` balakrishna, - chitraloka.com | Kannada Movie News, Reviews | Image

balakrishna,

  • ``ಅಳಬಾರದು ಎಂದುಕೊಂಡು ತಡೆದುಕೊಳ್ಳುತ್ತೇನೆ. ಕೆಲವು ಸಾರಿ ಆಗಲ್ಲ''

    ``ಅಳಬಾರದು ಎಂದುಕೊಂಡು ತಡೆದುಕೊಳ್ಳುತ್ತೇನೆ. ಕೆಲವು ಸಾರಿ ಆಗಲ್ಲ''

    ಇದು ಶಿವಣ್ಣ ಮಾತು. ಹೈದರಾಬಾದ್`ನಲ್ಲಿ ವೇದ ಚಿತ್ರದ ಪ್ರೀ-ರಿಲೀಸ್ ಈವೆಂಟ್`ನಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಮಾತನಾಡಿದ ಮಾತಿದು. ವೇದ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಅಲ್ಲಿ ರಿಲೀಸ್ ಅದ ಮಾರನೇ ದಿನವೇ ಕನ್ನಡದಲ್ಲಿ ಒಟಿಟಿಗೂ ಬರುತ್ತಿದೆ. ಚಿತ್ರದ ಬಿಡುಗಡೆಗೆ ಮುನ್ನ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಬಾಲಯ್ಯ ಮುಖ್ಯ ಅತಿಥಿ. ವೇದ ಚಿತ್ರತಂಡದ ಪ್ರತಿಯೊಬ್ಬರನ್ನೂ ಹೊಗಳಿದ ಬಾಲಯ್ಯ, ಚಿತ್ರದಲ್ಲಿರುವ ಆದಿತಿ ಸಾಗರ್, ಗಾನವಿ ಲಕ್ಷ್ಮಣ್, ಉಮಾಶ್ರೀ, ವೀನಾ ಪೊನ್ನಪ್ಪ, ಶ್ವೇತಾ ಚೆಂಗಪ್ಪ.. ಹೀಗೆ ಪ್ರತಿಯೊಬ್ಬರ ಹೆಸರನ್ನೂ ಹೇಳಿ ಮೆಚ್ಚಿಕೊಂಡರು. ಅದರಲ್ಲಿಯೂ ಆದಿತಿ ಸಾಗರ್ ಹೆಸರು ಹೇಳುವಾಗ ಬಾಲಕೃಷ್ಣ ಕಣ್ಣಿನಲ್ಲೂ ಮಿಂಚು ಹೊಳೆಯುತ್ತಿತ್ತು. ಮೆಚ್ಚುಗೆಯಿತ್ತು. ಸಾಹಸ ದೃಶ್ಯಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು ಬಾಲಯ್ಯ.

    ಇದೇ ವೇಳೆ ವೇದಿಕೆಯಲ್ಲಿ ಪುನೀತ್ ಅವರ ವಿಟಿಯೊಂದನ್ನು ಪ್ರದರ್ಶನ ಮಾಡಲಾಯಿತು. ಆರಂಭದಲ್ಲಿ ಅಪ್ಪು ಬಗ್ಗೆ ಕೇಳಿದ ಪ್ರಶ್ನೆಗಳಿಗೆ ತುಸು ಗಂಭೀರವಾಗಿಯೇ ಉತ್ತರ ನೀಡಿದ್ದ ಶಿವಣ್ಣ, ವಿಡಿಯೋ ನೋಡುವಾಗಲೂ ಸ್ಥಿತಪ್ರಜ್ಞತೆ ಮೆರೆದರು. ಆದರೆ ಯಾವಾಗ ಅಪ್ಪು ಜೊತೆ ಸಲಗ ಈವೆಂಟ್`ನಲ್ಲಿ ಕುಣಿದಿದ್ದ ವಿಡಿಯೋ ತೆರೆ ಮೇಲೆ ಬಂತೋ ಶಿವಣ್ಣ ಭಾವುಕರಾಗಿಬಿಟ್ಟರು. ಕಣ್ಣೀರು ಕಾಣದಂತೆ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರು. ಪಕ್ಕದಲ್ಲಿಯೇ ಇದ್ದ ಪತ್ನಿ ಗೀತಾ ಹಾಗೂ ಬಾಲಕೃಷ್ಣ ಅವರೇ ಸಮಾಧಾನಪಡಿಸಿದರು.

    ಅದಾದ ಮೇಲೆ ಮಾತನಾಡಿದ ಶಿವಣ್ಣ ಅಪ್ಪು ಹುಟ್ಟಿದಾಗ ನನಗೆ 13 ವರ್ಷ. ನನಗೆ ಅವನು ಎಂದಿಗೂ ತಮ್ಮ ಎಂದು ಅನ್ನಿಸಲಿಲ್ಲ. ಮಗನಂತಿದ್ದ. ಆ ಮುಖ ನೋಡಿದರೆ ಎಂಥಹವರಿಗೆ ಕಣ್ಣೀರು ಬರುತ್ತೆ. ಅಳಬಾರದು ಎಂದುಕೊಳ್ಳುತ್ತೇನೆ. ಕೆಲವೊಮ್ಮೆ ತಡೆಯೋಕೆ ಆಗಲ್ಲ. ಅಪ್ಪು ನಮ್ಮ ಹೃದಯದಲ್ಲಿ ಸದಾ ಶಾಶ್ವತವಾಗಿರುತ್ತಾನೆ ಎಂದು ಹೇಳಿದರು ಶಿವಣ್ಣ.

  • ಅಕ್ಕಿನೇನಿ ನಾಗೇಶ್ವರರಾವ್ ಬಗ್ಗೆ ಇದೆಂತ ಮಾತನಾಡಿದ್ರು ಬಾಲಕೃಷ್ಣ?

    ಅಕ್ಕಿನೇನಿ ನಾಗೇಶ್ವರರಾವ್ ಬಗ್ಗೆ ಇದೆಂತ ಮಾತನಾಡಿದ್ರು ಬಾಲಕೃಷ್ಣ?

    ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜರ ಪಟ್ಟಿ ಮಾಡಲು ಹೊರಟರೆ ಕನ್ನಡಕ್ಕೆ ಡಾ.ರಾಜ್ ಕುಮಾರ್, ತಮಿಳಿಗೆ ಎಂಜಿಆರ್, ಶಿವಾಜಿ ಗಣೇಶನ್ ಹಾಗೂ ತೆಲುಗಿಗೆ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ರಂಗರಾವ್ ಹೆಸರನ್ನು ಮರೆಯುವಂತೆಯೇ ಇಲ್ಲ. ವಿಶೇಷವೆಂದರೆ ಈ ಮೂವರೂ ಪರಸ್ಪರ ಗೌರವದಿಂದ ಇದ್ದವರು. ಎನ್.ಟಿ.ಆರ್. ಅವರ ಹಲವು ಕನಸುಗಳಿಗೆ ಅಕ್ಕಿನೇನಿ ಜೊತೆಯಾದರೆ, ಅಕ್ಕಿನೇನಿ ಅವರ ಕನಸುಗಳಿಗೆ ಹೆಗಲು ಕೊಟ್ಟವರು ಎನ್.ಟಿ.ಆರ್. ಆದರೆ ಆ ಬಾಂಧವ್ಯ ಅವರ ಮಕ್ಕಳಲ್ಲಿ ಉಳಿಯಲಿಲ್ಲ. ಬಾಲಕೃಷ್ಣ ಒಂದು ದಿಕ್ಕಾದರೆ ಅಕ್ಕಿನೇನಿ ನಾಗಾರ್ಜುನ ಮತ್ತೊಂದು ದಿಕ್ಕಾದರು. ವಿವಾದಗಳ ಬಗ್ಗೆ ನಾಗಾರ್ಜುನ ಮಾತನಾಡಿಲ್ಲವಾದರೂ ಬಾಲಕೃಷ್ಣ ಹಾಗಲ್ಲ. ಅವರಿವರನ್ನು ಕೆಣಕುವುದು, ಹೂಂಕರಿಸುವುದು, ಲೇವಡಿ ಮಾಡುವುದನ್ನು ಮಾಡುತ್ತಲೇ ಬಂದಿದ್ದಾರೆ. ನೋ ಫಿಲ್ಟರ್. ಈಗಲೂ ಆಗಿರುವುದು ಇಷ್ಟೆ.

    ವೀರಸಿಂಹರೆಡ್ಡಿ ಚಿತ್ರದ ಸಕ್ಸಸ್ ಮೀಟ್‍ನಲ್ಲಿ ಮಾತನಾಡುತ್ತಿದ್ದ ಬಾಲಯ್ಯ .. ನಮ್ಮ ತಂದೆಗೆ ಅನೇಕ ಸ್ಪರ್ಧಿಗಳಿದ್ದರು. ಅಕ್ಕಿನೇನಿ..ತೊಕ್ಕಿನೇನಿ.. ಎಂದೆಲ್ಲ ಮಾತನಾಡಿದ್ದಾರೆ. ಇದು ಅಕ್ಕಿನೇನಿ ಅಭಿಮಾನಿಗಳನ್ನು ಕೆರಳಿಸಿದೆ. ನಾಗಾರ್ಜುನ ಅವರ ಮಕ್ಕಳಾದ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಅಖಿಲ್ ಇಬ್ಬರನ್ನೂ ಕೆರಳುವಂತೆ ಮಾಡಿದೆ. ನಂದಮೂರಿ ತಾರಕರಾಮಾ ರಾವ್ ಅವರು, ಅಕ್ಕಿನೇನಿ ನಾಗೇಶ್ವರ ರಾವ್ ಅವರು ಮತ್ತು ಎಸ್ ವಿ ರಂಗರಾವ್ ಅವರು ತೆಲುಗು ಚಿತ್ರರಂಗದ ಹೆಮ್ಮೆ ಮತ್ತು ಆಧಾರಸ್ತಂಭಗಳು. ಅವರ ಸೃಜನಶೀಲ ಕೊಡುಗೆ ಅಪಾರವಾಗಿದೆ. ಅವರಿಗೆ ಅಗೌರವ ತೋರುವುದು ನಮ್ಮನ್ನು ನಾವೇ ಕೀಳಾಗಿಸಿಕೊಂಡಂತೆ.. ಎಂದು ಟ್ವೀಟ್ ಮಾಡಿದ್ದಾರೆ ನಾಗಚೈತನ್ಯ ಮತ್ತು ಅಖಿಲ್.

  • ಬಾಲಯ್ಯ ಸಿನಿಮಾಗೆ ರಚಿತಾ ನಾಯಕಿಯಂತೆ..!

    rachita ram heroine for balakrishna;s movie

    ಕನ್ನಡದಲ್ಲಿ ಮಹಾರಾಣಿಯಂತೆ ಮೆರೆಯುತ್ತಿರುವ ರಚಿತಾ ರಾಮ್ ಅವರಿಗೆ ತೆಲುಗಿನಲ್ಲೂ ದೊಡ್ಡ ಅವಕಾಶದ ಬಾಗಿಲು ತೆರೆದಿದೆ. ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ತೆಲುಗಿನಲ್ಲಿ ಬೊಯಪಟಿ ಸೀನು ನಿರ್ದೇಶನದ ಚಿತ್ರದಲ್ಲಿ ಬಾಲಯ್ಯ ಎದುರು ರಚಿತಾ ರಾಮ್ ಹೀರೋಯಿನ್ ಎನ್ನುತ್ತಿದೆ ಟಾಲಿವುಡ್.

    ಇತ್ತ ರಚಿತಾ ರಾಮ್ ಕೂಡಾ ಸುದ್ದಿಗೆ ಓಕೆ ಎಂದಿಲ್ಲ. ಅತ್ತಲಿಂದಲೂ ಅಧಿಕೃತ ಮಾಹಿತಿ ಇಲ್ಲ. ಬೊಯಪಟಿ ಚಿತ್ರಗಳೆಂದರೆ ಅಲ್ಲಿ ಫುಲ್ ಮಾಸ್. ಈ ಮೊದಲು ಬಾಲಯ್ಯಗಾಗಿ ಸಿಂಹ, ಲೆಜೆಂಡ್ ಚಿತ್ರಗಳನ್ನು ನಿರ್ದೇಶಿಸಿದ್ದವರು. ಈ ಚಿತ್ರದಲ್ಲಿ ನಟಿಸಿದರೆ ರಚಿತಾ ರಾಮ್ ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಲಿದೆ.

  • ಮತ್ತೆ ವಿಲನ್ ಆಗುತ್ತಿದ್ದಾರೆ ವಿಜಯ್ : ತೆಲುಗಿನ ಬಾಲಕೃಷ್ಟ ಎದುರು ಸಲಗ

    ಮತ್ತೆ ವಿಲನ್ ಆಗುತ್ತಿದ್ದಾರೆ ವಿಜಯ್ : ತೆಲುಗಿನ ಬಾಲಕೃಷ್ಟ ಎದುರು ಸಲಗ

    ದುನಿಯಾ ವಿಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪುಟ್ಟ ಪುಟ್ಟ ಪಾತ್ರಗಳ ಮೂಲಕ. ಖಳನಟನಾಗಿ ಗುರುತಿಸಿಕೊಂಡಿದ್ದ ವಿಜಯ್ ಅವರ ಹಣೆಬರಹ ಬದಲಿಸಿದ್ದು ದುನಿಯಾ. ನಂತರ ಸ್ಟಾರ್ ಆದ ವಿಜಯ್ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕರಾಗಿಯೂ ಗೆದ್ದ ದುನಿಯಾ ವಿಜಯ್ ಈಗ ಮತ್ತೆ ವಿಲನ್ ಆಗುತ್ತಿರುವುದು ಅಧಿಕೃತವಾಗಿದೆ.

    ತೆಲುಗಿನ ಬಾಲಕೃಷ್ಣ ಎದುರು ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಈ ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಚಾಲ್ತಿಯಲ್ಲಿತ್ತಾದರೂ ಅಧಿಕೃತವಾಗಿರಲಿಲ್ಲ. ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಶೃತಿ ಹಾಸನ್ ಹೀರೋಯಿನ್.

    ನನಗೆ ಚಿತ್ರರಂಗಕ್ಕೆ ಬರುವ ಕನಸು ಕೂಡಾ ಇಲ್ಲದ ದಿನಗಳಿಂದಲೂ ಬಾಲಯ್ಯ ಚಿತ್ರಗಳನ್ನು ನೋಡುತ್ತಿದ್ದೆ. ಈಗ ಅವರೊಂದಿಗೇ ನಟಿಸುವ ಅದೃಷ್ಟ. ನನಗೆ ತೆಲುಗು ಚೆನ್ನಾಗಿಯೇ ಬರುತ್ತೆ. ಹೀಗಾಗಿ ಕಷ್ಟವಾಗಲಿಕ್ಕಿಲ್ಲ. ಜನವರಿ 15ರಿಂದ ಹೈದರಾಬಾದ್‍ನಲ್ಲಿ 3 ತಿಂಗಳು ಶೂಟಿಂಗ್ ಇದೆ ಎಂದಿದ್ದಾರೆ ವಿಜಯ್.