` vijayalakshmi, - chitraloka.com | Kannada Movie News, Reviews | Image

vijayalakshmi,

  • Raviprakash says he won't compromise in Vijayalakshmi case

    vijayalakshmi, raviprakash image

    Actor Raviprakash has said that he will not compromise in Vijayalakshmi case and will fight her legally. Last year, actress Vijayalakshmi had appealed in a video that she is facing a lot of health as well as financial problems. As she is undergoing treatment, she had asked for financial support from the Industry. Actor Raviprakash and his sister had helped her during the financial crisis.

    you_tube_chitraloka1.gif

    However, the actress accused Raviprakash had complained of misbehaving with her. She had even said that she will go on a hunger strike, if action is not taken against him. 

    After one year, Raviprakash has said that though Vijayalakshmi's sister had apologised to him, he is not in a mood to compromise.

    Raviprakash has released a video in this regard on Sunday. 'Vijayalakshmi's sister Usha Devi had called and apologized for her behaviour. Inspite of helping her, I was shown in a bad light, for which I am really upset. I have decided not to compromise in this regard and has decided to move on with the case' said Raviprakash.

    Also See

    Vijayalakshmi Used Me Like A Tissue Paper & Then Made False Accusation: Raviprakash

  • Vijayalakshmi admitted to hospital after suicide attempt

    vijayalakshmi image

    Just a day after actor Raviprakash said that he will not compromise and will take legal action against actress Vijayalakshmi of 'Nagamandala' fame, the actress has attempted suicide and has been admitted to hospital in Chennai.

    Vijayalakshmi attempting suicide has nothing to do with Raviprakash. Instead, the actress in a video has accused actor-director-politician Seeman for mentally torturing her.

    you_tube_chitraloka1.gif

    The actress has said in her video that she has been in tremendous stress for the past four months because of Seeman and his partymen. The actress said that she had already taken a couple of BP tablets and will suffer from low blood pressure and will be dead in a few hours.

    The actress was immediately rushed to hospital and was given treatment. Vijayalakshmi is said to be out of danger.

    Also Read

    ಅಂದು ತಮಿಳು.. ಇಂದು ಕನ್ನಡ.. ನಾಗಮಂಡಲ ವಿಜಯಲಕ್ಷ್ಮಿ ನಾಟಕ ಮಂಡಲ ಕಟ್ಟಿದ್ರಾ..?

    ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

    Vijayalakshmi Profile

     

  • ಅಂದು ತಮಿಳು.. ಇಂದು ಕನ್ನಡ.. ನಾಗಮಂಡಲ ವಿಜಯಲಕ್ಷ್ಮಿ ನಾಟಕ ಮಂಡಲ ಕಟ್ಟಿದ್ರಾ..?

    vijayalakshmi image

    ನಾಗಮಂಡಲ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿಜಯಲಕ್ಷ್ಮಿ. ಕನಸುಗಾರ ರವಿಚಂದ್ರನ್ ಶೋಧಿಸಿದ ಪ್ರತಿಭೆ. ಈ ಪ್ರತಿಭೆಯನ್ನು ಹೊಳೆಯುವಂತೆ ಮಾಡಿದ್ದು ಟಿ.ಎಸ್.ನಾಗಾಭರಣ. ಪ್ರತಿಭಾನ್ವಿತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸುಂದರಿಯಷ್ಟೇ ಅಲ್ಲ, ಅಭಿನಯ ಪ್ರತಿಭೆಯೂ ಅಗಾಧವಾಗಿದ್ದ ಚೆಲುವೆ. ಆರಂಭದ ಚಿತ್ರ ನಾಗಮಂಡಲ, ನಂತರ ಜೋಡಿಹಕ್ಕಿ, ಅರುಣೋದಯ, ನಂ.1.. ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ ವಿಜಯಲಕ್ಷ್ಮಿ, ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಬಾರಿಯೂ ಅಷ್ಟೆ..

    ಕೆಲವೇ ದಿನಗಳ ಹಿಂದೆ ಒಂದು ವಿಡಿಯೋ ರಿಲೀಸ್ ಮಾಡಿದ್ದ ವಿಜಯಲಕ್ಷ್ಮಿ, ತಾನು ತಮಿಳುನವಳು ಎಂದು ಕಿರುಕುಳ ಮಾಡುತ್ತಿದ್ದಾರೆ.  ನಟ ರವಿಪ್ರಕಾಶ್ ಅನ್ನುವವರು ನನಗೆ ಹಿಂಸೆ ಕೊಟ್ಟಿದ್ದರು. ಸಹಾಯಕ್ಕಾಗಿ ಬೇಡಿದರೆ ನೀನು ತಮಿಳಿನವಳು ಎಂದು ಯಾರೂ ಸಹಾಯ ಮಾಡಲ್ಲ. ಇಲ್ಲಿ ತಮಿಳಿನವರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಹೊರಗೆ ಬರೋದೇ ಇಲ್ಲ ಎಂದೆಲ್ಲ ಮಾತನಾಡಿದ್ದರು. ಆರೋಪ ಮಾಡಿರುವ ರವಿಪ್ರಕಾಶ್ ಅವರ ಜೊತೆ ಸಂಧಾನಕ್ಕೆ, ರಾಜಿಗೆ ಮುಂದಾಗಿರುವುದು ಬೇರೆ ವಿಷಯ. ಆದರೆ ಆ ವಿಡಿಯೋಗೆ ನಿರೀಕ್ಷಿಸಿದ್ದಂತೆ ಪ್ರತಿಕ್ರಿಯೆಗಳು ಸಿಗಲಿಲ್ಲ.

    you_tube_chitraloka1.gif

    ಈಗ ನನಗೆ ತಮಿಳಿನವರಿಂದ ಅನ್ಯಾಯವಾಗುತ್ತಿದೆ. ತಮಿಳಿನಲ್ಲಿ ಸೀಮನ್, ಹರೀಂದ್ರನ್ ಎನ್ನುವವರು ಕಿರುಕುಳ ಕೊಡುತ್ತಿದ್ದಾರೆ. ನಾನು ಸಾಯುತ್ತಿದ್ದೇನೆ ಎಂದು ಹೇಳಿ, 3 ಬಿಪಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇವೆಲ್ಲವೂ ನಡೆದಿರುವುದು 2 ವಾರಗಳ ಗ್ಯಾಪ್‍ನಲ್ಲಿ. ಮೊದಲಿಗೆ ವಿಜಯಲಕ್ಷ್ಮಿ, ಕನ್ನಡಿಗರ ವಿರುದ್ಧ ತಮಿಳರನ್ನೂ, ನಂತರ ಈಗ ತಮಿಳರ ವಿರುದ್ಧ ಕನ್ನಡಿಗರನ್ನೂ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಕಾನೂನು ಸಮರ ನಡೆಸುವ ಮುಕ್ತ ಅವಕಾಶಗಳಿವೆ. ಆದರೆ, ಹೀಗೆ ಭಾಷಾ ಸಾಮರಸ್ಯ ಕೆಣಕುವುದು ಸರಿಯಲ್ಲ ಎನ್ನುವ ಭಾವನೆ ಚಿತ್ರರಂಗದಲ್ಲಿದೆ. ವಿಜಯಲಕ್ಷ್ಮಿ ವೈಯಕ್ತಿಕ ಸಮಸ್ಯೆಗಳನ್ನು ಇಡೀ ಕರ್ನಾಟಕದ, ಕನ್ನಡಿಗರ ಸಮಸ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಉತ್ತರಿಸಬೇಕಾದವರು ಸ್ವತಃ ವಿಜಯಲಕ್ಷ್ಮಿ.

    Also Read

    ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

    Vijayalakshmi Profile

  • ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    vijayalakshmi image

    ನಾಗಮಂಡಲ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚತರಾದ ಖ್ಯಾತ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಜಯಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತೀಚೆಗಷ್ಟೇ ವಿಜಯಲಕ್ಷ್ಮಿ, ತಮಿಳು ನಟ ಸೀಮನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸೀಮನ್ ತಮಗೆ ಕಿರುಕುಳ ನೀಡುತ್ತಿದ್ದು, ನನಗೆ ಸಹಿಸಲು ಆಗುತ್ತಿಲ್ಲ. ನನಗೆ ಪ್ರಾಸ್ಟಿಟ್ಯೂಟ್ ರೀತಿ ಬಾಳೋಕೆ ಇಷ್ಟವಿಲ್ಲ. ಆದರೆ, ಸೀಮನ್ ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ನಾನು ಕನ್ನಡದವಳು, ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಏಕೈಕ ಕಾರಣಕ್ಕೆ ನನಗೆ ಸೀಮನ್ ಕಿರುಕುಳ ನೀಡುತ್ತಿದ್ದಾನೆ. ನಾನು ಈಗಾಗಲೇ ಮೂರು ಬಿಪಿ ಟ್ಯಾಬ್ಲೆಟ್ ತೆಗೆದುಕೊಂಡಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ನನಗೆ ಬಿಪಿ ಡೌನ್ ಆಗುತ್ತೆ. ಇದೇ ನನ್ನ ಕೊನೆಯ ವಿಡಿಯೋ. ನನ್ನ ಸಾವಿಗೆ ಕಾರಣರಾದ ಸೀಮನ್ ಮತ್ತು ಹರೀಂದ್ರನ್ ಎನ್ನುವವರನ್ನು ಬಿಡಬೇಡಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

    you_tube_chitraloka1.gif

    ಈ ಹಿಂದೆ ವಿಜಯಲಕ್ಷ್ಮಿ ಸಂಕಷ್ಟದಲ್ಲಿದ್ದಾಗ ನಟ ಸುದೀಪ್ ಮತ್ತು ರವಿಪ್ರಕಾಶ್ ನೆರವಿಗೆ ಬಂದಿದ್ದರು. ಆದರೆ, ನಟಿ ವಿಜಯಲಕ್ಷ್ಮಿ ರವಿಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪದ ವಿರುದ್ಧ ರವಿಪ್ರಕಾಶ್ ವಿಜಯಲಕ್ಷ್ಮಿ ವಿರುದ್ಧ ಕೇಸು ದಾಖಲಿಸಿದ್ದರು. ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಅಕ್ಕ ನನಗೆ ಕರೆ ಮಾಡಿ ರಾಜಿ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ. ಆದರೆ, ನಾನು ರಾಜಿ ಮಾಡಿಕೊಳ್ಳೋದಿಲ್ಲ. ಕಾನೂನು ಸಮರ ಮುಂದುವರಿಸುತ್ತೇನೆ ಎಂದು ರವಿಪ್ರಕಾಶ್ ಹೇಳಿದ್ದರು. ಇದೆಲ್ಲ ಆದ ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮಿ, ತಮಿಳು ನಟನ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    Also Read

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

  • ನಿರ್ದೇಶಕನ ಜೊತೆ ನಟಿ ಪರಾರಿ ಮದುವೆ ; ತಾಯಿ ಆತ್ಮಹತ್ಯೆ ಯತ್ನ, ಅಜ್ಜಿ ಸಾವು

    vijayalakshmi, anjanappa image

    ಆಕೆಯ ಹೆಸರು ವಿಜಯಲಕ್ಷ್ಮಿ. ಮಂಡ್ಯ ಜಿಲ್ಲೆ ಮದ್ದೂರಿ ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಹುಡುಗಿ. ಹಲವು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಹುಡುಗಿ, ಕುಟುಂಬದವರ ಜೊತೆ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ಈಕೆ ತಾನು ನಟಿಸುತ್ತಿದ್ದ ಚಿತ್ರದ ನಿರ್ದೇಶಕ ಅಂಜನಪ್ಪ ಜೊತೆ ಪರಾರಿಯಾಗಿದ್ದಾರೆ. ಅತ್ತ ತಾಯಿ ಮತ್ತು ಅಜ್ಜಿ ವಿಷ ಕುಡಿದಿದ್ದಾರೆ. ಅಜ್ಜಿ ಮೃತಪಟ್ಟಿದ್ದರೆ, ತಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಆಗಿದ್ದುದು ಇಷ್ಟು, ನಟಿ ವಿಜಯಲಕ್ಷ್ಮಿ ಕನ್ನಡದ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರೇಮ ಮಹಲ್, ತುಂಗಭದ್ರ, ಜವಾರಿ ಲವ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಲು ಅಡ್ವಾನ್ಸ್ ಕೂಡಾ ಪಡೆದಿದ್ದರು. ಇತ್ತೀಚೆಗೆ ಇದೇ ನಿರ್ದೇಶಕನ ಜೊತೆ ಒಮ್ಮೆ ಮನೆ ಬಿಟ್ಟು ಹೋಗಿದ್ದರಂತೆ. 15 ದಿನಗಳ ನಂತರ ವಾಪಸ್ ಬಂದು ತಂದೆಯ ಕ್ಷಮೆ ಕೇಳಿದ್ದರಂತೆ. ಈಗ ಮತ್ತೊಮ್ಮೆ ಅದೇ ನಿರ್ದೇಶಕನ ಜೊತೆ ಪರಾರಿಯಾಗಿದ್ದಾರೆ.

    ಇತ್ತ ಚಿತ್ರಗಳಿಗೆ ಅಡ್ವಾನ್ಸ್ ಕೊಟ್ಟಿದ್ದವರು ಮನೆಗೆ ಬಂದು ಅಡ್ವಾನ್ಸ್ ಆದರೂ ವಾಪಸ್ ಕೊಡಿ ಇಲ್ಲವಾದರೆ ಮಗಳನ್ನಾದರೂ ನಟಿಸಲು ಕಳಿಸಿ ಎಂದು ಮನೆಯವರ ಬೆನ್ನು ಹತ್ತಿದ್ದಾರೆ. ಪ್ರತಿ ದಿನದ ಅವಮಾನ ತಾಳಲಾರದೆ ತಾಯಿ ಸವಿತಾ ಮತ್ತು ಅಜ್ಜಿ ಚೆನ್ನಮ್ಮ ವಿಷ ಕುಡಿದಿದ್ದಾರೆ. ಅಜ್ಜಿ ಆಸ್ಪತ್ರೆಯಲ್ಲಿಯೇ ಮೃತಪಟ್ಟರೆ, ತಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಆದರೆ, ಅತ್ತ ನಟಿ ಮತ್ತು ನಿರ್ದೇಶಕರು ಮದುವೆಯಾಗಿ, ಸುಖ ಸಂಸಾರ ನಡೆಸುತ್ತಿದ್ದಾರೆ.