` rajavardhan, - chitraloka.com | Kannada Movie News, Reviews | Image

rajavardhan,

  • 16ನೇ ಶತಮಾನದ ರಕ್ತಸಿಕ್ತ ಕಥೆ ಬಿಚ್ಚುಗತ್ತಿ

    bicchugathi is 16th century period drama based on palegaras of chitradurga

    ಚಿತ್ರದುರ್ಗದ ಇತಿಹಾಸ ಗೊತ್ತಿದ್ದವರಿಗೆ ಮದಕರಿ ನಾಯಕನ ಕಥೆಯಷ್ಟೇ ಅಲ್ಲ, ಆಗ ನಡೆದ ದಳವಾಯಿ ದಂಗೆಯೂ ಗೊತ್ತಿರುತ್ತೆ. ಆ ದಳವಾಯಿ ದಂಗೆಯ ಕುರಿತು ಬಿ.ಎಲ್‌. ವೇಣು ಅವರು ಬರೆದಿದ್ದ  ಕಾದಂಬರಿ ಈಗ ಬಿಚ್ಚುಗತ್ತಿ ಸಿನಿಮಾ ಆಗಿದೆ. ಚಿತ್ರಕಥೆಯೂ ಅವರದ್ದೇ.

    ಹದಿನಾರನೇ ಶತಮಾನದ ಅಂತ್ಯ ದುರ್ಗದ ಪಾಲಿಗೆ ಕರಾಳ ದಿನ. ಆಗ ಅಧಿಕಾರಕ್ಕಾಗಿ ನಡೆದ ನೆತ್ತರಿನ ಕಥೇಯೇ ಬಿಚ್ಚುಗತ್ತಿ. ಫೆ. 28ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್, ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದಾರೆ.

    ರಾಜವರ್ಧನ್ ಭರಮಣ್ಣನಾಗಿದ್ದಾರೆ. ದೇಹ ದಂಡಿಸಿದ್ದಾರೆ. ಕುದುರೆ ಸವಾರಿ, ಕಳರಿಯಪಟ್ಟು ಕಲಿತಿದ್ದಾರೆ. ಹರಿಪ್ರಿಯಾ ಕೂಡಾ ಹಿಂದೆ ಬಿದ್ದಿಲ್ಲ. ಸಿದ್ಧಾಂಬೆಯ ಪಾತ್ರಕ್ಕೆ ಅವರೂ ಕತ್ತಿ ವರಸೆ, ಕುದುರೆ ಸವಾರಿ ಕಲಿತು ನಟಿಸಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಚಿತ್ರ ಐತಿಹಾಸಿಕ ಚಿತ್ರ ಎಂಬ ಕಾರಣಕ್ಕೇ ಕುತೂಹಲ ಹುಟ್ಟಿಸಿರುವ ಚಿತ್ರ.

  • Bicchugatti Review - Chitraloka Rating 3.5/ 5*

    Bicchugatti Image

    After directing several youthful entertainers, director Hari Santhosh has picked up an important part of the state's history dating back to 16 to 17 centuries old of the timeline of palegars of Chitradurga including Madakari Nayaka, before his reign and his predecessors. Adopting the works of writer B L Venu, the film's first chapter focuses on Dalavaayi Dange, revolving around the mightiest and ruthless commander-in-chief - Dalavaayi Mudanna.

    Attempting a periodic of this magnitude is itself an act of appreciation, which dates back to time when men were known for their bravery and their sacrifices for their motherland and the rulers who protected their citizens against all forms of threats from the enemies within and beyond the boundaries of their kingdom.

    Apart from all the rich history, the makers have done their best to present it in an appealing manner on the screen right from the performances, to the technicalities involved in the making.

    Since the first chapter is heavily based on the mighty Dalavaayi Mudanna, actor Prabhakar of Bahubali excels and his willingness to dub his own voice for his character is a commendable effort. Whereas, Rajavardhan, son of popular actor Dingri Nagaraj is impressive throughout the film with his maturity to handle such an important and an iconic personality.

    The art team and the visual effects, especially the sequences involving the ferocious tiger is one of the highlights for the audience. It certainly takes the audience back to the glorious days with enough information embedded in the script for anyone to know about the essence and importance of such an era.

    The other highlight is that of the versatile actress Hariprriya, who as Siddhambe is a treat for the fans. She effortlessly pulls out the character which has multiple shades to it.

    As a whole, the movie does justice to the history and to a greater extent in bringing it on the screen within the limitations which it has been filmed. A must watch for all who love history, and periodic films. Go book your tickets for a date back in time of a glorious past.

  • Hariprriya Trends Again, This Time For Bicchugathii Chapter 1

    haripriya trends again this time for bucchugatti madakari nayaka chapter 1

    One of the most beautifully talented actresses, Hariprriya is riding high on her recent successes and most importantly for her notable performances. With a couple of projects in her kitty, the actress is yet again in the news for her brand new look in the upcoming release 'Bicchugathii Chapter 1'.

    Starring alongside the Rajavardhan, son of popular actor Dingri Nagaraj, Hariprriya plays a vital role in the film directed by Hari Santosh, which is based on the novel by B L Venu.

    The historical venture sees Hariprriya in a de-glamorous role whereas Rajavardhan plays the role of Baramanna Nayaka from 15th Century. One of the highlights of this one is Nadabrahma Hamsalekha, who has composed the music for Bichugathii Chapter 1, and actor Prabhakar of Bahubali series fame playing the antagonist's role. 

     

  • Rajavardhan Has A Great Future As Actor, Hamsalekha Predicts

    rajavardhan has a great future as actor

    Musical maestro Nadabrahma Hamsalekha who is impressed with the works of debutant Rajavardhan, son of popular actor Dingri Nagaraj, in the upcoming periodical 'Bicchugathii' predicts that the actor has a great future. However, he advises him to select films judiciously for a prospective future as an actor.

    He also revealed that initially Bicchugathii was his project but due to budget constraints, the producers backed off. "As promised to director Hari Santhu, I handed over this periodic film and I must admit, he has done a wonderful job," he says.

    He goes onto add that making a historical film is a hard task but with dedication and adopting the present technology could help making it effectively. "There are numerous such historical stories which can be made with great details," says Hamsalekha who has also composed songs for Bicchugathii.

    Whereas, actor Dingri Nagaraj urged everyone to extend the same kind of support and love towards his son Rajavardhan.

    Directed by Hari Santhu, the film is based on the novel titled Dalavai Muddanna by senior writer B L Venu. Along with Rajavardhan as Bharamanna Nayaka, Hariprriya and Prabhakar of Bahubali fame as Mudanna are in the lead role. The film is set for release in the coming weeks.

  • Rajavardhan's New Film Is Based On A Biggest Scam

    rajavardhan's ne film is bades on a biggest scam

    After the historical 'Bichchugatti', Rajavardhan is back with a new untitled film to be directed by Kumaresh who had earlier directed 'Noorondu Nenapu'.

    This time, the new film will not only be a mass entertainer, but Rajavardhan has got a new title called 'Massive Star' through this film. The film is an out and out mass film and is said to be based on a biggest scam in recent times. What is the biggest scam is yet to be revealed in the coming days.

    The film is tentatively titled as 'Production No 1' and is said to be launched in the month of September. More details about the film are yet awaited. 

     

  • ಗಜರಾಮನಿಗೆ ತಪಸ್ವಿನಿ

    ಗಜರಾಮನಿಗೆ ತಪಸ್ವಿನಿ

    ಗಜರಾಮ. ಬಿಚ್ಚುಗತ್ತಿ ರಾಜವರ್ಧನ್ ನಟಿಸುತ್ತಿರೋ ಸಿನಿಮಾ. ಯೋಗರಾಜ್ ಭಟ್, ದುನಿಯಾ ಸೂರಿಯಂತಹವರ ಜೊತೆ ಕೆಲಸ ಮಾಡಿದ್ದ ಸುನಿಲ್ ಕುಮಾರ್ ನಿರ್ದೇಶಿಸುತ್ತಿರೋ ಪ್ರಥಮ ಸಿನಿಮಾ. ಲೈಫ್ ಲೈನ್ ಫಿಲ್ಮ್ ಮೂಲಕ ನರಸಿಂಹ ಮೂರ್ತಿ ನಿರ್ಮಾಣ ಮಾಡುತ್ತಿರೋ ಸಿನಿಮಾ ಗಜರಾಮ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕಮರ್ಷಿಯಲ್ ಸಿನಿಮಾ ಅನ್ನೋ ಸುಳಿವಂತೂ ಸಿಕ್ಕಿದೆ.

    ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ಜಯಂತ್ ಕಾಯ್ಕಿಣಿ, ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರಕ್ಕೀಗ ನಾಯಕಿಯಾಗಿ ಬಂದಿರೋದು ಹರಿಕಥೆ ಸುಂದರಿ ತಪಸ್ವಿನಿ ಪೂಣಚ್ಚ. ಕೊಡಗಿನ ಕುವರಿ.

    ಈ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ತಪಸ್ವಿನಿ ಹರಿಕಥೆ ಅಲ್ಲ ಗಿರಿಕಥೆ ನಂತರ ಹಲವು ಅವಕಾಶಗಳು ಬರುತ್ತಿವೆ. ಅವುಗಳಲ್ಲಿ ಈ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ ಎಂದಿದ್ದಾರೆ.

  • ಪ್ರಕಾಶ್ ರೈ, ರಜನಿಕಾಂತ್, ಉಪೇಂದ್ರಗೆ ಮಿಸ್ಸಾಗಿದ್ದ ಮುದ್ದಣ್ಣ.. ಪ್ರಭಾಕರನಿಗೆ ಒಲಿದ

    bicchugathi dalayavi muddanna

    ದಳವಾಯಿ ಮುದ್ದಣ, ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಐತಿಹಾಸಿಕ ಪಾತ್ರದ ಹೆಸರು. ಆತ ದುರ್ಗದ ಪಾಳೆಯಗಾರರಲ್ಲೇ ಪರಮ ಕ್ರೂರಿ ನಾಯಕ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಹಲವರು ಚಿತ್ರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಅಂತಹವರಲ್ಲಿ ಪ್ರಮುಖರು ಟಿ.ಎಸ್.ನಾಗಾಭರಣ.

    ನಾಗಮಂಡಲದ ಹೊತ್ತಲ್ಲಿ ಅದು ಪ್ರಕಾಶ್ ರೈ ಬಳಿಗೆ ಹೋಗಿತ್ತು. ಒಂದಷ್ಟು ತೆರೆಮರೆಯ ಕೆಲಸಗಳೂ ಆಗಿ ಅದೇಕೋ ಪ್ರಾಜೆಕ್ಟ್ ಅರ್ಧಕ್ಕೇ ನಿಂತುಬಿಟ್ಟಿತ್ತು. ಅದಾದ ಮೇಲೆ ಆ ಪಾತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ರಿಯಲ್ ಸ್ಟಾರ್ ಉಪೇಂದ್ರ ಹೆಸರೂ ಕೇಳಿಬಂತು. ಈಗ ಅವರೆಲ್ಲರ ಆಸೆ ಆಸೆಯಾಗಿಯೇ ಉಳಿದುಹೋಯ್ತು.

    ಅಂತಹ ಘಟಾನುಘಟಿ ಸ್ಟಾರ್ಗಳ ಕೈ ತಪ್ಪಿದ್ದ ದಳವಾಯಿ ಮುದ್ದಣ್ಣನ ಪಾತ್ರ ಕಾಲಕೇಯ ಪ್ರಭಾಕರ್ ಪಾಲಾಗಿದ್ದೇ ವಿಶೇಷ. ಬಿಚ್ಚುಗತ್ತಿ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದ್ದು, ಬಿಚ್ಚುಗತ್ತಿ ಭರಮಣ್ಣನಾಗಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಕಮರ್ಷಿಯಲ್ ಚಿತ್ರಗಳನ್ನೇ ನಿರ್ದೇಶಿಸಿದ್ದ ಹರಿ ಸಂತೋಷ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರ ಮಾಡಿದ್ದಾರೆ. ಹರಿಪ್ರಿಯಾ ಸಿದ್ದಾಂಬೆಯಾಗಿ ಕಂಗೊಳಿಸಿದ್ದಾರೆ. ಇಡೀ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿರೋ ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಓಂ ಸಾಯಿ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ.

  • ಬಿಚ್ಚುಗತ್ತಿ ದಳವಾಯಿ ದಂಗೆ ಶೂಟಿಂಗ್ ಕಂಪ್ಲೀಟ್

    bicchugatthi baramanna nayaka shooting complete

    ಬಿಚ್ಚುಗತ್ತಿ ಭರಮಣ್ಣ ನಾಯಕ, ದುರ್ಗದ ಹುಲಿಗಳಲ್ಲಿ ಒಂದು. ಮದಕರಿ ನಾಯಕನ ಬಲಗೈ ಭಂಟನಾಗಿದ್ದ ಭರಮಣ್ಣ ನಾಯಕನ ಕಥಾ ಚಿತ್ರವಿದು. ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗಿರುವ ಚಿತ್ರದ ಶೂಟಿಂಗ್ ಮುಗಿದಿದೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಭರಮಣ್ಣ ನಾಯಕನಾಗಿ ನಟಿಸಿದ್ದು, ಹರಿಪ್ರಿಯಾ ನಾಯಕಿ. ಕಾಲೇಜ್ ಕುಮಾರ್, ವಿಕ್ಟರಿ-2 ಚಿತ್ರಗಳ ಖ್ಯಾತಿಯ ಸಂತೋಷ್ ಕುಮಾರ್ ನಿರ್ದೇಶಕ.

    ಕೆಜಿಎಫ್, ಬಾಹುಬಲಿ ಮಾದರಿಯಲ್ಲಿಯೇ ಇದೂ ಕೂಡಾ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಮೊದಲ ಭಾಗದಲ್ಲಿ ದಳವಾಯಿಗಳ ದಂಗೆಯ ಕಥಾವಸ್ತು ಇಟ್ಟುಕೊಳ್ಳಲಾಗಿದೆ. ಐತಿಹಾಸಿಕ ಚಿತ್ರವೊಂದನ್ನು ಸೀಕ್ವೆಲ್ ರೂಪದಲ್ಲಿ ತೆರೆಗೆ ತರುತ್ತಿರುವುದು ಇದೇ ಮೊದಲು.

    ಶ್ರೀಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್‍ನ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನವಿದೆ.

  • ಬಿಚ್ಚುಗತ್ತಿ ಭರಮಣ್ಣ : ಕನ್ನಡ ನೆಲದ ಗಂಡುಗಲಿಯ ಕಥೆ

    bicchugathi a movie with proud karnataka history

    ಬಿಚ್ಚುಗತ್ತಿ ಭರಮಣ್ಣ. ದುರ್ಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಸಾಹಸಿ. ಈತನ ಕುರಿತ ದಂತಕತೆಗಳು ಒಂದೆರಡಲ್ಲ. ಅಪ್ರತಿಮ ವೀರನಾಗಿದ್ದ ಬಿಚ್ಚುಗತ್ತಿ ಭರಮಣ್ಣ, ಕನ್ನಡ ನೆಲದ ಗಂಡುಗಲಿ. ಈತನ ಇತಿಹಾಸ ತಿಳಿದುಕೊಳ್ಳಬೇಕಾದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಲ್ಲ.

    ಇತಿಹಾಸದ ಪ್ರಕಾರ, ವೀರ ಮದಕರಿ ನಾಯಕನಿಗೂ ಮೊದಲು ಚಿತ್ರದುರ್ಗವನ್ನು ಆಳಿದ್ದ ನಾಯಕರಲ್ಲಿ ಭರಮಣ್ಣ ನಾಯಕ ಪ್ರಮುಖ. ಮಹಾ ಪರಾಕ್ರಮಿ. ಇವರು ಮದಕರಿ ನಾಯಕರ ಅಜ್ಜ. ದನ ಕಾಯುತ್ತಿದ್ದ ಭರಮಣ್ಣನನ್ನು ಅರಮನೆಯ ಆನೆ ಹಾರ ಹಾಕಿ, ರಾಜನನ್ನಾಗಿಸಿದ್ದು ಇತಿಹಾಸ. ಅಧಿಕಾರಕ್ಕೆ ಬಂದ ದಿನದಿಂದ ಕೊನೆಯವರೆಗೂ ಸದಾ ಯುದ್ಧ ಮಾಡಬೇಕಾದ ಅನಿವಾರ್ಯತೆ ಭರಮಣ್ಣ ನಾಯಕನಿಗಿತ್ತು.

    ದನ ಕಾಯುತ್ತಿದ್ದ ಭರಮಣ್ಣನ ತಲೆ ಮೇಲೆ ಹಾವೊಂದು ನೆರಳು ಕೊಟ್ಟಿತ್ತಂತೆ. ಅದನ್ನು ಕಂಡ ಸಂತರೊಬ್ಬರು ನೀನು ರಾಜನಾಗುತ್ತೀಯ ಎಂದು ಹೇಳಿದ್ದರಂತೆ. ಆಗ ನಕ್ಕಿದ್ದ ಭರಮಣ್ಣ, ಅನಿರೀಕ್ಷಿತವಾಗಿ ಪಟ್ಟಕ್ಕೇರಿದಾಗ ಆ ಸಂತರನ್ನು ಹುಡುಕಿಸಿದನಂತೆ. ಅವರು ಪುಣೆಯ ಸಮೀಪ ಕಂಡಾಗ ಅವರನ್ನು ದುರ್ಗಕ್ಕೆ ಬರಬೇಕು, ಇದು ರಾಜಾಜ್ಞೆ ಎಂದರಂತೆ ಭರಮಣ್ಣನ ಸೇವಕರು. ನನಗೆ ಆಜ್ಞೆ ಮಾಡುವ ರಾಜ ಯಾರೂ ಇಲ್ಲ. ಶಿವನೊಬ್ಬನೇ ನನ್ನ ರಾಜ ಎಂದಾಗ, ಸೇವಕರ ಮಾತಿನ ತಪ್ಪು ಅರಿತ ಭರಮಣ್ಣ, ಸ್ವತಃ ಹೋಗಿ ಸಂತರನ್ನು ಕರೆತಂದನಂತೆ.

    ಆದರೆ, ತಾವು ಒಂದು ದಿನ ಶಿವ ಪೂಜೆ ಮಾಡಿದ ಜಾಗದಲ್ಲಿ ಮತ್ತೊಂದು ದಿನ ಶಿವ ಪೂಜೆ ಮಾಡಲಾರೆವು ಎಂದಾಗ, ಅವರಿಗಾಗಿ ದುರ್ಗದಲ್ಲಿ 360 ಲಿಂಗ ಸ್ಥಾಪನೆ ಮಾಡಿದ ಎನ್ನುತ್ತವೆ ಜಾನಪದ ಕಥೆಗಳು. ದುರ್ಗದ ಸುತ್ತ 21 ಕೆರೆಗಳು, 30 ದೇವಾಲಯ ಕಟ್ಟಿಸಿದ ಕೀರ್ತಿ ಭರಮಣ್ಣ ನಾಯಕನದ್ದು. ಬೃಹನ್ಮಠದ ರೂವಾರಿ, ಸಂತೆಹೊಂಡದ ಸೃಷ್ಟಿಕರ್ತ ಭರಮಣ್ಣ ನಾಯಕ.

    ರಾಜನಾದ ಕ್ಷಣದಿಂದ ಹೋರಾಟದಲ್ಲೇ ಕಾಲ ಕಳೆದ ಭರಮಣ್ಣ, ವೀರಗತ್ತಿಯನ್ನು ಒರೆಯಲ್ಲಿಡಲು ಆಗಲೇ ಇಲ್ಲ. ಹೀಗಾಗಿಯೇ ಅವರಿಗೆ ಬಿಚ್ಚುಗತ್ತಿ ಭರಮಣ್ಣ ನಾಯಕ ಎಂಬ ಹೆಸರು ಬಂತು ಎನ್ನುತ್ತದೆ ಇತಿಹಾಸ. ಇತಿಹಾಸದ ಈ ರೋಚಕ ಕಥೆಯನ್ನು ತೆರೆಗೆ ತರುತ್ತಿದ್ದಾರೆ ಹರಿ ಸಂತೋಷ್. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿರುವ ಚಿತ್ರದಲ್ಲಿ ಹರಿಪ್ರಿಯಾ ಸಿದ್ದಾಂಬೆಯಾಗಿ ನಟಿಸಿದ್ದಾರೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದ್ದು, ಕನ್ನಡ ನೆಲದ ಗಂಡುಗಲಿಯ ಕಥೆಯನ್ನು ಮರೆಯದೆ ನೋಡಲು ಕನ್ನಡಿಗರೂ ಕಾತುರದಿಂದಿದ್ದಾರೆ. 1721ರಲ್ಲಿ ಇವರು ನಿಧನರಾದರೆಂದು ಇತಿಹಾಸ ಹೇಳುತ್ತದೆ. ಮೇಲುದುರ್ಗದಲ್ಲಿ ಇವರ ಸಮಾಧಿ ಇದೆ.

    ಓಂ ಸಾಯಿ ಕೃಷ್ಣ ಲಾಂಛನದಲ್ಲಿ ನಿರ್ಮಾಣವಾಗಿರುವ ಬಿಚ್ಚುಗತ್ತಿ ಚಿತ್ರಕ್ಕೆ ನಿಶಾಂತ್, ಜ್ಞಾನೇಶ್ ಬಾಬು ಬಂಡವಾಳ ಹೂಡಿದ್ದಾರೆ.

  • ಬಿಚ್ಚುಗತ್ತಿ ಹೀರೋ 85 ಕೆಜಿಯಿಂದ 108 ಕೆಜಿಗೆ ಏರಿದ ಕಥೆ..!

    bicchuagthi hero's amazing transformation

    ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರದ ನಾಯಕ ರಾಜವರ್ಧನ್. ಸ್ಫುರದ್ರೂಪಿ. ಆಕರ್ಷಕ ಅಂಗಸೌಷ್ಟವವಿದ್ದ ನಟ. ಸಿನಿಮಾಗೂ ಮೊದಲು ಚಾಕೊಲೇಟ್ ಹೀರೋ ಆಗಿ ಕಾಣಿಸುತ್ತಿದ್ದ ರಾಜವರ್ಧನ್, ಈ ಚಿತ್ರದಲ್ಲಿ ಬಲಭೀಮನಾಗಿದ್ದಾರೆ.

    ಬಿಚ್ಚುಗತ್ತಿ ಸಿನಿಮಾ ಆರಂಭದಲ್ಲಿ ನಾನು 85 ಕೆ.ಜಿ. ಇದ್ದೆ. ಆದರೆ ನನ್ನ ಎದುರು ಖಳನಾಗಿ ದಳವಾಯಿ ಮುದ್ದಣ್ಣನ ಪಾತ್ರ ಮಾಡಿರುವ ಬಾಹುಬಲಿ ಖ್ಯಾತಿಯ ಪ್ರಭಾಕರ್ ಬರೋಬ್ಬರಿ 130 ಕೆ.ಜಿ. ಇದ್ದರು. ಅವರ ಮುಂದೆ ನಾಯಕನ ಪಾತ್ರ ಪೇಲವ ಎನ್ನಿಸಬಾರದು ಎಂಬ ಕಾರಣಕ್ಕೆ ದೇಹದ ತೂಕ ಹೆಚ್ಚಿಸಿಕೊಂಡೆ. ಸತತ 6 ತಿಂಗಳು ಕಷ್ಟಪಟ್ಟು 85 ಕೆ.ಜಿ. ಇದ್ದ ದೇಹತೂಕವನ್ನು 108ಕ್ಕೆ ಏರಿಸಿಕೊಂಡೆ ಎನ್ನುತ್ತಾರೆ ರಾಜವರ್ಧನ್.

    ಅಷ್ಟೇ ಅಲ್ಲ, ನಿರ್ದೇಶಕ ಹರಿ ಸಂತೋಷ್ ಸೂಚನೆಯಂತೆ ಬಿಚ್ಚುಗತ್ತಿ ಭರಮಣ್ಣನಾಗಲು ಕುದುರೆ ಸವಾರಿ ಮಾತ್ರವಲ್ಲದೆ, ಕಳರಿಪಯಟ್ಟು ಮುಂತಾದ ಸಮರಕಲೆಯನ್ನೂ ಕಲಿತಿದ್ದಾರೆ.ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಹರಿ ಸಂತೋಷ್ ನಿರ್ದೇಶನ ಮಾಡಿರುವ ‘ಬಿಚ್ಚುಗತ್ತಿ: ಚಾಪ್ಟರ್ 1, ದಳವಾಯಿ ದಂಗೆ ಇದೇ ವಾರ ರಿಲೀಸ್ ಆಗುತ್ತಿದೆ.ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ ಪಾತ್ರದಲ್ಲಿ ನಟಿ ಹರಿಪ್ರಿಯಾ ಅಭಿನಯಿಸಿದ್ದಾರೆ.

  • ಬೆರಗು ಹುಟ್ಟಿಸಿತು ಬಿಚ್ಚುಗತ್ತಿ ಟೀಸರ್

    bicchugathi first teaser out

    ಬಿಚ್ಚುಗತ್ತಿ. ದುರ್ಗದ ಪಾಳೇಗಾರರ ಕಥೆ. ಮದಕರಿ ನಾಯಕನ ನಂಬುಗೆಯ ಬಂಟನಾಗಿದ್ದ ಬಿಚ್ಚುಗತ್ತಿಯ ಕುರಿತ ಐತಿಹಾಸಿಕ ಕಥಾ ಹಂದರ ಹೊಂದಿರುವ ಬಿಚ್ಚುಗತ್ತಿಯ ಟೀಸರ್ ರಿಲೀಸ್ ಆಗಿದೆ. ಬಿಚ್ಚುಗತ್ತಿ ಹೇಗಿರಬಹುದು ಎಂಬ ಕುತೂಹಲಕ್ಕೆ ಸಿಕ್ಕಿರುವ ಮೊದಲ ಉತ್ತರ ಈ ಟೀಸರ್.

    ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿಯಾಗಿ ನಟಿಸಿದ್ದರೆ, ಹರಿಪ್ರಿಯಾ, ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಶರತ್ ಲೋಹಿತಾಶ್ವ ಅವರ ಗಡಸು ಧ್ವನಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಟೀಸರ್ ದುರ್ಗದ ಸಿಂಹಾಸನಕ್ಕಾಗಿ ದಳವಾಯಿಗಳ ನಡುವೆ ನಡೆದ ಆಂತರಿಕ ದಂಗೆಯ ಕಥೆ ಹೇಳುತ್ತದೆ. ಅಂದಹಾಗೆ ಇದು 2 ಭಾಗಗಳಲ್ಲಿ ಬರಲಿದ್ದು, ಬಿಚ್ಚುಗತ್ತಿ ದಳವಾಯಿ ದಂಗೆಯ ಮೊದಲ ಭಾಗ. ಹರಿ ಸಂತೋಷ್ ನಿರ್ದೇಶನದ ಚಿತ್ರವನ್ನು ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸುದೀರ್ಘ ಗ್ಯಾಪ್ ನಂತರ ಹಂಸಲೇಖ ಸಂಗೀತ ನೀಡಿರುವ ಚಿತ್ರ ಬಿಚ್ಚುಗತ್ತಿ.

  • ಬೆರಗು ಹುಟ್ಟಿಸಿತು ಬಿಚ್ಚುಗತ್ತಿ ಟೀಸರ್

    bicchugathi first teaser out

    ಬಿಚ್ಚುಗತ್ತಿ. ದುರ್ಗದ ಪಾಳೇಗಾರರ ಕಥೆ. ಮದಕರಿ ನಾಯಕನ ನಂಬುಗೆಯ ಬಂಟನಾಗಿದ್ದ ಬಿಚ್ಚುಗತ್ತಿಯ ಕುರಿತ ಐತಿಹಾಸಿಕ ಕಥಾ ಹಂದರ ಹೊಂದಿರುವ ಬಿಚ್ಚುಗತ್ತಿಯ ಟೀಸರ್ ರಿಲೀಸ್ ಆಗಿದೆ. ಬಿಚ್ಚುಗತ್ತಿ ಹೇಗಿರಬಹುದು ಎಂಬ ಕುತೂಹಲಕ್ಕೆ ಸಿಕ್ಕಿರುವ ಮೊದಲ ಉತ್ತರ ಈ ಟೀಸರ್.

    ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿಯಾಗಿ ನಟಿಸಿದ್ದರೆ, ಹರಿಪ್ರಿಯಾ, ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಶರತ್ ಲೋಹಿತಾಶ್ವ ಅವರ ಗಡಸು ಧ್ವನಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಟೀಸರ್ ದುರ್ಗದ ಸಿಂಹಾಸನಕ್ಕಾಗಿ ದಳವಾಯಿಗಳ ನಡುವೆ ನಡೆದ ಆಂತರಿಕ ದಂಗೆಯ ಕಥೆ ಹೇಳುತ್ತದೆ. ಅಂದಹಾಗೆ ಇದು 2 ಭಾಗಗಳಲ್ಲಿ ಬರಲಿದ್ದು, ಬಿಚ್ಚುಗತ್ತಿ ದಳವಾಯಿ ದಂಗೆಯ ಮೊದಲ ಭಾಗ. ಹರಿ ಸಂತೋಷ್ ನಿರ್ದೇಶನದ ಚಿತ್ರವನ್ನು ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸುದೀರ್ಘ ಗ್ಯಾಪ್ ನಂತರ ಹಂಸಲೇಖ ಸಂಗೀತ ನೀಡಿರುವ ಚಿತ್ರ ಬಿಚ್ಚುಗತ್ತಿ.

  • ರಣ್ಯ'ನಾಗಿದ್ದಾರೆ ರಾಜವರ್ಧನ್

    ರಣ್ಯ'ನಾಗಿದ್ದಾರೆ ರಾಜವರ್ಧನ್

    ಬಿಚ್ಚುಗತ್ತಿ ಮೂಲಕ ಯಾರಿವನು ಹೊಸ ಹುಡುಗ ಎಂದು ಸ್ಯಾಂಡಲ್‍ವುಡ್ ಹುಬ್ಬೇರುವಂತೆ ಮಾಡಿದ್ದ ನಟ ರಾಜವರ್ಧನ್. ಡಿಂಗ್ರಿ ನಾಗರಾಜ್ ಪುತ್ರ. ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು ಹಿರಣ್ಯ. ಅತ್ತ ಪ್ರಣಯಂ ಮುಗಿಯುತ್ತಿರುವ ಹೊತ್ತಿನಲ್ಲಿ ಹಿರಣ್ಯ ಶುರುವಾಗುತ್ತಿದೆ.

    ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಚಿತ್ರಕ್ಕೆ ವಿಘ್ನೇಶ್ವರ ಮತ್ತು ವಿಜಯ್ ಕುಮಾರ್ ನಿರ್ಮಾಪಕರು. ಅಂದಹಾಗೆ ಈ ಟೈಟಲ್ ಇಟ್ಟುಕೊಂಡಿದ್ದವರು ಡಾಲಿ ಧನಂಜಯ್. ಗೆಳೆಯನಿಗಾಗಿ ಟೈಟಲ್ ಬಿಟ್ಟುಕೊಟ್ಟಿದ್ದಾರೆ ಡಾಲಿ. ರಾಜವರ್ಧನ್‍ಗೆ ನಾಯಕಿ ರಿಹಾನಾ. ವೃತ್ತಿಯಲ್ಲಿ ಮಾಡೆಲ್.

    ಬಂಡೆಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಕ್ಲಾಪ್ ಮಾಡಿದ್ದು ಮಾಜಿ ಸಚಿವ ಚೆಲುವರಾಯಸ್ವಾಮಿ. ಅಂದಹಾಗೆ ರಿಹಾನಾ, ಮೂಲತಃ ತೆಲುಗಿನ ಹುಡುಗಿ. ಡಿಗ್ರಿ ಓದಿದ್ದು ಬೆಂಗಳೂರಿನಲ್ಲಿ. ಹೀಗಾಗಿ ಕನ್ನಡ ಚೆನ್ನಾಗಿಯೇ ಗೊತ್ತಿದೆ. ತೆಲುಗಿನಲ್ಲೂ ಒಂದು ಚಿತ್ರದಲ್ಲಿ ನಟಿಸುತ್ತಿರುವ ಈಕೆಗೆ ಇದು ಮೊದಲ ಕನ್ನಡ ಸಿನಿಮಾ.