` ajai rao, - chitraloka.com | Kannada Movie News, Reviews | Image

ajai rao,

  • ತಾಯಿಗೆ ತಕ್ಕ ಮಗ ನೋಡಲು 10 ಕಾರಣಗಳು

    10 reasons to watch thayige thakka maga

    ತಾಯಿಗೆ ತಕ್ಕ ಮಗ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಶಶಾಂಕ್ ನಿರ್ದೇಶನದ ಅಜಯ್ ರಾವ್-ಸುಮಲತಾ-ಅಶಿಕಾ ರಂಗನಾಥ್ ಅಭಿನಯದ ಸಿನಿಮಾ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಈ ಸಿನಿಮಾ ನೋಡೋಕೆ ಕೆಲವು ವಿಶೇಷ ಕಾರಣಗಳೂ ಇವೆ.

    1. ತಾಯಿಗೆ ತಕ್ಕ ಮಗ, ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದ ಟೈಟಲ್. ಅಣ್ಣಾವ್ರ ಸಿನಿಮಾ ಟೈಟಲ್ ಎತ್ತಿಕೊಂಡ ತಕ್ಷಣ ನಿರ್ದೇಶಕನ ಮೇಲೊಂದು ತಂತಾನೇ ಒಂದು ಜವಾಬ್ದಾರಿ ಹೆಗಲೇರುತ್ತೆ. ಅದಕ್ಕೆ ಚ್ಯುತಿ ಬಾರದಂತೆ ಚಿತ್ರ ನಿರ್ದೇಶಿಸಿದ್ದಾರೆ ಶಶಾಂಕ್.

    2. ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸಿರುವುದು ಸುಮಲತಾ ಅಂಬರೀಷ್. ಇದುವರೆಗೆ ಇಂತಹದ್ದೊಂದು ರೋಲ್ ಮಾಡಿಲ್ಲ. ರೆಬಲ್‍ಸ್ಟಾರ್ ಅಮ್ಮನಾಗಿ, ಕ್ರಾಂತಿಕಾರಿ ಲಾಯರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ಸುಮಲತಾ.

    3. ಅಜಯ್ ರಾವ್ ಅಭಿನಯದ 25ನೇ ಸಿನಿಮಾ ಇದು ಎನ್ನುವುದು ಒಂದು ವಿಶೇಷ. ಆದರೆ, ಸಿನಿಮಾ ಶುರುವಾಗಿ ಕೆಲವು ದಿನಗಳಾಗುವವರೆಗೆ ಇದು ತಮ್ಮ 25ನೇ ಸಿನಿಮಾ ಎನ್ನುವುದು ಅವರಿಗೇ ಗೊತ್ತಿರಲಿಲ್ಲ.

    4. ನಿರ್ದೇಶಕ ಶಶಾಂಕ್ ಬ್ಯಾನರ್‍ನ ಮೊದಲ ಸಿನಿಮಾ. ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲಾ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಮುಂಗಾರು ಮಳೆ2.. ಹೀಗೆ ಹಿಟ್ ಚಿತ್ರಗಳನ್ನೇ ಹೆಚ್ಚು ನೀಡಿರುವ ಶಶಾಂಕ್ ಈ ಚಿತ್ರದ ನಿರ್ಮಾಪಕರೂ ಹೌದು.

    5. ಅಶಿಕಾ ರಂಗನಾಥ್, ಈ ಚಿತ್ರದಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಚುಟು ಚುಟು ಹಾಡಿನಲ್ಲಿ ಮೈಚಳಿ ಬಿಡಿಸಿದ್ದ ಅಶಿಕಾ, ಈ ಚಿತ್ರದಲ್ಲಿ ಮೈ ಬಿಸಿ ಏರಿಸುವಂತೆ ಕಾಣಿಸಿಕೊಂಡಿದ್ದಾರೆ.

    6. ಚಿತ್ರದಲ್ಲಿ ನಲ್‍ಪಾಡ್ ಗ್ಯಾಂಗ್‍ನ ಪ್ರಸ್ತಾಪವೂ ಇದೆ ಎನ್ನಲಾಗಿದ್ದು, ವಿವಾದಕ್ಕೂ ಕಾರಣವಾಗಿತ್ತು. ಚಿತ್ರದಲ್ಲಿ ಆ ಘಟನೆಯ ನೆರಳು ಇದೆ ಎನ್ನುವ ಸುಳಿವಂತೂ ಕಾಣುತ್ತಿದೆ.

    7. ಅಜಯ್ ರಾವ್‍ಗೆ ಮೊದಲ ಸಿನಿಮಾದ ಅಮ್ಮ ಸುಮಲತಾ ಅಂಬರೀಷ್, 25ನೇ ಸಿನಿಮಾದಲ್ಲೂ ಅಮ್ಮನಾಗಿರುವುದು ವಿಶೇಷ. 

    8. ಅಜಯ್ ರಾವ್‍ಗೆ ಆ್ಯಕ್ಷನ್ ಹೀರೋ ಆಗಬೇಕು ಎನ್ನುವ ಕನಸಿತ್ತು. ಮಾರ್ಷಲ್ ಆಟ್ರ್ಸ್ ಕೂಡಾ ಕಲಿತಿದ್ದ ಅಜಯ್ ರಾವ್‍ಗೆ ಎಕ್ಸ್‍ಕ್ಯೂಸ್ ಮಿ ಚಿತ್ರದ ಸಾಫ್ಟ್ ಹುಡುಗನ ಪಾತ್ರ ಇಮೇಜ್ ಬದಲಿಸಿತ್ತು. ಅವರ ಕನಸು 25ನೇ ಸಿನಿಮಾದಲ್ಲಿ ಈಡೇರಿದೆ.

    9. ಶಶಾಂಕ್ ಮತ್ತು ಅಜಯ್ ರಾವ್ ಅವರದ್ದು ಹ್ಯಾಟ್ರಿಕ್ ಕಾಂಬಿನೇಷನ್. ಈ ಹಿಂದೆ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣಲೀಲಾ ಎರಡರಲ್ಲೂ ಗೆದ್ದಿರುವ ಜೋಡಿ, ಹ್ಯಾಟ್ರಿಕ್ ಜೋಡಿಯಾಗುವ ಕನಸಿನಲ್ಲಿದೆ.

    10. ತಾಯಿಗೆ ತಕ್ಕ ಮಗಕ್ಕೆ ಸಂಗೀತ ನೀಡಿರುವುದು ಜುಡಾ ಸ್ಯಾಂಡಿ. ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್.

  • ತಾಯಿಗೆ ತಕ್ಕ ಮಗ'ದಲ್ಲಿ ನಲ್‍ಪಾಡ್ ಕೇಸ್ ನೆರಳು

    thayige thakka maga is based on true event

    ನಲ್‍ಪಾಡ್ ಗಲಾಟೆ.. ಈ ವರ್ಷ ಚುನಾವಣೆ ಹೊತ್ತಿನಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಸುದ್ದಿ. ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಮಗ ನಲ್‍ಪಾಡ್, ರೆಸ್ಟೋರೆಂಟ್‍ವೊಂದರಲ್ಲಿ ಅಮಾಯಕ ಯುವಕರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಆ ಘಟನೆಯ ನೆರಳು ತಾಯಿಗೆ ತಕ್ಕ ಮಗ ಚಿತ್ರದಲ್ಲಿದೆಯಾ..? ಈ ಕುರಿತು ನಿರ್ದೇಶಕ ಶಶಾಂಕ್ ನೇರ ಉತ್ತರ ಹೇಳೋದಿಲ್ಲ. ಬಹುಶಃ ಸಿನಿಮಾ ಬಿಡುಗಡೆಗೆ ಮೊದಲು ವಿವಾದವಾಗುವುದು ಅವರಿಗೆ ಇಷ್ಟವೂ ಇರಲಿಲ್ಲ. ಈಗ ಚಿತ್ರ ತೆರೆಗೆ ಬಂದಿದೆ.

    ಚಿತ್ರದ ಟ್ರೇಲರ್ ನೋಡಿದವರಿಗೆ ನಲ್‍ಪಾಡ್ ಕೇಸ್‍ನ ನೆರಳು ಚಿತ್ರದಲ್ಲಿದೆಯಾ ಎಂಬ ಪ್ರಶ್ನೆ ಮೂಡದೇ ಇರದು. ರಾಜಕಾರಣಿ ಮತ್ತು ಅವರ ಕುಟುಂಬದವರು ಜನಸಾಮಾನ್ಯರ ಮೇಲೆ ನಡೆಸುವ ದಬ್ಬಾಳಿಕೆ, ಕ್ರೌರ್ಯದ ಹಲವು ನೈಜ ಘಟನೆಗಳು ಈ ಚಿತ್ರಕ್ಕೆ ಪ್ರೇರಣೆ ಎನ್ನುತ್ತಾರೆ ಶಶಾಂಕ್.

    ಜನಸಾಮಾನ್ಯರಲ್ಲಿ ಇಂತಹ ವರ್ತನೆ ಮಾಡುವವರ ವಿರುದ್ಧ ಆಕ್ರೋಶ ಭುಗಿಲೆದ್ದಿರುತ್ತೆ. ಅಂತಹ ಆಕ್ರೋಶದ ರೂಪವೇ ತಾಯಿಗೆ ತಕ್ಕ ಮಗ.

    ರೆಬಲ್‍ಸ್ಟಾರ್ ಪತ್ನಿ ಸುಮಲತಾ ಅಂಬರೀಷ್, ಇಲ್ಲಿ ರೆಬಲ್ ಅಮ್ಮ. ಮಗ ಅಜಯ್ ರಾವ್ ಪಾತ್ರ, ಹಳೆಯ ಸಿನಿಮಾದ ರೆಬಲ್‍ಸ್ಟಾರ್‍ರನ್ನು ನೆನಪಿಸಿದರೆ ಅಚ್ಚರಿ ಪಡಬೇಡಿ. ಅಶಿಕಾ ರಂಗನಾಥ್.. ಚಳಿಗಾಲವನ್ನು ಬೆಚ್ಚಗಾಗಿಸುವಂತೆ ನಟಿಸಿದ್ದಾರೆ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಸಿನಿಮಾ ಈಗ ತೆರೆಯ ಮೇಲಿದೆ.

  • ತಾಯಿಗೆ ತಕ್ಕ ಮಗನಿಗೆ ಎ ಸರ್ಟಿಫಿಕೇಟಾ..?

    thayige thakka maga gets a certificate

    ನಿರ್ದೇಶಕ ಶಶಾಂಕ್, ಕೌಟುಂಬಿಕ ಸದಭಿರುಚಿ ಚಿತ್ರಗಳ ನಿರ್ದೇಶಕರೆಂದೇ ಹೆಸರಾದವರು. ಅಂತಹ ಶಶಾಂಕ್ ಚಿತ್ರ `ತಾಯಿಗೆ ತಕ್ಕ ಮಗ'ನಿಗೆ ಎ ಸರ್ಟಿಫಿಕೇಟ್ ಕೊಡೋಕೆ ಮುಂದಾಗಿದೆ ಸೆನ್ಸಾರ್ ಮಂಡಳಿ. ಚಿತ್ರದಲ್ಲಿ ಆ್ಯಕ್ಷನ್ ಸೀನ್‍ಗಳು ಹೆಚ್ಚಿವೆ ಅನ್ನೋದು ಸೆನ್ಸಾರ್ ಅಧಿಕಾರಿಗಳ ವಾದ.

    ಅವರು ಹೇಳಿದ ಸೀನ್‍ಗಳನ್ನೆಲ್ಲ ಕತ್ತರಿಸಿಬಿಟ್ಟರೆ, ಯು/ಎ ಪ್ರಮಾಣ ಪತ್ರ ಕೊಡ್ತಾರಂತೆ. ಅವರು ಹೇಳಿದಂತೆ ಮಾಡಿದರೆ ಅರ್ಧ ಸಿನಿಮಾ ಕತ್ತರಿಸಬೇಕು. ಸೆನ್ಸಾರ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದಿರುವ ಶಶಾಂಕ್, ಸಿಡಿದೇಳುವ ಸೂಚನೆ ಕೊಟ್ಟಿದ್ದಾರೆ. ಕೌಟುಂಬಿಕ ಕಥಾ ಹಂದರ ಇರುವ ಸಿನಿಮಾಗೆ ಎ ಸರ್ಟಿಫಿಕೇಟ್ ಕೊಟ್ಟರೆ ನಿರ್ಮಾಪಕರ ಗತಿ ಏನು ಅನ್ನೋದು ಶಶಾಂಕ್ ಪ್ರಶ್ನೆ.

    ಸುಮಲತಾ ಅಂಬರೀಷ್ ತಾಯಿಯಾಗಿ, ಅಜೇಯ್ ರಾವ್ ಮಗನಾಗಿ, ಆಶಿಕಾ ರಂಗನಾಥ್ ಸೊಸೆಯಾಗಿ ನಟಿಸಿರುವ ಸಿನಿಮಾ ಇದು. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಭರ್ಜರಿ ಸದ್ದು ಮಾಡುತ್ತಿವೆ.

     

  • ತಾಯಿಗೆ ತಕ್ಕ ಮಗನಿಗೆ ಕಿಚ್ಚನ ಪವರ್

    sudeep gives voice over to thayige thakka maga

    ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನ, ನಿರ್ಮಾಣದ ಸಿನಿಮಾ. ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ನಂತರ ಅಜೇಯ್ ರಾವ್ ಮತ್ತು ಶಶಾಂಕ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ. ಚಿತ್ರದ ಪ್ರಮುಖ ತಾಯಿಯ ಪಾತ್ರದಲ್ಲಿರೋದು ಸುಮಲತಾ. ಮೊದಲೇ ಅಣ್ಣಾವ್ರ ಹಳೆಯ ಸೂಪರ್ ಹಿಟ್ ಚಿತ್ರದ ಟೈಟಲ್. ಹೀಗೆ ಹಲವು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗೆ ಈಗ ಇನ್ನೊಂದು ಪವರ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

    ತಾಯಿಗೆ ತಕ್ಕ ಮಗ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ ಸುದೀಪ್. ಆಶಿಕಾ ರಂಗನಾಥ್ ಚಿತ್ರದ ನಾಯಕಿ. ಆಗಸ್ಟ್ 31ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು, ಅದಕ್ಕೊಂದು ಟೀಸರ್ ಕೂಡಾ ರಿಲೀಸ್ ಮಾಡಿದ್ದಾರೆ ಶಶಾಂಕ್.

  • ತಾಯಿಗೆ ತಕ್ಕ ಮಗನಿಗೆ ಜೋಡಿ ಸಿಕ್ಕಳು..

    thayige thakka maga

    ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಚಿತ್ರ. ಅಜೇಯ್ ರಾವ್, ಸುಮಲತಾ ಅಂಬರೀಷ್ ನಟಿಸುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆಯೇ ದೊಡ್ಡ ಸವಾಲಾಗಿ ಹೋಗಿತ್ತು. 150ಕ್ಕೂ ಹೆಚ್ಚು ಆರ್ಟಿಸ್ಟ್‍ಗಳ ಅಡಿಷನ್ ಮಾಡಿದ್ದ ಶಶಾಂಕ್‍ಗೆ ನಾಯಕಿಯೇ ಸಿಕ್ಕಿರಲಿಲ್ಲ. ಎಲ್ಲೆಲ್ಲೋ ಹುಡುಕಾಡಿದ್ದ ಶಶಾಂಕ್, ಆಶಿಕಾ ರಂಗನಾಥ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

    ಕ್ರೇಜಿಬಾಯ್ ಮೂಲಕ ಬೆಳ್ಳಿತೆರೆಗೆ ಬಂದ ಹುಡುಗಿ, ನಂತರ ಮುಗುಳುನಗೆ, ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ನಟಿಸಿದ್ದರು. ಶರಣ್ ಜೊತೆ ರ್ಯಾಂಬೋ-2 ಚಿತ್ರದಲ್ಲಿ ನಟಿಸುತ್ತಿರುವ ಆಶಿಕಾ ರಂಗನಾಥ್, ಈಗ ತಾಯಿಗೆ ತಕ್ಕ ಮಗನ ಜೋಡಿಯಾಗಿದ್ದಾರೆ.

    ಶಶಾಂಕ್ ಚಿತ್ರಗಳಲ್ಲಿ ನಾಯಕಿಯರೆಂದರೆ ಗ್ಲಾಮರ್ ಗೊಂಬೆಗಳಾಗಿರುವುದಿಲ್ಲ. ಅಭಿನಯಕ್ಕೆ ಅವಕಾಶ ಇದ್ದೇ ಇರುತ್ತೆ. ಆಶಿಕಾ ಅವರಿಂದ ನನ್ನ ಚಿತ್ರದ ಪಾತ್ರಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ನನಗಿದೆ. ಆಶಿಕಾ ಅವರಲ್ಲಿ ಪ್ರತಿಭೆ ಮತ್ತು ಸೌಂದರ್ಯ ಎರಡೂ ಇದೆ ಎಂದಿದ್ದಾರೆ ಶಶಾಂಕ್.

    ಚಿತ್ರದಲ್ಲಿ ಆಶಿಕಾ ರೆಬಲ್ ನಾಯಕನ ಎದುರು ಸೌಮ್ಯ ಸ್ವಭಾವದ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಸುಮಲತಾ ಅವರ ಎದುರು ನಟಿಸುತ್ತಿರುವುದೇ ಥ್ರಿಲ್ ಆಗಿದೆ ಎಂದಿದ್ದಾರೆ ಆಶಿತಾ.  ವೇದ್‍ಗುರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಜೇಯ್ ರಾವ್ ನಾಯಕ. ಅಜೇಯ್ ರಾವ್ ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ.

    Related Articles :-

    ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

    ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

    Thayige Thakka Maga by Shashank - Exclusive

     

     

  • ತಾಯಿಗೆ ತಕ್ಕ ಮಗನಿಗೆ ಮಗಳು ಬಂದಳು..!

    ajai rao blessed with baby girl

    ತಾಯಿಗೆ ತಕ್ಕ ಮಗ. ಸುಮಲತಾ ಅಂಬರೀಷ್, ಅಜೇಯ್ ರಾವ್, ಅಶಿಕಾ ರಂಗನಾಥ್ ಅಭಿನಯದ ಸಿನಿಮಾ. ಶಶಾಂಕ್ ಬ್ಯಾನರ್‍ನ ಮೊದಲ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಂಭ್ರಮದ ನಡುವೆಯೇ ಅಜೇಯ್ ರಾವ್‍ಗೆ ಮತ್ತೊಂದು ಶುಭವಾಗಿದೆ. ಅವರ ಮನೆಗೆ ಹೊಸ ಲಕ್ಷ್ಮಿ ಬಂದಿದ್ದಾರೆ.

    ಚಿತ್ರ ಬಿಡುಗಡೆ ದಿನವೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ ಅಜೇಯ್ ರಾವ್. 2014ರಲ್ಲಿ ಸ್ವಪ್ನ ಅವರೊಂದಿಗೆ ಮದುವೆಯಾಗಿದ್ದರು ಅಜೇಯ್ ರಾವ್. ಈ ಮುದ್ದಾದ ದಂಪತಿಗೀಗ ಮುದ್ದಾದ ಲಕ್ಷ್ಮಿ ಹುಟ್ಟಿದ್ದಾಳೆ.

  • ತಾಯಿಗೆ ತಕ್ಕ ಮಗನಿಗೆ ವಿರಾಮ

    thayige thakka maga gets injury break

    ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ, ಅವರದ್ದೇ ನಿರ್ದೇಶನದ ಸಿನಿಮಾ. ಆರಂಭದಿಂದಲೂ ನಿರ್ದೇಶಕರ ಬದಲಾವಣೆಯಿಂದಾಗಿ ಸುದ್ದಿಯಲ್ಲಿದ್ದ ಚಿತ್ರದ ಚಿತ್ರೀಕರಣಕ್ಕೆ ಈಗ ಅಲ್ಪ ವಿರಾಮ. ಶಶಾಂಕ್ ನಿರ್ದೇಶನ, ನಿರ್ಮಾಣ ಎಂಬ ಕಾರಣಕ್ಕಾಗಿಯೇ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ, ಶೇ.50ರಷ್ಟು ಚಿತ್ರೀಕರಣ ಮುಗಿಸಿದೆ. 

    ಈ ಮಧ್ಯೆ ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ನಾಯಕ ನಟ ಅಜೇಯ್ ರಾವ್, ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್‍ಗೆ ಅಲ್ಪವಿರಾಮ. ಅಜೇಯ್ ರಾವ್‍ಗೆ ವಿಶ್ರಾಂತಿ.

    ಏಪ್ರಿಲ್ 2ನೇ ವಾರದಿಂದ ಮತ್ತೊಮ್ಮೆ ಚಿತ್ರೀಕರಣ ಶುರುವಾಗಲಿದೆ. ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ.

  • ತಾಯಿಯನ್ನು ಪ್ರೀತಿಸುವ ಮಕ್ಕಳಿಗಾಗಿ ಇನ್ನೊಂದು ಹಾಡು

    mother son love song

    ಅಮ್ಮ ನಿನ್ನ ಮಗನೆಂಬ ಹೆಮ್ಮೆ ಬೇಕು ನನಗೆ.. ಪ್ರತೀ ಜನ್ಮಕೂ.. ಇದು ತಾಯಿಗೆ ತಕ್ಕ ಮಗ ಚಿತ್ರದ ಇನ್ನೊಂದು ಹಾಡು. ಶಶಾಂಕ್ ನಿರ್ದೇಶನದ ಈ ಸಿನಿಮಾದಲ್ಲಿ ಅಜಯ್ ರಾವ್ ಮತ್ತು ಸುಮಲತಾ ನಡುವಿನ ಹಾಡಿದು. ಬರೆದಿರುವುದು ನಿರ್ದೇಶಕ ಶಶಾಂಕ್. 

    ತಾಯಿಯ ಬಗ್ಗೆ ನಾನು ಬರೆದಿರುವ ಮೊದಲ ಹಾಡಿದು. ಇದು ನನ್ನ ಇಬ್ಬರು ತಾಯಿಯರಿಗೆ ಅರ್ಪಣೆ ಎಂದಿದ್ದಾರೆ ಶಶಾಂಕ್. ಅವರಿಗೆ ಇಬ್ಬರು ತಾಯಿಯರು. ಒಬ್ಬರು ಹೆತ್ತತಾಯಿ. ಇನ್ನೊಬ್ಬರು ಸಾಕಿದ ತಾಯಿ. ಚಿಕ್ಕಮ್ಮ. ಆ ಇಬ್ಬರಿಗೂ ಈ ಹಾಡು ಅರ್ಪಿಸಿದ್ದಾರೆ.

    ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಅಜಯ್‍ರಾವ್, ಅಶಿಕಾ ರಂಗನಾಥ್ ನಾಯಕ, ನಾಯಕಿ. ಸುಮಲತಾ ಅಂಬರೀಷ್ ಚಿತ್ರದ ಕೇಂದ್ರ ಬಿಂದು. ಜುಡಾ ಸ್ಯಾಂಡಿ ಸಂಗೀತ ನಿರ್ದೇಶನದ ಈ ಹಾಡಿಗೆ ದನಿಯಾಗಿರುವುದು ನಾರಾಯಣ ಶರ್ಮ ಎಂಬ ಹೊಸ ಪ್ರತಿಭೆ. ಹೈ ಪಿಚ್‍ನಲ್ಲಿರುವ ಹಾಡು,  ಎಲ್ಲರಿಗೂ ಇಷ್ಟವಾಗುವುದು ಖಂಡಿತಾ.

  • ನಿರೀಕ್ಷಣಾ ಜಾಮೀನು ಪಡೆದಿದ್ದೇಕೆ? ಅಜಯ್ ರಾವ್ ಕೊಟ್ಟರು ಕಾರಣ

    ನಿರೀಕ್ಷಣಾ ಜಾಮೀನು ಪಡೆದಿದ್ದೇಕೆ? ಅಜಯ್ ರಾವ್ ಕೊಟ್ಟರು ಕಾರಣ

    ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತ, ಚಿತ್ರತಂಡದ ಹಲವರನ್ನು ಜೈಲುಪಾಲಾಗಿಸಿದೆ. ಅವರೆಲ್ಲರಿಗೂ ಈಗ ಜಾಮೀನು ಸಿಕ್ಕು ಬಿಡುಗಡೆಯೂ ಆಗಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಆಪರೇಟರ್ ಮಹದೇವಯ್ಯ, ಮ್ಯಾನೇಜರ್ ಫರ್ನಾಂಡಿಸ್ ಹಾಗೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ನಿರ್ಮಾಪಕ ಗುರು ದೇಶಪಾಂಡೆ ಅವರಿಗೂ ಜಾಮೀನು ಸಿಕ್ಕಿದೆ. ಇದರ ನಡುವೆ ನಟ ಅಜೇಯ್ ರಾವ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

    ದುರಂತ ನಡೆದಾಗ, ಫೈಟರ್ ವಿವೇಕ್ ಮೃತಪಟ್ಟ ಸಂದರ್ಭದಲ್ಲಿ ಅಜೇಯ್ ರಾವ್ ಸ್ಥಳದಲ್ಲಿದ್ದರು. ಹೀಗಾಗಿ ಅವರನ್ನೂ ಅರೆಸ್ಟ್ ಮಾಡಬಹುದು ಎಂಬ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ ಅಜೇಯ್ ರಾವ್.

    ಅರೆಸ್ಟ್ ಆಗುವ ಭಯವೇನಿಲ್ಲ. ಕೆಲವರು ಪ್ರಚಾರಕ್ಕಾಗಿ ಅಜೇಯ್ ರಾವ್ ಅವರನ್ನು ಬಂಧಿಸಿ. ರಚಿತಾ ರಾಮ್ ಅವರನ್ನೂ ಅರೆಸ್ಟ್ ಮಾಡಿ ಎಂದೆಲ್ಲ ಪತ್ರ ಬರೆದಿದ್ದಾರೆ. ಅದರಲ್ಲಿ ಯಾವುದೇ ಲಾಜಿಕ್ ಇಲ್ಲದಿದ್ದರೂ ನಮ್ಮ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರು, ನಿರ್ದೇಶಕರು ಟೆನ್ಷನ್ ಆಗುತ್ತಾರೆ. ಅವರಲ್ಲಿರೋ ಆತಂಕ ದೂರ ಮಾಡೋದು ನನ್ನ ಜವಾಬ್ದಾರಿ. ಹೀಗಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದೆ ಎಂದಿದ್ದಾರೆ ಅಜೇಯ್ ರಾವ್.

  • ನೈಟಿ ಮಾತ್ರ ಹಾಕ್ಕೊಬೇಡ ಮೇನಕಾ..

    krishna talkies item song special

    ಕೃಷ್ಣ ಟಾಕೀಸ್, ಅಜೇಯ್ ರಾವ್ ಅಭಿನಯದ ಹೊಸ ಸಿನಿಮಾ. ಈ ಸಿನಿಮಾಗಾಗಿ ನೈಟಿ ಮಾತ್ರ ಹಾಕ್ಕೊಬೇಡ ಮೇನಕಾ ಅನ್ನೋ ಐಟಂ ಸಾಂಗ್ ಚಿತ್ರೀಕರಣಗೊಂಡಿದೆ. ಅಜೇಯ್ ರಾವ್, ಲಾಸ್ಯ ನಾಗರಾಜ್, ಚಿಕ್ಕಣ್ಣ ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅದೂ 3 ದಿನ.

    ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್ಟಿನಲ್ಲಿ ಶೂಟಿಂಗ್ ಆಗಿದೆ. ಅಭಿಷೇಕ್ ಮತ್ತು ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ರಚಿಸಿದ್ದರೆ, ಶ್ರೀಧರ್ ಸಂಭ್ರಮ್ ಮ್ಯೂಸಿಕ್ ಇದೆ. ವಿಜಯಾನಂದ್ ನಿರ್ದೇಶನದ ಚಿತ್ರಕ್ಕೆ ಎ.ಎಚ್.ಗೋವಿಂದ ರಾಜು ನಿರ್ಮಾಪಕ

  • ಬಡವ ರಾಸ್ಕಲ್ ರೀತಿ ನಾವೂ ಮಾಡೋಣ : ಅಜಯ್ ರಾವ್`ಗೆ ನಿರ್ಮಾಪಕರ ಕರೆ  

    ಬಡವ ರಾಸ್ಕಲ್ ರೀತಿ ನಾವೂ ಮಾಡೋಣ : ಅಜಯ್ ರಾವ್`ಗೆ ನಿರ್ಮಾಪಕರ ಕರೆ  

    ಲವ್ ಯೂ ರಚ್ಚು ಇದೇ ಡಿ.31ಕ್ಕೆ ರಿಲೀಸ್. ಆದರೆ ಹೀರೋ ಅಜಯ್ ರಾವ್ ಟೀಂ ಜೊತೆ ಇಲ್ಲ. ಇದು ನಿರ್ಮಾಪಕರು ಮತ್ತು ಹೀರೋ ಮಧ್ಯೆ ಗಲಾಟೆಯನ್ನೇ ಸೃಷ್ಟಿಸಿದೆ.

    ಅಜಯ್ ರಾವ್ : ನನಗೂ ಮಾನ ಮರ್ಯಾದೆ ಇದೆ. ಅದನ್ನು ಬಿಟ್ಟು ಆ ತಂಡದ ಜೊತೆ ಬಂದು ಸಿನಿಮಾ ಪ್ರಚಾರ ಮಾಡೋಕೆ ಆಗಲ್ಲ. ಅವರು ನಿರ್ದೇಶಕರಾಗಿ ಶಂಕರ್ ರಾಜ್ ಅವರನ್ನು ಘೋಷಿಸಿದ್ದಾರೆ. ಅದು ಅವರಿಗೆ ಬಿಟ್ಟಿದ್ದು. ನಾನು ಶಂಕರ್`ಗೆ ನಿರ್ದೇಶನ ಗೊತ್ತಿಲ್ಲ ಎಂದು ಹೇಳಲ್ಲ. ಆದರೆ, ಚಿತ್ರವನ್ನು ನಾನು ವೈಯಕ್ತಿಕವಾಗಿ ಪ್ರಚಾರ ಮಾಡ್ತೇನೆ. ಆ ನಿರ್ಮಾಪಕರು ಮತ್ತು ಚಿತ್ರತಂಡದ ಜೊತೆಗೆ ಅಲ್ಲ.

    ಗುರು ದೇಶಪಾಂಡೆ : ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರತಂಡ ಪ್ರಚಾರ ಮಾಡ್ತಿರೋದು ನೋಡಿ ಖುಷಿಯಾಗ್ತಿದೆ. ನಾವೂ ಆ ರೀತಿ ಮಾಡೋಣ. ಕ್ಷಮೆ ಕೇಳೋಕೆ ನಾನು ರೆಡಿ.

    ರಚಿತಾ ರಾಮ್ : ಅಜಯ್ ರಾವ್ ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಅವರಿಗೂ ಉತ್ತರ ಕೊಡೋಕೆ ಇಷ್ಟ ಎಲ್ಲ ಎನ್ನುತ್ತಿದ್ದಾರೆ. ಪ್ರಚಾರವನ್ನೂ ಮಾಡುತ್ತಿದ್ದಾರೆ. ಅವರಿಗೆ ಇಷ್ಟ ಇಲ್ಲ ಅಂದ್ರೆ ಬಿಡಿ. ನಾವೇ ಸೈಲೆಂಟ್ ಆಗೋಣ. ನಿರ್ಮಾಪಕರ ಜೊತೆ ನಾನಂತೂ ಇದ್ದೇನೆ.

    ಇಲ್ಲಿ ಅಜಯ್ ರಾವ್ ನಿರ್ಮಾಪಕರ ಜೊತೆ ಯಾವ ವಿಷಯಕ್ಕೆ ಮನಸ್ತಾಪ ಎನ್ನುವುದನ್ನು ಹೇಳಲ್ಲ. ಮಾನ ಮರ್ಯಾದೆ ಮೊದಲಾದ ಎಲ್ಲ ಪದಗಳನ್ನೂ ಬಳಸ್ತಾರೆ. ಚಿತ್ರದ ನಿರ್ದೇಶನ ಮಾಡಿದ್ದು ನಾನೇ ಎಂದು ಇನ್‍ಡೈರೆಕ್ಟ್ ಆಗಿ ಹೇಳ್ತಾರೆ. ಹೌದು.. ನಾನೇ ಮಾಡಿದ್ದು ಎಂದೂ ಹೇಳಲ್ಲ. ನಿರ್ದೇಶಕರಿಗೆ ಫುಲ್ ಕ್ರೆಡಿಟ್ಟನ್ನೂ ಕೊಡಲ್ಲ. ಗೊಂದಲ ಹಾಗೆಯೇ ಉಳಿಯುತ್ತೆ.

    ಅತ್ತ ಗುರು ದೇಶಪಾಂಡೆ ಕೂಡಾ ಮನಸ್ತಾಪದ ಹಿಂದಿನ ಕಥೆ ಹೇಳಲ್ಲ. ರಚಿತಾ ರಾಮ್ ಅತ್ತ ನಿರ್ಮಾಪಕರನ್ನೂ ಬಿಟ್ಟು ಕೊಡದೆ, ಇತ್ತ ನಾಯಕ ಅಜಯ್ ರಾವ್ ಅವರನ್ನೂ ಬಿಡೋಕೆ ಆಗದೆ ಇರೋ ಸ್ಥಿತಿ ರಚಿತಾ ರಾಮ್ ಅವರದ್ದು. ಇದೆಲ್ಲದರ ಮಧ್ಯೆಯೂ ಲವ್ ಯೂ ರಚ್ಚುಗೆ ಒಳ್ಳೆಯ ಓಪನಿಂಗ್ ಸಿಗೋ ಸೂಚನೆ ಇದೆ.

  • ಬೋಲ್ಡ್ ಆಗಿದ್ದರ ಬಗ್ಗೆ ರಚ್ಚು ಕೊಟ್ಟ ಬೋಲ್ಡ್ ಉತ್ತರ

    ಬೋಲ್ಡ್ ಆಗಿದ್ದರ ಬಗ್ಗೆ ರಚ್ಚು ಕೊಟ್ಟ ಬೋಲ್ಡ್ ಉತ್ತರ

    ಹೋಮ್ಲಿ ಹುಡುಗಿಯಾಗಿಯೇ ಗುರುತಿಸಿಕೊಂಡಿದ್ದ ರಚಿತಾ ರಾಮ್ ಮೊದಲ ಬಾರಿಗೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಐ ಲವ್ ಯೂ ಚಿತ್ರದಲ್ಲಿ. ಉಪೇಂದ್ರ ಜೊತೆ ಬೆಡ್‍ರೂಂ ಸೀನ್‍ನಲ್ಲಿ ರಸಿಕರ ಹೃದಯ ಬೆಚ್ಚಗಾಗಿಸಿದ್ದ ರಚಿತಾ, ನಂತರ ಕಣ್ಣೀರಿಟ್ಟಿದ್ದರು. ಇನ್ನು ಮುಂದೆ ಅಂತಾ ಸೀನ್‍ಗಳಲ್ಲಿ ಮಾಡಲ್ಲ ಎಂದಿದ್ದ ರಚ್ಚು ಈಗ ಬ್ಯಾಕ್ ಟು ಬ್ಯಾಕ್ 2 ಚಿತ್ರಗಳಲ್ಲಿ ಬೋಲ್ಡ್ ಆಗಿದ್ದಾರೆ. ಲವ್ ಯೂ ರಚ್ಚು ಚಿತ್ರದಲ್ಲಿ ಅಜಯ್ ರಾವ್ ಜೊತೆ ಬೆಡ್‍ರೂಂ ದೃಶ್ಯಗಳಿವೆ. ಅದರ ಬೆನ್ನಲ್ಲೇ ಏಕ್ ಲವ್ ಯಾ ಚಿತ್ರದಲ್ಲಿ ಹೊಸ ಹೀರೋ ರಾಣಾ ಜೊತೆ ಲಿಪ್ ಲಾಕ್ ಸೀನ್ ಇದೆ.

    ನಾನು ಆ ರೀತಿ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥವಿರುತ್ತೆ. ಸುಮ್ ಸುಮ್ನೆ ಮಾಡಲ್ಲ. ಬೋಲ್ಡ್ ದೃಶ್ಯಗಳಲ್ಲಿ ಮಾಡಿದ್ದೇನೆ ನಿಜ. ಆ ರೀತಿ ಯಾಕೆ ಮಾಡಿದ್ದೇನೆ ಅನ್ನೋದು ಸಿನಿಮಾ ನೋಡಿದ ಮೇಲೆ ನಿಮಗೇ ಗೊತ್ತಾಗುತ್ತೆ ಎಂದಿದ್ದಾರೆ ರಚಿತಾ ರಾಮ್. ದೃಶ್ಯಗಳಲ್ಲಿ ನಾನು ಸಿಗರೇಟು ದೃಶ್ಯ ನೋಡಿದಾಗ ಪರವಾಗಿಲ್ಲ, ನ್ಯಾಚುರಲ್ಲಾಗಿಯೇ ಮಾಡಿದ್ದೇನೆ ಎಂದುಕೊಂಡರಂತೆ ರಚಿತಾ ರಾಮ್.

    ಫ್ರಸ್ಟ್ರೇಷನ್, ಸೇಡು ಇರುವ ವ್ಯಕ್ತಿಯ ಪಾತ್ರ ರಚಿತಾ ಅವರದ್ದು ಎಂದು ಸಣ್ಣದೊಂದು ಕ್ಲೂ ಕೊಟ್ಟಿರುವ ಜೋಗಿ ಪ್ರೇಮ್ ಮಿಕ್ಕಿದ್ದನ್ನೆಲ್ಲ ಜನವರಿಯಲ್ಲಿ ಸಿನಿಮಾ ರಿಲೀಸ್ ಆದಮೇಲೆ ಹೇಳಲಿದ್ದಾರೆ.

  • ಮಗ ಫೈರ್.. ಅಮ್ಮ ಫೈರ್‍ಬ್ರಾಂಡ್

    sumalatha is a fire brand mother in thayige thakka maga

    ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸುಮಲತಾ ಮತ್ತೊಮ್ಮೆ ಅಜಯ್ ರಾವ್‍ಗೆ ಅಮ್ಮನಾಗಿದ್ದಾರೆ. ಸುಮಲತಾ ತಾಯಿಗೆ ತಕ್ಕ ಮಗ ಚಿತ್ರದ ಅಮ್ಮನ ಪಾತ್ರ ಒಪ್ಪಿಕೊಳ್ಳೋಕೆ ಕಾರಣಗಳಿವೆ. ಚಿತ್ರದಲ್ಲಿ ಅವರದ್ದು ಮಾಮೂಲಿಯಾಗಿ ಕಣ್ಣೀರಿಡುವ, ಕಷ್ಟಪಡುವ ತಾಯಿಯ ಪಾತ್ರ ಅಲ್ಲ. ಮಗನನ್ನು ಬೆಂಕಿಯಾಗಿ ಬೆಳೆಸುವ ರೆಬಲ್ ಅಮ್ಮನ ಪಾತ್ರ.

    `ನ್ಯಾಯಕ್ಕಾಗಿ ಹೋರಾಡುವ ಮಗನಿಗೆ ಫೈಟ್ ಮಾಡು ಎನ್ನುವ, ಮಗನ ಕೋಪವನ್ನೂ ಸಮರ್ಥಿಸಿಕೊಳ್ಳುವ ಸ್ಟ್ರಾಂಗ್ ಅಮ್ಮನ ಪಾತ್ರ ನನ್ನದು. ಚಿತ್ರದ ಟೈಟಲ್ ರೋಲ್. ಈ ಕಾರಣಕ್ಕೇ ಒಪ್ಪಿಕೊಂಡೆ' ಅನ್ನೋದು ಸುಮಲತಾ ಮಾತು.

    `ಚಿತ್ರ ಶುರು ಮಾಡಿದಾಗ ನನಗೆ ಸುಮಲತಾ ಅವರನ್ನು ಬಿಟ್ಟು ಬೇರೊಬ್ಬರು ಕಲ್ಪನೆಗೂ ಬರಲಿಲ್ಲ. ಡೈನಮಿಕ್ ತಾಯಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿಯೊಬ್ಬ ಮಗನೂ ನನಗೂ ಇಂಥ ಅಮ್ಮ ಇರಬೇಕು ಎನಿಸಬೇಕು. ಹಾಗಿದ್ದಾರೆ ಸುಮಲತಾ' ಇದು ನಿರ್ದೇಶಕ ಶಶಾಂಕ್ ಸುಮಲತಾಗೆ ಕೊಟ್ಟಿರುವ ಮಾತಿನ ಕಾಣಿಕೆ. 

    ಅಜಯ್ ರಾವ್, ಅಶಿಕಾ ರಂಗನಾಥ್ ಅಭಿನಯದ ಸಿನಿಮಾ ನವೆಂಬರ್ 16ಕ್ಕೆ ತೆರೆಗೆ ಬರುತ್ತಿದೆ.

  • ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

    ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

    ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಹಾಗಂತ, ಆ ಚಿತ್ರಕ್ಕೆ ಶಶಾಂಕ್ ಡೈರೆಕ್ಟರ್ ಅಲ್ಲ. ಕಥೆಗಾರ. ಅಜೇಯ್ ರಾವ್ ಹೀರೋ. ನಿರ್ದೇಶಕರಾಗಿರೋದು ಶಂಕರ್ ಅನ್ನೋ ಹುಡುಗ. ಆತ ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಶಿಷ್ಯ.

    ತಮ್ಮಲ್ಲಿ ಸಹಾಯಕರಾಗಿದ್ದ ಹುಡುಗರನ್ನು ಲಾಂಚ್ ಮಾಡುವ ಕ್ಯಾಂಪೇನ್‍ನ್ನೇ ಮಾಡುತ್ತಿರುವಂತಿದೆ ಗುರು ದೇಶಪಾಂಡೆ. ಈ ಬಾರಿ ಶಂಕರ್ ಅವರಿಗೆ ಡೈರೆಕ್ಟರ್ ಸೀಟ್ ಕೊಟ್ಟಿದ್ದಾರೆ. ಜನವರಿ 24ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸ್ಟಾರ್ ಹೀರೋಯಿನ್ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆಯಂತೆ.

  • ಮತ್ತೆ ಯುದ್ಧಕಾಂಡ : ಅಜಯ್ ರಾವ್ ಹೀರೋ

    ಮತ್ತೆ ಯುದ್ಧಕಾಂಡ : ಅಜಯ್ ರಾವ್ ಹೀರೋ

    ಸೋಲೇ ಇಲ್ಲ.. ನಿನ್ನ ಹಾಡು ಹಾಡುವಾಗ.. 1889ರ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ರವಿಚಂದ್ರನ್ ಅಭಿನಯದ ಯುದ್ಧಕಾಂಡ ಕೆ.ವಿ.ರಾಜು ಅವರ ಚಿತ್ರ. ಈಗ ಮತ್ತೊಮ್ಮೆ ಯುದ್ಧಕಾಂಡ ಬರುತ್ತಿದೆ. ಒನ್ಸ್ ಎಗೇಯ್ನ್ ಈ ಚಿತ್ರದಲ್ಲಿಯೂ ಹೀರೋ ಲಾಯರ್. ಹೀರೋ ರವಿಚಂದ್ರನ್ ಅಲ್ಲ, ಅಜಯ್ ರಾವ್.

    ಇದು ಕೋರ್ಟ್ ರೂಂ ಡ್ರಾಮಾ. ಅಜಯ್ ರಾವ್ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂಟರ್‍ಟೈನರ್ ಸಿನಿಮಾ. ಯುದ್ಧಕಾಂಡ ಅನ್ನೋ ಟೈಟಲ್ ಕಥೆಗೆ ಸೂಕ್ತವಾಗಿದೆ. ಸಿನಿಮಾ ನೋಡಿದವರಿಗೆ ಯಾಕೆ ಈ ಚಿತ್ರಕ್ಕೆ ಯುದ್ಧಕಾಂಡ ಅನ್ನೋ ಟೈಟಲ್ ಇಟ್ಟೆವು ಅನ್ನೋದು ಅರ್ಥವಾಗುತ್ತೆ. ಆದರೆ 1989ರ ಯುದ್ಧಕಾಂಡ ಚಿತ್ರಕ್ಕೂ, ಈ ಯುದ್ಧಕಾಂಡಕ್ಕೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ ನಿರ್ದೇಶಕ ಪವನ್ ಭಟ್.

    ಪವನ್ ಭಟ್ ಅವರಿಗೆ ಇದು 2ನೇ ಸಿನಿಮಾ. ಈ ಹಿಂದೆ ಕಟ್ಟಿಂಗ್ ಶಾಪ್ ಅನ್ನೋ ಸಿನಿಮಾ ಮಾಡಿದ್ದರು. ಚಿತ್ರದಲ್ಲಿ ಲಾಯರ್ ಪಾತ್ರಧಾರಿ ಒಂದು ಇಷ್ಯೂಗೆ ಸಂಬಂಧಪಟ್ಟಂತೆ ವಾದ ಮಾಡುತ್ತಾನೆ. ಆ ಇಷ್ಯೂ ಯಾವುದು ಅನ್ನೋದನ್ನು ಸದ್ಯಕ್ಕೆ ಹೇಳೋ ಹಾಗಿಲ್ಲ ಎಂದಿದ್ದಾರೆ ಪವನ್ ಭಟ್. ಅಜಯ್ ರಾವ್ ಸದ್ಯಕ್ಕೆ ಮಂಜು ಸ್ವರಾಜ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಆ ಚಿತ್ರ ಮುಗಿದ ನಂತರ ಈ ಚಿತ್ರ ಸೆಟ್ಟೇರಲಿದೆ.

  • ಮತ್ತೊಮ್ಮೆ ಜಾಕಿ.. ಅಜೇಯ್ ರಾವ್ ಜೊತೆ ಸಂಜನಾ ಕೆಮಿಸ್ಟ್ರಿ

    ajai rao's next is jocky

    ಜಾಕಿ.. ಈ ಹೆಸರಿನಲ್ಲಿ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. ಮೊದಲನೆಯದ್ದು, ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಜಾಕಿ. ಎರಡನೆಯದ್ದು, ಪವರ್ ಸ್ಟಾರ್ ಪುನೀತ್ ಅಭಿನಯದ ಜಾಕಿ. ಈಗ ಮತ್ತೊಮ್ಮೆ ಜಾಕಿ ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರಕ್ಕೆ ಹೀರೋ ಅಜೇಯ್ ರಾವ್.

    ಅಜೇಯ್ ರಾವ್ ಹೀರೋ ಆಗಿರುವ ಸಿನಿಮಾಗೆ ಬಿ.ತಿಮ್ಮೇಗೌಡ ನಿರ್ದೇಶಕ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ಆನಂದ್, ಹೀರೋಯಿನ್. ಸಂಭ್ರಮ ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಇದೇ ತಿಂಗಳ ಕೊನೆಗೆ ಸೆಟ್ಟೇರುತ್ತಿರುವ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿ ಪಾತ್ರ ಎಂದು ಹೇಳಿಕೊಂಡಿದ್ದಾರೆ ಸಂಜನಾ ಆನಂದ್.

  • ಮಳೆಯಲ್ಲಿ ತಪ್ಪಿಸಿಕೊಂಡರೂ.. ತಾಯಿಗೆ ತಕ್ಕ ಸೊಸೆಯಾದ ಅಶಿಕಾ

    ashika ranganath looks glamorous

    ಏನ್ರೀ ಇದು..  ಯಾರಾದ್ರೂ ತಾಯಿಗೆ ಸೊಸೆಯಾಗೋಕೆ ಸಾಧ್ಯನಾ..? ಎಂದು ಪ್ರಶ್ನಿಸಬೇಡಿ. ಇದು ತಾಯಿಗೆ ತಕ್ಕ ಮಗ ಚಿತ್ರದ ನಾಯಕಿ ಅಶಿಕಾ ರಂಗನಾಥ್ ಸ್ಟೋರಿ. ಅಶಿಕಾ ರಂಗನಾಥ್ ಈಗ ಚುಟು ಚುಟು ಹುಡುಗಿ, ಮುಗುಳುನಗೆ ಚೆಲುವೆ ಎಂದೆಲ್ಲ ಫೇಮಸ್ ಎನ್ನುವುದು ನಿಜ. ಆದರೆ ಈ ಹುಡುಗಿ ಮೊದಲು ಬಣ್ಣ ಹಚ್ಚಬೇಕಿದ್ದುದು ಇದೇ ಶಶಾಂಕ್ ಅವರ ಮುಂಗಾರು ಮಳೆ-2 ನಲ್ಲಿ. ಆಗ ಮಿಸ್ಸಾದ ಚಾನ್ಸ್ ಈಗ ಸಿಕ್ಕಿದೆ. 

    ತಾಯಿಗೆ ತಕ್ಕ ಮಗ ಚಿತ್ರದ ನಾಯಕಿ ಅಶಿಕಾ. ಅಜಯ್ ರಾವ್ ಮತ್ತು ಸುಮಲತಾ ಅನ್ಯಾಯದ ವಿರುದ್ಧ ಸಿಡಿದೇಳುವವರು. ಅದಕ್ಕೆ ತದ್ವಿರುದ್ಧ ಅಶಿಕಾ. ತಾನಾಯ್ತು.. ತನ್ನ ಕೆಲಸವಾಯ್ತು.. ನಮಗ್ಯಾಕೆ ಬೇಕು ಊರವರ ಉಸಾಬರಿ ಎಂದುಕೊಂಡು ಇರುವ ಹುಡುಗಿ. ವೀಣಾವಾದಕಿ. ಹೀಗೆ.. ತದ್ವಿರುದ್ಧ ಪಾತ್ರಗಳ ಕಥೆ ಹೇಳುತ್ತಿರುವ ಶಶಾಂಕ್, ಹಾಡೊಂದರಲ್ಲಿ ಅಜಯ್ ರಾವ್ ಮತ್ತು ಅಶಿಕಾರನ್ನು ಗ್ಲಾಮರಸ್ ಆಗಿ ತೋರಿಸಿದ್ದಾರೆ.

    ಇದೊಂದು ಮೆಚ್ಯೂರ್ಡ್ ಲವ್ ಸ್ಟೋರಿ. ನನ್ನ ಪಾತ್ರಕ್ಕೆ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ. ಅದೇ ನನಗೆ ಖುಷಿ. ಅಪ್ಪನ ಮಾತನ್ನು ಮೀರದ ಸಂಪ್ರದಾಯಸ್ಥ ಹುಡುಗಿಯ ಪಾತ್ರ ನನ್ನದು ಎಂದು ಹೇಳಿಕೊಂಡಿದ್ದಾರೆ ಅಶಿಕಾ ರಂಗನಾಥ್.

  • ರಚ್ಚು ಮತ್ತೊಮ್ಮೆ ಬೋಲ್ಡ್.. ನೋಡಿದವರೆಲ್ಲ ಕ್ಲೀನ್ ಬೌಲ್ಡ್..!

    ರಚ್ಚು ಮತ್ತೊಮ್ಮೆ ಬೋಲ್ಡ್.. ನೋಡಿದವರೆಲ್ಲ ಕ್ಲೀನ್ ಬೌಲ್ಡ್..!

    ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಒಂದಿಷ್ಟು ವಿವಾದ.. ಮತ್ತೊಂದಿಷ್ಟು ಕಣ್ಣೀರು.. ಕ್ಷಮೆ.. ಇತ್ಯಾದಿ ಇತ್ಯಾದಿಗಳಾಗಿದ್ದವು. ಇನ್ನು ಮುಂದೆ ನಾನು ಬೋಲ್ಡ್ ಅವತಾರದಲ್ಲಿ ಕಾಣಿಸೋದಿಲ್ಲ ಎಂದಿದ್ದ ರಚಿತಾ, ಈಗ ಲವ್ ಯೂ ರಚ್ಚು ಚಿತ್ರದಲ್ಲಿ ಬೋಲ್ಡ್ ಆಗಿದ್ದಾರೆ. ನೋಡುವವರನ್ನೂ ಬೌಲ್ಡ್ ಮಾಡಿದ್ದಾರೆ. ಇದು ಲವ್ ಯೂ ರಚ್ಚು ಚಿತ್ರದ ಹಾಡಿನ ಝಲಕ್.

    ಮುದ್ದು ನೀನು.. ಅನ್ನೋ ಹಾಡು ಹೊರಬಂದಿದೆ. ಅಜೇಯ್ ರಾವ್ ಮತ್ತು ರಚಿತಾ ರಾಮ್ ನಟಿಸಿರೋ ಚಿತ್ರವಿದು. ಗುರು ದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಶಂಕರ್ ರಾಜ್ ನಿರ್ದೇಶಕ. ಈ ಮುದ್ದು ನೀನು ಹಾಡಿನಲ್ಲೇ ರಚಿತಾ ರಾಮ್ ಮುದ್ದು ಮುದ್ದಾಗಿ.. ಬೋಲ್ಡ್ ಆಗಿ ಕಾಣಿಸಿರೋದು. ಲವ್ ಮೇಕಿಂಗ್ ದೃಶ್ಯಗಳಿರೋ ಹಾಡಿನಲ್ಲಿ ರಚಿತಾ ರಾಮ್ ಕಿಕ್ಕೇರಿಸುತ್ತಿದ್ದಾರೆ. ಅಫ್‍ಕೋರ್ಸ್.. ಐ ಲವ್ ಯೂ ನಂತರ ರಚಿತಾ ರಾಮ್, ಏಕ್ ಲವ್ ಯಾದಲ್ಲಿ ಲಿಪ್ ಲಾಕ್ ಕೂಡಾ ಮಾಡಿದ್ದಾರೆ. ನಟನೆ ಅಂದ ಮೇಲೆ ಎಲ್ಲವನ್ನೂ ಮಾಡಬೇಕು. ತಪ್ಪೇನೂ ಇಲ್ಲ. ಮತ್ತೊಮ್ಮೆ ವಿವಾದವಾಗಬಾರದಷ್ಟೆ..

  • ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?

    ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?

    ಲವ್ ಯೂ ರಚ್ಚು, ಈ ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ. ಟ್ರೇಲರ್ ಮತ್ತು ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿರೋದ್ರಿಂದ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗೋ ಎಲ್ಲ ನಿರೀಕ್ಷೆಗಳೂ ಇವೆ. ಇದರ ನಡುವೆ ಚಿತ್ರದ ನಿರ್ಮಾಪಕರು ಮತ್ತು ಹೀರೋ ನಡುವೆ ಗುದ್ದಾಟ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಧ್ರುವ ಸರ್ಜಾ ರಿಲೀಸ್ ಮಾಡಿದ್ದರು. ಆದರೆ, ಕಾರ್ಯಕ್ರಮಕ್ಕೆ ಹೀರೋ ಅಜಯ್ ರಾವ್ ಅವರೇ ಇರಲಿಲ್ಲ. ಚಿತ್ರತಂಡದ ಸ್ಪಷ್ಟನೆಗಳು ಗೊಂದಲ ಹುಟ್ಟಿಸಿದ್ದವು.

    ನನಗೆ ಚಿತ್ರದ ನಿರ್ಮಾಪಕರಿಂದ ಅವಮಾನವಾಗಿದೆ. ನನಗೂ ಆತ್ಮಗೌರವ ಇದೆ. ಹೀಗಾಗಿ ಚಿತ್ರತಂಡದವರ ಜೊತೆ, ನಿರ್ಮಾಪಕರ ಜೊತೆ ನಾನು ಪ್ರಚಾರ ಮಾಡಲ್ಲ. ವೈಯಕ್ತಿಕವಾಗಿ ಚಿತ್ರದ ಬಗ್ಗೆ ಪ್ರಚಾರ ಮಾಡ್ತೇನೆ. ಅವಮಾನವಾಗಿರೋ ಜಾಗಕ್ಕೆ ಮತ್ತೆ ನಾನು ಹೋಗಲ್ಲ ಎಂದಿರುವ ಅಜಯ್ ರಾವ್, ಯಾವ ಕಾರಣಕ್ಕೆ ಇದೆಲ್ಲ ಶುರುವಾಯ್ತು ಅನ್ನೋದನ್ನ ಬಹಿರಂಗಪಡಿಸುವುದಿಲ್ಲವಂತೆ. ಅದರ ಬಗ್ಗೆ ಮುಂದೆ ಕೂಡಾ ಮಾತನಾಡಲ್ಲ ಎಂದಿದ್ದಾರೆ ಹೀರೋ.

    ವೈಮನಸ್ಯ, ಮನಸ್ತಾಪ ಇರುತ್ತೆ. ಆದರೆ ಅವಮಾನ ಮಾಡಿಲ್ಲ. 4 ಜನ ಇರೋ ಕುಟುಂಬದಲ್ಲೇ ಮನಸ್ತಾಪ ಬರುತ್ತೆ, 150 ಜನರ ತಂಡ ಇರೋವಾಗ ಬರೋದಿಲ್ವೇ? ಕೂತು ಮಾತನಾಡಿ, ವಿವಾದ ಬಗೆಹರಿಸಿಕೊಳ್ಳೋಕೆ ನಾನು ಸಿದ್ಧ. 25ನೇ ತಾರೀಕು ಪ್ರೆಸ್‍ಮೀಟ್ ಇದೆ. 29ರಂದು ಈವೆಂಟ್ ಇದೆ. ಅಜಯ್ ರಾವ್ ಅವರಿಗೆ ನಾನೇ ಖುದ್ದು ಫೋನ್ ಮಾಡಿ ಕರೆದಿದ್ದೇನೆ ಎಂದಿದ್ದಾರೆ ನಿರ್ಮಾಪಕ, ಕ್ರಿಯೇಟಿವ್ ಡೈರೆಕ್ಟರ್ ಗುರು ದೇಶಪಾಂಡೆ.

    ಇಡೀ ಚಿತ್ರತಂಡವೇ ಒಂದು ಮಾತು ಹೇಳ್ತಿರೋವಾಗ, ಒಂದು ನಿರ್ಣಯದ ಮೇಲೆ ನಿಂತಿರೋವಾಗ ಇವರೊಬ್ಬರೇ ಒಂದು ಮಾತು ಹೇಳ್ತಿದ್ದರೆ ಅದು ಸರಿಹೋಗಲ್ಲ. ಅದು ಅವರ ಸಂಸ್ಕøತಿಯನ್ನು ತೋರಿಸುತ್ತೆ ಎಂದಿದ್ದಾರೆ ಗುರು ದೇಶಪಾಂಡೆ.

  • ಲವ್ ಯೂ ರಚ್ಚು : ಹೀರೋ ಮಿಸ್ಸಿಂಗ್ ಆಗಿದ್ದೇಕೆ..?

    ಲವ್ ಯೂ ರಚ್ಚು : ಹೀರೋ ಮಿಸ್ಸಿಂಗ್ ಆಗಿದ್ದೇಕೆ..?

    ಲವ್ ಯೂ ರಚ್ಚು ಸಿನಿಮಾ ರಿಲೀಸ್ ಆಗೋಕೆ ಎಲ್ಲವೂ ಸಿದ್ಧವಾಗಿದೆ. ಡಿಸೆಂಬರ್ 31ರ ಕೊನೆಯ ಸಿನಿಮಾ ಲವ್ ಯೂ ರಚ್ಚು. ಸಿನಿಮಾದ ಹಾಡು, ಟ್ರೇಲರ್.. ಎಲ್ಲವೂ ಚೆಂದವಾಗಿದ್ದು, ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹೀರೋನೇ ನಾಪತ್ತೆಯಾಗಿದ್ದರು. ವೇದಿಕೆಯಲ್ಲಿ ಅಜೇಯ್ ರಾವ್ ಇರಲಿಲ್ಲ. ಅಷ್ಟೆಲ್ಲ ಯಾಕೆ.. ಮಾತನಾಡಿದವರಿಂದ ಹೀರೋ ಪ್ರಸ್ತಾಪವೂ ಬರಲಿಲ್ಲ.

    ಒಂದು ಕಥೆಯ ಪ್ರಕಾರ..

    ಚಿತ್ರದಲ್ಲಿ ಹೀರೋಗಿಂತ ನಾಯಕಿಯೇ ಹೈಲೈಟ್ ಆಗುತ್ತಿರೋದು ಅಜೇಯ್ ರಾವ್ ಬೇಸರಕ್ಕೆ ಕಾರಣ. ಅದಕ್ಕಾಗಿಯೇ ಅವರು ಅಂತರ ಕಾಯ್ದುಕೊಂಡಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್‍ಗೆ ಹೆಚ್ಚು ಸ್ಕೋಪ್ ಸಿಗುತ್ತಿದೆ ಅನ್ನೋ ಬೇಸರವಿದೆಯಂತೆ. ಆದರೆ.. ಟೈಟಲ್‍ನಲ್ಲೇ ರಚ್ಚು ಅನ್ನೋ ಹೆಸರಿದೆ. ಅದು ಸಿನಿಮಾ ಸೆಟ್ಟೇರಿದ ದಿನದಿಂದಲೇ ಗೊತ್ತಿದ್ದ ವಿಷಯ.

    ಮತ್ತೊಂದು ಕಥೆಯೂ ಇದೆ..

    ಚಿತ್ರದ ಚಿತ್ರೀಕರಣ ವೇಳೆ ಒಂದು ಅಪಘಾತವಾಗಿತ್ತು. ಫೈಟರ್ ವಿವೇಕ್ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಅನ್ನೋ ಕಾರಣಕ್ಕೆ ಅಜೇಯ್ ಮುನಿಸಿಕೊಂಡಿದ್ದಾರೆ. ಆದರೆ ವಿವೇಕ್ ಕುಟುಂಬಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಪರಿಹಾರ ತಲುಪಿಸಿದ್ದಾರೆ ಅನ್ನೋ ಸುದ್ದಿ ಇದೆ. ಹೀಗಾಗಿ ಅದೂ ಕಾರಣ ಅಲ್ಲದಿರಬಹುದು.

    3ನೇ ಕಥೆ ಹೇಳೋದೇ ಬೇರೆ..

    ಅಜೇಯ್ ರಾವ್ ಅವರಿಗೆ ಆರೋಗ್ಯ ಸರಿಯಿಲ್ಲ.

    ಓಕೆ.. ಇರಬಹುದೇನೋ.. ಆದರೆ, ಟ್ರೇಲರ್ ರಿಲೀಸ್ ಮಾಡುವ ವೇಳೆ ಚಿತ್ರತಂಡದವರು ವೇದಿಕೆ ಮೇಲೆ ಹೀರೋನನ್ನು ನೆನಪಿಸಿಕೊಳ್ಳಲಿಲ್ಲ. ಒತ್ತಡದಲ್ಲಿ ಮರೆತುಹೋಯ್ತು ಅನ್ನೋದು ನಿರ್ಮಾಪಕರು ಹಾಗೂ ಚಿತ್ರತಂಡದವರ ಸಮುಜಾಯಿಷಿ.

    ನಟ ಧ್ರುವ ಸರ್ಜಾ ಟ್ರೇಲರ್ ರಿಲೀಸ್ ಮಾಡಿದ್ದು, ಲವ್ ಯೂ ರಚ್ಚುಗೆ ರೆಸ್ಪಾನ್ಸ್ ಅಂತೂ ಚೆನ್ನಾಗಿದೆ.