` kanthara, - chitraloka.com | Kannada Movie News, Reviews | Image

kanthara,

  • 95 ಸೆಂಟರ್`ಗಳಲ್ಲಿ ಇವತ್ತೇ ಕಾಂತಾರ ಭರ್ಜರಿ ಶೋ

    95 ಸೆಂಟರ್`ಗಳಲ್ಲಿ ಇವತ್ತೇ ಕಾಂತಾರ ಭರ್ಜರಿ ಶೋ

    ಕಾಂತಾರ ರಿಲೀಸ್ ಆಗುವುದು ನಾಳೆಗೆ. ಸೆ.30ರಂದು ರಿಲೀಸ್ ಆಗಬೇಕಿದ್ದ ಕಾಂತಾರ ಚಿತ್ರದ ಪ್ರೀಮಿಯರ್ ಶೋ ಇವತ್ತೇ ಶುರುವಾಗುತ್ತಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಮೊದಲ ಚಿತ್ರ ಕಾಂತಾರ. ಹೊಂಬಾಳೆಯವರ ಜೊತೆ ಮೊದಲ ಸಿನಿಮಾ. ಚಿತ್ರ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಆದರೆ ಇಂಗ್ಲಿಷ್ ಸಬ್ ಟೈಟಲ್ಲಿನಲ್ಲಿ ಬಿಡುಗಡೆಯಾಗುತ್ತಿದೆ.

    ಚಿತ್ರದ ಪ್ರೀಮಿಯರ್ ಶೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 95 ಕೇಂದ್ರಗಳಲ್ಲಿ ಪ್ರೀಮಿಯರ್ ಶೋ ನಡೆಯಲಿವೆ. ಕರ್ನಾಟಕದಲ್ಲಿ 50 ಕಡೆ, ಹೈದರಾಬಾದ್, ಚೆನ್ನೈ, ಕೊಚ್ಚಿ, ಮುಂಬೈ, ಪೂನಾ, ದೆಹಲಿ, ಪಟ್ನಾ ಸೇರಿದಂತೆ ದಕ್ಷಿಣ ಭಾರತದಲ್ಲಿ 25 ಹಾಗೂ ಉತ್ತರ ಭಾರತದಲ್ಲಿ 20 ಕಡೆ ಪ್ರೀಮಿಯರ್ ಶೋಗಳಿವೆ.

    ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಘಟಾನುಘಟಿಗಳಿದ್ದಾರೆ. ಪ್ರೀಮಿಯರ್ ಶೋ ಹೊರತುಪಡಿಸಿ ದೇಶ ವಿದೇಶಗಳಲ್ಲೂ ಸೆ.30ರಂದೇ ರಿಲೀಸ್ ಆಗುತ್ತಿದೆ ಕಾಂತಾರ. ಎಲ್ಲೆಡೆ ಭರ್ಜರಿ ಬುಕಿಂಗ್ ಆಗಿದೆ.

    ನಮ್ಮ ಹೊಂಬಾಳೆ ಸಂಸ್ಥೆ ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಒಂದೊಳ್ಳೆಯ ಸಂದೇಶ ಕೊಟ್ಟಿದ್ದಾರೆ. ನಮ್ಮ ಇತರೆ ಚಿತ್ರಗಳಂತೆ ಕಾಂತಾರ ಕೂಡಾ  ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ವಿಜಯ್ ಕಿರಗಂದೂರು .

  • Kantara and Guru Sishyaru trailers released

    Kantara and Guru Sishyaru trailers released

    Trailers of two upcoming Kannada films; Guru Sishyaru and Kantara was released today. Guru Sishyaru is made under Laddu productions of actor Sharan and Tharun Sudheer. It is directed by Jadesh Kumar who made a mark with Gentleman. The film is about a PT master who trains a group of youngsters to play kho-kho. The film is releasing on September 23.

    Another trailer that released today was of Hombale Films’ Kantara. The Rishab Shetty film also stars Kishore, Achyuth Kumar among others. Set in the coastal districts where Kambala is a popular sport, it is the first film set in the backdrop of this traditional sport. Kantara is releasing on September 30. 

    Both the films are much awaited for various reasons. Kantara is from Hombale Films who made the worldwide blockbuster KGF2 recently. Though Kantara is releasing only in Kannada, its business may be expanded into other languages after the response it generates in Karnataka. The Kannada version will be released in a big way in other states also. 

  • ಕಾಂತಾರ : ನಾಸ್ತಿಕರೂ ದೇವರಿಗೆ ನಮಸ್ಕಾರ ಹಾಕಿದ ಕಥೆ..!

    ಕಾಂತಾರ : ನಾಸ್ತಿಕರೂ ದೇವರಿಗೆ ನಮಸ್ಕಾರ ಹಾಕಿದ ಕಥೆ..!

    ಇದೇ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿರುವ ಕಾಂತಾರ ಚಿತ್ರದ ಅನುಭವವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಈ ಚಿತ್ರದ ಹೀರೋ ಕಮ್ ಡೈರೆಕ್ಟರ್. ವಿಜಯ್ ಕಿರಗಂದೂರು ನಿರ್ಮಾಣದ ಕಾಂತಾರ ಚಿತ್ರದಲ್ಲಿರೋದು ಪ್ರಕೃತಿ ಮತ್ತು ಮಾನವ ಸಂಘರ್ಷದ ಕಥೆ.

    ಚಿತ್ರದಲ್ಲಿ ಕಂಬಳ ಕ್ರೀಡೆಯಿದೆ. ಸ್ಥಳೀಯ ಜನಪದ ಕಲೆಗಳಿವೆ. ಸ್ಥಳೀಯ ಕಲಾವಿದರಿಂದಲೇ ರೆಕಾರ್ಡ್ ಮಾಡಿಸಿರುವುದು ವಿಶೇಷ. ರಿಷಬ್ ಶೆಟ್ಟಿ ದೈವದ ಪಾತ್ರಿಯಾಗಿ ಬಣ್ಣ ಹಚ್ಚಿದ್ದಾರೆ. ದೈವದ ಪಾತ್ರಿಯಾಗಿ ಬಣ್ಣ ಹಚ್ಚಿದ್ದು ಒಂದು ದೈವಿಕ ಅನುಭವ ಎನ್ನುತ್ತಾರೆ ರಿಷಬ್ ಶೆಟ್ಟಿ. ಪೌರಾಣಿಕ ಶಿವನ ರೇಜ್ ಚಿತ್ರಕ್ಕಿದೆ. ಧರ್ಮಸ್ಥಳದ ಮಂಜುನಾಥನಿಂದಲೇ ಸಿನಿಮಾ ಶುರುವಾದದ್ದು. ಇಡೀ ಸಿನಿಮಾ ಒಂದು ಧಾರ್ಮಿಕಯಾತ್ರೆ ಎನ್ನುವ ರಿಷಬ್ ಶೆಟ್ಟಿ ಕಾಡುಬೆಟ್ಟು ಗ್ರಾಮದ ಕಥೆ ಹೇಳುವಾಗ ಹೇಳಿದ್ದೇ ನಾಸ್ತಿಕರು ಆಸ್ತಿಕರಾಗಿ ಹೋದ ಅನುಭವ.

    ಚಿತ್ರದ ಬಹುಪಾಲು ಶೂಟಿಂಗ್ ಕಾಡುಬೆಟ್ಟು ಅನ್ನೋ ಗ್ರಾಮದಲ್ಲಿ ನಡೆಯುತ್ತೆ. ಅದು ಚಿತ್ರದಲ್ಲಿ ಬರುವ ಊರು. ಸುಮಾರು 10 ಎಕರೆ ಪ್ರದೇಶದಲ್ಲಿ ಹಾಕಿದ್ದ ಸೆಟ್`ನಲ್ಲಿ ಎಲ್ಲವೂ ಶಿಸ್ತುಬದ್ಧವಾಗಿತ್ತು. ಮಾಂಸ, ಮದ್ಯಕ್ಕೆಲ್ಲ ನಿಷೇಧ ಇತ್ತು. ಶುದ್ಧತೆ ಕಾಪಾಡಿಕೊಳ್ಳಲಾಗಿತ್ತು. ದೇವಸ್ಥಾನದಲ್ಲಿ ಕಾಪಾಡಿಕೊಳ್ಳುವ ಶುದ್ಧತೆ ಕಾಪಾಡಿಕೊಳ್ಳಲಾಗಿತ್ತು. ನಾಸ್ತಿಕರೂ ಚಿತ್ರದ ಕೊನೆಯಲ್ಲಿ ದೇವರಿಗೆ ಪೂಜೆ ಮಾಡಿ ನಮಸ್ಕಾರ ಮಾಡಿ ಹೋದರು.

    ಚಿತ್ರದ ಬಗ್ಗೆ ಟ್ರೇಲರ್ ಬಿಟ್ಟಿದ್ದರೂ ಕಥೆ ಏನು ಅನ್ನೋದು ಮಾತ್ರ ಗುಟ್ಟಾಗಿಯೇ ಇದೆ. ರಿಷಬ್ ಶೆಟ್ಟಿ ಎದುರು ಸಪ್ತಮಿ ಗೌಡ ನಾಯಕಿ. ಅಚ್ಯುತ್ ಕುಮಾರ್ ಊರ ಧಣಿಯಾಗಿದ್ದರೆ, ಪ್ರಮೋದ್ ಶೆಟ್ಟಿ ರಾಜಕೀಯ ಪುಢಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿಯಷ್ಟೇ ಪ್ರಮುಖ ಪಾತ್ರ ಕಿಶೋರ್ ಅವರದ್ದು. ಫಾರೆಸ್ಟ್ ಆಫೀಸರ್ ಪಾತ್ರ.

  • ಕಾಂತಾರ : ಸಮ್‍ಥಿಂಗ್ ಸ್ಪೆಷಲ್

    ಕಾಂತಾರ : ಸಮ್‍ಥಿಂಗ್ ಸ್ಪೆಷಲ್

    ಕಾಂತಾರ. ಅದೊಂದು ಅಪರೂಪದ ಪದ. ಕನ್ನಡದ ಬಗ್ಗೆ ತುಂಬಾ ಒಳ್ಳೆಯ ಜ್ಞಾನ ಇರುವವರು ಕೇಳಿರಬಹುದಾದ ಪದ ಕಾಂತಾರ. ಡಿಕ್ಷನರಿ ನೋಡಿದರೆ ಕಾಂತಾರಾ ಅಂದರೆ ದಟ್ಟ ಕಾಡು ಅನ್ನೋ ಅರ್ಥವಿದೆ. ಅಂತಾದ್ದೊಂದು ಅಪರೂಪದ ಪದವನ್ನ ತಮ್ಮ ಚಿತ್ರಕ್ಕೆ ಟೈಟಲ್ ಮಾಡಿದ್ದಾರೆ ರಿಷಬ್ ಶೆಟ್ಟಿ.

    ಇಂತಾದ್ದೊಂದು ವಿಶೇಷದೊಂದಿಗೆ ಶುರುವಾಗುವ ಚಿತ್ರದಲ್ಲಿರೋದು ಪರಿಸರದ ಕಥೆ. ಇತ್ತೀಚೆಗೆ ತಾವೊಂದು ಸಿನಿಮಾ ಮಾಡುತ್ತಿದ್ದು, ಪರಿಸರದ ಕಥೆ ಹೇಳುತ್ತೇನೆ ಎಂದಿದ್ದರು ರಿಷಬ್. ಆ ಕಥೆಗೀಗ ಹೊಂಬಾಳೆ ಫಿಲಮ್ಸ್ ಕೈಜೋಡಿಸಿದೆ.

    ಹೊಂಬಾಳೆ ಎಂದರೇನೇ ಚಿಗುರು. ಪರಿಸರದ ಕಥೆಗೂ ಬ್ಯಾನರ್‍ಗೂ ಹೊಂದಿಕೆಯಾಗುತ್ತಿದೆ.

    ಸದ್ಯಕ್ಕೆ ಕನ್ನಡದಲ್ಲಿ ಯಶ್, ಪುನೀತ್, ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿರೋ ಹೊಂಬಾಳೆ ಅತ್ತ ತೆಲುಗಿನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದೆ. ಜ್ಯೂ.ಎನ್‍ಟಿಆರ್ ಜೊತೆ ಸಿನಿಮಾ ಘೋಷಿಸಿದೆ. ಹೀಗೆ ದೇಶದ ದೊಡ್ಡ ಬ್ಯಾನರ್ ಆಗಿರುವ ಹೊಂಬಾಳೆ ಫಿಲಮ್ಸ್ ಈಗ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಮುಂದಾಗಿರುವುದೇ ವಿಶೇಷ.

    ಅಂದಹಾಗೆ ಈ ಚಿತ್ರದಲ್ಲಿ ರಿಷಬ್ ಅವರೇ ಹೀರೋ ಮತ್ತು ರಿಷಬ್ ಅವರೇ ಡೈರೆಕ್ಟರ್. ಇದುವರೆಗೆ ರಿಷಬ್ ತಾವು

    ಹೀರೋ ಆಗಿ ನಟಿಸಿರುವ ಚಿತ್ರಕ್ಕೆ ತಾವೇ ನಿರ್ದೇಶಕರಾಗಿರಲಿಲ್ಲ. ಇದು ಮತ್ತೊಂದು ವಿಶೇಷ.

    ಚಿತ್ರದ ಪೋಸ್ಟರಿನಲ್ಲಿ ಕಾಡ್ಗಿಚ್ಚು, ಕಂಬಳ, ದೈವದ ಕಾಲುಗಳ ದರ್ಶನವಾಗುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದ ಕೆರಾಡಿಯಲ್ಲಿ ನಡೆಯಲಿದೆ. ಆಗಸ್ಟ್ 27ರಿಂದ ಶೂಟಿಂಗ್ ಸ್ಟಾರ್ಟ್ ಎಂದಿದ್ದಾರೆ ರಿಷಬ್ ಶೆಟ್ಟಿ. ಪ್ರಮೋದ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ. 

  • ಕಾಂತಾರ ಕ್ರೇಜ್ ಸ್ಟಾರ್ಟ್ : ತುಳುವಿನಲ್ಲೂ ರಿಲೀಸ್

    ಕಾಂತಾರ ಕ್ರೇಜ್ ಸ್ಟಾರ್ಟ್ : ತುಳುವಿನಲ್ಲೂ ರಿಲೀಸ್

    ರಿಷಬ್ ಶೆಟ್ಟಿ ಹೀರೋ ಮತ್ತು ನಿರ್ದೇಶಕ. ಹೊಂಬಾಳೆ ಬ್ಯಾನರ್‍ನ ಸಿನಿಮಾ.. ಇಷ್ಟಿದ್ದ ಮೇಲೆ ಕ್ರೇಜ್ ಶುರುವಾಗುತ್ತದೆಂದೇ ಲೆಕ್ಕ. ನಿರೀಕ್ಷೆ  ಸುಳ್ಳಾಗಿಲ್ಲ. ಬುಕ್ಕಿಂಗ್ ಶುರುವಾಗಿದ್ದೇ ತಡ.. ಪ್ರೇಕ್ಷಕರು ರೆಡಿಯಾಗುತ್ತಿದ್ದಾರೆ.

    ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿರೋ ಚಿತ್ರ ಕಾಂತಾರ. ಕಾಡು ಮತ್ತು ಮನುಷ್ಯರ ನಡುವಿನ ಹೊಡೆದಾಟದ ಕಥೆಯಲ್ಲಿ ಕರಾವಳಿಯ ಸಂಸ್ಕøತಿ ಇದೆ. ಸೊಗಡು ಇದೆ.

    ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಿವೆ. ಬೆಂಗಳೂರು, ಮೈಸೂರು, ಮಂಗಳೂರು,  ಶಿವಮೊಗ್ಗ, ಉಡುಪಿ, ಕುಂದಾಪುರದಲ್ಲಿ ಪ್ರೀಮಿಯರ್ ಶೋಗಳಿವೆ. ವಿಶೇಷವೆಂದರೆ ಕೇರಳದ ಕಾಸರಗೋಡಿನಲ್ಲೂ ಪ್ರೀಮಿಯರ್ ಶೋ ಇರೋದು. ಚೆನ್ನೈ,  ಹೈದರಾಬಾದ್, ಕೊಚ್ಚಿಯಲ್ಲೂ ಪ್ರೀಮಿಯರ್ ಶೋಗಳಿವೆ.

    ಕನ್ನಡದ ಜೊತೆಗೆ ತುಳುವಿನಲ್ಲೂ ಬರುತ್ತಿರುವುದು ವಿಶೇಷ. ಸುಮಾರು ಸಿನಿಮಾ ರಿಲೀಸ್ ಆಗುವ ಥಿಯೇಟರ್, ಮಲ್ಟಿಪ್ಲೆಕ್ಸುಗಳ ಕಥೆ ಬಿಡಿ.. ಹೆದ್ದಾರಿಗಳಲ್ಲೂ 150ಕ್ಕೂ ಹೆಚ್ಚು ಕಟೌಟ್ ಹಾಕಲಾಗಿದೆ.

    ಚಿತ್ರದ ಹಾಡು, ಟ್ರೇಲರ್, ಮೇಕಿಂಗ್ ದೃಶ್ಯಗಳ ಕಂಟೆಂಟ್ ಬಿಟ್ಟಿದ್ದೇವೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದೆಲ್ಲವೂ ಈಗ ಟಿಕೆಟ್ಟುಗಳಾಗಿ ಬದಲಾಗಬೇಕಿದೆ ಎಂದಿದ್ದಾರೆ ರಿಷಬ್ ಶೆಟ್ಟಿ

  • ಕಾಂತಾರ ನೋಡಿದವರ ಮಾತು : ಅಶ್ವಿನಿ ಪುನೀತ್, ರಮ್ಯಾ, ರಕ್ಷಿತ್ ರಿಂದ ಫ್ಯಾನ್ಸ್ ವರೆಗೆ..

    ಕಾಂತಾರ ನೋಡಿದವರ ಮಾತು : ಅಶ್ವಿನಿ ಪುನೀತ್, ರಮ್ಯಾ, ರಕ್ಷಿತ್ ರಿಂದ ಫ್ಯಾನ್ಸ್ ವರೆಗೆ..

    ಕಾಂತಾರ ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿದ್ದಾರೆ. ಕಾಡನ್ನು ಉಳಿಸಲು ಹೋರಾಡುವ ಅಧಿಕಾರಿ ಮುರಳೀಧರ್ ಆಗಿ ಕಿಶೋರ್, ಊರಿನ ಪರವಾಗಿ ಶಿವ, ದೇವೇಂದ್ರನ ದುರಾಸೆ, ಅಚ್ಯುತ್, ಫಾರೆಸ್ಟ್ ಗಾರ್ಡ್ ಆಗಿ ಲೀಲಾ..ಮಾನಸಿ ಸುಧೀರ್.. ಎಲ್ಲರೂ ಅದ್ಭುತ ಎನ್ನಿಸುವಂತೆ ನಟಿಸಿದ್ದಾರೆ. ನಿರ್ದೇಶಕರಾಗಿ ರಿಷಬ್ ಶೆಟ್ಟಿ 100ಕ್ಕೆ 100 ಅಂಕ ಗಿಟಿಸಿದರೆ, ನಟನಾಗಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ಧಾರೆ.ಅದರಲ್ಲೂ ಕೊನೆಯ 30 ನಿಮಿಷಗಳ ಭೂತದ ಕೋಲದಲ್ಲಿ ದೈವದ ರೂಪದಲ್ಲಿ ಬೆರಗು ಹುಟ್ಟಿಸುತ್ತಾರೆ. ಚಿತ್ರ ನೋಡಿದವರೆಲ್ಲ ಚಿತ್ರಕ್ಕೆ ಶಹಬ್ಬಾಸ್ ಎಂದಿದ್ದಾರೆ.

    ಚಿತ್ರ ಮುಗಿಯುತ್ತಿದ್ದಂತೆ ರಕ್ಷಿತ್ ಶೆಟ್ಟಿ ಕುಪ್ಪಳಿಸಿಕೊಂಡು ಬಂದು ರಿಷಬ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು.

    ರಕ್ಷಿತ್ ಶೆಟ್ಟಿ : ನನಗೆ ರಿಷಬ್ ಪೂರ್ತಿ ಸಿನಿಮಾವನ್ನು ತೋರಿಸಿರಲಿಲ್ಲ. ಪ್ರೀಮಿಯರ್ ಶೋನಲ್ಲಿಯೇ ನೋಡು ಎಂದಿದ್ದ. ಕನ್ನಡದಲ್ಲಂತೂ ಇಂತಾ ಚಿತ್ರ ಬಂದಿರಲಿಲ್ಲ. ಹೊಸತನದ ಚಿತ್ರ. ಎಲ್ಲರೂ ಸಿನಿಮಾ ನೋಡಿ. ಅಷ್ಟೆ.

    ಅನೂಪ್ ಭಂಡಾರಿ : ಹೀರೋ ಮತ್ತು ಡೈರೆಕ್ಟರ್. ಇಬ್ಬರಲ್ಲಿ ಯಾರು ಬೆಟರ್ ಎಂದು ಹೇಳೋದು ಕಷ್ಟವಾಗುತ್ತಿದೆ.

    ವಿನಯ್ ರಾಜಕುಮಾರ್ : ಏನು ಹೇಳಬೇಕು ಗೊತ್ತಾಗುತ್ತಿಲ್ಲ. ತುಂಬಾ ಒಳ್ಳೆಯ ಸಿನಿಮಾ.

    ಅನುಶ್ರೀ : ಕಾಂತಾರ ಈ ವರ್ಷದ ಕನ್ನಡದ ಹೆಮ್ಮೆ. ಭಾರತದ ಹೆಮ್ಮೆ.

    ಸಿಂಪಲ್ ಸುನಿ : ಕನ್ನಡದ ಮಣ್ಣಿನ ಚಿತ್ರ. ದೈವಿಕ ಚಿತ್ರ. ಅನುಭವಿಸುವಂತ ಚಿತ್ರ. ಚಿತ್ರಕ್ಕೆ ಹೋಗುವಾಗ ಕೈಮುಗಿದು ಹೋಗಬೇಕು. ಕೈ ಮುಗಿದೇ ಹೊರಬರಬೇಕು.

    ಸಂತೋಷ್ ಆನಂದರಾಮ್ : ಕೊನೆಯ 20 ನಿಮಿಷಗಳಂತೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

    ಅಶ್ವಿನಿ ಪುನೀತ್ ರಾಜಕುಮಾರ್ : ನ್ಯೂನತೆಗಳೇ ಕಾಣದ ಸಿನಿಮಾ. ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ಗರಿ ಕಾಂತಾರ. ಹೊಂಬಾಳೆ ಮತ್ತು ರಿಷಬ್ ಶೆಟ್ಟಿಯವರ ಶ್ರಮ ಎದ್ದು ಕಾಣುತ್ತದೆ. ಖಂಡಿತಾ ಪ್ರತಿಯೊಬ್ಬ ಕನ್ನಡಿಗರೂ ನೋಡಬೇಕಾದ ಸಿನಿಮಾ.

    ಯುವ ರಾಜಕುಮಾರ್ : ಚಿತ್ರದ ಕ್ಲೈಮಾಕ್ಸ್ ಅಂತೂ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಅದ್ಭುತ ಸಿನಿಮಾ.

    ರಮ್ಯಾ : ಕನ್ನಡದಲ್ಲಿ ಇಂತಹ ಚಿತ್ರಗಳು ಬರುತ್ತಿರುವುದು ನೋಡುವುದೇ ಒಂದು ಖುಷಿ. ಇಂತಹ ಚಿತ್ರ ಎಲ್ಲಿಯೂ ಆಗಿಲ್ಲ. ಹೊಂಬಾಳೆ, ರಿಷಬ್ ಶೆಟ್ಟಿ ಅದ್ಭುತ ಸಿನಿಮಾ ಕೊಟ್ಟಿದ್ದಾರೆ.

    ಒಟ್ಟಿನಲ್ಲಿ ಚಿತ್ರ ನೋಡಿದ ಪ್ರೇಕ್ಷಕರು ಮತ್ತು ಸೆಲಬ್ರಿಟಿಗಳಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ ಥಿಯೇಟರಿನಲ್ಲಿ ಕ್ಷಣ ಕ್ಷಣವೂ ರಕ್ಷಿತ್ ಶೆಟ್ಟಿ ಸೀಟಿನಿಂದ ಎದ್ದು ನಿಂತು ಎಕ್ಸೈಟ್ ಆಗುತ್ತಿದ್ದರು. ಅದೇ ರೀತಿಯಲ್ಲಿ ಪ್ರೇಕ್ಷಕರೂ ಇದ್ದರು.

  • ಕಾಂತಾರ ಪ್ಯಾನ್ ಇಂಡಿಯಾ ಆಗಲಿಲ್ಲ ಏಕೆ?

    ಕಾಂತಾರ ಪ್ಯಾನ್ ಇಂಡಿಯಾ ಆಗಲಿಲ್ಲ ಏಕೆ?

    ಬ್ಯಾನರ್ ಹೊಂಬಾಳೆ. ಪ್ರೊಡ್ಯೂಸರ್ ವಿಜಯ್ ಕಿರಗಂದೂರು. ಟ್ರೇಲರ್, ಹಾಡುಗಳೋ ಅದ್ಭುತ. ಮೇಕಿಂಗ್‍ನಲ್ಲಿ ಅದ್ಧೂರಿತನ. ? ಚಿತ್ರದ ಕಥೆಯೋ ಪ್ರಕೃತಿ ಮತ್ತು ಮಾನವನ ಸಂಘರ್ಷದ  ಕುರಿತಾದದ್ದು. ಎಲ್ಲವೂ ಇರುವ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿಲ್ಲ ಏಕೆ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.

    ಚಿತ್ರದಲ್ಲಿನ ಕಥೆಯೇನೋ ಯುನಿವರ್ಸಲ್. ಯಾವುದೇ ಭಾಷೆಗೂ ಅಪ್ಲೈ ಆಗುವಂತಹುದು. ಆದರೆ.. ಈ ಚಿತ್ರದ ಕಥೆಯಲ್ಲಿ ಪ್ರಾದೇಶಿಕ, ನೆಲದ ಮಣ್ಣಿನ ಸೊಗಡು ಕೂಡಾ ಇದೆ. ಕರಾವಳಿ ಭಾಗದ ಹಿನ್ನೆಲೆಯ  ಕಥೆಗೆ ಆ ಭಾಗದ ಪ್ರಾದೇಶಿಕ ಸಂಸ್ಕøತಿಯನ್ನು ಬಳಸಿಕೊಂಡಿದ್ದೇವೆ. ಭೂತಕೋಲ ಇದೆ. ನಾಗಾರಾಧನೆ ಕೂಡಾ ಇದೆ. ಕಂಬಳ ಇದೆ. ದೈವಾರಾಧನೆ ಇದೆ. ಇವೆಲ್ಲವೂ ಕಥೆಗೆ ಪೂರಕವಾಗಿಯೇ ಬರುತ್ತವೆ. ಇಲ್ಲಿನ ಸಂಸ್ಕøತಿ ಗೊತ್ತಿರುವವರಿಗೆ ಸುಲಭವಾಗಿ ಅರ್ಥವಾಗುತ್ತೆ. ಹಾಗೆಯೇ ಪ್ರತಿ ಪ್ರಾದೇಶಿಕ ಭಾಷೆಗಳೂ ವಿಭಿನ್ನ ಎಂದಿದ್ದಾರೆ ರಿಷಬ್ ಶೆಟ್ಟಿ. ಹೀಗಾಗಿಯೇ ಚಿತ್ರ ಪ್ಯಾನ್ ಇಂಡಿಯಾ ಮೂವಿ ಆಗಲಿಲ್ಲ. ಇಡೀ ಭಾರತದಲ್ಲಿ ಹುಡುಕಾಡಿದರೆ ಪ್ರತಿ ಪ್ರದೇಶದಲ್ಲೂ ಇಂತಹ ಕಥೆಗಳು ಸಿಗುತ್ತವೆ. ಅವೆಲ್ಲವೂ ಅಲ್ಲಿನ ಮಣ್ಣಿನ ಸಂಸ್ಕøತಿಯೊಂದಿಗೆ ಬೆರೆತಿರುತ್ತವೆ ಎಂದಿದ್ದಾರೆ ರಿಷಬ್ ಶೆಟ್ಟಿ.

    ಚಿತ್ರವನ್ನು ಮಕ್ಕಳಿಗೆ ಅರ್ಥವಾಗುವಂತೆಯೇ ರೂಪಿಸಿದ್ದೇವೆ. ಆಕ್ಷನ್, ಕಾಮಿಡಿ, ಸ್ವಲ್ಪ ರೊಮ್ಯಾನ್ಸ್..ಥ್ರಿಲ್ಲರ್ ಎಲಿಮೆಂಟ್ಸ್ ಎಲ್ಲವೂ ಇದೆ. ಅವೆಲ್ಲವೂ ಆಗಿಯೇ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಕಿಶೋರ್ ಅವರಿಗೆ ಸ್ಕ್ರೀನ್ ಸ್ಪೇಸ್ ಜಾಸ್ತಿಯೇ ಇದೆ. ಸಪ್ತಮಿ ಗೌಡ ಉತ್ತಮವಾಗಿ ನಟಿಸಿದ್ದಾರೆ. ನಮ್ಮ ಆಸ್ಥಾನ ಕಲಾವಿದರಾದ ಅಚ್ಯುತ್ ಮತ್ತು ಪ್ರಮೋದ್ ಶೆಟ್ಟಿಯವರಂತೂ ಅದ್ಭುತವಾಗಿ ತೆರೆ ಆವರಿಸಿಕೊಂಡಿದ್ದಾರೆ ಎನ್ನುತ್ತಾರೆ ರಿಷಬ್ ಶೆಟ್ಟಿ.

    1994ರಲ್ಲಿ ಫಾರೆಸ್ಟ್ ಗಾರ್ಡ್ ಕೆಲಸಕ್ಕೆ ಮಹಿಳೆಯರ ನೇಮಕಾತಿ ಆಯಿತು. ಅದನ್ನು ಬೇಸ್ ಆಗಿಟ್ಟುಕೊಂಡೇ ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ ಸಪ್ತಮಿ ಗೌಡರನ್ನು ಲೇಡಿ ಫಾರೆಸ್ಟ್ ಗಾರ್ಡ್ ಆಗಿ ಪರಿಚಯಿಸಿದೆವು ಎನ್ನುವ ರಿಷಬ್, ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರಷ್ಟೇ ಅಲ್ಲ.. ಪ್ರೇಕ್ಷಕರಿಗೂ ಭಾರಿ ನಿರೀಕ್ಷೆಯೇ ಇದೆ. ಹೀಗಾಗಿಯೇ ಬುಕ್ಕಿಂಗ್ ಶುರುವಾದ ತಕ್ಷಣ ನೂಕುನುಗ್ಗಲು ಶುರುವಾಗಿದೆ.

  • ಕಾಂತಾರಕ್ಕೆ ಪುನೀತ್ ಸೂಚಿಸಿದ ಹೆಸರು ರಿಷಬ್ ಶೆಟ್ಟಿ..!

    ಕಾಂತಾರಕ್ಕೆ ಪುನೀತ್ ಸೂಚಿಸಿದ ಹೆಸರು ರಿಷಬ್ ಶೆಟ್ಟಿ..!

    ಪುನೀತ್ ರಾಜಕುಮಾರ್ ಹೊಂಬಾಳೆಯನ್ನು ತಮ್ಮ ಸಂಸ್ಥೆಯೆಂದೇ ಭಾವಿಸಿದ್ದರು. ಅದನ್ನು ಹಲವೆಡೆ ಹೇಳಿಕೊಂಡೂ ಇದ್ದರು. ಹೋಮ್ ಬ್ಯಾನರ್ ನಂತೆಯೇ ಇತ್ತು. ಹೀಗಾಗಿಯೇ ಮೂರು ಚಿತ್ರಗಳನ್ನು ಮಾಡಿದ್ದರು. ನಾಲ್ಕನೇ ಚಿತ್ರ ಸೆಟ್ಟೇರಿತ್ತು. ವಿಧಿಯಾಟ ಬಿಡಿ. ಆದರೆ.. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರಕ್ಕೂ ಅವರೇ ಹೀರೋ ಆಗಬೇಕಿತ್ತಂತೆ.

    ಕಾಂತಾರ ಚಿತ್ರದ ಸ್ಕ್ರಿಪ್ಟ್ ಓಕೆ ಆದಾದ ರಿಷಬ್ ಶೆಟ್ಟಿಯವರ ತಲೆಯಲ್ಲಿದ್ದುದು ಪುನೀತ್ ಹೆಸರು. ಚಿತ್ರದ ಕಥೆ ಪುನೀತ್ ಅವರಿಗೆ ಇಷ್ಟವಾದರೂ ಡೇಟ್ ಕ್ಲಾಷ್ ಆಗುತ್ತಿತ್ತು. ಏಕೆಂದರೆ ಒಂದು ನಿರ್ದಿಷ್ಟ ಸಮಯದಲ್ಲಿಯೇ ಚಿತ್ರದ ಚಿತ್ರೀಕರಣ ಆಗಬೇಕಿತ್ತು. ಅದಕ್ಕೆ ಸಮಯ ಹೊಂದಿಸೋಕೆ ಆಗುತ್ತಿರಲಿಲ್ಲ. ಹೀಗಾಗಿ ಪುನೀತ್ ಅವರೇ ರಿಷಬ್ ಶೆಟ್ಟಿಯವರ ಹೆಸರು ಸೂಚಿಸಿದರು. ರಿಷಬ್ ಶೆಟ್ಟಿ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಕಾರ್ತಿಕ್ ಗೌಡ.

    ಸೆಪ್ಟೆಂಬರ್ 30ರಂದು ಕಾಂತಾರ ರಿಲೀಸ್ ಆಗುತ್ತಿದ್ದು, ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ನಟಿಸಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.

  • ಕಾಂತಾರದ ಲೀಲಾ ಕಥೆ ಕೇಳಿ

    ಕಾಂತಾರದ ಲೀಲಾ ಕಥೆ ಕೇಳಿ

    ಲೀಲಾ. ಕಾಂತಾರದ ಸಿಂಗಾರ ಸಿರಿಯೇ.. ಆಕೆ. ಫಾರೆಸ್ಟ್ ಗಾರ್ಡ್ ಆಗಬೇಕು ಅನ್ನೋದು ಅವಳ ಕನಸು ಮತ್ತು ಗುರಿ. ಕನಸು ಈಡೇರುತ್ತೆ. ಫಾರೆಸ್ಟ್ ಗಾರ್ಡ್ ಆದ ನಂತರ ಹಳ್ಳಿಯವರು ಮತ್ತು ಕಾಡಿನ ಅಧಿಕಾರಿಗಳ ನಡುವಿನ ಕೊಂಡಿಯಾಗುತ್ತಾಳೆ. ಅಲ್ಲಿಂದ ಕಥೆ ತಿರುವು ಪಡೆಯುತ್ತೆ.. ಕಥೆಯನ್ನು ಬಿಚ್ಚಿಡುತ್ತಾರೆ ಸಪ್ತಮಿ ಗೌಡ.

    ಪಾಪ್ ಕಾರ್ನ್ ಮಂಕಿ ಟೈಗರ್ ಗಿರಿಜಾ, ಕಾಂತಾರದಲ್ಲಿ ಲೀಲಾ ಆಗಿ ಬದಲಾಗಿದ್ದಾರೆ. ಎರಡು ವರ್ಷಗಳ ನಂತರ ಇದು ಅವರ 2ನೇ ಚಿತ್ರ. ಚಿತ್ರದಲ್ಲಿ ನನ್ನದು ಮಂಗಳೂರು ಕನ್ನಡ ಮಾತನಾಡುವ ಪಾತ್ರ. ಟೀಮಿನವರು ಅದೆಷ್ಟು ಪರ್ಫೆಕ್ಟ್ ಇದ್ದರು ಅಂದ್ರೆ 2 ತಿಂಗಳ ವರ್ಕ್ ಶಾಪ್ ಮಾಡಿಸಿದರು. ಇದು ನನ್ನ ಪಾತ್ರ ಮತ್ತು ಅಭಿನಯದ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ನಾನು ಕ್ಯಾರೆಕ್ಟರ್ ಅರ್ಥ ಮಾಡಿಕೊಳ್ಳೋಕೆ ಸುಲಭವಾಯ್ತು ಎನ್ನುತ್ತಾರೆ ಸಪ್ತಮಿ ಗೌಡ.

    ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. 2 ಕಿ.ಮೀ. ದಾರಿ ಸಾಗೋಕೆ 45 ನಿಮಿಷ ವ್ಯಯಿಸಿದ್ದೇವೆ. ಕಾಡಿನ ಬದುಕು ಕಷ್ಟ ಕಷ್ಟ ಎನ್ನುವ ಸಪ್ತಮಿಗೆ ಸಿಂಗಾರ ಸಿರಿಯೇ ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ.

    ನಮ್ಮ ಚಿತ್ರತಂಡದ ಕ್ಯಾಪ್ಟನ್ ರಿಷಬ್ ಶೆಟ್ಟಿ. ಅವರ ಎನರ್ಜಿ ದೊಡ್ಡದು. ಒಂದು ಕಡೆ ನಟನೆ, ಇನ್ನೊಂದು ಕಡೆ ನಿರ್ದೇಶನ. ಇದೆಲ್ಲದರ ನಡುವೆ ಅವರಿಗೆ ಪ್ರತಿ ಪಾತ್ರದ ಸಣ್ಣ ಸಣ್ಣ ವ್ಯತ್ಯಾಸವನ್ನೂ ಗುರುತಿಸುವ ಪರಿಗೆ ಬೆರಗಾಗಿದ್ದಾರಂತೆ ಸಪ್ತಮಿ.

    ಕಾಂತಾರ ಚಿತ್ರ ಇದೇ ಸೆ.30ರಂದು ಬಿಡುಗಡೆಯಾಗುತ್ತಿದ್ದು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿವೆ.

  • ಕಾಂತಾರದಲ್ಲಿ ಕಿಶೋರ್ ಪಾತ್ರ ಏನು?

    ಕಾಂತಾರದಲ್ಲಿ ಕಿಶೋರ್ ಪಾತ್ರ ಏನು?

    ಕಾಂತಾರ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ರಿಷಬ್ ಶೆಟ್ಟಿ ಡೈರೆಕ್ಟರ್ ಕಂ ಹೀರೋ. ಸಪ್ತಮಿ ಗೌಡ ನಾಯಕಿ. ಚಿತ್ರದ ಟ್ರೇಲರ್ ನೋಡಿದವರಿಗೆ ಬೆರಗು ಹುಟ್ಟಿಸುವುದು ಕಿಶೋರ್ ಪಾತ್ರ ಹೊರಹೊಮ್ಮಿರುವ ರೀತಿ.

    ಕಿಶೋರ್`ಗೆ ರಿಷಬ್ ಶೆಟ್ಟಿ ಜೊತೆಗಿನ ಗೆಳೆತನ ಇಂದಿನದಲ್ಲ. ಅಟ್ಟಹಾಸ ಚಿತ್ರದಿಂದಲೂ ಇದೆ. ಉಳಿದವರು ಕಂಡಂತೆ, ಕಥಾ ಸಂಗಮ ಚಿತ್ರದಲ್ಲೂ ಅದು ಕಂಟಿನ್ಯೂ ಆಗಿದೆ. ಈ ಚಿತ್ರದಲ್ಲಿ ಮುಖ್ಯವಾದ ಪಾತ್ರವನ್ನೇ ಕೊಟ್ಟಿದ್ದಾರೆ ರಿಷಬ್.

    ನನಗಿಂತ ಹೆಚ್ಚು ಕಥೆ ಮುಖ್ಯ. ಕಲಾವಿದರು ಕಥೆ ಹೇಳೋ ಟೂಲ್ ಅಷ್ಟೆ. ಇದು ವ್ಯವಸ್ಥೆ, ರಾಜಕೀಯ ಮತ್ತು ಅಧಿಕಾರದ ನಡುವೆ ಈಗೋಗನ್ನೇ ಮೈತುಂಬಾ ತುಂಬಿಕೊಂಡಿರುವವನ ಪಾತ್ರ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷವೇ ಚಿತ್ರದ ಕಥೆ. ಚಿತ್ರದ ಕಥೆ ಹೃದಯಕ್ಕೆ ಹತ್ತಿರವಾದದ್ದು ಎನ್ನುತ್ತಾರೆ ಕಿಶೋರ್.

    ಕಿಶೋರ್ ಅವರಿಗೆ ಸೆಪ್ಟೆಂಬರ್ 30 ಎರಡು ಟೆನ್ಷನ್. ಕನ್ನಡದಲ್ಲಿ ಕಾಂತಾರಾ ತೆರೆಗೆ ಬರುತ್ತಿದೆ. ಕಾಂತಾರಾದಲ್ಲಿ ಹೀರೋಗಿರುವಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಕಿಶೋರ್ ಅವರದ್ದು. ಅತ್ತ.. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಕೂಡಾ ತೆರೆಗೆ ಬರುತ್ತಿದೆ. ಸ್ಟಾರುಗಳಿಂದ ತುಂಬಿ ತುಳುಕುತ್ತಿರುವ ಆ ಚಿತ್ರದಲ್ಲಿ ಕಿಶೋರ್ ಅವರಿಗೂ ಪ್ರಧಾನ ಪಾತ್ರವಿದೆ.

    ನನಗೂ ನಿರೀಕ್ಷೆಯಿದೆ. ಆದರೆ ಇದು ಎರಡು ಒಳ್ಳೆ ಕಥೆಗಳನ್ನು ನೋಡುವ ಸಮಯ ಅಷ್ಟೆ. ಸ್ಪರ್ಧೆ ಅಥವಾ ಪೈಪೋಟಿ ಅಲ್ಲ. ಎರಡೂ ಸಿನಿಮಾಗಳಲ್ಲಿ ಸುಂದರವಾದ ಕಥೆಯಿದೆ ಎನ್ನುತ್ತಾರೆ  ಕಿಶೋರ್.

  • ಸೆಪ್ಟೆಂಬರ್ 30ಕ್ಕೆ ಕಾಂತಾರ ವರ್ಸಸ್ ತೋತಾಪುರಿ

    ಸೆಪ್ಟೆಂಬರ್ 30ಕ್ಕೆ ಕಾಂತಾರ ವರ್ಸಸ್ ತೋತಾಪುರಿ

    ಇಬ್ಬರು ಸ್ಟಾರ್ ನಟರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವುದು ಹೊಸದಲ್ಲ. ಈಗದು  ವಿಶೇಷವೂ ಅಲ್ಲ. ಏಕೆಂದರೆ ಪ್ರೇಕ್ಷಕರ ಮುಂದೆ ಆಯ್ಕೆಗಳಿರುತ್ತವೆ. ಈ ಬಾರಿ ದಸರಾಗೆ ಕೂಡಾ ಹಾಗೆಯೇ ಆಗುತ್ತಿದೆ. ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ಮತ್ತು ಜಗ್ಗೇಶ್ ಚಿತ್ರಗಳು ಮುಖಾಮುಖಿಯಾಗುತ್ತಿವೆ.

    ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರಾ ಚಿತ್ರಕ್ಕೆ ಹೊಂಬಾಳೆ ಬ್ಯಾನರ್ ಬಂಡವಾಳ ಹೂಡಿದೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಪ್ರಮುಖ   ಪಾತ್ರದಲ್ಲಿ ನಟಿಸಿರುವ ಸಿನಿಮಾ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಬಂದ ಸಿಂಗಾರ ಸಿರಿಯೇ.. ಸಿನಿರಸಿಕರಿಗೆ ರಸಿಕತೆಯ ಕರಾವಳಿ ಅನುಭವ ಕೊಟ್ಟಿದೆ. ಈ ಶಿಕ್ಷಕರ ದಿನಾಚರಣೆ ದಿನ ಕಾಂತಾರ ಚಿತ್ರದ ಟ್ರೇಲರ್ ಹೊರಬೀಳಲಿದೆ.

    ಅದೇ ದಿನ ರಿಲೀಸ್ ಆಗುತ್ತಿರುವ ಸಿನಿಮಾ ತೋತಾಪುರಿ. ಈಗಾಗಲೇ ಬಾಗ್ಲು ತೆಗಿ ಮೇರಿ ಜಾನ್.. ಸೇರಿದಂತೆ ಚಿತ್ರದ ಹಾಡು ಮತ್ತು ಚೇಷ್ಟೆಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜಗ್ಗೇಶ್, ಆದಿತಿ ಪ್ರಭುದೇವ, ಡಾಲಿ ಧನಂಜಯ, ಸುಮನ್ ರಂಗನಾಥ್, ದತ್ತಣ್ಣ, ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿರೋ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಕೆ.ಎ.ಸುರೇಶ್ ನಿರ್ಮಾಣದ ಚಿತ್ರವೂ ಸೆ.30ರಂದೇ ರಿಲೀಸ್ ಆಗುತ್ತಿದ