` ajay devagan, - chitraloka.com | Kannada Movie News, Reviews | Image

ajay devagan,

  • ಅಜಯ್ ದೇವಗನ್ 8 ನಿಮಿಷ. ಆಲಿಯಾ ಭಟ್ 15 ನಿಮಿಷ : ಆರ್‍ಆರ್‍ಆರ್ ಸ್ಪೆಷಲ್

    ಅಜಯ್ ದೇವಗನ್ 8 ನಿಮಿಷ. ಆಲಿಯಾ ಭಟ್ 15 ನಿಮಿಷ : ಆರ್‍ಆರ್‍ಆರ್ ಸ್ಪೆಷಲ್

    ಅಜಯ್ ದೇವಗನ್ ಬಾಲಿವುಡ್ ಸೂಪರ್ ಸ್ಟಾರ್. ಅಜಯ್ ದೇವಗನ್ ಚಿತ್ರಗಳಿಗೆ ಇಡೀ ದೇಶದಲ್ಲಿ ಅದ್ಭುತ ಓಪನಿಂಗ್ ಸಿಗುತ್ತೆ. ಅತ್ತ ಅಲಿಯಾ ಭಟ್ ಕೂಡಾ ಬಾಲಿವುಡ್‍ನ ಲೇಡಿ ಸ್ಟಾರ್. ಚೆಂದದ ನಟಿ ಎನ್ನುವುದನ್ನೂ ಸಾಬೀತು ಪಡಿಸಿರುವ ಆಲಿಯಾಗೆ ಕೈತುಂಬಾ ಅವಕಾಶಗಳಿವೆ. ಆದರೆ.. ಇವರಿಬ್ಬರೂ ರಾಜಮೌಳಿಗಾಗಿ ಆರ್‍ಆರ್‍ಆರ್ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ.

    ಆರ್‍ಆರ್‍ಆರ್ ಚಿತ್ರಕ್ಕೆ ಎನ್‍ಟಿಆರ್ ಮತ್ತು ರಾಮ್ ಚರಣ್ ತೇಜ ಹೀರೋಗಳು. ಆ ಚಿತ್ರದಲ್ಲಿ ನಟಿಸಿರೋ ಅಜಯ್ ದೇವಗನ್ ಅವರಿಗೆ ಇರೋದು 8 ನಿಮಿಷದ ರೋಲ್. ಅಲಿಯಾ ಭಟ್ ಅವರಿಗೆ ಇರೋದು 15 ನಿಮಿಷದ ರೋಲ್. ಚಿತ್ರದಲ್ಲಿ ಅಷ್ಟು ಕಡಿಮೆ ಅವಧಿ ಕಾಣಿಸಿಕೊಳ್ಳೋ ಪಾತ್ರವಾದರೂ ಚಿತ್ರದಲ್ಲಿ ಆ ಪಾತ್ರಗಳಿಗೆ ದೊಡ್ಡ ಸ್ಕೋಪ್ ಇದೆಯಂತೆ. ಕೇವಲ ರಾಜಮೌಳಿ ಚಿತ್ರದಲ್ಲಿ ನಟಿಸಬೇಕು ಎಂಬ ಕಾರಣಕ್ಕೆ ಆ ಪುತ್ರಗಳಿಗೆ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಇಬ್ಬರೂ ಓಕೆ ಎಂದರಂತೆ.

  • ಅಜಯ್ ದೇವಗನ್ ಜೋಡಿಯಾಗಿ ಪ್ರಣೀತಾ ಸುಭಾಷ್

    prantha subash to act with ajay devagan

    ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಪ್ರಣೀತಾ ಸುಭಾಷ್, ಬಾಲಿವುಡ್ಡಿಗೆ ಅಧಿಕೃತ ಎಂಟ್ರಿ ಕೊಡುತ್ತಿದ್ದಾರೆ. ಅದೂ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಚಿತ್ರದ ಮೂಲಕ. ಭುಜ್-ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ಅಜಯ್ ದೇವಗನ್ ಹೀರೋ. ಅವರಿಗೆ ಪತ್ನಿಯಾಗಿ ನಟಿಸುತ್ತಿದ್ದಾರೆ ಪ್ರಣೀತಾ ಸುಭಾಶ್.

    1971ರಲ್ಲಿ ಇಂಡಿಯಾ-ಪಾಕಿಸ್ತಾನ್ ಯುದ್ಧದ ಕಥೆ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಪರಿಣೀತಿ ಚೋಪ್ರಾ, ರಾಣಾ ದಗ್ಗುಬಾಟಿ ಕೂಡಾ ನಟಿಸಿದ್ದಾರೆ. 2020ರ ಆಗಸ್ಟ್ 14ರಂದು ಈ ಚಿತ್ರ ರಿಲೀಸ್ ಆಗಲಿದೆ.

  • ಕೆಜಿಎಫ್ ಎಫೆಕ್ಟ್ : ವಿಕ್ರಾಂತ್ ರೋಣನಿಗೆ ದಾರಿ ಬಿಟ್ಟ ಅಜಯ್ ದೇವಗನ್

    ಕೆಜಿಎಫ್ ಎಫೆಕ್ಟ್ : ವಿಕ್ರಾಂತ್ ರೋಣನಿಗೆ ದಾರಿ ಬಿಟ್ಟ ಅಜಯ್ ದೇವಗನ್

    ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ.. ಶಾರೂಕ್ ಖಾನ್ ಧೈರ್ಯ ಮಾಡಿದ್ದರು. ಕೆಜಿಎಫ್‍ಗೆ ಫೈಟ್ ಕೊಡೋಕೆ ಬಂದಿದ್ದ ಹೀರೋ ಸೋತು ಸುಣ್ಣವಾಗಿತ್ತು.

    ಕೆಜಿಎಫ್ 2 ರಿಲೀಸ್ ಆದಾಗ ಮುನ್ನೆಚ್ಚರಿಕೆಯಿಂದಾಗಿ ಅಮೀರ್ ಖಾನ್ ಹಿಂದೆ ಸರಿದರು. ಬರುತ್ತೇನೆ ಎಂದ ಶಾಹೀದ್ ಕಪೂರ್ ಒಂದು ವಾರ ಲೇಟಾಗಿ ಜೆರ್ಸಿ ತೊಟ್ಟರೂ  ಹೊಡೆತ ಭರ್ಜರಿಯಾಗಿಯೇ ಬಿತ್ತು. ತಮಿಳಿನ ವಿಜಯ್ ಅವರ ಬೀಸ್ಟ್ ಕೂಡಾ ನಿರೀಕ್ಷಿಸಿದಷ್ಟು ಪೈಪೋಟಿ ಕೊಡಲಿಲ್ಲ. ಇದೆಲ್ಲದರಿಂದ ಬಾಲಿವುಡ್ ಸ್ಟಾರ್ ನಟರು ಎಚ್ಚೆತ್ತಿದ್ದಾರೆ.

    ಜುಲೈ 28ಕ್ಕೆ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ. ಅದಾದ ಒಂದು ದಿನ ಬಿಟ್ಟು, ಜುಲೈ 29ಕ್ಕೆ ತೆರೆಗೆ ಬರೋಕೆ ಅಜಯ್ ದೇವಗನ್ ಅಭಿನಯದ ಥ್ಯಾಂಕ್ ಗಾಡ್ ರೆಡಿಯಾಗಿತ್ತು. ಈಗ ಥ್ಯಾಂಕ್ ಗಾಡ್ ಚಿತ್ರವೇ ಹೆಜ್ಜೆ ಹಿಂದಿಟ್ಟಿದೆ. ಇತ್ತೀಚೆಗೆ ಭಾಷೆ ವಿಚಾರಕ್ಕೆ ಸುದೀಪ್ ಮತ್ತು ಅಜಯ್ ನಡುವೆ ಎದ್ದ ವಿವಾದವನ್ನೊಮ್ಮೆ ನೆನಪಿಸಿಕೊಳ್ಳಿ... ಮಿಕ್ಕಿದ್ದೇಕೆ..?

    ಇದರ ನಡುವೆ ಸುದೀಪ್ ಅವರ ವಿಕ್ರಾಂತ್ ರೋಣ ದಿನಕ್ಕೊಮ್ಮೆ ಗಡಂಗ್ ರಕ್ಕಮ್ಮಾ ಎನ್ನುತ್ತಾ ಕ್ರೇಜು ಹೆಚ್ಚಿಸುತ್ತಿದೆ. ಎಲ್ಲ ಭಾಷೆಗಳಲ್ಲೂ ವಿಭಿನ್ನವಾಗಿ ಪ್ರಚಾರ ಮಾಡುತ್ತಿದೆ. ಚಿತ್ರದ ಮೇಕಿಂಗ್ ಭರವಸೆ ಹುಟ್ಟಿಸಿವೆ. ಅನೂಪ್ ಭಂಡಾರಿ ಅವರು ಚಿತ್ರವನ್ನು 3ಡಿಯಲ್ಲೂ ತೆರೆಗೆ ತರುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದ ಚಿತ್ರ ಇಂಗ್ಲಿಷಿನಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ.

  • ನಾರಾಯಣನಿಗೆ ಬೆಂಕಿಯಿಟ್ಟ ಎಫೆಕ್ಟ್.. ಅಜಯ್ ದೇವಗನ್ ಹೊಡೆತ ತಿಂತಾರಾ..?

    ajay devagan's tanhaji faces fire in karnataka

    ಅವನೇ ಶ್ರೀಮನ್ನಾರಾಯಣ ಚಿತ್ರ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಮುಂಬೈನಲ್ಲಿ ಶಿವಸೇನೆಯವರು ಎಂದಿನಂತೆ ವಿನಾಕಾರಣ ಕ್ಯಾತೆ ತೆಗೆದರು. ನಾರಾಯಣ ಚಿತ್ರ ಪ್ರದರ್ಶನವಾಗುತ್ತಿದ್ದ ಥಿಯೇಟರಿಗೆ ನುಗ್ಗಿ ದಾಂಧಲೆ ಎಬ್ಬಿಸಿ, ಚಿತ್ರದ ಪ್ರದರ್ಶನವನ್ನೇ ರದ್ದು ಮಾಡಿದರು. ಮುಂಬೈನಲ್ಲಿರುವ ಕನ್ನಡಿಗರು ಈಗ ಕನ್ನಡ ಚಿತ್ರ ನೋಡಬೇಕೆಂದರೆ ಕರ್ನಾಟಕಕ್ಕೇ ಬರಬೇಕು. ಆದರೆ, ಅದರ ಎಫೆಕ್ಟ್ ಈಗ ಅಜಯ್ ದೇವಗನ್ ಚಿತ್ರಕ್ಕೆ ತಟ್ಟುವಂತೆ ಕಾಣುತ್ತಿದೆ.

    ಇದೇ ವಾರ ಅಜಯ್ ದೇವಗನ್ ಅಭಿನಯದ ತಾನಾಜಿ ಸಿನಿಮಾ ರಿಲೀಸ್ ಆಗುತ್ತಿದೆ. ಅದು ಮರಾಠ ಸಾಮ್ರಾಜ್ಯದ ಸೇನಾಧಿಪತಿ ತಾನಾಜಿಯ ಹೋರಾಟ, ಶೌರ್ಯ ಪರಾಕ್ರಮಗಳ ಕಥೆ. ಅದು ಈ ವಾರ 200ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಕರ್ನಾಟಕದಲ್ಲಿ ರಿಲೀಸ್ ಆಗುತ್ತಿದೆ.

    ಅವನೇ ಶ್ರೀಮನ್ನಾರಾಯಣನಿಗೆ ಬೆಂಕಿ ಹಚ್ಚಿದ್ದರ ಎಫೆಕ್ಟ್ ಈಗ ಮರಾಠಿಗರ ಹೀರೋ ಚಿತ್ರಕ್ಕೆ ತಟ್ಟುತ್ತಿದೆ. ಹಲವು ಕನ್ನಡಪರ ಸಂಘಟನೆಗಳು ತಾನಾಜಿ: ದಿ ಅನ್‍ಸಂಗ್ ವಾರಿಯರ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿವೆ. ಶಿವಸೈನಿಕರು ಗಡಿ ಭಾಗದಲ್ಲಿ ಮಾಡಿದಂತೆಯೇ ಅವರ ಚಿತ್ರಕ್ಕೂ ಇಲ್ಲಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಗುಡುಗಿದ್ದಾರೆ.

  • ಸೌಥ್ ಸಿನಿಮಾ.. ಬಾಲಿವುಡ್..ಅಜಯ್ ದೇವಗನ್.. ಕಿಚ್ಚನ ಉತ್ತರ ಸಖತ್..

    ಸೌಥ್ ಸಿನಿಮಾ.. ಬಾಲಿವುಡ್..ಅಜಯ್ ದೇವಗನ್.. ಕಿಚ್ಚನ ಉತ್ತರ ಸಖತ್..

    ಕಿಚ್ಚ ಸುದೀಪ್ ನಟರಷ್ಟೇ ಅಲ್ಲ, ಮಾತುಗಾರರೂ ಕೂಡಾ. ಅವರು ಆಡಿದ ಮಾತುಗಳು ಕೆಲವೊಮ್ಮೆ ವಿವಾದವೂ ಆಗುತ್ತವೆ. ಆದರೆ ಅವುಗಳನ್ನು ಬ್ಯಾಲೆನ್ಸ್ ಮಾಡುವುದೂ ಗೊತ್ತು. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ನಡೆದ ಲಾಂಗ್ವೇಜ್ ವಾರ್ ನೆನಪಿದೆ ತಾನೇ.. ಅದನ್ನು ನೆನಪಿಟ್ಟುಕೊಂಡೇ ಇತ್ತೀಚೆಗೆ ಮೀಡಿಯಾದಲ್ಲಿ ಒಂದು ಪ್ರಶ್ನೆ ಎದುರಾಯಿತು. ಹಿಂದಿ ರಾಷ್ಟ್ರೀಯ ಭಾಷೆ ಎಂದು ಅಜಯ್ ದೇವಗನ್ ಮಾಡಿದ್ದ ಟ್ವೀಟ್ ಸೃಷ್ಟಿಸಿದ್ದ ರಂಪ ರಗಳೆಯನ್ನು ಜನ ಮರೆತಿಲ್ಲ. ಹೀಗಾಗಿಯೇ ಕೆಲವು ಪ್ರಶ್ನೆಗಳು ಸುದೀಪ್ ಅವರಿಗೆ ಎದುರಾದವು.

    ನೀವು ಪಠಾಣ್ ಚಿತ್ರವನ್ನು ನೋಡಿದ್ದೀರಾ? ಇದು ಸುದೀಪ್ ಅವರಿಗೆ ಎದುರಾದ ಪ್ರಶ್ನೆ. ಇಲ್ಲ, ನೋಡಿಲ್ಲ. ನೋಡುತ್ತೇನೆ ಎಂದ ಸುದೀಪ್, ನಾನು ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನೋಡುವಲ್ಲೇ ಬ್ಯುಸಿಯಾಗಿದ್ದೆ ಎಂದರು. ಚಿತ್ರಗಳ ಪಟ್ಟಿ ಇನ್ನೂ ದೊಡ್ಡದಿದೆ. ಅವನ್ನೆಲ್ಲ ಮುಗಿಸಿ ನೋಡುತ್ತೇನೆ ಎಂದರು.

    ನಿಮ್ಮ ಪ್ರಕಾರ ಬಿಗ್ಗೆಸ್ಟ್ ಸ್ಟಾರ್ ಯಾರು ಎಂಬ ಪ್ರಶ್ನೆ ಎದುರಾಯ್ತು. ಸುದೀಪ್ ಕೊಟ್ಟ ಉತ್ತರ ನಾನೇ..

    ಯಾರ ಹೆಸರು ಹೇಳಿದರೂ ವಾರ್ ಶುರುವಾಗುತ್ತೆ. ನನಗೆ ನಾನೇ ದೊಡ್ಡ ಸ್ಟಾರ್ ಎಂದುಕೊಳ್ಳೋದ್ರಲ್ಲಿ ತಪ್ಪೇನಿದೆ. ಹಾಗಂತ ಬೇರೆಯವರನ್ನು ಕೆಟ್ಟದಾಗಿಯೂ ಬಿಂಬಿಸಲಿಲ್ಲ. ನನ್ನ ಜೀವನಕ್ಕೆ ನಾನೇ ಸ್ಟಾರ್. ಹಾಗಂತ ಬೇರೆಯವರ ಬಗ್ಗೆ ಗೌರವ ಇದೆ ಎಂದರು ಸುದೀಪ್.

    ಫೇವರಿಟ್ ನಟಿ ಯಾರು? ಯಾರ ಜೊತೆ ನಟಿಸೋಕೆ ಇಷ್ಟ ಪಡ್ತೀರಿ ಎಂಬ ಪ್ರಶ್ನೆಗೆ ಸುದೀಪ್ ಹೇಳಿದ ಉತ್ತರ ಕಾಜೊಲ್. ನನಗೆ ಕಾಜೊಲ್ ಎಂದರೆ ಇಷ್ಟ, ಆದರೆ ಅಜಯ್ ದೇವಗನ್ ನನ್ನನ್ನು ದ್ವೇಷ ಮಾಡಬಾರದು ಎಂದ ಸುದೀಪ್, ನಗುತ್ತಲೇ ಅಜಯ್ ದೇವಗನ್ ನನ್ನ ಫೇವರಿಟ್ ನಟ ಎಂದರು.

    ಸೌತ್ ಸಿನಿಮಾಗಳು ಬಾಲಿವುಡ್‍ನ್ನು ಡಾಮಿನೇಟ್ ಮಾಡುತ್ತಿವೆ ಎಂಬ ಮಾತನ್ನು ನಿರಾಕರಿಸಿದ ಸುದೀಪ್ ನಾವೇನೂ ಕತ್ತಿ ಹಿಡಿದುಕೊಂಡು ಯುದ್ಧ ಮಾಡ್ತಿಲ್ಲ. ಅವರು ಮೊದಲು ಇಡೀ ಇಂಡಿಯಾ ಸಿನಿಮಾ ರಿಲೀಸ್ ಮಾಡ್ತಿದ್ರು. ನಾವು ಕಂಪ್ಲೇಂಟ್ ಮಾಡಲಿಲ್ಲ. ನಮ್ಮ ಪಾಡಿಗೆ ಸಿನಿಮಾ ಮಾಡ್ತಾ ಎಂಜಾಯ್ ಮಾಡ್ತಿದ್ದೆವು. ದಕ್ಷಿಣ ಭಾರತದ ಯಾರೊಬ್ಬರೂ ಬೌನ್ಸ್ ಬ್ಯಾಕ್ ಮಾಡುತ್ತೇವೆ ಎಂದು ಹೇಳಿಕೆ ಕೊಡಲಿಲ್ಲ. ಈಗ ಅವರು ನಮ್ಮ ಸಿನಿಮಾ ಎಂಜಾಯ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಸ್ಟೇಟ್ ಮೆಂಟ್ ಕೊಡುತ್ತಿರುವುದು ಚಿತ್ರರಂಗದವರಲ್ಲ. ಹಿಂದಿ ಚಿತ್ರರಂಗ ಹೆದರಿಲ್ಲ. ದಕ್ಷಿಣ ಭಾರತ ಚಿತ್ರರಂಗ ಖುಷಿಯಿಂದ ಪಾರ್ಟಿ ಮಾಡ್ತಿಲ್ಲ. ಹೇಳಿಕೆ ಕೊಡ್ತಿರೋದು 3ನ# ವ್ಯಕ್ತಿಗಳು. ಅವರು ಅವರ ಪಾಡಿಗೆ, ನಾವು ನಮ್ಮ ಪಾಡಿಗೆ ಸಿನಿಮಾ ಮಾಡ್ತಿದ್ದೇವೆ ಎಂದಿದ್ದಾರೆ ಸುದೀಪ್.

    ಕಳೆದ ವರ್ಷ ವಿಕ್ರಾಂತ್ ರೋಣ ಹಿಂದಿಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಮುಂದಿನ ತಿಂಗಳು ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಬ್ಜ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ.

  • ಹಿಂದಿ ರಾಷ್ಟ್ರಭಾಷೆ ವಿವಾದ : ಸೋನು ನಿಗಮ್ ಎಚ್ಚರಿಕೆ

    ಹಿಂದಿ ರಾಷ್ಟ್ರಭಾಷೆ ವಿವಾದ : ಸೋನು ನಿಗಮ್ ಎಚ್ಚರಿಕೆ

    ಇತ್ತೀಚೆಗೆ ಕಿಚ್ಚ ಸುದೀಪ್ ಹೇಳಿದ್ದ ಮಾತನ್ನ ಇನ್ನೊಂದು ರೀತಿ ಅರ್ಥ ಮಾಡಿಕೊಂಡು ವಿವಾದ ಸೃಷ್ಟಿಸಿದ್ದರು ನಟ ಅಜಯ್ ದೇವಗನ್. ವಿವಾದಕ್ಕೆ ಸುದೀಪ್ ಗಾಂಭೀರ್ಯದ ಉತ್ತರ ಕೊಟ್ಟರೇನೋ ಹೌದು. ಆದರೆ ಕಂಗನಾ ರಣಾವತ್, ಅಕ್ಷಯ್ ಕುಮಾರ್, ನವಾಜುದ್ದೀನ್ ಸಿದ್ಧಿಕಿ.. ಸೇರಿದಂತೆ ಒಂದಷ್ಟು ಕಲಾವಿದರು ಇನ್ನಷ್ಟು ಬೆಳೆಸುವ ಸೂಚನೆ ಕೊಟ್ಟರು. ಹಾಗೆ ನೋಡಿದರೆ ಸಂಯಮದಿಂದ ವರ್ತಿಸಿದ್ದು ದಕ್ಷಿಣದ ಕಲಾವಿದರೇ. ಈಗ ಗಾಯಕ ಸೋನು ನಿಗಮ್ ವಿವಾದದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ಒಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

    ದೇಶದಲ್ಲಿ ಹಲವು ಭಾಷೆಗಳಿವೆ. ಸಂವಿಧಾನದ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಹಿಂದಿಯೂ ಒಂದು. ಹಿಂದಿಗಿಂತ ಪುರಾತನ ಭಾಷೆಗಳೂ ಇವೆ. ಸಂಸ್ಕøತ ಮತ್ತು ತಮಿಳು ಹಿಂದಿಗಿಂತ ಪುರಾತನ ಭಾಷೆಗಳು. ಒಂದು ವಿಷಯ ನಿಜ. ಹಿಂದಿ ದೇಶದಲ್ಲಿ ಅತೀ ಹೆಚ್ಚು ಜನ ಮಾತನಾಡುವ ಭಾಷೆ. ಹಾಗಂತ ಹಿಂದಿಯನ್ನು ಬಲವಂತವಾಗಿ ಯಾರ ಮೇಲೂ ಹೇರಬಾರದು. ಹಾಗೆ ಬಲವಂತವಾಗಿ ಹಿಂದಿಯನ್ನು ಹೇರಲು ಹೋದರೆ ದೇಶವೇ ಇಬ್ಭಾಗವಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಸೋನು ನಿಗಮ್.