` rrr movie - chitraloka.com | Kannada Movie News, Reviews | Image

rrr movie

  • R.R.R. ಹಿಂದಿಕ್ಕಿದ ಕೆಜಿಎಫ್ ಚಾಪ್ಟರ್ 2

    R.R.R. ಹಿಂದಿಕ್ಕಿದ ಕೆಜಿಎಫ್ ಚಾಪ್ಟರ್ 2

    ಭಾರತೀಯ ಚಿತ್ರರಂಗದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು ಎರಡು ವಾರಗಳ ಅಂತರದಲ್ಲಿ ರಿಲೀಸ್ ಆದವು. ಮೊದಲು ರಿಲೀಸ್ ಆಗಿದ್ದು ರಾಜಮೌಳಿಯ ಆರ್.ಆರ್.ಆರ್. ರಾಮ್ ಚರಣ್ ತೇಜ, ಎನ್‍ಟಿಆರ್, ಅಜಯ್ ದೇವಗನ್, ಅಲಿಯಾ ಭಟ್ ನಟಿಸಿದ್ದ ಸಿನಿಮಾ 1100 ಕೋಟಿ ಬಿಸಿನೆಸ್ ಮಾಡಿತ್ತು.

    ಅದಾದ ನಂತರ ಬಂದಿದ್ದು ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಈಗ ಆರ್.ಆರ್.ಆರ್.ನ್ನೂ ಮೀರಿಸಿದೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ನಟಿಸಿದ್ದ ಕೆಜಿಎಫ್ 2 ಆರಂಭದಿಂದಲೂ ನಾಗಾಲೋಟದಲ್ಲಿ ಓಡುತ್ತಿದೆ. 3ನೇ ವಾರದ ನಂತರ ಕೂಡಾ ಹಿಂದಿಯಲ್ಲಿ ರಿಲೀಸ್ ಆದ ಹೊಸ ಚಿತ್ರಗಳಿಗಿಂತ ಹೆಚ್ಚು ಕಲೆಕ್ಷನ್  ಮಾಡಿದೆ ಕೆಜಿಎಫ್ ಚಾಪ್ಟರ್ 2.

    ಈ ಹಾದಿಯಲ್ಲಿ ಹಲವು ಚಿತ್ರಗಳ ದಾಖಲೆಗಳನ್ನು ಧೂಳೀಫಟ ಮಾಡಿರುವ ಕೆಜಿಎಫ್ ಚಾಪ್ಟರ್ 2, ಈಗ ಆರ್.ಆರ್.ಆರ್. ದಾಖಲೆಯನ್ನೂ ಹಿಂದಿಕ್ಕಿದೆ. 1000 ಕೋಟಿ ದಾಟಿದ್ದನ್ನು ಹೊಂಬಾಳೆ ಅಧಿಕೃತ ಪಡಿಸಿದ ಬೆನ್ನಲ್ಲೇ 1100 ಕೋಟಿಯನ್ನೂ ದಾಟಿ ಹೋಗಿದೆ ಕೆಜಿಎಫ್ 2. ಈದ್  ದಿನ ಕೂಡಾ ಬಾಕ್ಸಾಫೀಸ್‍ನಲ್ಲಿ ತೂಫಾನ್ ಎಬ್ಬಿಸಿರುವ ಕೆಜಿಎಫ್ ಚಾಪ್ಟರ್ 2, ಈಗ ಇಂಡಿಯಾದಲ್ಲಿ ಅತೀ ಹೆಚ್ಚು ಬಿಸಿನೆಸ್ ಮಾಡಿದ ನಂ.2 ಸಿನಿಮಾ.

    ಮೊದಲನೇ ಸ್ಥಾನದಲ್ಲಿರೋದು ಬಾಹುಬಲಿ 2. ಇನ್ನು ದಂಗಲ್ ಚಿತ್ರದ ಅತೀ ಹೆಚ್ಚು ಕಲೆಕ್ಷನ್ ಆಗಿದ್ದು ಚೀನಾದಲ್ಲಾದ್ದರಿಂದ.. ಈ ಲಿಸ್ಟ್‍ನಲ್ಲಿಲ್ಲ ಅಷ್ಟೆ. ಈಗ ಕೆಜಿಎಫ್ 2, 4ನೇ ವಾರಕ್ಕೆ ಕಾಲಿಟ್ಟಿದೆ.

  • RRR ಚಿತ್ರದ ವಿಲನ್ ರೇ ಸ್ಟೀವನ್ ಸನ್ ನಿಧನ

    RRR ಚಿತ್ರದ ವಿಲನ್ ರೇ ಸ್ಟೀವನ್ ಸನ್ ನಿಧನ

    ಆರ್.ಆರ್.ಆರ್. ಸಿನಿಮಾದ ಕಥೆ ಶುರುವಾಗುವುದೇ ಅವರಿಂದ. ಕೊನೆಯಾಗುವುದು ಅವರಿಂದ. ಬ್ರಿಟಿಷ್ ಅಧಿಕಾರಿಯಾಗಿ, ಬಾಲಕಿ ಮಲ್ಲಿಯನ್ನು ಹೊತ್ತುಕೊಂಡು ಹೋಗುವ ಗೌರ್ನರ್ ಸ್ಕಾಟ್ ಬಕ್ಸ್‍ಟನ್ ಪಾತ್ರದಲ್ಲಿ ಮಿಂಚಿದ್ದರು ರೇ ಸ್ಟೀವನ್‍ಸನ್. ವಯಸ್ಸು ಕೇವಲ 58 ವರ್ಷ. ಸಾಯುವ ವಯಸ್ಸೇನಲ್ಲ. ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ.

    ಕ್ಯಾಸಿನೋ ಇನ್ ಇಸ್ಚಿಯಾ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದರು. ಇಟಲಿಯಲ್ಲಿ ಚಿತ್ರೀಕರಣದಲ್ಲಿದ್ದಾಗಲೇ ದಿಢೀರನೆ ಮೃತಪಟ್ಟಿದ್ದಾರೆ. ಸಾವಿಗೆ ಏನು ಕಾರಣ ಅನ್ನೋದು ಇನ್ನಷ್ಟೇ ಗೊತ್ತಾಗಬೇಕು.

    ಹಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದ ಸ್ಟೀವನ್‍ಸನ್, ಇಂಡಿಯನ್ ಸಿನಿಮಾಗಳಲ್ಲಿ ನಟಿಸಿದ್ದ ಏಕೈಕ ಸಿನಿಮಾ ಆರ್.ಆರ್.ಆರ್.

  • ಆರ್.ಆರ್.ಆರ್. ಆಸ್ಕರ್ ಕ್ಯಾಂಪೇನ್ : ರಾಜಮೌಳಿಯನ್ನು ಟೀಕಿಸಿದ ನಿರ್ದೇಶಕ

    ಆರ್.ಆರ್.ಆರ್. ಆಸ್ಕರ್ ಕ್ಯಾಂಪೇನ್ : ರಾಜಮೌಳಿಯನ್ನು ಟೀಕಿಸಿದ ನಿರ್ದೇಶಕ

    ಆಸ್ಕರ್ ಪ್ರಶಸ್ತಿ ಘೋಷಣೆಯ ದಿನ ಹತ್ತಿರವಾಗುತ್ತಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಇಡೀ ಆರ್.ಆರ್.ಆರ್. ತಂಡ ಈಗ ಅಮೆರಿಕದಲ್ಲಿದೆ. ಆರ್.ಆರ್.ಆರ್. ಚಿತ್ರದ ನಾಟು ನಾಟು.. ಹಾಡು ಪ್ರಶಸ್ತಿ ರೇಸ್‍ನಲ್ಲಿರುವುದೇ ಇದಕ್ಕೆ ಕಾರಣ. ಆರ್.ಆರ್.ಆರ್. ಮತ್ತು ಆಸ್ಕರ್ ರೇಸ್ ಎರಡರ ನಡುವೆ ಕಥೆ ಇದೆ. ಕೇವಲ ಪ್ರಶಸ್ತಿ ಸುತ್ತಿಗೆ ಹೋಗುವುದಲ್ಲ, ಚಿತ್ರವನ್ನು ಕ್ಯಾಂಪೇನ್ ಮಾಡಬೇಕು. ಆ ನಿಟ್ಟಿನಲ್ಲಿ ಆರ್.ಆರ್.ಆರ್. ತಂಡ ಶ್ರಮವಹಿಸಿದೆ. ಹಾಗಂತ ಅದು ಸುಮ್ಮನೆ ಆಗುವ ಮಾತಲ್ಲ, ಖರ್ಚಾಗುತ್ತೆ. ಅದು ಕೋಟಿ ಕೋಟಿಗಳಲ್ಲಿಯೇ ಇರುತ್ತೆ. ಆರ್.ಆರ್.ಆರ್. ತಂಡ ಖರ್ಚನ್ನೂ ಮಾಡಿದೆ. ಆದರೆ ಆ ಖರ್ಚು ಕೆಲವರ ಕೆಂಗಣ್ಣಿಗೂ ಗುರಿಯಾಗಿದೆ.

    ಆಸ್ಕರ್ ಕ್ಯಾಂಪೇನ್‌ಗಾಗಿ ಆರ್‌ಆರ್‌ಆರ್ ಸಿನಿಮಾ ತಂಡವು 80 ಕೋಟಿ ರೂ. ಖರ್ಚು ಮಾಡಿದೆ. ಆ 80 ಕೋಟಿ ರೂ.ಗಳನ್ನು ಕೊಟ್ಟರೆ 8 ಸಿನಿಮಾ ಮಾಡುತ್ತೇವೆ.

    ಇಂತಾದ್ದೊಂದು ಮಾತು ಹೇಳಿರುವ ನಿರ್ದೇಶಕನ ಹೆಸರು ತಮ್ಮಾರೆಡ್ಡಿ ಭಾರದ್ವಾಜ್. ಈತ ನಿರ್ಮಾಪಕನೂ ಹೌದು. ಇತ್ತೀಚೆಗೆ ರವೀಂದ್ರ ಭಾರತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಿರಿಯ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ ನಡೆದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ ತಮ್ಮಾರೆಡ್ಡಿ. ತಮ್ಮಾರೆಡ್ಡಿ 90ರ ದಶಕದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ. ಶಿವ ಶಕ್ತಿ, ಪಚನಿ ಸಂಸಾರಂ, ಊರ್ಮಿಳಾ, ವೇಟಗಾಡು, ಸ್ವರ್ಣಮುಖಿ, ಎಂಥಾ ಬಾಗುಂದೋ, ಪೋತೆ ಪೋನಿ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪ್ರತಿಘಟನ ಅವರ ನಿರ್ದೇಶನದ ಕೊನೇ ಸಿನಿಮಾ.

    ಇದಕ್ಕೆ ಪರ ವಿರೋಧ ಹೇಳಿಕೆಗಳೂ ವ್ಯಕ್ತವಾಗುತ್ತಿವೆ. ಆಸ್ಕರ್ ಪ್ರಶಸ್ತಿಗಾಗಿ ಖರ್ಚು ಮಾಡುವುದರಲ್ಲಿ ತಪ್ಪೇನಿದೆ.. ಭಾರತೀಯ ಸಿನಿಮಾ ಪ್ರಮೋಟ್ ಮಾಡಿದರೆ ಭಾರತೀಯ ಸಿನಿಮಾಗಳಿಗೆ ಲಾಭವೇ ತಾನೇ.. ಅವರ ದುಡ್ಡು.. ಅವರ ಜಾತ್ರೆ.. ಮಧ್ಯೆ ನಿಮ್ಮದೇನು.. ಎನ್ನುವವರಿಗೇನು ಕೊರತೆಯಿಲ್ಲ. ಹೌದು..ಹೌದು. ಅವರು ಹೇಳ್ತಿರೋದು ಸರಿ. ಇಷ್ಟಕ್ಕೂ ನಮ್ಮ ಭಾರತೀಯ ಸಿನಿಮಾಗೆ ಫಾರಿನ್ನಿವರ ಮೆಚ್ಚುಗೆ ಕಟ್ಟಿಕೊಂಡು ನಮಗೇನಾಗಬೇಕು. ಹಾಲಿವುಡ್ ಮಂದಿ ಮೆಚ್ಚಿದರಷ್ಟೇ ಒಳ್ಳೆಯ ಸಿನಿಮಾ ಎಂಬ ಭಾವನೆ ಬಿಡಬೇಕು. ಅಷ್ಟು ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿ, ಪ್ರಶಸ್ತಿಗೂ ಕೋಟಿ ಕೋಟಿ ಸುರಿಯಬೇಕಾ ಅನ್ನೋವ್ರೂ ಇದ್ದಾರೆ. ಇದೆಲ್ಲದರ ಮಧ್ಯೆ ಮಾರ್ಚ್ 17ರಂದು ಆಸ್ಕರ್ ಘೋಷಣೆಯಾಗಲಿದೆ.

  • ಆರ್.ಆರ್.ಆರ್. ಮಾರ್ಚ್ 18ಕ್ಕೋ.. ಏಪ್ರಿಲ್ 28ಕ್ಕೋ..?

    ಆರ್.ಆರ್.ಆರ್. ಮಾರ್ಚ್ 18ಕ್ಕೋ.. ಏಪ್ರಿಲ್ 28ಕ್ಕೋ..?

    ವೀಕೆಂಡ್ ಕಫ್ರ್ಯೂ, 50:50 ರೂಲ್ಸ್ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ದೇಶಾದ್ಯಂತ ಆರ್.ಆರ್.ಆರ್. ಹವಾ ಎದ್ದಿರಬೇಕಿತ್ತು. ಅನಿವಾರ್ಯವಾಗಿ ರಿಲೀಸ್ ಡೇಟ್ ಮುಂದೂಡಿದ ಸಂಸ್ಥೆ ಈಗಲೂ ಗೊಂದಲದಲ್ಲಿಯೇ ಇದೆ. ಆರ್.ಆರ್.ಆರ್. ಮುಂದೀಗ ಕೆಲವು ಡೇಟ್ಸ್ ಇವೆ.

    ಮಾರ್ಚ್ 18ಕ್ಕೆ ರಿಲೀಸ್ ಮಾಡೋದು ಮೊದಲ ಪ್ಲಾನ್. ಆಗ ಏಪ್ರಿಲ್ 1ರಂದು ರಿಲೀಸ್ ಆಗಲಿರುವ ದೊಡ್ಡ ಚಿತ್ರಗಳಿಗೆ ಗ್ಯಾಪ್ ಸಿಕ್ಕಂತಾಗುತ್ತೆ. ಏಪ್ರಿಲ್ 1ಕ್ಕೆ ತೆಲುಗಿನಲ್ಲೆ ಮಹೇಶ್ ಬಾಬು ಮತ್ತು ಚಿರಂಜೀವಿ ಸಿನಿಮಾಗಳಿವೆ.

    ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ಮತ್ತು ಲಾಲ್ ಸಿಂಗ್ ಚಡ್ಡಾ ಇದೆ. ಮಾರ್ಚ್ 18ನ್ನು ಬಿಟ್ಟರೆ ಆರ್.ಆರ್.ಆರ್. ಚಿತ್ರಕ್ಕೆ ಡೇಟ್ ಸಿಕ್ಕೋದು ಏಪ್ರಿಲ್ 28ಕ್ಕೆ. ಒಟ್ಟಿನಲ್ಲಿ ಮಾರ್ಚ್ ಮಧ್ಯಾಂತರದ ನಂತರ ದೇಶಾದ್ಯಂತ ಚಿತ್ರ ಪ್ರೇಮಿಗಳಿಗೆ ಸುಗ್ಗಿಯೋ ಸುಗ್ಗಿ.

  • ಆರ್‍ಆರ್‍ಆರ್ ಕನ್ನಡದಲ್ಲಿ ಕೊಟ್ಟ ಥ್ರಿಲ್

    ಆರ್‍ಆರ್‍ಆರ್ ಕನ್ನಡದಲ್ಲಿ ಕೊಟ್ಟ ಥ್ರಿಲ್

    ಆರ್‍ಆರ್‍ಆರ್. ರಾಜಮೌಳಿ ನಿರ್ದೇಶನದ ಸಿನಿಮಾದ ಟ್ರೇಲರ್ ಸಂಚಲನವನ್ನೇ ಸೃಷ್ಟಿಸಿದೆ. ಟ್ರೇಲರ್‍ನಲ್ಲೇ ಇಡೀ ಕಥೆ ಹೇಳಿರುವ ರಾಜಮೌಳಿ ಮತ್ತೊಮ್ಮೆ ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಗೆದ್ದಿದ್ದಾರೆ. ಅದರಲ್ಲೂ ಕನ್ನಡದವರಿಗೆ ಆರ್‍ಆರ್‍ಆರ್ ಕೊಟ್ಟಿರೋ ಥ್ರಿಲ್ ಬೇರೆಯದೇ ರೀತಿಯದ್ದು. ಕನ್ನಡದಲ್ಲಿಯೂ ಆರ್‍ಆರ್‍ಆರ್ ಟ್ರೇಲರ್ ರಿಲೀಸ್ ಆಗಿದೆ.

    ಈ ಟ್ರೇಲರ್‍ನಲ್ಲಿ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಸ್ವತಃ ತಾವೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಎನ್‍ಟಿಆರ್ ಅವರ ತಾಯಿಯೇನೋ ಕನ್ನಡದವರು. ಹೀಗಾಗಿ ಎನ್‍ಟಿಆರ್‍ಗೆ ಸ್ವಲ್ಪ ಕನ್ನಡ ಗೊತ್ತು. ಆದರೆ ರಾಮ್ ಚರಣ್ ತೇಜ ಹಾಗಲ್ಲ. ಆದರೂ.. ಇಬ್ಬರ ಧ್ವನಿ.. ಅದೂ ಕನ್ನಡದ ಧ್ವನಿ ಥ್ರಿಲ್ ಕೊಡುತ್ತಿದೆ.

    ಆದರೆ.. ಇಬ್ಬರೂ ಕನ್ನಡದಲ್ಲಿ ಇಡೀ ಸಿನಿಮಾದಲ್ಲಿ  ಡಬ್ ಮಾಡಿದ್ದಾರಾ..? ಗೊತ್ತಿಲ್ಲ. ಅದಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯಲೇಬೇಕು.

  • ಕನ್ನಡದ ಆರ್.ಆರ್.ಆರ್. ಸಿನಿಮಾ ನೋಡಿ ಅಭಿಮಾನಿಗಳು ಥ್ರಿಲ್..!

    ಕನ್ನಡದ ಆರ್.ಆರ್.ಆರ್. ಸಿನಿಮಾ ನೋಡಿ ಅಭಿಮಾನಿಗಳು ಥ್ರಿಲ್..!

    ರೌದ್ರಂ..ರಣಂ..ರುಧಿರಂ.. ಅನ್ನೋ ಲೈನ್ ಇಟ್ಟುಕೊಂಡು ಬಂದ ರಾಜಮೌಳಿ-ರಾಮ್‍ಚರಣ್-ತಾರಕ ರಾಮರಾವ್ ಸಿನಿಮಾ ಆರ್.ಆರ್.ಆರ್. ಇಂಡಿಯಾ ಬಾಕ್ಸಾಫೀಸಿನಲ್ಲಿ ಬರದ ದಾಖಲೆ ಗೊತ್ತೇ ಇದೆ. ಆದರೆ, ಇದು ಆ ಆರ್.ಆರ್.ಆರ್. ಕಥೆ ಅಲ್ವೇ ಅಲ್ಲ. ಕನ್ನಡದ ಆರ್.ಆರ್.ಆರ್. ಸಿನಿಮಾ ಸ್ಟೋರಿ. ಅದು ಎಲ್ಲ ಕಡೆ ಸಿಕ್ಕೋದಿಲ್ಲ. ಕೆಲವೇ ಕೆಲವು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಮಾತ್ರ ಸಿಗುತ್ತೆ. ಅದೂ ಒಂದು ಸಿನಿಮಾ ಅಲ್ಲ.. ಮೂರ್ ಮೂರು ಸಿನಿಮಾ.

    ಆರ್. : ರಕ್ಷಿತ್ ಶೆಟ್ಟಿಯವರ 777 ಚಾರ್ಲಿ

    ಆರ್. : ರಿಷಬ್ ಶೆಟ್ಟಿಯವರ ಹರಿಕಥೆ ಅಲ್ಲ ಗಿರಿಕಥೆ

    ಆರ್. ರಾಜೇಶ್ ಬಿ.ಶೆಟ್ಟಿ ನಟಿಸಿರೋ ತುರ್ತು ನಿರ್ಗಮನ

    ಈ ಮೂರೂ ಚಿತ್ರಗಳ ಪೋಸ್ಟರ್‍ನ್ನು ಒಂದೇ ಕಡೆ ಇಟ್ಟು ಇದು ಕನ್ನಡದ ಆರ್.ಆರ್.ಆರ್. ಎಂದು ಖುಷಿ ಪಡುತ್ತಿದ್ದಾರೆ ಫ್ಯಾನ್ಸ್.

    777 ಚಾರ್ಲಿ.. ಭಾವನಾತ್ಮಕ ಸಂಚಲನ ಮೂಡಿಸಿ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದೆ. ಹರಿಕಥೆ ಅಲ್ಲ ಗಿರಿಕಥೆ ಕಾಮಿಡಿ ಟ್ರ್ಯಾಕ್‍ನಲ್ಲಿ ನಕ್ಕೂ ನಕ್ಕೂ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುತ್ತಿದೆ.

    ತುರ್ತು ನಿರ್ಗಮನ.. ತನ್ನ ವಿಭಿನ್ನ ಕಥೆ ಮತ್ತು ಕಾನ್ಸೆಪ್ಟ್‍ನಿಂದಾಗಿಯೇ ಕ್ಲಾಸ್ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  • ಕನ್ನಡಿಗರ ಮನಗೆದ್ದ ಎನ್‍ಟಿಆರ್

    ಕನ್ನಡಿಗರ ಮನಗೆದ್ದ ಎನ್‍ಟಿಆರ್

    ಕರ್ನಾಟಕದಲ್ಲಿಯೇ ಹುಟ್ಟಿ, ಕನ್ನಡದಲ್ಲಿಯೇ ಬೆಳೆದ ಎಷ್ಟೋ ನಟ ನಟಿಯರು ನಮಗೆ ಕನ್ನಡ್ ಗೊತ್ತಿಲ್ಲ ಎಂದು ಹೇಳಿಕೊಳ್ಳೋದೇ ಸ್ಟೇಟಸ್ ಎಂದುಕೊಳ್ಳುತ್ತಿರುವಾಗ ಟಾಲಿವುಡ್ ಸೂಪರ್ ಸ್ಟಾರ್ ಎನ್‍ಟಿಆರ್ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಎನ್‍ಟಿಆರ್ ಹುಟ್ಟಿದ್ದು ಬೆಳೆದಿದ್ದು ಆಂಧ್ರದಲ್ಲಿ. ತಂದೆ ಆಂಧ್ರಪ್ರದೇಶದವರು. ಕನ್ನಡದಲ್ಲಿ ಡಾ.ರಾಜ್ ಕುಟುಂಬ ಹೇಗೋ.. ಹಾಗೆ ತೆಲುಗಿನಲ್ಲಿ ಎನ್‍ಟಿಆರ್ ಫ್ಯಾಮಿಲಿ. ಎನ್‍ಟಿಆರ್ ಅವರ ಪುತ್ರ ಹರಿಕೃಷ್ಣ-ಶಾಲಿನಿ ಭಾಸ್ಕರ್ ರಾವ್ ಅವರ  ಮಗ ಈ ಎನ್‍ಟಿಆರ್. ಶಾಲಿನಿ ಕುಂದಾಪುರದವರು. ಕನ್ನಡದ ನಂಟು ಅಷ್ಟೆ. ಅದನ್ನು ಎನ್‍ಟಿಆರ್ ಹೆಮ್ಮೆಯಿಂದ ಹಲವೆಡೆ ಹೇಳಿಕೊಂಡಿದ್ದಾರೆ. ಅದನ್ನು ಆರ್‍ಆರ್‍ಆರ್ ಚಿತ್ರದ ಸುದ್ದಿಗೋಷ್ಟಿಯಲ್ಲೂ ಸಾಬೀತು ಮಾಡಿದ್ದಾರೆ.

    ಆರ್‍ಆರ್‍ಆರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎನ್‍ಟಿಆರ್ ಮಾತನಾಡಿದ್ದೆಲ್ಲ ಕನ್ನಡದಲ್ಲೇ. ನನ್ನ ಕನ್ನಡ ಸ್ವಲ್ಪ ಬೇರೆಯ ರೀತಿ ಇದೆ. ಹೆಚ್ಚು ಬಳಕೆ ಮಾಡದೇ ಇರೋದ್ರಿಂದ ಈಗ ತಪ್ಪುಗಳಾಗಬಹುದು. ತಪ್ಪಿದ್ದರೆ ಕ್ಷಮಿಸಿ ಎನ್ನುತ್ತಲೇ ಮಾತನ್ನಾರಂಭಿಸಿದ ಎನ್‍ಟಿಆರ್, ಆರ್‍ಆರ್‍ಆರ್ ಚಿತ್ರದಲ್ಲಿ ಕನ್ನಡದಲ್ಲಿಯೂ ತಾವೇ ಡಬ್ಬಿಂಗ್ ಮಾಡಿರೋದಾಗಿ ಹೇಳಿದ್ದಾರೆ. ಇಡೀ ಚಿತ್ರದಲ್ಲಿ ತಾವು ಮತ್ತು ರಾಮ್ ಚರಣ್ ತೇಜ ಇಬ್ಬರೂ ಕನ್ನಡದಲ್ಲಿ ಡಬ್ ಮಾಡಿರೋದಾಗಿ ತಿಳಿಸಿರೋ ಎನ್‍ಟಿಆರ್ ಕನ್ನಡಿಗರ ಖುಷಿ ಹೆಚ್ಚಿಸಿದ್ದಾರೆ.

    ಕನ್ನಡದಲ್ಲಿ ಡಬ್ ಮಾಡುತ್ತಿದ್ದೇನೆ ಎಂದು ಗೊತ್ತಾದಾಗ ಅಮ್ಮ ನೋಡು ಮಗಾ.. ಅಲ್ಲಿ ನಮ್ಮವರೆಲ್ಲ ಇದ್ದಾರೆ. ಕನ್ನಡದಲ್ಲಿ ಮಾಡದೇ ಇದ್ದರೂ ಪರವಾಗಿಲ್ಲ. ಆದರೆ, ತಲೆ ತಗ್ಗಿಸುವ ಹಾಗೆ ಮಾಡಬೇಡ. ಚೆನ್ನಾಗಿ ಮಾಡು ಎಂದಿದ್ದರಂತೆ.

    ಸುದ್ದಿಗೋಷ್ಟಿಯಲ್ಲಿ ಪುನೀತ್ ಅವರ ಚಿತ್ರಕ್ಕಾಗಿ ಹಾಡಿದ್ದ ಗೆಳೆಯಾ ಓ ಗೆಳೆಯಾ.. ಹಾಡನ್ನು ಒಮ್ಮೆ ಹಾಡಿದ ಎನ್‍ಟಿಆರ್ ಈ ಹಾಡನ್ನು ಹಾಡಿದ್ದೇ ಪುನೀತ್ ಸ್ನೇಹಕ್ಕಾಗಿ. ಪುನೀತ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಎನಿಸುತ್ತದೆ. ಇನ್ನು ಮುಂದೆ ಈ ಹಾಡನ್ನು ಎಲ್ಲಿಯೂ.. ಯಾವುದೇ ವೇದಿಕೆಯಲ್ಲೂ ಹಾಡಲ್ಲ ಎಂದೂ ಘೋಷಿಸಿದರು.

  • ಕನ್ನಡಿಗರೇ ಕನ್ನಡದಲ್ಲಿ ನೋಡಲ್ಲ' - ಪ್ರದರ್ಶಕರ ವಾದ : ತಪ್ಪಾಗಿದ್ದೆಲ್ಲಿ..?

    ಕನ್ನಡಿಗರೇ ಕನ್ನಡದಲ್ಲಿ ನೋಡಲ್ಲ' - ಪ್ರದರ್ಶಕರ ವಾದ : ತಪ್ಪಾಗಿದ್ದೆಲ್ಲಿ..?

    ಆರ್.ಆರ್.ಆರ್. ಸಿನಿಮಾ ಕನ್ನಡದಲ್ಲೂ ಬರುತ್ತಿದೆ. ಈ ಚಿತ್ರಕ್ಕೆ ಕರ್ನಾಟಕದಲ್ಲಿ ತೆಲುಗರನ್ನೂ ಸೇರಿಸಿಕೊಂಡು ಈವೆಂಟ್ ಮಾಡಿದ್ದು ಬಿಟ್ಟರೆ ವಿಶೇಷ ಪ್ರಚಾರವನ್ನೇನೂ ಮಾಡಿಲ್ಲ ಚಿತ್ರತಂಡ. ಈ ಚಿತ್ರಕ್ಕೆ ರಾಮ್ ಚರಣ್ ಮತ್ತು ಎನ್‍ಟಿಆರ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ ಅನ್ನೊದನ್ನು ಹೆಮ್ಮೆಯಿಂದ ಹೇಳಿಕೊಂಡಿತ್ತು ಚಿತ್ರತಂಡ. ಆದರೆ ಹಾಗೆ ಅವರೆಲ್ಲ ಡಬ್ ಮಾಡಿದ ಚಿತ್ರವನ್ನು ಕನ್ನಡದಲ್ಲಿ ರಿಲೀಸ್ ಮಾಡುತ್ತಿಲ್ಲ.

    ಕರ್ನಾಟಕದಲ್ಲಿ ಆರ್.ಆರ್.ಆರ್. ಚಿತ್ರಕ್ಕೆ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಸಿಕ್ಕಿವೆ. ಇದರಲ್ಲಿ ಕನ್ನಡದ ಆರ್.ಆರ್.ಆರ್. ಪ್ರದರ್ಶನವಾಗುತ್ತಿರುವ ಸ್ಕ್ರಿನ್ ಸಂಖ್ಯೆ 20 ದಾಟುತ್ತಿಲ್ಲ. ವಿಶೇಷವೆಂದರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ಕನ್ನಡ ವರ್ಷನ್‍ಗಿಂತ ತೆಲುಗು, ತಮಿಳು, ಹಿಂದಿ.. ಅಷ್ಟೇ ಏಕೆ ಮಲಯಾಳಂ ವರ್ಷನ್‍ಗಳಿಗೂ ಹೆಚ್ಚು ಸ್ಕ್ರೀನ್ ಇವೆ. ಇದಕ್ಕೆ ಪ್ರದರ್ಶಕರು ನೀಡೋ ಕಾರಣ ಕನ್ನಡಿಗರು ಕನ್ನಡದಲ್ಲಿ ಡಬ್ ಚಿತ್ರಗಳನ್ನು ನೋಡಲ್ಲ ಅನ್ನೋದು.

    ಪ್ರದರ್ಶಕರ ವಾದವೇನು?

    ಕನ್ನಡದಲ್ಲಿ ಡಬ್ ಆದ ಚಿತ್ರಗಳನ್ನು ಕನ್ನಡಿಗರು ನೋಡುತ್ತಿಲ್ಲ. ಮೂಲ ಭಾಷೆಯಲ್ಲೇ ನೋಡಲು ಇಷ್ಟಪಡುತ್ತಿದ್ದಾರೆ.

    ಈ ಹಿಂದೆ ನಾವು ಅಜಿತ್, ವಿಜಯ್, ಸಲ್ಮಾನ್ ಖಾನ್ ಸೇರಿದಂತೆ ಸ್ಟಾರ್ ನಟರ ಡಬ್ಬಿಂಗ್ ಚಿತ್ರಗಳನ್ನು ಪ್ರದರ್ಶನ ಮಾಡಿ ನಷ್ಟ ಮಾಡಿಕೊಂಡಿದ್ದೇವೆ.

    ಡಬ್ ಆದ ಚಿತ್ರಗಳನ್ನು ರಿಲೀಸ್ ಮಾಡಿದರೆ ಅದರಿಂದ ಚಿತ್ರಮಂದಿರದ ಬಾಡಿಗೆಯೂ ಹುಟ್ಟುತ್ತಿಲ್ಲ.

    ಕೆ.ವಿ.ಎನ್. ಪ್ರೊಡಕ್ಷನ್ಸ್ ವಾದವೇನು?

    ನಾವು ಇದನ್ನು ಕನ್ನಡದಲ್ಲಿಯೇ ರಿಲೀಸ್ ಮಾಡೋಕೆ ಚಿತ್ರಮಂದಿರಗಳವರ ಮನವೊಲಿಸುತ್ತಿದ್ದೇವೆ. ಎಷ್ಟು ಸ್ಕ್ರೀನ್/ಥಿಯೇಟರುಗಳಲ್ಲಿ ರಿಲೀಸ್ ಮಾಡುತ್ತೇವೆ ಅನೋದನ್ನು ಶೀಘ್ರದಲ್ಲೇ ಹೇಳ್ತೇವೆ.

    ವಿಚಿತ್ರವೆಂದರೆ ಸಿನಿಮಾ ನಾಳೆಯೇ ರಿಲೀಸ್. ಇನ್ನೂವರೆಗೆ ಒಂದು ಖಚಿತ ನಿರ್ಧಾರಕ್ಕೆ ಬಂದಿಲ್ಲ. ಆರ್.ಆರ್.ಆರ್. ಕನ್ನಡದಲ್ಲಿ ಬರುತ್ತಿದೆ ಎಂದ ಮೇಲೆ ಅದಕ್ಕೆ ತಕ್ಕಂತೆ ಪ್ರಚಾರವನ್ನಾದರೂ ಮಾಡಬೇಕಿತ್ತು. ಆದರೆ ಈವೆಂಟ್ ಬಿಟ್ಟರೆ ಕನ್ನಡ ವರ್ಷನ್‍ನ ಆರ್.ಆರ್.ಆರ್. ಬಗ್ಗೆ ಪ್ರಚಾರ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಚಿತ್ರಕ್ಕೆ ರಾಜಮೌಳಿ ಸಿನಿಮಾ ಎಂಬ ಹೈಪ್ ಇದ್ದರೆ ಸಾಕು ಎಂಬ ನಿರ್ಧಾರಕ್ಕೆ ಬಂದಂತಿದೆ. ಈಗಲೂ ಆರ್.ಆರ್.ಆರ್. ಬಗ್ಗೆ ಪ್ರೇಕ್ಷಕರಿಗೆ ಇರುವ ಕುತೂಹಲ, ರಾಷ್ಟ್ರಮಟ್ಟದಲ್ಲಿ ಸಿಕ್ಕಿರುವ ಹೈಪ್‍ನಿಂದಲೇ ಪ್ರಚಾರ ಹೊರತು, ಕನ್ನಡದ ಆರ್.ಆರ್.ಆರ್. ಬಗ್ಗೆ ವಿಶೇಷ ಪ್ರಚಾರವನ್ನೇ ಮಾಡಿಲ್ಲ. ಕನ್ನಡಿಗರು ಕನ್ನಡದಲ್ಲಿಯೇ ನೋಡಬೇಕು ಎಂದರೆ ಹೇಗೆ?

  • ಜೇಮ್ಸ್ ಚಿತ್ರಕ್ಕೆ ಆರ್.ಆರ್.ಆರ್. ಕಂಟಕ : ಸಿದ್ದರಾಮಯ್ಯ ಆರೋಪವೇನು?

    ಜೇಮ್ಸ್ ಚಿತ್ರಕ್ಕೆ ಆರ್.ಆರ್.ಆರ್. ಕಂಟಕ : ಸಿದ್ದರಾಮಯ್ಯ ಆರೋಪವೇನು?

    ಜೇಮ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಪ್ರತಿದಿನ, ಪ್ರತಿ ಶೋ ಹೌಸ್‍ಫುಲ್. ನಾಲ್ಕೇ ದಿನಕ್ಕೆ 100 ಕೋಟಿ ದಾಟಿ ದಾಖಲೆ ಬರೆದಿರೋ ಸಿನಿಮಾ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್. ಈ ಚಿತ್ರಕ್ಕೀಗ ಆರ್.ಆರ್.ಆರ್. ಕಂಟಕವಾಗುತ್ತಿದೆಯಾ..?

    ಜೇಮ್ಸ್ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ಆರ್.ಆರ್.ಆರ್. ಹಾಗೂ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಪ್ರದರ್ಶಿಸುವಂತೆ ಒತ್ತಡ ಶುರುವಾಗಿದೆಯಂತೆ. ಕಾಶ್ಮೀರ್ ಫೈಲ್ಸ್ ಹಾಕುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರು ಚಿತ್ರಮಂದಿರಗಳವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆರ್.ಆರ್.ಆರ್. ಬಿಡುಗಡೆಗೆ ಚಿತ್ರಮಂದಿರಗಳ ಮೇಲೆ ಬೇರೆಯದೇ ರೀತಿಯ ಒತ್ತಡವಿದೆ. ಇದನ್ನು ನಿಲ್ಲಿಸಬೇಕು. ಜೇಮ್ಸ್ ಚಿತ್ರಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

    ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿರುವುದು ನಿಜ ಎಂದಿದ್ದಾರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ. ಜೇಮ್ಸ್ ಚಿತ್ರ ನೋಡಲು ಆಹ್ವಾನ ನೀಡೋಕೆ ಹೋಗಿದ್ದಾಗ ಈ ವಿಷಯ ಹೇಳಿದ್ದೆ. ಯಾರು ಒತ್ತಡ ಹೇರುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ ಕಿಶೋರ್.

    ನಿರ್ದೇಶಕ ಚೇತನ್ ಕುಮಾರ್ ಕೂಡಾ ಜೇಮ್ಸ್ ಚಿತ್ರವನ್ನು ಅಭಿಮಾನಿಗಳು ನೋಡಲು ಬಿಡಿ. ಚಿತ್ರವನ್ನು ಥಿಯೇಟರುಗಳಿಂದ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ.

  • ಜೇಮ್ಸ್‍ಗೆ ಸಮಸ್ಯೆ ಕಾಶ್ಮೀರ್ ಫೈಲ್ಸ್ ಚಿತ್ರವಾ? ಆರ್.ಆರ್.ಆರ್. ಚಿತ್ರವಾ ?

    ಜೇಮ್ಸ್‍ಗೆ ಸಮಸ್ಯೆ ಕಾಶ್ಮೀರ್ ಫೈಲ್ಸ್ ಚಿತ್ರವಾ? ಆರ್.ಆರ್.ಆರ್. ಚಿತ್ರವಾ ?

    ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಾಕುವುದಕ್ಕಾಗಿ ಬಿಜೆಪಿಯ ಶಾಸಕರು, ಸಚಿವರು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ನವರಿಗೆ ಫೋನ್ ಮಾಡಿ ಒತ್ತಡ ಹೇರುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು ವಿಧಾನಸಭೆ ಪ್ರತಿಪಕ್ಷ ನಾಯಕ.

    ಪುನೀತ್ ರಾಜಕುಮಾರ್ ಚಿತ್ರವನ್ನು ತೆಗೆದು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಾಕೋಕೆ ನಾವು ಒತ್ತಡ ಹೇರಿಲ್ಲ. ಅದು ನಮ್ಮ ಕೆಲಸ ಅಲ್ಲ. ಇದೆಲ್ಲ ಊಹಾಪೋಹ ಎಂದಿದ್ದರು ಗೃಹ ಸಚಿವ ಅರಗ ಜ್ಞಾನೇಂದ್ರ.

    ಜೇಮ್ಸ್ ಚಿತ್ರವನ್ನು ವಿನಾಕಾರಣ ತೆಗೆಯೋಕೆ ಅವಕಾಶ ಇಲ್ಲ. ಸರ್ಕಾರ ಜೇಮ್ಸ್ ಚಿತ್ರತಂಡದ ಜೊತೆಗಿದೆ ಎಂದು ಆಶ್ವಾಸನೆ ನೀಡಿದ್ದರು ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ.

    ಹಾಗಾದರೆ ಚಿತ್ರಕ್ಕೆ ಅಡ್ಡಿಯಾಗಿರುವುದು ಯಾರು? ಯಾವ ಚಿತ್ರ? ಈ ಪ್ರಶ್ನೆಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಕೊಟ್ಟಿರುವ ಸ್ಪಷ್ಟನೆ ಇದು.

    ಮೊದಲ ವಾರ ಎಲ್ಲ ಚಿತ್ರಮಂದಿರ, ಸ್ಕ್ರೀನ್‍ಗಳಲ್ಲೂ ಜೇಮ್ಸ್ ಪ್ರದರ್ಶನವಾಗಿದೆ. ಉದಾಹರಣೆಗೆ ಮಾಗಡಿ ರಸ್ತೆಯ ಪ್ರಸನ್ನ, ವೀರೇಶ್ ಚಿತ್ರಮಂದಿರದ ಎರಡೂ ಸ್ಕ್ರೀನ್, ಅಂಜನ್ ಥಿಯೇಟರ್, ಅದೇ ರಸ್ತೆಯಲ್ಲಿರೋ ಜಿಟಿ ಮಾಲ್‍ನ ಎಲ್ಲ ಸ್ಕ್ರೀನ್‍ಗಳಲ್ಲೂ ಜೇಮ್ಸ್ ಶೋ ಮಾಡಿದ್ದೇವೆ. ಸಾಮಾನ್ಯವಾಗಿ ಆ ಒಂದು ರಸ್ತೆಯಲ್ಲಿ ಒಂದೇ ಥಿಯೇಟರ್ ಪಡೆಯಲಾಗುತ್ತೆ. ಎರಡನೇ ವಾರವೂ ಎಲ್ಲವೂ ನಮಗೆ ಬೇಕು ಅನ್ನೋಕೆ ಆಗಲ್ಲ. ವೀರೇಶ್‍ನಲ್ಲಿ ಸಿನಿಮಾ ಕಂಟಿನ್ಯು ಆಗುತ್ತೆ. ಉಳಿದಂತೆ ಸ್ಕ್ರೀನ್ ಸಂಖ್ಯೆ ಕಡಿಮೆಯಾಗುತ್ತೆ. ಇನ್ನು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಅವರು ಒಂದೋ ಎರಡೋ ಸ್ಕ್ರೀನ್‍ಗಳಲ್ಲಿ, ಅದೂ ರಾತ್ರಿಯಲ್ಲಿ ಕೇಳಿದ್ದಾರೆ. ಅದರಿಂದ ನಮಗೇನೂ ನಷ್ಟವಿಲ್ಲ. ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ ಚಿತ್ರಕ್ಕೆ ಅಡ್ಡಿಯಾಗಿಲ್ಲ. ಜೇಮ್ಸ್ ಚಿತ್ರವಿದ್ದ ಬಹುತೇಕ ಸ್ಕ್ರೀನ್ ಮತ್ತು ಥಿಯೇಟರುಗಳನ್ನು ತೆಗೆದುಕೊಂಡಿರೋದು ಆರ್.ಆರ್.ಆರ್. ಎಂದಿದ್ದಾರೆ ಕಿಶೋರ್.

  • ನಾಟ್ಟು ನಾಟ್ಟುಗೆ ಗೋಲ್ಡನ್ ಗ್ಲೋಬ್ ಅವಾರ್ಡ್ : ಏನಿದರ ಮಹತ್ವ?

    ನಾಟ್ಟು ನಾಟ್ಟುಗೆ ಗೋಲ್ಡನ್ ಗ್ಲೋಬ್ ಅವಾರ್ಡ್ : ಏನಿದರ ಮಹತ್ವ?

    ನಾಟ್ಟು ನಾಟ್ಟು.. ಎಂದು ಹಾಡಿ ಕುಣಿದು ರಂಗೇರಿಸಿದ್ದವರು ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ. ಆರ್.ಆರ್.ಆರ್. ಚಿತ್ರದಲ್ಲಿನ ಹಾಡಿನಲ್ಲಿ ಈ ಹಾಡು ಮತ್ತು ನೃತ್ಯಕ್ಕೆ ಬ್ರಿಟಿಷರು ಸೋತು ಸುಸ್ತಾಗುತ್ತಾರೆ. ಹಾಡಿನಂತೆಯೇ ವಾಸ್ತವದಲ್ಲೂ ಆಗಿದೆ. ನಾಟ್ಟು ನಾಟ್ಟು ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದೆ. ಎಂ.ಎಂ.ಕೀರವಾಣಿ ಅವರಿಗೆ ಹಾಡಿನ ಈ ಸಂಗೀತಕ್ಕಾಗಿ ಗೋಲ್ಡನ್ ಗ್ಲೋಬ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಸೇರಿದಂತೆ ತೆಲುಗು ನಾಡಿನವರು ಹೆಮ್ಮೆಯಿಂದ ಕುಣಿದಾಡುತ್ತಿದ್ದಾರೆ. ತೆಲುಗು ಚಿತ್ರರಂಗದವರಂತೂ ಇದು ನಮ್ಮ ಹೆಮ್ಮೆ ಎಂದು ಎದೆಯುಬ್ಬಿಸುವಂತೆ ಮಾಡಿದ್ದಾರೆ ರಾಜಮೌಳಿ. ಇದು ಭಾರತೀಯ ಚಿತ್ರರಂಗದ ಹೆಮ್ಮೆಯೂ ಹೌದು. ಯಶ್, ಹೊಂಬಾಳೆ ಸೇರಿದಂತೆ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ನಾಟ್ಟು ನಾಟ್ಟು ಸಾಧನೆಯನ್ನು ಸಂಭ್ರಮಿಸಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಭಾರತೀಯ ಚಿತ್ರ ಆರ್.ಆರ್.ಆರ್.

    ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು ಕೀರವಾಣಿ. ಸಾಹಿತ್ಯ ಬರೆದಿದ್ದು ಚಂದ್ರಬೋಸ್. ಹಾಡನ್ನು ಹಾಡಿದ್ದು ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್. ಕಾಲಭೈವರ ಕೀರವಾಣಿಯವರ ಮಗ. ನಿರ್ದೇಶಕ ರಾಜಮೌಳಿ ಪರಸ್ಪರ ಸಹೋದರರಾಗಬೇಕು. ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದವರ ಹೆಸರು ಪ್ರೇಮ್ ರಕ್ಷಿತ್.

    ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಟ ಪ್ರಶಸ್ತಿಗಳಲ್ಲೊಂದು. ಪ್ರತೀ ವರ್ಷ ಆಸ್ಕರ್ ಘೋಷಣೆಗೆ ಮುನ್ನ ಗೋಲ್ಡನ್ ಗ್ಲೋಬ್ ಘೋಷಣೆಯಾಗುತ್ತದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಚಿತ್ರಗಳ ಬಗ್ಗೆ ಆಸ್ಕರ್ ಜ್ಯೂರಿಗಳಲ್ಲಿ ವಿಶೇಷ ಪ್ರೀತಿಯೂ ಇರುತ್ತದೆ. ಇದನ್ನು ಆಸ್ಕರ್ ನಂತರದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಗುರುತಿಸುತ್ತದೆ ವಿಶ್ವ ಚಿತ್ರರಂಗ. ಭಾರತೀಯ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಹೇಗೆ ಮಾನ್ಯತೆ ಪಡೆದಿವೆಯೋ, ಹಾಗೆಯೇ ವಿಶ್ವ ಚಿತ್ರರಂಗದಲ್ಲಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಮನ್ನಣೆಯಿದೆ.

  • ಪ್ಯಾನ್ ಇಂಡಿಯಾ ಚಿತ್ರಗಳ ರಿಲೀಸ್ ಡೇಟ್ ಫಿಕ್ಸ್ : ಯಾರಿಗೆ ಟೆನ್ಷನ್?

    ಪ್ಯಾನ್ ಇಂಡಿಯಾ ಚಿತ್ರಗಳ ರಿಲೀಸ್ ಡೇಟ್ ಫಿಕ್ಸ್ : ಯಾರಿಗೆ ಟೆನ್ಷನ್?

    ಬಾಹುಬಲಿ & ಕೆಜಿಎಫ್ ನಂತರ ದ.ಭಾರತ ಚಿತ್ರರಂಗದಲ್ಲಿ ಶುರುವಾದ ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರ.. ಆರ್ಭಟ ಮುಂದುವರೆಯುತ್ತಿದೆ. ಕೆಜಿಎಫ್ ಚಿತ್ರವೇನೋ 2022ರ ಏಪ್ರಿಲ್ 14ಕ್ಕೆ ಡೇಟ್ ಫಿಕ್ಸ್ ಮಾಡಿಕೊಂಡಾಯ್ತು. ಆದರೆ ಇನ್ನೂ ಹಲವಾರು ಚಿತ್ರಗಳು ಕ್ಯೂನಲ್ಲಿವೆ.

    ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ನಟಿಸಿರುವ, ಸುಕುಮಾರ್ ನಿರ್ದೇಶನದ ಪುಷ್ಪ ಡಿಸೆಂಬರ್ 17ಕ್ಕೆ ರಿಲೀಸ್ ಆಗುತ್ತಿದೆ.

    2022ರ ಜನವರಿ ಮೊದಲ ವಾರ, ಜನವರಿ 7ಕ್ಕೆ ಆರ್‍ಆರ್‍ಆರ್ ರಿಲೀಸ್. ಅದು ರಾಜಮೌಳಿ ಡೈರೆಕ್ಷನ್‍ನಲ್ಲಿ ಎನ್‍ಟಿಆರ್, ರಾಮ್‍ಚರಣ್ ತೇಜ, ಅಜಯ್ ದೇವಗನ್, ಅಲಿಯಾ ಭಟ್.. ನಟಿಸಿರುವ ಚಿತ್ರ.

    ಇದರ ನಡುವೆ ಡಿಸೆಂಬರ್ ಹೊತ್ತಿಗೆ ಕನ್ನಡದ ಹಲವು ಚಿತ್ರಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಶ್ರೀಮುರಳಿಯವರ ಮದಗಜ, ರಕ್ಷಿತ್ ಶೆಟ್ಟಿಯವರ ಚಾರ್ಲಿ 777 ಡಿಸೆಂಬರ್‍ಗೆ ರಿಲೀಸ್ ಆಗುತ್ತಿವೆ. ಈ ಎರಡೂ ಚಿತ್ರಗಳು ಈಗ ತಮ್ಮ ಚಿತ್ರಗಳಿಗೆ ಸ್ಪೆಷಪ್ ಪ್ಲಾನ್ ಮಾಡಿಕೊಳ್ಳಬೇಕು

  • ಮತ್ತೆ ಕೊರೊನಾ ಭಯ : ಆರ್.ಆರ್.ಆರ್ ರಿಲೀಸ್ ಮುಂದಕ್ಕೆ

    ಮತ್ತೆ ಕೊರೊನಾ ಭಯ : ಆರ್.ಆರ್.ಆರ್ ರಿಲೀಸ್ ಮುಂದಕ್ಕೆ

    ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಎಲ್ಲವೂ ಸಿದ್ಧವಾಗಿತ್ತು. ಪ್ರಚಾರವೂ ಚೆನ್ನಾಗಿಯೇ ನಡೆದಿತ್ತು. ಪ್ರೇಕ್ಷಕರ ನಿರೀಕ್ಷೆಯೂ ಮುಗಿಲೆತ್ತರದಲ್ಲಿತ್ತು. ಸೂಪರ್ ಹಿಟ್ ಆಗುವ ಎಲ್ಲ ನಿರೀಕ್ಷೆಗಳೂ ಇದ್ದವು. ಇದೆಲ್ಲದರ ನಡುವೆಯೇ ಜನವರಿ 14ರಂದು ರಿಲೀಸ್ ಆಗಬೇಕಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್‍ನ್ನು ಮುಂದೆ ಹಾಕಿದೆ ಚಿತ್ರತಂಡ. ಕಾರಣ ಕೊರೊನಾ ಭಯ.

    ಸದ್ಯಕ್ಕೆ ಕೊರೊನಾ ಇಲ್ಲ. ಆದರೆ ಒಮಿಕ್ರಾನ್, ಡೆಮಿಕ್ರಾನ್, ಫ್ಲೋರೈನ್.. ಹೀಗೆ ಕೊರೊನಾದ ಚಿತ್ರವಿಚಿತ್ರ ಹೆಸರುಗಳು ಮತ್ತೆ ಕೇಳಿ ಬರುತ್ತಿವೆ.  ಹೀಗಾಗಿಯೇ ಅಕಸ್ಮಾತ್ ಮತ್ತೆ ಲಾಕ್ ಡೌನ್ ಆದರೆ ಅನ್ನೋ ಭಯ, ಪ್ರೇಕ್ಷಕರ ಭರ್ತಿಗೆ ಶೇ.50ರ ನಿರ್ಬಂಧ ವಿಧಿಸಿದರೆ ಅನ್ನೋ ಭಯ.. ಈ ನಿರ್ಧಾರಕ್ಕೆ ಕಾರಣವಾಗಿದೆ.

    ರಾಜಮೌಳಿ ನಿರ್ದೇಶನದ ಜ್ಯೂ.ಎನ್‍ಟಿಆರ್, ರಾಮ್ ಚರಣ್ ತೇಜ, ಅಜಯ್ ದೇವಗನ್, ಅಲಿಯಾ ಭಟ್.. ಮೊದಲಾದವರು ನಟಿಸಿರೋ ಚಿತ್ರ ಆರ್‍ಆರ್‍ಆರ್. ಬಹುಶಃ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಮತ್ತೊಂದು ಇತಿಹಾಸ ಬರೆದ ಆರ್.ಆರ್.ಆರ್.

    ಮತ್ತೊಂದು ಇತಿಹಾಸ ಬರೆದ ಆರ್.ಆರ್.ಆರ್.

    ರಾಜಮೌಳಿ-ರಾಮ್ ಚರಣ್ ತೇಜ-ತಾರಕರತ್ನ ರಾಮರಾವ್ ಜೋಡಿಯ ಆರ್.ಆರ್.ಆರ್. ಈಗಾಗಲೇ ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಬಾಕ್ಸಾಫೀಸಿನಲ್ಲಿ ದಾಖಲೆಗಳ ಪರ್ವತವನ್ನೇ ಸೃಷ್ಟಿಸಿದೆ.ಭಾರತದಲ್ಲಷ್ಟೇ ಅಲ್ಲ, ಜಪಾನ್‍ನಲ್ಲೂ ಬಾಕ್ಸಾಫೀಸ್ ದಾಖಲೆ ಬರೆದಿದೆ. ನಾಟು ನಾಟು ಹಾಡಿನ ಸಂಗೀತಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಿರುವ ಆರ್.ಆರ್.ಆರ್. ಇದೀಗ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್‍ನ್ನೂ ಗೆದ್ದುಕೊಂಡಿದೆ. ಒಂದಲ್ಲ..ನಾಲ್ಕು ಪ್ರಶಸ್ತಿಗಳು.

    ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ

    ಬೆಸ್ಟ್ ಇಂಟರ್ನ್ಯಾಷನಲ್ ಫಿಲ್ಮ್

    ಬೆಸ್ಟ್ ಆಕ್ಷನ್ ಫಿಲ್ಮ್

    ಬೆಸ್ಟ್ ಸ್ಟಂಟ್ಸ್ ಹಾಗೂ

    ಬೆಸ್ಟ್ ಸಾಂಗ್ ವಿಭಾಗಗಳಲ್ಲಿ ‘ಆರ್ಆರ್ಆರ್’ ಚಿತ್ರ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಚಿತ್ರದ ಹೀರೋ ರಾಮ್ ಚರಣ್ ತೇಜ್ ಕೂಡಾ ಪ್ರಶಸ್ತಿ ಪ್ರದಾನ ಮಾಡುವ ಗೌರವ ಪಡೆದುಕೊಂಡಿದ್ದು ಇನ್ನೊಂದು ವಿಶೇಷ.

    ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ನಾನು ಧನ್ಯವಾದಗಳನ್ನ ಅರ್ಪಿಸುತ್ತೇನೆ. ಬೆಸ್ಟ್ ಸ್ಟಂಟ್ಸ್ ಪ್ರಶಸ್ತಿ ಆಕ್ಷನ್ ಕೊರಿಯೋಗ್ರಾಫರ್ಗೆ ಸೇರಬೇಕು. ಅವರು ಈ ಚಿತ್ರಕ್ಕಾಗಿ ತುಂಬಾ ಶ್ರಮಿಸಿದ್ದರು ಜೈಹಿಂದ್ ಎಂದಿದ್ದಾರೆ.

    2020ರಲ್ಲಿ ತೆರೆಗೆ ಬಂದ ತೆಲುಗಿನ ಆಕ್ಷನ್ ಡ್ರಾಮಾ ಸಿನಿಮಾ ‘ಆರ್ಆರ್ಆರ್’. ಈ ಚಿತ್ರಕ್ಕೆ ಎಸ್. ಎಸ್. ರಾಜಮೌಳಿ ಆಕ್ಷನ್ ಕಟ್ ಹೇಳಿದ್ದರು. ವಿ. ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ‘ಆರ್ಆರ್ಆರ್’ ಚಿತ್ರದಲ್ಲಿ ಜೂ. ಎನ್ ಟಿ ಆರ್, ರಾಮ್ ಚರಣ್, ಅಜಯ್ ದೇವ್ಗನ್, ಆಲಿಯಾ ಭಟ್, ಶ್ರಿಯಾ ಶರಣ್, ಸಮುದ್ರಖಣಿ, ಒಲಿವಿಯಾ ಮೊರಿಸ್ ಮುಂತಾದವರು ಅಭಿನಯಿಸಿದ್ದರು. ಬ್ರಿಟೀಷರ ವಿರುದ್ಧದ ಹೋರಾಟ ಕಥೆ ಹೊಂದಿದ್ದ ‘ಆರ್ಆರ್ಆರ್’ಸಿನಿಮಾ 550 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ‘ಆರ್ಆರ್ಆರ್’ ಸಿನಿಮಾ 1200 - 1258 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

    ಆರ್ಆರ್ಆರ್’ ಚಿತ್ರದ ‘ನಾಟು ನಾಟು’ ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವ ರೇಸ್ನಲ್ಲಿದೆ. ಮಾರ್ಚ್ 12 ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಆರ್ಆರ್ಆರ್’ ಚಿತ್ರತಂಡ ಪಾಲ್ಗೊಳ್ಳಲಿದೆ.

  • ರಾಜಮೌಳಿ ಚಿತ್ರದಲ್ಲಿ ಕಿಚ್ಚ : ಸುದೀಪ್ ರಿಯಾಕ್ಷನ್

    kichcha sudeep image

    ಕಿಚ್ಚ ಸುದೀಪ್ ಮತ್ತು ರಾಜಮೌಳಿ ನಡುವಿನ ಬಾಂಧವ್ಯ ಗೊತ್ತಿರುವಂಥದ್ದೇ. ಸುದೀಪ್ ವೃತ್ತಿ ಜೀವನದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರ ಕೊಟ್ಟವರು ರಾಜಮೌಳಿ. ಈಗದ ನಂತರ ಬಾಹುಬಲಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸುದೀಪ್. ಅದು ಸ್ನೇಹಪೂರ್ವಕವಾಗಿ. ಈ ಸ್ನೇಹದ ಕಾರಣಕ್ಕೇ ಅದೊಂದು ಸುದ್ದಿ ಹಬ್ಬಿತ್ತು.

    ಸದ್ಯಕ್ಕೆ ರಾಜಮೌಳಿ ನಿರ್ದೇಶಿಸುತ್ತಿರುವ ಆರ್‍ಆರ್‍ಆರ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಆಫರ್‍ಗಾಗಿ ಸುದೀಪ್ ತಮ್ಮ ಡೇಟ್ಸ್ ಅಡ್ಜಸ್ಟ್ ಮಾಡಿಕೊಂಡಿದ್ದಾರೆ ಎಂದೆಲ್ಲ ಸುದ್ದಿಗಳು ಹಬ್ಬಿದ್ದವು. ಈಗ ಆ ಎಲ್ಲ ಸುದ್ದಿಗಳಿಗೆ ಸ್ವತಃ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಆರ್‍ಆರ್‍ಆರ್ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ ಎಂಬ ಸುದ್ದಿಗೆ ಎಕ್ಸೈಟ್ ಆದವರಿಗೆಲ್ಲ ಒಂದು ಮಾತು. ನನ್ನನ್ನು ಆರ್‍ಆರ್‍ಆರ್ ಚಿತ್ರಕ್ಕಾಗಿ ರಾಜಮೌಳಿ ಸಂಪರ್ಕಿಸಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಆ ಚಿತ್ರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

  • ಸಖತ್ ನಿರ್ಮಾಪಕರೇ ಆರ್‍ಆರ್‍ಆರ್ ವಿತರಕರು..!

    ಸಖತ್ ನಿರ್ಮಾಪಕರೇ ಆರ್‍ಆರ್‍ಆರ್ ವಿತರಕರು..!

    ಆರ್‍ಆರ್‍ಆರ್. 2022ರಲ್ಲಿ ರಿಲೀಸ್ ಆಗಲಿರೋ ಸಖತ್ ಸಿನಿಮಾ. ಸಖತ್ ಸಿನಿಮಾ ಯಾಕೇ ಅಂದ್ರೆ ಅದು ರಾಜಮೌಳಿ, ರಾಮ್ ಚರಣ್ ತೇಜ, ಎನ್‍ಟಿಆರ್, ಅಜಯ್ ದೇವಗನ್, ಅಲಿಯಾ ಭಟ್ ನಟಿಸಿರೋ ಸಿನಿಮಾ. ದೇಶಾದ್ಯಂತ ಕ್ರೇಜ್ ಸೃಷ್ಟಿಸಿರೋ ಆರ್‍ಆರ್‍ಆರ್ ಸಿನಿಮಾದ ಕನ್ನಡ ಮತ್ತು ಕರ್ನಾಟಕ ವಿತರಣೆಯ ಹಕ್ಕನ್ನು ಪಡೆದುಕೊಂಡಿರೋದು ಸಖತ್ ಕೆವಿಎನ್ ಪ್ರೊಡಕ್ಷನ್ಸ್.

    ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಸಿಂಪಲ್ ಸುನಿ ಕಾಂಬಿನೇಷನ್ನಿನ ಸಖತ್ ಸಿನಿಮಾ ನಿರ್ಮಾಣ ಮಾಡಿರೋ ಅದೇ ಕೆವಿಎನ್ ಪ್ರೊಡಕ್ಷನ್ಸ್, ಈಗ ಆರ್‍ಆರ್‍ಆರ್ ಚಿತ್ರವನ್ನೂ ರಿಲೀಸ್ ಮಾಡುತ್ತಿದೆ. ಅಪ್ಪಟ ಪ್ರೊಫೆಷನಲ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಕೆವಿಎನ್ ಪ್ರೊಡಕ್ಷನ್ಸ್, ಆರ್‍ಆರ್‍ಆರ್ ಒಪ್ಪಂದವನ್ನು ಮುಕ್ತಾಯಗೊಳಿಸಿದೆ. ಇತ್ತ ಕರ್ನಾಟಕದಲ್ಲಿ ಸಖತ್ ರಿಲೀಸ್ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿದೆ.

  • ಸಾಲು ಸಾಲು ಸೋಲು.. ಲಾಸು.. ಡಿಮ್ಯಾಂಡ್ಸು : ಸ್ಟಾರ್ ಚಿತ್ರಗಳ ವಿರುದ್ಧ ತಿರುಗಿಬಿದ್ದ ಚಿತ್ರರಂಗ

    ಸಾಲು ಸಾಲು ಸೋಲು.. ಲಾಸು.. ಡಿಮ್ಯಾಂಡ್ಸು : ಸ್ಟಾರ್ ಚಿತ್ರಗಳ ವಿರುದ್ಧ ತಿರುಗಿಬಿದ್ದ ಚಿತ್ರರಂಗ

    ಇದು ಸ್ಯಾಂಡಲ್`ವುಡ್ ಸ್ಟೋರಿ ಅಲ್ಲ. ಪಕ್ಕದ ತೆಲುಗು ಚಿತ್ರರಂಗದ ಕಥೆ. ಇತ್ತೀಚೆಗೆ ತೆಲುಗಿನಲ್ಲಿ ದೊಡ್ಡ ಮಟ್ಟದ ಹಿಟ್ ಚಿತ್ರಗಳು ಬಂದಿವೆ. ಆರ್.ಆರ್.ಆರ್. ಮತ್ತು ಪುಷ್ಪ ದೊಡ್ಡ ಮಟ್ಟದ ಹಿಟ್ ಆಗಿವೆ. ಆದರೆ.. ಉಳಿದ ಲೆಕ್ಕ ನೋಡಿದರೆ ಸ್ಟಾರ್ ಚಿತ್ರಗಳು ಪಲ್ಟಿ ಹೊಡೆದಿದ್ದೇ ಹೆಚ್ಚು.

    ಆರ್.ಆರ್.ಆರ್. ವಿಶ್ವಮಟ್ಟದಲ್ಲಿ ದೊಡ್ಡ ಸಕ್ಸಸ್ ಕಂಡರೂ ಕೆಲವು ನಿರ್ಧಿಷ್ಟ ಏರಿಯಾಗಳಲ್ಲಿ ವಿತರಕರಿಗೆ ಲಾಸ್ ಆಗಿದೆ.

    ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್, ಮಹೇಶ್ ಬಾಬುರ ಸರ್ಕಾರಿ ವಾರು ಪಾಟ, ಚಿರಂಜೀವಿಯವರ ಆಚಾರ್ಯ, ಪ್ರಭಾಸ್`ರ ರಾಧೇ ಶ್ಯಾಮ್ ಚಿತ್ರಗಳು ವಿತರಕರು ಹಾಗೂ ನಿರ್ಮಾಪಕರಿಗೆ ಖುಷಿ ಕೊಟ್ಟಿಲ್ಲ. ಆಚಾರ್ಯ, ರಾಧೇ ಶ್ಯಾಮ್ ಚಿತ್ರ ವಿತರಕರಂತೂ ಕಣ್ಣೀರಿಡುವಂತಾಗಿದೆ. ಭೀಮ್ಲಾ ನಾಯಕ್ ಮತ್ತು ಸರ್ಕಾರಿವಾರುಪಾಟ ಗೆದ್ದರೂ ನಿರ್ಮಾಪಕರಿಗೆ ದೊಡ್ಡ ಲಾಭವೇನೂ ಸಿಕ್ಕಿಲ್ಲ. ಅಲ್ಲಿಗಲ್ಲಿಗೆ ಸರಿ ಹೋಗಿದೆ. ಇದಕ್ಕೆಲ್ಲ ಏನು ಕಾರಣ ಎಂದು ಹುಡುಕಿದಾಗ..

    ಸ್ಟಾರ್ ನಟರು ಪ್ರತಿ ಚಿತ್ರಕ್ಕೂ ತಮ್ಮ ಸಂಭಾವನೆ ಏರಿಸಿಕೊಳ್ಳುತ್ತಲೇ ಇದ್ದಾರೆ ಎನ್ನುವುದು ಮೊದಲ ಕಾರಣವಾಗಿ ಹೊರಬಿದ್ದಿದೆ. ಕೆಲವು ನಟರು ತಮ್ಮ ಚಿತ್ರಗಳು ಸೋತಿದ್ದರೂ ಸಂಭಾವನೆ ಏರಿಸಿಕೊಳ್ಳುತ್ತಲೇ ಇದ್ದಾರಂತೆ. ಇದರ ಜೊತೆಗೆ ಸ್ಟಾರ್ ನಟರೆಲ್ಲ ಸಿಂಗಲ್ ಡೋರ್ ಕ್ಯಾರವಾನ್ ಇದ್ದರೆ ಮಾತ್ರ ಬರುತ್ತೇವೆ ಎನ್ನುವುದು, ಪ್ರತಿಯೊಬ್ಬ ಕಲಾವಿದರನ್ನೂ ಅವರವರ ಮನೆಯಿಂದಲೇ ಪಿಕಪ್ ಮಾಡಬೇಕು ಎನ್ನುವುದು, ಮೂಡ್ ಇಲ್ಲ, ರಾತ್ರಿ ಪಾರ್ಟಿ ಲೇಟ್ ಆಯ್ತು.. ಎಂಬ ಕುಂಟುನೆಪ ಹೇಳಿ ಶೂಟಿಂಗ್ ಕ್ಯಾನ್ಸಲ್ ಮಾಡಿಸುವುದು.. ತಮಗೆ ಬೇಕಾದವರಿಗೇ ಚಾನ್ಸ್ ಕೊಡಬೇಕು ಎಂದು ದುಬಾರಿಯಾಗಿ ಖರ್ಚು ಮಾಡಿಸುವುದು.. ಇಂತಹವು ಹೆಚ್ಚಾಗಿವೆ. ಇದರಿಂದ ಲಾಸ್ ಆಗುತ್ತಿರುವುದು ನಿರ್ಮಾಪಕರಿಗೆ.

    ಇದರ ಜೊತೆಗೆ ಟಿಕೆಟ್ ದರವನ್ನೂ ಏರಿಸುವಂತಿಲ್ಲ. ನಂತರ ರಿಲೀಸ್ ಆದ ಕೆಲವೇ ದಿನಗಳ ನಂತರ ಸಿನಿಮಾ ಒಟಿಟಿಯಲ್ಲಿ ಬರುತ್ತೆ. ಹೀಗಾದರೆ ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಉಳಿಯುತ್ತಾರೆ. ಇಂತಹದ್ದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಡಿಮ್ಯಾಂಡ್ ಇಟ್ಟು ಆಗಸ್ಟ್ 1ರಿಂದ ಚಿತ್ರೀಕರಣವನ್ನೇ ಸ್ಥಗಿತಗೊಳಿಸುತ್ತಿದ್ದಾರೆ.

  • ಸ್ಕರ್ ರೇಸ್‍ಗೆ ತಾನೇ ಎಂಟ್ರಿಕೊಟ್ಟ RRR

    ಸ್ಕರ್ ರೇಸ್‍ಗೆ ತಾನೇ ಎಂಟ್ರಿಕೊಟ್ಟ RRR

    RRR. ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಇಂಡಿಯನ್ ಸಿನಿಮಾ. ಸ್ವಾತಂತ್ರ್ಯ ಹೋರಾಟಗಾರರ ಕಥೆಗೆ ರೋಚಕತೆಯ ಕಲ್ಪನೆ ಬೆರೆಸಿ ಪ್ರೇಕ್ಷಕರಿಗೆ ರೋಮಾಂಚನ ನೀಡಿದ್ದ ಸಿನಿಮಾ. ಆಸ್ಕರ್ ಪ್ರಶಸ್ತಿಗೆ ಹೋಗಲಿದೆ ಎಂದು ನಿರೀಕ್ಷಿಸಿದ್ದ ಸಿನಿಮಾವನ್ನ ಕೇಂದ್ರ ಸರ್ಕಾರ ಪರಿಗಣಿಸಲಿಲ್ಲ. ಬದಲಿಗೆ ಗುಜರಾತಿ ಚಿತ್ರವೊಂದಕ್ಕೆ ಪಟ್ಟ ಸಿಕ್ಕಿತ್ತು. ಈಗ RRR ಸ್ವತಃ ತಾನೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದೆ.

    ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿಯೂ ಸ್ಪರ್ಧಿಸಬಹುದು. ಆ ಸ್ಪರ್ಧೆಯಲ್ಲಿ 14 ವಿಭಾಗಗಳಲ್ಲಿ ಆರ್.ಆರ್.ಆರ್. ರೇಸ್‍ಗೆ ಬಿದ್ದಿದೆ.

    ಅತ್ಯುತ್ತಮ ನಿರ್ದೇಶಕ : ರಾಜಮೌಳಿ

    ಅತ್ಯುತ್ತಮ ನಟ : ಎನ್.ಟಿ.ಆರ್. ಮತ್ತು ರಾಮ್ ಚರಣ್ ತೇಜ

    ಪೋಷಕ ನಟ : ಅಜಯ್ ದೇವಗನ್

    ಪೋಷಕ ನಟಿ : ಅಲಿಯಾ ಭಟ್

    ಬೆಸ್ಟ್ ವೊರಿಜಿನಲ್ ಸಾಂಗ್ : ನಾಟ್ಟು ನಾಟ್ಟು

    ಕ್ಯಾಮೆರಾ : ಸೆಂಥಿಲ್ ಕುಮಾರ್

    ಸಂಕಲನ : ಶ್ರೀಕರ್ ಪ್ರಸಾದ್

    ಕಾಸ್ಟ್ಯೂಮ್ ಡಿಸೈನರ್ : ರಮಾ ರಾಜಮೌಳಿ

    ಚಿತ್ರಕಥೆ : ಬೆಸ್ಟ್ ಸೌಂಡಿಂಗ್ : ಮೇಕಪ್ : ಪ್ರೊಡಕ್ಷನ್ : ಗ್ರಾಫಿಕ್ಸ್.. ಹೀಗೆ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧಿಸಿದೆ ಆರ್.ಆರ್.ಆರ್.