್ವಾಲ್ ಪಾತ್ರದಲ್ಲಿ ನಟಿಸಿರೋ ಅದ್ಧೂರಿ ಸಿನಿಮಾ ಹೆಡ್ ಬುಷ್. ಶೂನ್ಯ ಅವರಿಗೆ ಇದು ಪ್ರಥಮ ನಿರ್ದೇಶನ. ಆ ದಿನಗಳು, ಸ್ಲಂ ಬಾಲದಂತಹ ಅಂಡರ್ವರ್ಲ್ಡ್ ಚಿತ್ರಗಳ ಕಥೆಗಾರ ಅಗ್ನಿ ಶ್ರೀಧರ್ ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆ ಎರಡನ್ನೂ ಬರೆದಿದ್ದಾರೆ. ಕೆಜಿಎಫ್, ಪುಷ್ಪ ಸ್ಟೈಲಿನಲ್ಲೇ ಹೆಡ್ ಬುಷ್ ಎರಡು ಭಾಗಗಳಲ್ಲಿ ಬರುತ್ತಿದೆ. ಅಕ್ಟೋಬರ್ 21ಕ್ಕೆ ರಿಲೀಸ್ ಆಗುತ್ತಿರುವುದು ಮೊದಲ ಭಾಗ. ಬಡವ ರಾಸ್ಕಲ್ ನಂತರ ಡಾಲಿ ನಿರ್ಮಾಪಕರಾಗಿರೋ 2ನೇ ಸಿನಿಮಾ ಹೆಡ್ ಬುಷ್. ರಾಮ್ಕೋ ಸೋಮಣ್ಣ ನಿರ್ಮಾಪರಾಗಿ ಕೈಜೋಡಿಸಿದ್ದಾರೆ.

    ಚಿತ್ರಕ್ಕಾಗಿ ಡಾಲಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಮ್ಯಾನರಿಸಂ ಕೂಡಾ ಸಾಕಷ್ಟು ಬದಲಾಗಿದೆ. ಒಂದು ಕಾಲದಲ್ಲಿ ಅಂಡರ್ವರ್ಲ್ಡ್ನಲ್ಲಿ ಆಕ್ಟಿವ್ ಆಗಿದ್ದ ದಾದಾಗಿರಿಯ ದಿನಗಳು ಪುಸ್ತಕವನ್ನೂ ಬರೆದಿರೋ ಅಗ್ನಿ ಶ್ರೀಧರ್ ಮೂಲಕ ಜಯರಾಜ್ ಬಯೋಪಿಕ್ ಬರುತ್ತಿದೆ. ತನ್ನ 42ನೇ ವಯಸ್ಸಿನಲ್ಲಿ ಕೊಲೆಯಾದ ಜಯರಾಜ್ ಬಯೋಪಿಕ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

  • ಬಿಡುಗಡೆಗೂ ಮೊದಲೇ ಕೋಟಿ ಬಾಚಿದ ಹೆಡ್ ಬುಷ್

    ಬಿಡುಗಡೆಗೂ ಮೊದಲೇ ಕೋಟಿ ಬಾಚಿದ ಹೆಡ್ ಬುಷ್

    ಹೆಡ್ ಬುಷ್ ನಾಳೆ ರಿಲೀಸ್. ಅಂಡರ್‍ವಲ್ರ್ಡ್ ಕಥೆ ಆಧರಿಸಿದ ಚಿತ್ರವಿದು. ಬೆಂಗಳೂರಿನ ಮೊದಲ ಡಾನ್ ಜೈರಾಜ್ ಬಯೋಪಿಕ್. ಕೊತ್ವಾಲ, ಗಂಗಾ ಕಥೆಯೂ ಚಿತ್ರದಲ್ಲಿ ಬರುತ್ತೆ. ಚಿತ್ರದ ಚಿತ್ರಕಥೆ ಸಂಭಾಷಣೆ ಮಾಜಿ ಡಾನ್ ಅಗ್ನಿ ಶ್ರೀಧರ್ ಅವರದ್ದಾಗಿರುವುದರಿಂದ ರಿಯಾಲಿಟಿಗೆ ಹತ್ತಿರದಲ್ಲಿಯೇ ಇರುತ್ತೆ. ಡಾಲಿ ಧನಂಜಯ್ ನಿರ್ಮಾಣದ 2ನೇ ಚಿತ್ರವಿದು. ಮೊದಲ ಚಿತ್ರ ಬಡವ ರಾಸ್ಕಲ್ ಚಿತ್ರದಲ್ಲಿ ಭರ್ಜರಿಯಾಗಿ ಗೆದ್ದಿದ್ದ ಡಾಲಿ 2ನೇ ಸಿನಿಮಾ ಹೆಡ್ ಬುಷ್ ಸಿನಿಮಾದಲ್ಲೂ ಗೆಲುವಿನ ಮೊದಲ ಸೂಚನೆ ಕೊಟ್ಟಿದ್ದಾರೆ. ಶೂನ್ಯ ನಿರ್ದೇಶನದ ಮೊದಲ ಚಿತ್ರವೇ 2 ಭಾಗಗಳಲ್ಲಿ ಬರುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿದೆ.

    ಡಾಲಿ ಜೊತೆ ಚಿತ್ರದಲ್ಲಿ ವಸಿಷ್ಠ ಸಿಂಹ ಕೊತ್ವಾಲನಾಗಿ, ಲೂಸ್ ಮಾದ ಗಂಗ ಪಾತ್ರದಲ್ಲಿ ನಟಿಸಿದ್ದಾರೆ. ರಘು ಮುಖರ್ಜಿ, ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್.. ಮೊದಲಾದವರು ನಟಿಸಿರೋ ಚಿತ್ರದ ಹಬೀಬಿ ಹಾಡು ಈಗಾಗಲೇ ಹೈಲೈಟ್. ನಾಳೆ ರಿಲೀಸ್ ಆಗುತ್ತಿರೋ ಚಿತ್ರವನ್ನು ಝೀಟಿವಿ ಕೊಂಡುಕೊಂಡಿದೆ. ಚಿತ್ರದ ಟಿವಿ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಒಟಿಟಿ ರೈಟ್ಸ್, ಹಿಂದಿ ಸೇರಿದಂತೆ ಸಿನಿಮಾ ಬಿಡುಗಡೆಯ ಎಲ್ಲ ಹಕ್ಕುಗಳನ್ನೂ ಝೀಟಿವಿ ಖರೀದಿ ಮಾಡಿದ್ದು 22 ಕೋಟಿ ಬಾಚಿಕೊಂಡಿದೆ. ಡಾಲಿ ಚಿತ್ರಗಳಲ್ಲೇ ಇದು ಸೂಪರ್ ಬಿಗ್ ಬಜೆಟ್ ಸಿನಿಮಾ ಆಗಲಿದೆ.

  • ಬೆಲ್ ಬಾಟಂ ತೊಟ್ಟು ಹೊರಟ ಡಾಲಿ ಟೀಂ

    ಬೆಲ್ ಬಾಟಂ ತೊಟ್ಟು ಹೊರಟ ಡಾಲಿ ಟೀಂ

    ಬೆಲ್ ಬಾಟಂ ಪ್ಯಾಂಟುಗಳು. ಉದ್ದನೆಯ ಹಿಪ್ಪಿ ಕೂದಲು.. ಅಥವಾ ಕಿವಿಯನ್ನು ಮುಚ್ಚಬಹುದಾದ ಜೊಂಪು ಜೊಂಪಾದ ಕೂದಲಿನ ಹೇರ್ ಸ್ಟೈಲ್.. ಅಂಬಾಸಿಡರ್ ಕಾರು.. ಎಲ್ಲವೂ ಹಾಕ್ಕೊಂಡು ಹೊರಟರೆ ನಾವೇ 80-90ರ ದಶಕದಲ್ಲಿದ್ದೇವೇನೋ ಎಂಬ ಅನುಮಾನ ಮೂಡೋದು ಸಹಜ. ಸ್ಟೈಲ್ ಅನ್ನೋದು ಒಂದು ಕಾಲ ಹಿಂದಕ್ಕೇ ಹೋಗುತ್ತಿರುವ ಹೊತ್ತಿನಲ್ಲಿ ಹಳೆಯ ಫ್ಯಾಷನ್ನುಗಳು ಇವತ್ತಿನ ಟ್ರೆಂಡುಗಳಾಗುತ್ತಿರೋ ಸಮಯದಲ್ಲಿ ಇಂತಹ ಟ್ರೆಂಡ್ ಕೂಡಾ ಹೊಸ ಫ್ಯಾಷನ್ ಇರಬಹುದು ಎಂದುಕೊಂಡರೆ ಅಚ್ಚರಿ ಪಡಬೇಕೂ ಇಲ್ಲ.ಆದರೆ ಇದು  ಹೆಡ್ ಬುಷ್ ಸಿನಿಮಾ ತಂಡದ ಪ್ರಚಾರದ ಸ್ಟೈಲ್.

    ಡಾಲಿ ಧನಂಜಯ್ ನಟಿಸಿ ನಿರ್ಮಾಣ ಮಾಡಿರುವ ಹೆಡ್ ಬುಷ್ ಅಕ್ಟೋಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಇಡೀ ಚಿತ್ರತಂಡ ರೆಟ್ರೋ ಲುಕ್ ಮೊರೆ ಹೋಗಿದೆ. ಕಾಸ್ಟ್ಯೂಮ್ ಡಿಸೈನರ್ ಸಚಿನ ಇದಕ್ಕಾಗಿಯೇ 100ಕ್ಕೂ ಹೆಚ್ಚು ಬೆಲ್ ಬಾಟಂ ಪ್ಯಾಂಟ್ ಮತ್ತು ಟೀಷರ್ಟ್ ವ್ಯವಸ್ಥೆ ಮಾಡಿದ್ದಾರೆ.

    ಜನ ಕೇವಲ ನಮ್ಮ ಸಿನಿಮಾವನ್ನಲ್ಲ. ನಮ್ಮ ಪ್ರಚಾರದ ವೈಖರಿಯನ್ನೂ ಗಮನಿಸುತ್ತಾರೆ. ಬಡವ ರಾಸ್ಕಲ್ ಗೆಲುವಿಗೆ ಅದೂ ಒಂದು ಕಾರಣ ಎನ್ನುವ ಡಾಲಿ ಧನಂಜಯ್ ಹೆಡ್ ಬುಷ್ ಪ್ರಚಾರದಿಂದ ಮತ್ತೊಮ್ಮೆ ಬೆಲ್ ಬಾಟಂ ಟ್ರೆಂಡ್ ಶುರುವಾಗುತ್ತಿದೆ ಎನ್ನುತ್ತಾರೆ.

    ಡಾಲಿ ಪಿಕ್ಚರ್ಸ್ ಮತ್ತು ರಾಮ್ಕೋ ಸೋಮಣ್ಣ ಅವರ ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಿಸಿರೋ ಚಿತ್ರಕ್ಕೆ ಶೂನ್ಯ ನಿರ್ದೇಶಕ. ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಇದೆ. ರವಿಚಂದ್ರನ್, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

  • ಮತ್ತೊಮ್ಮೆ ಗೆದ್ದ ಡಾಲಿ

    ಮತ್ತೊಮ್ಮೆ ಗೆದ್ದ ಡಾಲಿ

    ಹೆಡ್ ಬುಷ್ ಚಿತ್ರದ ಮೂಲಕ ಡಾಲಿ ಧನಂಜಯ್ ಮತ್ತೊಮ್ಮೆ ಗೆದ್ದಿದ್ದಾರೆ. ತಮ್ಮ 2ನೇ ನಿರ್ಮಾಣದ ಚಿತ್ರದಲ್ಲೂ ದಾಖಲೆಯ ಕಲೆಕ್ಷನ್ ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಮೊದಲ ದಿನದ ಕಲೆಕ್ಷನ್ 4.23 ಕೋಟಿ. ಎರಡನೇ ದಿನದ ಕಲೆಕ್ಷನ್ 6ಕೋಟಿ ದಾಟಿದೆ. ರಾಜ್ಯಾದ್ಯಂತ 490 ಸೆಂಟರುಗಳಲ್ಲಿ ಬಿಡುಗಡೆಯಾಗಿದ್ದ ಹೆಡ್ ಬುಷ್ ಚಿತ್ರದ ಮೊದಲ ಭಾಗ  ಪ್ರೇಕ್ಷಕರಿಗೆ ಇಷ್ಟವಾಗಿದೆ. ಡಾಲಿ ಡಾನ್ ಜೈರಾಜ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ರೌಡಿಸಂನ್ನು ವೈಭವೀಕರಿಸದೆ ಆಗಿನ ಕಾಲದ ಘಟನಾವಳಿಗಳ ಮೂಲಕ 70ರ ದಶಕದ ಕಥೆಯನ್ನು ಜನರ ಮುಂದೆ ಪ್ರಸ್ತುತ ಪಡಿಸಿರುವ ರೀತಿ ಜನರಿಗೆ ಇಷ್ಟವಾಗಿದೆ.

    ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ, ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ  ಸಿಂಹ, ದೇವರಾಜ ಅರಸು ಪಾತ್ರದಲ್ಲಿ ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್.. ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶೂನ್ಯ ಮೊದಲ ನಿರ್ದೇಶನದಲ್ಲೇ ಭರ್ಜರಿ ಗೆಲುವು ಕೊಟ್ಟಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಪರ್ಫೆಕ್ಟ್ ಮ್ಯಾಚ್ ಆಗಿದೆ.

    ಕಾಂತಾರ ಚಿತ್ರದ ಅದ್ಭುತ ಪ್ರದರ್ಶನದ ನಡುವೆಯೂ ಹೆಡ್ ಬುಷ್ ಚಿತ್ರವೂ ಗೆದ್ದಿರುವುದು ಚಿತ್ರರಂಗಕ್ಕೆ ಶುಭ ಸುದ್ದಿ.

  • ಶೂಟಿಂಗ್ ಮುಗಿಸಿದ ಹೆಡ್ ಬುಷ್

    ಶೂಟಿಂಗ್ ಮುಗಿಸಿದ ಹೆಡ್ ಬುಷ್

    ಭೂಗತ ಪಾತಕಿ ಎಂ.ಪಿ.ಜಯರಾಜ್ ಲೈಫ್ ಸ್ಟೋರಿ ಆಧರಿಸಿ ನಿರ್ಮಾಣವಾಗುತ್ತಿರೋ ಚಿತ್ರ ಹೆಡ್ ಬುಷ್. 1970ರ ದಶಕದ ಭೂಗತ ಜಗತ್ತನ್ನು, ಭೂಗತ ಜಗತ್ತಿನಲ್ಲೇ ಇದ್ದ ಅಗ್ನಿ ಶ್ರೀಧರ್ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಸಂಭಾಷಣೆ ಮೂಲಕ ತೋರಿಸಿದ್ದರೆ ಶೂನ್ಯ ಈ ಚಿತ್ರದ ಡೈರೆಕ್ಟರ್. ಚಿತ್ರಕ್ಕೆ ಹೀರೋ ಡಾಲಿ ಧನಂಜಯ್. ನಿರ್ಮಾಪಕರೂ ಅವರೇ.

    ಡಾಲಿ ಜೊತೆ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಬೆಂಗಳೂರಿನ ಸೆಟ್‍ಗಳಲ್ಲೇ ಬಹುತೇಕ ನಡೆದಿದ್ದು, ಈಗ ಚಿತ್ರೀಕರಣ ಮುಕ್ತಾಯವಾಗಿದೆ.

    ನಿರ್ಮಾಣದಲ್ಲಿ ಡಾಲಿ ಜೊತೆ ರಾಮ್ಕೊ ಸೋಮಣ್ಣ ಕೂಡಾ ಕೈಜೋಡಿಸಿದ್ದಾರೆ. ಚಿತ್ರದ ನಿರ್ದೇಶಕರ ಹೆಸರು ಸ್ವಲ್ಪ ವಿಭಿನ್ನವಾಗಿದೆ. ಶೂನ್ಯ. ಅವರು ಫಿಲಂ ಮೇಕಿಂಗ್‍ನಲ್ಲಿ ಡಬಲ್ ಡಿಗ್ರಿ ಪಡೆದಿದ್ದು, ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಡಿದ ಅನುಭವವಿದೆ.

  • ಶ್ರೀಮಂತ ರಾಸ್ಕಲ್`ನ ಹೆಡ್ ಬುಷ್'ನಲ್ಲಿ ವಸಿಷ್ಠ ಸಿಂಹ ಪಾತ್ರವೇನು?

    ಶ್ರೀಮಂತ ರಾಸ್ಕಲ್`ನ ಹೆಡ್ ಬುಷ್'ನಲ್ಲಿ ವಸಿಷ್ಠ ಸಿಂಹ ಪಾತ್ರವೇನು?

    ಬಡವ ರಾಸ್ಕಲ್ ಚಿತ್ರದ ಸಕ್ಸಸ್ ನಂತರ ನಿರ್ಮಾಪಕರಾಗಿಯೂ ಗೆದ್ದ ಡಾಲಿ ಧನಂಜಯ್ ಅವರಿಗೆ ನಟ ಹಾಗೂ ಗೆಳೆಯ ವಸಿಷ್ಠ ಸಿಂಹ ರ್ಶರೀಮಂತ ರಾಸ್ಕಲ್ ಅನ್ನೋ ಬಿರುದು ಕೊಟ್ಟಿದ್ದಾರೆ. ಇದೆಲ್ಲ ಆಗಿದ್ದು ಹೆಡ್ ಬುಷ್ ಚಿತ್ರದ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ.

    ಬಡವ ರಾಸ್ಕಲ್ ಚಿತ್ರದಲ್ಲೇ ವಸಿಷ್ಠ ಅತಿಥಿಯಾಗಿ ಬರಬೇಕಿತ್ತು. ಆಗಲಿಲ್ಲ. ನನ್ನ ಮುಂದಿನ ಸಿನಿಮಾ ಹೆಡ್ ಬುಷ್‍ನಲ್ಲಿ ರೌಡಿ ಜಯರಾಜ್ ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಡಾಲಿ ಧನಂಜಯ್.

    ಧನಂಜಯ್`ಗೆ ಇದು 10 ವರ್ಷಗಲ ಸ್ಟ್ರಗಲ್‍ಗೆ ಸಿಕ್ಕ ಗೆಲುವು. ಅವನೀಗ ಶ್ರೀಮಂತ ರಾಸ್ಕಲ್ ಆಗಿದ್ದಾನೆ. ನಮ್ಮ ನಿರ್ಮಾಪಕರೇ ಹೇಳಿರೋದ್ರಿಂದ ನಾನೂ ಹೇಳಬಹುದು. ನನ್ನದು ರೌಡಿ ಜಯರಾಜ್ ಪಾತ್ರ ಎಂದಿದ್ದಾರೆ ವಸಿಷ್ಠ ಸಿಂಹ.

    ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಅಗ್ನಿ ಶ್ರೀಧರ್ ಅವರದ್ದು. ಶೂನ್ಯ ನಿರ್ದೇಶಿಸುತ್ತಿರೋ ಚಿತ್ರದಲ್ಲಿ ರವಿಚಂದ್ರನ್, ಲೂಸ್ ಮಾದ ಯೋಗಿ, ಶೃತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ಬೃಹತ್ ತಾರಾಗಣವಿದೆ.

  • ಹಬೀಬಿ ಎಂಬ ಸ್ಪೆಷಲ್ ಸಾಂಗ್.. : ಹೆಡ್ ಬುಷ್ ಸ್ಪೆಷಲ್

    ಹಬೀಬಿ ಎಂಬ ಸ್ಪೆಷಲ್ ಸಾಂಗ್.. : ಹೆಡ್ ಬುಷ್ ಸ್ಪೆಷಲ್

    ಡಾಲಿ ಧನಂಜಯ್ ನಟನಾಗಿ , ಪಾಯಲ್  ರಜಪೂತ್ ನಾಯಕಿಯಾಗಿರೋ ಹೆಡ್ ಬುಷ್ ಚಿತ್ರದ ಸ್ಪೆಷಲ್ ಸಾಂಗ್ ಲಿರಿಕಲ್ ವಿಡಿಯೋ ಹೊರಬಿಟ್ಟಿದ್ದಾರೆ. ಚಿತ್ರದಲ್ಲಿ  ಕ್ರೇಜಿಸ್ಟಾರ್ ರವಿಚಂದ್ರನ್ , ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಶೃತಿ ಹರಿಹರನ್, ದೇವರಾಜ್ ಎಲ್ಲರೂ ಇದ್ದಾರೆ. 80 ರ ದಶಕದಲ್ಲಿ ಬೆಂಗಳೂರನ್ನೇ  ನಡುಗಿಸುತ್ತಿದ್ದ   ಡಾನ್ ಜಯರಾಜ್ ಕಥೆಯನ್ನೆ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಅಕ್ಟೋಬರ್ 21ಕ್ಕೆ ದೀಪಾವಳಿಗೆ ಹೆಡ್ ಬುಷ್ ಹಾಕಲಿದ್ದಾರೆ ಡಾಲಿ.

    ಚಿತ್ರದ ಹಬೀಬಿ ಅನ್ನೋ ಸ್ಪೆಷಲ್ ಸಾಂಗ್ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ರೆಟ್ರೋ ಸ್ಟೈಲ್ನಲ್ಲಿ ಬಂದಿರೊ ಹಾಡು ಕಿಕ್ಕೇರಿಸಿದೆ. ಡಾಲಿ  ಡಾನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. 80ರ ದಶಕದ ಸೆಟ್ ಹಾಕಿ ಆ ಕಾಲದ ಕ್ಯಾಬರೆ ಡ್ರೆಸ್ನಲ್ಲಿಯೇ ಅದ್ಭುತವಾಗಿ ಕುಣಿದಿದ್ದಾರೆ ಪಾಯಲ್.

    ಚರಣ್ ರಾಜ್ ಸಂಗೀತ  ಸಂಯೋಜನೆಯಲ್ಲಿ ಮೂಡಿಬಂದಿರುವ ಹಬೀಬಿ ಹಾಡಿಗೆ ಹಾಡನ್ನ ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಧನಂಜಯ್ ಅವರದ್ದೇ. ಚಿತ್ರದ ಹೀರೋ ಕಂ ನಿರ್ಮಾಪಕರೂ ಅವರೇ. ರಾಮ್ಕೋ ಸೋಮಣ್ಣ ಹಾಗೂ ಧನಂಜಯ್ ಜೊತೆಯಾಗಿ ನಿರ್ಮಿಸಿರೋ ಸಿನಿಮಾ ಹೆಡ್ ಬುಷ್. ಅಗ್ನಿ ಶ್ರೀಧರ್ ಕಥೆ ಚಿತ್ರಕ್ಕಿದ್ದು, ಶೂನ್ಯ ಡೈರೆಕ್ಟರ್.

  • ಹೆಡ್ ಬುಷ್ ಒಡ್ಡೋಲಗಕ್ಕೆ ಕ್ವೀನ್ಸ್ 

    ಹೆಡ್ ಬುಷ್ ಒಡ್ಡೋಲಗಕ್ಕೆ ಕ್ವೀನ್ಸ್ 

    ಡ್ ಬುಷ್ ರಿಲೀಸ್ ಆಗುವುದಕ್ಕೆ ರಾಜಬೀದಿ ಸಿದ್ಧವಾಗಿದೆ.  ಇದು ಡಾಲಿ ಧನಂಜಯ್ ನಟಿಸಿ ನಿರ್ಮಾಣ ಮಾಡಿರೋ ಸಿನಿಮಾ. ಚಿತ್ರದ ಪ್ರಚಾರ ಅಲ್ಲಲ್ಲಿ ನಡೆಯುತ್ತಿದೆಯಾದರೂ.. ಈಗ ಅಧಿಕೃತವಾಗಿ ಶುರುವಾಗಿದೆ. ಅಪ್ಪು ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿ ಅಧಿಕೃತವಾಗಿ ಹೆಡ್ ಬುಷ್ ಪ್ರಚಾರಕ್ಕೆ ಓಂಕಾರ ಹಾಕಿದ್ದಾರೆ ಡಾಲಿ.

    ಈ ಚಿತ್ರದಲ್ಲಿ ಡಾಲಿ, ಬೆಂಗಳೂರಿನ ಮೊದಲ ಡಾನ್ ಎಂಪಿ ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಜಯರಾಜ್ ಎಂಬುವವನು ಹೇಗೆ ಬೆಳೆದು ಡಾನ್ ಆದ ಎನ್ನುವುದು ಕಥೆ. ಒಂದು ಕಾಲದಲಿ ರೌಡಿಸಂನಲ್ಲಿದ್ದ ಅಗ್ನಿ ಶ್ರೀಧರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅವರ ಟೀಮಿನಲ್ಲಿದ್ದ ಶೂನ್ಯ ಚಿತ್ರಕ್ಕೆ ನಿರ್ದೇಶಕ. ರವಿಚಂದ್ರನ್, ಯೋಗಿ, ವಸಿಷ್ಠ ಸಿಂಹ, ಶೃತಿ ಹರಿಹರನ್, ಪಾಯಲ್ ರಜಪೂತ್, ದೇವರಾಜ್, ರಘು ಮುಖರ್ಜಿ ಸೇರಿದಂತೆ.. ಈ ಚಿತ್ರದಲ್ಲಿ ಘಟಾನುಘಟಿಗಳ ದಂಡೇ ಇದೆ. ಈಗಾಗಲೇ ಹಬೀಬಿ ಸಾಂಗ್ ವೈರಲ್ ಆಗುತ್ತಿದೆ. ಇದೀಗ ಚಿತ್ರದ ಪ್ರಿ-ರಿಲೀಸ್ ಈವೆಂಟ್‍ನ್ನು ದಾವಣಗೆರೆಯಲ್ಲಿ ಯೋಜಿಸಿದೆ ಹೆಡ್ ಬುಷ್ ಟೀಂ.

    ಅಕ್ಟೋಬರ್ 21ರಂದು ದಾವಣಗೆರೆಯ ಎಂಬಿಎ ಕಾಲೇಜ್ ಗ್ರೌಂಡಿನಲ್ಲಿ ಪ್ರಿ-ರಿಲೀಸ್ ಈವೆಂಟ್ ಪ್ಲಾನ್ ಮಾಡಿದ್ದಾರೆ ಡಾನ್ ಜಯರಾಜ್. ಈ ಈವೆಂಟ್‍ಗೆ ಸ್ಯಾಂಡಲ್‍ವುಡ್‍ನಿಂದ ಇಬ್ಬರು ಕ್ವೀನ್ಸ್ ಬರುತ್ತಿರುವುದು ವಿಶೇಷ. ಒಬ್ಬರು ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಮತ್ತು ಮತ್ತೊಮ್ಮಬರು ಡಿಂಪಲ್ ಕ್ವೀನ್ ರಚಿತಾ ರಾಮ್. ಇವರಿಬ್ಬರ ಜೊತೆ ಸಿಂಗಾರ ಸಿರಿ ಲೀಲಾ ಅರ್ಥಾತ್ ಸಪ್ತಮಿ ಗೌಡ ಕೂಡಾ ಇರುತ್ತಾರೆ. ಬಡವರಾಸ್ಕಲ್ ಫೇಮ್ ಅಮೃತಾ ಅಯ್ಯಂಗಾರ್, ನವೀನ್ ಶಂಕರ್, ನಾಗಭೂಷಣ್, ನೀನಾಸಂ ಸತೀಶ್, ಪೂರ್ಣಚಂದ್ರ.. ಹೀಗೆ ಡಾಲಿ ಗೆಳೆಯರ ಸೈನ್ಯವೇ ಅಲ್ಲಿರುತ್ತೆ.

  • ಹೆಡ್ ಬುಷ್ ಚಿತ್ರಕ್ಕೆ ಕಿರುಚಾಡಿ ಪ್ರಚಾರ : ಐವರ ವಿರುದ್ಧ ಎಫ್‍ಐಆರ್

    head bush image

    ಹೆಡ್ ಬುಷ್ ಚಿತ್ರ ಥಿಯೇಟರುಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಒಳ್ಳೆಯ ಕಲೆಕ್ಷನ್ ಕೂಡಾ ಮಾಡುತ್ತಿದೆ. ಇದರ ಮಧ್ಯೆ ಡಾಲಿ ಧನಂಜಯ್ ಅವರನ್ನು ಟಾರ್ಗೆಟ್ ಮಾಡಿ ವಿಲನ್ ಎಂಂಬಂತೆ ಬಿಂಬಿಸುವ ಯತ್ನವೂ ಜರುಗಿದೆ. ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂದು ಒಂದು ತಂಡ, ಕರಗಕ್ಕೆ ಅವಮಾನ ಮಾಡಿದ್ದಾರೆ ಎಂದು ಮತ್ತೊಂದು ತಂಡ ಪ್ರಚಾರ ಮಾಡಿ ವಿವಾದವೆಬ್ಬಿಸಿದರು. ನಂತರ ಸಿನಿಮಾ ನೋಡಿ ಸಂಧಾನದೊಂದಿಗೆ ಸುಮ್ಮನಾದರು. ಅಭಿಮಾನಿಗಳೇ ಚಿತ್ರದ ಪರ ಪ್ರಚಾರಕ್ಕೆ ನಿಂತರು. ಅಭಿಮಾನಿಗಳ ಆರ್ಭಟಕ್ಕೆ ವಿರೋಧದ ಧ್ವನಿಯೆತ್ತಿದವರ ತಣ್ಣಗಾದರು. ಆದರೆ ಅಭಿಮಾನ ಅತಿರೇಕಕ್ಕೆ ಹೋದರೆ ಏನಾಗಬಹುದೋ.. ಅದೇ ಈಗ ವಿಧಾನಸೌಧ ಮೆಟ್ರೋ ಸ್ಟೇಷನ್ ಎದುರು ಆಗಿದೆ.

    ವಿಧಾನಸೌಧದ ಮೆಟ್ರೋ ಸ್ಟೇಷನ್ ಎದುರು ಐವರು ಯುವಕರು ಹೆಡ್ ಬುಷ್ ಚಿತ್ರದ ಪರ ಘೋಷಣೆ ಕೂಗುತ್ತಾ ಪ್ರಚಾರ ನಡೆಸುತ್ತಿದ್ದರು. ಬೈಕುಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಎಂಬುವವರು ದೂರು ನೀಡಿದ್ದು ಐವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಶೂನ್ಯ ನಿರ್ದೇಶನದ ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಡಾಲಿ, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ.. ಮೊದಲಾದವರು ನಟಿಸಿರೋ ಚಿತ್ರದಲ್ಲಿ ಡಾನ್ ಜೈರಾಜ್ ಜೀವನ ಚರಿತ್ರೆಯಿದೆ.

     

     

  • ಹೆಡ್ ಬುಷ್ ಟ್ರೇಲರ್ : ಇಂದಿರಾ ಗಾಂಧಿ ಎಚ್ಚರಿಕೆ ಕೊಟ್ಟಿದ್ದ ರಿಯಲ್ ಸ್ಟೋರಿ

    ಡ್ ಬುಷ್ ಟ್ರೇಲರ್ : ಇಂದಿರಾ ಗಾಂಧಿ ಎಚ್ಚರಿಕೆ ಕೊಟ್ಟಿದ್ದ ರಿಯಲ್ ಸ್ಟೋರಿ

    ನೀವು ಕೆಜಿಎಫ್ ಸಿನಿಮಾ ನೋಡಿದ್ದರೆ ಇಂತಾದ್ದೊಂದು ಕಥೆ ನಿಜಕ್ಕೂ ನಡೆದಿತ್ತಾ? ರಾಕಿಭಾಯ್ ಆಗಿ ಯಶ್, ರುಮಿಕಾ ಸೇನ್ ಆಗಿ ರವೀನಾ ಟಂಡನ್ ಅದ್ಭುತ ಅಭಿನಯವನ್ನ ತೆರೆ ಮೇಲೆ ತಂದಿದ್ದರು. ರವೀನಾ ಪಾತ್ರ ಇಂದಿರಾ ಗಾಂಧಿಯನ್ನು ಹೋಲುತ್ತಿತ್ತು. ಅದು ಕಾಲ್ಪನಿಕ ಕಥೆಯಾದರೆ ಇದು ರಿಯಲ್ ಸ್ಟೋರಿ. ಬೆಂಗಳೂರಿನ ಮೊದಲ ಡಾನ್, ಡಾನ್ ಜಯರಾಜ್ ಬಯೋಪಿಕ್. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಡಾಲಿ ಜಯರಾಜ್ ಆಗಿ ಬೇರೆಯದೇ ಖದರ್ ತೋರಿಸಿದ್ದಾರೆ. ಗಂಗನಾಗಿ ಯೋಗಿ, ಕೊತ್ವಾಲನಾಗಿ ವಸಿಷ್ಠ ಸಿಂಹ ಥೇಟು ರೌಡಿಗಳೇ.

    ಈ ಬೆಂಗ್ಳೂರು ಪೂರಾ ನಂದು ಅನ್ನೋ ಡಾಲಿಯ ಡೈಲಾಗ್, ಮುಖ್ಯಮಂತ್ರಿ, ರಾಜಕಾರಣಿಗಳು, ರೌಡಿಗಳು ಮತ್ತು ಪೊಲೀಸ್ ಆಫೀಸರುಗಳ ಲಿಂಕ್‍ನ್ನು ತೋರಿಸಿಯೂ ತೋರಿಸದಂತೆ ಇಟ್ಟಿರುವುದು ಟ್ರೇಲರ್‍ನ ಗಮನಾರ್ಹ ಅಂಶ. ಸಿಗರೇಟಿನ ಬೂದಿಯನ್ನು ಚಿಟಿಕೆ ಹೊಡೆದು ಉದುರಿಸುವುದು ಜಯರಾಜ್ ಸ್ಟೈಲ್. ಅದನ್ನು ಸಖತ್ತಾಗಿ ತೋರಿಸಿದ್ದಾರೆ ಜಯರಾಜ್. ಅಂದಹಾಗೆ ಆಗಿನ ಕಾಲದಲ್ಲಿ ಒಂದು ಹಂತದಲ್ಲಿ ರಾಜಕಾರಣಿಗಳಿಂದಲೇ ಬೆಳೆಯುವ ಜಯರಾಜ್, ನಂತರ ರಾಜಕಾರಣಿಗಳನ್ನೇ ಕಂಟ್ರೋಲ್ ಮಾಡುವ ಹಂತಕ್ಕೆ ಹೋಗುತ್ತಾನೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎನ್ನುವುದು ಹಳ್ಳ ಹಿಡಿಯುತ್ತದೆ. ಆಗ ಖುದ್ದು ಇಂದಿರಾ ಗಾಂಧಿ ಕರ್ನಾಟಕ ಮುಖ್ಯಮಂತ್ರಿಗೆ ಫೋನ್ ಮಾಡಿ ಲಾ&ಆರ್ಡರ್ ಕಂಟ್ರೋಲಿಗೆ ತೆಗೆದುಕೊಳ್ಳಿ ಎನ್ನುತ್ತಾಳೆ. ಸಿಎಂ ಆಗಿ ನಟಿಸಿರುವುದು ದೇವರಾಜ್.

    ಸಿನಿಮಾಗೆ ಕಥೆ ರಿಯಲ್ಲು. ಸ್ವಲ್ಪ ಮಸಾಲೆ ಜೊತೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವುದು ಅಂದಕಾಲತ್ತಿಲ್ ಡಾನ್ ಅಗ್ನಿ ಶ್ರೀಧರ್. ವಾಸ್ತವತೆಗೆ ಹತ್ತಿರವೇ ಇರುತ್ತವೆ. ಶೂನ್ಯ ನಿರ್ದೇಶನದ ಮೊದಲ ಸಿನಿಮಾದಲ್ಲಿ ಪ್ರತಿಭೆಗಳ ಸೈನ್ಯವೇ ಇದೆ.

    ಡಾಲಿ, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ... ಹೀಗೆ ದೊಡ್ಡವರೇ ತುಂಬಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡಾ ನಟಿಸಿದ್ದಾರೆ. ಆದರೆ ಟ್ರೇಲರ್‍ನಲ್ಲಿ ತೋರಿಸಿಲ್ಲ. ಬಹುಶಃ 2ನೇ ಭಾಗದಲ್ಲಿರುಬಹುದು. ಸಿನಿಮಾ 21ಕ್ಕೆ ರಿಲೀಸ್.

  • ಹೆಡ್ ಬುಷ್ ಬೇರು ಇರೋದೇ ಇಲ್ಲಿ : ಮೈ ಡೇಸ್ ಇನ್ ದಿ ಅಂಡರ್‍ವಲ್ರ್ಡ್:ರೈಸ್  

    ಹೆಡ್ ಬುಷ್ ಬೇರು ಇರೋದೇ ಇಲ್ಲಿ : ಮೈ ಡೇಸ್ ಇನ್ ದಿ ಅಂಡರ್‍ವಲ್ರ್ಡ್:ರೈಸ್  

    ಹೆಡ್ ಬುಷ್  ಕಥೆ ಡಾನ್ ಜಯರಾಜ್ ಕುರಿತಾದದ್ದು. ಚಿತ್ರಕಥೆ ಮತ್ತು ಸಂಭಾಷಣೆ ಅಗ್ನಿ ಶ್ರೀಧರ್ ಅವರದ್ದು. ಡಾಲಿ ಧನಂಜಯ್ ಡಾನ್ ಜಯರಾಜ್ ಆಗಿದ್ದರೆ ವಸಿಷ್ಠ ಸಿಂಹ ಕೊತ್ವಾಲನಾಗಿದ್ದಾರೆ. 1974-1978 ರಲ್ಲಿ ನಡೆದ ನಿರ್ದಿಷ್ಟ ಘಟನೆಯ ಸುತ್ತ ಕಥೆ ಇದೆ. ಮೈ ಡೇಸ್ ಇನ್ ದಿ ಅಂಡರ್‍ವಲ್ರ್ಡ್:ರೈಸ್ ಅನ್ನೋ ಅಗ್ನಿ ಶ್ರೀಧರ್ ಅವರ ಕಾದಂಬರಿಯೇ ಈ ಸಿನಿಮಾದ ಕಥೆಯೂ ಹೌದು. ಹೀಗಾಗಿಯೇ ತಮ್ಮದೇ ಅನುಭವದ ಕಥೆಗೆ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ ಅಗ್ನಿ ಶ್ರೀಧರ್.

    ಈ ಚಿತ್ರವು ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ಅಲ್ಲ, ಆದರೆ, ಭೂಗತ ಜಗತ್ತಿನವರ ಜೀವನವನ್ನು ಮತ್ತು 1974-1978 ರಲ್ಲಿ ನಡೆದ ನಿರ್ದಿಷ್ಟ ಘಟನೆಯನ್ನು ವಿವರಿಸುತ್ತದೆ. ಜಯರಾಜ್ ಬಗ್ಗೆ ಜನರಿಗೆ ತಿಳಿದಿರುವ ಕಾರಣ ಮತ್ತು ಜಯರಾಜ್ ಪಾತ್ರವನ್ನು ಧನಂಜಯ್ ನಿರ್ವಹಿಸುತ್ತಿರುವುದರಿಂದ, ಇದು ಕೇವಲ ಒಬ್ಬ ವ್ಯಕ್ತಿಯ ಬಗ್ಗೆ ಎಂದು ಜನರು ಭಾವಿಸುತ್ತಾರೆ. ಆದರೆ, ಅವರು ಚಿತ್ರದ ಒಂದು ಭಾಗ ಮಾತ್ರ ಎನ್ನುತ್ತಾರೆ ಅಗ್ನಿ ಶ್ರೀಧರ್.

    ನಟ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಎರಡನೇ ಚಿತ್ರ ಹೆಡ್ ಬುಷ್ ಅಕ್ಟೋಬರ್ 21 ಕ್ಕೆ  ತೆರೆಗೆ ಬರಲಿದೆ. ಚಿತ್ರದಲ್ಲಿ ಪಾಯಲ್ ರಜಪೂತ್, ವಿ. ರವಿಚಂದ್ರನ್, ಶ್ರುತಿ ಹರಿಹರನ್, ಸ್ಯಾಂಡಿ ಮಾಸ್ಟರ್, ರಘು ಮುಖರ್ಜಿ ಮತ್ತು ಯೋಗೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೂನ್ಯಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು 70ರ ದಶಕದ ಭೂಗತ ಜಗತ್ತನ್ನು ಪ್ರತಿನಿಧಿಸುತ್ತದೆ.

    ಹೆಡ್ ಬುಷ್ ಬೆಂಗಳೂರು ನಗರದ ಕಥೆ ಎನ್ನುವ ಅಗ್ನಿ ಶ್ರೀಧರ್, 'ನಗರಗಳನ್ನು ರಾಜಕೀಯ ನಾಯಕರು, ಅಧಿಕಾರಿಗಳು ನಿರ್ಮಿಸುವುದಿಲ್ಲ, ಸಾಮಾನ್ಯ ಜನರು ನಿರ್ಮಿಸಿದ್ದಾರೆ. ಚಿತ್ರವು ಬೆಂಗಳೂರಿನ ಒಳ್ಳೆಯದು ಮತ್ತು ಕೆಟ್ಟದ್ದನ್ನು ತೋರಿಸುತ್ತದೆ' ಎಂದು ಹೇಳುತ್ತಾರೆ. ಚಿತ್ರದಲ್ಲಿ ತೋರಿಸಿರುವ ವ್ಯಕ್ತಿತ್ವಗಳು  ನಿಜ ಜೀವನದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಕೆಲವೆಡೆ ಬದಲಾವಣೆಗಳನ್ನು ಮಾಡಲಾಗಿದೆ. ನಟ ಮತ್ತು ನಿರ್ಮಾಪಕರಾಗಿ ಧನಂಜಯ್ ಅವರು ತುಂಬಾ ರಿಸ್ಕ್ ತೆಗೆದುಕೊಂಡಿದ್ದಾರೆ ಮತ್ತು ಹೆಡ್ ಬುಷ್‌ಗಾಗಿ ತಮ್ಮ ಜೀವನವನ್ನು ಪಣಕ್ಕಿಟ್ಟಿದ್ದಾರೆ. ಅವರ ಚಿತ್ರ ಯಶಸ್ವಿಯಾಗಲಿ ಎಂದು ಬಯಸುತ್ತೇನೆ  ಅಗ್ನಿ ಶ್ರೀಧರ್.