` corona virus, - chitraloka.com | Kannada Movie News, Reviews | Image

corona virus,

  • ಇಂಗ್ಲೆಂಡ್‍ನಲ್ಲಿದ್ದ ಸೌಂದರ್ಯ ಜಯಮಾಲಾ ಕೊರೊನಾ ಸ್ಟೋರಿ

    Soundarya Jaimala Image

    ಸೌಂದರ್ಯ ಜಯಮಾಲಾ. ಇಂಗ್ಲೆಂಡ್‍ನ ವೇಲ್ಸ್ ನಗರದಲ್ಲಿರೋ ಫೈನಲ್ ಇಯರ್ ಬಿಎಸ್‍ಸಿ ಓದುತ್ತಿದ್ದರು. ಸ್ಪಾನ್ಸ್ ವಿವಿಯಲ್ಲಿ ಬಾಟನಿಯಲ್ಲಿ ಬಿಎಸ್‍ಸಿ ವ್ಯಾಸಂಗ ಮಾಡುತ್ತಿದ್ದರು. ಅವರ ಕಾಲೇಜ್‍ನ ಇಬ್ಬರು ಪ್ರೊಫೆಸರ್‍ಗಳು ಮತ್ತು ಒಬ್ಬ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡು, ಪ್ರೊಫೆಸರ್ ಒಬ್ಬರು ಮೃತಪಟ್ಟರು. ವಿವಿ ಸೀಲ್ ಡೌನ್ ಆಯ್ತು.

    ಇದು ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ಇಂಗ್ಲೆಂಡ್ ಅನುಭವ. ಕಥೆ ಇಷ್ಟಕ್ಕೇ ಮುಗಿಯಲ್ಲ. ಸೌಂದರ್ಯ ದುಬೈ ಮೂಲಕ ಭಾರತಕ್ಕೆ ಬರಲು ಹೊರಡುತ್ತಾರೆ. ಅಷ್ಟು ಹೊತ್ತಿಗೆ ದುಬೈ ವಿಮಾನಗಳನ್ನು ಭಾರತ ನಿರ್ಬಂದಿಸುತ್ತೆ. ಆಗ ದುಬೈಗೆ ಬಂದಿದ್ದ ಸೌಂದರ್ಯ ಜಯಮಾಲಾ ಅವರನ್ನ ಮತ್ತೆ ಇಂಗ್ಲೆಂಡ್‍ಗೆ ವಾಪಸ್ ಕಳಿಸುತ್ತೆ ದುಬೈ ಸರ್ಕಾರ.

    ಇಂಗ್ಲೆಂಡ್‍ಗೆ ಮಧ್ಯರಾತ್ರಿ ಬಂದಿಳಿದ ಸೌಂದರ್ಯ ಅಷ್ಟು ಹೊತ್ತಿಗೆ ತಾವು ಬಾಡಿಗೆ ಇದ್ದ ಅಪಾರ್ಟ್‍ಮೆಂಟ್ ಖಾಲಿ ಮಾಡಿರುತ್ತಾರೆ. ಎಲ್ಲಿಗೆ ಹೋಗೋದು.. ಅಕ್ಷರಶಃ ಫುಟ್‍ಪಾತ್. ಕೊನೆಗೆ ತಮಗೆ ಬಾಡಿಗೆ ಕೊಟ್ಟಿದ್ದವರನ್ನೇ ಸಂಪರ್ಕಿಸಿ ರಿಕ್ವೆಸ್ಟ್ ಮಾಡಿಕೊಂಡಾಗ, ಅವರು ಅಪಾರ್ಟ್‍ಮೆಂಟ್‍ನ್ನ ಬೇರೊಬ್ಬರ ಮೂಲಕ ಓಪನ್ ಮಾಡಿಸಿಕೊಡ್ತಾರೆ. ಅಪಾರ್ಟ್‍ಮೆಂಟ್‍ಗೆ ಹೋದರೆ ಏನೂ ಇಲ್ಲ. ಕರೆಂಟ್, ನೀರು, ಇಂಟರ್‍ನೆಟ್, ಫೋನ್.. ಎಲ್ಲವೂ ಕಟ್. ಕೊನೆಗೆ ನೆರವಿಗೆ ಬರೋದು ಕುವೈತ್‍ನ ಸ್ನೇಹಿತೆ. ಆಹಾರ ಮತ್ತು ವಿಟಮಿನ್ ಮಾತ್ರೆಗಳನ್ನು ತಂದುಕೊಟ್ಟು ಉಪಚರಿಸ್ತಾರೆ ಕುವೈತ್ ಗೆಳತಿ.

    ಅಬ್ಬಾ.. ಅದೊಂದು ಮರೆಯಲಾಗದ ಅನುಭವ. ಇನ್ನೊಂದಷ್ಟು ವರ್ಷ ವಿಮಾನ ಹತ್ತೋಕೆ ಭಯವಾಗುಂತಾಗಿಬಿಟ್ಟಿದೆ ಎನ್ನುವ ಸೌಂದರ್ಯ, ಪರದೇಶಕ್ಕಿಂತ ನಮ್ಮೂರೇ ನಮಗೆ ಮೇಲೆ ಅನ್ನಿಸಿಬಿಟ್ಟಿದೆ. ಸದ್ಯಕ್ಕೆ ಇಲ್ಲಿಯೂ ಸೌಂದರ್ಯ ಮನೆಗೆ ಹೋಗಿಲ್ಲ. ಕ್ವಾರಂಟೈನ್‍ನಲ್ಲಿದ್ದಾರೆ.

  • ಇಂದಿನಿಂದ ನೈಟ್ ಕಫ್ರ್ಯೂ ಏರಿಯಾ ಸೆಕೆಂಡ್ ಶೋ ಬಂದ್

    ಇಂದಿನಿಂದ ನೈಟ್ ಕಫ್ರ್ಯೂ ಏರಿಯಾ ಸೆಕೆಂಡ್ ಶೋ ಬಂದ್

    ನೈಟ್ ಕಫ್ರ್ಯೂ ಬೇಕಿತ್ತೋ.. ಬೇಕಿರಲಿಲ್ಲವೋ.. ವಿವಾದ, ಚರ್ಚೆಗಳ ನಡುವೆಯೇ ಎದುರಾಗಿದೆ. ಫೇಸ್ ಮಾಡಬೇಕು, ಅಷ್ಟೆ. ಬೇರೆ ದಾರಿಯಿಲ್ಲ. ಇದು ದೊಡ್ಡ ಹೊಡೆತ ನೀಡಿರುವುದು ಚಿತ್ರರಂಗಕ್ಕೆ. ಅದರಲ್ಲಿ ಅನುಮಾನವೇ ಇಲ್ಲ. ಇದು ಆ ಹೊಡೆತದ ಇನ್ನೊಂದು ಅಪ್‍ಡೇಟ್, ಅಷ್ಟೆ.

    ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ 8 ನಗರಗಳಲ್ಲಿ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ನೈಟ್ ಕಫ್ರ್ಯೂ ಇರೋ ನಗರಗಳಲ್ಲಿ ಇಂದಿನಿಂದ ನೈಟ್ ಶೋ ಸಿನಿಮಾ ಇರೋದಿಲ್ಲ. ಅರ್ಥಾತ್ ಸೆಕೆಂಡ್ ಶೋ ಇರೋದಿಲ್ಲ. ಏಕೆಂದರೆ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳು 9.30ರ ಒಳಗೆ ಜಾಗ ಖಾಲಿ ಮಾಡಿ ಬೀಗ ಹಾಕಬೇಕು. 50% ವೀಕ್ಷಕರೂ ಇರೋ ಹಾಗಿಲ್ಲ.  ಹೀಗಾಗಿ 9.30ರ ನಂತರ ಯಾವ ಸಿನಿಮಾ ಶೋ ತೋರಿಸೋಕೆ ಸಾಧ್ಯ.. ಅಲ್ವೇ..

    ಹ್ಞಾಂ.. ನೀವಿರೋ ನಗರದಲ್ಲಿ ನೈಟ್ ಕಫ್ರ್ಯೂ ಇದ್ಯಾ..?

  • ಕನ್ನಡ ಚಿತ್ರ ಪ್ರದರ್ಶನ ರದ್ದಿಲ್ಲ - ಫಿಲಂ ಚೇಂಬರ್

    film screening will continue as it is

    ಕೇರಳದಲ್ಲಿ ಕೊರೋನಾ ಎಫೆಕ್ಟಿನಿಂದಾಗಿ ಚಿತ್ರ ಪ್ರದರ್ಶನಗಳನ್ನೇ ಬಂದ್ ಮಾಡಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಸಿನಿಮಾ ಶೋ ರದ್ದು ಮಾಡಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರ ಪ್ರದರ್ಶನ ರದ್ದು ಮಾಡದೇ ಇರಲು ನಿರ್ಧರಿಸಿದೆ.

    ಚಿತ್ರ ಪ್ರದರ್ಶನವನ್ನೇ ರದ್ದು ಮಾಡುವಂತಹ ಭೀಕರ ಪರಿಸ್ಥಿತಿ ಇನ್ನೂ ಬಂದಿಲ್ಲ. ಹೀಗಾಗಿ ಚಿತ್ರ ಪ್ರದರ್ಶನ ರದ್ದು ಮಾಡುವ ಯೋಚನೆ ಇಲ್ಲ. ಹಾಗೇನಾದರೂ ಸರ್ಕಾರವೇ ಸೂಚನೆ ನೀಡಿದರೆ ಖಂಡಿತಾ ಪಾಲಿಸುತ್ತೇವೆ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್.

    ಕೊರೋನಾ ಎಫೆಕ್ಟಿನಿಂದಾಗಿ ಚಿತ್ರ ಮಂದಿರಕ್ಕೆ ಬರುವವರ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿರಬಹುದೇನೋ.. ಖಚಿತ ಮಾಹಿತಿ ಇಲ್ಲ. ಮಾಲ್‍ಗಳಲ್ಲಿ ಶೇ.25ರಷ್ಟು ಹೊಡೆತ ಬಿದ್ದಿದೆ. ಟೆಕ್ಕಿಗಳು, ಶ್ರೀಮಂತರು ಹೆದರಿದ್ದಾರೆ, ಅಷ್ಟೆ. ಉಳಿದಂತೆ ಜಿಲ್ಲೆಗಳಲ್ಲಿ ಸಮಸ್ಯೆ ಇಲ್ಲ ಎಂದಿದ್ದಾರೆ ಚಿತ್ರ ಮಂದಿರ ಮಾಲೀಕರೂ ಆದ ಚಂದ್ರಶೇಖರ್.

  • ಕೊರೊನಾ : ಶಂಖನಾದ ಅರವಿಂದ್ ವಿಧಿವಶ

    ಕೊರೊನಾ : ಶಂಖನಾದ ಅರವಿಂದ್ ವಿಧಿವಶ

    ಕನ್ನಡ ಚಿತ್ರರಂಗ ಕೊರೊನಾದಿಂದಾಗಿ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡಿದೆ. ಶಂಖನಾದ ಅರವಿಂದ್ ಕೊರೊನಾಗೆ ಬಲಿಯಾಗಿದ್ದಾರೆ. ಅರವಿಂದ್ ಅವರಿಗೆ 10 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. 2 ದಿನಗಳ ಹಿಂದಷ್ಟೇ ವಿಕ್ಟೋರಿಯಾಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅರವಿಂದ್ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

    ಶಂಖನಾದ ಚಿತ್ರದ ಮೂಲಕ ಅವರ ಹೆಸರಿನ ಜೊತೆಗೆ ಶಂಖನಾದವೂ ಸೇರಿಕೊಂಡಿತ್ತು. ಬೆಟ್ಟದ ಹೂ ಚಿತ್ರದ ಪಾತ್ರವೂ ಖ್ಯಾತವಾಗಿತ್ತು. ಗಪ್‍ಚುಪ್ ಎಂಬ ಸಿನಿಮಾವನ್ನೂ ನಿರ್ಮಾಣ ಮಾಡಿದ್ದ ಅರವಿಂದ್, ಮತ್ತೊಂದು ಚಿತ್ರದ ನಿರ್ಮಾಣದ ತಯಾರಿಯಲ್ಲಿದ್ದರು. ಕಾಶಿನಾಥ್ ಚಿತ್ರಗಳಲ್ಲಿ ಖಾಯಮ್ಮಾಗಿರುತ್ತಿದ್ದ ಅರವಿಂದ್ ಅಪರಿಚಿತ, ಆಗಂತುಕ.. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವಕಾಶಗಳು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಪಕ್ಕ ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದರು.

    ಅರವಿಂದ್ ನಟಿಸಿರುವ ಕೊನೆಯ ಚಿತ್ರ ಸಾರಾ. ನಟಿಸಬೇಕಿದ್ದ ಚಿತ್ರ ಜೇಮ್ಸ್. ಜೇಮ್ಸ್ ಚಿತ್ರದಲ್ಲಿನ ಅವರ ಪಾತ್ರದ ಚಿತ್ರೀಕರಣ ಇನ್ನೂ ಮುಗಿದಿರಲಿಲ್ಲ.

  • ಕೊರೊನಾ ಗೆದ್ದ ಕೋಮಲ್

    ಕೊರೊನಾ ಗೆದ್ದ ಕೋಮಲ್

    ಕೊರೊನಾ ಹೆಮ್ಮಾರಿ ಯಾರನ್ನೂ ಬಿಡುತ್ತಿಲ್ಲ. ಚಿತ್ರರಂಗದಲ್ಲಂತೂ ಪ್ರತಿದಿನವೂ ಕೊರೊನಾಘಾತವೇ. ಒಬ್ಬರು.. ಇಬ್ಬರು.. ಮತ್ತೊಬ್ಬರು.. ಹೀಗೆ.. ಇದರ ನಡುವೆ ನಟ ಕೋಮಲ್, ಕೊರೊನಾಗೆ ತುತ್ತಾಗಿ ಅತೀವ ಸಂಕಷ್ಟಕ್ಕೂ ಸಿಲುಕಿ ಇದೀಗ ಗೆದ್ದು ಬಂದಿದ್ದಾರೆ.

    ನಟ ಕೋಮಲ್ ಅವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡಿತ್ತು. ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿ ಕಾವಲಿಗೆ ನಿಂತಿದ್ದರು ಅಣ್ಣ ಜಗ್ಗೇಶ್. ಕೊರೊನಾ ಇದ್ದ ಕಾರಣ ದೂರದಿಂದ ನೋಡುವಂತೆಯೂ ಇರಲಿಲ್ಲ. ಎಲ್ಲ ಭಾರವನ್ನೂ ಗುರುರಾಯರ ಮೇಲೆ ಹಾಕಿದ್ದ ಜಗ್ಗೇಶ್ ಅವರಿಗೆ ಕೊನೆಗೂ ನಿರಾಳತೆ ಸಿಕ್ಕಿದೆ. ಕೋಮಲ್ ಇನ್ನೂ ಕೊರೊನಾದಿಂದ ಗುಣಮುಖವಾಗಿಲ್ಲ. ಆದರೆ, ಉಸಿರಾಟದ ಸಮಸ್ಯೆಯ ಅಪಾಯದಿಂದ ಪಾರಾಗಿದ್ದಾರೆ. ಎಲ್ಲವೂ ಗುರುರಾಯರ ಕೃಪೆ ಎಂದಿದ್ದಾರೆ ಜಗ್ಗೇಶ್.

     

  • ಕೊರೊನಾ ಶಾಕಿಂಗ್ ನ್ಯೂಸ್ : ತೆಲುಗು ನಟ ಪ್ರಭಾಕರ್`ಗೆ ಪಾಸಿಟಿವ್

    corona shocks telugu serial stars

    ಕೊರೊನಾ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆಯೇ ಸಿನಿಮಾ, ಸೀರಿಯಲ್`ಗಳ ಚಿತ್ರೀಕರಣಕ್ಕೂ ಅವಕಾಶ ಸಿಕ್ಕಿದೆ. ಎಲ್ಲ ಕೋವಿಡ್ -19 ಸುರಕ್ಷತಾ ಕ್ರಮಗಳನ್ನು ಅನುಸರಿಸಿಯೇ ಶೂಟಿಂಗ್ ನಡೆಯುತ್ತಿದೆ. ಇದರ ನಡುವೆ ಶಾಕಿಂಗ್ ನ್ಯೂಸ್ ಬಂದಿರೋದು ಹೈದರಾಬಾದ್‍ನಿಂದ.

    ತೆಲುಗು ಟಿವಿ ಸೀರಿಯಲ್ ನಟ ಪ್ರಭಾಕರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ಇಡೀ ಶೂಟಿಂಗ್ ಯುನಿಟ್ ಟೆನ್ಷನ್‍ನಲ್ಲಿದೆ. ತೆಲುಗು ಟಿವಿ ಲೋಕದಲ್ಲಿ ಪ್ರಭಾಕರ್ ಅವರದ್ದು ದೊಡ್ಡ ಹೆಸರು. ಅವರಿಗೆ ಈಗ ಪಾಸಿಟಿವ್ ಎನ್ನುವ ವರದಿ, ಶೋ ನಡೆಸಿಕೊಡುವ ತಂಡವನ್ನಷ್ಟೇ ಅಲ್ಲ, ಚಿತ್ರೀಕರಣ ಸ್ಪಾಟ್‍ನಲ್ಲಿರುವ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸೀರಿಯಲ್ ನಿರ್ಮಾಪಕರು ತಕ್ಷಣವೇ ಪ್ರಭಾಕರ್ ಅವರನ್ನು ಕ್ವಾರಂಟೈನ್‍ಗೆ ಕಳಿಸಿದ್ದಾರೆ. ಈಗ ಇಡೀ ತಂಡ ಹೋಮ್ ಕ್ವಾರಂಟೈನ್‍ಗೆ ತೆರಳಿದೆ. ಪ್ರಭಾಕರ್ ಕಾಂಟ್ಯಾಕ್ಟ್ ಡೀಟೈಲ್ಸ್ ಹುಡುಕಾಟದಲ್ಲಿದ್ದಾರೆ ಅಧಿಕಾರಿಗಳು.

  • ಕೊರೋನ ಕಾರಣದಿಂದ ಸಸ್ಪೆನ್ಸ್ ಥ್ರಿಲ್ಲರ್ "ಮೋಕ್ಷ" ಚಿತ್ರದ ಬಿಡುಗಡೆ ಮುಂದಕ್ಕೆ.

    ಕೊರೋನ ಕಾರಣದಿಂದ ಸಸ್ಪೆನ್ಸ್ ಥ್ರಿಲ್ಲರ್ "ಮೋಕ್ಷ" ಚಿತ್ರದ ಬಿಡುಗಡೆ ಮುಂದಕ್ಕೆ.

    ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ "ಮೋಕ್ಷ" ಚಿತ್ರ ಏಪ್ರಿಲ್ 16 ರಂದು ಬಿಡುಗಡೆಯಾಗಬೇಕಿತ್ತು. ರಾಜ್ಯದಲ್ಲಿ ಪುನಃ ಕೊರೋನ ಮಹಾಮಾರಿ ತನ್ನ ಅಟ್ಟಹಾಸ ತೋರಿಸುತ್ತಿದೆ . ಆ ಕಾರಣದಿಂದ ಚಿತ್ರವನ್ನು ಈ‌ ವೈರಸ್‌ ‌ಆರ್ಭಟ‌ ಕಡಿಮೆ‌‌ಯಾಗುವವರೆಗೂ ಬಿಡುಗಡೆ ಮಾಡುವುದಿಲ್ಲ ಎನ್ನುತ್ತಾರೆ  ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮರ್ಥ್ ನಾಯಕ್.

      ಈ ಚಿತ್ರದ ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.

    ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

    ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಕೊರೋನಾ : ಶಬರಿಮಲೆಗೆ ಶಿವಣ್ಣ ಇಲ್ಲಿಂದಲೇ ನಮಸ್ಕಾರ

    shivanna to skip sabarimala yatra

    ಸ್ಯಾಂಡಲ್‍ವುಡ್‍ನ ಹಲವು ನಟರು ಅಯ್ಯಪ್ಪ ಸ್ವಾಮಿ ಭಕ್ತರು. ಪ್ರತಿವರ್ಷ ಶಬರಿಮಲೆಗೆ ಹೋಗುತ್ತಾರೆ. ಅಯ್ಯಪ್ಪ ಮಾಲೆ ಧರಿಸುತ್ತಾರೆ. ಈ ಬಾರಿಯೂ ಅಷ್ಟೆ, ಶಿವರಾಜ್ ಕುಮಾರ್ ಮತ್ತವರ ತಂಡ ಶಬರಿಮಲೆಗೆ ಹೋಗಬೇಕಿತ್ತು. ಮಾಲೆಯನ್ನೂ ಧರಿಸಿ ಆಗಿತ್ತು. ಆದರೆ ಹೋಗಲು ಸಾಧ್ಯವಾಗಲಿಲ್ಲ. ಕಾರಣ, ಕೊರೋನಾ.

    ಹೀಗಾಗಿ ಈ ಬಾರಿ ಎಂದಿನಂತೆಯೇ ಇಲ್ಲಿ ಪೂಜೆ ಮಾಡಿದ ಶಿವಣ್ಣ ಮತ್ತವರ ತಂಡ, ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲೆ ತೆಗೆದರು. ಶಿವಣ್ಣ ಜೊತೆ ವಿಜಯ್ ರಾಘವೇಂದ್ರ, ರಘುರಾಮ್ ಸೇರಿದಂತೆ ಹಲವರು ಜೊತೆಯಲ್ಲಿದ್ದರು.

    ಅಪ್ಪಾಜಿ ಇದ್ದ ಕಾಲದಿಂದಲೂ ಮಾಲೆ ಹಾಕುತ್ತಿದ್ದೇವೆ. ಈಗ ನಾನು, ರಾಘು, ಪುನೀತ್ ಮೂರೂ ಜನ ಮಾಲೆ ಧರಿಸುತ್ತೇವೆ.

    ಇದೇ ಮೊದಲ ಬಾರಿ ಶಬರಿಮಲೆಗೆ ಹೋಗೋಕೆ ಆಗುತ್ತಿಲ್ಲ. ಕೇರಳ ಸರ್ಕಾರದ ಕಾಳಜಿ ಅರ್ಥವಾಗುತ್ತೆ. ಬೇಗ ದೇಶ ಕೊರೋನಾ ಮುಕ್ತವಾಗಲಿ ಎಂದಿದ್ದಾರೆ ಶಿವರಾಜ್ ಕುಮಾರ್.

  • ಕೊರೋನಾ ಎಫೆಕ್ಟ್ : ಚಿತ್ರಮಂದಿರ ಪ್ರದರ್ಶನ ರದ್ದು

    corona virus effect, film screenings shut

    ಕೊರೋನಾ ಎಫೆಕ್ಟ್ ಆರಂಭದಲ್ಲಿ ಚಿತ್ರಗಳ ಶೂಟಿಂಗ್ಗೆ ಪೆಟ್ಟು ನೀಡಿತ್ತು. ಯುವರತ್ನ, ರಾಬರ್ಟ್, ಅರ್ಜುನ್ ಗೌಡ, ಗಾಳಿಪಟ 2 ಮೊದಲಾದ ಚಿತ್ರಗಳ ಚಿತ್ರೀಕರಣ ಪ್ಲಾನ್ ಕ್ಯಾನ್ಸಲ್ ಆಗಿತ್ತು. ಅಷ್ಟೇ ಅಲ್ಲ, ಈ ತಿಂಗಳು ಹಾಗೂ ಮುಂದಿನ ತಿಂಗಳಿನ ಹಲವು ಚಿತ್ರಗಳ ರಿಲೀಸ್ ಡೇಟ್ ಚೇಂಜ್ ಆಗುತ್ತಿವೆ. ರಾಬರ್ಟ್ ಚಿತ್ರದ ಆಡಿಯೋ ರಿಲೀಸ್ ಡೇಟ್ ಕ್ಯಾನ್ಸಲ್ ಆಗಿದೆ. ಹೀಗಿರುವಾಗಲೇ ಚಿತ್ರರಂಗದ ಮೇಲೆ ದೊಡ್ಡ ಹೊಡೆತವೊಂದು ಬಿದ್ದಿದೆ.

    ಇನ್ನು ಮುಂದೆ, ಸರ್ಕಾರ ಮುಂದಿನ ಆದೇಶ ನೀಡುವವರೆಗೆ ಚಿತ್ರಮಂದಿರಗಳು ಬಂದ್ ಆಗಲಿವೆ. ಈಗ ರಿಲೀಸ್ ಆಗಿರುವ ಚಿತ್ರಗಳಾಗಲೀ, ಸಕ್ಸಸ್ ಆಗಿ ನಡೆಯುತ್ತಿರುವ ಚಿತ್ರಗಳಾಗಲೀ, ರಿಲೀಸ್ ಆಗಲಿರುವ ಚಿತ್ರಗಳ ಪ್ರದರ್ಶನವಾಗಲೀ ಇರುವುದಿಲ್ಲ. ಮಾಲ್ಗಳಲ್ಲಾಗಲೀ, ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಾಗಲೀ ಶೋ ಇರುವುದಿಲ್ಲ. ಸದ್ಯಕ್ಕೆ ಒಂದು ವಾರ ಬಂದ್ ಎಂದು ಪ್ರದರ್ಶಕರ ಸಂಘವೂ ಅಧಿಕೃತವಾಗಿ ಘೋಷಿಸಿದೆ.

    ಒಂದು ವಾರದ ನಂತರ ಸಿನಿಮಾ ಪ್ರದರ್ಶನ ಶುರುವಾಗುತ್ತಾ..? ಕಾದು ನೋಡಬೇಕು. ಎಲ್ಲವೂ ಕೊರೋನಾ ಮೇಲೆ ನಿಂತಿದೆ.

  • ಕೊರೋನಾ ಟೆಸ್ಟ್ : ನಿವೇದಿತಾ, ಚಂದನ್ ಶೆಟ್ಟಿ ರಿಯಾಕ್ಷನ್

    chandan shetty niveditha gowd'a reaction

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ವಿದೇಶಕ್ಕೆ ಹನಿಮೂನ್‍ಗೆ ಹೋಗಿದ್ದಾರೆ. ಅವರು ಬಂದ ತಕ್ಷಣ ಅವರಿಗೆ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಸಂಘಟನೆಯೊಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ವಿಚಿತ್ರವೇನು ಗೊತ್ತೇ..? ಆ ಸಂಘಟನೆಯವರು ಮನವಿ ಮಾಡುವ ಹೊತ್ತಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಂಡಿಯಾಗೆ ವಾಪಸ್ ಬಂದು ವಾರವಾಗಿತ್ತು. ಅಷ್ಟೆ ಅಲ್ಲ, ನಿವೇದಿತಾ ಆಗಲೇ ಏರ್‍ಪೋರ್ಟ್‍ನಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಹನಿಮೂನ್ ಸಂಭ್ರಮ ಮುಗಿದು, ನಿತ್ಯ ಜೀವನ ಶುರುವಾಗಿದೆ.

    ನಾವು ವಾರದ ಹಿಂದೆಯೇ ವಾಪಸ್ ಬಂದಿದ್ದೇವೆ. ನಾವು ಇಟಲಿಗೆ ಹೋಗಲೇ ಇಲ್ಲ. ನೆದರ್‍ಲ್ಯಾಂಡ್‍ಗೆ ಹೋಗಿದ್ದೆವು. ವಾಪಸ್ ಬಂದಿದ್ದೇವೆ. ಏರ್‍ಪೋರ್ಟ್‍ನಲ್ಲಿ ಪರೀಕ್ಷೆ ಸುದೀರ್ಘವಾಗಿ ನಡೆಯಿತು. ನೋ ಪ್ರಾಬ್ಲಂ ಎಂದಿದ್ದಾರೆ ಚಂದನ್ ಶೆಟ್ಟಿ.

    ನಿವೇದಿತಾ ಅವರ ತಾಯಿ ಹೇಮ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾವು ಮಗಳನ್ನು ತುಂಬಾ ಎಚ್ಚರಿಕೆಯಿಂದ ಬೆಳೆಸಿದ್ದೇವೆ. ಅವರು ವಾಪಸ್ ಬಂದಾಗಲೂ ಇಷ್ಟು ಆತಂಕವಾಗಿರಲಿಲ್ಲ. ಈಗ ಇವರೆಲ್ಲ ಕೇಳುತ್ತಿದ್ದರೆ ಭಯವಾಗುತ್ತಿದೆ ಎಂದಿದ್ದಾರೆ ಹೇಮ.

    ಸಿಂಪಲ್ಲಾಗ್ ಹೇಳ್ಬೇಕಂದ್ರೆ, ಚಂದನ್ ಶೆಟ್ಟಿ, ನಿವೇದಿತಾ ಇಬ್ಬರೂ ಚೆನ್ನಾಗಿದ್ದಾರೆ. ಅವರಿಬ್ಬರಿಗೂ ಕೊರೋನಾ ಟೆಸ್ಟ್ ಆಗಿದೆ. ಅವರಿಬ್ಬರಿಗೂ ಕೊರೋನಾ ಸೋಂಕು ಇಲ್ಲ.

    Also Read :-

    ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ

  • ಕೊರೋನಾ ಬಂದ್ : ಸಿನಿಮಾ ಶೂಟಿಂಗ್, ಮುಹೂರ್ತ ಎಲ್ಲದಕ್ಕೂ ಬ್ರೇಕ್

    film industry bundh continues

    ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅರ್ಧ ರಾಜ್ಯವೇ ನಿಷೇಧಾಜ್ಞೆಯಲ್ಲಿದೆ. ಕಳೆದ ವಾರದಿಂದ ಆರಂಭವಾಗಿದ್ದು ಕೊರೋನಾ ಬಂದ್ ಈ ವಾರವೂ ಕೂಡಾ ಕಂಟಿನ್ಯೂ ಆಗಿದೆ. ಚಿತ್ರಮಂದಿರ ಹಾಗೂ ಮಾಲ್‍ಗಳಲ್ಲಿ ಪ್ರದರ್ಶನ ಬಂದ್ ಆಗಿರುವ ಕಾರಣ, ಚಿತ್ರೋದ್ಯಮಕ್ಕೆ ಅಪಾರ ನಷ್ಟವಾಗಿದೆ. ಆದರೂ ಆರೋಗ್ಯದ ದೃಷ್ಟಿಯಿಂದ ಇದನ್ನು ಸಹಿಸಿಕೊಳ್ಳಲೇಬೇಕು ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.

    ಅಷ್ಟೇ ಅಲ್ಲ, ಬಂದ್ ತೆರವಾದ ನಂತರ, ಬಂದ್ ಆರಂಭಕ್ಕೂ ಮುನ್ನ ಥಿಯೇಟರಿನಲ್ಲಿದ್ದ ಚಿತ್ರಗಳನ್ನೇ ಪ್ರದರ್ಶನ ಮಾಡುವಂತೆ ಪ್ರದರ್ಶಕರಿಗೆ ಮನವಿ ಮಾಡಿದ್ದಾರೆ. ಹೆಚ್ಚುವರಿ ಶುಲ್ಕ ವಿಧಿಸದಂತೆ ಕ್ಯೂಬ್‍ನವರಿಗೂ ಮನವಿ ಮಾಡಿದ್ದಾರೆ. ಹೊಸದಾಗಿ ಮುಹೂರ್ತ, ಶೂಟಿಂಗ್ ಬೇಡ ಎಂದು ನಿರ್ಮಾಪಕರಿಗೆ ಕೇಳಿಕೊಂಡಿದ್ದಾರೆ

  • ಕೊರೋನಾಗೆ ಜಾಕಿ ಚಾನ್ ಬಲಿ : ಜಾಕಿಗೇ ಶಾಕ್..!

    jackie chan dismisses rumors about him

    ಜಾಕಿ ಚಾನ್, ಚೀನಾದ ನಟನೇ ಆದರೂ ಜಗತ್ತಿನಲ್ಲೆಲ್ಲ ಫೇಮಸ್ಸು. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರೋ ನಟ ಜಾಕಿ ಚಾನ್ ಕೊರೋನಾ ವೈರಸ್ ಬಂದು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿತ್ತು. ಚೀನಾದಲ್ಲಿ ಕೊರೋನಾ ಸೃಷ್ಟಿಸಿರುವ ಸಾವಿನ ಸರಣಿ ಎಲ್ಲರಿಗೂ ಗೊತ್ತಿರುವಂಥದ್ದೇ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿ ಚೀನಾದಲ್ಲೇ ಸಾವನ್ನಪ್ಪಿದ್ದಾರೆ. ಹೀಗಾಗಿಯೇ ಜಾಕಿ ಚಾನ್ ಅವರಿಗೂ ವೈರಸ್ ಸೋಂಕು ತಗುಲಿ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು. ಕೆಲವರಂತೂ ಜಾಕಿ ಚಾನ್ ಅವರಿಗೆ ಮಾಸ್ಕ್‍ಗಳನ್ನು ಕಳಿಸಿಕೊಟ್ಟಿದ್ದರು.

    ಇದಕ್ಕೆಲ್ಲ ಪ್ರತಿಕ್ರಿಯೆ ನೀಡಿರುವ ಜಾಕಿ ಚಾನ್, ನಾನು ಹೆಲ್ದಿಯಾಗಿದ್ದೇನೆ. ಸೇಫ್ ಆಗಿದ್ದೇನೆ. ನಾನು ಕೊರೋನಾ ವೈರಸ್ ಶಿಬಿರದಲ್ಲಿ ಇಲ್ಲ. ನನ್ನ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಹಲವರು ನನಗೆ ಮೆಸೇಜ್ ಕಳಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಹೃದಯ ತುಂಬಿ ಬಂದಿದೆ ಎಂದಿದ್ದಾರೆ ಜಾಕಿ ಚಾನ್.

  • ಗಾಳಿಪಟಕ್ಕೂ ಕೊವಿಡ್ 19 ಶಾಕ್

    gaalipata 2 foreign shooting postponed

    ಮೊದಲಿಗೆ ದರ್ಶನ್ ಅಭಿನಯದ ರಾಬರ್ಟ್, ನಂತರ ಪುನೀತ್ ಅಭಿನಯದ ಯುವರತ್ನ, ತದನಂತರ ಪ್ರಜ್ವಲ್ ಅಭಿನಯದ ಅರ್ಜುನ್ ಗೌಡ.. ಹೀಗೆ ಸರಣಿ ಮುಂದುವರಿಯುತ್ತಿದ್ದು, ಆ ಸರಣಿಗೆ ಈಗ ಭಟ್ಟರ ಗಾಳಿಪಟವೂ ಸೇರಿದೆ.

    ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟು ಹೊತ್ತಿಗೆ ಯೋಗರಾಜ್ ಭಟ್ಟರು ಗಣೇಶ್, ದಿಗಂತ್, ಪವನ್ ಕುಮಾರ್, ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯರ ದಂಡು ಕಟ್ಟಿಕೊಂಡು ಜಾರ್ಜಿಯಾದಲ್ಲಿರಬೇಕಿತ್ತು. ಲೊಕೇಷನ್ ನೋಡಿಕೊಂಡು ಬಂದು ಎಲ್ಲವನ್ನೂ ಪ್ಲಾನ್ ಮಾಡಿಯೂ ಆಗಿತ್ತು. ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.

    ನಮ್ಮ ಚಿತ್ರಕ್ಕೆ ವಿದೇಶದ ಶೂಟಿಂಗ್ ಅತ್ಯಂತ ಮುಖ್ಯ. ಹೀಗಾಗಿ ಇನ್ನೂ ಕೆಲವು ದಿನ ಕಾಯುತ್ತೇವೆ. ಪರಿಸ್ಥಿತಿ ಸುಧಾರಿಸುವವರೆಗೂ ಕಾಯುವುದು ನಮಗೆ ಅನಿವಾರ್ಯ. ನಮ್ಮ ಕಥೆಗೆ ವಿದೇಶ ಬೇಕೇ ಬೇಕು ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಅದರರ್ಥ, ಇನ್ನೂ ಎರಡು ತಿಂಗಳು ಗಾಳಿಪಟ 2ಗೆ ಬ್ರೇಕ್.

  • ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ

    mysuru citizens urge chandan shetty and niveditha gowda for corona virus test

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್ ಟ್ರಿಪ್‍ನಲ್ಲಿದ್ದಾರೆ. ಈ ಪ್ರಣಯದ ಪಕ್ಷಿಗಳು ತಮ್ಮ ಹನಿಮೂನ್‍ನ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸುದ್ದಿ ಅದಲ್ಲ, ಈಗ ಅವರನ್ನು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಹೋಗಿದೆ.

    ಮೈಸೂರಿನ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಘಟಕದ ಅಧ್ಯಕ್ಷ ರಫೀಕ್ ಅಲಿ & ಸದಸ್ಯರು ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿ ಯಾವುದೇ ಕೊರೋನಾ ಕೇಸ್ ಇಲ್ಲ. ಅಂಥಾದ್ದರಲ್ಲಿ ವಿದೇಶದಿಂದ ಬರುತ್ತಿರುವ ಅವರಿಬ್ಬರನ್ನೂ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಚಿತ್ರರಂಗಕ್ಕೆ ಕೊರೊನಾ 2nd ಶಾಕ್ : ಯಾರಿಗೆಲ್ಲ ಪಾಸಿಟಿವ್..? – Complete Report

    ಚಿತ್ರರಂಗಕ್ಕೆ ಕೊರೊನಾ 2nd ಶಾಕ್ : ಯಾರಿಗೆಲ್ಲ ಪಾಸಿಟಿವ್..? – Complete Report

    ಕೊರೊನಾ ಯಾರನ್ನೂ ಬಿಡುತ್ತಿಲ್ಲ. 2ನೇ ಅಲೆಯಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿರೋ ಕೊರೊನಾ ಹಲವರನ್ನು ಕಾಡುತ್ತಿದೆ. ಜನಸಾಮಾನ್ಯರನ್ನು ಕಾಡುತ್ತಿರೋ ಕೊರೊನಾ, ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಚಿತ್ರರಂಗವನ್ನೂ ಕಾಡೋಕೆ ಶುರು ಮಾಡಿದೆ. ಈ ಬಾರಿ ಕೊರೊನಾ ಶಾಕ್ಗೆ ತುತ್ತಾದವರ ಲಿಸ್ಟ್ ಕೂಡಾ ಬೆಳೆಯೋಕೆ ಶುರುವಾಗಿದೆ.

    ಕೊರೊನಾ 2ನೇ ಅಲೆಯಲ್ಲಿ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ. ಅವರು ಈಗಾಗಲೇ ಗುಣಮುಖರಾಗುತ್ತಿದ್ದಾರೆ. ನಂತರ ಲವ್ ಮಾಕ್ಟೇಲ್ ಜೋಡಿ ಕೃಷ್ಣ  ಮತ್ತು ಮಿಲನ ನಾಗರಾಜ್ ದಂಪತಿಗೆ ಪಾಸಿಟಿವ್ ಬಂತು. ಅವರೀಗ ಕ್ವಾರಂಟೈನ್ನಲ್ಲಿದ್ದಾರೆ.

    ಈಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಅತ್ತ ಅವರ ತಂದೆ, ಮಾಜಿ ಸಿಎಂ, ಚಿತ್ರ ನಿರ್ಮಾಪಕ ಕುಮಾರಸ್ವಾಮಿ ಕೂಡಾ ಆಸ್ಪತ್ರೆ ಸೇರಿದ್ದಾರೆ. ತಾಯಿ ಅನಿತಾ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ನಿಖಿಲ್ ಅವರಿಗೆ ಅವರ ವಿವಾಹ ವಾರ್ಷಿಕೋತ್ಸವ ದಿನದಂದೇ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿರೋದು ವಿಶೇಷ.

    ತಾರಾ ದಂಪತಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಅವರೂ ಕ್ವಾರಂಟೈನ್ನಲ್ಲಿದ್ದಾರೆ. ಆರ್ಜೆ, ನಿರ್ದೇಶಕ ರೋಹಿತ್ ಅವರಿಗೂ ಸೋಂಕು ತಗುಲಿದೆ. ಬಹುಭಾಷಾ ಕಲಾವಿದ ಸೋನು ಸೂದ್ ಅವರಿಗೆ ಕೂಡಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅವರೂ ಕ್ವಾರಂಟೈನ್ ಸೇರಿದ್ದಾರೆ.

    ಇನ್ನು ತೆಲುಗು,ತಮಿಳು, ಹಿಂದಿ ಚಿತ್ರರಂಗ ಸ್ಟಾರ್ ನಟ, ನಟಿ, ತಂತ್ರಜ್ಞರೂ ಕೊರೊನಾಗೆ ತುತ್ತಾಗಿದ್ದಾರೆ. ಕೆಲವರು ಗುಣಮುಖರಾಗಿದ್ದರೆ, ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ದುರಂತವೆಂದರೆ ನಟ ರಮೇಶ್ ಪಂಡಿತ್ ಅವರ ಪತ್ನಿ ಸುನೇತ್ರಾ ಅವರ ಅಕ್ಕ ಸರಿತಾ ಕೊರೊನಾಗೆ ಬಲಿಯಾಗಿದ್ದಾರೆ. ದಯವಿಟ್ಟು ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ. ಸರ್ಕಾರದ ಎಚ್ಚರಿಕೆಯನ್ನು ಗಂಭೀರವಾಗಿ ಪಾಲಿಸಿ ಎಂದು ರಮೇಶ್ ಪಂಡಿತ್ ದಂಪತಿ ಮನವಿ ಮಾಡಿದ್ದಾರೆ.

  • ಚಿತ್ರರಂಗದಲ್ಲಿ ಇವರೆಲ್ಲ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ

    ಚಿತ್ರರಂಗದಲ್ಲಿ ಇವರೆಲ್ಲ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ

    ಕೊರೊನಾ ರಣವೇಗ ಪಡೆಯುತ್ತಿದ್ದಂತೆಯೇ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚಿತ್ರನಟ ಪುನೀತ್ ರಾಜ್‍ಕುಮಾರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಾಘವೇಂದ್ರ ರಾಜ್‍ಕುಮಾರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು.

    ಅನಂತನಾಗ್, ಜಗ್ಗೇಶ್ ದಂಪತಿ, ಶರಣ್, ಚಿತ್ರನಟಿ ಹರಿಪ್ರಿಯಾ ತಮ್ಮ ತಾಯಿಗೆ, ಸೃಜನ್ ಲೋಕೇಶ್ ಅಮ್ಮ ಗಿರಿಜಾ ಲೋಕೇಶ್, ನಟ ಸೋನು ಸೂದ್.. ಸೇರಿದಂತೆ ಇನ್ನೂ ಹಲವರು ವ್ಯಾಕ್ಸಿನ್ ತಗೊಂಡಿದ್ದಾರೆ. ತೆಗೆದುಕೊಳ್ತಿದ್ದಾರೆ.

  • ಡೆಡ್ಲಿ ಕೊರೋನಾ ; ಸಿನಿಮಾ ಟೈಟಲ್ ಫಿಕ್ಸ್

    corona title registered in film chamber

    ಇಡೀ ಜಗತ್ತನ್ನೇ ಕೊರೋನಾ ವೈರಸ್ ತಲ್ಲಣಗೊಳಿಸುತ್ತಿದ್ದರೆ, ಕನ್ನಡದಲ್ಲಿ ಅದೇ ಹೆಸರಿನ ಸಿನಿಮಾವೊಂದು ಸೆಟ್ಟೇರಲು ರೆಡಿಯಾಗಿದೆ. ನಿರ್ಮಾಪಕ ಉಮೇಶ್ ಬಣಕಾರ್ `ಕೊರೋನಾ' ಎಂಬ ಟೈಟಲ್‍ನ್ನು ಫಿಲಂ ಚೇಂಬರ್‍ಗೆ ಸಲ್ಲಿಸಿದ್ದಾರೆ. ಇಲ್ಲಷ್ಟೇ ಎಂದುಕೊಳ್ಳಬೇಡಿ, ಮುಂಬೈ ಫಿಲಂ ಚೇಂಬರ್‍ಗೆ ಡೆಡ್ಲಿ ಕೊರೋನಾ ಎಂಬ ಟೈಟಲ್‍ಗೆ ಮನವಿ ಬಂದಿದೆ.

    ಬಿಸಿರಕ್ತ ಖ್ಯಾತಿಯ ಶಿವಕುಮಾರ್, ಈ ಚಿತ್ರದ ನಿರ್ದೇಶಕ ಎಂದು ಮಾಹಿತಿ ನೀಡಿದ್ದಾರೆ ಉಮೇಶ್ ಬಣಕಾರ್. ಅಂದಹಾಗೆ ಎರಡೂ ಕಡೆ ಚಿತ್ರದ ಟೈಟಲ್‍ಗೆ ಅರ್ಜಿ ಹಾಕಿರೋದು ಉಮೇಶ್ ಬಣಕಾರ್ ಅವರೇ. ಇನ್ನು 15 ದಿನಗಳಲ್ಲಿ ಚಿತ್ರದ ತಾಂತ್ರಿಕ ವರ್ಗದ ಆಯ್ಕೆ, ಕಲಾವಿದರ ಆಯ್ಕೆ ಕೆಲಸ ಮುಗಿಯಲಿದ್ದು, ಚಿತ್ರ ಶುರುವಾಗಲಿದೆಯಂತೆ

  • ದರ್ಶನ್ ನಂತರ ಪುನೀತ್ ಚಿತ್ರಕ್ಕೂ ಕೊರೋನಾ ಕಾಟ

    corona virus affects yuvaratna movie shooting

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಕೊರೋನಾ ವೈರಸ್ ಭೀತಿ ಬ್ರೇಕ್ ಹಾಕಿತ್ತು. ತಂತ್ರಜ್ಞರು ಮತ್ತು ತಂಡದ ಸೇಫ್ಟಿಯೇ ಮುಖ್ಯ ಎಂದಿದ್ದ ದರ್ಶನ್, ವಿದೇಶದ ಚಿತ್ರೀಕರಣಕ್ಕೇ ಬ್ರೇಕ್ ಹಾಕಿದ್ದರು. ಆದರೆ, ಕೊರೋನಾ ಕಾಟ ಅಷ್ಟಕ್ಕೇ ನಿಂತಿಲ್ಲ. ಅದು ಈಗ ಪುನೀತ್ ಚಿತ್ರಕ್ಕೂ ವಿಸ್ತರಿಸಿದೆ.

    ಪ್ಲಾನ್ ಪ್ರಕಾರ ಇಷ್ಟೊತ್ತಿಗೆಲ್ಲ ಯುವರತ್ನ ಚಿತ್ರತಂಡ ಆಸ್ಟ್ರಿಯಾ ಮತ್ತು ಸ್ಲೊವೇನಿಯಾದಲ್ಲಿರಬೇಕಿತ್ತು. ಆದರೆ ಎಲ್ಲವನ್ನೂ ಉಲ್ಟಾ ಮಾಡಿದೆ ಕೊರೋನಾ. ಕೊರೋನಾ ವೈರಸ್ ಭೀತಿ ಕೂಲ್ ಆಗುವವರೆಗೆ ಚಿತ್ರೀಕರಣವನ್ನೇ ಮುಂದೂಡಿದೆ ಚಿತ್ರತಂಡ. ನಿರ್ಮಾಪಕ ಕಾರ್ತಿಕ್ ಗೌಡ ಇದನ್ನು ಸ್ಪಷ್ಟಪಡಿಸಿದ್ದಾರೆ.

    ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಸಂತೋಷ್ ಆನಂದ್‍ರಾಮ್ ಮತ್ತು ಪುನೀತ್ ಕಾಂಬಿನೇಷನ್ನಿನಿಂದಾಗಿಯೇ ಭರ್ಜರಿ ಕುತೂಹಲ ನಿರೀಕ್ಷೆ ಹುಟ್ಟಿಸಿರುವ 2020ರ ಬಹುನಿರೀಕ್ಷಿತ ಸಿನಿಮಾ ಯುವರತ್ನ.

  • ನಾನು ಸತ್ತಿಲ್ಲ, ಬದುಕಿದ್ದೇನೆ : ದೊಡ್ಡಣ್ಣ

    doddanna image

    ಚಿತ್ರರಂಗ ಮೊದಲೇ ಕೊರೊನಾದಿಂದ ನಲುಗಿ ಹೋಗಿದೆ. ದಿನ ದಿನವೂ ಚಿತ್ರರಂಗದ ಕೆಲವರಾದರೂ ಸಾವಿನ ಮನೆ ಸೇರುತ್ತಿದ್ಧಾರೆ. ಈ ಮಧ್ಯೆ ಸುಳ್ಳು ಸುದ್ದಿಗಳ ಹಾವಳಿಯೂ ಎಲ್ಲೆ ಮೀರಿದೆ. ಈ ಬಾರಿ ಅದು ಹಿರಿಯ ನಟ ದೊಡ್ಡಣ್ಣ ಅವರನ್ನು ಬೇಟೆಯಾಡಿದೆ.

    ಕೆಲವು ಜಾಲತಾಣಗಳಲ್ಲಿ, ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ದೊಡ್ಡಣ್ಣ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಂತಾಪಗಳೂ ವ್ಯಕ್ತವಾಗುತ್ತಿವೆ. ನೋಡೋಣ ಎಂದು ಚಿತ್ರಲೋಕ ಖುದ್ದು ದೊಡ್ಡಣ್ಣನವರಿಗೇ ಫೋನ್ ಮಾಡಿದಾಗ ಅವರು ಊಟ ಮಾಡುತ್ತಿದ್ದರು. 

    ನಾನು ಗಟ್ಟಿಮುಟ್ಟಾಗಿಯೇ ಇದ್ದೇನೆ. ಎರಡು ಬಾರಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಕೊರೊನಾ ನನ್ನ ಹತ್ತಿರವೂ ಸುಳಿದಿಲ್ಲ. ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ತಮ್ಮದೇ ಶೈಲಿಯಲ್ಲಿ ಗಹಗಹಿಸಿ ನಗುತ್ತಾ ಹೇಳಿದ ದೊಡ್ಡಣ್ಣ,  ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ಎಲ್ಲರೂ ಗಾಬರಿಯಾಗುತ್ತಾರೆ ಎಂದು ಸುಳ್ಳು ಸುದ್ದಿ ವೀರರಿಗೆ ಮನವಿ ಮಾಡಿದ್ದಾರೆ.

  • ಮತ್ತೆ ಲಾಕ್ ಡೌನ್ ಗುಮ್ಮ : ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸುತ್ತಾ..?

    ಮತ್ತೆ ಲಾಕ್ ಡೌನ್ ಗುಮ್ಮ : ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸುತ್ತಾ..?

    ಮತ್ತೊಮ್ಮೆ ಲಾಕ್ ಡೌನ್, ಕಠಿಣ ನಿರ್ಬಂಧ ಜಾರಿಯ ಗುಮ್ಮವನ್ನು ಸರ್ಕಾರ ಬಿಟ್ಟಿದೆ. ಜನರ ಕೈಲೇ ಎಲ್ಲವೂ ಇದೆ ಎನ್ನುವುದು ಸರ್ಕಾರದ ಎಚ್ಚರಿಕೆ. ಈಗಾಗಲೇ ಆಸ್ಪತ್ರೆಗಳ ಬುಕ್ಕಿಂಗು, ಔಷಧಿಗಳ ಬುಕ್ಕಿಂಗು ಶುರುವಾಗಿದೆ. ಆದರೆ.. ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ?

    ಸರ್ಕಾರ : ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಇರಬೇಕು

    ಪ್ರಶ್ನೆ : ಇದು ಕೇವಲ ಜನರಿಗೆ ಮಾತ್ರನಾ? ರಾಮನಗರದಲ್ಲಿ ನಡೆದ ಸಭೆಗಳಲ್ಲಾಗಲೀ, ನಿಮ್ಮ ಎಲೆಕ್ಷನ್ ಪ್ರಚಾರದಲ್ಲಾಗಲೀ ಸರ್ಕಾರದ ಸಚಿವರು, ಮುಖ್ಯಮಂತ್ರಿಗಳೇ ಈ ರೂಲ್ಸ್ ಪಾಲಿಸುತ್ತಿಲ್ಲ. ಜನರ ಮೇಲೆ ಹೇರೋಕೆ ಸರ್ಕಾರಕ್ಕೆ ನೈತಿಕತೆ ಎಲ್ಲಿದೆ?

    ಸರ್ಕಾರ : ಮತ್ತೆ ಲಾಕ್ ಡೌನ್ ಮಾಡಬೇಕಾಗಿ ಬರಬಹುದು.

    ಪ್ರಶ್ನೆ : ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಲ್ಲ. ಜನ ಅವರ ಹೊಟ್ಟೆ ಬಟ್ಟೆಗೆ ಏನು ಮಾಡಬೇಕು? ಹೋಗಲಿ, ರೋಗ ಬಂದರೆ ಆಸ್ಪತ್ರೆ ಬಿಲ್ಲನ್ನೂ ಜನರೇ ಕಟ್ಟಬೇಕು. ಏನನ್ನೂ ಮಾಡೋಕೆ ಸಾಧ್ಯವಾಗದ ಸರ್ಕಾರಗಳಿಗೆ ಜನರನ್ನು ಮನೆಯಲ್ಲೇ ಇರಿ ಅನ್ನೋಕೆ ಯಾವ ಹಕ್ಕಿದೆ?

    ಸರ್ಕಾರ : ರೋಗ ಮಿತಿಮೀರಿದರೆ ಲಾಕ್ ಡೌನ್ ಅನಿವಾರ್ಯ

    ಪ್ರಶ್ನೆ : ರೋಗ ಹುಟ್ಟಿದ್ದು ಚೀನಾದಲ್ಲಿ. ಚೀನಾದವರೇ ಇಡೀ ದೇಶವನ್ನು ಲಾಕ್ ಡೌನ್ ಮಾಡಲಿಲ್ಲ. ಮಾಡಿದ್ದು ವುಹಾನ್‍ನಲ್ಲಿ ಮಾತ್ರ. ಜಗತ್ತಿನಲ್ಲಿರುವ ತಜ್ಞರೆಲ್ಲ ಮಾಸ್ಕ್, ಸ್ಯಾನಿಟೈಸರ್, ಲಾಕ್ ಡೌನ್ ಪರಿಹಾರ ಎಂದು ಹೇಳುತ್ತಾ ಹೋದರು. ಪರ್ಯಾಯ ಯೋಚಿಸೋಕೂ ಸಮಯ ಕೊಡಲಿಲ್ಲ. ಪರಿಹಾರ ಅಲ್ಲದ ಸೂತ್ರವನ್ನೇ ಹಿಡಿದುಕೊಂಡಿರುವ ತಜ್ಞರು, ಇನ್ನಾದರೂ ಹೊಸ ಮಾರ್ಗ ಹುಡುಕಬೇಕಲ್ಲವೇ? ತಜ್ಞರು ಎಂದು ಕರೆಸಿಕೊಳ್ಳುವವರು ಅದಕ್ಕೆ ಗೌರವವಾಗಿ ನಡೆದುಕೊಳ್ಳಬೇಕಲ್ಲವೇ?

    ಸರ್ಕಾರ : ಒಮಿಕ್ರಾನ್ ಅಪಾಯಕಾರಿ ಹೌದೇ ಅಲ್ಲವೇ ಗೊತ್ತಿಲ್ಲ

    ಪ್ರಶ್ನೆ : ಇದು ವಿಶ್ವಸಂಸ್ಥೆಗೂ ಗೊತ್ತಿಲ್ಲ. ಅಲ್ಲಿರುವ ತಜ್ಞರೇ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಯಾರ ಮಾತು ನಂಬೋಣ.

    ಸರ್ಕಾರ : ದಯವಿಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಿ

    ಪ್ರಶ್ನೆ : ಇದೊಂದು ವಿಚಾರ ಓಕೆ. ಆದರೆ ಇಲ್ಲಿಯೂ ಪ್ರಶ್ನೆ ಇದೆ. ವ್ಯಾಕ್ಸಿನ್ ಹಾಕಿಸಿಕೊಂಡ ನಂತರವೂ ಲಾಕ್ ಡೌನ್ ಏಕೆ? ನಿಮ್ಮ ಔಷಧಿ ಮೇಲೆ ನಿಮಗೇ ನಂಬಿಕೆ ಇಲ್ಲವೇ? ಇಂತಹ ಡಬಲ್ ಸ್ಟಾಂಡರ್ಡ್ ನೀವೇ ಕೊಡುವ ವ್ಯಾಕ್ಸಿನ್ ಮೇಲೆ ಜನ ನಂಬಿಕೆ ಕಳೆದುಕೊಳ್ಳೋ ಹಾಗೆ ಮಾಡುವುದಿಲ್ಲವೇ?

    ಒಟ್ಟಿನಲ್ಲಿ ಸರ್ಕಾರಗಳಿಗೆ, ಸಚಿವರಿಗೆ ಲಾಕ್ ಡೌನ್ ಬೇಕಿದೆ. ಸಾವಿರಗಟ್ಟಲೆ ಕೇಸ್ ಇದ್ದಾಗ ಲಾಕ್ ಡೌನ್ ಮಾಡಿ, ಲಕ್ಷಗಟ್ಟಲೆ ಕೇಸ್ ಇದ್ದಾಗ ಲಾಕ್ ಡೌನ್ ತೆರವು ಮಾಡಿದ ಸರ್ಕಾರಕ್ಕೆ ತಜ್ಞರು ಯಾರೋ.. ಸಂತ್ರಸ್ತರು ಯಾರೋ ಗೊತ್ತಾಗುತ್ತಿಲ್ಲ. ಜನ ಬೀದಿಗೆ ಬರುತ್ತಿದ್ದಾರೆ. ಕುಟುಂಬಗಳು ದಿಕ್ಕು ತಪ್ಪುತ್ತಿವೆ. ಚಳಿಗಾಲ ಇದ್ದಾಗ ಜ್ವರ, ತಲೆನೋವು, ಕೆಮ್ಮು, ನೆಗಡಿ ಸಾಮಾನ್ಯ. ಆರೋಗ್ಯವಂತರೂ ಹದ ತಪ್ಪುವ ಚಳಿಗಾಲ ಇದು. ಕೊರೊನಾದ ಲಕ್ಷಣಗಳೂ ಇವೇ.. ಇದನ್ನು ದೇಶಕ್ಕೆ ಅಂಟಿಕೊಂಡ ಕ್ಯಾನ್ಸರ್ ಏನೋ ಎಂಬಂತೆ ಬಿಂಬಿಸಿ ಜನರನ್ನು ಹೆದರಿಸುವುದೇಕೆ?