` ajai rao, - chitraloka.com | Kannada Movie News, Reviews | Image

ajai rao,

  • ಲವ್ ಯೂ ರಚ್ಚು ಅಂತಿದ್ದಾರೆ ಅಜೇಯ್ ರಾವ್

    ಲವ್ ಯೂ ರಚ್ಚು ಅಂತಿದ್ದಾರೆ ಅಜೇಯ್ ರಾವ್

    ರಚಿತಾ ರಾಮ್`ರನ್ನು ಅವರ ಹತ್ತಿರದವರು ಕರೆಯೋದೇ ಹಾಗೆ ರಚ್ಚು ಅಂತಾ. ಅಭಿಮಾನಿಗಳಿಗಷ್ಟೇ ಅವರು ಬುಲ್ ಬುಲ್, ಡಿಂಪಲ್ ಕ್ವೀನ್, ಡಿಂಪಿ.. ಈಗ ರಚಿತಾ ರಾಮ್`ರನ್ನು ಅಜೇಯ್ ರಾವ್ ಲವ್ ಯೂ ರಚ್ಚು ಅಂತಿದ್ದಾರೆ.

    ಯೆಸ್, ಇದು ರಚಿತಾ ರಾಮ್ ಮತ್ತು ಅಜೇಯ್ ರಾವ್ ನಟನೆಯ ಹೊಸ ಚಿತ್ರದ ಟೈಟಲ್. ಇಬ್ಬರೂ ಒಟ್ಟಿಗೇ ನಟಿಸುತ್ತಿರೋದು ಇದೇ ಮೊದಲು. ಈ ಚಿತ್ರಕ್ಕೆ ನಿರ್ದೇಶಕರು ಶಂಕರ್ ರಾಜ್ ಅನ್ನೋ ಹೊಸ ನಿರ್ದೇಶಕ.

    ಈ ಶಂಕರ್ ರಾಜ್ ಬೆನ್ನ ಹಿಂದಿರೋದು ಅವರ ಗುರುಗಳಾದ ಗುರು ದೇಶಪಾಂಡೆ ಮತ್ತು ಶಶಾಂಕ್. ಟೈಟಲ್ ಕೇಳಿದಾಗ ಶಾಕ್ ಮತ್ತು ಥ್ರಿಲ್ ಎರಡೂ ಆಯ್ತು. ಆದರೆ, ಸ್ಕ್ರಿಪ್ಟ್ ಓದಿದ ಮೇಲೆ ಟೈಟಲ್ ಸೂಪರ್ ಅನ್ನಿಸ್ತು. ಶಶಾಂಕ್ ಮತ್ತು ಗುರು ದೇಶಪಾಂಡೆ ಟೀಂ ಇರೋದ್ರಿಂದ ಖುಷಿಯಾಗಿಯೇ ಒಪ್ಪಿಕೊಂಡೆ ಎಂದಿದ್ದಾರೆ ರಚಿತಾ. ಅಜೇಯ್ ರಾವ್ ಜೊತೆ ಮೊದಲ ಸಿನಿಮಾ ಅನ್ನೋದು ಅತ್ತ ರಚಿತಾ ಇತ್ತ ಅಜೇಯ್ ರಾವ್ ಇಬ್ಬರಿಗೂ ಖುಷಿ ಕೊಟ್ಟಿದೆ. ಇದೊಂದು ಫ್ರೆಶ್ ಜೋಡಿಯಾಗಲಿದೆ ಅನ್ನೋ ನಿರೀಕ್ಷೆ ಅಜೇಯ್ ರಾವ್ ಅವರದ್ದು. ಈ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.

  • ಲವ್ ಯೂ ರಚ್ಚು ಟ್ರೇಲರ್ ಮೆಚ್ಚಿದ ಡೈರೆಕ್ಟರ್ಸ್

    ಲವ್ ಯೂ ರಚ್ಚು ಟ್ರೇಲರ್ ಮೆಚ್ಚಿದ ಡೈರೆಕ್ಟರ್ಸ್

    ಲವ್ ಯೂ ರಚ್ಚು ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ. ರಚಿತಾ ರಾಮ್, ಅಜೇಯ್ ರಾವ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಪಡ್ಡೆಗಳನ್ನು ರೊಚ್ಚಿಗೆಬ್ಬಿಸಿರೋ ಚಿತ್ರ. ಚಿತ್ರದ ಟ್ರೇಲರ್ ಇದೇ ಡಿಸೆಂಬರ್ 16ಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್‍ನ್ನು ನೋಡಿದವರು ಶಹಬ್ಬಾಸ್ ಎನ್ನುತ್ತಿದ್ದಾರೆ.

    ನಿರ್ದೇಶಕ ಎಂ.ಡಿ.ಶ್ರೀಧರ್ : ನಿರ್ದೇಶಕರು ಹೊಸಬರಾದರೂ ಚೆನ್ನಾಗಿ ಮಾಡಿದ್ದಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ.

    ಆರ್.ಚಂದ್ರು : ಗುರು ದೇಶಪಾಂಡೆ, ಒಳ್ಳೆಯ ಅಭಿರುಚಿ ಇರುವ ನಿರ್ದೇಶಕರು. ಈ ಚಿತ್ರಕ್ಕೆ ನಿರ್ಮಾಪಕರಾಗಿ ಇನ್ನೊಬ್ಬರಿಗೆ ನಿರ್ದೇಶನ ಕೊಟ್ಟಿದ್ದಾರೆ. ಇಡೀ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ.

    ಎನ್.ಮಹೇಶ್ ಕುಮಾರ್ : ಟೈಟಲ್ ನೋಡಿ ಕೇವಲ ಲವ್ ಸ್ಟೋರಿ ಅಂದುಕೊಳ್ಳಬೇಡಿ. ಚಿತ್ರದಲ್ಲಿ ಆ್ಯಕ್ಷನ್, ಥ್ರಿಲ್ ಎಲ್ಲವೂ ಇದೆ. ನಿರ್ದೇಶಕರಿಗೆ ಏನು ಹೇಳಬೇಕು ಅನ್ನೋ ಕ್ಲಾರಿಟಿ ಇದೆ. ಟ್ರೇಲರ್ ಸಖತ್ತಾಗಿದೆ.

    ನಂದ ಕಿಶೋರ್ : ನಿರ್ದೇಶಕರು ಹೊಸಬರು. ಆದರೆ ಟ್ರೇಲರ್ ನೋಡಿದರೆ ಹಾಗೆ ಅನ್ನಿಸೋದಿಲ್ಲ. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡಾ ಅಷ್ಟೇ ಚೆನ್ನಾಗಿರಲಿದೆ ಅನ್ನೋ ನಿರೀಕ್ಷೆ ಇದೆ...

    ಹೀಗೆ ಚಿತ್ರದ ಟ್ರೇಲರ್ ನೋಡಿದ ನಿರ್ದೇಶಕರೆಲ್ಲ ಚಿತ್ರದ ಬಗ್ಗೆ ಒಳ್ಳೊಳ್ಳೆ ಮಾತನಾಡುತ್ತಿದ್ದಾರೆ. ರಚಿತಾ ರಾಮ್ ಅಭಿನಯಕ್ಕೆ ಹೆಚ್ಚು ಮಾಕ್ರ್ಸ್ ಬೀಳುತ್ತಿವೆ. ಶಂಕರ್ ಎಸ್.ರಾಜ್ ನಿರ್ದೇಶನದ ಮೊದಲ ಚಿತ್ರವಿದು. ವೇಯ್ಟ್.. ವೇಯ್ಟ್.. ವೇಯ್ಟ್..

  • ಲವ್ ಯೂ ರಚ್ಚು ದುರಂತ : ನಿಜಕ್ಕೂ ನಡೆದಿದ್ದಾದರೂ ಏನು?

    ಲವ್ ಯೂ ರಚ್ಚು ದುರಂತ : ನಿಜಕ್ಕೂ ನಡೆದಿದ್ದಾದರೂ ಏನು?

    ಲವ್ ಯೂ ರಚ್ಚು ಚಿತ್ರ ಮೊದಲು ಸುದ್ದಿಯಾಗಿದ್ದು ಚಿತ್ರದ ಚೆಂದದ ಟೈಟಲ್ಲು, ಲುಕ್.. ಇತ್ಯಾದಿಗಳಿಗೆ. ಆದರೆ ಆಗಸ್ಟ್ 9ನೇ ತಾರೀಕು ನಡೆದ ದುರಂತ, ಫೈಟರ್ ವಿವೇಕ್ ದುರ್ಮರಣ ಚಿತ್ರತಂಡಕ್ಕೂ ಶಾಕ್. ಇಷ್ಟಕ್ಕೂ ಆಗಿದ್ದೇನು?

    ದುರಂತಕ್ಕೆ ಕಾರಣ ಸಾಹಸ ನಿರ್ದೇಶಕ ವಿನೋದ್ ಅಲ್ಲ, ಚಿತ್ರತಂಡದಲ್ಲಿದ್ದ ಯಾವೊಬ್ಬ ಸಾಹಸ ಕಲಾವಿದರೂ ಅಲ್ಲ. ಬದಲಿಗೆ ಇದೆಲ್ಲ ಆಗಿದ್ದು ಕ್ರೇನ್ ಆಪರೇಟರ್‍ನಿಂದ. ಬಿಡದಿಯ ಜೋಗಯ್ಯನ ಪಾಳ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್‍ನಲ್ಲಿ ರೋಪ್ ಸ್ಟಂಟ್ ಇತ್ತು. ದುರದೃಷ್ಟವಶಾತ್ ಅದು ಹೈಟೆನ್ಷನ್ ವೈರ್ ಕೆಳಗೆ ನಡೆಯುತ್ತಿದ್ದ ಸಾಹಸ. ಆ ವೇಳೆ ಕ್ರೇನ್ ಆಪರೇಟರ್, ಕ್ರೇನ್‍ನ್ನು ಮರಕ್ಕೆ ಟಚ್ ಮಾಡಿದ್ದ. ಆಗ ಅವನಿಗೆ ವಾರ್ನಿಂಗ್ ಕೊಡಲಾಗಿತ್ತು. ಕೊನೆಗೆ ಆತ ವೈರ್‍ಗೆ ಟಚ್ ಮಾಡಿಬಿಟ್ಟ. ಅದು 11  ಕೆವಿ ವಿದ್ಯುತ್ ಲೇನ್. ಆಗ ಕ್ರೇನ್‍ಗೆ ತಗುಲಿದ್ದ ಕರೆಂಟ್, ವಿವೇಕ್ ಮತ್ತು ರಂಜಿತ್ ಇಬ್ಬರಿಗೂ ಟಚ್ ಆಯ್ತು. ರಂಜಿತ್ ಅದೃಷ್ಟ ಚೆನ್ನಾಗಿತ್ತು. ಕರೆಂಟ್ ಹೊಡೆದರೂ ಬದುಕುಳಿದರು. ವಿವೇಕ್ ಅಲ್ಲಿಯೇ ಮೃತಪಟ್ಟರು. ಇದು ರಂಜಿತ್ ಹೇಳಿರುವ ಘಟನೆಯ ವಿವರ.

    ಸದ್ಯಕ್ಕೆ ಚಿತ್ರದ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್, ಟ್ರೇನ್ ಆಪರೇಟರ್ ಮಾದೇಶ (ಮುನಿಯಪ್ಪ) ಹಾಗೂ ಜಮೀನಿನ ಮಾಲೀಕ ಪುಟ್ಟರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರು ಪಡಿಸಿ ವಿಚಾರಣೆ ಆರಂಭಿಸಿದ್ದಾರೆ.

    ನಿರ್ಮಾಪಕ ಗುರು ದೇಶಪಾಂಡೆ ಸ್ಥಳದಲ್ಲಿ ಇರಲಿಲ್ಲ. ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ ಗುರು ದೇಶಪಾಂಡೆ.

  • ಲವ್ ಯೂ ರಚ್ಚು.. ವಿಭಿನ್ನ ಕಥೆಯಲ್ಲಿ ಟ್ವಿಸ್ಟುಗಳೇ ಹೆಚ್ಚು.. ಎಲ್ಲರಿಗೂ ಮೆಚ್ಚು

    ಲವ್ ಯೂ ರಚ್ಚು.. ವಿಭಿನ್ನ ಕಥೆಯಲ್ಲಿ ಟ್ವಿಸ್ಟುಗಳೇ ಹೆಚ್ಚು.. ಎಲ್ಲರಿಗೂ ಮೆಚ್ಚು

    ಲವ್ ಯೂ ರಚ್ಚು. ಡಿಸೆಂಬರ್ 31ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಟ್ರೇಲರ್ ಹೊರಬಿದ್ದಿದ್ದೇ ತಡ.. ಇದು ಬೇರೆಯದೇ ಕಥೆ ಇರೋ ಸಸ್ಪೆನ್ಸ್ ಥ್ರಿಲ್ಲರ್ ಲವ್ ಸ್ಟೋರಿ ಅನ್ನೋ ಮಾತು ಹೊರಬಿದ್ದಿದೆ. ಟ್ರೇಲರಿನಲ್ಲಿಯೇ ರೋಮಾಂಚನವಾಗುವಷ್ಟು ಟ್ವಿಸ್ಟುಗಳಿವೆ. ಥ್ರಿಲ್ಲುಗಳಿವೆ. ಇನ್ನು ಸಿನಿಮಾದಲ್ಲಿ ಹೇಗಿರಬಹುದು..? ರಚ್ಚು ಮೆಚ್ಚಿಕೊಳ್ಳೋಕೆ ಅಷ್ಟು ಸಾಕು.

    ಅಜೇಯ್ ರಾವ್ ಮತ್ತು ರಚಿತಾ ರಾಮ್ ಲವ್ ಸ್ಟೋರಿ, ಮಧ್ಯೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಯಾಗೋ ಡ್ರೈವರ್, ಆತನ ಹೆಣವನ್ನು ಮುಚ್ಚಿ ಹಾಕೋ ಅಜೇಯ್, ರಚಿತಾ.. ಅವರಿಬ್ಬರಿಗೆ ಮಾತ್ರವೇ ಗೊತ್ತಿದ್ದ ಸತ್ಯ ಆ ಇನ್ನೊಬ್ಬನಿಗೆ ಗೊತ್ತಾಗೋದು ಹೇಗೆ? ಅವನ್ಯಾರು? ಕೊಲೆ ನಿಜಕ್ಕೂ ನಡೆದಿದ್ಯಾ? ಕೊಲೆ ನಡೆಯಿತು ಅನ್ನೋದೇ ಸುಳ್ಳಾ? ಟ್ರೇಲರ್ ನೋಡಿದವರಿಗೆ ಇಷ್ಟೆಲ್ಲ ಕುತೂಹಲ ಹುಟ್ಟುತ್ತವೆ. ಉತ್ತರ ತಿಳ್ಕೊಳ್ಳೋಕೆ ಡಿಸೆಂಬರ್ 31ರವರೆಗೆ ಕಾಯಬೇಕು.

    ಶಶಾಂಕ್ ಅವರ ಕಥೆ ಇಟ್ಟುಕೊಂಡು, ಶಂಕರ್ ರಾಜ್ ಚೆಂದದ ಕಥೆ ಹೇಳೋಕೆ ಹೊರಟಿದ್ದಾರೆ ಅನ್ನೋ ಸುಳಿವು ಟ್ರೇಲರಿನಲ್ಲಿ ಸಿಕ್ಕಿದೆ. ಗುರು ದೇಶಪಾಂಡೆ ಅವರ ಕ್ರಿಯೇಟಿವಿಟಿಯೂ ಕಾಣಿಸುತ್ತದೆ. ಒಂದಂತೂ ಪಕ್ಕಾ.. ಲವ್ ಯೂ ರಚ್ಚು ಟೀಂ ಒಂದೊಳ್ಳೆ ಕಥೆ ಹೇಳೋಕೆ ಸಿದ್ಧವಾಗಿದೆ. ಗೆಟ್ ರೆಡಿ..

  • ಲವ್ ಯೂ ರಮ್ಯಾದಿಂದ ಲವ್ ಯೂ ರಚ್ಚು ಆಗಿದ್ದು ಹೇಗೆ?

    ಲವ್ ಯೂ ರಮ್ಯಾದಿಂದ ಲವ್ ಯೂ ರಚ್ಚು ಆಗಿದ್ದು ಹೇಗೆ?

    ಲವ್ ಯೂ ರಚ್ಚು ಚಿತ್ರದ ಕಥೆ ಕೇಳಿದಾಗ ಕೃಷ್ಣನ್ ಲವ್ ಸ್ಟೋರಿ ಮಾದರಿಯಲ್ಲಿ ಟೈಟಲ್ ಇಡೋಣ ಎಂದುಕೊಂಡ್ವಿ. ಕಥೆಯಲ್ಲಿ ಲವ್ ಸ್ಟೋರಿ ಇತ್ತು. ಎಲ್ಲರಿಗೂ ಇಷ್ಟವಾಗಿತ್ತು. ಅವಳ ಪ್ರೀತಿಗಾಗಿ ಆತ ಮಾಡುವ ಫೈಟ್ಸ್ ಇಷ್ಟವಾಗಿತ್ತು. ಟೈಟಲ್ ಏನಿಡೋಣ ಎಂದಾಗ..

    ಶಶಾಂಕ್ ಸರ್ ನಿನ್ನ ಜೊತೆ ನಟಿಸಿರೋ ನಾಯಕಿಯರ ಹೆಸರು ಹೇಳ್ತಾ ಹೋಗು ಅಂದ್ರು. ನನ್ನ ಜೊತೆ ನಟಿಸಿದ ಮೊದಲ ನಾಯಕಿ ರಮ್ಯಾ. ಅಲ್ಲಿಂದ ಲವ್ ಯೂ ರಮ್ಯಾ ಎಂದು ಶುರುವಾಯ್ತು. ಒಬ್ಬೊಬ್ಬರೇ ನಾಯಕಿಯರ ಹೆಸರು ಹೇಳ್ತಾ ಹೋದೆವು. ಅದು ಮುಗಿದ ಮೇಲೆ ಬೇರೆ ಬೇರೆ ನಾಯಕಿಯ ಹೆಸರು ಟ್ರೈ ಮಾಡ್ತಾ ಹೋದೆವು. ಆಗ ಲವ್ ಯೂ ರಚ್ಚು ಅನ್ನೋ ಟೈಟಲ್ ಸೌಂಡಿಂಗ್ ಇಷ್ಟವಾಯ್ತು. ಅದೇ ಫೈನಲ್ಲೂ ಆಯ್ತು ಎನ್ನುತ್ತಾರೆ ಅಜಯ್ ರಾವ್.

    ಅಂದಹಾಗೆ ಲವ್ ಯೂ ರಚ್ಚು ಚಿತ್ರಕ್ಕೆ ಕಥೆ ಬರೆದಿರುವುದು ಅಜಯ್ ರಾವ್‍ಗೆ ಹಿಟ್ ಮೇಲೆ ಹಿಟ್ ಕೊಟ್ಟಿರುವ ನಿರ್ದೇಶಕ ಶಶಾಂಕ್. ಲವ್ ಯೂ ರಚ್ಚುಗೆ ಡೈರೆಕ್ಟರ್ ಶಂಕರ್ ಎಸ್.ರಾಜ್. ಗುರು ದೇಶಪಾಂಡೆ ನಿರ್ಮಾಣದ ಚಿತ್ರದಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್.

  • ಲವ್, ಮ್ಯಾರೇಜ್ ನಂತರ ಟಾಕೀಸ್‍ಗೆ ಕೃಷ್ಣ 

    ajai rao to play as krishna for the fift time

    ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ.. ಹೀಗೆ ಕೃಷ್ಣ ಎಂದ ತಕ್ಷಣ ಕನ್ನಡ ಚಿತ್ರರಸಿಕರ ಕಣ್ಣ ಮುಂದೆ ಬರೋದು ಈಗ ಅಜೇಯ್ ರಾವ್. ಅವರು ಮತ್ತೊಮ್ಮೆ ಕೃಷ್ಣನಾಗುತ್ತಿದ್ದಾರೆ. ಕೃಷ್ಣ ಟಾಕೀಸ್‍ಗೆ ಬರುತ್ತಿದ್ದಾರೆ. ಏಕೆಂದರೆ, ಕೃಷ್ಣ ಅನ್ನೋದು ಅವರಿಗೆ ಲಕ್ಕಿ. ಹೀಗಾಗಿಯೇ.. ಅವರು ತಮ್ಮ ಅಜೇಯ್ ರಾವ್ ಹೆಸರನ್ನು ಕೃಷ್ಣ ಅಜಯ್ ಎಂದು ಬದಲಿಸಿಕೊಂಡಿದ್ದಾರೆ.

    ಕೃಷ್ಣನಿಗೆ ಜೊತೆಯಾಗ್ತಿರೋದು ಸಿಂಧು ಲೋಕನಾಥ್. ಮದುವೆಯ ನಂತರ ಚಿತ್ರರಂಗದಿಂದ ದೂರವೇ ಇದ್ದ ಸಿಂಧು, ಕೃಷ್ಣನಿಗೆ ಜೋಡಿಯಾಗುತ್ತಿದ್ದಾರೆ. ಅವರಿಗಿದು ಸೆಕೆಂಡ್ ಇನ್ನಿಂಗ್ಸ್. ರೀ ಎಂಟ್ರಿ.

    ಡೈರೆಕ್ಟರ್ ಆಗಿರುವುದು ಆನಂದ್ ಪ್ರಿಯಾ ಅಲಿಯಾಸ್ ವಿಜಯಾನಂದ್. ಎಎಚ್ ಗೋವಿಂದರಾಜು ನಿರ್ಮಾಣದ ಚಿತ್ರಕ್ಕೆ ಸಂಭ್ರಮ ಶ್ರೀಧರ್ ಸಂಗೀತವಿದೆ. ಕೃಷ್ಣ ಟಾಕೀಸ್‍ಗೆ ಬಾಲ್ಕನಿ ಎಫ್13 ಅನ್ನೋ ಟ್ಯಾಗ್‍ಲೈನ್ ಇದೆ. 

  • ಶೋಕಿವಾಲ ಕೃಷ್ಣ ಅಜೇಯ್ ರಾವ್

    krishna ajai rao as shokivaala

    ಚಮಕ್, ಅಯೋಗ್ಯ, ಬೀರ್‍ಬಲ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಗಳ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಹೊಸ ಸಿನಿಮಾ ಶುರು ಮಾಡಿದ್ದಾರೆ. ಕೃಷ್ಣ ಅಜೇಯ್ ರಾವ್ ನಾಯಕತ್ವದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಟೈಟಲ್ ಶೋಕಿವಾಲ.

    ಹಳ್ಳಿ ಸೊಗಡಿನ ಕಥೆಗೆ ತಿಮ್ಮೇಗೌಡ ಜಾಕಿ ಎಂಬುವವರು ನಿರ್ದೇಶಕ. ತಿಮ್ಮೇಗೌಡರಿಗೆ ಇದು ಮೊದಲ ಸಿನಿಮಾ. ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಇದ್ದಾರೆ. ಲುಂಗಿ, ಬನಿಯನ್ನು, ಕೂಲಿಂಗ್ ಗ್ಲಾಸ್‍ನಲ್ಲಿರೋ ಕೃಷ್ಣ ಅಜೇಯ್ ರಾವ್ ಅವರ ಲುಕ್ಕು ಚಿತ್ರದಲ್ಲಿ ಮಜಾ ಕಥೆಯಿದೆ ಅನ್ನೋದ್ರ ಸುಳಿವು ಕೊಟ್ಟಿದೆ.

  • ಶೋಕಿವಾಲ ಡಬ್ಬಿಂಗ್ ಮುಗೀತು

    shokiwala dubbing completes

    ಲಾಕ್ ಡೌನ್ ನಡುವೆ ಯಾವುದೇ ಸಿನಿಮಾ ಚಿತ್ರೀಕರಣ ನಡೆಯುತ್ತಿಲ್ಲ. ಶೂಟಿಂಗ್ ನಿಂತಿದೆ. ಥಿಯೇಟರುಗಳು ಬಂದ್ ಆಗಿವೆ. ಇದರ ನಡುವೆಯೇ ಶೋಕಿವಾಲ ಚಿತ್ರ ಡಬ್ಬಿಂಗ್ ಮುಗಿಸಿದೆ. ಲಾಕ್ ಡೌನ್ ನಡುವೆಯೇ ಸೋಷಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ಡಬ್ಬಿಂಗ್ ಮುಗಿಸಿದ್ದೇವೆ ಎಂದಿದೆ ಚಿತ್ರತಂಡ. ಯಾವುದೇ ರೀತಿಯ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನೂ ತೆಗೆದುಕೊಂಡೇ ಡಬ್ಬಿಂಗ್ ಪೂರೈಸಿದೆ.

    ಜಾಕಿ ತಿಮ್ಮೇಗೌಡ ನಿರ್ದೇಶನದ ಶೋಕಿವಾಲ ಚಿತ್ರಕ್ಕೆ ಟಿ.ಆರ್.ಚಂದ್ರಶೇಖರ್ ನಿರ್ಮಾಪಕ. ಅಜೇಯ್ ರಾವ್ ಎದುರು ಈ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಎಂದಿದ್ದಾರೆ ಟಿ.ಆರ್.ಚಂದ್ರಶೇಖರ್. 

  • ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಕೃಷ್ಣ ಟಾಕೀಸ್`ಗೆ ಸೆನ್ಸಾರ್

    krishna talkies censored on krishna janmastami

    ಅಜೇಯ್ ರಾವ್, ಅಪೂರ್ವ ನಟಿಸಿರುವ ಕೃಷ್ಣ ಟಾಕೀಸ್ ಚಿತ್ರ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವೂ ಸಿಕ್ಕಿದೆ. ವಿಜಯಾನಂದ್ ನಿರ್ದೇಶನದ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್‍ಗಿಂತ ಚಿತ್ರ ಸೆನ್ಸಾರ್ ಆದ ದಿನವೇ ಇಂಟ್ರೆಸ್ಟಿಂಗ್. ಚಿತ್ರದ ಸೆನ್ಸಾರ್ ಆಗಿರುವುದು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ.

    ಎ.ಎಚ್.ಗೋವಿಂದರಾಜು ನಿರ್ಮಾಣದ ಸಿನಿಮಾ ಕೃಷ್ಣ ಟಾಕೀಸ್. ಅಜೇಯ್ ರಾವ್, ಅಪೂರ್ವ ಜೊತೆ ಸಿಂಧು ಲೋಕನಾಥ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಶೋಭರಾಜ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಿರಿಯ ಕಲಾವಿದರು ನಟಿಸಿರುವ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತವಿದೆ.

  • ಸಾಮಾನ್ಯನೊಬ್ಬ ಸ್ಟಾರ್ ಆಗುವ ಕಥೆಗೆ ಗುರು ಆ್ಯಕ್ಷನ್ ಕಟ್

    guru deshpande's next with ajai rao

    ಗುರು ದೇಶಪಾಂಡೆ ಮತ್ತೊಮ್ಮೆ ನಿರ್ದೇಶನದ ಅಖಾಡಕ್ಕಿಳಿಯುತ್ತಿದ್ದಾರೆ. ಹೊಸ ಪ್ರತಿಭೆಯನ್ನು ಗುರುತಿಸಿ ನಿರ್ದೇಶನದ ಅವಕಾಶ ಕೊಟ್ಟು `ಜಂಟಲ್‍ಮನ್'ನಂತಾ ಸ್ಪೆಷಲ್ ಚಿತ್ರ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದ ಗುರು ದೇಶಪಾಂಡೆ ಈಗ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿ.

    ಹೊಸ ಚಿತ್ರಕ್ಕೆ ಅಜೇಯ್ ರಾವ್ ನಾಯಕ. ಗುರು ದೇಶಪಾಂಡೆ ಅವರದ್ದೇ ಬ್ಯಾನರ್‍ನಲ್ಲಿ ಅಜೇಯ್ ರಾವ್-ಮಾನ್ವಿತಾ ಕಾಮತ್ ಕಾಂಬಿನೇಷನ್ನಿನಲ್ಲಿ ರೇನ್ ಬೋ ಚಿತ್ರ ಸೆಟ್ಟೇರಿತ್ತು. ಆ ಚಿತ್ರಕ್ಕೆ ಈಗ ತಾತ್ಕಾಲಿಕ ಬ್ರೇಕ್ ಕೊಟ್ಟು ಈ ಚಿತ್ರಕ್ಕೆ ಜೀವ ಕೊಡುತ್ತಿದ್ದಾರೆ ಗುರು ದೇಶಪಾಂಡೆ.

    2000ನೇ 2020ರವರೆಗೆ ಯಾರೆಲ್ಲ ಹೊಸ ಹೊಸ ಸ್ಟಾರ್‍ಗಳು ಬಂದಿದ್ದಾರೋ.. ಅವರೆಲ್ಲರ ಕಥೆಯೂ ಈ ಚಿತ್ರದಲ್ಲಿರುತ್ತದೆ ಎನ್ನುವ ಗುರು ದೇಶಪಾಂಡೆ, ಇದು ಕನ್ನಡದ ಎಲ್ಲ ನಟರ ಬಯೋಪಿಕ್ ಎನ್ನುತ್ತಾರೆ. ಯುಗಾದಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 2ನೇ ವಾರದಿಂದ ಶೂಟಿಂಗ್ ಶುರು.

  • ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

    ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

    ಲವ್ ಯೂ ರಚ್ಚು ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ಇಷ್ಟವಾಗಿರೋದು ಚಿತ್ರದ ಕಥೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‍ನ ಕಥೆ ಕಡೆಯ ಕ್ಷಣದವರೆಗೂ ಥ್ರಿಲ್ಲಿಂಗ್ ಕೊಟ್ಟಿದೆ. ಎಲ್ಲಿಯೂ ನಿಲ್ಲದೆ ಕ್ಷಣ ಕ್ಷಣವೂ ವೇಗವಾಗಿ ಓಡುತ್ತಲೇ ಹೋಗುವ ಲವ್ ಯೂ ರಚ್ಚು ಆರಂಭದಿಂದ ಒಂದಿಷ್ಟು ವಿವಾದಕ್ಕೆ ಸಿಲುಕಿತ್ತು. ಸಿನಿಮಾ ರಿಲೀಸ್ ಆದ ದಿನವೂ ಅದು ಬಿಡಲಿಲ್ಲ. ಪ್ರೇಕ್ಷರ ರೆಸ್ಪಾನ್ಸ್ ತಿಳಿಯಲು ಥಿಯೇಟರಿಗೆ ಬಂದ ಚಿತ್ರತಂಡದ ಜೊತೆ ನಾಯಕ ಅಜಯ್ ರಾವ್ ಅವರಾಗಲೀ, ನಾಯಕಿ ರಚಿತಾ ರಾಮ್ ಅವರಾಗಲಿ ಇರಲಿಲ್ಲ.

    ಅವರ ಬಗ್ಗೆಯೇ ಎಷ್ಟು ಕೇಳ್ತೀರಿ. ಚಿತ್ರ ತಂಡದವರೆಲ್ಲ ಇಲ್ಲೇ ಇದ್ದಾರೆ. ನಿರ್ಮಾಪಕನಾದ ನಾನು, ನಿರ್ದೇಶಕರು, ಆರುಗೌಡ, ಸಂಗೀತ ನಿರ್ದೇಶಕರು.. ಎಲ್ಲರೂ ಇದ್ದಾರೆ. ನಾನು ಒಳ್ಳೆಯದು ಮಾಡಿದ್ದೇನೆ. ಒಳ್ಳೆಯದೇ ಆಗುತ್ತೆ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.

  • ಹೃದಯಕೆ ಹೆದರಿಕೆ.. ಆಶಿಕಾ ಕನವರಿಕೆ..

    hrudaya hedarike song creates craze

    ತಾಯಿಗೆ ತಕ್ಕ ಮಗ, ಶಶಾಂಕ್ ನಿರ್ದೇಶನದ ಸಿನಿಮಾ. ಅಜೇಯ್ ರಾವ್, ಆಶಿಕಾ ರಂಗನಾಥ್, ಸುಮಲತಾ ನಟಿಸಿರುವ ಚಿತ್ರದ ರೊಮ್ಯಾಂಟಿಕ್ ಸಾಂಗ್‍ನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹೃದಯಕೆ ಹೆದರಿಕೆ.. ಹೀಗೆ ನೋಡಿದರೆ..ಹುಡುಕುತಾ ಬರುವೆಯಾ ಹೇಳದೆ ಹೋದರೆ.. ಎಂದು ಶುರುವಾಗುವ ಗೀತೆ ನೋಡುಗರನ್ನು ರೊಮ್ಯಾಂಟಿಕ್ ಮೂಡ್‍ಗೆ ಕರೆದೊಯ್ಯುತ್ತಿದೆ.

    ಜಯಂತ್ ಕಾಯ್ಕಿಣಿ, ಈ ಹಾಡಿನಲ್ಲಿ ಕ್ಯಾರೆಕ್ಟರ್‍ಗಳ ಗುಣವನ್ನೂ ಕಟ್ಟಿಕೊಟ್ಟಿದ್ದಾರೆ. ಆ್ಯಂಗ್ರಿ ಯಂಗ್‍ಮ್ಯಾನ್ ಹುಡುಗ, ಸಾಫ್ಟ್ ಹುಡುಗಿಯ ಗುಣ ವಿಶೇಷ ಹಾಡಿನಲ್ಲಿದೆ. ಆಶಿಕಾ ರಂಗನಾಥ್ ಹಾಡಿನಲ್ಲಿ ತುಂಬಾ ರೊಮ್ಯಾಂಟಿಕ್ ಆಗಿ ನಟಿಸಿದ್ದಾರೆ ಎಂದಿದ್ದಾರೆ ಶಶಾಂಕ್.

    ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡಿನಲ್ಲಿ ಆಶಿಕಾ ಅವರ ಬೋಲ್ಡ್ ಅವತಾರಕ್ಕೆ ಚಿತ್ರರಸಿಕರು ಫಿದಾ ಆಗಿದ್ದಾರೆ.

  • ಹೆಣ್ಮಕ್ಕಳೇ ಎಚ್ಚರ.. ಶೋಕಿವಾಲ ಬರ್ತಾವ್ನೆ..

    shokiwala shooting completed

    ಅವನೇ ಹೀರೋ. ಅವನಿಗೆ ಲವ್ ಮಾಡಿಯೇ ಮದುವೆ ಆಗಬೇಕು ಅನ್ನೋ ಆಸೆ. ಆದರೆ ಯಾರೂ ರೆಡಿ ಇಲ್ವೇ.. ಇಂಥಾ ಹೊತ್ತಲ್ಲಿ ಅವನಿಗೆ ಸಿಗ್ತಾಳೆ ಆ ಬಜಾರಿ. ಮುಂದೇನೈತಿ.. ಬೊಂಬಾಟ್ ಹಬ್ಬ.

    ಲವ್ ಮಾಡಿಯೇ ಮದುವೆಯಾಗೋ ಹುಚ್ಚಿಗೆ ಬಿದ್ದಿರೋದು ಶೋಕಿವಾಲ ಅಜೇಯ್ ರಾವ್. ಬಜಾರಿಯಾಗಿರೋದು ಸಂಜನಾ ಆನಂದ್. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಶೋಕಿವಾಲಾ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಚುರುಕಾಗಿದೆ.

    ಇದೊಂದು ಲವ್ ಕಾಮಿಡಿ ಸಿನಿಮಾ ಎಂದಿದ್ದಾರೆ ಡೈರೆಕ್ಟರ್ ಜಾಕಿ. ಮುಂದಿನ ವಾರ ಮೇಕಿಂಗ್ ಟೀಸರ್ ರಿಲೀಸ್ ಮಾಡ್ತಾರಂತೆ. ಯುಗಾದಿಗೆ ರಿಲೀಸ್ ಮಾಡೋ ಪ್ಲಾನ್ ಇದೆಯಂತೆ. 

  • ಹ್ಯಾಟ್ರಿಕ್ ಜೋಡಿಯಾಗ್ತಾರಾ ಶಶಾಂಕ್-ಅಜಯ್ ರಾವ್..?

    will shashank ajai rao jodi be called hatrick jodi

    ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ. ನಟ ಅಜಯ್ ರಾವ್‍ಗೆ ಇದು 25ನೇ ಸಿನಿಮಾ. ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದೆ ಜೋಡಿ. ಏಕೆಂದರೆ, ಇದು ಇವರಿಬ್ಬರೂ ಒಟ್ಟಾಗಿ ಮಾಡಿರುವ 3ನೇ ಸಿನಿಮಾ. ಈ ಹಿಂದೆ ಶಶಾಂಕ್, ಅಜಯ್ ರಾವ್ ಅವರಿಗಾಗಿ ಕೃಷ್ಣನ್ ಲವ್ ಸ್ಟೋರಿ ಮಾಡಿದ್ದರು. ಅದು ಸೂಪರ್ ಹಿಟ್. ಕೃಷ್ಣಲೀಲ ಮಾಡಿದರು. ಅದೂ ಸೂಪರ್ ಹಿಟ್. ಈಗ ತಾಯಿಗೆ ತಕ್ಕ ಮಗ ಸಿದ್ಧ ಮಾಡಿದ್ದಾರೆ. ಮುಂದಿನ ವಾ ತೆರೆಗೆ ಬರುತ್ತಿರುವ ತಾಯಿಗೆ ತಕ್ಕ ಮಗ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಹಾಡುಗಳು ಹಿಟ್ ಆಗಿರುವ ರೀತಿ ನೋಡಿದರೆ, ಸಿನಿಮಾ ಹಿಟ್ ಸಾಲಿಗೆ ಸೇರುವ ಸಾಧ್ಯತೆಗಳು ಹೆಚ್ಚಿವೆ. 

    ಇನ್ನು ಅಜಯ್ ರಾವ್‍ಗೆ ಮೊದಲ ಚಿತ್ರದಲ್ಲಿ ತಾಯಿಯಾಗಿದ್ದ ಸುಮಲತಾ, 25ನೇ ಚಿತ್ರದಲ್ಲೂ ತಾಯಿಯಾಗಿದ್ದಾರೆ. ಎಕ್ಸ್‍ಕ್ಯೂಸ್ ಮಿ ಕೊಟ್ಟ ಸ್ಟಾರ್‍ಗಿರಿಯನ್ನು 25ನೇ ಚಿತ್ರವೂ ಕೊಡಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು. ಅಜಯ್ ರಾವ್, ಸುಮಲತಾ, ಆಶಿಕಾ ರಂಗನಾಥ್ ಪ್ರಧಾನ ಪಾತ್ರದಲ್ಲಿರುವ ಸಿನಿಮಾ, ಭಾರಿ ನಿರೀಕ್ಷೆ ಹುಟ್ಟುಹಾಕಿದೆ.