` dhanya ramkumar, - chitraloka.com | Kannada Movie News, Reviews | Image

dhanya ramkumar,

  • 30 ವರ್ಷಗಳ ನಂತರ.. ಸಾ.ರಾ.ಗೋವಿಂದು ತಂಡದಲ್ಲಿ ಬದಲಾಗಿದ್ದೇನು..?

    30 ವರ್ಷಗಳ ನಂತರ.. ಸಾ.ರಾ.ಗೋವಿಂದು ತಂಡದಲ್ಲಿ ಬದಲಾಗಿದ್ದೇನು..?

    30 ವರ್ಷಗಳ ಹಿಂದೆ ಬೆಳ್ಳಿಕಾಲುಂಗುರ ಶುರುವಾಗಿತ್ತು. ತನು ಚಿತ್ರದ 2ನೇ ಸಿನಿಮಾ ಬೆಳ್ಳಿಕಾಲುಂಗುರ. 1992ರಲ್ಲಿ ಮಾಲಾಶ್ರೀ ಅಭಿನಯದ 20ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿದ್ದವು. 1992ರಲ್ಲಿ ರಿಲೀಸ್ ಆದ ಮೊದಲ ಸಿನಿಮಾ ಬೆಳ್ಳಿಕಾಲುಂಗುರ. ಸಾ.ರಾ.ಗೋವಿಂದು ನಿರ್ಮಾಪಕ. ಅದೇ ತನು ಚಿತ್ರ ಈಗ 30 ವರ್ಷಗಳ ನಂತರ ಬೆಳ್ಳಿಕಾಲುಂಗುರ ಚಿತ್ರಕ್ಕೆ ಮುಹೂರ್ತ ಮಾಡಿದೆ.

    ಸಾ.ರಾ.ಗೋವಿಂದು ನಿರ್ಮಾಣದ ಚಿತ್ರಕ್ಕೆ ಹೆಚ್.ವಾಸು ನಿರ್ದೇಶಕ. 1992ರ ಬೆಳ್ಳಿಕಾಲುಂಗುರದಲ್ಲಿ ಅಸಿಸ್ಟೆಂಡ್ ಡೈರೆಕ್ಟರ್ ಆಗಿದ್ದವರು. ಈಗಿನ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಥೆ ಹೇಳುತ್ತಿದ್ದೇವೆ. ಇಂದಿನ ಟ್ರೆಂಡ್‍ಗೆ ತಕ್ಕಂತೆ ಕಥೆ ಮಾಡಿದ್ದೇನೆ ಎಂದಿದ್ದಾರೆ ಹೆಚ್.ವಾಸು.

    ಮುಹೂರ್ತದಲ್ಲಿ ಸಿದ್ದರಾಮಯ್ಯ, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಎಸ್.ಎ.ಗೋವಿಂದರಾಜು ಸೇರಿದಂತೆ ದೊಡ್ಮನೆಯ ಬಹುತೇಕರು ಹಾಜರಿದ್ದರು. ನಾಯಕಿಯಾಗಿರುವುದು ರಾಮ್‍ಕುಮಾರ್ ಪುತ್ರಿ ಧನ್ಯಾ. ದೊಡ್ಮನೆ ಹುಡುಗಿಯೇ. ಚಿತ್ರ ಸೆಟ್ಟೇರಿದೆ. ಧನ್ಯಾ ರಾಮಕುಮಾರ್ ಎದುರು ಸಮರ್ಥ್ ನಾಯಕರಾಗಿ ನಟಿಸುತ್ತಿದ್ದಾರೆ.

  • Dhanya's Debut Film Titled 'Ninna Sanihake'

    dhanya's debut film titled ninna sanohake

    Dr Rajakumar's grand daughter Dhanya making a debut as an actress in Sandalwood is not a new news. The pre-production of the film had already started and the team was getting ready to go on floors. 

    Now the team has found a suitable title for the film and it's none other than 'Ninna Sanihake'. The name itself suggests that its an out and out love story and Suraj Gowda and Dhanya plays lovers in this film.

    'Ninna Sanihake' is written by actor Suraj Gowda, while Suman Jadugar is the director. The film is being produced by White and Grey Media. Raghu Deekshith is the music director. The film is expected to be shot in Bangalore, Chickmagalur and other places.

  • Ninna Sanihake' Launched By Puneeth

    ninna sanihake launched by puneeth

    Dr Rajakumar's grand daughter Dhanya's debut film 'Ninna Sanihake' was launched on Monday and actor Puneetj Rajkumar flagged off the film and wished the team a huge success.

    The launch of 'Ninna Sanihake' was held at Dodda Ganapathi Temple in Basavanagudi and Puneeth came over as the chief guest. Puneeth sounded the clap for the first shot, while Dinakar Thoohudeepa switched on the camera.

    'Ninna Sanihake' is written by actor Suraj Gowda, while Suman Jadugar is the director. The film stars Suraj and Dhanya in lead roles and is produced by White and Grey Media. Raghu Deekshith is the music director.

  • ಅಕ್ಕನ ಮಗಳ ಚಿತ್ರಕ್ಕೆ ಅಪ್ಪು ಕ್ಲಾಪ್

    puneeth launched his niece's movie

    ನಿನ್ನ ಸನಿಹಕೆ.. ಇದು ರಾಮ್‍ಕುಮಾರ್-ಮಂಗಳಾ ದಂಪತಿಯ ಮಗಳು ಧನ್ಯಾ ರಾಮ್‍ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ. ರಾಜ್ ಫ್ಯಾಮಿಲಿಯಿಂದ ಇದೇ ಮೊದಲ ಬಾರಿಗೆ ನಾಯಕಿಯೊಬ್ಬರು ಬರುತ್ತಿದ್ದಾರೆ. ಈ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ಕ್ಲಾಪ್ ಮಾಡಿದ್ದಾರೆ.

    ಧನ್ಯಾ, ಅಪ್ಪುಗೆ ಅಕ್ಕನ ಮಗಳು. ಬೆಂಗಳೂರಿನಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಇಬ್ಬರೂ ಬಂದು ಶುಭ ಹಾರೈಸಿದ್ರು. ಸೂರಜ್ ಗೌಡ ನಾಯಕನಾಗಿರುವ ಚಿತ್ರಕ್ಕೆ ಸುಮನ್ ಜಾದೂಗಾರ್ ನಿರ್ದೇಶಕ.

     

  • ಅದೊಂದು ಅವಕಾಶಕ್ಕಾಗಿ ಹಠ ಹಿಡಿದ ಕಾದ ನಟಿ

    dhanya ramkumar was awiting for that roleSarvajanikarige Suvarnavakasha Movie Image

    ಧನ್ಯಾ ಬಾಲಕೃಷ್ಣ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ನಾಯಕಿ. ವಿಶೇಷ ಅಂದ್ರೆ, ಧನ್ಯಾ ನಟಿಸಿರುವ ಬೇರೆ ಭಾಷೆಯ ಚಿತ್ರಗಳ ಸಂಖ್ಯೆ 25ರ ಗಡಿ ದಾಟಿದೆ. ದೊಡ್ಡ ದೊಡ್ಡ ನಿರ್ದೇಶಕರ ಚಿತ್ರಗಳಲ್ಲಿ, ಸ್ಟಾರ್ ನಟರ ಹಿಟ್ ಚಿತ್ರಗಳಲ್ಲೇ ನಟಿಸಿರುವ ಧನ್ಯಾಗೆ ಸಿಕ್ಕಿದ್ದೆಲ್ಲ ಪೋಷಕ ನಟಿಯ ಪಾತ್ರಗಳೇ.

    ಒಂದು ಹಂತದವರೆಗೂ ಅದನ್ನು ಎಂಜಾಯ್ ಮಾಡಿದ ಧನ್ಯಾಗೆ, ಕ್ರಮೇಣ ಬೋರ್ ಹೊಡೆಯೋಕೆ ಶುರುವಾಯ್ತು. ಸ್ವತಃ ಒಂದು ಉದ್ಯೋಗ ಆರಂಭಿಸಿದ ಧನ್ಯಾ, ಪೋಷಕ ಪಾತ್ರಗಳನ್ನೆಲ್ಲ ತಿರಸ್ಕರಿಸುತ್ತಾ ಹೊರಟರು. ಒನ್ಸ್ ಎಗೇಯ್ನ್ ಸ್ಟಾರ್ ನಟರ ಚಿತ್ರಗಳೇ. ಒಳ್ಳೆಯ ಸಂಭಾವನೆಯನ್ನೂ ದೂರ ತಳ್ಳಿದ ಧನ್ಯಾ ಒಂದು ವರ್ಷ ಮನೆಯಲ್ಲೇ ಕುಳಿತುಬಿಟ್ಟರು.

    ಆಗ ಸಿಕ್ಕ ಅವಕಾಶವೇ `ಸಾರ್ವಜನಿಕರಿಗೆ ಸುವರ್ಣಾವಕಾಶ'. ಈ ಚಿತ್ರದಲ್ಲಿ ಧನ್ಯಾ ಆರೋಗ್ಯ ಮತ್ತು ಹಣಕಾಸು ಎರಡೂ ಸಮಸ್ಯೆಯಿಂದ ಬಳಲುವ ಯುವತಿಯಾಗಿ ನಟಿಸಿದ್ದಾರೆ.

    `ನಾವೇನೇ ನಟಿಸಿದ್ದರೂ ಸ್ಕಿçಪ್ಟ್ ಫೈನಲ್. ಅದು ಚೆನ್ನಾಗಿದ್ದರಷ್ಟೇ ನಮ್ಮ ನಟನೆ, ಪಾತ್ರಕ್ಕೆ ಮಹತ್ವ'' ಎನ್ನುವ ವಾಸ್ತವ ಗೊತ್ತಿರುವ ಕಲಾವಿದೆ ಧನ್ಯಾ.

    ರಿಷಿ ಎದುರು ನಾಯಕಿಯಾಗಿ ನಟಿಸಿರುವ ಧನ್ಯಾ, ಅನೂಪ್ ಅವರ ನಿರ್ದೇಶನದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ. ಗುಳ್ಟು ಟೀಂ ಮತ್ತೊಮ್ಮೆ ಜೊತೆಯಾಗಿ ನಿರ್ಮಿಸಿರುವ ಚಿತ್ರವಿದು. ಹೀಗಾಗಿಯೇ ಇಡೀ ಚಿತ್ರರಂಗ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿದೆ.

  • ಅಪ್ಪನ ಸಾಲ ತೀರಿಸಲೊಂದು ಸುವರ್ಣಾವಕಾಶ ಸಿಕ್ಕಾಗ.

    sarvajanikarige suvarnavakaha is a story of responsible son

    ಅಪ್ಪನಿಗೋ ಮೈತುಂಬಾ ಸಾಲ. ಎಂಬಿಎ ಪದವೀಧರನಾಗಿದ್ದರೂ, ಅಪ್ಪನ ಸಾಲ ಕಾಡುತ್ತಲೇ ಇದೆ. ಆಗ ಸಿಗುತ್ತೆ ಒಂದು ಬಂಪರ್ ಆಫರ್. ಆ ಆಫರ್ ಹಿಂದೆ ಹೊರಡುತ್ತಾರೆ ರಿಷಿ. ಅಲ್ಲಿಂದ ಶುರು.. ಕಾಮಿಡಿಯ ಮೆರವಣಿಗೆ. ಇದು ಸಾರ್ವಜನಿಕರಿಗೊಂದು ಸುವರ್ಣಾವಕಾಶ ಚಿತ್ರದ ಒನ್ ಲೈನ್ ಸ್ಟೋರಿ.

    ಕವಲುದಾರಿ ನಂತರ ರಿಷಿ ನಟಿಸಿರುವ ಚಿತ್ರವಿದು. ಮದುವೆಯಾದ ಮೇಲೆ ರಿಲೀಸ್ ಆಗುತ್ತಿರುವ ರಿಷಿಯ ಮೊದಲ ಚಿತ್ರವೂ ಇದೇ. ರಿಷಿ ಎದುರು ಧನ್ಯಾ ರಾಮಕೃಷ್ಣ ನಾಯಕಿಯಾಗಿ ನಟಿಸಿದ್ದರೆ, ದತ್ತಣ್ಣ, ರಂಗಾಯಣ ರಘು, ಶಾಲಿನಿ, ಮಿತ್ರ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

    ಅಂದಹಾಗೆ ಈ ಚಿತ್ರಕ್ಕೆ ಕಥೆ ಜನಾರ್ದನ್ ಚಿಕ್ಕಣ್ಣ ಮತ್ತು ಹರಿಕೃಷ್ಣ ಅವರದ್ದು. ಅದೇ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ. ನೆನಪಿದೆ ತಾನೆ. ಅನೂಪ್ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು. ಅರ್ಧಕ್ಕರ್ಧ ಗುಳ್ಟು ಟೀಂ ಚಿತ್ರದಲ್ಲಿದೆ. ಡಿಸೆಂಬರ್ 20ರಂದು ಚಿತ್ರ ರಿಲೀಸ್ ಆಗುತ್ತಿದೆ.

  • ಒಟಿಟಿಗೆ ನೋ ಎಂದಿದ್ದೇಕೆ ನಿನ್ನ ಸನಿಹಕತೆ ಟೀಂ?

    ಒಟಿಟಿಗೆ ನೋ ಎಂದಿದ್ದೇಕೆ ನಿನ್ನ ಸನಿಹಕತೆ ಟೀಂ?

    ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್‍ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರೋ ಸಿನಿಮಾ ನಿನ್ನ ಸನಿಹಕೆ. ಹೀರೋ ಸೂರಜ್ ಗೌಡ. ನಿರ್ದೇಶಕರೂ ಅವರೇ. ಒಂದೆರಡು ಬಾರಿ ರಿಲೀಸ್ ಡೇಟ್ ಘೋಷಿಸಿ, ಕೊರೊನಾ ಮತ್ತು ನಿರ್ಬಂಧದ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದ ನಿನ್ನ ಸನಿಹಕೆ ಚಿತ್ರ ಅಕ್ಟೋಬರ್ ಮೊದಲ ವಾರ ರಿಲೀಸ್ ಆಗುತ್ತಿದೆ.

    ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲೇ ರಿಲೀಸ್ ಮಾಡೋಕೆ ಕೆಲವು ಕಂಪೆನಿಗಳು ಆಫರ್ ಕೊಟ್ಟಿದ್ದವು. ಚಿತ್ರದ ಟ್ರೇಲರ್, ಹಾಡುಗಳಿಗೆ ಸಿಕ್ಕ ರೆಸ್ಪಾನ್ಸ್ ಕೂಡಾ ಚೆನ್ನಾಗಿತ್ತು. ಹೀಗಾಗಿ ಒಟಿಟಿ ಆಫರ್ ನಿರಾಕರಿಸಿ, ಥಿಯೇಟರಿಗೇ ಬರುತ್ತಿದ್ದೇವೆ. ಪ್ರೇಕ್ಷಕರಿಗೆ ಒಳ್ಳೆಯ ಹಾರೈಕೆಯ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ ಸೂರಜ್ ಗೌಡ.

  • ಕಾಲಾಪತ್ಥರ್ ವಿಕ್ಕಿ : ಧನ್ಯಾ ಹೀರೋಯಿನ್

    ಕಾಲಾಪತ್ಥರ್ ವಿಕ್ಕಿ : ಧನ್ಯಾ ಹೀರೋಯಿನ್

    ಕೆಂಡಸಂಪಿಗೆ ಮತ್ತು ಕಾಲೇಜ್ ಕುಮಾರ ಚಿತ್ರಗಳ ಮೂಲಕ ಹೀರೋ ಆಗಿ ಗೆದ್ದ ವಿಕ್ಕಿ ವರುಣ್ ಈಗ ಹೀರೋ ಕಂ ಡೈರೆಕ್ಟರ್ ಆಗುತ್ತಿದ್ದಾರೆ. ಹೀರೋ ಆಗುವುದಕ್ಕಿಂತ ಡೈರೆಕ್ಟರ್ ಆಗಬೇಕು ಅನ್ನೋ ಆಸೆಯಿತ್ತು. ಡೈರೆಕ್ಟರ್ ಆಗಲೆಂದೇ ಸಿನಿಮಾಗೆ ಬಂದವನು ನಾನು. ಎರಡು ಚಿತ್ರಗಳಲ್ಲಿ ಹೀರೋ ಆಗಿ ಗೆದ್ದಿದ್ದೇನೆ. ಈಗ ಡೈರೆಕ್ಟರ್ ಆಗುತ್ತಿದ್ದೇನೆ. ಹೊಸ ಭರವಸೆ ಮತ್ತು ವಿಶ್ವಾಸ ಎರಡೂ ಇದೆ ಎನ್ನುತ್ತಾರೆ ವಿಕ್ಕಿ ವರುಣ್.

    ಚಿತ್ರಕ್ಕೆ ನಾಯಕಿಯಾಗಿರೋದು ಧನ್ಯಾ ರಾಮ್‍ಕುಮಾರ್. ನಿನ್ನ ಸನಿಹಕೆ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ದೊಡ್ಮನೆ ಮಗಳು ಧನ್ಯಾ. ಚಿತ್ರವನ್ನು ಅರ್ಪಿಸುತ್ತಿರುವುದು ಗೀತಾ ಶಿವರಾಜಕುಮಾರ್. ಸತ್ಯ ಪ್ರಕಾಶ್ ಕಥೆ ಎನ್ನುವುದು ಚಿತ್ರದ ಇನ್ನೊಂದು ಸ್ಪೆಷಲ್. ಚಿತ್ರದಲ್ಲಿ ನಾಗಾಭರಣ, ರಾಜೇಶ್ ನಟರಂಗ ಕೂಡಾ ನಟಿಸುತ್ತಿದ್ದಾರೆ. ಸುರೇಶ್ ನಾಗರಾಜ್ ಚಿತ್ರದ ನಿರ್ಮಾಪಕರು.

  • ಕಾಲಾಪತ್ಥರ್`ಗೆ ಧನ್ಯಾ ರಾಮ್‍ಕುಮಾರ್ ನಾಯಕಿ

    ಕಾಲಾಪತ್ಥರ್`ಗೆ ಧನ್ಯಾ ರಾಮ್‍ಕುಮಾರ್ ನಾಯಕಿ

    ನಿನ್ನ ಸನಿಹಕೆ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಧನ್ಯಾ ರಾಮ್‍ಕುಮಾರ್ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಕ್ಕಿ ವರುಣ್ ನಟಿಸುತ್ತಿರೋ ಕಾಲಾಪತ್ಥರ್ ಚಿತ್ರಕ್ಕೆ ಧನ್ಯಾ ನಾಯಕಿ.

    ಫಿಯರ್ ಹೋಲ್ಡ್ಸ್ ಬ್ಯಾಕ್ ಟೂ ಮಚ್ ಇನ್ ಲೈಫ್ (ಭಯ ಬದುಕಿನಲ್ಲಿ ನಮ್ಮನ್ನು ಹಿಂದೆ ಎಳೆದುಕೊಂಡು ಹೋಗುತ್ತೆ) ಅನ್ನೋ ಟ್ಯಾಗ್‍ಲೈನ್ ಇಟ್ಟುಕೊಂಡು ಫಸ್ಟ್ ಲುಕ್ ರಿಲೀಸ್ ಆಗಿತ್ತು. ಈಗ ನಾಯಕಿಯ ಆಯ್ಕೆಯೂ ಆಗಿದೆಯಂತೆ. ರಾಮಾ ರಾಮಾ ರೇ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ವಿಕ್ಕಿ ವರುಣ್ ಸೈನಿಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎ.ಸಿ.ಚೇತನ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ,  ಹೆಚ್.ಪಿ. ನವೀನ್ ಚಿತ್ರದ ನಿರ್ಮಾಪಕರು.

  • ಡಿಂಪಿ ಅಲ್ಲ ಅಮೃತಾ ಅಲ್ಲಲ್ಲ ಧನ್ಯಾ ರಾಮ್‍ಕುಮಾರ್

    ಡಿಂಪಿ ಅಲ್ಲ ಅಮೃತಾ ಅಲ್ಲಲ್ಲ ಧನ್ಯಾ ರಾಮ್‍ಕುಮಾರ್

    ಧನ್ಯಾ ರಾಮ್‍ಕುಮಾರ್ ಅಭಿನಯದ ಮೊದಲ ಚಿತ್ರ ನಿನ್ನ ಸನಿಹಕೆ. ಇದೇ ವಾರ ರಿಲೀಸ್ ಆಗುತ್ತಿದೆ. ರಾಮ್‍ಕುಮಾರ್ ಮಗಳು. ರಾಜ್‍ಕುಮಾರ್ ಮೊಮ್ಮಗಳು. ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ಎಲ್ಲರಿಗೂ ಸೋದರ ಸೊಸೆ. ರಾಜ್ ಕುಟುಂಬದಿಂದ ಹೀರೋಯಿನ್ ಆಗುತ್ತಿರೋ ಮೊದಲ ಪ್ರತಿಭೆ. ಅಂದಹಾಗೆ ಚಿತ್ರದಲ್ಲಿ ಈಕೆಯ ಪಾತ್ರದ ಹೆಸರು ಅಮೃತಾ.

    ಅಮೃತಾ ಪಾತ್ರದಲ್ಲಿ ಲೀನವಾಗೋಕೆ ನನಗೇನೂ ಕಷ್ಟವಾಗಲಿಲ್ಲ. ವರ್ಕ್‍ಶಾಪ್ ಹೆಲ್ಪ್ ಮಾಡಿದವು. ನನ್ನ ನಟನೆ ನೋಡಿದವರೆಲ್ಲ ಇದು ನಿಮ್ಮ ಫಸ್ಟ್ ಸಿನಿಮಾ ಎಂದು ಅನಿಸುತ್ತಿಲ್ಲ ಎಂದರು. ಅಷ್ಟೇ ಅಲ್ಲ ಚಿತ್ರದಲ್ಲಿ ನನ್ನ ವೊರಿಜಿನಲ್ ನಿಕ್ ನೇಮ್ ಡಿಂಪಿ. ಅದನ್ನೂ ಹಾಗೆಯೇ ಬಳಸಿದ್ದಾರ ಎಂದಿದ್ದಾರೆ ಧನ್ಯಾ ರಾಮ್‍ಕುಮಾರ್.

    ಸೂರಜ್ ಗೌಡ ಹೀರೋ ಕಮ್ ನಿರ್ದೇಶಕರಾಗಿರುವ ನಿನ್ನ ಸನಿಹಕೆ ಚಿತ್ರದ ಹಾಡುಗಳು ಈಗಾಗಲೇ ಗುನುಗುವಂತೆ ಮಾಡಿವೆ. ಚಿತ್ರಕ್ಕೆ ಸಂಗೀತ ನೀಡಿರುವುದು ರಘು ದೀಕ್ಷಿತ್.

  • ದೊಡ್ಮನೆ ಹುಡುಗಿ ಜೊತೆ ಅನೂಪ್ ರೇವಣ್ಣ ಹೈಡ್ & ಸೀಕ್

    ದೊಡ್ಮನೆ ಹುಡುಗಿ ಜೊತೆ ಅನೂಪ್ ರೇವಣ್ಣ ಹೈಡ್ & ಸೀಕ್

    ಅವನು ಜಾಸ್ತಿ ಮಾತೇ ಆಡಲ್ಲ. ಮಾತಿಗಿಂತ ಮೌನದಲ್ಲೇ ಮಾತನಾಡುವ ಅವನು ನಿರ್ಭಾವುಕ. ನಿರ್ಲಿಪ್ತ. ಯಾವುದನ್ನೂ ಎಕ್ಸ್‍ಪ್ರೆಸ್ ಮಾಡಲ್ಲ. ಹೀಗಾಗಿಯೇ ಈ ಪಾತ್ರ ನನಗೆ ಇಷ್ಟವಾಯಿತು. ನಾನು ಇದುವರೆಗೆ ಮಾಡಿದ್ದ ಚಿತ್ರ ಮತ್ತು ಪಾತ್ರಗಳಿಗಿಂತ ಇದು ವಿಭಿನ್ನ. ವಿಶೇಷ. ನಾನಿಲ್ಲಿ ಹೀರೋನೂ ಹೌದು. ವಿಲನ್ ಕೂಡಾ ಹೌದು.. ಎನ್ನುತ್ತಾ ಥ್ರಿಲ್ಲಾಗುತ್ತಾರೆ ಅನೂಪ್ ರೇವಣ್ಣ.

    ನನ್ನದು ಅಪ್ಪನ ಮುದ್ದಿನ ಮಗಳ ಪಾತ್ರ. ಕಥೆಯಲ್ಲಿ ಮಿಸ್ಟರಿ ಇದೆ. ಥ್ರಿಲ್ ಇದೆ. ಟ್ವಿಸ್ಟ್, ಟನ್ರ್ಸ್ ಇದೆ. ಕೊನೆಯವರೆಗೂ ಚಿತ್ರದ ಕಥೆಯಲ್ಲಿ ಸಸ್ಪೆನ್ಸ್ ಇರುತ್ತೆ ಎನ್ನುತ್ತಾರೆ ಧನ್ಯಾ ರಾಮ್ ಕುಮಾರ್. ಅವರಿಗೆ ಇದು 2ನೇ ಸಿನಿಮಾ.

    ಡೈರೆಕ್ಟರ್ ಪುನೀತ್ ನಾಗರಾಜು ಅವರಂತೂ ಚಿತ್ರದ ಬಗ್ಗೆ ಹ್ಯಾಪಿಯಾಗಿದ್ದಾರೆ. ಕಥೆಯನ್ನು ರಿವರ್ಸ್ ಸ್ಕ್ರೀನ್ ಪ್ಲೇಯಲ್ಲಿ ಹೇಳುತ್ತೇವೆ. ಇದು ಒಂದು ಯುವತಿಯ ಕಿಡ್ನಾಪ್ ಸ್ಟೋರಿ. ಯುವತಿಯೊಬ್ಬಳ ಅಪಹರಣದ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ.  ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಧನ್ಯಾ ರಾಮ್ಕುಮಾರ್ ಅವರ ಉದ್ಯಮಿಯ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಅನೂಪ್ ರೇವಣ್ಣ, ಧನ್ಯಾ ರಾಮ್ಕುಮಾರ್ ಜೊತೆಗೆ 'ಮೈತ್ರಿ' ಜಗ್ಗಿ, ರಕ್ಷಾ ಉಮೇಶ್ ಮುಂತದವರು ನಟಿಸಿದ್ದಾರೆ. ಈ ಸಿನಿಮಾವನ್ನು ಸುನೇರಿ ಆರ್ಟ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪುನೀತ್ ನಾಗರಾಜು, ವಸಂತ್ ರಾವ್ ಎಂ. ಕುಲಕರ್ಣಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡಿದ್ದರೆ, ಚಿತ್ರದ ಮೇಕಿಂಗ್ ವಿಡಿಯೋವನ್ನು ಮಾಜಿ ಸಚಿವ ಎಚ್ ಎಂ ರೇವಣ್ಣ ಬಿಡುಗಡೆ ಮಾಡಿದ್ದಾರೆ.

  • ನಕ್ಕು ನಕ್ಕು ಸುಸ್ತಾಗಬೇಕಾ.. ಡಿ.20ಕ್ಕೆ ಸುವರ್ಣಾಕಾಶ..

    a laughter bomb ready to explode on dec 20th

    ನಾಯಕನ ತಂದೆಯಾಗಿ ದತ್ತಣ್ಣ. ನಾಯಕಿಯ ತಾಯಿ ಶಾಲಿನಿ. ಪಕ್ಕಾ ಜಿಪುಣಿ. ಆಟೋ ಚಾಲಕನಾಗಿ ನಗಿಸೋಕೆ ಮಿತ್ರ. ರಂಗಯಣ ರಘು ಅವರು ಇನ್ನೊಂದು ಕಡೆ. ಅಪ್ಪನದ್ದೋ ಮೈತುಂಬಾ ಸಾಲ. ನಾಯಕನೋ ಎಂಬಿಎ ಪದವೀಧರ. ಇದರ ನಡುವೆ ನಾಯಕಿಯ ತಾಪತ್ರಯವೇ ಇನ್ನೊಂದು.. ಇವೆಲ್ಲವೂ ಒಟ್ಟಿಗೇ ಸೇರಿಕೊಂಡು ಕೊಲಾಜ್ ಆದಾಗ ಸೃಷ್ಟಿಯಾದ ನಗೆಬಾಂಬು ಸಾರ್ವಜನಿಕರಿಗೆ ಸುವರ್ಣಾವಕಾಶ.

    ನಾಯಕನಾಗಿ ರಿಷಿ ಇದ್ದಾರೆ. ಕವಲುದಾರಿಯಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಗೆದ್ದಿದ್ದ ರಿಷಿಗೆ, ಇಲ್ಲಿ ನಗಿಸುವ ಕಾಯಕ. ನಾಯಕಿಯಾಗಿ ನಟಿಸಿರುವುದು ಧನ್ಯಾ ರಾಮಕೃಷ್ಣ. ಕನ್ನಡತಿಯೇ ಆದರೂ, ಬೇರೆ ಭಾಷೆಗಳಲ್ಲಿ ನಟಿಸಿದ ಮೇಲೆ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಟ್ರೇಲರ್ ಮಜಾ ಕೊಡುತ್ತಿದೆ.  ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಎಲ್ಲವೂ ಈ ಚಿತ್ರದಲ್ಲಿದೆ.  ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣದ ಚಿತ್ರ ಡಿಸೆಂಬರ್ 20ಕ್ಕೆ ತೆರೆ ಮೇಲೆ ಬರುತ್ತಿದೆ. ನಗಬೇಕಾ.. ಡಿ.20ಕ್ಕೆ ರೆಡಿಯಾಗಿ.

  • ನಗುವವರಿಗೆ.. ನಗಿಸುವವರಿಗೆ ಸುವರ್ಣಾವಕಾಶ..

    sarvajanikarige suvaranavakasha specialty

    ಸಾರ್ವಜನಿಕರಿಗೆ ಸುವರ್ಣಾವಕಾಶ, ಇದು ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ಅಭಿನಯದ ಹೊಸ ಚಿತ್ರ. ಅನೂಪ್ ರಾಮಸ್ವಾಮಿ ನಿರ್ದೇಶನದ ಟ್ರೇಲರ್, ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರಿನಲ್ಲಿ ಸಣ್ಣ ಸಣ್ಣ ತುಂಟಾಟಗಳು ನೋಡುವವರಿಗೆ ಇಷ್ಟವಾಗುತ್ತಿವೆ.

    ರಿಷಿ ಎದುರು ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ದತ್ತಣ್ಣ, ರಂಗಾಯಣ ರಘು, ಪೋಷಕ ಪಾತ್ರದಲ್ಲಿದ್ದಾರೆ.

    ಚಿತ್ರದಲ್ಲಿ ಫಿಟ್ಸ್ ಬರುವ ನಾಯಕಿ, ಪ್ರೀತಿ, ಪ್ರೇಮ, ಮಧ್ಯೆಯೆಲ್ಲೋ ಒಂದು ವಿಚಿತ್ರವಾದ ಸಸ್ಪೆನ್ಸು ಎಲ್ಲವೂ ಇರುವ ಟ್ರೇಲರ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

     

  • ನಿನ್ನ ಸನಿಹಕೆ ಫಸ್ಟ್ ಡೇ ಶಾಕ್

    ನಿನ್ನ ಸನಿಹಕೆ ಫಸ್ಟ್ ಡೇ ಶಾಕ್

    ನಿನ್ನ ಸನಿಹಕೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಡಾ.ರಾಜ್ ಕುಟುಂಬದಿಂದ ಇದೇ ಮೊದಲ ಬಾರಿ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಧನ್ಯಾ ರಾಮ್‍ಕುಮಾರ್ ನಟಿಸಿರುವ ಚಿತ್ರ. ಚಿತ್ರವನ್ನು ನೋಡಿ ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ರಾಜ್‍ಕುಮಾರ್ ನಿರ್ದೇಶಕ ಮತ್ತು ನಾಯಕ ಸೂರಜ್ ಗೌಡ ಅವರನ್ನು ಹೊಗಳಿದ್ದರು. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ನಿರೀಕ್ಷೆಗೆ ತಕ್ಕಂತೆ ಚಿತ್ರವೂ ಚೆನ್ನಾಗಿದೆ ಅನ್ನೋ ವಿಮರ್ಶೆಗಳೂ ಬಂದಿವೆ. ಪ್ರೇಕ್ಷಕರಿಂದಲೂ ಒಳ್ಳೆಯ ರಿಯಾಕ್ಷನ್ ಸಿಕ್ಕಿದ್ದರೂ ಮೊದಲ ದಿನವೇ ಸಂತೋಷ್ ಥಿಯೇಟರ್ ಶಾಕ್ ಕೊಟ್ಟಿದೆ.

    ಕೆಂಪೇಗೌಡ ರಸ್ತೆಯಲ್ಲಿರೋ ಸಂತೋಷ್, ನಿನ್ನ ಸನಿಹಕೆ ಚಿತ್ರದ ಮೇನ್ ಥಿಯೇಟರ್. ಆದರೆ, ಫಸ್ಟ್ ಡೇ ಫಸ್ಟ್ ಶೋ ನೋಡಲು ಹೋದವರಿಗೆ ಶಾಕ್ ಕಾದಿತ್ತು. ಚಿತ್ರಮಂದಿರದಲ್ಲಿ ಕರೆಂಟು ಹೋಗಿತ್ತು. ಅತ್ತ ಜನರೇಟರೂ ಇರಲಿಲ್ಲ. ಪ್ರೇಕ್ಷಕರೊಂದಿಗೆ ಚಿತ್ರ ನೋಡಬೇಕು ಎಂದುಕೊಂಡು ಸೂರಜ್ ಗೌಡ, ಧನ್ಯಾ, ರಘು ದೀಕ್ಷಿತ್ ಮೊದಲಾದವರು ಬಂದರೆ ಶೋ ಕ್ಯಾನ್ಸಲ್ ಎಂದು ಸಿನಿಮಾ ನೋಡಲು ಬಂದವರನ್ನು ವಾಪಸ್ ಕಳಿಸುತ್ತಿದ್ದರು ಥಿಯೇಟರ್ ಸಿಬ್ಬಂದಿ. ಕೊನೆಗೆ ಚಿತ್ರತಂಡದವರೇ ಪ್ರೇಕ್ಷಕರನ್ನು ನವರಂಗ್ ಥಿಯೇಟರಿಗೆ ಕಳಿಸಿಕೊಟ್ಟರು.

  • ನಿನ್ನ ಸನಿಹಕೆ ಮೊದಲ ಟಿಕೆಟ್ ಖರೀದಿಸಿದ ಸಿಎಂ ಬೊಮ್ಮಾಯಿ

    ನಿನ್ನ ಸನಿಹಕೆ ಮೊದಲ ಟಿಕೆಟ್ ಖರೀದಿಸಿದ ಸಿಎಂ ಬೊಮ್ಮಾಯಿ

    ಇದೇ ವಾರ ರಿಲೀಸ್ ಆಗುತ್ತಿರುವ ನಿನ್ನ ಸನಿಹಕೆ ಚಿತ್ರದ ಮೊದಲ ಟಿಕೆಟ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖರೀದಿಸಿದ್ದಾರೆ. ಡಾ.ರಾಜ್ ಮೊಮ್ಮಗಳು ಮೊದಲ ಬಾರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿರುವ ಸಿನಿಮಾ ನಿನ್ನ ಸನಿಹಕೆ. ದೊಡ್ಮನೆ ಹುಡುಗಿ ನಾಯಕಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳೂ ಇವೆ. ಚಿತ್ರದ ಪ್ರೀಮಿಯರ್ ಶೋ ಗುರುವಾರ ಸಂಜೆ ಇದೆ. ಈ ಶೋಗೆ ಸಿಎಂ ಬೊಮ್ಮಾಯಿ ಮತ್ತು ಅವರ ಕುಟುಂಬವನ್ನು ಆಹ್ವಾನಿಸಿದೆ ನಿನ್ನ ಸನಿಹಕೆ ತಂಡ.

    ninna_sanihake_ticketcopy.jpg

    ಚಿತ್ರದ ಹೀರೋ ಕಂ ಡೈರೆಕ್ಟರ್ ಸೂರಜ್ ಗೌಡ ಮತ್ತು ಧನ್ಯಾ ರಾಮ್‍ಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪ್ರೀಮಿಯರ್ ಶೋಗೆ ಆಹ್ವಾನಿಸಿದ್ದಾರೆ. ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಗಿ ಕೂಡಾ ಸಿಎಂರನ್ನು ಆಹ್ವಾನಿಸಿದರು.

  • ಪ್ರೇಕ್ಷಕರ ಸನಿಹಕೆ ರಾಜ್ ಮೊಮ್ಮಗಳು : ಏನಂದ್ರು ಶಿವಣ್ಣ, ರಾಘವೇಂದ್ರ, ಪುನೀತ್?

    ಪ್ರೇಕ್ಷಕರ ಸನಿಹಕೆ ರಾಜ್ ಮೊಮ್ಮಗಳು : ಏನಂದ್ರು ಶಿವಣ್ಣ, ರಾಘವೇಂದ್ರ, ಪುನೀತ್?

    ರಾಜ್ ಮನೆತನ, ಕನ್ನಡ ಚಿತ್ರರಂಗದ ದೊಡ್ಮನೆ. ಒಂದು ಕಾಲದಲ್ಲಿ ಆ ಮನೆಯಲ್ಲಿ ನಾಲ್ವರು ಹೀರೋಗಳಿದ್ದರು. ಈಗಲೂ ನಾಲ್ವರು ಹೀರೋಗಳಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಪೋಷಕ ಪಾತ್ರಗಳತ್ತ ಸರಿದಿದ್ದಾರೆ. ಶಿವಣ್ಣ, ಪುನೀತ್, ವಿನಯ್ ರಾಜ್‍ಕುಮಾರ್ ಮತ್ತು ಯುವ ರಾಜ್‍ಕುಮಾರ್ ಹೀರೋಗಳಾಗಿದ್ದಾರೆ. ಇಷ್ಟೆಲ್ಲ ಇದ್ದ ಮನೆಯಲ್ಲಿ ಹೀರೋಯಿನ್ ಇರಲಿಲ್ಲ. ಹಾಗೆ ನೋಡಿದರೆ ರಾಜ್ ಕುಟುಂಬದಿಂದ ರಾಜ್ ಬಿಟ್ಟರೆ ಮೊದಲು ಬಣ್ಣ ಹಚ್ಚಿದ್ದು, ತೆರೆಯ ಮೇಲೆ ಕಾಣಿಸಿಕೊಂಡಿದ್ದು ಪೂರ್ಣಿಮಾ ಅವರೇ. ಆದರೆ, ಅವರು ನಾಯಕಿಯಾಗಲಿಲ್ಲ. ಶಿವರಾಜ್ ಕುಮಾರ್ ಮಕ್ಕಳು ಬಾಲ ನಟನೆಗಷ್ಟೇ ಸೀಮಿತರಾದರು. ಹೀರೋಯಿನ್ ಆಗಲಿಲ್ಲ. ಅದು ಧನ್ಯಾ ರಾಮ್‍ಕುಮಾರ್ ಮೂಲಕ ಈಡೇರಿದೆ.

    ನಿನ್ನ ಸನಿಹಕೆ ಚಿತ್ರದ ಮೂಲಕ ರಾಮ್‍ಕುಮಾರ್ ಮತ್ತು ಪೂರ್ಣಿಮಾ ದಂಪತಿಯ ಮಗಳು ಧನ್ಯಾ ರಾಮ್‍ಕುಮಾರ್ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾವನ್ನು ಒರಾಯನ್ ಮಾಲ್‍ನಲ್ಲಿ ನೋಡಿದ ರಾಜ್ ಕುಟುಂಬದವರು ಚಿತ್ರವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

    ಶಿವಣ್ಣ : ಅಭಿನಯ ಅನ್ನೋದು ಅವಳ ರಕ್ತದಲ್ಲೇ ಇದೆಯೇನೋ. ಧನ್ಯಾ ಅಭಿನಯ ಇಷ್ಟವಾಯಿತು. ವಾಯ್ಸ್ ತುಂಬಾ ಚೆನ್ನಾಗಿದೆ. ಇಷ್ಟು ಚೆನ್ನಾಗಿ ಮಾಡ್ತಾಳೆ ಅನ್ನೋ ನಿರೀಕ್ಷೆ ಇರಲಿಲ್ಲ. ಸೂರಜ್ ಗೌಡ ಅವರೂ ಅದ್ಭುತವಾಗಿ ನಟಿಸಿದ್ದಾರೆ. ನಿರ್ದೇಶನದಲ್ಲೂ ಇದು ಅವರ ಮೊದಲ ಚಿತ್ರ ಅನ್ನೋ ಭಾವನೆ ಹುಟ್ಟಿಸಲ್ಲ.

    ರಾಘವೇಂದ್ರ ರಾಜ್‍ಕುಮಾರ್ : ಇದು ಒಳ್ಳೆ ಫೀಲ್ ಗುಡ್ ಸಿನಿಮಾ. ನಿಮ್ಮೆಲ್ಲರ ಆಶೀರ್ವಾದ ಬೇಕು.

    ಪುನೀತ್ ರಾಜ್‍ಕುಮಾರ್ : ಲೇಟ್ ಆಗಿ ಬಂದ ಕಾರಣ ನಾನು ಕಡೆಯ 10 ನಿಮಿಷ ಮಾತ್ರ ನೋಡೋಕೆ ಸಾಧ್ಯವಾಯ್ತು. ಮತ್ತೊಮ್ಮೆ ನೋಡಬೇಕು. ನಾನು ಎತ್ತಿ ಆಡಿಸಿದ ಮಗು ಧನ್ಯಾ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರಲಿ

  • ಮತ್ತೊಮ್ಮೆ ಬೆಳ್ಳಿಕಾಲುಂಗುರ

    ಮತ್ತೊಮ್ಮೆ ಬೆಳ್ಳಿಕಾಲುಂಗುರ

    ಕೇಳಿಸದೆ ಕಲ್ಲು ಕಲ್ಲಿನಲಿ..

    ಒಂದೇ ಒಂದು ಕಣ್ಣಬಿಂದು ಜಾರಿದರೆ ನನ್ನಾಣೆ..

    ಬೆಳ್ಳಿಕಾಲುಂಗುರ ಶ್ರೀಮತಿಗೆ ಸುಂದರ..

    ಬೆಳ್ಳಿಕಾಲುಂಗುರ ಎಂದ ತಕ್ಷಣ ನೆನಪಾಗುವುದೇ ಚೆಂದದ ಹಾಡುಗಳು.. ಹಂಪಿಯ ಆ ದೃಶ್ಯ ವೈಭವವನ್ನು ಕನ್ನಡದ ಇನ್ನೊಂದು ಚಿತ್ರದಲ್ಲಿ ನೊಡಲು ಸಾಧ್ಯವಿಲ್ಲ. ಮಾಲಾಶ್ರೀ, ತಾರಾ ವೇಣು, ಸುನಿಲ್, ಗುರುದತ್, ಶಿವಕುಮಾರ್, ಅವಿನಾಶ್.. ಹೀಗೆ ಹಲವು ಕಲಾವಿದರ ನಟನೆ, ಕೆ.ವಿ.ರಾಜು ಅವರ ನಿರ್ದೇಶನ.. ಆ  ಸಿನಿಮಾ ಬಂದಿದ್ದು 1922ರಲ್ಲಿ. ಈಗ ಬರೋಬ್ಬರಿ 30 ವರ್ಷಗಳ ನಂತರ.. 2022ರಲ್ಲಿ ಮತ್ತೊಮ್ಮೆ ಬೆಳ್ಳಿಕಾಲುಂಗುರ ಸೆಟ್ಟೇರುತ್ತಿದೆ.

    1992ರಲ್ಲಿ ಬೆಳ್ಳಿಕಾಲುಂಗುರ ಚಿತ್ರ ನಿರ್ಮಿಸಿದ್ದ ಸಾ.ರಾ.ಗೋವಿಂದು ಅವರೇ ಈ ಚಿತ್ರಕ್ಕೂ ನಿರ್ಮಾಪಕ. ನಿರ್ದೇಶನದ ಹೊಣೆಯನ್ನು ಹೆಚ್.ವಾಸು ಹೆಗಲಿಗೆ ಹೊರಿಸಿರುವ ಗೋವಿಂದು, ಗುರುಕಿರಣ್ ಅವರಿಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದಾರೆ. ಕಥೆ ವಾಸು ಅವರದ್ದಾದರೆ, ಚಿತ್ರಕಥೆ-ನಿರ್ದೇಶನ ಎಂ.ಎಸ್.ರಮೇಶ್ ಅವರದದು.ನ

    ಈಗ ಮಾಲಾಶ್ರೀ ಜಾಗಕ್ಕೆ ಅರ್ಥಾತ್ ನಾಯಕಿ ಸ್ಥಾನಕ್ಕೆ ಬಂದಿರೋದು ಧನ್ಯಾ ರಾಮ್`ಕುಮಾರ್. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಇಬ್ಬರು ಹೀರೋಗಳಿರುತ್ತಾರೆ ಎಂದಿದ್ದಾರೆ ಹೆಚ್.ವಾಸು.

    ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಶಿವಣ್ಣ, ರಾಘವೇಂದ್ರ ರಾಜಕುಮಾರ್, ವಾಟಾಳ್ ನಾಗರಾಜ್, ರಾಕ್‍ಲೈನ್ ವೆಂಕಟೇಶ್, ಎಸ್.ಎ.ಗೋವಿಂದರಾಜ್, ಉಮಾದೇವಿ ಕೆ.ವಿ.ರಾಜು, ಗಿರಿಜಾ ಲೋಕೇಶ್, ತಾರಾವೇಣು, ದೊಡ್ಡಣ್ಣ, ಅವಿನಾಶ್, ಶಿವಕುಮಾರ್, ಕನ್ನಡಪ್ರಭ ಮತ್ತು ಸುವರ್ಣ ನ್ಯುಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ, ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಬಿ.ರಾಮಮೂರ್ತಿ, ಲಹರಿ ವೇಲು, ದ.ಭಾರತ ಫಿಲಂ ಚೇಂಬರ್ ಕಾರ್ಯದರ್ಶಿ ರವಿ ಕೊಟ್ಟಾರಕರ, ಪ್ರದರ್ಶಕರಾದ ಎಸ್.ಟಿ.ಆನಂದ್ ಭಾಗವಹಿಸುತ್ತಿದ್ದಾರೆ.

  • ರಾಜ್ ಮೊಮ್ಮಗಳ ಮೊದಲ ಚಿತ್ರದ ನಿರ್ದೇಶಕ ಬದಲಾಗಿದ್ದೇಕೆ..?

    ninna sanihake director changed

    ಡಾ.ರಾಜ್ ಕುಮಾರ್ ಮೊಮ್ಮಗಳು, ನಟ ರಾಮ್‍ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಅಭಿನಯಿಸುತ್ತಿರುವ ಮೊದಲ ಚಿತ್ರ ನಿನ್ನ ಸನಿಹಕೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರವಿದು. ಈಗ ಚಿತ್ರದ ನಿರ್ದೇಶಕರು ಬದಲಾಗಿದ್ದಾರೆ. ಚಿತ್ರದ ನಾಯಕ ನಟ ಸೂರಜ್ ಗೌಡ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಮನ್ ಜಾದೂಗಾರ್ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ.

    ಸಾಮಾನ್ಯವಾಗಿ ನಿರ್ದೇಶಕರು ಈ ರೀತಿ ಬದಲಾದರೆ, ಅದು ಚಿತ್ರತಂಡ, ನಾಯಕ ನಟರ ಜೊತೆ ವಿವಾದ, ವಾಗ್ವಾದವೇ ಕಾರಣ ಎನ್ನುವುದು ಗಾಂಧಿ ನಗರದ ನಂಬಿಕೆ. ಅದು ಸತ್ಯವೂ ಹೌದು. ಆದರೆ, ಈ ಬಾರಿ ಹಾಗಾಗಿಲ್ಲ. ನಿರ್ದೇಶಕ ಸುಮನ್ ಜಾದೂಗಾರ್ ಸ್ವತಃ ನಿರ್ದೇಶನದ ಹೊಣೆಯನ್ನು ನಾಯಕ ನಟ ಸೂರಜ್ ಗೌಡ ಅವರಿಗೆ ವಹಿಸಿದ್ದಾರೆ.

    ಆಕ್ಸಿಡೆಂಟ್ ಆದ ಕಾರಣದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೂರಜ್ ಗೌಡ ಅವರಿಗೇ ಜವಾಬ್ದಾರಿ ನೀಡಿದ್ದೇನೆ. ವಿವಾದವೇನಿಲ್ಲ. ಚಿತ್ರದ ಕಥೆಯೂ ಸೂರಜ್ ಗೌಡ ಅವರದ್ದೇ ಆಗಿರೋ ಕಾರಣ, ಅವರಿಗೆ ಇದು ಸುಲಭವಾಗಿದೆ ಎಂದಿದ್ದಾರೆ ಸುಮನ್.

    ನಾನು ನಿರ್ದೇಶನ ಮಾಡುತ್ತಿಲ್ಲ. ಆದರೆ, ಚಿತ್ರತಂಡದ ಜೊತೆ ಇದ್ದೇ ಇದ್ದೇನೆ. ವಿವಾದ ಮಾಡಿಕೊಂಡಿರೋದೆಲ್ಲ ಸುಳ್ಳು ಎಂದಿದ್ದಾರೆ ಸುಮನ್.

  • ರಾಮ್‍ಕುಮಾರ್ ಮಗಳು ಹೀರೋಯಿನ್..!

    dhanya ramkumar to enter films

    ಒಂದು ಕಡೆ ಮಗ ಧಿರೇನ್ ಕುಮಾರ್‍ರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿರುವಾಗಲೇ, ರಾಮ್‍ಕುಮಾರ್ ಮಗಳೂ ಕೂಡಾ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದಾರೆ. ರಾಮ್ ಕುಮಾರ್ ಮಗಳು ಧನ್ಯಾ, ಸೂರಜ್ ಗೌಡಗೆ ಹೀರೋಯಿನ್ ಆಗಿದ್ದಾರೆ. ಮದುವೆಯ ಮಮತೆಯ ಕರೆಯೋಲೆ, ಕಹಿ, ಸಿಲಿಕಾನ್ ಸಿಟಿ ಚಿತ್ರಗಳ ನಂತರ ಸೂರಜ್ ನಟಿಸುತ್ತಿರುವ ಸಿನಿಮಾ ಇದು.

    ಹೊಸ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಕಥೆ ಸೂರಜ್ ಗೌಡ ಅವರದ್ದೇ. ಸುಮನ್ ಜಾದೂಗಾರ್ ಎಂಬ ಹೊಸ ಪ್ರತಿಭೆ ಚಿತ್ರದ ನಿರ್ದೇಶಕ. ರಘು ದೀಕ್ಷಿತ್ ಸಂಗೀತ ನೀಡುತ್ತಿದ್ದು, ಜುಲೈನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ.

  • ಶಿವಣ್ಣ, ಧ್ರುವ ಲಿಸ್ಟಿಗೆ ಸೇರ್ತಾರಾ ರಿಷಿ..?

    rishi expecting a hat trick woth sarvajanikarige suvarnavakasha

    ಒಂದು.. ಮತ್ತೊಂದು.. ಮಗದೊಂದು.. ಆರಂಭದಲ್ಲೇ ಹೀಗೆ ಸತತ ಹಿಟ್ ಸಿಕ್ಕರೆ, ಅದು ಕೊಡೊ ಕಿಕ್ಕೇ ಬೇರೆ. ಆಪರೇಷನ್ ಅಲಮೇಲಮ್ಮ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾದ ರಿಷಿ, ಈಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

    ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಮತ್ತು ಪುನೀತ್ ನಿರ್ಮಾಣದ ಕವಲುದಾರಿ. ಎರಡೂ ಹಿಟ್ ಚಿತ್ರಗಳು. ಈ ವಾರ ಸಾರ್ವಜನಿಕರಿಗೆ ಸುವರ್ಣಾವಕಾಶ ರಿಲೀಸ್ ಆಗುತ್ತಿದೆ. ಈ ಬಾರಿಯೂ ಅವರಿಗೆ ಹಿಟ್ ಪ್ರೊಡ್ಯೂಸರ್, ಕಥೆಗಾರರು ಸಿಕ್ಕಿದ್ದಾರೆ.

    ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಬ್ಯಾನರಿಗೆ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಗುಳ್ಟುನಲ್ಲಿ ಸಾಫ್ಟ್ವೇರ್ ವಂಚಕರ ಕಥೆಯನ್ನು ಅಷ್ಟೇ ಸೀರಿಯಸ್ಸಾಗಿ ಹೇಳಿದ್ದವರು ಈಗ ಕಾಮಿಡಿ ಅಸ್ತ್ರ ಎತ್ತಿಕೊಂಡಿದ್ದಾರೆ. ಇದು 100% ವೊರಿಜಿಲನಲ್ ಕಥೆ ಎನ್ನುವುದು ನಿರ್ದೇಶಕ ಅನೂಪರ್ ಅವರ ಕಾನ್ಫಿಡೆನ್ಸು. ಚಿತ್ರ ನೋಡಿ ನೀವು ನಕ್ಕರೆ.. ನಿರ್ಮಾಪಕರೂ ನಗುತ್ತಾರೆ. ಗೆಟ್ ರೆಡಿ..