` amrutha iyengar, - chitraloka.com | Kannada Movie News, Reviews | Image

amrutha iyengar,

  • Gurudev Hoysala Movie Review, Chitraloka Rating 4/5

    Hoysala Movie Review, Chitraloka Rating 4/5

    Film: Gurudev Hoysala

    Director: Vijay N

    Cast: Dhananjaya, Naveen Shankar, Amrutha Iyengar, Achyuth Kumar, Prathap Narayan

    Duration: 132 minutes

    Certificate: UA

    A modern cop classic 

    Mainstream Kannada film makers would easily accept the verdict of ‘guilty as charged’ when it comes to their aversion to addressing serious social issues. They cannot be blamed when anyone and everyone seems to be easily offended for even innocuous elements in movies. So, director Vijay N and his team should primarily be commended for blending an important concern into what is essentially a commercial potboiler. Of course, he plays it safe and makes sure names, places and references remain generic, but the risk taken is admirable. I won’t blow the gaff on the theme here. It is best experienced as part of the film.

    Gurudev Hoysala is the typical honest cop whose suitcases are best left unpacked. He arrives in Belagavi to investigate a missing police officer but soon gets embroiled in an issue that has the potential to flare up things beyond anybody’s control. Our hero has to set things right before the Pandora’s Box he has unwittingly opened threatens to shatter peace. Yes, of course we know he will win in the end, but does his actions till then entertain us is the question.

    The story is packed with loads of action befitting a cop saga. There are incidents and characters that would make any film meaningful and worth the watch. The characters portrayed by Achyuth Kumar, Naveen Shankar and Nagabushana for example keep the narrative engaging. What they lack is the complexity that makes some film characters household names. The characters are given very little time to mature in the minds of the audience. The director and the editor are in a hurry to keep the film around the two-hour mark. That perhaps is the need of the hour as well.

    The film has a taut storyline and a pacy narrative, but its generic conflicts make the progression predictable. How would an insane villain get back at the gritty cop? Of course, attack his family and friends. The easy way out of tricky situations is taken throughout and even in the climax. A few unpredictable actions by the protagonist would have made this film classier. Gurudev Hoysala is a good cop-action thriller no doubt. But it just stops short of propelling ‘Hoysala’ from becoming a cult.  

    A few more fleshed-out characters and scenes may have put Hoysala on the same footing as a Sangliyana or even a Police Story. A few more nuances and a few more subtle play up of emotions perhaps? It is not too much to ask for right?

    Hoysala is a pot-boiler of action, heroics, revenge, class conflict and emotions. It is entertaining and engaging too. It is a mass-masala police story whose underlying social theme gives it a broader and humane appeal. The film won’t disappoint and is a value-for-money proposition for audiences and is a worthy addition to Sandalwood’s cop genre movies.

  • ಅಪ್ಪನ ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿ ರೈಡರ್ ಗಿಫ್ಟ್

    ಅಪ್ಪನ ಹುಟ್ಟುಹಬ್ಬಕ್ಕೆ ನಿಖಿಲ್ ಕುಮಾರಸ್ವಾಮಿ ರೈಡರ್ ಗಿಫ್ಟ್

    ಡಿಸೆಂಬರ್ 16. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಸಖತ್ ಸ್ಪೆಷಲ್. ಅಪ್ಪನ ಹುಟ್ಟುಹಬ್ಬದಂದೇ ನಿಖಿಲ್ ಅಭಿನಯಿಸಿರೋ ರೈಡರ್ ಟ್ರೇಲರ್ ರಿಲೀಸ್ ಆಗಿದೆ. ಡಿಸೆಂಬರ್ 24ರಂದು ತೆರೆಗೆ ಬರುತ್ತಿರೋ ರೈಡರ್ ಚಿತ್ರದ ಟ್ರೇಲರ್ ಆ್ಯಕ್ಷನ್, ಲವ್ ಮತ್ತು ಮಾಸ್ ಕಥೆಗಳಿರೋ ಸಿಗ್ನಲ್ ಕೊಟ್ಟಿದೆ.

    ಮುದ್ದು ಮುದ್ದಾಗಿ ಕಾಣಿಸೋ ಕಾಶ್ಮೀರ ಪರದೇಶಿ ಎದುರು ನಿಖಿಲ್ ಲವ್ವರ್ ಬಾಯ್ ಆಗಿದ್ದರೆ, ತಂದೆ ಪಾತ್ರಧಾರಿ ಅಚ್ಯುತ್ ಕುಮಾರ್ ಜೊತೆ ಅಪ್ಪಟ ಮಗನಾಗಿದ್ದಾರೆ. ವಿಲನ್ ಗರುಡ ರಾಮ್ ಎದುರು ರಗಡ್ ಆಗಿದ್ದಾರೆ. ಫೀಲ್ಡಿನಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರನಾಗಿಯೂ ವ್ಹಾವ್ ಎನಿಸುತ್ತಾರೆ. ಫೈಟಿಂಗ್‍ನಲ್ಲೂ ಮಸ್ತ್ ಎನಿಸುತ್ತಾರೆ. ಒಟ್ಟಾರೆ ಇಲ್ಲಿ ನಿಖಿಲ್ ಅವರದ್ದು ಫುಲ್ ಪ್ಯಾಕೇಜ್.

    ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಢಾಳಾಗಿ ಕಾಣಿಸುತ್ತವೆ. ನಿರ್ಮಾಪಕರಾದ ಚಂದ್ರು ಮನೋಹರನ್ ಮತ್ತು ಸುನಿಲ್ ಗೌಡ ಚಿತ್ರವನ್ನು ಅದ್ಧೂರಿಯಾಗಿಯೇ ಮಾಡಿರುವುದು ಎದ್ದು ಕಾಣುತ್ತದೆ.

  • ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಆಟೋ ಡ್ರೈವರ್ ಸ್ಟೋರಿ

    ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಆಟೋ ಡ್ರೈವರ್ ಸ್ಟೋರಿ

    ಬಡವ ರಾಸ್ಕಲ್ ಆಟೋ ಡ್ರೈವರ್ ಲವ್ ಸ್ಟೋರಿಯೂ ಹೌದು. ಡಾಲಿ ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್ ನಾಯಕಿ. ನಾಯಕ ಹಾಳಾಗಿರೋದೇ ಅವನ ಸ್ನೇಹಿತರಿಂದ ಅಂತ ನಂಬಿರೋ ಅವನ ಗರ್ಲ್‍ಫ್ರೆಂಡ್ ಪಾತ್ರ. ಹೀರೋ ಆಟೋ ಡ್ರೈವರ್.  ಒಂದೊಂದು ಕಥೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕನೆಕ್ಟ್ ಆಗುತ್ತೆ. ಚಿತ್ರದ ಕಥೆ ಕೇಳಿದಾಗ ಅಮೃತಾಗೆ ನೆನಪಾಗಿದ್ದು ಅವರ ಮಾವಂದಿರು.

    ನನ್ನ ಅಮ್ಮನಿಗೆ ಇಬ್ಬರು ತಮ್ಮಂದಿರು. ಇಬ್ಬರೂ ಆಟೋ ಓಡಿಸ್ತಾ ಇದ್ರು. ನಮ್ಮದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ನನಗೆ ನಿದ್ರೆ ಬರದೆ ಅಳೋಕೆ ಶುರು ಮಾಡಿದ್ರೆ ಮಾವಂದಿರಿಬ್ರೂ ಆಟೋದಲ್ಲಿ ಕೂರಿಸಿಕೊಂಡು ರೌಂಡ್ ಹಾಕ್ತಿದ್ರು. ಎರಡು ರೌಂಡ್ ಮುಗಿಯೋದ್ರಲ್ಲಿ ನಿದ್ದೆ ಹೋಗಿಬಿಡ್ತಿದ್ದೆ. ಅವರಿಬ್ಬರೂ ಈಗ ಇಲ್ಲ. ಚಿತ್ರದ ಕಥೆ ಕೇಳಿದಾಗ ಅವರಿಬ್ಬರೂ ನೆನಪಾದರು ಎಂದು ಭಾವುಕರಾಗುತ್ತಾರೆ ಅಮೃತಾ ಅಯ್ಯಂಗಾರ್.

    ಡಾಲಿ ಧನಂಜಯ್ ಹೀರೋ ಮತ್ತು ನಿರ್ಮಾಪಕ ಎರಡೂ ಆಗಿರೋ ಬಡವ ರಾಸ್ಕಲ್ ಸಖತ್ತಾಗಿಯೇ ಸೌಂಡ್ ಮಾಡ್ತಿದೆ. ಹಾಡುಗಳು ವ್ಹಾವ್ ಎನ್ನಿಸಿವೆ. ಡೈಲಾಗುಗಳು ಪಡ್ಡೆಗಳ ಹೃದಯ ತಟ್ಟಿವೆ. ಶಂಕರ್ ಗುರು ಕಥೆ ಮತ್ತು ನಿರ್ದೇಶನದಲ್ಲಿ ಚೆನ್ನಾಗಿಯೇ ವರ್ಕೌಟ್ ಮಾಡಿದ್ದಾರೆ.

  • ಅಮೃತಾಗೆ 2020ರ ಮಾರ್ಚ್‍ನಲ್ಲೇ ಹ್ಯಾಟ್ರಿಕ್

    amrutha iyendar's hat trick is shivarjuna

    ಅಮೃತಾ ಅಯ್ಯಂಗಾರ್, ಈಗಿನ್ನೂ ಕನ್ನಡ ಚಿತ್ರರಂದಲ್ಲಿ ಛಾಪು ಒತ್ತುತ್ತಿರುವ ಯುವ ಪ್ರತಿಭೆ. ಈ ಚೆಲುವೆ 2020ರ ಮೊದಲ ಮೂರು ತಿಂಗಳಲ್ಲೇ ಹ್ಯಾಟ್ರಿಕ್ ಬಾರಿಸುತ್ತಿದ್ದಾರೆ. ಇಷ್ಟಕ್ಕೂ ಕಥೆಯೇನಪ್ಪಾ ಅಂದ್ರೆ, ಈ ವಾರ ರಿಲೀಸ್ ಆಗುತ್ತಿರುವ ಶಿವಾರ್ಜುನ, ಅಮೃತಾ ಅವರ ಈ ವರ್ಷದ 3ನೇ ಸಿನಿಮಾ.

    ವರ್ಷದ ಆರಂಭದಲ್ಲಿ ಲವ್ ಮಾಕ್‍ಟೇಲ್ ಬಂತು. ಹೆಸರು ಕೊಟ್ಟಿತು. ಅದಾದ ನಂತರ ರಿಲೀಸ್ ಆಗಿದ್ದು ಪಾಪ್‍ಕಾರ್ನ್ ಮಂಕಿ ಟೈಗರ್, ಒನ್ಸ್ ಎಗೇಯ್ನ್ ಆ ಚಿತ್ರದಲ್ಲೂ ಜನ ನನ್ನನ್ನು ನಾನು ನಟಿಸಿದ್ದ ಪಾತ್ರದ ಹೆಸರಿಂದ ಗುರುತಿಸಿದರು. ಈಗ ಶಿವಾರ್ಜುನ, ಖಂಡಿತಾ ಈ ಪಾತ್ರವೂ ಜನರಿಗೆ ಇಷ್ಟವಾಗುತ್ತೆ ಎನ್ನುತ್ತಾರೆ ಅಮೃತಾ.

    ಅಮೃತಾ ನಟಿಸಿರುವ ಇನ್ನೂ ಕೆಲವು ಚಿತ್ರಗಳು ರೆಡಿ ಇವೆ. ಜೊತೆಗೆ ಬಡವ ರ್ಯಾಸ್ಕಲ್, ಶೀತಲ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾ ಹೀಗೆ ಹಲವು ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ ಅಮೃತಾ.

  • ಒಟಿಟಿಗೆ ಬಡವ ರಾಸ್ಕಲ್. ಜ.26ಕ್ಕೆ

    ಒಟಿಟಿಗೆ ಬಡವ ರಾಸ್ಕಲ್. ಜ.26ಕ್ಕೆ

    ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಭರ್ಜರಿಯಾಗಿ ಹಿಟ್ ಆದ ಸಿನಿಮಾ ಬಡವ ರಾಸ್ಕಲ್. ಥಿಯೇಟರುಗಳಲ್ಲಿ ಅಬ್ಬರ ಮುಗಿಯುವ ಹೊತ್ತಿಗೆ ಒಟಿಟಿಗೆ ಬರುತ್ತಿದೆ. ಇದೇ ಗಣರಾಜ್ಯೋತ್ಸವಕ್ಕೆ ಬಡವ ರಾಸ್ಕಲ್ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ವೂಟ್ ಸೆಲೆಕ್ಟ್‍ನಲ್ಲಿ..

    ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್, ಧನಂಜಯ್ ಅವರ ನಿರ್ಮಾಣದ ಮೊದಲ ಸಿನಿಮಾ ಆಗಿತ್ತು. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಪ್ರೇಕ್ಷಕರಂತೂ ಬಡವ ರಾಸ್ಕಲ್‍ನನ್ನು ಅಪ್ಪಿ ಮುದ್ದಿಸಿದ್ದರು. ಈಗ ಮನೆ ಮನೆಗೆ... ಮೊಬೈಲ್ ಮೊಬೈಲ್‍ಗೆ ಬರುತ್ತಿದೆ.. ಜನವರಿ 26ಕ್ಕೆ.

  • ಗುರುದೇವ್ ಹೊಯ್ಸಳ ಟ್ರೇಲರ್ ರಿಲೀಸ್

    ಗುರುದೇವ್ ಹೊಯ್ಸಳ ಟ್ರೇಲರ್ ರಿಲೀಸ್

    ಗುರುದೇವ್ ಹೊಯ್ಸಳ. ಡಾಲಿ ಧನಂಜಯ ಅಭಿನಯದ 25ನೇ ಸಿನಿಮಾ. ಇದೇ 30ರಂದು ರಿಲೀಸ್ ಆಗಲಿರೋ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಡಾಲಿ ಪೊಲೀಸ್ ಆಫೀಸರ್ ಗುರುದೇವ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಲ್ಲೊಂದು ಪೊಲಿಟಿಕಲ್ ಗೇಮ್ ಇದೆ. ಪೊಲೀಸ್ ಆಫೀಸರ್ ಒಬ್ಬನ ಆಕ್ರೋಶವಿದೆ. ಮಧ್ಯದಲ್ಲೊಂದು ಲವ್ ಸ್ಟೋರಿಯೂ ಇರುವ ಸೂಚನೆಯಿದೆ. ನಾಯಕಿಯಾಗಿರುವುದು ಅಮೃತಾ ಅಯ್ಯಂಗಾರ್. ಬೆಳಗಾವಿ ಕಡೆಯ ಭಾಷೆಯ ಸೊಗಡು ಅಚ್ಚೊತ್ತಿದಂತಿದೆ. ಖಡಕ್ ಧ್ವನಿ.. ಖಡಕ್ ಸಂಭಾಷಣೆ.. ಡಾಲಿ ಹೇಳುವ ಖಡಕ್ ಸಂಭಾಷಣೆಗಳು ಅವರ ಅವರ ಪಾತ್ರ ಎಷ್ಟು ರಗಡ್ ಆಗಿರಬಹುದೆಂಬ ಅಂದಾಜು ನೀಡುತ್ತಿದೆ. ಡಾಲಿಗೆ ಎದುರಾಗಿ ಅಷ್ಟೆ ಒರಾಟದ ಆದರೆ ಮೃಗೀಯ ವಿಲನ್ ಸಹ ಇದ್ದಾನೆ. ಇವರಿಬ್ಬರ ಸೆಣೆಸಾಟ ಹೇಗಿರಬಹುದೆಂಬ ಕುತೂಹಲ ಹುಟ್ಟಿಸುವಂತಿದೆ.

    ಟೀಸರ್ನಲ್ಲಿದ್ದ ಕನ್ನಡ ಧ್ವಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳು ಟ್ರೈಲರ್ನಲ್ಲಿಯೂ ಇವೆ. ಟ್ರೈಲರ್ನಲ್ಲಿ ನಾಯಕ ಹಾಗೂ ವಿಲನ್ಗಳ ಹೊರತಾಗಿ ಬೇರೆ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆ. ಅದರಲ್ಲಿಯೂ ನಾಯಕಿ ಅಮೃತಾ ಅಯ್ಯಂಗಾರ್ ಕಂಡ ಕೂಡಲೇ ಮರೆಯಾಗಿಬಿಡುತ್ತಾರೆ.

    ಖಡಕ್ ಆದ ಒರಟು ವ್ಯಕ್ತಿತ್ವದ ನಾಯಕನಿಗೆ ಪಕ್ಕಾ ಠಕ್ಕರ್ ಕೊಡುವ ವಿಲನ್ ಪಾತ್ರವನ್ನೇ ಸೃಷ್ಟಿಸಿದ್ದಾರೆ ನಿರ್ದೇಶಕ ವಿಜಯ್ ಎನ್. ವಿಲನ್ ಪಾತ್ರವನ್ನು ನಟ ನವೀನ್ ಶಂಕರ್ ನಿರ್ವಹಿಸಿದ್ದಾರೆ.

    ಸಿನಿಮಾ ನಿರ್ಮಾಣ ಮಾಡಿರುವುದು ಕಾರ್ತಿಕ್ ಗೌಡ ಹಾಗೂ ಯೋಗಿ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಸಿನಿಮಾ ನಿರ್ಮಾಣವಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಬರೆದಿರುವುದು ಮಾಸ್ತಿ. ಸಿನಿಮಾ ಇದೇ ತಿಂಗಳು 30ರಂದು ತೆರೆಗೆ ಬರಲಿದೆ.

  • ಡಾಲಿ, ಅಮೃತಾ ಜೋಡಿಗೆ ಉಘೇ ಎಂದರು ರಮ್ಯಾ

    ಡಾಲಿ, ಅಮೃತಾ ಜೋಡಿಗೆ ಉಘೇ ಎಂದರು ರಮ್ಯಾ

    ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಹೊಯ್ಸಳದಲ್ಲಿ ಡಾಲಿ ಮತ್ತು ಅಮೃತಾ ಅವರದ್ದು ಗಂಡ-ಹೆಂಡತಿ ಪಾತ್ರ. ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಬಡವ ರಾಸ್ಕಲ್ ಚಿತ್ರಗಳಿಗಿಂತಲೂ ಅದ್ಭುತವಾಗಿ ತೆರೆಯ ಮೇಲೆ ಬಂದಿದೆ ಜೋಡಿ. ಡಾಲಿ-ಅಮೃತಾರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಪ್ರೇಕ್ಷಕರಷ್ಟೇ ಅಲ್ಲ, ಮೋಹಕತಾರೆ ರಮ್ಯಾ ಕೂಡಾ ಸಿನಿಮಾ ನೋಡಿ ಜೋಡಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

    ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಹೇಗಿದೆ? ನೀವೂ ಎಷ್ಟು ಮಾರ್ಕ್ಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ ಎಂದಿದ್ದಾರೆ.

    ಹೊಯ್ಸಳ ಚಿತ್ರದ ಕಥೆ ಇಷ್ಟು. ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿಯ ಹುಡುಕಾಟಕ್ಕೆ ಖಡಕ್ ಅಧಿಕಾರಿ ಗುರುದೇವ್ ಬರುತ್ತಾನೆ. ಅಲ್ಲಿಂದ ಮುಂದೆ ಮರಳು ಮಾಫಿಯಾ, ಪೀತಿ, ಮರ್ಯಾದಾ ಹತ್ಯೆ..ಎಲ್ಲವೂ ಬರುತ್ತವೆ. ಈ ಎಲ್ಲವನ್ನೂ ಅದ್ಭುತವಾಗಿ ಬ್ಲೆಂಡ್ ಮಾಡಿ ಒಂದರೊಳಗೊಂದು ಹೆಣೆದಿರುವ ನಿರ್ದೇಶಕರ ಜಾಣ್ಮೆಗೆ ತಲೆಗೂಗಬೇಕು. ಹಾಗೆ ನೋಡಿದರೆ ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್ ಪಾತ್ರಕ್ಕೆ ಹೆಚ್ಚು ಸ್ಪೇಸ್ ಇಲ್ಲ. ಆದರೆ ಇರುವಷ್ಟು ಹೊತ್ತಿನಲ್ಲಿ ತೆರೆಯನ್ನು ಆವರಿಸಿಕೊಂಡು ಬಿಡುತ್ತಾರೆ ಅಮೃತಾ ಅಯ್ಯಂಗಾರ್. ಕಣ್ಣಲ್ಲೇ ಕೊಂದುಬಿಡುತ್ತಾರೆ.

    ನಿರ್ದೇಶಕ ವಿಜಯ್ ಚೆಂದದ ಕಥೆಯನ್ನು ಸುಂದರವಾಗಿ ಅದ್ಧೂರಿಯಾಗಿ ಕಮರ್ಷಿಯಲ್ಲಾಗಿ ಹೇಳಿದ್ದಾರೆ. ಬಾಕ್ಸಾಫೀಸ್ ತುಂಬಿ ತುಳುಕುತ್ತಿದ್ದು, ನಿರ್ಮಾಪಕ ಯೋಗಿ ಬಿ.ರಾಜ್ ಫುಲ್ ಹ್ಯಾಪಿ.

  • ಡಾಲಿ..ಅಮೃತಾ ಅಯ್ಯಂಗಾರ್ ಲವ್ ಸ್ಟೋರಿ ರೀಲ್ ಮಾತ್ರ.. ರಿಯಲ್ ಅಲ್ಲ..!

    ಡಾಲಿ..ಅಮೃತಾ ಅಯ್ಯಂಗಾರ್ ಲವ್ ಸ್ಟೋರಿ ರೀಲ್ ಮಾತ್ರ.. ರಿಯಲ್ ಅಲ್ಲ..!

    ಹೀರೋ ಮತ್ತು ಹೀರೋಯಿನ್ ಒಟ್ಟೊಟ್ಟಿಗೇ ಮೂರು ಸಿನಿಮಾ ಮಾಡಿದರೆ ಸಹಜವಾಗಿಯೇ ಅಂಥಾದ್ದೊಂದು ರೂಮರ್ ಸೃಷ್ಟಿಯಾಗಿಬಿಡುತ್ತದೆ. ಜೊತೆಗೆ ಅವರಿಬ್ಬರೂ ಬ್ಯಾಚುಲರ್ ಆಗಿದ್ದರೆ ಮುಗಿದೇ ಹೋಯ್ತು. ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಆಗಿರುವುದೂ ಕೂಡಾ ಅದೇ. ಇತ್ತೀಚೆಗೆ ಹೊಯ್ಸಳ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್ ಡಾಲಿ ಮತ್ತು ಅಮೃತಾರನ್ನು ಕಾಲೆಳೆದರು.

    ನೀವು ಯಾಕೆ ಇವರೊಟ್ಟಿಗೆ ಜಾಸ್ತಿ ನಟಿಸ್ತೀರಿ..? ಬೇರೆ ಕಲಾವಿದರಿಗೂ ಡೇಟ್ಸ್ ಕೊಡಿ.. ಅವರ ಜೊತೆಗೆ ನಟಿಸಿ.. ಮೂರ್ ಮೂರು ಸಿನಿಮಾ ಇವರ ಜತೆಗೆ ಮಾಡಿದ್ರೆ, ಬೇರೆಯವರಿಗೆ ನೀವು ಸಿಗೋದು ಹೇಗೆ? ಅಮೃತಾ ಮೂರು ಸಿನಿಮಾ ಒಟ್ಟಿಗೆ ಮಾಡಿದ್ರೂ, ಅವರನ್ನು ವೇದಿಕೆ ಧನಂಜಯ ಹೊಗಳುತ್ತಿಲ್ಲ. ನಮ್ಮೊಟ್ಟಿಗೆ ಮಾಡಿದ್ರೆ, ನಾವು ಅರ್ಧ ಗಂಟೆ ಹೊಗಳುತ್ತಿದ್ವಿ…ಕಿಚ್ಚ ಸುದೀಪ್ ಈ ಮಾತು ಹೇಳುವುದಕ್ಕೆ ಕಾರಣವಿತ್ತು. ವೇದಿಕೆಯಲ್ಲಿದ್ದ ಎಲ್ಲರ ಬಗ್ಗೆ ಮಾತನಾಡಿದ ಡಾಲಿ, ಅಮೃತಾರನ್ನು ಇವರು ಚಿತ್ರದ ಹೀರೋಯಿನ್ ಎಂದು ಹೇಳಿ ಮಾತು ಮುಗಿಸಿದ್ದರು.

    ಸುದೀಪ್ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರ ಪಾಪ್ಕಾರ್ನ್ ಮಂಕಿ ಟೈಗರ್' ನೋಡಿ 'ಬಡವ ರಾಸ್ಕಲ್' ಸಿನಿಮಾಗೆ ನಿರ್ದೇಶಕ ಶಂಕರ್ ಗುರು ಮತ್ತೊಮ್ಮೆ ಜೋಡಿ ಮಾಡಿದ್ರು. ಬಡವ ರಾಸ್ಕಲ್ ಸಿನಿಮಾ ಹಿಟ್ ಆಯ್ತು ಅಂತ ನಮ್ಮ ಯೋಗಿ ಜಿ. ರಾಜ್, ಕಾರ್ತಿಕ್, ನಿರ್ದೇಶಕ ವಿಜಯ್ ಅವರು ಮತ್ತೆ ಅದೇ ಜೋಡಿಯನ್ನು ಕಂಟಿನ್ಯೂ ಮಾಡಿದರು.. ಎಂದು ಹೇಳಿದರು.

    ವಾಸ್ತವವಾಗಿ ಈ ಗುಲ್ಲು ಹಬ್ಬೋಕೆ ಕಾರಣವಾಗಿದ್ದು ಗಣೇಶ್ ನಡೆಸಿಕೊಡುತ್ತಿದ್ದ ಟಿವಿ ಶೋವೊಂದರಲ್ಲಿ ಅಮೃತಾ ಅವರು ಡಾಲಿಗೆ ಪ್ರಪೋಸ್ ಮಾಡಿದ್ದು. ಟಿವಿ ಶೋನಲ್ಲಿ ತಮಾಷೆಗಾಗಿ ಮಾಡಿದ ವಿಡಿಯೋವನ್ನು ಜನ ಮರೆಯಲೇ ಇಲ್ಲ. ಒಟ್ಟಿಗೇ ಸಿನಿಮಾ ಮಾಡುತ್ತಿರೋ ಕಾರಣ, ಸಹಜವಾಗಿಯೇ ಹೊರಗಡೆಯೂ ಸಿಗುವ ಜೋಡಿ ಮಧ್ಯೆ ಏನೋ ಇದೆ. ಏನೇನೋ ಇದೆ.. ಎಂಬ ಗಾಸಿಪ್ ಹಬ್ಬುತ್ತದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್ ಅಷ್ಟೇ ಎನ್ನುವ ಡಾಲಿ ಮತ್ತು ಅಮೃತಾ.. ಸ್ನೇಹವನ್ನು ಮಾತ್ರ ಕಾಯ್ದುಕೊಂಡೇ ಬಂದಿದ್ದಾರೆ.

    ಇದೆಲ್ಲದರ ಮಧ್ಯೆ ಹೊಯ್ಸಳ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ.

  • ನಾನು ಧನಂಜಯ ಸ್ನೇಹಿತರಷ್ಟೇ, ಪ್ರೇಮಿಗಳಲ್ಲ : ಅಮೃತಾ ಅಯ್ಯಂಗಾರ್

    ನಾನು ಧನಂಜಯ ಸ್ನೇಹಿತರಷ್ಟೇ, ಪ್ರೇಮಿಗಳಲ್ಲ : ಅಮೃತಾ ಅಯ್ಯಂಗಾರ್

    ನಟಿ ಅಮೃತಾ ಅಯ್ಯಂಗಾರ್, ಡಾಲಿ ಧನಂಜಯ ಪ್ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಅದು ಇವತ್ತಿನದಲ್ಲ. ಶುರುವಾಗಿದ್ದು ಮಾತ್ರ ಗೋಲ್ಡನ್ ಸ್ಟಾರ್ ಗಣೇಶ್ ರಿಯಾಲಿಟಿ ಶೋನಲ್ಲಿ. ಆ ಶೋನಲ್ಲಿ ಡಾಲಿ ಧನಂಜಯ, ಅಮೃತಾಗೆ ಪ್ರಪೋಸ್ ಮಾಡೋ ವಿಡಿಯೋ ನೋಡಿದವರು, ಇದು ರಿಯಲ್ಲೇ ಅಂದ್ಕೊಂಡ್ ಬಿಟ್ಟಿದ್ರು. ಅದಾದ ಮೇಲೆ ಇಬ್ಬರೂ ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆಗೆ ಜೋಡಿಯಾಗಿ ಹೋಗಿದ್ದು ನೋಡಿ, ಅದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿತ್ತು. ಅದಕ್ಕೆ ತಕ್ಕಂತೆ ಡಾಲಿ ಮತ್ತು ಅಮೃತಾ ಇಬ್ಬರೂ ಜೊತೆಯಾಗಿ ಮೂರು ಸಿನಿಮಾ ಮಾಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಮತ್ತು ಹೊಯ್ಸಳ. ಈಗ ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟಿದ್ದಾರೆ ಅಮೃತಾ ಅಯ್ಯಂಗಾರ್.

    ನಾವಿಬ್ಬರೂ ಒಟ್ಟಿಗೆ ಮೂವರು ಸಿನಿಮಾವನ್ನು ಮಾಡಿದ್ದೇವೆ. ಹಾಗಾಗಿ ಕೆಲವರು ನಮ್ಮಿಬ್ಬರ ಮಧ್ಯೆ ಏನೋ ಇದೆ ಎಂದು ಅಂದುಕೊಳ್ಳುತ್ತಾರೆ. ಧನಂಜಯ, ನನ್ನ ಮಧ್ಯೆ ಒಳ್ಳೆಯ ಸ್ನೇಹವಿದೆ. ಅದನ್ನು ಬಿಟ್ಟರೆ ನಾನು ಇನ್ನೂ ಸಿಂಗಲ್ ಎಂದು ಹೇಳಿದ್ದಾರೆ ಅಮೃತಾ ಅಯ್ಯಂಗಾರ್.

    ಅಮೃತಾ ಅಯ್ಯಂಗಾರ್ ಸದ್ಯಕ್ಕೆ ಶರಣ್ ಜೊತೆ ನಟಿಸುತ್ತಿದ್ದಾರೆ. ಅಮೃತಾ ನಟಿಸಿರುವ ಚಿತ್ರಗಳಲ್ಲಿ ಹೆಚ್ಚು ಹಿಟ್ ಕೊಟ್ಟಿದ್ದಾರೆ. ಸದ್ಯಕ್ಕೆ ಕನ್ನಡದ ಬೇಡಿಕೆಯ ನಟಿಯರಲ್ಲಿ ಅಮೃತಾ ಅಯ್ಯಂಗಾರ್ ಒಬ್ಬರಾಗಿದ್ದಾರೆ. ಅಂದಹಾಗೆ ಜುಲೈ 26, ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬ. ಡಾಲಿ ಧನಂಜಯ ಅವರೂ ಸೇರಿದಂತೆ ಇಂಡಸ್ಟ್ರಿಯವರು, ಅಭಿಮಾನಿಗಳು ಅಮೃತಾ ಅಯ್ಯಂಗಾರ್ ಅವರಿಗೆ ವಿಷ್ ಮಾಡಿದ್ದಾರೆ.

  • ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ : ಅಮೃತಾ ಅಯ್ಯಂಗಾರ್

    ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ : ಅಮೃತಾ ಅಯ್ಯಂಗಾರ್

    ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಏನೋ ಇದೆ ಅನ್ನೋ ಮಾತು ಇವತ್ತಿನದ್ದಲ್ಲ. ಏಕೆಂದರೆ ಅವರಿಬ್ಬರೂ ಒಟ್ಟಿಗೇ ಈಗಾಗಲೇ 3 ಚಿತ್ರಗಳಲ್ಲಿ ನಟಿಸಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಚಿತ್ರದಲ್ಲಿ ನಟಿಸಿದ್ದ ಡಾಲಿ ಮತ್ತು ಅಮೃತಾ ಇದೀಗ ಹೊಯ್ಸಳ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಲವ್ ಇದೆ. ಇಬ್ಬರೂ ಮದುವೆಯಾಗ್ತಾರೆ ಅನ್ನೋ ಸುದ್ದಿ ಜೋರಾಗಿ ಹಬ್ಬಿದೆ. ಸ್ವತಃ ಸುದೀಪ್ ಸ್ಟೇಜ್ ಮೇಲೆ ಕಿಚಾಯಿಸಿದ್ದಾರೆ. ಹೀಗಾಗಿ ಇದು ಇನ್ನೂ ಜೋರಾಗಿದೆ.

    ನಮ್ಮೀಬ್ಬರ ಮಧ್ಯೆ ಪ್ರೀತಿ ಇದೆ ಎಂಬ ಹಬ್ಬಿರುವ ಸುದ್ದಿಗೆ ಧನಂಜಯ್ಗೆ ಯಾರು ಹೆಣ್ಣು ಕೊಡ್ತಿಲ್ಲವಂತೆ. ನಮ್ಮೀಬ್ಬರ ಮಧ್ಯೆ ಹಾಗೇನು ನಾವಿಬ್ಬರು ಸ್ನೇಹಿತರು.  ಡಾಲಿ ಜೊತೆ ಫೋಟೋ ಹಾಕಿದ್ದರೆ, ಹಿರಿಯ ನಟರು ಸಿಕ್ಕಾಗ ಇದೇ ಕೇಳುತ್ತಾರೆ. ಸಂಬಂಧಿಕರು ಇದರ ಬಗ್ಗೆ ವಿಚಾರಿಸುತ್ತಾರೆ. ಆಗ ನಾನು ಸ್ಟಷ್ಟನೆ ಕೊಡುತ್ತೇನೆ. ಇದು ಹೇಗೆ ನಿಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಸೆಟ್ನಲ್ಲಿ ನನಗೆ ಹೆಣ್ಣು ಕೊಡುತ್ತಿಲ್ಲ ಎಂದು ಡಾಲಿ ರೇಗಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ ಅಮೃತಾ ಅಯ್ಯಂಗಾರ್.

    ಅಂದಹಾಗೆ ಇದೆಲ್ಲ ಶುರುವಾಗಿದ್ದ ಗಣೇಶ್ ಅವರು ನಿರೂಪಣೆ ಮಾಡುತ್ತಿದ್ದ ಶೋದಿಂದ ಎನ್ನುವುದು ಕೂಡಾ ವಿಶೇಷ. ಟಿವಿಗೆ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಗಣೇಶ್ ಅವರಿಗೆ ಪ್ರಪೋಸ್ ಮಾಡುವ ರೀತಿಯ ಟಾಸ್ಕ್ ಕೊಟ್ಟಿದ್ದರು. ಅವತ್ತು ಪ್ರಪೋಸ್ ಮಾಡಿಸಿಕೊಂಡಿದ್ದು ಡಾಲಿ ಧನಂಜಯ. ಅದನ್ನು ನಿಜವೆಂದೇ ಅಭಿಮಾನಿಗಳು ಫೀಲ್ ಆದರು. ಇದೀಗ ಇಬ್ಬರೂ ಎಷ್ಟು ಸ್ಪಷ್ಟನೆ ಕೊಟ್ಟರೂ ಅಭಿಮಾನಿಗಳು ನಂಬುತ್ತಿಲ್ಲ. ಈಗಲೂ ಅಷ್ಟೆ, ಅಮೃತಾ ಇಷ್ಟೆಲ್ಲ ಸ್ಪಷ್ಟನೆ ಕೊಟ್ಟ ಮೇಲೆಯೂ ಹೋಗ್ಲಿ.. ಬಿಡಿ.. ಮದುವೆ ಯಾವಾಗ ಎನ್ನುತ್ತಿದ್ದಾರಂತೆ.

    ಇದೆಲ್ಲದರ ನಡುವೆಯೆ ಹೊಯ್ಸಳ ಭರ್ಜರಿ ಓಪನಿಂಗ್ ತೆಗೆದುಕೊಳ್ಳೋ ಸುಳಿವು ಇದೆ. ಡಾಲಿ-ಅಮೃತಾ ಅಯ್ಯಂಗಾರ್ ಜೊತೆಯಾಗಿ ನಟಿಸಿರುವ 3ನೇ ಸಿನಿಮಾ ಇದು. ಇದೇ 30ರಂದು ರಿಲೀಸ್.

  • ಬಡವ ರಾಸ್ಕಲ್ ``ಅಕ್ಷರ'' ಮಹಾತ್ಮೆ..

    ಬಡವ ರಾಸ್ಕಲ್ ``ಅಕ್ಷರ'' ಮಹಾತ್ಮೆ..

    ಒಂದು ಸಿನಿಮಾವನ್ನು ಜನರಿಗೆ ತಲುಪಿಸೋಕೆ ಯಾವ್ಯಾವ ರೀತಿ ಕ್ರಿಯೇಟಿವ್ ಆಗಿ ಯೋಚಿಸಬೇಕು ಅನ್ನೋಕೆ ಬಡವ ರಾಸ್ಕಲ್`ಗಿಂತ ಉದಾಹರಣೆ ಬೇಕಿಲ್ಲ. ಬಡವ ರಾಸ್ಕಲ್ ಚಿತ್ರದ ಪ್ರಚಾರ ಶುರುವಾಗಿದ್ದೇ ಫುಟ್‍ಪಾತುಗಳಿಂದ. ಇದೂವರೆಗೆ ಯಾರೂ ಟಚ್ ಕೂಡಾ ಮಾಡದೇ ಇದ್ದ ತಳ್ಳುವ ಗಾಡಿ, ಫುಟ್‍ಪಾತ್ ಹೋಟೆಲು, ಎಳನೀರು ಅಂಗಡಿ, ದಿನಸಿ ಅಂಗಡಿ.. ಹೀಗೆ ಬಡವ ಮತ್ತು ಮಧ್ಯಮ ವರ್ಗದವರು ಹೆಚ್ಚು ಹೆಚ್ಚು ಹೋಗುವ ಜಾಗಗಳಲ್ಲಿ ಚಿತ್ರದ ಪ್ರಚಾರ ಮಾಡಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಬಡವ ರಾಸ್ಕಲ್ಸ್.

    ಇಂತಹ ಅಂಗಡಿಗಳಿಗೆ ಪ್ರತಿನಿತ್ಯ ಹೋಗಿ ಬರುವ ಅಜ್ಜಿ ಬಡವ ರಾಸ್ಕಲ್ ಮತ್ತು ರಿಲೀಸ್ ಡೇಟ್ ಬರೆಯೋದನ್ನೇ ಕಲಿತು ಬಿಟ್ಟ ಕಥೆಯನ್ನು ಸ್ವಲ್ಪ ತಮಾಷೆಯಾಗಿ ಮಾಡಿ ವಿಡಿಯೋ ಬಿಟ್ಟಿದ್ದಾರೆ ಬಡವ ರಾಸ್ಕಲ್ಸ್. ಅ ಎಂಬುದೇ ಬರೆಯುವುದಕ್ಕೆ ಆಗದ ಅಜ್ಜಿ ಬಡವ ರಾಸ್ಕಲ್ ಬರೆದಿದ್ದು ಹೇಗೆ ಅನ್ನೋದನ್ನ ತಿಳ್ಕೋಬೇಕು ಅಂದ್ರೆ ಡಿ.24ಕ್ಕೆ ಥಿಯೇಟರಿಗೆ ಹೋಗಿ ನೋಡಬೇಕು.

    ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ತಾರಾ, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ಶಂಕರ್ ಗುರು ಡೈರೆಕ್ಟರ್. ಡಾಲಿ ಬ್ಯಾನರ್‍ನ ಮೊದ ಚಿತ್ರವಿದು. ಆರಂಭದಿಂದಲೂ ಕ್ರಿಯೇಟಿವ್ ಆಗಿಯೇ ಪ್ರೇಕ್ಷಕರನ್ನು ರೀಚ್ ಆಗುತ್ತಿರೋ ಚಿತ್ರತಂಡ ಸಖತ್ತಾಗಿಯೇ ಸಿನಿಮಾ ಪ್ರಮೋಷನ್ ಮಾಡುತ್ತಿದೆ.

  • ಬಡವ ರಾಸ್ಕಲ್ ಫಾರಿನ್ ಟೂರ್ ಶುರು

    ಬಡವ ರಾಸ್ಕಲ್ ಫಾರಿನ್ ಟೂರ್ ಶುರು

    ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ರಾಜ್ಯಾದ್ಯಂತ ಥಿಯೇಟರುಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರೋ ಬಡವ ರಾಸ್ಕಲ್ ವಿದೇಶ ಪ್ರವಾಸ ಹೊರಟಿದ್ದಾನೆ. ಚಿತ್ರವೀಗ ವಿದೇಶಗಳಲ್ಲಿಯೂ ರಿಲೀಸ್ ಆಗೋಕೆ ಸಿದ್ಧವಾಗಿದೆ. ಮೊದಲ ಹಂತವಾಗಿ ಜರ್ಮನಿಯಲ್ಲಿ..

    ಬಡವ ರಾಸ್ಕಲ್‍ಗೆ ಕನ್ನಡಿಗರು ಹೆಚ್ಚಿರುವ ಅಮೆರಿಕ, ದುಬೈ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಥಿಯೇಟರುಗಳಲ್ಲಿ ಯಶಸ್ವೀ 25ನೇ ದಿನದತ್ತ ದಾಪುಗಾಲಿಟ್ಟಿದೆ. ಡಾಲಿ ಧನಂಜಯ್ ಫುಲ್ ಹ್ಯಾಪಿ. ಯಾಕಂದ್ರೆ ಚಿತ್ರಕ್ಕೆ ಅವರು ಹೀರೋ ಅಷ್ಟೇ ಅಲ್ಲವಲ್ಲ.. ನಿರ್ಮಾಪಕರೂ ಹೌದು. ಸಿನಿಮಾವನ್ನು  ಹೆಚ್ಚು ಹೆಚ್ಚು ಜನ ನೋಡಿದಷ್ಟೂ ಡಾಲಿ ಜನಪ್ರಿಯತೆಯ ಜೊತೆ, ಕಲೆಕ್ಷನ್ನೂ ಹೆಚ್ಚಲಿದೆ.

  • ಬಡವ ರಾಸ್ಕಲ್ ವಿಜಯಯಾತ್ರೆ..

    ಬಡವ ರಾಸ್ಕಲ್ ವಿಜಯಯಾತ್ರೆ..

    ಬಡವ ರಾಸ್ಕಲ್ ರಿಲೀಸ್ ದಿನವೇ ಸೂಪರ್ ಹಿಟ್ ಅನ್ನೋದು ಗೊತ್ತಾಗಿತ್ತು. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ಹೊರ ಬರುವಾಗ ಕೊಟ್ಟ ರಿಯಾಕ್ಷನ್ಸ್ ಹಾಗಿತ್ತು. ಕ್ರಿಯೇಟಿವ್ ಪ್ರೊಮೋಷನ್ ಮೂಲಕ ಚಿತ್ರವನ್ನು ಜನರಿಗೆ ಪರಿಚಯಿಸಿದ್ದವರು ಬಡವ ರಾಸ್ಕಲ್ಸ್. ಆದರೆ, ಚಿತ್ರ ನೋಡಿ ಬಂದವರು ಚಿತ್ರದ ಬಗ್ಗೆ ಸ್ವತಃ ಪ್ರಚಾರಕ್ಕಿಳಿದರು. ಡಾಲಿ ಗೆದ್ದಿದ್ದು ಅಲ್ಲಿ. ಹೀಗಾಗಿ ಚಿತ್ರತಂಡ ವಿಜಯ ಯಾತ್ರೆ ಮಾಡಿದೆ.

    ಬೆಂಗಳೂರು, ಚನ್ನಪಟ್ಟಣ, ಹಾಸನ, ಅರಸೀಕೆರೆ,  ಮಳವಳ್ಳಿ, ಮಂಡ್ಯ, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ.. ಹೀಗೆ ಸದ್ಯಕ್ಕೊಂದು ಪುಟ್ಟ ವಿಜಯಯಾತ್ರೆ ಮಾಡಿಕೊಂಡು ಬಂದಿದೆ ಬಡವ ರಾಸ್ಕಲ್ ಟೀಂ. ಅಫ್‍ಕೋರ್ಸ್.. ಇದು ಒಂದು ದಿನದ ಯಾತ್ರೆಯಷ್ಟೇ.. ಯಾತ್ರೆ ಇನ್ನೂ ಹಲವು ಕಡೆ ಹೋಗೋದು ಬಾಕಿ ಇದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಡಾಲಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ.

    ಅಂದಹಾಗೆ ಈ ಸಿನಿಮಾ ಗುಜ್ಜಲ್ ಪ್ರೊಡಕ್ಷನ್ಸ್ ಜೊತೆ ಜಂಟಿ ನಿರ್ಮಾಣದಲ್ಲಿ ಶುರುವಾಗಿತ್ತು. ನಂತರ ಗುಜ್ಜಲ್ ಪ್ರೊಡಕ್ಷನ್ಸ್ ಹಿಂದೆ ಸರಿದಿತ್ತು. ಧನಂಜಯ್ ಇಡೀ ಚಿತ್ರವನ್ನು ಹೆಗಲಿಗೇರಿಸಿಕೊಂಡಿದ್ದರು. ಈಗ ಸಿಂಗಲ್ ಆಗಿಯೇ ಗೆದ್ದಿದ್ದಾರೆ.

  • ಬಡವ ರಾಸ್ಕಲ್ ವಿಜಯಯಾತ್ರೆ..

    ಬಡವ ರಾಸ್ಕಲ್ ವಿಜಯಯಾತ್ರೆ..

    ವರ್ಷದ ಕೊನೆಯ ಬ್ಲಾಕ್ ಬಸ್ಟರ್ ಬಡವ ರಾಸ್ಕಲ್. ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರಿಗೆ ಬಂದೇ ಬರುತ್ತಾರೆ ಎನ್ನುವುದನ್ನು ಸಾಬೀತು ಮಾಡಿ ಗೆದ್ದ ಸಿನಿಮಾ. ಡಾಲಿ ಧನಂಜಯ್ ನಿರ್ಮಾಣದ ಮೊದಲ ಸಿನಿಮಾ. ಚಿತ್ರತಂಡದ ವಿಜಯಯಾತ್ರೆ ಮುಂದುವರೆಯುತ್ತಿದೆ.

    ರಾಮನಗರ, ಚೆನ್ನಪಟ್ಟಣ, ಅರಸೀಕೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಇಳಕಲ್, ಗದಗ, ಹುಬ್ಬಳ್ಳಿ.. ಹೀಗೆ ಎಲ್ಲೆಡೆ ಇಡೀ ಚಿತ್ರತಂಡ ವಿಜಯಯಾತ್ರೆ ಮಾಡಿದೆ. ಹೋದ ಕಡೆಯಲ್ಲೆಲ್ಲ ಅಪ್ಪುಗೆಯ ಅಭಿಮಾನ.

    ಒಂದು ಮೂಲದ ಪ್ರಕಾರ ಚಿತ್ರದ ಕಲೆಕ್ಷನ್ 15 ಕೋಟಿಯನ್ನೂ ದಾಟಿದೆ. ಚಿತ್ರದ ಹೀರೋ ಧನಂಜಯ್, ಹೀರೋಯಿನ್ ಅಮೃತಾ ಅಯ್ಯಂಗಾರ್, ಡೈರೆಕ್ಟರ್ ಶಂಕರ್ ಗುರು ಎಲ್ಲರಿಗೂ ಚಿತ್ರರಂಗದ ಸೀನಿಯರ್ಸ್ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

  • ಬಡವ ರಾಸ್ಕಲ್`ಗೆ ತೆಲುಗು, ತಮಿಳಿನಲ್ಲಿ ಡಿಮ್ಯಾಂಡ್

    ಬಡವ ರಾಸ್ಕಲ್`ಗೆ ತೆಲುಗು, ತಮಿಳಿನಲ್ಲಿ ಡಿಮ್ಯಾಂಡ್

    ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗುವ ಒಂದು ವಾರ ಮುನ್ನ ಪುಷ್ಪ ರಿಲೀಸ್ ಆಗಿತ್ತು. ತೆಲುಗಿನಲ್ಲಷ್ಟೇ ಅಲ್ಲ, ಎಲ್ಲ ಭಾಷೆಗಳಲ್ಲೂ ಹಿಟ್ ಆದ ಸಿನಿಮಾ ಪುಷ್ಪ. ಆ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಬೆಂಕಿ ಹಚ್ಚಿದ್ದವರು ನಮ್ಮ ಡಾಲಿ ಧನಂಜಯ್. ಅತ್ತ ಪುಷ್ಪ ಹಿಟ್ ಆಗುತ್ತಿದ್ದಂತೆಯೇ ಕನ್ನಡದಲ್ಲೂ ಹಿಟ್ ಆಗಿರುವ ಬಡವ ರಾಸ್ಕಲ್‍ಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಒಳ್ಳೆಯ ರೇಟ್‍ಗೆ ಬಡವ ರಾಸ್ಕಲ್‍ನ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿವೆ

    ಎನ್ನಲಾಗಿದೆ. ಅಮೌಂಟ್ ಎಷ್ಟು ಅನ್ನೋದು ಅಧಿಕೃತವಾಗಿ ಗೊತ್ತಾಗಿಲ್ಲ. ಡಬ್ಬಿಂಗ್ ಕೂಡಾ ಶುರುವಾಗಿದೆ. ತಮಿಳಿನಲ್ಲಿ ಬಡವ ರಾಸ್ಕಲ್ ಡೈರೆಕ್ಟ್ ಓಟಿಟಿಗೇ ಬರುತ್ತಿದೆ. ಅಲ್ಲಿಯೂ ಡಬ್ಬಿಂಗ್ ಕೆಲಸ ನಡೆಯುತ್ತಿದೆ.

    ಶಂಕರ್ ಗುರು ನಿರ್ದೇಸನದ ಬಡವ ರಾಸ್ಕಲ್, ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ನಟಿಸಿರೋ ಸಿನಿಮಾ. ಧನಂಜಯ್ ಕೂಡಾ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.

  • ಮಹಿಳಾ ದಿನವೇ ಅಮೃತಾ ಮೇಲಿನ ಭಾವನೆ ಬಿಚ್ಚಿಟ್ಟ ಹೊಯ್ಸಳ ಧನಂಜಯ

    ಮಹಿಳಾ ದಿನವೇ ಅಮೃತಾ ಮೇಲಿನ ಭಾವನೆ ಬಿಚ್ಚಿಟ್ಟ ಹೊಯ್ಸಳ ಧನಂಜಯ

    ಅರೇ.. ಇದು ಎಂಥಾ ಭಾವನೆ..

    ಹೊಯ್ಸಳ ಚಿತ್ರದ ರೊಮ್ಯಾಂಟಿಕ್ ಸಾಂಗ್‍ನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಗಾಯಗೊಂಡಿರುವ ಹೊಯ್ಸಳನ ಗಾಯಕ್ಕೆ ಡೆಟಾಲ್ ಹಚ್ಚುತ್ತಿರುವ ಅಮೃತಾ ಅಯ್ಯಂಗಾರ್.. ಅಮೃತಾ ಕಾಲಿಗೆ ಗೆಜ್ಜೆ ತೊಡಿಸುತ್ತಿರುವ ಡಾಲಿ ಧನಂಜಯ.. ಪ್ರೀತಿಯ ಲೋಕದ ಈ ಭಾವನೆಗೆ ಸಾಹಿತ್ಯ ನೀಡಿದ ಯೋಗರಾಜ್ ಭಟ್.. ಎಲ್ಲರೂ ಪ್ರೀತಿಯಲ್ಲಿ ಮಿಂದೇಳುತ್ತಾರೆ..

    ಪಿಸುನುಡಿಯಲ್ಲು ಸುಖವಿದೆಯೆಂದು ಸನಿಹ ತಿಳಿಸಿ ಹೇಳಿದೆ ಉಸಿರಿನ ಶಾಖ ತವಕದ ತೂಕ ಈ ಹೃದಯ ತಡೆಯದಾಗಿದೆ

    ರೂಪಸಿ ನೀನು ರಾಕ್ಷಸ ನಾನು ಮುತ್ತಿನ ಸೋನೆ ಸುರಿಸುವೆ ಏನೇ ಅದರದ ಅಮೃತ ಈ ಪ್ರಾಣ ಉಳಿಸಲಿ..

    ಎಂಬ ಸಾಲುಗಳು ಹೃದಯಕ್ಕೆ ಮುತ್ತಿಗೆ ಹಾಕುತ್ತವೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹರಿಚರಣ್ ಮಧುರವಾಗಿ ಹಾಡಿದ್ದಾರೆ. ಗುರುದೇವ್ – ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ನಾವು ಈ ಹಾಡಿನಲ್ಲಿ ನೋಡಬಹುದು. ತನ್ನ ಮಡದಿ- ಮನದರಸಿಗೆ ಮನದಾಳದ ಮಾತುಗಳನ್ನು ಈ ಹಾಡಿನ ಮೂಲಕ ಡಾಲಿ ಪ್ರೀತಿಯಿಂದ ವ್ಯಕ್ತಪಡಿಸುತ್ತಿದ್ದಾರೆ. ಬಡವ ರಾಸ್ಕಲ್ ನಲ್ಲಿ ಉಡುಪಿ ಹೋಟೆಲು ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಈಗ

    ಅರೇ ಇದು ಎಂಥಾ ಭಾವನೆ..

    ಎನ್ನುವ ಮೆಲೋಡಿ ಲವ್ ಸಾಂಗ್ ನಲ್ಲಿ ಬಹಳ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿತ್ತು. ಪೊಲೀಸ್ ಡ್ರಾಮಾ ಸಿನಿಮಾ ಆಗಿರುವ ಹೊಯ್ಸಳ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು. ಇನ್ನು ಡಾಲಿ ಧನಂಜಯ್ರ 25ನೇ ಸಿನಿಮಾ ಹೊಯ್ಸಳ ಮಾರ್ಚ್ 30 ರಂದು ತೆರೆಮೇಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.

  • ವಿಂಡೋ ಸೀಟ್ ಅಷ್ಟೆಲ್ಲ ಅವಾಂತರ ಮಾಡುತ್ತಾ?

    ವಿಂಡೋ ಸೀಟ್ ಅಷ್ಟೆಲ್ಲ ಅವಾಂತರ ಮಾಡುತ್ತಾ?

    ಚಿತ್ರದ ಹೀರೋ ತಾಳಗುಪ್ಪ ರಘು. ಆತ ಪ್ರತಿನಿತ್ಯ ಸಾಗರದಿಂದ ತಾಳಗುಪ್ಪಕ್ಕೆ ರೈಲಿಲ್ಲಿ ಓಡಾಡುತ್ತಿರುತ್ತಾನೆ. ಆತನಿಗೆ ವಿಂಡೋ ಸೀಟ್ ಎಂದರೆ ಇಷ್ಟ. ಯಾವಾಗಲೂ ವಿಂಡೋಸೀಟ್ ಇಷ್ಟಪಡುವ ಆತನ ಬಯಕೆಯೇ ಆತನಿಗೆ ಸಂಕಷ್ಟ ತಂದೊಡ್ಡುತ್ತದೆ. ಆತ ಅದನ್ನೆಲ್ಲ ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ.

    ನೀವ್ ನೋಡ್ತಿದ್ದೀರಾ ಟಿವಿ 9. ನಾನು ಶೀತಲ್ ಶೆಟ್ಟಿ ಎನ್ನುತ್ತಿದ್ದ ಆಂಕರ್ ಶೀತಲ್ ಶೆಟ್ಟಿ, ಈಗ ನಿರ್ದೇಶಕಿಯಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ಸಿನಿಮಾ ಇದು. ಒಂದು ವಿಂಡೋ ಸೀಟ್ ಇಟ್ಟುಕೊಂಡು ಏನು ಕಥೆ ಮಾಡಬಹುದಪ್ಪಾ ಎನ್ನುವವರಿಗೆ ಟ್ರೇಲರಿನಲ್ಲೇ ಝಲಕ್ ತೋರಿಸಿದ್ದಾರೆ.

    ರಂಗಿತರಂಗ ನಿರೂಪ್ ಭಂಡಾರಿ ಹೀರೋ ಆಗಿರುವ ಚಿತ್ರವಿದು. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಇಬ್ಬರು ನಾಯಕಿಯರು. ಜುಲೈ 1ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. 

  • ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ

    ಶಿವಣ್ಣ, ಅಪ್ಪು ನೆನೆದು ಭಾವುಕರಾದ ಬಡವ ರಾಸ್ಕಲ್ : ಅಲ್ಲಿತ್ತು ಇಡೀ ಚಿತ್ರರಂಗ

    ಶಿವರಾಜ್‍ಕುಮಾರ್, ಹಂಸಲೇಖ, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ವಸಿಷ್ಠ ಸಿಂಹ, ರಚಿತಾ ರಾಮ್, ನಿಧಿ ಸುಬ್ಬಯ್ಯ..

    ಇವರೆಲ್ಲ ಬಡವ ರಾಸ್ಕಲ್ ಚಿತ್ರತಂಡದಲ್ಲಿಲ್ಲ. ಆದರೆ ಡಾಲಿಯ ಅಭಿಮಾನದ ಬಳಗದಲ್ಲಿರುವವರು. ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ನಿರ್ಮಾಪಕರೂ ಆಗಿರುವ ಚಿತ್ರ ಬಡವ ರಾಸ್ಕಲ್ ಚಿತ್ರಕ್ಕೆ ಶುಭ ಕೋರಲೆಂದು ಬಂದಿದ್ದವರು... ಡಾಲಿ ಧನಂಜಯ್ ಚಿತ್ರರಂಗದಲ್ಲಿ ಗಳಿಸಿರೋ ಆಸ್ತಿ ಬಡವ ರಾಸ್ಕಲ್ ಈವೆಂಟ್‍ನಲ್ಲಿ ಕಾಣುತ್ತಿತ್ತು.

    ಟಗರು ಮಾಡಿದಾಗ ಸಿನಿಮಾ ನೋಡಿದವರೆಲ್ಲ ನಿಮಗಿಂತ ಡಾಲಿ ಪಾತ್ರ ಚೆನ್ನಾಗಿದೆ ಎಂದಾಗ ಖುಷಿಯಾಯ್ತು. ಒಬ್ಬನೇ ಮೆರೆಯೋ ಆಸೆ ನನಗಿಲ್ಲ. 35 ವರ್ಷ ಆಗಿ ಹೋಗಿದೆ. ಈಗ ಧನಂಜಯ್ ನಿರ್ಮಾಪಕರಾಗಿದ್ದಾರೆ. ಒಳ್ಳೆಯದಾಗಲಿ. ನಾನು 24ನೇ ತಾರೀಕು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಆ ದಿನವೇ ಸಿನಿಮಾ ನೋಡಿ ಹೇಗಿದೆ ಅನ್ನೋದನ್ನ ಹೇಳ್ತೀನಿ ಎಂದು ವೇದಿಕೆಯಲ್ಲೇ ಭರವಸೆ ಕೊಟ್ಟರು ಶಿವ ರಾಜ್ ಕುಮಾರ್.

    ನಾನು ನನ್ನ ಚಿತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ.. ಎಂದು ಹಾಕಿಕೊಂಡಿದ್ದೇನೆ ಎಂದರೆ ಅವರು ನನಗೆ  ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಅಪ್ಪು ಸರ್ ಕೂಡಾ ನನಗೆ ಗೈಡ್ ಮಾಡಿದ್ದರು. ಪ್ರೊಡಕ್ಷನ್ ವೇಳೆ ಹಣ ಖರ್ಚು ಮಾಡುವಾಗ ಎಚ್ಚರಿಕೆಯಿರಲಿ, ಬಿಸಿನೆಸ್ ಮೇಲೆ ನಿಗಾ ಇರಲಿ ಎಂದಿದ್ದರು. ಮುಹೂರ್ತಕ್ಕೆ ಬರೋಕೆ ಆಗಲಿಲ್ಲ ಎಂದು ಕರೆಸಿಕೊಂಡು ಅವರೇ ಪೋಸ್ಟರ್ ರಿಲೀಸ್ ಮಾಡಿ ಬೆನ್ನು ತಟ್ಟಿದ್ದರು ಎಂದು ನೆನಪಿಸಿಕೊಂಡರು ಡಾಲಿ ಧನಂಜಯ್.

    ಬಡವ ರಾಸ್ಕಲ್ ಇದೇ ವಾರ ರಿಲೀಸ್ ಆಗುತ್ತಿದ್ದು, ಶಂಕರ್ ಗುರು ಡೈರೆಕ್ಷನ್ ಇದೆ. ಅಮೃತಾ ಅಯ್ಯಮಗಾರ್, ತಾರಾ, ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು.. ಮೊದಲಾದವರು ನಟಿಸಿರೋ ಸಿನಿಮಾ. ಹಾಡುಗಳು ಕ್ಲಿಕ್ ಆಗಿವೆ. ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಜಸ್ಟ್ ಎಂಜಾಯ್..

  • ಹೊಯ್ಸಳ ಭರ್ಜರಿ ಕಲೆಕ್ಷನ್ : ಮೊದಲ ವಾರ ಎಷ್ಟು..?

    ಹೊಯ್ಸಳ ಭರ್ಜರಿ ಕಲೆಕ್ಷನ್ : ಮೊದಲ ವಾರ ಎಷ್ಟು..?

    ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರದಲ್ಲಿರೋ, ನವೀನ್ ಶಂಕರ್ ವಿಲನ್ ಆಗಿ ಆರ್ಭಟಿಸಿರುವ  ಹೊಯ್ಸಳ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ 2ನೇ ವಾರಕ್ಕೆ ಕಾಲಿಟ್ಟಿರುವ ಹೊಯ್ಸಳ ಚಿತ್ರ, ವಿಶೇಷವಾಗಿ ಉತ್ತರ ಕರ್ನಾಟದಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಇದು ಧಂಜಯ್ ನಟನೆಯ 25ನೇ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.

    ಟ್ವಿಟರ್ನಲ್ಲಿ ಒಬ್ಬರು ಹೊಯ್ಸಳ ಕಲೆಕ್ಷನ್ ಮೊದಲ ವಾರ 2.9 ಕೋಟಿ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರಿಯಾಕ್ಷನ್ ನೀಡಿರುವ ನಿರ್ಮಾಪಕ ಕಾರ್ತಿಕ್ ಗೌಡ ಇನ್ನೂ ಜಾಸ್ತಿ ಸರ್ ಎಂದು ರಿಯಾಕ್ಷನ್ ಕೊಟ್ಟಿದ್ಧಾರೆ.

    ಗುರುದೇವ್ ಹೊಯ್ಸಳ ಸಿನಿಮಾ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ. ಕನ್ನಡ ಭಾಷಾಭಿಮಾನದ ಜೊತೆ ಜೊತೆಗೆ ಮರ್ಯಾದ ಹತ್ಯೆಯಂತಹ ಸೂಕ್ಷ್ಮ ವಿಷಯವನ್ನೂ ಚಿತ್ರದಲ್ಲಿ ಸೂಕ್ಷ್ಮವಾಗಿ ಮನಮುಟ್ಟುವಂತೆ ತೋರಿಸಲಾಗಿದೆ. ದಕ್ಷ ಪೊಲೀಸ್ ಅಧಿಕಾರಿಯ ಕಾರ್ಯಾಚರಣೆಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ. ಹೊಯ್ಸಳನ ಪೊಲೀಸ್ಗಿರಿ ಹೇಗಿರುತ್ತದೆ ಅನ್ನೋದನ್ನು ಚಿತ್ರದಲ್ಲಿ ಸಖತ್ ಆಗಿ ತೋರಿಸಲಾಗಿದೆ.  ಬಿಗಿಯಾದ ನಿರೂಪಣೆ ಪ್ಷೇಕ್ಷಕರನ್ನು ಕುರ್ಚಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಚಿತ್ರತಂಡ ಮಾತ್ರ ಖುಷಿಯಾಗಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಮರು ದಿನವೇ ಡಾಲಿ ಧನಂಜಯಗೆ 1 ಕೋಟಿ ರೂ. ಮೌಲ್ಯದ ಟೊಯೋಟೊ ವೆಲ್ಫೈರ್ ಕಾರನ್ನು ನಿರ್ಮಾಪಕರು ಉಡುಗೊರೆಯಾಗಿ ನೀಡಿದ್ದರು.

  • ಹೊಯ್ಸಳನ ಖದರು..ಖಬರು..ಬ್ಯಾರೇನ ಐತಿ..

    ಹೊಯ್ಸಳನ ಖದರು..ಖಬರು..ಬ್ಯಾರೇನ ಐತಿ..

    ನೀನು ಕಂಡಂಗಲ್ಲ ನಮ್ಮ ಬಾಳೇವು..

    ಬ್ಯಾರೇನ ಐತಿ.. ಬ್ಯಾರೇನ ಐತಿ..

    ಹುಟು ಬಾಳೇವು..

    ಬ್ಯಾರೇನ ಐತಿ.. ಬ್ಯಾರೇನ ಐತಿ..

    ಇದನ್ನು ಬರೆದವರೂ ಯೋಗರಾಜ್ ಭಟ್. ಅರೆ ಇದು ಎಂಥಾ ಭಾವನೆ.. ಎಂಬ ದಂಪತಿಗಳ ಪ್ರೇಮಗೀತೆ ಬರೆದು ಹೃದಯದಲ್ಲೊಂದು ಭಾವನೆಗಳ ಸಪ್ಪಳ ಮೂಡಿಸಿದ್ದ ಯೋಗರಾಜ್ ಭಟ್, ಈ ಹಾಡಿನಲ್ಲಿ ಬೇರೆಯದೇ ಜಗತ್ತನ್ನು ಪರಿಚಯಿಸಿದ್ದಾರೆ. ಈ ಹಾಡು ಕೇವಲ ಹಾಡಲ್ಲ.. ಜೀವನ ದರ್ಶನ. ಉತ್ತರ ಕರ್ನಾಟಕದ ಜನಪದ ಸೊಗಡಿರುವ ಈ ಹಾಡಿನಲ್ಲಿ ಜೀವನದ ದರ್ಶನವನ್ನೇ ಮಾಡಿಸಿದ್ದಾರೆ. ಜನಪದ ಸಂಗೀತದ ಹಿನ್ನೆಲೆಯಲ್ಲಿಯೇ ಬಂದಿರುವ ಹಾಡಿಗೆ ಅಜನೀಶ್ ಲೋಕನಾಥ್ ಅದ್ಭುತ ಸಂಗೀತವನ್ನೂ ನೀಡಿದ್ದಾರೆ. ಸ್ವತಃ ಹಾಡನ್ನೂ ಹಾಡಿರುವ ಅಜನೀಶ್, ಹಾಡಿನ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹಾಡಿನ ಪ್ರತಿ ಸಾಲುಗಳನ್ನು ಅನುಭವಿಸಿ ಹಾಡಿದ್ದಾರೆನ್ನಿಸುತ್ತಿದೆ.

    ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚುವರಿ ಚಿತ್ರೀಕರಣ ಮಾಡಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೂ ಹಾಗೂ ಉತ್ತರ ಕರ್ನಾಟಕಕ್ಕೂ ಏನೋ ಒಂದು ವಿಶೇಷ ಕನೆಕ್ಷನ್ ಇರುವುದಂತೂ ಹೌದು. ಇದನ್ನು ಚಿತ್ರತಂಡವೇ ಸಾಕಷ್ಟು ಬಾರಿ ಹೇಳಿದ್ದುಂಟು. ಬ್ಯಾರೇನೇ ಐತಿ  ಎನ್ನುವ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಗುರುದೇವ್ ಹೊಯ್ಸಳ ಚಿತ್ರದಲ್ಲಿ ಅಲೆಮಾರಿಗಳಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಂತಿದೆ. ಈ ಚಿತ್ರಕ್ಕೂ ಅಲೆಮಾರಿಗಳಿಗೂ ಏನು ಸಂಬಂಧ, ಯಾಕೆ ಅವರ ಪಂಗಡವನ್ನು ಈ ಸಿನಿಮಾ ಹಾಡಿನಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಸಿನೆಮಾದಲ್ಲೇ ನೋಡಬೇಕಿದೆ.

    ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ಗುರುದೇವ್ ಹೊಯ್ಸಳ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ವಿಜಯ್ ಎನ್ ರವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.  ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.