` homable films, - chitraloka.com | Kannada Movie News, Reviews | Image

homable films,

  • ಆಸ್ಕರ್ ರೇಸಿನಿಂದ ಕಾಂತಾರ ಔಟ್. ನಾಟು ನಾಟು ಇನ್

    ಆಸ್ಕರ್ ರೇಸಿನಿಂದ ಕಾಂತಾರ ಔಟ್. ನಾಟು ನಾಟು ಇನ್

    ಆಸ್ಕರ್ ನಾಮನಿರ್ದೇಶನ ಹೊರಬಿದ್ದಿದೆ. ಇದು ಕನ್ನಡಿಗರಿಗೆ ಬೇಸರದ ವಿಷಯವಾದರೂ ಇಂಡಿಯನ್ ಸಿನಿಮಾ ಜಗತ್ತಿನಲ್ಲಿ ಹೊಳಪನ್ನಂತೂ ತಂದಿದೆ. ಕಾಂತಾರ, ವಿಕ್ರಾಂತ್ ರೋಣ ಎರಡೂ ಚಿತ್ರಗಳು ಅಂತಿಮ ನಾಮ ನಿರ್ದೇಶನ ಸುತ್ತಿಗೆ ಹೋಗಿಲ್ಲ. ಕಾಶ್ಮೀರ್ ಫೈಲ್ಸ್, ಗಂಗೂಬಾಯಿ.. ಅಷ್ಟೇ ಏಕೆ, ಭಾರತೀಯ ಸರ್ಕಾರದಿಂದಲೇ ಆಯ್ಕೆಯಾಗಿದ್ದ ಅಧಿಕೃತ ಸಿನಿಮಾ ಚೆಲ್ಲೋ ಶೋ ಚಿತ್ರ ಕೂಡಾ ಆಸ್ಕರ್ ಆರಂಭದ ಸುತ್ತಿನಲ್ಲೇ ಹೊರಬಿದ್ದಿದೆ.

    ಆದರೆ ಆರ್.ಆರ್.ಆರ್. ಚಿತ್ರದ ನಾಟು ನಾಟು.. ಅಂತಿಮ ನಾಮನಿರ್ದೇಶನದ ಸುತ್ತಿನಲ್ಲಿ ಉಳಿದುಕೊಂಡಿದೆ. ಇವತ್ತು ಸಂತೋಷದ ದಿನ. ಭಾರತ ಮಾತೆಯ ಮಡಿಲಿಗೆ, ಕನ್ನಡಾಂಬೆಯ ಮಡಿಲಿಗೆ, ನಿಮ್ಮ ಲಹರಿ ಸಂಸ್ಥೆಗೆ ಖಖಖ ರಾಜಮೌಳಿ ಸಾಹೇಬ್ರ ನಿರ್ದೇಶನ.. ಕೀರವಾಣಿಯವರ ಸಂಗೀತದ ನಾಟು ನಾಟು ಹಾಡಿಗೆ ತಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿತ್ತು.ಈಗ ಆಸ್ಕರ್ ಅವಾರ್ಡ್ನ ಟಾಪ್ 5ಗೆ ಸೆಲೆಕ್ಟ್ ಆಗಿದೆ

    ಹೀಗೊಂದು ಹೃದಯಕ್ಕೆ ನಾಟುವಂತಾ ಟ್ವೀಟ್ ಮಾಡಿದ್ದಾರೆ ಲಹರಿ ವೇಲು. ನಾಟು ನಾಟು ಹಾಡು ಅಂತಿಮ ಸುತ್ತಿನಲ್ಲಿ  5 ಬೆಸ್ಟ್ ಮ್ಯೂಸಿಕ್`ಗಳ ಜೊತೆ ಸ್ಪರ್ಧೆಯಲ್ಲಿದೆ. ಇದೇ ಹಾಡಿಗೆ ಎಂ.ಎಂ.ಕೀರವಾಣಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿದ್ದರು. ರಾಜಮೌಳಿ, ರಾಮ್ ಚರಣ್ ತೇಜ, ಜೂ.ಎನ್.ಟಿ.ಆರ್. ಎಲ್ಲರೂ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು. ಈಗ ಅಸ್ಕರ್ ರೇಸ್`ಗೂ ಹೋಗಿರುವ ರಾಜಮೌಳಿಯವರ ಆರ್.ಆರ್.ಆರ್. ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಇನ್ನು ಆರ್.ಆರ್.ಆರ್. ಚಿತ್ರವೂ ಅಷ್ಟೆ, ನಾಟು ನಾಟು ಹಾಡೊಂದನ್ನು  ಬಿಟ್ಟು ಮಿಕ್ಕ ಯಾವುದೇ ವಿಭಾಗದಲ್ಲಿ ನಾಮಿನೇಟ್ ಆಗಿಲ್ಲ.

    ಇವುಗಳ ಜೊತೆಗೆ ವಿವಿಧ ಪಕ್ಷಿ, ಪ್ರಾಣಿಗಳನ್ನು ಸಾಕುವ ದೆಹಲಿಯ ಮುಸ್ಲಿಂ ಕುಟುಂಬವೊಂದರ ಕುರಿತ ಡಾಕ್ಯುಮೆಂಟರಿ 'ಆಲ್ ದಟ್ ಬ್ರೀತ್ಸ್' ಆಸ್ಕರ್ಗೆ ನಾಮಿನೇಟ್ ಆಗಿದೆ. ಇದರ ಜೊತೆಗೆ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ್ದೇ ಆದ 'ದಿ ಎಲಿಫೆಂಟ್ ವಿಸ್ಪರ್ಸ್' ಸಹ ನಾಮಿನೇಟ್ ಆಗಿದೆ.

    Related Articles ;-

    ಆಸ್ಕರ್ ರೇಸ್ : ಅಧಿಕೃತ ಎಂಟ್ರಿ ಪಡೆದ ಕಾಂತಾರ

    ಆಸ್ಕರ್ ರೇಸ್‍ಗೆ ಕಾಂತಾರ

  • ಇನ್ನೊಂದು.. ಹನ್ನೊಂದು.. ಹೊಂಬಾಳೆ 10ನೇ ಸಿನಿಮಾ ಘೋಷಣೆ

    ಇನ್ನೊಂದು.. ಹನ್ನೊಂದು.. ಹೊಂಬಾಳೆ 10ನೇ ಸಿನಿಮಾ ಘೋಷಣೆ

    ಇದು ಇನ್ನೊಂದು.. ದಿನಾಂಕ ಹನ್ನೊಂದು.. 11ನೇ ದಿನ 10ನೇ ಸಿನಿಮಾ. ಒಂದರ ಹಿಂದೆ ಮತ್ತೊಂದರಂತೆ ಸಿನಿಮಾ ಘೋಷಿಸುತ್ತಿರುವ ಹೊಂಬಾಳೆ ಫಿಲಮ್ಸ್ ಸದ್ಯಕ್ಕೆ ದೇಶದ ಪ್ರತಿಷ್ಠಿತ ಸಿನಿಮಾ ಬ್ಯಾನರ್‍ಗಳಲ್ಲಿ ಒಂದು. 2014ರಲ್ಲಿ ನಿನ್ನಿಂದಲೇ ಚಿತ್ರದಿಂದ ಶುರುವಾದ ಹೊಂಬಾಳೆ ಫಿಲಮ್ಸ್‍ನ ಖ್ಯಾತಿ ಉತ್ತುಂಗಕ್ಕೇರಿದ್ದು ರಾಜಕುಮಾರ ಚಿತ್ರದ ನಂತರ. ಕೆಜಿಎಫ್ ನಂತರವಂತೂ ಎವರೆಸ್ಟ್ ಏರಿ ಕುಳಿತ ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡಿದೆ ಹೊಂಬಾಳೆ.

    ಈಗ ಹೊಂಬಾಳೆ ಕೆಜಿಎಫ್ ಚಾಪ್ಟರ್-2 ಚಿತ್ರದ ಶೂಟಿಂಗ್ ಮುಗಿಸಿ ರಿಲೀಸ್ ಮಾಡೋದು ಯಾವಾಗ ಅನ್ನೋ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಕೆಜಿಎಫ್ ನೀಲ್ ಮತ್ತು ಪ್ರಭಾಸ್ ಜೊತೆ ಸಲಾರ್ ಮತ್ತು ನೀಲ್ ಮತ್ತು ಶ್ರೀಮುರಳಿ ಜೊತೆ ಬಘೀರ ಚಿತ್ರಗಳ ಲಾಂಚ್ ಘೋಷಿಸಿದೆ. ಪುನೀತ್ ಜೊತೆ ಯುವರತ್ನ ನಂತರ ದ್ವಿತ್ವ ಚಿತ್ರವನ್ನೂ ಘೋಷಣೆ ಮಾಡಿದೆ. ಈಗ 11ನೇ ತಾರೀಕು 12.51ಕ್ಕೆ ಹೊಂಬಾಳೆಯ 10ನೇ ಚಿತ್ರ ಘೋಷಣೆಯಾಗಲಿದೆ.

    ಯಾವಾಗ ಅಲೆ ಸತ್ತವರನ್ನು ವಾಪಸ್ ತೆಗೆದುಕೊಂಡು ಬರುತ್ತದೋ.. ಆಗ ಕಡಲ ತೀರ ರಕ್ತಸಿಕ್ತವಾಗುತ್ತದೆ.. ಅನ್ನೋ ಲೈನ್ ಕೊಟ್ಟು ಪೋಸ್ಟರ್ ಹೊರಬಿಟ್ಟಿದೆ ಹೊಂಬಾಳೆ. ಹೀರೋ ಯಾರು? ಡೈರೆಕ್ಟರ್ ಯಾರು? ಕಥೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಜುಲೈ 11ರಂದು ಸಿಗಬಹುದು.

  • ಕಾಂತಾರ : ಸಮ್‍ಥಿಂಗ್ ಸ್ಪೆಷಲ್

    ಕಾಂತಾರ : ಸಮ್‍ಥಿಂಗ್ ಸ್ಪೆಷಲ್

    ಕಾಂತಾರ. ಅದೊಂದು ಅಪರೂಪದ ಪದ. ಕನ್ನಡದ ಬಗ್ಗೆ ತುಂಬಾ ಒಳ್ಳೆಯ ಜ್ಞಾನ ಇರುವವರು ಕೇಳಿರಬಹುದಾದ ಪದ ಕಾಂತಾರ. ಡಿಕ್ಷನರಿ ನೋಡಿದರೆ ಕಾಂತಾರಾ ಅಂದರೆ ದಟ್ಟ ಕಾಡು ಅನ್ನೋ ಅರ್ಥವಿದೆ. ಅಂತಾದ್ದೊಂದು ಅಪರೂಪದ ಪದವನ್ನ ತಮ್ಮ ಚಿತ್ರಕ್ಕೆ ಟೈಟಲ್ ಮಾಡಿದ್ದಾರೆ ರಿಷಬ್ ಶೆಟ್ಟಿ.

    ಇಂತಾದ್ದೊಂದು ವಿಶೇಷದೊಂದಿಗೆ ಶುರುವಾಗುವ ಚಿತ್ರದಲ್ಲಿರೋದು ಪರಿಸರದ ಕಥೆ. ಇತ್ತೀಚೆಗೆ ತಾವೊಂದು ಸಿನಿಮಾ ಮಾಡುತ್ತಿದ್ದು, ಪರಿಸರದ ಕಥೆ ಹೇಳುತ್ತೇನೆ ಎಂದಿದ್ದರು ರಿಷಬ್. ಆ ಕಥೆಗೀಗ ಹೊಂಬಾಳೆ ಫಿಲಮ್ಸ್ ಕೈಜೋಡಿಸಿದೆ.

    ಹೊಂಬಾಳೆ ಎಂದರೇನೇ ಚಿಗುರು. ಪರಿಸರದ ಕಥೆಗೂ ಬ್ಯಾನರ್‍ಗೂ ಹೊಂದಿಕೆಯಾಗುತ್ತಿದೆ.

    ಸದ್ಯಕ್ಕೆ ಕನ್ನಡದಲ್ಲಿ ಯಶ್, ಪುನೀತ್, ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿರೋ ಹೊಂಬಾಳೆ ಅತ್ತ ತೆಲುಗಿನಲ್ಲಿ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದೆ. ಜ್ಯೂ.ಎನ್‍ಟಿಆರ್ ಜೊತೆ ಸಿನಿಮಾ ಘೋಷಿಸಿದೆ. ಹೀಗೆ ದೇಶದ ದೊಡ್ಡ ಬ್ಯಾನರ್ ಆಗಿರುವ ಹೊಂಬಾಳೆ ಫಿಲಮ್ಸ್ ಈಗ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಮುಂದಾಗಿರುವುದೇ ವಿಶೇಷ.

    ಅಂದಹಾಗೆ ಈ ಚಿತ್ರದಲ್ಲಿ ರಿಷಬ್ ಅವರೇ ಹೀರೋ ಮತ್ತು ರಿಷಬ್ ಅವರೇ ಡೈರೆಕ್ಟರ್. ಇದುವರೆಗೆ ರಿಷಬ್ ತಾವು

    ಹೀರೋ ಆಗಿ ನಟಿಸಿರುವ ಚಿತ್ರಕ್ಕೆ ತಾವೇ ನಿರ್ದೇಶಕರಾಗಿರಲಿಲ್ಲ. ಇದು ಮತ್ತೊಂದು ವಿಶೇಷ.

    ಚಿತ್ರದ ಪೋಸ್ಟರಿನಲ್ಲಿ ಕಾಡ್ಗಿಚ್ಚು, ಕಂಬಳ, ದೈವದ ಕಾಲುಗಳ ದರ್ಶನವಾಗುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದ ಕೆರಾಡಿಯಲ್ಲಿ ನಡೆಯಲಿದೆ. ಆಗಸ್ಟ್ 27ರಿಂದ ಶೂಟಿಂಗ್ ಸ್ಟಾರ್ಟ್ ಎಂದಿದ್ದಾರೆ ರಿಷಬ್ ಶೆಟ್ಟಿ. ಪ್ರಮೋದ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ. 

  • ಮೂರೇ ತಿಂಗಳಲ್ಲಿ ಧೂಮಂ ಚಿತ್ರೀಕರಣ ಪೂರ್ಣ

    ಮೂರೇ ತಿಂಗಳಲ್ಲಿ ಧೂಮಂ ಚಿತ್ರೀಕರಣ ಪೂರ್ಣ

    ಹೊಂಬಾಳೆಯವರ ಮತ್ತೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಹೊಂಬಾಳೆಯವರ ಹಲವು ಚಿತ್ರಗಳು ವಿವಿಧ ಹಂತಗಳಲ್ಲಿವೆ. ಇದೀಗ ಪವನ್ ಕುಮಾರ್ ನಿರ್ದೇಶನದ ಧೂಮಂ ಚಿತ್ರ ಚಿತ್ರೀಕರಣ ಮುಗಿಸಿದೆ. ಧೂಮಂ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಹೀರೋ. ತಮಿಳಿನ ಸ್ಟಾರ್ ನಟಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ಕಲಾವಿದೆ ಅಪರ್ಣಾ ಬಾಲಮುರಳಿ ನಾಯಕಿ.

    ಅಕ್ಟೋಬರ್ 9, 2022ರಂದು ಶುರುವಾಗಿದ್ದ ಸಿನಿಮಾ ಇದೀಗ ಚಿತ್ರೀಕರಣ ಮುಗಿಸಿದೆ. ಲೂಸಿಯಾ, ಯು-ಟರ್ನ್ ಚಿತ್ರಗಳ ಮೂಲಕ ನಾನು ವಿಭಿನ್ನ ಎಂಬ ಮೆಸೇಜ್ ಕೊಟ್ಟಿರೋ ಪವನ್ ಕುಮಾರ್ ಅವರ ಧೂಮಂ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ.

    ಸದ್ಯಕ್ಕೆ ಹೊಂಬಾಳೆಯವರ ಮಡಿಲಲ್ಲಿ ಸಲಾರ್, ಬಘೀರ, ಟೈಸನ್, ರಿಚರ್ಡ್ ಆಂಟನಿ ಚಿತ್ರಗಳಿವೆ. ಪ್ರಭಾಸ್, ಶ್ರೀಮುರಳಿ, ಪೃಥ್ವಿರಾಜ್ ಸುಕುಮಾರನ್, ರಕ್ಷಿತ್ ಶೆಟ್ಟಿ, ಸೂರ್ಯ, ಕೀರ್ತಿ ಸುರೇಶ್ ಹಾಗೂ ಯುವ ರಾಜಕುಮಾರ್ ಚಿತ್ರಗಳು ಲಿಸ್ಟಿನಲ್ಲಿವೆ. ಜಗ್ಗೇಶ್-ಸಂತೋಷ್ ಆನಂದರಾಮ್ ಜೋಡಿಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್ ಡೇಟ್ ಘೋಷಿಸಿ, ಆನಂತರ ಮುಂದಕ್ಕೆ ಹೋಗಿತ್ತು. ಆ ಚಿತ್ರದ ಅಪ್ ಡೇಟ್ ಏನಾಯ್ತು ಎಂಬುದು ಗೊತ್ತಿಲ್ಲ. ಉಳಿದಂತೆ ಹೊಂಬಾಳೆ ರೇಸ್ ಭರ್ಜರಿಯಾಗಿಯೇ ಇದೆ.

  • ರಾಯರ ಭಕ್ತ ಜಗ್ಗೇಶ್ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್

    ರಾಯರ ಭಕ್ತ ಜಗ್ಗೇಶ್ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್

    ಗುರುರಾಯರೆಂದರೆ ಭಕ್ತಿ ಭಾವದಿಂದಲೇ ವಂದಿಸುವ ನಟ ಜಗ್ಗೇಶ್ ಹೊಸ ಸಿನಿಮಾ ಹೆಸರು ರಾಘವೇಂದ್ರ ಸ್ಟೋರ್ಸ್. ಈ ಬಾರಿ ಜಗ್ಗೇಶ್ ಅವರನ್ನು ಡಿಫರೆಂಟ್ ಆಗಿ ತೋರಿಸೋಕೆ ಹೊರಟಿರೋದು ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್. ಯಶ್ ಮತ್ತು ಪುನೀತ್`ಗೆ ಸೂಪರ್ ಹಿಟ್ ಕೊಟ್ಟಿರೋ ಸಂತೋಷ್ ಆನಂದರಾಮ್, ಈ ಬಾರಿ ಜಗ್ಗೇಶ್‍ಗೆ ಬ್ಲಾಕ್ ಬಸ್ಟರ್ ಕೊಡೋ ಉತ್ಸಾಹದಲ್ಲಿದ್ದಾರೆ. ಅಂದಹಾಗೆ ಇದು ಹೊಂಬಾಳೆ ಫಿಲಮ್ಸ್ ಪ್ರೊಡಕ್ಷನ್‍ನದ್ದು.

    ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಫಸ್ಟ್ ಲುಕ್‍ನಲ್ಲಿ ಜಗ್ಗೇಶ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನ್ಸ್ 1972 ಎಂದಿರೋ ಟ್ಯಾಗ್‍ಲೈನ್ ನೋಡಿದರೆ, ಇದೊಂದು ಪಕ್ಕಾ ಪ್ರಾವಿಷನ್ ಸ್ಟೋರ್ ಮಾಲೀಕನ ಕಥೆ  ಅಥವಾ ಅಡುಗೆ ಭಟ್ಟನ ಕಥೆ ಇರಬಹುದು ಎನ್ನಿಸುತ್ತಿದೆ. ಅಡುಗೆ ಮಸಾಲೆ ಬಾಕ್ಸ್‍ನಲ್ಲಿ ಜಗ್ಗೇಶ್ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇನ್ನೊಂದು ವಿಶೇಷವೆಂದರೆ ಇದು ಹೊಂಬಾಳೆಯವರ 12ನೇ ಸಿನಿಮಾ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡೋಕೆ ರೆಡಿಯಾಗಿದ್ದುಕೊಂಡೇ ಘೋಷಿಸಿರೋ 6ನೇ ಸಿನಿಮಾ. ಈಗಾಗಲೇ ಪ್ರಭಾಸ್ ಜೊತೆ ಸಲಾರ್, ಶ್ರೀಮುರಳಿ ಜೊತೆ ಬಘೀರ, ಪುನೀತ್ ಜೊತೆ ದ್ವಿತ್ವ, ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್ ಆಂಟನಿ, ರಿಷಬ್ ಶೆಟ್ಟಿ ಜೊತೆ ಕಾಂತಾರಾ ಮತ್ತೀಗ ಜಗ್ಗೇಶ್ ಜೊತೆ ರಾಘವೇಂದ್ರ ಸ್ಟೋರ್ಸ್.

  • ಹೊಂಬಾಳೆ ಫ್ಯಾಮಿಲಿಗೆ ಫ್ರೀ ಕೊರೊನಾ ವ್ಯಾಕ್ಸಿನ್

    ಹೊಂಬಾಳೆ ಫ್ಯಾಮಿಲಿಗೆ ಫ್ರೀ ಕೊರೊನಾ ವ್ಯಾಕ್ಸಿನ್

    ಹೊಂಬಾಳೆ ಫಿಲಮ್ಸ್, ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ. ಕನ್ನಡ ಚಲನಚಿತ್ರ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಷ್ಠಿತ ಹೊಂಬಾಳೆ ಸಮೂಹ, ತನ್ನ ಗ್ರೂಪ್ನ ಎಲ್ಲ   ಉದ್ಯೋಗಿಗಳು, ನೌಕರರು ಹಾಗೂ ಅವರ ಕುಟುಂಬಗಳ ಸುಮಾರು 5 ಸಾವಿರ ಮಂದಿಗೆ ಉಚಿತವಾಗಿ ಕೋವಿಡ್‌ ಲಸಿಕೆ ಹಾಕಿಸಲು ನಿರ್ಧರಿಸಿದೆ. ತನ್ನೊಂದಿಗೆ ಇರುವ ಪ್ರತಿಯೊಬ್ಬರ ಕಾಳಜಿ, ಆರೈಕೆ ನನ್ನ ಹೊಣೆ ಎಂದಿರುವ ಹೊಂಬಾಳೆ ಗ್ರೂಪ್ಸ್, ಸಮೂಹದ ಎಲ್ಲರ ವ್ಯಾಕ್ಸಿನೇಶನ್‌ಗೆ ಆಗುವ ಪೂರ್ಣ ವೆಚ್ಚವನ್ನು ತಾನೇ ಭರಿಸಲಿದೆ.

    ಇದು, ಹೊಂಬಾಳೆ ಫಿಲ್ಮ್‌ ಬ್ಯಾನರ್‌ನಲ್ಲಿರುವ ಎಲ್ಲ ಸದಸ್ಯರು ಹಾಗೂ ಪೂರಕ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೂ ಸಿಗಲಿದೆ. ಕೇಂದ್ರ ಸರಕಾರ ಮಾರ್ಗಸೂಚಿಯಂತೆ ಮುಂದಿನ ಹಂತದಲ್ಲಿ ಅವರವರ ವಯೋಮಿತಿ ಆಧಾರದ ಮೇಲೆ ಕೋವಿಡ್‌ ವ್ಯಾಕ್ಸಿನ್‌ ಕೊಡಿಸಲಾಗುವುದು ಮತ್ತು ನಮ್ಮವರ ಆರೋಗ್ಯದ ಜತೆಗೆ ಅವರ ಕುಟುಂಬದ ಆರೋಗ್ಯವೂ ನಮಗೆ ಮುಖ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.