` corona virus, - chitraloka.com | Kannada Movie News, Reviews | Image

corona virus,

  • ಯೋಗರಾಜ್ ಭಟ್ ನಿರ್ದೇಶನದಲ್ಲಿ ಸಿಎಂ, ಮಿನಿಸ್ಟರ್ಸ್, ಕಮಿಷನರ್..

    yogaraj bhat to direct a movie on corona virus

    ನಿರ್ದೇಶಕ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರ ಕ್ಯಾಮೆರಾ ಎದುರು ಇರುವುದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್. ನೂರಾರು ಪೊಲೀಸರು. ರೀಲ್ ಅಲ್ಲ, ರಿಯಲ್ ಪೊಲೀಸರು. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳೆಲ್ಲ ಭಟ್ಟರ ಕ್ಯಾಮೆರಾದಲ್ಲಿ ಸೆರೆಯಾಗಲಿದ್ದಾರೆ.

    ಅರೆ.. ಲಾಕ್ ಡೌನ್ ಮಧ್ಯೆ ಭಟ್ಟರು ಸಿನಿಮಾ ಮಾಡುತ್ತಿದ್ದಾರಾ ಎಂದುಕೊಳ್ಳಬೇಡಿ. ಅವರ ನಿರ್ದೇಶನದ ಗಾಳಿಪಟ 2ಗೆ ಲಾಕ್ ಡೌನ್ ಬ್ರೇಕ್ ಹಾಕಿದೆ. ಈಗ ಅವರು ಮಾಡ್ತಿರೋದು ಡಾಕ್ಯುಮೆಂಟರಿ.

    ಕೊರೋನಾ ವಾರಿಯರ್ಸ್‍ಗೆ ಗೌರವ ಸೂಚಿಸುವ ಸಲುವಾಗಿ ಭಟ್ಟರು ನಿದೇಶಿಸುತ್ತಿರುವ ಸಾಕ್ಷ್ಯಚಿತ್ರದಲ್ಲಿ ಹೀರೋಗಳೆಂದರೆ ಡಾಕ್ಟರ್ಸ್ ಮತ್ತು ಪೊಲೀಸ್. ಒಂದು ವಿಡಿಯೋ ಸಾಂಗ್ ಕೂಡಾ ಇರಲಿದ್ದು, ಭಟ್ಟರೇ ಸಾಹಿತ್ಯ ಬರೆದಿದ್ದಾರೆ.

  • ರಾಬರ್ಟ್ ಏಪ್ರಿಲ್'ಗೆ ಬರೋದು ಪಕ್ಕಾನಾ..?

    will roberrt release amidst corona virus scare ?

    ರಾಬರ್ಟ್ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬರೋದು ಪಕ್ಕಾನಾ..? ಅಂಥಾದ್ದೊಂದು ಪ್ರಶ್ನೆ ಹುಟ್ಟಿಸಿರುವುದು ಕೊರೋನಾ. ಮಾರ್ಚ್ 12ರಂದು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಚಿತ್ರದ 90% ಕೆಲಸಗಳು ಮುಗಿದಿವೆ. ಏಪ್ರಿಲ್‍ನಲ್ಲಿ ರಿಲೀಸ್ ಆಗೋಕೆ ಫುಲ್ ಜೋರ್ಶನಲ್ಲಿ ಬರುತ್ತಿದ್ದ ರಾಬರ್ಟ್, ಏಪ್ರಿಲ್‍ಗೆ ಬರೋದು ಕನ್‍ಫರ್ಮ್ ಹೌದಾ ಅಲ್ವಾ..? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

    ಮಾರ್ಚ್ 12ರಂದು ದರ್ಶನ್ ಶೂಟಿಂಗ್ ಮುಗೀತು ಎಂದು ಟ್ವೀಟ್ ಮಾಡಿದ್ದಾರೆ. ಅದಾದ ಮೇಲೆ ಕೊರೋನಾ ನಿಷೇಧ ಬೆನೇರಿದೆ. ಮುಂದಾ..?

  • ಲಾಕ್ ಡೌನ್ ಸಿನೆಮಾ 6.0 - ಜೂನ್ 15ರವರೆಗೆ ಸಿನಿಮಾ ಇಲ್ಲ..

    no fils till june 5th

    ಚಿತ್ರರಂಗದ ಸಿದ್ಧತೆ, ನಿರೀಕ್ಷೆ ಎರಡೂ ಹುಸಿ ಯಾಗುತ್ತಿದೆ. ಜೂನ್ 1ರಿಂದ ಚಿತ್ರ ಪ್ರದರ್ಶನ ಮತ್ತು ಸಿನೆಮಾ ಚಿತ್ರೀಕರಣ ಮಾಡಲು ಅನುಮತಿ ಸಿಗುವ ಸಾಧ್ಯತೆ ಇಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ‌ ಪದಾಧಿಕಾರಿಗಳ ಜತೆ ಸಿಎಂ ಸಭೆಯಲ್ಲಿ ಈ ಮಾತು ವ್ಯಕ್ತವಾಗಿದೆ ಎಂದು ಚಿತ್ರಲೋಕದ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. 

    ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಡಿ ಮತ್ತು

    ಚಿತ್ರಮಂದಿರಗಳನ್ನ ತೆರೆಯಲು ಅವಕಾಶ ಕೊಡಿ ಹಾಗೂ ಚಿತ್ರರಂಗಕ್ಕೆ ಸಹಾಯಧನ ಘೋಷಣೆ ಮಾಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ನಿಯೋಗ ಮನವಿ ಸಲ್ಲಿಸಿತು. ಈ ವೇಳೆ ಯಡಿಯೂರಪ್ಪ ಥಿಯೇಟರ್ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಾಧ್ಯತೆ ನಿರಾಕರಿಸಿದ್ದಾರೆ.

    ಆದರೆ ಚಿತ್ರೀಕರಣಕ್ಕೆ ಅನುಮತಿ ನೀಡುವ ಕುರಿತು ಪ್ರಧಾನಿ ಮೋದಿ ಆದೇಶ ಎದುರು ನೋಡುತ್ತಿದ್ದಾರೆ. ಅಲ್ಲಿಗೆ ಇದು ಚಿತ್ರರಂಗದ ಪಾಲಿಗೆ ಲಾಕ್ ಡೌನ್ 6.0. ಏಕೆಂದರೆ ಮೊದಲ ಲಾಕ್ ಡೌನ್ ಮುನ್ನವೇ ಚಿತ್ರಪ್ರದರ್ಶನ ರದ್ದಾಗಿತ್ತು

  • ವೀಕೆಂಡ್ ಕಫ್ರ್ಯೂ & 50:50 : ಚಿತ್ರರಂಗಕ್ಕೆ ಬರೆ

    ವೀಕೆಂಡ್ ಕಫ್ರ್ಯೂ & 50:50 : ಚಿತ್ರರಂಗಕ್ಕೆ ಬರೆ

    ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ್ದ ಸರ್ಕಾರ, ಕೆಲವೇ ತಿಂಗಳಲ್ಲಿ ಅದನ್ನು ವಾಪಸ್ ಪಡೆದುಕೊಂಡುಬಿಟ್ಟಿದೆ. ಮತ್ತೊಮ್ಮೆ ವೀಕೆಂಡ್ ಕಫ್ರ್ಯೂ ಮತ್ತು 50:50 ರೂಲ್ಸ್ ಘೋಷಿಸಿದೆ. ನೀವೆಲ್ಲರೂ ಪಾಲಿಸಿ, ಕೊರೊನಾ ಓಡಿಸಿ ಎನ್ನುತ್ತಿದೆ ಸರ್ಕಾರ. ಅಫ್‍ಕೋರ್ಸ್.. ರಾಜಕಾರಣಿಗಳ ಯಾವುದೇ ಸಭೆ ಸಮಾರಂಭಗಳಿಗೂ ಕೊರೊನಾ ಬರಲ್ಲ ಎನ್ನುವುದು ಬೇರೆ ಮಾತು.

    ಇತ್ತೀಚೆಗಷ್ಟೇ ಉಸಿರು ಬಿಡುತ್ತಿದ್ದ ಚಿತ್ರರಂಗದಲ್ಲೀಗ ಮತ್ತೆ ಸಿನಿಮಾ ರಿಲೀಸ್ ಮಾಡಬೇಕಾ? ಬೇಡವಾ? 50:50 ಪ್ರೇಕ್ಷಕರಿದ್ದಾಗ ರಿಸ್ಕ್ ಬೇಕಾ? ಎಂಬ ಚಿಂತೆ ಶುರುವಾಗಿದೆ. ಈಗಾಗಲೇ ರಿಲೀಸ್ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದವರು ನಿಧಾನವಾಗಿ ಹೆಜ್ಜೆ ಹಿಂದಿಡುತ್ತಿದ್ದಾರೆ. ದೊಡ್ಡ ದೊಡ್ಡ ಚಿತ್ರಗಳೂ ಹಿಂದೆ ಸರಿಯುತ್ತಿವೆ.

    ಏಕ್ ಲವ್ ಟ್ರೇಲರ್ ಮುಂದಕ್ಕೆ ಹೋಗಿದೆ. ತೆಲುಗಿನ ಪ್ಯಾನ್ ಇಂಡಿಯಾ ರಾಧೇ ಶ್ಯಾಮ್ ಧೈರ್ಯವನ್ನು ಪ್ರದರ್ಶಿಸಿ ಸೈಲೆಂಟ್ ಆಗಿದೆ. ಅದು ಸಂಕ್ರಾಂತಿಗೆ ರಿಲೀಸ್ ಇಲ್ಲ. ಆರ್‍ಆರ್‍ಆರ್ ಬೆನ್ನಲ್ಲೇ ತೆಲುಗಿನ ಕೆಲವು ದೊಡ್ಡ ನಟರ ಚಿತ್ರಗಳು ಬಾಕ್ಸ್‍ನಲ್ಲಿರೋದೇ ಸದ್ಯಕ್ಕೆ ಸೇಫು ಎನ್ನುತ್ತಿವೆ. ತಮಿಳಿನಲ್ಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಅಜಿತ್ ಚಿತ್ರ ಸಂಕ್ರಾಂತಿಗೆ ರಿಲೀಸ್ ಎಂದೇನೋ ಘೋಷಿಸಿದೆ. ಆದರೆ... ಅದೂ ಕೂಡಾ ಯಾವಾಗ ಬೇಕಾದರೂ ನಿರ್ಧಾರ ಬದಲಿಸಬಹುದು.. ಚಿತ್ರರಂಗಕ್ಕೆ ಬರೆಯ ಮೇಲೆ ಬರೆ..

    ಇದರಿಂದ ಹೊರೆ ಮತ್ತು ಬರೆ ಎರಡೂ ಬೀಳುವುದು ಜನರಿಗೇ ಹೊರತು, ಸರ್ಕಾರಕ್ಕಲ್ಲ. ಸರ್ಕಾರಕ್ಕೆ ಟ್ಯಾಕ್ಸ್ ನಿಧಾನವಾಗಬಹುದು, ಕಡಿಮೆಯಾಗಲ್ಲ. ಜನರಿಂದ ವಸೂಲಿಯಾಗುವ ದಂಡ ಇನ್ನೊಂದು ಬೋನಸ್. ದುಡಿಮೆಯೂ ಇಲ್ಲದೆ, ತೆರಿಗೆಯನ್ನೂ ಕಟ್ಟುತ್ತಾ, ಜೀವನ ಹೊರೆಯಬೇಕಾದ ಹೊಣೆ ಜನರದ್ದು. ಚಿತ್ರರಂಗದ ಪರಿಸ್ಥಿತಿಯಂತೂ ಇನ್ನೂ ಸಂಕಷ್ಟಕ್ಕೆ ಸಿಲುಕಿದೆ.

  • ವೈರಸ್ ಎಫೆಕ್ಟ್ : ಚೆನ್ನೈನಲ್ಲಿ 2 ಚಿತ್ರಮಂದಿರ ಕ್ಲೋಸ್

    corona effect, 2 single screen theaters in chennai shut down

    ಚೈನೀಸ್ ವೈರಸ್ ಅದೆಷ್ಟೋ ಕೈಗಾರಿಕೆಗಳನ್ನು ಬಾಗಿಲು ಹಾಕಿಸಿದೆ. ಸಾವಿರಾರು ಉದ್ಯಮಿಗಳನ್ನು ಬೀದಿಗೆ ತಳ್ಳಿದೆ. ಕೋಟ್ಯಧಿಪತಿಗಳನ್ನು ಲಕ್ಷಾಧಿಪತಿಗಳನ್ನಾಗಿಸಿದೆ. ಕೋಟ್ಯಂತರ ಕನಸುಗಳನ್ನು ಸಮಾಧಿ ಮಾಡಿದೆ. ಚಿತ್ರರಂಗವೂ ಅದಕ್ಕೆ ಹೊರತಲ್ಲ. ಕೋವಿಡ್ 19 ಅಟ್ಟಹಾಸಕ್ಕೆ ಚೆನ್ನೈನ 2 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುವ ಹಂತ ತಲುಪಿವೆ.

    ಚೆನ್ನೈನ ಎವಿಎಂ ರಾಜೇಶ್ವರಿ ಚಿತ್ರಮಂದಿರಕ್ಕೆ 41 ವರ್ಷಗಳ ಇತಿಹಾಸವಿದೆ. ಈ ಟಾಕೀಸ್ ಮೊದಲ ದಿನ, ಮೊದಲ ಶೋಗೆ ಫೇಮಸ್ ಆಗಿದ್ದ ಚಿತ್ರಮಂದಿರ. ಇನ್ನೊಂದು ಚೆನ್ನೈನ ಓಲ್ಡ್ ವಾಶರ್`ಮನ್ ಪೇಟೆಯಲ್ಲಿರುವ ಮಹಾರಾಣಿ ಚಿತ್ರಮಂದಿರ. ಎರಡೂ ಥಿಯೇಟರುಗಳೂ ಶಾಶ್ವತವಾಗಿ ಬಾಗಿಲು ಹಾಕುತ್ತಿವೆ.

    ಚೆನ್ನೈನಲ್ಲಿ ಮಲ್ಟಿಪ್ಲೆಕ್ಸ್`ಗಳಿಗಿಂತ ಸಿಂಗಲ್ ಸ್ಕ್ರೀನ್ ಥಿಯೇಟರುಗಳಿಗೇ ಜನ ಹೆಚ್ಚು. ಅಂಥಾದ್ದರಲ್ಲಿ ಚೆನ್ನೈನ ಸ್ಥಿತಿಯೇ ಹೀಗಾದರೆ, ಮೊದಲೇ ಪ್ರೇಕ್ಷಕರ ಬರ ಎದುರಿಸುತ್ತಿರುವ ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಥಿಯೇಟರ್`ಗಳ ಕಥೆ ಏನು..? ಭವಿಷ್ಯ ಕಣ್ಣೆದುರು ಭಯಾನಕವಾಗಿ ಗೋಚರಿಸುತ್ತಿದೆ.

  • ಶೂಟಿಂಗ್`ಗೆ ಇದ್ದ ನಿರ್ಬಂಧ ತೆರವು

    government permits shooting of stalled movie and tv serials only

    ಸಿನಿಮಾಗಳ ಚಿತ್ರೀಕರಣಕ್ಕೆ ಇದ್ದ ಕೊರೊನಾ ಬಂಧನವನ್ನು ರಾಜ್ಯ ಸರ್ಕಾರ ಮುಕ್ತಗೊಳಿಸಿದೆ. ಆದರೆ, ಈಗಲೂ ಸಂಪೂರ್ಣ ಮುಕ್ತವಾಗಿಲ್ಲ. ಈಗಾಗಲೇ ಚಿತ್ರೀಕರಣ ಆರಂಭಿಸಿದ್ದ, ಅರ್ಧಕ್ಕೇ ನಿಂತ ಚಿತ್ರಗಳಿಗಷ್ಟೇ ಶೂಟಿಂಗ್, ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ. ಹೊಸ ಚಿತ್ರಗಳಿಗೆ ಕೊರೊನಾ ಬ್ರೇಕ್ ಮುಂದುವರಿದಿದೆ. ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಓಪನ್ ಮಾಡೋಕೂ ಇನ್ನೂ ಅನುಮತಿ ಸಿಕ್ಕಿಲ್ಲ.

    ಕೊರೊನಾಗೂ ಮುನ್ನ ಚಾಲ್ತಯಲ್ಲಿದ್ದ ಚಿತ್ರಗಳಿಗಷ್ಟೇ ಈ ಅವಕಾಶ ಸಿಕ್ಕಿದೆ. ಅದನ್ನು ಗುರುತಿಸಲು ಸರ್ಕಾರ ಬಳಿ ಇರೋ ಮಾನದಂಡ ಏನು ಅನ್ನೊದು ಗೊತ್ತಿಲ್ಲ. ಇನ್ನು ಟಿವಿ ಚಿತ್ರೀಕರಣಗಳಿಗೂ ಇದ್ದ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ. ಆದರೆ ರಿಯಾಲಿಟಿ ಶೋಗೆ ಅನುಮತಿ ಸಿಕ್ಕಿದೆಯಾ ಇಲ್ಲವಾ ಅನ್ನೋದರ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.

     

     

  • ಸೀರಿಯಲ್ ಶೂಟಿಂಗ್ ಲಾಕ್ ಓಪನ್

    TV Serial Shooting Image

    ಹೆಚ್ಚೂ ಕಡಿಮೆ 2 ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಲಾಕ್ ಡೌನ್ ಓಪನ್ ಆಗಿದೆ. ಮಹತ್ವದ ಸಭೆಯ ನಂತರ ರಾಜ್ಯ ಸರ್ಕಾರ ಟಿ ವಿ ಸೀರಿಯಲ್ ಶೂಟಿಂಗ್ಗೆ ಅನುಮತಿ ನೀಡಿದೆ. ಆದರೆ, ಷರತ್ತುಗಳು ಅನ್ವಯವಾಗುತ್ತಿವೆ. ಒಳಾಂಗಣ ಚಿತ್ರೀಕರಣಕ್ಕಷ್ಟೇ ಅನುಮತಿ ನೀಡಿದ್ದು, ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್ಗೂ ಅನುಮತಿ ಇಲ್ಲ. ರಿಯಾಲಿಟಿ ಶೋಗಳಿಗೂ ಇಲ್ಲ.

    ಬಾರ್ ಓಕೆ.. ಚಿತ್ರಮಂದಿರಗಳಿಗೆ ಇಲ್ಲ ಯಾಕೆ..? - ಕೆ.ಎಂ.ವೀರೇಶ್

    ಮನೆ ಒಳಭಾಗದಲ್ಲಿ ನಡೆಸುವ ಚಿತ್ರೀಕರಣಕ್ಕೆ ಮಾತ್ರವೇ ಅನುಮತಿ ನೀಡಲಾಗಿದ್ದು, ಎಲ್ಲ ಕೊರೊನಾ ಮುಂಜಾಗ್ರತಾ ಸೂತ್ರಗಳನ್ನು ಅನುಸರಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. 

    ಸುಮಾರು 6 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಇದರಿಂದ ಕೆಲಸ ಸಿಗಲಿದೆ. ಸುಮಾರು ತಿಂಗಳಿಂದ ಟಿವಿಗಳಲ್ಲಿ ಹೊಸ ಸೀರಿಯಲ್ ಪ್ರಸಾರವಾಗುತ್ತಿರಲಿಲ್ಲ. ಹಳೆಯ ಕಂತುಗಳನ್ನೇ ರಿಪೀಟ್ ಮಾಡುತ್ತಿದ್ದ ಟಿವಿ ಚಾನೆಲ್ಗಳಿಗೆ ಇದು ರಿಲೀಫ್ ಕೊಡಲಿದೆ. 

    State To Decide On Allowing Shooting of Movies & TV Shows

    ಸೀರಿಯಲ್ ಶೂಟಿಂಗ್ ಒಳಾಂಗಣದಲ್ಲಿ ಮಾತ್ರವೇ ನಡೆಯುವ ಕಾರಣ, ಚಿತ್ರೀಕರಣಕ್ಕೆ ಅನುಮತಿ ನೀಡಿದ್ದೇವೆ. ಸಿನಿಮಾ, ರಿಯಾಲಿಟಿ ಶೋ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿಲ್ಲ. ಎಲ್ಲರೂ ಕೂಡಾ ಕೊರೊನಾ ಶಿಸ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

    Also See

    ಬಾರ್ ಓಕೆ.. ಚಿತ್ರಮಂದಿರಗಳಿಗೆ ಇಲ್ಲ ಯಾಕೆ..? - ಕೆ.ಎಂ.ವೀರೇಶ್

    State To Decide On Allowing Shooting of Movies & TV Shows

    S V Babu's Video Salutes Police Department

    ಮೊಬೈಲ್‍ನಲ್ಲೇ ಥಿಯೇಟರ್.. ಒಟಿಟಿ ಮ್ಯಾಜಿಕ್..

    Exhibitors Most Hit Due To Corono Lockdown - Exclusive

    India Under Total Lockdown for 21 Days!

    Sandalwood Supports Janata Curfew

  • ಸೀರಿಯಲ್ ಶೂಟಿಂಗ್ ಶುರುವಾಯ್ತು, ಸಿನಿಮಾಗೆ ಯಾವಾಗ..?

    serial shootings have begun, when will film shootings begins

    ಇನ್ನು ಕೆಲವೇ ದಿನ. ಜೂನ್ 01ರಿಂದ ಟಿವಿಗಳಲ್ಲಿ ಧಾರಾವಾಹಿಗಳ ಪ್ರಸಾರ ಶುರುವಾಗಲಿದೆ. ಇಷ್ಟು ದಿನ ಹಳೆಯ ಸಂಚಿಕೆಗಳನ್ನೇ ನೋಡಿ ನೋಡಿ ಬೇಸತ್ತಿದ್ದ ಜನರಿಗೆ ಜೂನ್ 01ರಿಂದ ಧಾರಾವಾಹಿಗಳ ಹೊಸ ಸಂಚಿಕೆಗಳನ್ನು ನೋಡುವ ಭಾಗ್ಯ. ಮೇ 25ರಿಂದ ಚಿತ್ರೀಕರಣ ಶುರುವಾಗಿದ್ದು, ಪ್ರತಿ ಶೂಟಿಂಗ್ ಸ್ಪಾಟ್‍ನಲ್ಲೂ ಕೊರೊನಾ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.

    ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸಿಂಗ್.. ಎಲ್ಲವನ್ನೂ ಫಾಲೋ ಮಾಡುತ್ತಿದ್ದಾರೆ ಕಿರುತೆರೆ ತಂತ್ರಜ್ಞರು ಮತ್ತು ಕಲಾವಿದರು.

    ಆದರೆ.. ಸಿನಿಮಾಗಳ ಚಿತ್ರೀಕರಣ ಯಾವಾಗ ಶುರುವಾಗುತ್ತೆ..? ಸದ್ಯಕ್ಕೆ ಸಿನಿಮಾರಂಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಮಾತ್ರ. ಉಳಿದಂತೆ ಚಿತ್ರೀಕರಣಕ್ಕಾಗಲೀ, ರಿಲೀಸ್ ಮಾಡೋಕಾಗಲೀ ಪರ್ಮಿಷನ್ ಇಲ್ಲ. ಸರ್ಕಾರ ಈ ತಕ್ಷಣವೇ ಎಲ್ಲದಕ್ಕೂ ಓಕೆ ಎಂದರೂ ಚಿತ್ರೀಕರಣ ಶುರುವಾಗೋಕೆ, ಸಿನಿಮಾಗಳು ರಿಲೀಸ್ ಆಗೋಕೆ ಕನಿಷ್ಠವೆಂದರೂ ಒಂದು ತಿಂಗಳು ಸಮಯ ಬೇಕಾದೀತು.

  • ಸುದೀಪ್ ಅನಾರಾಗ್ಯಕ್ಕೆ ಕೊರೊನಾ ಕಾರಣ

    ಸುದೀಪ್ ಅನಾರಾಗ್ಯಕ್ಕೆ ಕೊರೊನಾ ಕಾರಣ

    ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯ ಎಂದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಫಿಟ್‍ನೆಸ್ ಬಗ್ಗೆ ಇನ್ನಿಲ್ಲದಷ್ಟು ಜಾಗೃತಿ ವಹಿಸುವ ಸುದೀಪ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆಯಾ..? ಸುದೀಪ್ ಉತ್ತರ ಕೊಟ್ಟಿರಲಿಲ್ಲ. ಈಗ ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ. ಹೌದು, ನನಗೆ ಆಗಿದ್ದುದು ಕೊರೊನಾ. 3 ವಾರಗಳ ಐಸೋಲೇಷನ್ ಆಗಿದೆ. ಈಗ ಚೇತರಿಸಿಕೊಂಡಿದ್ದೇನೆ ಎಂದಿದ್ದಾರೆ. ಕೊರೊನಾ ಅನುಭವದ ಪಾಠಗಳು, ಬೇರೆಯವರಿಗೆ ಮಾರ್ಗದರ್ಶನ.. ಏನೂ ಇಲ್ಲ. ಒಬ್ಬೊಬ್ಬರ ದೇಹ ಒಂದೊಂದು ರೀತಿ ಎಂದಿದ್ದಾರೆ ಸುದೀಪ್.

    ಬಿಗ್‍ಬಾಸ್ ನಿರೂಪಣೆ ಮಾಡುವಾಗ ಕಾಲುಗಳಲ್ಲಿ ಶುರುವಾದ ನೋವು, ನಂತರ ಚಿಕಿತ್ಸೆ ಪಡೆದದ್ದು ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ ಸುದೀಪ್. ಇದೆಲ್ಲದರ ಮಧ್ಯೆಯೂ ಟ್ರಸ್ಟ್ ಮೂಲಕ ಸೇವೆ ಮುಂದುವರೆದಿದೆ. ಕಿಚ್ಚ ಚಾರಿಟಬಲ್ ಟ್ರಸ್ಟ್‍ನಿಂದ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದೇವೆ. ಮುಂದೆಯೂ ನಡೆಯುತ್ತವೆ ಎಂದಿದ್ದಾರೆ ಸುದೀಪ್.

  • ಸುದೀಪ್, ದರ್ಶನ್‍ಗೂ ಕಾಡುತ್ತಿದೆ ಕೊರೊನಾ

    sudeep, darshan's house under corona threat

    ಕೊರೊನಾ ವೈರಸ್ ಯಾರನ್ನೂ ಬಿಟ್ಟಿಲ್ಲ. ಟೆನಿಸ್ ಲೋಕದ ದಿಗ್ಗಜ ಜೊಕೊವಿಕ್ ಅವರನ್ನೇ ಅಟಕಾಯಿಸಿಕೊಂಡಿರುವ ಕೊರೊನಾ, ಜನ ಸಾಮಾನ್ಯರನ್ನಂತೂ ಬೇಟೆಯಾಡುತ್ತಿದೆ. ಕನ್ನಡದ ಸ್ಟಾರ್‍ಗಳಾದ ಸುದೀಪ್ ಮತ್ತು ದರ್ಶನ್ ಅವರಿಗೂ ಕೊರೊನಾ ಕಾಟ ಕೊಡುತ್ತಿದೆ.

    ಸುದೀಪ್ ಅವರ ಜೆಪಿ ನಗರದಲ್ಲಿರೋ ಮನೆಯ ಪಕ್ಕದಲ್ಲೇ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ಸಹಜವಾಗಿಯೇ ಸುದೀಪ್ ಮತ್ತವರ ಕುಟುಂಬವನ್ನು ಆತಂಕಕ್ಕೆ ದೂಡಿದೆ. ಕೊರೊನಾ ಬಂದಾಗಿನಿಂದ ಸುದೀಪ್ ತಮ್ಮ ತಂದೆ, ತಾಯಿಯನ್ನು ಜತನವಾಗಿ ನೋಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರ ಮನೆಯ ಪಕ್ಕದಲ್ಲಿರೋ ಅವಿಭಕ್ತ ಕುಟುಂಬದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಆ ಮನೆಯಲ್ಲಿ 30 ಜನ ವಾಸವಿದ್ದಾರೆ.

    ಇತ್ತ ದರ್ಶನ್ ಅವರದ್ದೂ ಅಷ್ಟೆ. ಹೊಸಕೆರೆ ಹಳ್ಳಿಯಲ್ಲಿರೋ ವಿಜಯಲಕ್ಷ್ಮೀ ಅವರಿರುವ ಅಪಾರ್ಟ್‍ಮೆಂಟ್`ನಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇದೇ ಅಪಾರ್ಟ್‍ಮೆಂಟ್‍ನಲ್ಲಿ ನಟ ರವಿಶಂಕರ್ ಗೌಡ (ಸಿಲ್ಲಿ ಲಲ್ಲಿ ಖ್ಯಾತಿ), ನಟಿ ಪೂಜಾಗಾಂಧಿ ಕೂಡಾ ವಾಸವಿದ್ದಾರೆ.