` pramod shetty, - chitraloka.com | Kannada Movie News, Reviews | Image

pramod shetty,

  • ಹೀರೋ ಕಥೆ ಇದೇ.. ಇಷ್ಟೆ.. : ಹೀರೋ ಟೀಂ ನೋಡ್ಲೇಬೇಕಾದ ಸ್ಟೋರಿ ಇದು

     ಹೀರೋ ಕಥೆ ಇದೇ.. ಇಷ್ಟೆ.. : ಹೀರೋ ಟೀಂ ನೋಡ್ಲೇಬೇಕಾದ ಸ್ಟೋರಿ ಇದು

    ಹೀರೋ ಕಥೆ ನಂ. 1

    ಏನಿಲ್ಲ ಗುರೂ.. ಹೀರೋಯಿನ್‍ಗೆ ಹೀರೋ ಜೊತೆ ಮೊದಲೇ ಲವ್ವಾಗಿರುತ್ತೆ. ಆದರೆ ಶ್ರೀಮಂತನ ಜೊತೆಯಲ್ಲಿ ಮದುವೆ ಆಗೋಗಿರುತ್ತೆ. ಅವಳನ್ನ ಎತ್ತಾಕ್ಕೊಂಡ್ ಹೋಗೋಕೆ ಹೀರೋ ಬರ್ತಾನೆ. ಹೊತ್ಕೊಂಡ್ ಹೋಗ್ತಾನೆ.

    ಹೀರೋ ಕಥೆ ನಂ. 2

    ಹೀರೋಯಿನ್ ಶ್ರೀಮಂತನ ಹೆಂಡತಿ. ಆಕೆಗೂ ಈ ರಿಷಬ್ ಶೆಟ್ಟಿಗಗೂ ಅಫೇರ್ ಇರುತ್ತೆ. ಅದು ಗೊತ್ತಾಗಿ ಪ್ರಮೋದ್ ಶೆಟ್ಟಿ ಅವಳನ್ನು ಕೊಲ್ಲೋಕೆ, ಹಿಂಸೆ ಕೊಡೋಕೆ ಶುರು ಮಾಡ್ತಾನೆ. ಆಮೇಲೆ ರಿಷಬ್  ಶೆಟ್ಟಿ ಬಂದು ಕಾಪಾಡ್ತಾನೆ.

    ಹೀರೋ ಕಥೆ ನಂ. 3

    ಹೀರೋ ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡೋವ್ನು. ಅವನಿಗೆ ಶ್ರೀಮಂತನ ಆಸ್ತಿ ಮತ್ತು ಹೆಂಡ್ತಿ ಮೇಲೆ ಕಣ್ಣು. ಅದಕ್ಕಾಗಿ ಬಂಗಲೆಗೆ ಬಂದಾಗ ಅವಳನ್ನೂ ಪಟಾಯಿಸಿಕೊಂಡು, ಚಿನ್ನ, ಒಡವೆ ಹೊಡ್ಕೊಂಡು ಹೋಗಿ ಹೀರೋ ಆಗ್ತಾನೆ.

    ಹೀರೋ ಕಥೆ ನಂ. 4

    ಹೀರೋಯಿನ್‍ಗೇ ಶ್ರೀಮಂತ ಗಂಡನ ಮೇಲೆ ಕೋಪ ಇರುತ್ತೆ. ಹೀಗಾಗಿ ಅವಳು ತನ್ನ ಹಳೆಯ ಲವರ್ (ರಿಷಬ್)ನ್ನ ಕರೆಸಿಕೊಂಡು ಗೇಮ್ ಆಡ್ತಾಳೆ. ಆಟವನ್ನೆಲ್ಲ ಆಡಿಸೋದು ಹೀರೋಯಿನ್. ಹೀರೋಗೆ ತನ್ನ ಮೇಲಿರೋ ಪ್ರೀತಿಯನ್ನ ಅವಳು ಯೂಸ್ ಮಾಡ್ಕೋತಾಳೆ.

    ಹೀರೋ ಕಥೆ ನಂ. 5

    ಹೀರೋಯಿನ್, ಬಂಗಲೆಯಲ್ಲಿ ಕೆಲಸ ಮಾಡುವವಳು. ಹೀರೋಗೂ ಅವಳಿಗೂ ಲವ್ವು. ಹೀರೋನ ಪ್ರೇಯಸಿ ಮನೆಗೆಲಸದವಳ ಮೇಲೆ ಶ್ರೀಮಂತ ಕಣ್ಣು ಹಾಕ್ತಾನೆ. ಮುಂದಿನದ್ದೆಲ್ಲ ಟ್ರೇಲರಲ್ಲೇ ಇದೆ.. ಅಷ್ಟೆ ಬಾಸು..

    ಹಲೋ.. ಹಲೋ.. ರಿಷಬ್ ಶೆಟ್ಟಿಯವರೇ.. ಭರತ್ ರಾಜ್ ಅವರೇ.. ಕಥೆ ಗೊತ್ತಾಯ್ತಾ..? ಹೀರೋ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆ ಇದು ಹೀರೋ ಬಗ್ಗೆ ಕುತೂಹಲ ಇರೋ ಒಂದಷ್ಟು ಜನ ಫ್ಯಾನ್ಸ್ ಕಟ್ಟಿರುವ ಅಥವಾ ಊಹಿಸಿರುವ ಕಥೆ.

    ಹೌದಾ ಅಂದ್ರೆ ಹೀರೋ ಚಿತ್ರತಂಡ ಹೇಳೋದೇ ಬೇರೆ. ಇದು ರಿಷಬ್ ಟೀಂನ ಸಿನಿಮಾ. ಅಭಿಮಾನಿಗಳು ಊಹಿಸಿದ್ದಕ್ಕಿಂತ ಭಿನ್ನವಾಗಿರುತ್ತೆ ಮತ್ತು ಥ್ರಿಲ್ ಕೊಡುತ್ತೆ. ಸ್ವಲ್ಪ ವೇಯ್ಟ್ ಮಾಡಿ ಅಂತಿದೆ. ಮಾರ್ಚ್ 5ನೇ ತಾರೀಕಿನವರೆಗೆ ವೇಯ್ಟ್ ಮಾಡಿ

  • Gubbi Mele Bramhastra To Release Outside Karnataka

    Gubbi Mele Bramhastra

    Raj B Shetty's new film 'Gubbi Mele Bramhastra' has finally hit the screens today across Karnataka. The film will be releasing outside Karnataka on the 23rd of August.

    'Gubbi Merle Bramhastra' will be releasing in Chennai, Coimbatore, Hyderabad, Pune, Mumbai, Delhi, Ahmedabad and other places on the 23rd of August. The film will be releasing mainly in multiplexes.

    'Gubbi Mele Bramhastra' is written and directed by actor Sujay Shastry. This is his debut film as a director. Raj B Shetty, Kavitha Gowda, Pramod Shetty and others play prominent roles in the film. Manikanth Kadri is the music composer.

  • Hero Movie Review: Chitraloka Rating 3.5/5

    Hero Movie Review: Chitraloka Rating 3.5/5

    After Bell Bottom and Katha Sangama, Rishab Shetty returns with yet another entertainer with a difference! Unlike the usual hero-centric action drama, this film focuses more on the creative script, performances and its making. That apart, Ajaneesh Lokanath packs it up with a perfect background score coupled with soothing numbers in between.

    What makes 'Hero' a great watch is its subtle approach with a handful of unique characters. Further, action laced with humour makes the experience more joyful as it drives the audience for a thrilling end.

    Every aspect of Hero is attached with creativity. Made during the lockdown period, the entire team has thrived hard to make Hero a winner. And, they won in doing so. Insofar as the violence on the screen is concerned, the script justifies but has no adverse effect whatsoever as a whole and is solely made for pure entertainment.

    Bharat Raj along with his entire directorial team have delivered a good content with newness and originality written all over. Rishab Shetty along with Ganavi steal the show while Pramod as the 'main villain' and the whole team's performance is definitely the highlights of Hero. It is the story and the way which it is presented (marking) makes Hero the real Hero. Violence is just a part while the big picture is the content-driven 'action comedy'.

    Every character has something in it without being diffused in the presence of lead characters. Each and every aspect, everyone and everything in Hero is beautifully showcased with hardly anything left to criticise. It is undoubtedly one of the best in recent times. Watch 'Hero' for the story and its making. The team emerges as a hero and not just the lone usual central character referred to as 'hero' in a movie.

  • ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!

    ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!

    ಪ್ರಮೋದ್ ಶೆಟ್ಟಿ. ವಿಲನ್ ಪಾತ್ರಗಳಿಗೆ ಇತ್ತೀಚೆಗೆ ಬೇರೆಯದ್ದೇ ಗತ್ತು ತಂದುಕೊಟ್ಟ ನಟ. ಹೀರೋ ಚಿತ್ರದಲ್ಲೂ ಇವರೇ ವಿಲನ್. ಇತ್ತೀಚೆಗೆ ಅವರು ಹಲವು ಚಿತ್ರಗಳಲ್ಲಿ ವಿಲನ್ ಆಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವನೇ ಶ್ರೀಮನ್ನಾರಾಯಣ.. ಹೀಗೆ ಹಲವು ಚಿತ್ರಗಳಲ್ಲಿ ಅವರು ವಿಲನ್ ಆದರೂ, ಅದರಲ್ಲೊಂದು ಕಾಮಿಡಿ ಶೇಡ್ ಇರುತ್ತಿತ್ತು. ಆದರೆ, ಹೀರೋನಲ್ಲಿ ಹಾಗಿಲ್ಲ.

    ಹೀರೋ ಚಿತ್ರದ ಟ್ರೇಲರ್ ನೋಡಿದವPramod Shetty Grabs Attention In Villain Role

    ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!

    ಪ್ರಮೋದ್ ಶೆಟ್ಟಿ. ವಿಲನ್ ಪಾತ್ರಗಳಿಗೆ ಇತ್ತೀಚೆಗೆ ಬೇರೆಯದ್ದೇ ಗತ್ತು ತಂದುಕೊಟ್ಟ ನಟ. ಹೀರೋ ಚಿತ್ರದಲ್ಲೂ ಇವರೇ ವಿಲನ್. ಇತ್ತೀಚೆಗೆ ಅವರು ಹಲವು ಚಿತ್ರಗಳಲ್ಲಿ ವಿಲನ್ ಆಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವನೇ ಶ್ರೀಮನ್ನಾರಾಯಣ.. ಹೀಗೆ ಹಲವು ಚಿತ್ರಗಳಲ್ಲಿ ಅವರು ವಿಲನ್ ಆದರೂ, ಅದರಲ್ಲೊಂದು ಕಾಮಿಡಿ ಶೇಡ್ ಇರುತ್ತಿತ್ತು. ಆದರೆ, ಹೀರೋನಲ್ಲಿ ಹಾಗಿಲ್ಲ.

    ಹೀರೋ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರಮೋದ್ ಶೆಟ್ಟಿ ಕಣ್ಣುಗಳು ಡಿಫರೆಂಟ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಈ ಪಾತ್ರದಲ್ಲಿ ನನ್ನ ಕಣ್ಣುಗಳೇ ಹೈಲೈಟ್. ಡೈರೆಕ್ಟರ್ ಹೇಳಿದಂತೆ ನಟಿಸಿದ್ದೇನೆ. ಕಣ್ಣುಗಳು ವಿಭಿನ್ನವಾಗಿ ಕಾಣಲೆಂದು ಲೆನ್ಸ್ ಬಳಸೋಕೆ ಹೇಳಿದ್ದರು. ಭರತ್ ರಾಜ್, ನನ್ನ ಇಡೀ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಮೋದ್ ಶೆಟ್ಟಿ.

    ಟ್ರೇಲರ್ ನೋಡಿದರೆ ಪ್ರಮೋದ್ ಶೆಟ್ಟಿಯವರನ್ನು ಲಂಕಾಸುರನಿಗೆ ಹೋಲಿಸಲಾಗಿದೆ. ಲಂಕಾಸುರನನ್ನು ಮೀರಿಸುವ ಕ್ರೌರ್ಯವನ್ನು ಪ್ರಮೋದ್ ಶೆಟ್ಟಿಯ ಪಾತ್ರ ಮಾಡುತ್ತದೆಯಂತೆ. ಅಷ್ಟೊಂದು ಕ್ರೌರ್ಯ ಇರುವ ಪಾತ್ರವನ್ನು ಪ್ರಮೋದ್ ಶೆಟ್ಟಿ ಹೇಗೆ ನಿಭಾಯಿಸಿದ್ದಾರ ಅನ್ನೋದನ್ನ ನೋಡೋಕೆ ಕೆಲವು ದಿನ ಕಾಯಬೇಕು. ಏಕೆಂದರೆ ಚಿತ್ರದಲ್ಲಿ ಡೈಲಾಗುಗಳಿಗಿಂತ ಹಾವಭಾವದಲ್ಲೇ ನಟಿಸಿದ್ದಾರಂತೆ ಪ್ರಮೋದ್ ಶೆಟ್ರು.

    ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿಯೇ ಪ್ರೊಡ್ಯೂಸರ್. ಕಥೆ ಬರೆಯುವ ಟೀಂನಲ್ಲೂ ಇದ್ದ ರಿಷಬ್ ಶೆಟ್ಟಿ, ತಮ್ಮದೇ ಟೀಂನ ಹುಡುಗ ಭರತ್ ರಾಜ್ ಅವರಿಗೆ ಡೈರೆಕ್ಟರ್ ಪಟ್ಟ ಕಟ್ಟಿದ್ದಾರೆ. ಒಂದು ಚೆಂದದ ಕಥೆಯ ಸಿನಿಮಾ ಮಾರ್ಚ್ 5ರಂದು ರಿಲೀಸ್ ಆಗುತ್ತಿದೆ.ರಿಗೆ ಪ್ರಮೋದ್ ಶೆಟ್ಟಿ ಕಣ್ಣುಗಳು ಡಿಫರೆಂಟ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಈ ಪಾತ್ರದಲ್ಲಿ ನನ್ನ ಕಣ್ಣುಗಳೇ ಹೈಲೈಟ್. ಡೈರೆಕ್ಟರ್ ಹೇಳಿದಂತೆ ನಟಿಸಿದ್ದೇನೆ. ಕಣ್ಣುಗಳು ವಿಭಿನ್ನವಾಗಿ ಕಾಣಲೆಂದು ಲೆನ್ಸ್ ಬಳಸೋಕೆ ಹೇಳಿದ್ದರು. ಭರತ್ ರಾಜ್, ನನ್ನ ಇಡೀ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಮೋದ್ ಶೆಟ್ಟಿ.

    ಟ್ರೇಲರ್ ನೋಡಿದರೆ ಪ್ರಮೋದ್ ಶೆಟ್ಟಿಯವರನ್ನು ಲಂಕಾಸುರನಿಗೆ ಹೋಲಿಸಲಾಗಿದೆ. ಲಂಕಾಸುರನನ್ನು ಮೀರಿಸುವ ಕ್ರೌರ್ಯವನ್ನು ಪ್ರಮೋದ್ ಶೆಟ್ಟಿಯ ಪಾತ್ರ ಮಾಡುತ್ತದೆಯಂತೆ. ಅಷ್ಟೊಂದು ಕ್ರೌರ್ಯ ಇರುವ ಪಾತ್ರವನ್ನು ಪ್ರಮೋದ್ ಶೆಟ್ಟಿ ಹೇಗೆ ನಿಭಾಯಿಸಿದ್ದಾರ ಅನ್ನೋದನ್ನ ನೋಡೋಕೆ ಕೆಲವು ದಿನ ಕಾಯಬೇಕು. ಏಕೆಂದರೆ ಚಿತ್ರದಲ್ಲಿ ಡೈಲಾಗುಗಳಿಗಿಂತ ಹಾವಭಾವದಲ್ಲೇ ನಟಿಸಿದ್ದಾರಂತೆ ಪ್ರಮೋದ್ ಶೆಟ್ರು.

    ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿಯೇ ಪ್ರೊಡ್ಯೂಸರ್. ಕಥೆ ಬರೆಯುವ ಟೀಂನಲ್ಲೂ ಇದ್ದ ರಿಷಬ್ ಶೆಟ್ಟಿ, ತಮ್ಮದೇ ಟೀಂನ ಹುಡುಗ ಭರತ್ ರಾಜ್ ಅವರಿಗೆ ಡೈರೆಕ್ಟರ್ ಪಟ್ಟ ಕಟ್ಟಿದ್ದಾರೆ. ಒಂದು ಚೆಂದದ ಕಥೆಯ ಸಿನಿಮಾ ಮಾರ್ಚ್ 5ರಂದು ರಿಲೀಸ್ ಆಗುತ್ತಿದೆ.

  • ಗುಬ್ಬಿ ಮೇಲೆ ರಾಬಿನ್ ಹುಡ್ ಬ್ರಹ್ಮಾಸ್ತ್ರ

    there is robin hood in gubbi  mele brmahastramovie

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವೇ ಒಂದು ಕಾಮಿಡಿ ಕಥಾಹಂದರ. ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಹುಡುಗಿಗಾಗಿ ಹುಡುಕಾಡುವ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿದ್ದರೆ, ಕವಿತಾ ಗೌಡ ಪರ್ಪಲ್ ಪ್ರಿಯಾ ಆಗಿ ಕಂಗೊಳಿಸಿದ್ದಾರೆ. ಆದರೆ, ಇವರಿಗಿಂತ ಡಿಫರೆಂಟ್ ಪಾತ್ರದಲ್ಲಿರೋದು ಪ್ರಮೋದ್ ಶೆಟ್ಟಿ.

    ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬೆಲ್‍ಬಾಟಂ ಚಿತ್ರಗಳಲ್ಲಿ ನಟಿಸಿದ್ದ ಪ್ರಮೋದ್ ಶೆಟ್ಟಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಾಬಿನ್ ಹುಡ್ ಪಾತ್ರಧಾರಿ. ಆದರೆ, ನಿರ್ದೇಶಕ ಸುಜಯ್ ಶಾಸ್ತ್ರಿ ಈ ಪಾತ್ರವನ್ನು ಭಲೇ ಮಜವಾಗಿ ಕಟ್ಟಿಕೊಟ್ಟಿದ್ದಾರೆ.

    ರಾಬಿನ್ ಹುಡ್ ಎಂದರೆ, ಶ್ರೀಮಂತರನ್ನು ದೋಚಿ, ಬಡವರಿಗೆ ಹಂಚುವವನು. ಆದರೆ, ಈ ರಾಬಿನ್ ಹುಡ್, ದೋಚಿದ್ದೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಂಡು ಖುಷಿ ಪಡುವವನು. 

    ಹೇಗೆ.. ಯಾಕೆ.. ಅಂತೆಲ್ಲ ಪ್ರಶ್ನೆ ಮಾಡ್ತಾ ಕೂರಬೇಡಿ. ಆಗಸ್ಟ್ 15ಕ್ಕೆ ಥಿಯೇಟರ್‍ಗೆ ಹೋಗಿ.. ನಕ್ಕು ನಲಿಯಿರಿ.

  • ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

    ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

    ಹೀರೋ ಚಿತ್ರದ ಬಗ್ಗೆ ಪ್ರೇಕ್ಷಕರು ಇಷ್ಟೆಲ್ಲ ಕುತೂಹಲದಿಂದ ಕಾಯ್ತಿರೋದಕ್ಕೆ ಕಾರಣ ಬೆಲ್ಬಾಟಂ. ಯಾಕಂದ್ರೆ,

    ಬೆಲ್ ಬಾಟಂ ಮಾಸ್ ಅಲ್ಲ. ಪಕ್ಕಾ ಕ್ಲಾಸ್.

    ಆದರೆ, ಹೀರೋ ಹಾಗಿಲ್ಲ. ಅಲ್ಲೊಂದು ರೊಮ್ಯಾಂಟಿಕ್ ಲವ್ ಸ್ಟೋರಿ, ಬಿಸಿ ನೆತ್ತರನ್ನೇ ಕುಡಿಯುವ ಕ್ರೌರ್ಯ, ಫೈಟಿಂಗ್, ಚೇಸಿಂಗ್.. ಎಲ್ಲವೂ ಇದೆ. ಆದರೆ.. ಎಲ್ಲಿಯೂ ಕ್ಲಾಸ್ ಟಚ್ ಕಳೆದುಕೊಂಡಿಲ್ಲ.ಜೊತೆಗೆ ಹೀರೋ ಅನ್ನೋ ಮಾಸ್ ಟೈಟಲ್.

    ಹೀಗಾಗಿ.. ಹೀರೋ ಚಿತ್ರವನ್ನು ಕ್ಲಾಸ್ ಮಸಾಲಾ ಎನ್ನಬಹುದು.

    ಭರತ್ ರಾಜ್ ಅನ್ನೋ ತಮ್ಮದೇ ಗರಡಿಯ ಹುಡುಗನ ಬೆನ್ನಿಗೆ ನಿಂತು, ಚೆಂದದ ಚಿತ್ರ ಕಟ್ಟಿಕೊಟ್ಟಂತಿದೆ ರಿಷಬ್ ಶೆಟ್ಟಿ & ಟೀಂ. ರಿಷಬ್ ಶೆಟ್ಟಿಯ ಎದುರು ನಟಿಸಿರೋ ಗಾನವಿ ಲಕ್ಷ್ಮಣ್, ಹೀರೋ ಪಾತ್ರಕ್ಕೆ ಸೇರಿಗೆ ಸವ್ವಾಸೇರು ಎನ್ನುವಂತೆ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಕಣ್ಣುಗಳಲ್ಲೇ ಕೊಲ್ಲುತ್ತಿದ್ದಾರೆ.

    ಇನ್ನು ಗ್ರಾಫಿಕ್ಸ್ ಕೆಲಸ ಮೇಲ್ನೋಟಕ್ಕೆ ಗೊತ್ತೇ ಆಗದಂತೆ ವರ್ಕೌಟ್ ಆದ ಹಾಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಬೇರೆಯದ್ದೇ ಮ್ಯಾಜಿಕ್ ಇರುವ ಹಾಗಿದೆ. ಮೊದಲು ಕಥೆಯನ್ನು ಹೀರೋ ಆಗಿ ಸೆಲೆಕ್ಟ್ ಮಾಡಿಕೊಳ್ಳೋದು ರಿಷಬ್ ಶೆಟ್ಟಿ ಸ್ಟೈಲ್. ನಂತರ ಕೂರೋದು ಚಿತ್ರಕಥೆಗೆ.

    ಈ ಹಿಂದೆ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಥಾಸಂಗಮ, ಬೆಲ್ಬಾಟಂಗಳಲ್ಲಿ ಅವರು ಗೆದ್ದಿದ್ದೇ ಹಾಗೆ. ಆ ಕ್ಲಾಸಿಕಲ್ ಟಚ್ ಇಲ್ಲೂ ವರ್ಕೌಟ್ ಆಗಿದ್ದರೆ, ನೋ ಡೌಟ್. ಈ ಕ್ಲಾಸ್ ಮಸಾಲಾ ಚಿತ್ರವನ್ನು ರಿಲೀಸ್ ಆಗುವ ಮೊದಲೇ ಹಿಟ್ ಎಂದು ಘೋಷಿಸಬಹುದು.

  • ರಾಜೇಂದ್ರ ಪೊನ್ನಪ್ಪನ ದೃಶ್ಯ 2ನಲ್ಲಿ ಪ್ರಮೋದ್ ಶೆಟ್ಟಿ

    ರಾಜೇಂದ್ರ ಪೊನ್ನಪ್ಪನ ದೃಶ್ಯ 2ನಲ್ಲಿ ಪ್ರಮೋದ್ ಶೆಟ್ಟಿ

    ದೃಶ್ಯ 2 ಚಿತ್ರ ಕನ್ನಡಕ್ಕೆ ಬರುತ್ತಿದ್ದು, ದೃಶ್ಯ ತಂಡವೇ ಕಂಟಿನ್ಯೂ ಆಗುತ್ತಿದೆ. ರವಿಚಂದ್ರನ್, ಪಿ.ವಾಸು ಜೊತೆಯಾಗಿದ್ದು, ಇನ್ನೊಂದು ಪ್ರಮುಖ ಪಾತ್ರಕ್ಕೆ ಖಡಕ್ ವಿಲನ್ ಎಂಟ್ರಿ ಕೊಟ್ಟಿದ್ದಾರೆ. ಉಳಿದವರು ಕಂಡಂತೆ, ಹೀರೋ, ಅವನೇ ಶ್ರೀಮನ್ನಾರಾಯಣ.. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಗಮನ ಸೆಳೆದಿರುವ ಪ್ರಮೋದ್ ಶೆಟ್ಟಿ, ಈಗ ದೃಶ್ಯ 2ಗೆ ಎಂಟ್ರಿ ಕೊಟ್ಟಿದ್ದಾರೆ. ರವಿಚಂದ್ರನ್‍ರಂತಾ ಸೀನಿಯರ್ ಜೊತೆಗೆ ಅವರಿಗಿದು ಮೊದಲ ಸಿನಿಮಾ.

    ಮೊದಲ ಭಾಗದಲ್ಲಿ ನವ್ಯಾ ನಾಯರ್, ಆರೋಹಿ ನಾರಾಯಣ್, ಆಶಾ ಶರತ್, ಪ್ರಭು.. ಮೊದಲಾದವರೆಲ್ಲ ಕಂಟಿನ್ಯೂ ಆಗುತ್ತಿದ್ದು, ಒಂದಷ್ಟು ಹೊಸಬರು ಬರಲಿದ್ದಾರೆ ಎಂದಿದ್ದಾರೆ ವಾಸು. ಮಲಯಾಳಂನಲ್ಲಿ ಮುರಳಿ ಗೋಪಿ ನಟಿಸಿದ್ದ ಪಾತ್ರಕ್ಕೆ ಪ್ರಮೋದ್ ಶೆಟ್ಟಿ ಬಂದಿದ್ದಾರೆ.

    ನನಗೆ ದೃಶ್ಯಂ 2ನಲ್ಲಿರೋ ಥ್ರಿಲ್ಲರ್ ಅಂಶಗಳು ಇಷ್ಟವಾದವು. ರವಿಚಂದ್ರನ್ ಜೊತೆಗೆ ನನಗಿದು ಮೊದಲ ಸಿನಿಮಾ. ಇಡೀ ಚಿತ್ರದಲ್ಲಿ ನಾನಿರುತ್ತೇನೆ ಎಂದಿದ್ದಾರೆ ಪ್ರಮೋದ್ ಶೆಟ್ಟಿ.

  • ಲಾಫಿಂಗ್ ಬುದ್ದ ರಿಷಬ್ ಶೆಟ್ಟಿ

    ಲಾಫಿಂಗ್ ಬುದ್ದ ರಿಷಬ್ ಶೆಟ್ಟಿ

    ಕಾಂತಾರ ನಂತರ ಮುಂದೇನು ಎಂಬ ಪ್ರಶ್ನೆಗೆ ರಿಷಬ್ ಶೆಟ್ಟಿ ಕಾಂತಾರ 2 ಉತ್ತರ ಕೊಡುತ್ತಿದ್ದಾರೆ. ಅದರ ಜೊತೆಯಲ್ಲಿಯೇ ನಿರ್ಮಾಪಕರಾಗಿಯೂ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ರಿಷಬ್ ಶೆಟ್ಟಿ ಲಾಫಿಂಗ್ ಬುದ್ದ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಹೀರೋ ರಿಷಬ್ ಶೆಟ್ಟಿ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ.

     ಈ ಸಿನಿಮಾದಲ್ಲಿ ಮತ್ತೊಂದು ಮುಖ್ಯ ಪಾತ್ರವನ್ನು ತೇಜು ಬೆಳವಾಡಿ ಅವರು ನಿಭಾಯಿಸುತ್ತಿದ್ದಾರೆ. ಟೈಟಲ್ ಗಮನಿಸಿದರೆ, ಇದೊಂದು ಹಾಸ್ಯ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. 'ಲಾಫಿಂಗ್ ಬುದ್ದ' ಸಿನಿಮಾಗೆ ಎಂ. ಭರತ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈಚೆಗೆ ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ 'ಲಾಫಿಂಗ್ ಬುದ್ದ' ಸಿನಿಮಾಗೆ ಚಾಲನೆ ಸಿಕ್ಕಿದೆ. ಚಿತ್ರದ ಬಹುಪಾಲು ಚಿತ್ರೀಕರಣ ಭದ್ರಾವತಿಯಲ್ಲಿ ನಡೆಯಲಿದ್ದು, ಹಾಡುಗಳಿಗೆ ವಿಷ್ಣು ವಿಜಯ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

    ರಿಷಬ್ ಶೆಟ್ಟಿ ಮೊದಲು ನಿರ್ಮಾಪಕರಾಗಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದ ಮೂಲಕ. ಅದಾದ ನಂತರ ವಿಭಿನ್ನ ಪ್ರಯೋಗವಾಗಿ ಕಥಾಸಂಗಮ ಮಾಡಿದ್ದರು. ನಂತರ ತಾವೇ ಹೀರೋ ಆಗಿದ್ದ ಹೀರೋ ಚಿತ್ರಕ್ಕೂ ನಿರ್ಮಾಕರಾಗಿದ್ದು. ಪೆದ್ರೋ ಮತ್ತು ಶಿವಮ್ಮ ಸಿನಿಮಾಗಳು ಕಮರ್ಷಿಯಲ್ ಆಚೆಗೆ ಸದ್ದು ಮಾಡಿದ್ದವು. ಇದರ ಜೊತೆಗೆ ಇನ್ನೂ ಒಂದೆರಡು ಸಿನಿಮಾಗಳನ್ನು ರಿಷಬ್ ನಿರ್ಮಾಣ ಮಾಡುತ್ತಿದ್ದು, ಈಗ 'ಲಾಫಿಂಗ್ ಬುದ್ಧ' ಕೂಡ ಸೇರ್ಪಡೆಗೊಂಡಿದೆ.

  • ಲಾಫಿಂಗ್ ಬುದ್ಧ ಚಿತ್ರದ ಕಥೆ ಏನು..? ಡಮ್ಮ ಪೊಲೀಸರು ನೋಡಬೇಕಾದ ಸಿನಿಮಾ..!

    ಲಾಫಿಂಗ್ ಬುದ್ಧ ಚಿತ್ರದ ಕಥೆ ಏನು..? ಡಮ್ಮ ಪೊಲೀಸರು ನೋಡಬೇಕಾದ ಸಿನಿಮಾ..!

    ಡುಮ್ಮ ಹೊಟ್ಟೆ. ತಪ್ಪೇನಲ್ಲ ಬಿಡಿ.. ಆದರೆ ಪೊಲೀಸರಿಗೆ ಇದ್ದರೆ ಅದೇ ಕಾಮಿಡಿ.. ಕಳ್ಳರನ್ನು ಹಿಡಿಯುವ ಡ್ಯೂಟಿಯಲ್ಲಿರೋ ಪೊಲೀಸರೇ ಹೊಟ್ಟೆ ಡುಮ್ಮಣ್ಣ ಆಗಿದ್ದರೆ ಹೇಗೆ..? ಇದು ಸೀರಿಯಸ್ ಆಯ್ತು. ಅವರಿಗೂ ಒಂದು ಮನಸ್ಸಿರುತ್ತಲ್ವಾ.. ಅವರಿಗೂ ನೋವಾಗುತ್ತಲ್ವಾ.. ಇಂತದ್ದನ್ನೆಲ್ಲ ಇಟ್ಟುಕೊಂಡೇ ಸಿದ್ಧವಾಗುತ್ತಿರೋ ಚಿತ್ರ ಲಾಫಿಂಗ್ ಬುದ್ದ.

    ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ಮಾಪಕರಾದರೆ, ಅವರ ಜೊತೆಯಲ್ಲಿರೋ ಗೆಳೆಯ ಪ್ರಮೋದ್ ಶೆಟ್ಟಿ ನಾಯಕ. ನಿರ್ದೇಶನ ಮಾಡುತ್ತಿರುವುದು ಭರತ್ ರಾಜ್. ಈ ಹಿಂದೆ ಹೀರೋ ಎಂಬ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ಭರತ್ ರಾಜ್, ಈಗ ದೇಹತೂಕ ಹೆಚ್ಚಿರುವ ಕಾನ್ಸ್‍ಟೇಬಲ್ ಒಬ್ಬರ ಕಥೆ ಎತ್ತಿಕೊಂಡಿದ್ದಾರೆ.

    ‘ಅತಿ ಹೆಚ್ಚು ತೂಕವಿರುವ ಹೆಡ್ ಕಾನ್ಸ್ಟೆಬಲ್ ಒಬ್ಬನ ಕಥೆ ಈ ಚಿತ್ರದಲ್ಲಿದೆ. ಜತೆಗೆ ಪೊಲೀಸರ ಕೆಲಸದ ಒತ್ತಡದ ಬಗ್ಗೆಯೂ ನಾವು ಇಲ್ಲಿ ಹೇಳಿದ್ದೇವೆ.  ಕಥೆಗಾಗಿ ನಾಯಕನಾಗಿದ್ದೇನೆಯೇ ಹೊರತು, ನಾಯಕನಾಗಬೇಕು ಎಂದು ಸಿನಿಮಾ ಮಾಡುತ್ತಿಲ್ಲ. ಸಿನಿಮಾ ನೋಡುವಾಗ ನಾನು ಹೀರೊ ಎನಿಸುವುದಕ್ಕಿಂತಲೂ ಕಥೆ ಹೀರೊ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ ಪ್ರಮೋದ್ ಶೆಟ್ಟಿ.

    ಪ್ರಮೋದ್ ಶೆಟ್ಟಿ ಜೊತೆ ಟರ್ನಿಂಗ್ ಕೊಡೋ ಪಾತ್ರದಲ್ಲಿ ದಿಗಂತ್ ಕೂಡಾ ಬರ್ತಾರೆ. ಹೀರೋಯಿನ್ ಆಗಿ ಗಂಟುಮೂಟೆ ಖ್ಯಾತಿಯ, ಪ್ರಕಾಶ್ ಬೆಳವಾಡಿಯವರ ಮಗಳು ತೇಜು ಬೆಳವಾಡಿ ನಟಿಸಿದ್ದಾರೆ. ಹೀರೊಯಿಸಂ ಇಲ್ಲದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಾಸ್ಯ ಸಿನಿಮಾವಾದರೂ, ಬೇಕೆಂದೇ ಹಾಸ್ಯ ಮಾಡಿಲ್ಲ. ಬದಲಿಗೆ ಸಂದರ್ಭ ನೋಡುಗರನ್ನು ನಗಿಸುತ್ತದೆ. ರಿಷಬ್ ಕೂಡ ಕಥೆ ಕೇಳಿ ಹಣ ಹೂಡಿದ್ದಾರೆ. ಒಳ್ಳೆಯ ಕಥೆಯ ಭಾಗವಾಗಿರುವುದು ಖುಷಿಯ ವಿಚಾರ ಎಂದು ಹೇಳಿದ್ದಾರೆ ನಟ ಪ್ರಮೋದ್ ಶೆಟ್ಟಿ. ರಿಷಬ್ ಶೆಟ್ಟಿಯವರ ಚಿತ್ರಗಳಲ್ಲಿ ಇದುವರೆಗೆ ಹೀರೋಗಳಿಗಿಂತ ಹೆಚ್ಚಾಗಿ ಕಥೆಯೇ ಹೀರೋ ಆಗಿದೆ. ಕಥೆಯಿಂದಾಗಿ ಹೀರೋಗಳು ಹೈಲೈಟ್ ಆಗಿದ್ದಾರೆ. ಲಾಫಿಂಗ್ ಬುದ್ದ ಚಿತ್ರೀಕರಣ ಈಗ ಕ್ಲೈಮಾಕ್ಸ್ ಹಂತದಲ್ಲಿದೆ.

  • ಹೀರೋ ಕೈಲಿ ಕತ್ತರಿ..ಏನಿದರ ಮಿಸ್ಟರಿ..?

    ಹೀರೋ ಕೈಲಿ ಕತ್ತರಿ..ಏನಿದರ ಮಿಸ್ಟರಿ..?

    ಹೀರೋ ಚಿತ್ರದ ಟ್ರೇಲರ್ ನೋಡಿದವರಿಗೆಲ್ಲ ಕಾಡೋದು ಒಂದೇ ಪ್ರಶ್ನೆ. ಹೀರೋ ಪಾತ್ರ ಏನು..?

    ಆತ ಯಾಕೆ ಆ ಎಸ್ಟೇಟ್ಗೆ ಕಟಿಂಗ್ ಮಾಡೋ ನೆಪದಲ್ಲಿ ಬರ್ತಾನೆ..?

    ಆ ಎಸ್ಟೇಟ್ನಲ್ಲಿ ನಿಜಕ್ಕೂ ಏನು ನಡೀತಾ ಇರುತ್ತೆ..?

    ಅಷ್ಟೆಲ್ಲ ಜನ ರಕ್ತಸಿಕ್ತವಾಗಿ ಬಿದ್ದಿರೋದ್ಯಾಕೆ..?

    ವಿಲನ್ ಪ್ರಮೋದ್ ಶೆಟ್ಟಿ ಕ್ರೂರಿ. ಆದರೆ ಯಾಕೆ..?

    ಆತನ ಬಂಗಲೆಯಲ್ಲಿರೋ ಆಕೆ ಆತನ ಹೆಂಡತಿನಾ..? ಅಲ್ಲವಾ..?

    ಹೀರೋ ಜೊತೆ ಅವಳು ಓಡಿ ಬರೋದ್ಯಾಕೆ..?

    ಆ ಹೀರೋಯಿನ್, ಹೀರೋ ಕೈಗೆ ರೇಝರ್ ಕೊಡೋದ್ಯಾಕೆ..

    ಮತ್ತು..

    ಕೊನೆಯಲ್ಲಿ..

    ಅವನು ಅವಳ ಕುತ್ತಿಗೆಯನ್ನೇ ಸೀಳೋದ್ಯಾಕೆ..?

    ಒಂದಲ್ಲ.. ಎರಡಲ್ಲ.. ಹತ್ತಾರು ಪ್ರಶ್ನೆಗಳು. ಇಲ್ಲಿರೋ ಪ್ರಶ್ನೆಗಳ ಜೊತೆಗೆ ನಿಮ್ಮ ತಲೆಯಲ್ಲೂ ಇನ್ನೊಂದಷ್ಟು ಪ್ರಶ್ನೆಗಳು ಮೂಡಿದ್ದರೆ, ಅದಕ್ಕೆ ಕಾರಣ ಚಿತ್ರದ ಒಂದೇ ಒಂದು ಟ್ರೇಲರ್. ಒಂದು ಟ್ರೇಲರ್, ಒಂದು ಹಾಡು ಬಿಟ್ಟು, ಮತ್ತೇನನ್ನೂ ತೋರಿಸದೆ.. ಅಷ್ಟರಲ್ಲೇ ಪ್ರಶ್ನೆ, ಕುತೂಹಲ, ಸಸ್ಪೆನ್ಸ್ ಹುಟ್ಟು ಹಾಕಿರೋದು ನಿರ್ದೇಶಕ ಭರತ್ ರಾಜ್.

    ಎಷ್ಟೆಂದರೂ ಅವರು ಪಳಗಿರೋದು ರಿಷಬ್ ಗಡಿಯಲ್ಲಿ. ಇನ್ನು ಗಾನವಿ ಲಕ್ಷ್ಮಣ್ ಅಚ್ಚರಿ ಹುಟ್ಟಿಸೋದು ಖರೆ. ಆದರೆ.. ಆಕೆಗೂ, ರಿಷಬ್ ಶೆಟ್ಟಿಗೂ ಏನು ಲಿಂಕ್..? ಅವಳ್ಯಾಕೆ ವಿಲನ್ ಬಂಗಲೆಯಲ್ಲಿದ್ದಾಳೆ..?

    ಎಷ್ಟೆಲ್ಲ ಪ್ರಶ್ನೆಗಳು.. ಈ ಪ್ರಶ್ನೆಗಳಿಗೆಲ್ಲ ಉತ್ತರ ನೋಡಬೇಕು ಅಂದ್ರೆ ಮಾರ್ಚ್ 5ನೇ ತಾರೀಕು ಥಿಯೇಟರಿಗೇ ಹೋಗಬೇಕು. ಅಷ್ಟರಮಟ್ಟಿಗೆ ಸಿನಿಮಾದ ಕುತೂಹಲವನ್ನ ಟ್ರೇಲರ್ನಲ್ಲೇ ಸೃಷ್ಟಿಸಿದ್ದಾರೆ ರಿಷಬ್ ಶೆಟ್ಟಿ.

  • ಹೀರೋಗೆ ವಿಲನ್ಸ್ ವಿಚಿತ್ರ ಹಿಂಸೆ

    ಹೀರೋಗೆ ವಿಲನ್ಸ್ ವಿಚಿತ್ರ ಹಿಂಸೆ

    ಈ ಶುಕ್ರವಾರವಷ್ಟೇ ರಿಲೀಸ್ ಆದ ಹೀರೋಗೆ ಎಲ್ಲ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರುಗಳೂ ಭರ್ತಿಯಾಗಿವೆ. ಮೆಚ್ಚುಗೆಗಳೂ ಭರಪೂರ ಸಿಕ್ಕಿವೆ. ಚಿತ್ರಕ್ಕೆ ಮೌತ್ ಪಬ್ಲಿಸಿಟಿ ಸಿಗುತ್ತಿದೆ. ಈ ಹೊತ್ತಿನಲ್ಲೇ ಹೀರೋಗೆ ವಿಲನ್ಸ್ ಚಿತ್ರ ವಿಚಿತ್ರ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ.

    ರಿಷಬ್ ಶೆಟ್ಟಿಯವರ ಹೀರೋ ರಿಲೀಸ್ ಆಗಿದ್ದು ಮಾರ್ಚ್ 5ರಂದು. ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಅಭಿನಯದ ಕಾಮಿಡಿ ಹಾರರ್ ಥ್ರಿಲ್ಲರ್ ಸಿನಿಮಾ ರಿಲೀಸ್ ಆದ ಮೂರೇ ದಿನಗಳಲ್ಲಿ ಪೈರಸಿ ಆಗಿದೆ. ನಮ್ಮ ಹೀರೋ ಸಿನಿಮಾ 2 ಕಡೆ ರನ್ನಿಂಗ್ ಸಕ್ಸಸ್‌ಫುಲ್. ಒಂದು ಚಿತ್ರಮಂದಿರದಲ್ಲಿ, ಮತ್ತೊಂದು ಪೈರಸಿಯಲ್ಲಿ. ಕಷ್ಟಪಟ್ಟು ಮಾಡಿದ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆಗಿ, ಆ ಕಾಪಿಗಳು ಎಲ್ಲೆಡೆ ಹರಿದಾಡುತ್ತಿವೆ  ಎಂದು ನೋವು ತೋಡಿಕೊಂಡಿದ್ದಾರೆ ರಿಷಬ್ ಶೆಟ್ಟಿ.

    ಹಾಗಂತ ರಿಷಬ್ ಶೆಟ್ಟಿ& ಟೀಂ ಸುಮ್ಮನೆ ಕೂತಿಲ್ಲ.  ಪೈರಸಿ ತಡೆಯುವವರ ಟೀಂನ್ನೇ ಕಟ್ಟಿಕೊಂಡು ಲಿಂಕ್ಗಳನ್ನು ಡಿಲೀಟ್ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಒಂದು ಕಡೆ ಡಿಲೀಟ್ ಆದರೆ, ಮತ್ತೊಂದು ಕಡೆ  ಲಿಂಕ್ ಓಪನ್ ಆಗುತ್ತಲೇ ಇವೆ. ಚಿತ್ರಮಂದಿರಗಳಲ್ಲಿ ಶೂಟ್ ಮಾಡಿ ಬಿಟ್ಟಿದ್ದಾರೆ. ಥಿಯೇಟರಿನವರು ಇದಕ್ಕೆಲ್ಲ ಹೇಗೆ ಅವಕಾಶ ಕೊಡ್ತಾರೆ ಅನ್ನೋದೇ ನನಗೆ ಅರ್ಥ ಆಗ್ತಾ ಇಲ್ಲ ಅನ್ನೋದು ರಿಷಬ್ ಶೆಟ್ಟಿ ಕಂಪ್ಲೇಂಟು.

    ಇದು ಚಿತ್ರರಂಗಕ್ಕೆ ಹೊಸದೇನೂ ಅಲ್ಲ. ಈ ಹಿಂದೆ ಕನ್ನಡದಲ್ಲೇ ಪೈಲ್ವಾನ್ ಚಿತ್ರಕ್ಕೆ ಈ ಪ್ರಾಬ್ಲಂ ಎದುರಾಗಿತ್ತು. ಆದರೆ, ಪೈರಸಿಗೆ ಸಪೋರ್ಟ್ ಮಾಡುವ ವೆಬ್ಸೈಟ್ ಮತ್ತಿತರ ಪ್ಲಾಟ್ಫಾರಂಗಳನ್ನು ಅದೇಕೆ ಬ್ಯಾನ್ ಮಾಡ್ತಿಲ್ಲವೋ ಅರ್ಥ ಆಗ್ತಿಲ್ಲ ಅನ್ನೋದು ರಿಷಬ್ ಶೆಟ್ಟಿ ದೂರು.

    ಪೈರಸಿ ಕ್ರಿಮಿನಲ್ಸ್ ವಿರುದ್ಧ ವ್ಯವಸ್ಥೆಯೇ ಸೋತು ಹೋದಾಗ ಮತ್ತೇನು ಮಾಡೋಕೆ ಸಾಧ್ಯ. ಒಂದು ಕಡೆ ಅವರು ಹುಡುಕುತ್ತಿದ್ದಾರೆ. ಈ ಹೋರಾಟದಲ್ಲಿ ಪ್ರೇಕ್ಷಕರೂ ಭಾಗವಹಿಸಬೇಕು. ನಿಮಗೆ ಅಂತಾ ಲಿಂಕ್ ಸಿಕ್ಕರೆ ದಯವಿಟ್ಟು ರಿಷಬ್ ಶೆಟ್ಟಿಯವರಿಗೇ ತಲುಪಿಸಿ. ಅದನ್ನು ಅವರೇ ತೆಗೆಯುವ ಪ್ರಯತ್ನ ಮಾಡ್ತಾರೆ. ಸಿನಿಮಾ ಫೀಲ್ಡ್ ಉಳಿಯಬೇಕೆಂಧರೆ ಅದು ಅನಿವಾರ್ಯ. ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದರೆ ಮಾತ್ರ, ಚಿತ್ರರಂಗ ಉಳಿಯೋಕೆ ಸಾಧ್ಯ.

  • ಹೋಪ್ ಹುಟ್ಟಿಸಿದ ಹೋಪ್

    ಹೋಪ್ ಹುಟ್ಟಿಸಿದ ಹೋಪ್

    ಇದು ಸರ್ಕಾರಿ ಅಧಿಕಾರಿಗಳ ಕಥೆಯಾ?

    ಭ್ರಷ್ಟಾಚಾರದ ಕಥೆಯಾ?

    ಭ್ರಷ್ಟಾಚಾರದ ವಿರುದ್ಧ ಹೋರಾಟದ ಕಥೆಯಾ?

    ಗೆಲ್ಲೋದು ಯಾರು? ಭ್ರಷ್ಟರೋ? ಅಧಿಕಾರಿಯೋ? ನ್ಯಾಯವೋ..?

    ಇಂಥಾದ್ದೊಂದು ಪ್ರಶ್ನೆ ಮತ್ತು ಕುತೂಹಲ ಎರಡನ್ನೂ ನೋಡುಗರ ಮುಂದಿಟ್ಟಿದೆ ಹೋಪ್ ಚಿತ್ರದ ಟ್ರೇಲರ್.

    ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರೋ ಸಿನಿಮಾದಲ್ಲಿ ಸುಮಲತಾ ಅಂಬರೀಷ್ ಕೂಡಾ ಇದ್ದಾರೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ.. ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ. ಅವಧಿಗೆ ಮುನ್ನವೇ ವರ್ಗವಾಗುವ.. ಭ್ರಷ್ಟಾಚಾರದ ವಿರುದ್ಧ ನಿಂತಿದ್ದಕ್ಕೆ.. ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕುವ ಮಹಿಳಾ ಆಫೀಸರ್ ಒಬ್ಬರು ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುವ ಕಥೆ ಹೋಪ್. ಎಲ್ಲ ಕಡೆ ಅನ್ಯಾಯ ಆದಾಗಲೇ ಅಲ್ವಾ ಸರ್, ನ್ಯಾಯಾಲಯಕ್ಕೆ ಬರೋದು ಅನ್ನೋ ಲೈನ್ ಮೂಲಕ ಎಂಡ್ ಆಗುವ ಟ್ರೇಲರ್ ಬೇರೆಯದೇ ಫೀಲ್ ಕೊಡುತ್ತೆ. ಚಿತ್ರದ ನಿರ್ದೇಶಕ ಎಂ.ಅಂಬರೀಷ್. ಹಿಂದೆ ಜ್ವಲಂತ ಸಿನಿಮಾ ನಿರ್ದೇಶಿಸಿದ್ದವರು. ಚಿತ್ರಕ್ಕೆ ಕಥೆ ಬರೆದಿರೋದು ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್. ನಿರ್ಮಾಣವೂ ಅವರದ್ದೇ. ಜುಲೈ 8ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.