` sreeleela, - chitraloka.com | Kannada Movie News, Reviews | Image

sreeleela,

  • ಬಾಕ್ಸಾಫೀಸಲ್ಲಿ ಚೇತನ್-ಮುರಳಿ ಭರಭರ ಭರಾಟೆ : ಎಷ್ಟು ಕೋಟಿ ಕಲೆಕ್ಷನ್..?

    bharaate magic in box office

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ, ನಿರೀಕ್ಷಿಸಿದ್ದಂತೆಯೇ ಅಬ್ಬರಿಸುತ್ತಿದೆ. ಭರ್ಜರಿ ಚೇತನ್ ಮತ್ತೊಮ್ಮೆ ತಾವು ಬಾಕ್ಸಾಫೀಸ್ ಬಹದ್ದೂರ್ ಎಂದು ಸಾಬೀತು ಮಾಡಿದ್ದಾರೆ. ಶ್ರೀಲೀಲಾ 2ನೇ ಚಿತ್ರದಲ್ಲೂ ಲಕ್ಕಿ ಎಂದು ಸಾಬೀತು ಮಾಡಿದ್ದರೆ, ನಿರ್ಮಾಪಕ ಸುಪ್ರೀತ್ ಮೊದಲ ಚಿತ್ರದಲ್ಲಿಯೇ ಗೆದ್ದು ಬೀಗಿದ್ದಾರೆ. ಭರಾಟೆ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡ್ತಿದೆ.

    ರಿಲೀಸ್ ಆಗುವ ಮೊದಲೇ 30 ಕೋಟಿ ಬ್ಯುಸಿನೆಸ್ ಮಾಡಿದ್ದ ಭರಾಟೆ, ಮೊದಲ ವಾರ ಮುಗಿಯುವ ಮೊದಲೇ 25 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಮೊದಲ ದಿನ 8 ಕೋಟಿಗೂ ಹೆಚ್ಚು, 2ನೇ ದಿನ ಸುಮಾರು 7 ಕೋಟಿ ಹಾಗೂ 3ನೇ ದಿನ ಮತ್ತೆ 8 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. 

  • ಬೈ ಟು ಲವ್ ಕಥೆಯೇನೊ  ಹೊಸದಾಗಿದೆ..

    ಬೈ ಟು ಲವ್ ಕಥೆಯೇನೊ  ಹೊಸದಾಗಿದೆ..

    ನಂಗೆ ಲವ್ ಅಂದ್ರೇನೇ ಆಗಲ್ಲ ಅಂತಾನೇ ಹೀರೋ ಲವ್ವು, ಮದ್ವೆ  ಎರಡೂ ಇಷ್ಟ ಇಲ್ಲ ಅಂತಾಳೆ ಹೀರೋಯಿನ್. ಅವರಿಬ್ಬರಿಗೂ ಲವ್ವಾಗುತ್ತೆ..

    ಮೂರು ಗಂಟು ಹಾಕು. 30 ವರ್ಷ ಜೊತೆಯಲ್ಲಿರು. ಜೊತೆಯಲ್ಲಿರೋ ಡಿಸೈಡ್ ಮಾಡಿದ್ಮೇಲೆ ಮದುವೆ ಆಗೋಕೇನು ಅಂತಾ ಯೋಚಿಸ್ತಾಳೆ ನಾಯಕಿ.

    ಜೊತೆಯಲ್ಲಿರ್ತೀವಿ ಅಂತಾ ಡಿಸೈಡ್ ಮಾಡಿದ್ಮೇಲೆ ಮದ್ವೆ ಅಂತಾ ಯಾಕಾಗ್ಬೇಕು ಅಂದ್ಕೋತಾನೇ ನಾಯಕ.

    ಅಪ್ಪನನ್ನು ಇಷ್ಟ ಪಡದ ನಾಯಕ. ಅಮ್ಮನನ್ನು ಇಷ್ಟಪಡದ ನಾಯಕಿ.. ಅಂತಹವರ ಮಧ್ಯೆ ಹುಟ್ಟುವ ಪ್ರೀತಿ..

    ಡೌಟೇ ಇಲ್ಲ.. ನಿರ್ದೇಶಕ ಹರಿ ಸಂತೋಷ್ ಈ ಬಾರಿ ಹೊಸದೇನೋ ಒಂದು ಕಥೆ ಹೇಳೋಕೆ ಹೊರಟಿದ್ದಾರೆ. ಅದಕ್ಕೆ ತಕ್ಕಂತೆ ಸಾಥ್ ಕೊಟ್ಟಿರೋದು ಶ್ರೀಲೀಲಾ ಮತ್ತು ಧನ್ವೀರ್. ಕಥೆಗೆ ಬೇಕಾದ ಫ್ರೆಶ್‍ನೆಸ್ ಇಬ್ಬರಲ್ಲೂ ಇದೆ. ನಿಶಾ ವೆಂಕಟ್ ಕೋಣಂಕಿ ಒಂದೊಳ್ಳೆ ಕಥೆಯ ಮೇಲೆ ಇನ್ವೆಸ್ಟ್ ಮಾಡಿರೋದು ಗೊತ್ತಾಗುತ್ತಿದೆ. ಸಿನಿಮಾ ಇದೇ ವಾರ ರಿಲೀಸ್.

  • ಬೈ ಟೂ ಲವ್ : ಅದು ಸ್ನೇಹನಾ..? ಪ್ರೀತಿನಾ..?

    ಬೈ ಟೂ ಲವ್ : ಅದು ಸ್ನೇಹನಾ..? ಪ್ರೀತಿನಾ..?

    ಪ್ರೇಮಿಗಳ ದಿನಕ್ಕೊಂದು ಚೆಂದದ ಹಾಡು ಬಂದಿದೆ. ಧನ್ವೀರ್, ಶ್ರೀಲೀಲಾ ನಟಿಸಿರೋ ಬೈ ಟು ಲವ್ ಚಿತ್ರದ ಯಾರು ಏನಾದ್ರೂ ಅಂದ್ಕೊಂಡ್ಲಿ ಏನಂತೆ.. ಹಾಡು ರಿಲೀಸ್ ಆಗಿದೆ.

    ಒಂದು ಕ್ಯೂಟ್ ಜೋಡಿ.. ಅವರು ಫ್ರೆಂಡ್ಸಾ..? ಫ್ರೆಂಡ್ಸ್ ಆಗಿದ್ದವರು ಆಮೇಲೆ ಲವ್ ಮಾಡ್ತಾರಾ..? ಅಂತಾದ್ದೊಂದು ಚೆಂದದ ಕುತೂಹಲ ಉಳಿಸಿ ಚಿತ್ರದ ಮೇಲೂ ನಿರೀಕ್ಷೆ ಹುಟ್ಟಿಸುವಂತೆ ಮಾಡಿದೆ ಹಾಡು. ಧನ್ವೀರ್ ಮತ್ತು ಶ್ರೀಲೀಲಾ ಅವರ ಮುದ್ದು ಮುದ್ದು ತುಂಟಾಟಗಳನ್ನೇ ಕೊರಿಯೋಗ್ರಫಿ ಮಾಡಲಾಗಿದೆ. ಹಾಡಿಗೆ ನಿರ್ದೇಶಕ ಹರಿ ಸಂತೋಷ್ ಅವರೇ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹಾಡಿರೋದು ಮಾನೋ

  • ಭರ ಭರ ಭರಾಟೆ ಗೆಲುವು : ಅಭಿಮಾನಿಗಳಿಗೆ ಶ್ರೀಮುರಳಿ ಧನ್ಯವಾದ

    bharaate success team

    ಶ್ರೀಮುರಳಿ, ಶ್ರೀಲೀಲಾ, ಭರ್ಜರಿ ಚೇತನ್, ಸಾಯಿ ಬ್ರದರ್ಸ್ ಕಾಂಬಿನೇಷನ್  ಭರ್ಜರಿಯಾಗಿಯೇ ಗೆದ್ದಿದೆ. ರಿಲೀಸ್ ಆದ 250ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಹೌಸ್‍ಫುಲ್ ಶೋ. ಅಭಿಮಾನಿಗಳ ಪ್ರೀತಿಗೆ ಸಿಕ್ಕ ಗೆಲುವಿಗೆ ಇಡೀ ತಂಡ ಫುಲ್ ಹ್ಯಾಪಿ. ಈ ಗೆಲುವು ಅಭಿಮಾನಿಗಳಿಗೆ ಅರ್ಪಣೆ ಎಂದಿರುವ ಶ್ರೀಮುರಳಿ, ಹೊಸ ಪ್ರಾಜೆಕ್ಟ್‍ನತ್ತ ಮುಖ ಮಾಡಿದ್ದಾರೆ.

    ನಿರ್ಮಾಪಕ ಸುಪ್ರೀತ್ ಮೊದಲ ಪ್ರಯತ್ನದಲ್ಲೇ ಗೆದ್ದ ಖುಷಿಯಲ್ಲಿದ್ದಾರೆ. ಸಾಯಿಕುಮಾರ್ ಅವರಿಗಂತೂ ಡಬಲ್ ಖುಷಿ. ಸೋದರರ ಜೊತೆ ನಟಿಸಿದ್ದ ಖುಷಿಯನ್ನು ಭರಾಟೆ ಭರಪೂರವಾಗಿ ಕೊಟ್ಟಿತ್ತು. ಈಗ ಸಿಕ್ಕಿರುವ ಗೆಲುವು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ ಸಾಯಿಕುಮಾರ್.

    ನಿರ್ದೇಶಕ ಚೇತನ್ ಕುಮಾರ್ ಆಗಲೇ ಜೇಮ್ಸ್ ಚಿತ್ರವನ್ನು ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಪುನೀತ್ ಜೊತೆಗಿನ ಮುಂದಿನ ಚಿತ್ರ ಆರಂಭಿಸುವ ಹೊತ್ತಿಗೆ ಸಿಕ್ಕಿರುವ ಭರಾಟೆ ಬೂಸ್ಟ್, ಚೇತನ್ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

  • ಭರಾಟೆ ೨೫ : ಸಕ್ಸಸ್ ಪಾರ್ಟಿ

    bharaat 25 days success celebrations

    ಭರಾಟೆ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರಾಟೆ ಎಬ್ಬಿಸಿದೆ. ೨೧೨ ಸೆಂಟರ್‌ಗಳಲ್ಲಿ ೨೫ ದಿನ ಪೂರೈಸಿದೆ. ಖುಷಿಯಾಗಿರುವ ಭರಾಟೆ ಟೀಂ ನವೆಂಬರ್ ೧೧ರ ಸೋಮವಾರದಂದೇ ಥಿಯೇಟರಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿತ್ತು. ಆದರೆ ಅಯೋಧ್ಯೆ ತೀರ್ಪು, ೧೪೪ ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ನವೆಂಬರ್ ೧೭ಕ್ಕೆ ಪ್ಲಾನ್ ಮಾಡಿದೆ ಭರಾಟೆ ತಂಡ.

    ನ.೧೭ರAದು ನರ್ತಕಿಯಲ್ಲಿ ಪ್ರೇಕ್ಷಕರ ಜೊತೆ ಸಂಭ್ರಮಾಚರಣೆ ಇದೆ. ಅಭಿಮಾನಿಗಳಿಂದ ಅನ್ನ ಸಂತರ್ಪಣೆ, ರಕ್ತದಾನಕ್ಕೂ ಪ್ಲಾನ್ ಮಾಡಲಾಗುತ್ತಿದೆ. ಶ್ರೀಲೀಲಾ ನಾಯಕಿಯಾಗಿರುವ ಭರಾಟೆ ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಮೂವರೂ ಸೋದರರು ಒಟ್ಟಿಗೇ ನಟಿಸಿ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದರು. ಭರ್ಜರಿ ಚೇತನ್ ಕುಮಾರ್ ಈಗ ಈ ಚಿತ್ರದಿಂದ ಭರಾಟೆ ಚೇತನ್ ಆಗಿದ್ದಾರೆ.

  • ಭರಾಟೆ ಚೇತನ್ ರೋಲ್‍ಮಾಡೆಲ್ ಯಾರು ಗೊತ್ತೇ..?

    2who is bharaate chethan's role model

    ಮೊದಲ ಚಿತ್ರದ ನಂತರ ಇವರನ್ನು ಪ್ರೇಕ್ಷಕರು ಗುರುತಿಸಿದ್ದು ಬಹದ್ದೂರ್ ಚೇತನ್ ಅಂತಾ. ಅದಾದ ಮೇಲೆ ಭರ್ಜರಿ ಬಂತು. ಭರ್ಜರಿ ಚೇತನ್ ಆದರು. ಈಗ ಭರಾಟೆ ಬರುತ್ತಿದೆ. ಪ್ರೇಕ್ಷಕರು ಆಗಲೇ ಭರಾಟೆ ಚೇತನ್ ಎನ್ನುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬಂದ ಹೊಸಬರಲ್ಲಿ ಅಪ್ಪಟ ಕಮರ್ಷಿಯಲ್ ಡೈರೆಕ್ಟರ್ ಆಗಿ ಹೊರಹೊಮ್ಮಿದವರು ಚೇತನ್ ಕುಮಾರ್.

    ಇಷ್ಟಕ್ಕೂ ಚೇತನ್ ಅವರ ಸ್ಫೂರ್ತಿ ಯಾರು ಎಂದರೆ, ಅವರು ಈ ನಾಲ್ಕು ಹೆಸರು ಹೇಳ್ತಾರೆ. ಡಾ.ರಾಜ್‍ಕುಮಾರ್,

    ಪುಟ್ಟಣ್ಣ ಕಣಗಾಲ್, ತ್ರಿವಿಕ್ರಂ ಶ್ರೀನಿವಾಸ್ ಮತ್ತು ರೋಹಿತ್ ಶೆಟ್ಟಿ. ಈ ನಾಲ್ವರ ವಿಶೇಷವೇನು ಗೊತ್ತೇ.. ಇವರು ಒಳ್ಳೊಳ್ಳೆಯ ಸಿನಿಮಾಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿಯೇ ಕೊಟ್ಟು ಗೆದ್ದವರು.

    ಹಾಡು ಮತ್ತು ಡೈಲಾಗ್ ನನ್ನ ಶಕ್ತಿ. ನನ್ನ ಚಿತ್ರದ ಕಥೆಗಳು ಕಮರ್ಷಿಯಲ್ ಆಗಿಯೇ ಇರುತ್ತವೆ. ಆದರೆ, ನನ್ನ ಇಡೀ ಚಿತ್ರವನ್ನು ಕ್ಯಾರಿ ಮಾಡುವುದು ಎಮೋಷನ್ಸ್ ಎನ್ನುತ್ತಾರೆ ಚೇತನ್. ಅಂದಹಾಗೆ ಸುಪ್ರೀತ್ ನಿರ್ಮಾಣದ ಭರಾಟೆ ರಿಲೀಸ್ ಆಗುವ ಮೊದಲೇ ಲಾಭದಲ್ಲಿದೆ. ಶ್ರೀಮುರಳಿ, ಶ್ರೀಲೀಲಾ ಜೋಡಿಯಾಗಿರೋ ಚಿತ್ರದಲ್ಲಿ ಸಾಯಿಕುಮಾರ್ ಬ್ರದರ್ಸ್ ವಿಲನ್ ಆಗಿರುವುದು ವಿಶೇಷ.

  • ಭರಾಟೆ ಟ್ರೇಲರ್ ಲಾಂಚ್ : ಅತಿಥಿಗಳ ಭರಾಟೆಯೋ ಭರಾಟೆ

    bharaate trailer launch event has big celebrity list

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ಪ್ರತಿ ಹಂತದಲ್ಲೂ ಬೊಂಬಾಟ್ ಸದ್ದು ಮಾಡ್ತಿದೆ. ಈಗ ಟ್ರೇಲರ್ ಬಿಡುಗಡೆಯಲ್ಲೂ ಭರ್ಜರಿ ಸದ್ದು ಮಾಡ್ತಿದೆ. ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಭರಾಟೆ ಚಿತ್ರದ ಟ್ರೇಲರ್ ಅಕ್ಟೋಬರ್ 1ರಂದು ಲಾಂಚ್ ಆಗುತ್ತಿದೆ. ಆ ದಿನ ಬರುತ್ತಿರುವ ಅತಿಥಿಗಳ ಪಟ್ಟಿ ನೋಡಬೇಕು.

    ನಟರಾದ ದುನಿಯಾ ವಿಜಯ್, ನೀನಾಸಂ ಸತೀಶ್, ಡಾಲಿ ಧನಂಜಯ್, ಧನ್ವೀರ್, ವಿಕ್ಕಿ ವರುಣ್‌, ರಾಜ್‌ ವರ್ಧನ್ ಜೊತೆಯಲ್ಲಿ, ನಿರ್ದೇಶಕರಾದ ಪವನ್‌ ಒಡೆಯರ್‌, ಸಿಂಪಲ್ ಸುನಿ, ಹರಿ ಸಂತೋಷ್‌, ಸತ್ಯ ಪ್ರಕಾಶ್‌ ಇರುತ್ತಾರೆ. ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್‌, ಉಮಾಪತಿ ಶ್ರೀನಿವಾಸ್, ಉದಯ್‌ ಕೆ. ಮೆಹ್ತಾ, ಟಿ.ಆರ್‌. ಚಂದ್ರಶೇಖರ್ ಕೂಡ ಕಾರ್ಯಕ್ರಮಕ್ಕೆ ಹಾಜರಿ ಹಾಕಲಿದ್ದಾರೆ. ವಿಶೇಷ ಅತಿಥಿ ಡಾ.ರಾಜ್ ಮೊಮ್ಮಗ ಯುವರಾಜ್ ಕುಮಾರ್.

    ಸುಪ್ರೀತ್ ನಿರ್ಮಾಣದ ಚಿತ್ರಕ್ಕೆ ಭರ್ಜರಿ ಚೇತನ್ ನಿರ್ದೇಶಕ. ಕಿಸ್ ಖ್ಯಾತಿಯ ಶ್ರೀಲೀಲಾ ನಾಯಕಿ. ರಚಿತಾ ರಾಮ್ ಅವರದ್ದು ಗೆಸ್ಟ್ ರೋಲ್. ಒಟ್ಟಿನಲ್ಲಿ ಭರಾಟೆ ಏನ್ ಮಾಡಿದ್ರೂ ಭರಾಟೆಯೇ..

  • ಭರಾಟೆಯಲ್ಲಿ ಶ್ರೀಲೀಲಾ ಸ್ವಯಂವರ

    bharaate swaymvara

    ನಮಗೆ ಸೀತಾ, ದ್ರೌಪದಿ, ದಮಯಂತಿ ಸ್ವಯಂವರಗಳು ಗೊತ್ತು. ಕೇಳಿದ್ದೇವೆ. ಓದಿದ್ದೇವೆ. ಸ್ವಯಂವರ ಅನ್ನೋದು ಈಗಲೂ ನಡೆಯುತ್ತಾ ಎಂದು ಕೇಳಬೇಡಿ. ಇದು ಭರಾಟೆ ಸ್ಪೆಷಲ್. ಇಲ್ಲಿ ಸ್ವಯಂವರ ನಡೆಯೋದು ರಾಧಾ ಅರ್ಥಾತ್ ಶ್ರೀಲೀಲಾ ಅವರಿಗಾಗಿ. ಸ್ವಯಂವರದಲ್ಲಿ ಶ್ರೀಮುರಳಿ ರಾಮನಂತೆ ಶಿವಧನುಸ್ಸು ಮುರಿಯಲ್ಲ.. ತಿರುಗುವ ಚಕ್ರದಲ್ಲಿರೋ ಮೀನಿಗೆ ಅರ್ಜುನನ ಸ್ಟೈಲಲ್ಲಿ ಬಾಣವನ್ನೂ ಹೊಡೆಯಲ್ಲ. ಆದರೂ ಶ್ರೀಲೀಲಾ ಸ್ವಯಂವರದಲ್ಲಿ ಗೆಲ್ಲೋದು ಕೃಷ್ಣಾನೆ ಅರ್ಥಾತ್ ಶ್ರೀಮುರಳೀನೇ.

    ಭರ್ಜರಿ ಚೇತನ್ ಒಂದು ಮಜಬೂತಾದ ಕಥೆ ರೆಡಿ ಮಾಡಿಕೊಂಡಿದ್ದಾರೆ. ಟ್ರೇಲರ್ ನೋಡಿದವರಿಗೆ ಪುಟ್ಟದೊಂದು ಕಥೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ. ಶ್ರೀಮುರಳಿ ಆಯುರ್ವೇದ ವೈದ್ಯಶಾಸ್ತ್ರ ಪಂಡಿತ ಎನ್ನುವುದು ಅರ್ಥವಾಗುತ್ತೆ. ವಿಲನ್‍ಗಳ ನಡುವೆ ಆಟವಾಡುವ ಶ್ರೀಮುರಳಿಯ ಪಾತ್ರ ಅಲ್ಲಿಗೇಕೆ ಬಂತು..? ಕೃಷ್ಣ, ಆ ಮೂರು ವಿಲನ್‍ಗಳ ವಿರುದ್ಧ ಯುದ್ಧ ಸಾರಿದ್ದು ಏಕೆ..? ಎಂಬ ಪ್ರಶ್ನೆಗೆ ಉತ್ತರವೇ ಭರಾಟೆ. ಸುಪ್ರೀತ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ಮೂಡಿ ಬಂದಿರೋ ಭರಾಟೆ, ರಿಲೀಸ್ ಆಗುವ ಮೊದಲೇ 30 ಕೋಟಿ ಲಾಭದಲ್ಲಿದೆಯಂತೆ. 

  • ಭರಾಟೆಯಲ್ಲಿರೋ ಆ ಇನ್ನೊಬ್ಬ ಸ್ಟಾರ್ ಕಲಾವಿದ ಯಾರು..?

    bharaate's another star is suspense

    ಭರಾಟೆ ಚಿತ್ರದಲ್ಲಿ ಹೀರೋ ಶ್ರೀಮುರಳಿ, ಹೀರೋಯಿನ್ ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ತಾರಾ, ಅವಿನಾಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ.. ಇದ್ದಾರೆ. ಭರ್ಜರಿ ಚೇತನ್ ನಿರ್ದೇಶಕ. ರಚಿತಾ ರಾಮ್ ಅತಿಥಿ ನಟಿಯಾಗಿ ಮಿಂಚು ಹರಿಸಲಿದ್ದಾರೆ. ಇದೆಲ್ಲದರ ಮಧ್ಯೆ ಅತೀ ದೊಡ್ಡ ಸಸ್ಪೆನ್ಸ್ ಒಂದು ಇದೆ.

    ಚಿತ್ರದಲ್ಲಿ ಕನ್ನಡದ ಇನ್ನೊಬ್ಬ ಸ್ಟಾರ್ ನಟ ನಟಿಸಿದ್ದಾರೆ. ಅವರು ತೆರೆ ಮೇಲೆ ಬಂದಾಗ ಪ್ರತಿಯೊಬ್ಬರೂ ಎದ್ದುನಿಂತು ನಮಸ್ಕಾರ ಮಾಡಬೇಕು ಎನ್ನುವಂತಿದೆ. ಹಾಗಿದೆಯಂತೆ ಆ ಪಾತ್ರ. ಅವರಷ್ಟೆ ಅಲ್ಲ, ಒಟ್ಟು ಐವರು ಪಾತ್ರಧಾರಿಗಳು ಸಸ್ಪೆನ್ಸ್ ಎಂಟ್ರಿ ಕೊಡಲಿದ್ದಾರೆ ಎಂದು ಭಯಂಕರ ಸಸ್ಪೆನ್ಸ್ ಹೇಳಿದ್ದಾರೆ ನಿರ್ದೇಶಕ ಚೇತನ್.

    ಅಂದಹಾಗೆ ಆ ದೊಡ್ಡ ನಟ ತೆರೆ ಮೇಲೆ ಬಂದಾಗ ಇಡೀ ಚಿತ್ರಮಂದಿರಕ್ಕೇ ಒಂದು ದೈವಿಕ ಕಳೆ ಬರುತ್ತದೆಯಂತೆ. ಯಾರು ಆ ನಟ.. ಗೆಸ್ ಮಾಡಿ. ಇನ್ನೂ 3 ದಿನ ಟೈಂ ಇದೆ.

  • ಮಹೇಶ್ ಬಾಬುಗೆ ಶ್ರೀಲೀಲಾ ಹೀರೋಯಿನ್

    ಮಹೇಶ್ ಬಾಬುಗೆ ಶ್ರೀಲೀಲಾ ಹೀರೋಯಿನ್

    ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ, ಪೂಜಾ ಹೆಗ್ಡೆ ಮಾದರಿಯಲ್ಲೇ ಸದ್ದು ಮಾಡ್ತಿರೋ ಕನ್ನಡತಿ ಶ್ರೀಲೀಲಾ. ತೆಲುಗಿನಲ್ಲಿ. ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಕಿಸ್ ಖ್ಯಾತಿಯ ಶ್ರೀಲೀಲಾ, ತೆಲುಗಿನ ಲೆಜೆಂಡ್ ರಾಘವೇಂದ್ರ ರಾವ್ ಕಣ್ಣಿಗೆ ಬಿದ್ದರು. ಸೌಂದರ್ಯ ಮತ್ತು ನಟನೆ ಎರಡೂ ಇದ್ದ ಶ್ರೀಲೀಲಾ ಸಾಲು ಸಾಲು ಚಿತ್ರಗಳಿಗೆ ಯೆಸ್ ಎಂದರು. ಹೊಸಬರ ಚಿತ್ರಗಳಷ್ಟೇ ಅಲ್ಲದೆ ರವಿತೇಜ, ನಿತಿನ್, ರಾಮ್ ಪೊತಿನೇನಿ ಹಾಗೂ ಬಾಲಕೃಷ್ಣ ಸೇರಿದಂತೆ ಎಲ್ಲ ವಯೋಮಾನದ ಹೀರೋಗಳಿಗೂ ಜೊತೆಯಾದ ಶ್ರೀಲೀಲಾ ಈಗ ಬಂಪರ್ ಪ್ರೈಜ್`ನ್ನೇ ಪಡೆದಿದ್ದಾರೆ. ಮಹೇಶ್ ಬಾಬು ಎದುರು ಹೀರೋಯಿನ್ ಆಗುತ್ತಿದ್ದಾರೆ.

    ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ಹೀರೋ. ಚಿತ್ರದಲ್ಲಿ ಶ್ರೀಲೀಲಾ ಜೊತೆ ಪೂಜಾ ಹೆಗ್ಡೆ ಕೂಡಾ ನಾಯಕಿ. ಮೊದಲ ಹೀರೋಯಿನ್, ಸೆಕೆಂಡ್ ಹೀರೋಯಿನ್ ಎಂದೆಲ್ಲ ಏನಿಲ್ಲ. ಇಬ್ಬರೂ ನಾಯಕಿಯರು. ಇಬ್ಬರಿಗೂ ಅಷ್ಟೇ ಪ್ರಧಾನವಾದ ರೋಲ್ ಇದೆ ಎನ್ನುತ್ತಿದೆ ಚಿತ್ರತಂಡ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ನಾನು ಇದುವರೆಗೆ ನಟಿಸಿರುವ ಎಲ್ಲ ಪಾತ್ರಗಳಲ್ಲೂ ವೆರೈಟಿ ಇದೆ. ಒಂದೊಂದು ಪಾತ್ರವೂ ನನ್ನ ಹಿಂದಿನ ಚಿತ್ರಗಳಿಗಿಂತ ಡಿಫರೆಂಟ್ ಎಂದಿದ್ದಾರೆ ಶ್ರೀಲೀಲಾ.

    ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರದಲ್ಲಿ ನಾಯಕಿಯರನ್ನು ಚೆಂದವಾಗಿ ತೋರಿಸುವುದಷ್ಟೇ ಅಲ್ಲ, ವಿಭಿನ್ನವಾಗಿ ತೋರಿಸುವುದರಲ್ಲಿ ಹೆಸರುವಾಸಿ. ಒಂದೊಂದು ಪಾತ್ರಕ್ಕೂ ಒಂದೊಂದು ಮ್ಯಾನರಿಸಂ ಕೊಡುವ ತ್ರಿವಿಕ್ರಮ್ ಶ್ರೀನಿವಾಸ್ ಆ ಇಮೇಜ್‍ನ್ನು ಪ್ರೇಕ್ಷಕರು ಸದಾ ನೆನಪಿಟ್ಟುಕೊಳ್ಳುವಂತೆ ಮಾಡಬಲ್ಲರು. ಜೊತೆಗೆ ಶ್ರೀಲೀಲಾಗೆ ಈಗಿನ್ನೂ ತೆಲುಗಿನಲ್ಲಿ ಧಮಾಕಾ ಅನ್ನೋ 100 ಕೋಟಿ ಚಿತ್ರ ಕೊಟ್ಟು ಸಕ್ಸಸ್ ಕುದುರೆಯೇರಿದ್ದಾರೆ. ಇದೀಗ ಮಹೇಶ್ ಬಾಬು ಚಿತ್ರವೂ ಸಿಕ್ಕಿದೆ.

  • ಮಹೇಶ್ ಬಾಬುಗೆ ಶ್ರೀಲೀಲಾ ಹೀರೋಯಿನ್..?

    ಮಹೇಶ್ ಬಾಬುಗೆ ಶ್ರೀಲೀಲಾ ಹೀರೋಯಿನ್..?

    ಕಿಸ್ ಮೂಲಕ ಕನ್ನಡಿಗರ ಮನಗೆದ್ದ ಶ್ರೀಲೀಲಾ ಪೆಳ್ಳಿಸಂದಡಿ ಚಿತ್ರದಿಂದ ತೆಲುಗಿನಲ್ಲೂ ಚೆಂದದ ಹುಡುಗಿಯಾಗಿ ಗುರುತಿಸಿಕೊಂಡರು. ಇತ್ತ ಕನ್ನಡದಲ್ಲಿ ಅವರ ಬೈ ಟು ಲವ್ ರಿಲೀಸ್ ಆಗುತ್ತಿದ್ದರೆ ಅತ್ತ ತೆಲುಗಿನಲ್ಲಿ ಮಹೇಶ್ ಬಾಬು ಚಿತ್ರಕ್ಕೆ ಸೈನ್ ಹಾಕುವ ಖುಷಿಯಲ್ಲಿದ್ದಾರೆ.

    ಮಹೇಶ್ ಬಾಬು ಸರ್ಕಾರಿ ವಾರು ಪಾಟ ನಂತರ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಈಗಾಗಲೇ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರಂತೆ. ಮಾತುಕತೆ ಫೈನಲ್ ಹಂತದಲ್ಲಿದೆ. ಪೂಜಾ ಮತ್ತು ಶ್ರೀಲೀಲಾ ಇಬ್ಬರೂ ಕನ್ನಡದವರೇ ಎನ್ನುವುದು ವಿಶೇಷ.

  • ಮಾಸ್ ಮಹಾರಾಜನಿಗೆ ಕಿಸ್ ಲೀಲಾ ನಾಯಕಿ

    ಮಾಸ್ ಮಹಾರಾಜನಿಗೆ ಕಿಸ್ ಲೀಲಾ ನಾಯಕಿ

    ನೀನೇ ಮೊದಲು ನೀನೇ ಕೊನೆ.. ಹಾಡಿನ ಮೂಲಕ ಯುವಕರ ಎದೆಗೆ ಲಗ್ಗೆಯಿಟ್ಟ ಚೆಲುವೆ ಶ್ರೀಲೀಲಾ. ಕಿಸ್ ಮತ್ತು ಭರಾಟೆ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಶ್ರೀಲೀಲಾ ಮೇಲೆ ಟಾಲಿವುಡ್ ಕಣ್ಣು ಬಿದ್ದಿದೆ. ಶ್ರೀಕಾಂತ್ ಪುತ್ರನ ಪೆಳ್ಳಿ ಸಂದಡಿ ಚಿತ್ರದ ಬೆನ್ನಲ್ಲೇ, ಮಾಸ್ ಮಹಾರಾಜ  ರವಿತೇಜ ಶ್ರೀಲೀಲಾ ಮೇಲೆಕಣ್ಣು ಹಾಕಿದ್ದಾರೆ.

    ತೆಲುಗಿನಲ್ಲಿ ತ್ರಿನಂದ ರಾವ್ ಎಂಬುವವರು ನಿರ್ದೇಶಿಸುತ್ತಿರೋ ಆರ್‍ಟಿ68 (ಚಿತ್ರಕ್ಕಿನ್ನೂ ಟೈಟಲ್ ಸಿಕ್ಕಿಲ್ಲ) ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ಅಫ್‍ಕೋರ್ಸ್.. ಇದೇ ಚಿತ್ರದಲ್ಲಿ ಐಶ್ವರ್ಯಾ ಮೆನನ್ ಎಂಬ ಇನ್ನೊಬ್ಬ ನಾಯಕಿಯೂ ಇದ್ದಾರೆ.

    ಈಗಾಗಲೇ ಕನ್ನಡದ ರಶ್ಮಿಕಾ ಮಂದಣ್ಣ ಮತ್ತು ನಭಾ ನಟೇಶ್ ಕನ್ನಡ ಚಿತ್ರಗಳಿಗೆ ಸಿಗದಷ್ಟು ದೂರ ಹೋಗಿದ್ದಾಗಿದೆ. ಮುಂದಿನ ಸರದಿ ಶ್ರೀಲೀಲಾ ಅವರದ್ದಾ. ಗೊತ್ತಿಲ್ಲ. ಸದ್ಯಕ್ಕೆ ಕನ್ನಡದಲ್ಲಿ ಶ್ರೀಲೀಲಾ ಧ್ರುವ ಸರ್ಜಾ ಜೊತೆ ದುಬಾರಿ ಹಾಗೂ ಧನ್ವೀರ್ ಜೊತೆ ಬೈಟು ಲವ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಲೆಟ್ಸ್ ಬ್ರೇಕಪ್ : ಕಿಸ್ ಶ್ರೀಲೀಲಾ ಪಾತ್ರಕ್ಕೆ ಸ್ಪಂದನಾ

    newbie spandana replaces sreeleela in lets breakuo

    ಜಯಣ್ಣ ಕಂಬೈನ್ಸ್ ನಿರ್ಮಾಣದ ಹೊಸ ಸಿನಿಮಾ ಲೆಟ್ಸ್ ಬ್ರೇಕಪ್. ಪಂಚತಂತ್ರ ಖ್ಯಾತಿಯ ವಿಹಾನ್ ಹೀರೋ ಆಗಿರುವ ಚಿತ್ರಕ್ಕೆ ಕಿಸ್, ಭರಾಟೆ ಖ್ಯಾತಿಯ ಶ್ರೀಲೀಲಾ ನಾಯಕಿಯಾಗಿದ್ದರು. ಆದರೆ, ಈಗ ನಾಯಕಿಯ ಬದಲಾವಣೆ ಆಗಿದೆ. ಶ್ರೀಲೀಲಾ ಜಾಗಕ್ಕೆ ಸ್ಪಂದನಾ ಬಂದಿದ್ದಾರೆ.

    ಶ್ರೀಲೀಲಾ ನಮ್ಮ ಚಿತ್ರಕ್ಕೂ ಮೊದಲೇ ಬೇರೊಂದು ಚಿತ್ರ ಒಪ್ಪಿಕೊಂಡಿದ್ದರು. ಆದರೆ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಇದರಿಂದ ಅವರ ಡೇಟ್ಸ್ ಕ್ಲಾಷ್ ಆಗುತ್ತಿವೆ. ಇದರಿಂದಾಗಿ ಬದಲಾವಣೆ ಅನಿವಾರ್ಯವಾಯಿತು ಎನ್ನುತ್ತಾರೆ ಸ್ವರೂಪ್. ಅಂದಹಾಗೆ ಸ್ವರೂಪ್ ಅವರೇ ಈ ಚಿತ್ರದ ಡೈರೆಕ್ಟರ್. ಅವರಿಗೂ ಇದು ಮೊದಲ ಪ್ರಯತ್ನ.

    ಸ್ಪಂದನಾ, ಕನ್ನಡದ ಹುಡುಗಿ. ನಾಗತಿಹಳ್ಳಿ ಟೆಂಟ್‍ನಲ್ಲಿ ತರಬೇತಿ ಪಡೆದಿರುವ ಸ್ಪಂದನಾ, ಅನುಪಮ್ ಖೇರ್ ಅವರ ಶಾಲೆಯ ವಿದ್ಯಾರ್ಥಿನಿ. ಅಡಿಷನ್‍ನಲ್ಲಿ ಅದ್ಭುತವಾಗಿ ನಟಿಸಿ ಆಯ್ಕೆಯಾಗಿದ್ದಾರೆ.

    ಜಯಣ್ಣ, ಭೋಗೇಂದ್ರ ನಿರ್ಮಾಣದ ಚಿತ್ರದ ಲೆಟ್ಸ್ ಬ್ರೇಕಪ್ ಫಾರೆವರ್ ಚಿತ್ರದ ಫಸ್ಟ್ ಲುಕ್, ಟೀಸರ್ ರಿಲೀಸ್ ಮಾಡುವ ಪ್ಲಾನ್ ಹಾಕಿಕೊಂಡಿದೆ ಚಿತ್ರತಂಡ.

     

  • ವಿಹಾನ್-ಶ್ರೀಲೀಲಾ ಲೆಟ್ಸ್ ಬ್ರೇಕಪ್

    vihaan sreeleea lets brekup

    ಪಂಚತAತ್ರದ ವಿಹಾನ್ ಮತ್ತು ಕಿಸ್, ಭರಾಟೆಯ ಶ್ರೀಲೀಲಾ ಲೆಟ್ಸ್ ಬ್ರೇಕಪ್ ಎನ್ನುತ್ತಿದ್ದಾರೆ. ಅರೆ.. ಇರ‍್ಯಾವಾಗ ಲವ್ ಮಾಡಿದ್ರು.. ಈಗ ಬ್ರೇಕಪ್ ಆಗ್ತಿರೋದೇಕೆ ಎಂದೆಲ್ಲ ಪ್ರಶ್ನೆ ಕೇಳಬೇಡಿ. ಇದು ಇವರಿಬ್ಬರೂ ನಟಿಸುತ್ತಿರುವ ಹೊಸ ಚಿತ್ರದ ಹೆಸರು.

    ಈ ಯುವಜೋಡಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಯುವ ನಿರ್ದೇಶಕ ಸ್ವರೂಪ್. ಲಕ್ನೋ ಟು ಬೆಂಗಳೂರು ಎಂಬ ಚಿತ್ರವನ್ನು ನಿರ್ದೇಶಿಸಿರುವ ಸ್ವರೂಪ್‌ಗೆ ಇದು 2ನೇ ಸಿನಿಮಾ. ಜಯಣ್ಣ-ಭೋಗೇಂದ್ರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ, ಏಪ್ರಿಲ್‌ನಲ್ಲಿ ಶುರುವಾಗುವ ನಿರೀಕ್ಷೆ ಇದೆ. ವ್ಯಾಲೆಂಟೈನ್ಸ್ ಡೇಗೆ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರಂತೆ.

  • ಶ್ರೀಮುರಳಿಯಿಂದ ಶ್ರೀಲೀಲಾ ಕಲಿತಿದ್ದು ಏನು..?

    sreeleela learns important lesson from srimurali

    ಶ್ರೀಮುರಳಿ, ಭರ್ಜರಿ ಚೇತನ್ ಇದೇ ಮೊದಲ ಬಾರಿಗೆ ಜೋಡಿಯಾಗಿರೋ ಚಿತ್ರ ಭರಾಟೆ. ಇತ್ತೀಚೆಗೆ ಡಾರ್ಕ್ ಶೇಡ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಶ್ರೀಮುರಳಿ, ಇಲ್ಲಿ ಕಲರ್‍ಫುಲ್ ಆಗಿ ಮಿಂಚಿದ್ದಾರೆ. ಶ್ರೀಮುರಳಿಗೆ ಇಲ್ಲಿ ಶ್ರೀಲೀಲಾ ಜೋಡಿ. ನೀನೇ ಮೊದಲು ನೀನೇ ಕೊನೆ.. ಎಂದು ಪ್ರೇಕ್ಷಕರ ಎದೆಗೇ ಕಿಸ್ ಕೊಟ್ಟ ಚೆಲುವೆ, ಇಲ್ಲಿ ರಾಧಾ ಆಗಿದ್ದಾರೆ.

    ಮೊದಲ ಬಾರಿಗೆ ಶ್ರೀಮುರಳಿ ಜೊತೆ ನಟಿಸಬೇಕು ಎಂದಾಗ ನರ್ವಸ್ ಆಗಿದ್ದೆ. ಆಗ ನನ್ನ ಮೊದಲ ಚಿತ್ರವೇ ಇನ್ನೂ ಪೂರ್ತಿ ಆಗಿರಲಿಲ್ಲ. ಆದರೆ, ಚೇತನ್ ಅವರೇ ಧೈರ್ಯ ತುಂಬಿದ್ರು. ಆದರೆ, ಶ್ರೀಮುರಳಿಯವರ ಜೊತೆ ನಟಿಸುವಾಗ ಅವರ ಸಿಂಪ್ಲಿಸಿಟಿ ಮತ್ತು ತಾಳ್ಮೆ ಬಹಳ ಇಷ್ಟವಾಯ್ತು ಎನ್ನುವ ಶ್ರೀಲೀಲಾಗೆ, ಶ್ರೀಮುರಳಿಯವರ ಶಿಸ್ತು ಪಾಠವನ್ನೇ ಕಲಿಸಿದೆ.

    ಅವರು ಪಾತ್ರ ಮತ್ತು ಸನ್ನಿವೇಶಕ್ಕೆ ಎಷ್ಟು ಶ್ರಮ ಹಾಕ್ತಾರೆ ಅಂದ್ರೆ, ನಿರ್ದೇಶಕರು ಓಕೆ ಎನ್ನುವವರೆಗೂ ಬೇಸರ ಮಾಡಿಕೊಳ್ಳಲ್ಲ. ತಾಳ್ಮೆ ಕಳೆದುಕೊಳ್ಳಲ್ಲ. ಶಿಸ್ತು ತಪ್ಪಲ್ಲ. ನಿರ್ದೇಶಕರೇ ಫೈನಲ್. ಅವರ ಆ ಶಿಸ್ತು, ತಾಳ್ಮೆಯಿಂದ ನಮ್ಮಂತ ಹೊಸಬರು ಕಲಿತುಕೊಳ್ಳೋದು ತುಂಬಾ ಇದೆ ಎನ್ನುತ್ತಾರೆ ಶ್ರೀಲೀಲಾ.

    ಸುಪ್ರೀತ್ ನಿರ್ಮಾಣದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಸುತ್ತಮುತ್ತ ಹಬ್ಬದ ಭರಾಟೆ ಇದೆ.

  • ಶ್ರೀಲೀಲಾ `ಕಿಸ್'ಗೆ ಯಶ್ ಮೆಚ್ಚುಗೆ

    yash appreciates kiss heroine sreeleela

    ಕಿಸ್, ಎ.ಪಿ.ಅರ್ಜುನ್ ನಿರ್ದೇಶನ, ನಿರ್ಮಾಣದ ಹೊಸ ಸಿನಿಮಾ. ವಿರಾಟ್ ಮತ್ತು ಶ್ರೀಲೀಲಾರನ್ನು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ತರುತ್ತಿದ್ದಾರೆ ಎ.ಪಿ.ಅರ್ಜುನ್. ಚಿತ್ರದ ಟ್ರೇಲರ್ ಹೊರಬಿದ್ದಿದ್ದು, ಸೆಪ್ಟೆಂಬರ್ 27ರಂದು ಸಿನಿಮಾ ರಿಲೀಸ್ ಆಗ್ತಿದೆ.

    ಟ್ರೇಲರ್ ರಿಲೀಸ್ ಮಾಡಿದ ನಟ ಯಶ್ ನಾಯಕಿ ಶ್ರೀಲೀಲಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಶ್ರೀಲೀಲಾ, ನಟ ಯಶ್ ಅವರ ಕುಟುಂಬದ ಆಪ್ತ ವೈದ್ಯೆ ಸ್ವರ್ಣ ಅವರ ಮಗಳಂತೆ. ಹೀಗಾಗಿ ಚಿಕ್ಕಂದಿನಿಂದಲೂ ಶ್ರೀಲೀಲಾ ಅವರನ್ನು ನೋಡಿರುವ ಯಶ್ ಅವರ ಡ್ಯಾನ್ಸ್ ಸ್ಟೆಪ್ಪುಗಳಿಗೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ.

    ಶ್ರೀಲೀಲಾ ಅವರಿಗೆ ಒಳ್ಳೆಯ ಭವಿಷ್ಯವಿದೆ. ಅವರು ಭಾರತದ ಎಲ್ಲ ಇಂಡಸ್ಟ್ರಿಗಳನ್ನೂ ನೋಡ್ಕೊಂಡ್ ಬರ್ತಾರೆ ಎಂದಿದ್ದಾರೆ ಯಶ್. ಶ್ರೀಲೀಲಾ ಮೊದಲ ಸಿನಿಮಾ ರಿಲೀಸ್‍ಗೂ ಮೊದಲೇ ಶ್ರೀಮುರಳಿಯವರ ಭರಾಟೆ ಚಿತ್ರಕ್ಕೂ ಹೀರೋಯಿನ್ ಆಗಿದ್ದಾರೆ. 

  • ಸಿನಿಮಾಗಾಗಿ ಎಂಬಿಬಿಎಸ್ ಬಿಡಲ್ಲ : ಶ್ರೀಲೀಲಾ

    ಸಿನಿಮಾಗಾಗಿ ಎಂಬಿಬಿಎಸ್ ಬಿಡಲ್ಲ : ಶ್ರೀಲೀಲಾ

    ಶ್ರೀಲೀಲಾ. ಎ.ಪಿ.ಅರ್ಜುನ್ ಗುರುತಿಸಿದ ಪ್ರತಿಭೆ. ಕಿಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರತಿಭಾವಂತೆ. ನಂತರ ಭರಾಟೆ, ಬೈಟೂಲವ್, ತೆಲುಗಿನಲ್ಲಿ ಪೆಳ್ಳಿ ಸಂದಡಿ ಚಿತ್ರಗಳಲ್ಲಿ ನಟಿಸಿದ ಶ್ರೀಲೀಲಾ ಕೈಲೀಗ ತೆಲುಗು ಮತ್ತು ಕನ್ನಡ ಚಿತ್ರಗಳೆರಡೂ ಇವೆ. ಕೈ ತುಂಬಾ ಸಿನಿಮಾ ಇದ್ದರೂ.. ಅವಕಾಶಗಳಿದ್ದರೂ.. ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ತಿಲ್ಲ.

    ಸಿನಿಮಾ ಮಾಡುವಾಗ ಸಿನಿಮಾ ಮಾಡ್ತೇನೆ. ಶಿಸ್ತುಬದ್ಧವಾಗಿ ಮಾಡ್ತೇನೆ. ಅದು ಮುಗಿದ ಮೇಲೆ ಎಕ್ಸಾಂ ಹತ್ತಿರ ಬರುವ ಹೊತ್ತಿಗೆ ನಾನು ಓದಲೇಬೇಕು. ಪ್ರಾಕ್ಟಿಕಲ್ಸ್ ಅಟೆಂಡ್ ಆಗಬೇಕು. ಏಕೆಂದರೆ ನಟಿಯಾಗೋದಕ್ಕಿಂತ ನನ್ನ ದೊಡ್ಡ ಕನಸು ಡಾಕ್ಟರ್ ಆಗಬೇಕು ಅನ್ನೋದು. ಹೀಗಾಗಿಯೇ ಹೆಚ್ಚು ಚಿತ್ರಗಳನ್ನು ಒಪ್ಪಿಕೊಳ್ತಿಲ್ಲ ಎನ್ನುತ್ತಾರೆ ಶ್ರೀಲೀಲಾ.

    ಇತ್ತೀಚೆಗೆ ಎಕ್ಸಾಂ ಹೊತ್ತಿಗೆ ಸಿನಿಮಾಗಳಿಂದ ಕಂಪ್ಲೀಟ್ ರೆಸ್ಟ್ ತೆಗೆದುಕೊಂಡು ಕಾಲೇಜಿಗೂ ಹೋಗುತ್ತಾ.. ಮೀಡಿಯಾಗಳ ಕೈಗೂ ಸಿಗದೆ.. ಓದಿ ಎಕ್ಸಾಂ ಬರೆದಿದ್ದರು.

    ಸದ್ಯಕ್ಕೆ ತೆಲುಗಿನಲ್ಲಿ 2 ಸಿನಿಮಾ ಹಾಗೂ ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಸ್ಯಾಂಡಲ್ ವುಡ್ ಪ್ರಿನ್ಸೆಸ್ ಕಿಸ್ ಲೀಲಾ

    sreeleela gets sandalwood princess title

    ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಾಯಕ ವಿರಾಟ್ ಮತ್ತು ನಾಯಕಿ ಶ್ರೀಲೀಲಾ ಫ್ರೆಶ್ ನೆಸ್ ಇಷ್ಟವಾಗಿದೆ. ಎಷ್ಟರಮಟ್ಟಿಗೆ ಎಂದರೆ, ಮೊದಲ ಚಿತ್ರದಲ್ಲೇ ಶ್ರೀಲೀಲಾ ಕಟೌಟ್ ನಿಲ್ಲಿಸುವಷ್ಟರಮಟ್ಟಿಗೆ. ವೀರೇಶ್ ಟಾಕೀಸ್ ಎದುರು ಶ್ರೀಲೀಲಾ ಕಟೌಟ್ ಬಂದಿದೆ. ಅಷ್ಟೇ ಅಲ್ಲ, ಶ್ರೀಲೀಲಾ ಅವರಿಗೆ ಸ್ಯಾಂಡಲ್‍ವುಡ್ ಪ್ರಿನ್ಸೆಸ್ ಅನ್ನೋ ಹೊಸ ಬಿರುದನ್ನೂ ಕೊಟ್ಟಿದ್ದಾರೆ ಫ್ಯಾನ್ಸ್. ನೀನೇ ಮೊದಲು ನೀನೇ ಕೊನೆ.. ಹಾಡು ಹಿಟ್ ಆಗಿದ್ದರಿಂದ ಸೃಷ್ಟಿಯಾದ ಕ್ರೇಜ್ ಇದು.

    ಇದನ್ನೆಲ್ಲ ನೋಡ್ತಿದ್ರೆ ಖುಷಿಯಾಗುತ್ತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕಥೆಗಳನ್ನು ಮಾಡುತ್ತೇನೆ ಎಂದಿದ್ದಾರೆ ಶ್ರೀಲೀಲಾ.