` ramya, - chitraloka.com | Kannada Movie News, Reviews | Image

ramya,

  • Two Songs Of Naagarahaavu On 8th Eve

    nagarahavu movie still

    Two songs of the most anticipated movie Nagarahavu will be released on Saturday evening at 8.30 pm on youtube Sony Channel. The songs are called 'nagin' and suttu muttu'.

    'Nagarahavu' stars Diganth, Ramya, Saikumar and others in prominent roles. Vishnuvardhan has been created by digital head technology. Gurukiran has composed the music of the film.

    The movie will be released on 14th of this month.

    Naagarahaavu Movie Gallery - View

    Also Read

    Nagarahavu Censored U/A - Releasing On Oct 14th

    How Nagarahavu Created Dr.Vishnuvardhan?

    Nagarahavu Likely To Release On October 14th

    Why Diganth Telling Lies On Nagarahavu Team? - Exclusive

    Nagarahavu Release Postponed To Dasara

    Darshan In A Special Song In Nagarahavu

    Nagarahavu Audio On August 14th

    Nagarahavu Release Date Will Be Announced on July 14th

     

     

  • Wedding Bells for Ramya?

    Wedding Bells for Ramya?

    Ramya has hinted at her impending wedding. That is what the online social media is abuzz after Ramya posted that she will be sharing a 'sihi suddi' tomorrow. In her post on the morning of Gowri Festival today, Ramya posted, "About time I take the plunge. Don't you think? I am excited to share some ಸಿಹಿ ಸುದ್ದಿ with you all tomorrow at 11.15 am. It is official."

    While "taking the plunge" and "it is official" hints at a wedding, it could also mean she is taking the plunge into a new venture. It could also be the announcement of her comeback film or plunge into direction or production of films. As of now she has kept everyone guessing. The suspense has been set and fans prepared for the announcement.

  • ಅಸಲಿ ರಮ್ಯಾ.. ನಕಲಿ ಕಥೆ..!

    real ramya fake story

    ನಟಿಯಾಗಿದ್ದಾಗ ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದ ರಮ್ಯಾ, ವಿವಾದಗಳ ನಡುವೆಯೂ ಸ್ಟಾರ್ ಆಗಿಯೇ ಇದ್ದರು. ಆದರೆ, ರಾಜಕೀಯಕ್ಕೆ ಹೋಗಿದ್ದೇ ಹೋಗಿದ್ದು, ವಿವಾದಗಳ ಮೂಟೆಯನ್ನೇ ಹೊತ್ತು ತಿರುಗುವಂತಾಗಿದೆ. ಆಗಿರೋದು ಇಷ್ಟು.

    ಕಾಂಗ್ರೆಸ್‍ನ ಕಾರ್ಯಕರ್ತರಿಗೆ ಟ್ವಿಟರ್, ಫೇಸ್‍ಬುಕ್ ಬಗ್ಗೆ ಪಾಠ ಮಾಡುತ್ತಿದ್ದ ಅಖಿಲ ಭಾರತ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಂಗ್‍ನ ಮುಖ್ಯಸ್ಥೆ ರಮ್ಯಾ, ಫೇಕ್ ಅಕೌಂಟ್‍ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮದೂ ಕೂಡಾ ಎರಡು, ಮೂರು ಅಕೌಂಟ್ ಇದೆ. ದಿವ್ಯ ಸ್ಪಂದನಾ ಹೆಸರಿನಲ್ಲಿರುವುದು ಒಂದು ಖಾತೆ. ಇನ್ನೂ ಕೆಲವು ಖಾತೆಗಳಿವೆ. ಫೇಕ್ ಅಕೌಂಟ್ ಇಟ್ಟುಕೊಳ್ಳೊದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

    ಹಾಗಾದರೆ, ಇತ್ತೀಚೆಗೆ ಕಾಂಗ್ರೆಸ್‍ಗೆ ಟ್ವಿಟರ್, ಫೇಸ್‍ಬುಕ್‍ನಲ್ಲಿ ರೀಟ್ವೀಟ್, ಲೈಕುಗಳ ಸುರಿಮಳೆ ಹೆಚ್ಚಿದ್ದರ ಹಿಂದೆ ಫೇಕ್ ಅಕೌಂಟ್‍ಗಳ ಪಾತ್ರ ದೊಡ್ಡದಾ..? ಇತ್ತೀಚೆಗಷ್ಟೇ ನರೇಂದ್ರ ಮೋದಿಗೆ ಡ್ರಗ್ಸ್ ಅಮಲು ಎಂಬರ್ಥದಲ್ಲಿ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದ ರಮ್ಯಾ, ಈ ಬಾರಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ. 

  • ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

    ramya tweets about aake

    ಆಕೆ ಚಿತ್ರ ಇದೇ ಜೂನ್ 30ಕ್ಕೆ ತೆರೆ ಕಾಣುತ್ತಿದೆ. ಟ್ರೇಲರ್​ನಲ್ಲೇ ಚಿತ್ರದ ಹಾರರ್​ ಫೀಲಿಂಗ್​ ನೋಡಿ ಬೆಚ್ಚಿದವರ ಸಂಖ್ಯೆ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕೆ ಚಿತ್ರವನ್ನು ಹೊಗಳಿದ್ದರು.

    ಈಗ ರಮ್ಯಾ ಕೂಡಾ ಅಂಥದ್ದೇ ಮಾತು ಹೇಳಿದ್ದಾರೆ.

    ಟ್ರೇಲರ್ ಈಸ್ ಹಾಂಟಿಂಗ್ ಎಂಬ ಮಾತಿನಲ್ಲೇ ಆಕೆ ಚಿತ್ರದ ಹಾರರ್ ಫೀಲಿಂಗ್ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ.

    ಚಿತ್ರ ಹಾಲಿವುಡ್ ಸಿನಿಮಾ ಫೀಲಿಗ್ ಕೊಡುತ್ತೆ ಎಂದಿದ್ದರು ದರ್ಶನ್. ಚಿತ್ರ ಭಯ ಹುಟ್ಟಿಸುವಂತಿದೆ ಎನ್ನುತ್ತಿದ್ದಾರೆ ರಮ್ಯಾ. ಭಯ ಪಡೋಕೆ ಸಿದ್ಧರಾಗಿ. ಗುಂಡಿಗೆ ಗಟ್ಟಿಯಿರಲಿ.

    Related Articles :-

    ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

    Aake Censored

    Will It Be 9th Or 16th For Aake?

    Aake Trailer Released

    Eros International Presents Aake

    Chaitanya - Chiru Film Titled Aake 

     

     

  • ಆರ್ಕೆಸ್ಟ್ರಾ ಮೈಸೂರು ನೋಡಲು ಮರೆಯದಿರಿ.. ಮರೆತು ನಿರಾಶರಾಗದಿರಿ..

    ಆರ್ಕೆಸ್ಟ್ರಾ ಮೈಸೂರು ನೋಡಲು ಮರೆಯದಿರಿ.. ಮರೆತು ನಿರಾಶರಾಗದಿರಿ..

    ಹಲವರ ಕಥೆ ಸಿನಿಮಾ ಆಗಿದೆ. ಆದರೆ ಆರ್ಕೆಸ್ಟ್ರಾ ಕಟ್ಟುವ, ಕನಸು ಕಾಣುವ ಹುಡುಗನ ಕಥೆ ಸಿನಿಮಾ ಆಗುತ್ತಿರೋದು ಇದೇ ಮೊದಲು. ಅಂತಾದ್ದೊಂದು ಸಾಹಸಕ್ಕೆ ಕೈ ಹಾಕಿ ಗೆಲ್ಲುವ ಹುಕಿ ತೋರಿಸಿದ್ದಾರೆ ಡಾಲಿ ಧನಂಜಯ್ ಮತ್ತು ಕಾರ್ತಿಕ್ ಗೌಡ. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಷ್ಟೇ ಅಲ್ಲ, ಈ ಚಿತ್ರವನ್ನು ನೀವೂ ನೋಡಿ ಎಂದು ಖುದ್ದು ಪ್ರಧಾನಿ ಮೋದಿಗೇ ವೆಲ್ ಕಂ ಹೇಳಿದ್ದಾರೆ ದಿವ್ಯಸ್ಪಂದನ ಅಲಿಯಾಸ್ ರಮ್ಯಾ.

    ನರೇಂದ್ರ ಮೋದಿ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಮೈಸೂರಿಗೆ ಅವರು ಭೇಟಿ ನೀಡಿದ್ದು, ಮೈಸೂರಿನಲ್ಲಿ ಏನೇನು ಮಾಡಬಹುದು ಎಂದು ರಮ್ಯಾ ಅವರಿಗೆ ಸಲಹೆ ನೀಡಿದ್ದಾರೆ. ಆ ಸಲಹೆಗಳಲ್ಲಿ 'ಆರ್ಕೆಸ್ಟ್ರಾ ಮೈಸೂರು' ಟ್ರೈಲರ್ ನೋಡುವುದು ಕೂಡ ಒಂದು. 'ಮೈಸೂರಿನಲ್ಲಿರುವ ಆರ್ಕೆಸ್ಟ್ರಾ ಸಂಸ್ಕೃತಿ ತಿಳಿಯಬೇಕು ಎಂದರೆ ನೀವು ಮೈಸೂರಿನ ಪ್ರತಿಭಾವಂತರು ಮಾಡಿರುವ ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಟ್ರೈಲರ್ ಕೂಡ ನೋಡಬಹುದು' ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

    ಇಂದು ಒಂಥರಾ ಮೈಸೂರಿನವರದ್ದೇ ಸಿನಿಮಾ. ಹೀರೋ ಪೂರ್ಣಚಂದ್ರ ತೇಜಸ್ವಿ ಮೈಸೂರು. ನಿರ್ದೇಶನ ಸುನಿಲ್ ಮೈಸೂರು. ರಾಜಲಕ್ಷ್ಮಿ, ದಿಲೀಪ್ ರಾಜ್, ಮಹೇಶ್ ಕುಮಾರ್, ರವಿ ಹುಣಸೂರು.. ಹೀಗೆ ಎಲ್ಲರೂ ಬಹುತೇಕ ಮೈಸೂರಿನವರೇ. ಚಿತ್ರದ ಎಲ್ಲ ಹಾಡುಗಳನ್ನೂ ಬರೆದಿರುವುದು ಡಾಲಿ ಧನಂಜಯ್. ಸಂಗೀತ ರಘು ದೀಕ್ಷಿತರದ್ದು. ಕಥೆಗಾರರಲ್ಲಿ ನಿರ್ದೇಶಕ ಸುನಿಲ್ ಮೈಸೂರು ಜೊತೆಗೆ ಇರೋದು ಮತ್ತೊಂದು ಮೈಸೂರು ಪ್ರತಿಭೆ ನವೀನ್ ಸಜ್ಜು. ಒಟ್ಟಿನಲ್ಲಿ ಇದು ಮೈಸೂರಿನವರಿಂದ.. ಕನ್ನಡಿಗರಿಗಾಗಿ ಬರುತ್ತಿರೋ ಸಿನಿಮಾ.

  • ಇದು ರಮ್ಯಾ ಕ್ರೇಜ್ ಅಂದ್ರೆ..

    ಇದು ರಮ್ಯಾ ಕ್ರೇಜ್ ಅಂದ್ರೆ..

    ರಮ್ಯಾ ಚಿತ್ರರಂಗದಲ್ಲಿ ನಟಿಸಿ ದಶಕಗಳೇ ಆಗಿವೆ. ವಯಸ್ಸು 40 ದಾಟಿದೆ. ಆದರೆ ಮೋಹಕತಾರೆಯ ಮೇಲಿನ ಕನ್ನಡಿಗರ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ರಾಜಕೀಯಕ್ಕೆ ಹೋಗಿ ಕಾಂಗ್ರೆಸ್ ಸೇರಿ ಸಂಸದೆಯಾದಾಗ ರಾಜಕೀಯ ಕಾರಣಕ್ಕಾಗಿ ವಿರೋಧಿಸಿದವರಿದ್ದರು. ಆದರೆ ರಮ್ಯಾ ರಮ್ಯಾನೇ. ಅದೇನೇ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಸಮರ್ಥನೆಗೆ ಬರುವವರ ಸಂಖ್ಯೆ ಕಡಿಮೆಯೇನಿಲ್ಲ. ಈಗ ಮತ್ತೊಮ್ಮೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿರುವ ರಮ್ಯಾ ಅವರ ಸ್ಯಾಂಡಲ್‍ವುಡ್ ಕ್ವೀನ್ ಅನ್ನೋ ಬಿರುದು ಇನ್ನೂ ಹಾಗೆಯೇ ಇದೆ. ಅದು ಮತ್ತೊಮ್ಮೆ ಪ್ರೂವ್ ಆಗಿದ್ದು ದಾವಣಗೆರೆಯಲ್ಲಿ.

    ದಾವಣಗೆರೆಯಲ್ಲಿ ಭಾನುವಾರ ಹೆಡ್ ಬುಷ್ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಪ್ರೀ-ಈವೆಂಟ್ ಶೋ ಕೂಡಾ ನಡೆದಿತ್ತು. ಆ ಈವೆಂಟ್‍ನ ಮುಖ್ಯ ಆಕರ್ಷಣೆ ದಿವ್ಯ ಸ್ಪಂದನ. ಶೋಗೆ ಬಂದವರಿಗೆ ಹ್ಹೋ.. ಎಂದು ಚಪ್ಪಾಳೆ ತಟ್ಟಿ ಸ್ವಾಗತಿಸಿದರು ರಮ್ಯಾ. ಲಕ್ಕಿ ಹುಡುಗರಿಗೆ ಅಪ್ಪುಗೆಯ ಕಾಣಿಕೆಯೂ ಇತ್ತು. ಇದಾದ ಮೇಲೆ ಹೆಡ್ ಬುಷ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ರಮ್ಯಾ ನಾನು ಇವತ್ತು ಇಲ್ಲೇ ಇರ್ತೇನೆ. ಬರುವಾಗ ಬೆಣ್ಣೆ ದೋಸೆ ತಿನ್ನೋಕೆ ಆಗಲಿಲ್ಲ. ನಾಳೆ ಬೆಣ್ಣೆ ದೋಸೆ ತಿಂದ್ಕೊಂಡೇ ಹೋಗೋದು ಎಂದ್ರು. ಅದರಂತೆಯೇ ರಮ್ಯಾ ಸೋಮವಾರ ಬೆಳಗ್ಗೆ ಬೆಣ್ಣೆ ದೋಸೆ ತಿನ್ನೋಕೆ ಹೋದ್ರು.

    ರಮ್ಯಾ ದೋಸೆ ತಿಂತೀವಿ ಅಂದಿದ್ರು ಅಷ್ಟೆ. ಎಲ್ಲಿ ಅನ್ನೋದನ್ನ ಹೇಳಿರಲಿಲ್ಲ. ಆದರೆ ಫ್ಯಾನ್ಸ್ ಟ್ರ್ಯಾಕ್ ಮಾಡ್ತಾನೆ ಇದ್ರು. ಯಾವಾಗ ರಮ್ಯಾ ಕೊಟ್ಟೂರೇಶ್ವರ ಹೋಟೆಲ್‍ಗೆ ಬೆಣ್ಣೆ ದೋಸೆ ತಿನ್ನೋಕೆ ಬಂದಿದ್ದಾರೆ ಅನ್ನೋದು ಗೊತ್ತಾಯ್ತೋ.. ಆಗ  ಶುರುವಾಯ್ತು ನೋಡಿ ಅಭಿಮಾನಿಗಳ ದಂಡಯಾತ್ರೆ. ನೂರಾರು ಜನ ಹೋಟೆಲ್‍ನತ್ತ ಓಡಿ ಬಂದರು. ನೂರು ಸಾವಿರವಾಯ್ತು. ಕೊನೆಗೆ ಟ್ರಾಫಿಕ್ ಜಾಮ್ ಆಗುವಂತಾಯ್ತು. ರಮ್ಯಾ ಕ್ರೇಜ್ ಹಾಗಿದೆ.

  • ಇನ್ಮೇಲೆ ಸಿನಿಮಾ ರಂಗಕ್ಕೆ ಬರಲ್ಲ - ರಮ್ಯಾ

    politician ramya says no cinema

    ಚಿತ್ರನಟಿ ರಮ್ಯಾ ಈಗ ರಾಜಕಾರಣದಲ್ಲೇ ಫುಲ್ ಬ್ಯುಸಿ. ಚಿತ್ರರಂಗದಲ್ಲಿರುವಷ್ಟು ದಿನವೂ ಮೋಹಕ ತಾರೆ ಎಂಬ ಬಿರುದಿಗೆ ಪಾತ್ರರಾಗಿದ್ದ ರಮ್ಯಾ, ಈಗ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದಾರೆ. ರಮ್ಯಾ ಅವರ ಅಭಿನಯದ, ತೆರೆ ಕಂಡ ಕಟ್ಟಕಡೆಯ  ಸಿನಿಮಾ ನಾಗರಹಾವು. ಅದೂ ಕೂಡಾ ರಾಜಕೀಯ ಸೇರುವ ಮುನ್ನ ನಟಿಸಿದ್ದ ಸಿನಿಮಾ. 

    ಸಂಸದೆಯಾದ ಮೇಲೆ ಚಿತ್ರರಂಗದಿಂದ ಹೆಚ್ಚೂ ಕಡಿಮೆ ದೂರ ಇರುವ ರಮ್ಯಾ, ಇನ್ನು ಮುಂದೆ ಮತ್ತೆ ಬಣ್ಣ ಹಚ್ಚೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ದೆಹಲಿಯಲ್ಲೇ ಇರುವ ರಮ್ಯಾ, ಮಂಡ್ಯದಲ್ಲೂ ಕಾಣಿಸಿಕೊಂಡಿಲ್ಲ. ರಾಹುಲ್ ಗಾಂಧಿ ಬಂದಾಗಲೂ ಮಂಡ್ಯಕ್ಕೆ ಬರಲಿಲ್ಲ. 

    ದೆಹಲಿಯಲ್ಲಿ ನನ್ನನ್ನು ಯಾರೂ ಗುರುತಿಸೋದಿಲ್ಲ. ಹೀಗಾಗಿ ನಾನು ದೆಹಲಿಯಲ್ಲಿ ನನ್ನ ಖಾಸಗಿ ಜೀವನ ಎಂಜಾಯ್ ಮಾಡ್ತೇನೆ. ಸಿನಿಮಾ ನೋಡುತ್ತಿದ್ದರೆ, ಇವಳು ನಾನೇನಾ ಎನ್ನಿಸುತ್ತೆ. ಇನ್ನು ಮತ್ತೆ ಮೇಕಪ್ ಮಾಡಿಕೊಳ್ಳೋ ಮಾತೇ ಇಲ್ಲ ಎಂದಿದ್ದಾರೆ ರಮ್ಯಾ. 

    ಸ್ಸೋ.. ಇನ್ನು ರಮ್ಯಾ ಅವರನ್ನು ಮಾಜಿ ಚಿತ್ರನಟಿ ಎನ್ನಬಹುದಾ..? 

  • ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರಮ್ಯಾ : ಏನದು 8 ಕೋಟಿ ಕಥೆ?

    ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರಮ್ಯಾ : ಏನದು 8 ಕೋಟಿ ಕಥೆ?

    ದಿವ್ಯ ಸ್ಪಂದನಾ ರಮ್ಯಾ ಸಿಡಿದೆದ್ದಿದ್ದಾರೆ. ಸಿನಿಮಾದಲ್ಲೇ ಇರಲಿ, ವೈಯಕ್ತಿಕ ವಿಷಯವೇ ಇರಲಿ, ರಾಜಕೀಯವೇ ಇರಲಿ.. ತಮಗೆ ಅವಮಾನವಾಗುತ್ತಿದೆ ಎನಿಸಿದರೆ ಕ್ಷಣವೂ ತಡಮಾಡದೆ ಸಿಡಿದೇಳುವುದು ರಮ್ಯಾ ಸ್ಟೈಲ್. ಕೆಲವವೊಮ್ಮೆ ಎಡವಟ್ಟಾಗಿರೋದು ಹೌದಾದರೂ, ರಮ್ಯಾ ಇರೋದೇ ಹಾಗೆ. ರಮ್ಯಾ ಹಾಗಿದ್ದಾರೆ ಅನ್ನೋ ಕಾರಣಕ್ಕೇ ಅವರನ್ನು ಹಲವರು ಕೆಣಕುವ ಧೈರ್ಯ ಮಾಡೋದಿಲ್ಲ. ಆದರೆ ಈ ಬಾರಿ ರಮ್ಯಾ ಕೆಣಕಿರೋದು ಒಬ್ಬರನ್ನಲ್ಲ. ರಾಜ್ಯ ಕಾಂಗ್ರೆಸ್‍ನ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಅವರನ್ನ. ಇದರ ಹಿಂದೆ 8 ಕೋಟಿಯ ಕಥೆಯೂ ಇದೆ. ಕಥೆ ಶುರವಾಗಿದ್ದು ಹೀಗೆ..

    ಶುರುವಾಗಿದ್ದು ಇಲ್ಲಿಂದ..

    ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರೋ ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಅವರ ಹೆಸರು ಕೇಳಿಬಂದಿದೆ. ಹೆಸರು ಹೇಳಿದ್ದು ಸ್ವತಃ ಡಿಕೆಶಿ. ಅದು ದೊಡ್ಡದಾಗುತ್ತಿರೋವಾಗ ತಮ್ಮದೇ ಪಕ್ಷದ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಅಶ್ವತ್ಥ್ ನಾರಾಯಣ್ ಅವರನ್ನು ಭೇಟಿ ಮಾಡಿದ್ದಾರೆ ಎಂದರು ಡಿಕೆ. ಸಚಿವ ಅಶ್ವತ್ಥ್ ನಾರಾಯಣ್ ಅವರು ನೋ ಎಂದಿದ್ದರೆ ಓಕೆ, ಆದರೆ ಸ್ವತಃ ಅವರದ್ದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಇಲ್ಲ, ಡಿಕೆ ಹೇಳಿರೋದು ಸತ್ಯ ಅಲ್ಲ ಎಂದುಬಿಟ್ಟರು. ಸಿದ್ದರಾಮಯ್ಯ ಕೂಡಾ ಎಂ.ಬಿ.ಪಾಟೀಲ್ ಮಾತಿಗೇ ಸೈ ಎಂದರು. ಆಗ ಹೊರಬಿತ್ತು ರಮ್ಯಾ ಅವರ ಒಂದು ಸ್ಟೇಟ್‍ಮೆಂಟ್.

    ಬೇರೆ ಬೇರೆ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಾಮಾನ್ಯ. ಪಕ್ಷ ಬೇರೆಯಾಗಿದ್ದರೂ ಕುಟುಂಬಗಳ ನಡುವೆ ಸಂಬಂಧಗಳು ಇವೆ. ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಅಚ್ಚರಿ ಹುಟ್ಟಿಸುತ್ತಿದೆ. ಇದನ್ನೆಲ್ಲ ಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬಾರದೇ.. ಇಷ್ಟೇ ಸ್ಟೇಟ್‍ಮೆಂಟ್.

    ಟೂಲ್‍ಕಿಟ್ ಸೃಷ್ಟಿಯಾಯ್ತು..

    ಇಷ್ಟಾದ ಮೇಲೆ ಸುದ್ದಿ ತಣ್ಣಗಾಗಿದ್ದರೆ ಓಕೆ. ಇದರ ನಡುವೆ ರಮ್ಯಾ ಅವರನ್ನು ಟ್ರೋಲ್ ಮಾಡೋಕೆ ಟೂಲ್ ಕಿಟ್ ರೆಡಿಯಾಯ್ತು. ನಮ್ಮ ನಾಯಕರಿಂದಲೇ ಬೆಳೆದವರ ಬಗ್ಗೆ ಈ ರೀತಿ ಮಾಡೋದು ಸರೀನಾ? ಈಗ ನೀವೇ ಅವರಿಗೆ ಪಾಠ ಮಾಡ್ತಿದ್ದೀರಾ..? ಅನ್ನೋ ಅರ್ಥದ ಸಂದೇಶಗಳು ಸಿದ್ಧವಾದವು. ಕಾಂಗ್ರೆಸ್ ಕಚೇರಿಯಲ್ಲಿ ಸಿದ್ಧವಾದ ಅಂತಹ ಮೆಸೇಜುಗಳು ರಮ್ಯಾ ಅವರ ಕೈಗೇ ಸಿಕ್ಕಿತು. ಅಂದಹಾಗೆ ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾವನ್ನು ಸ್ಟ್ರಾಂಗ್ ಮಾಡಿದ್ದು ಇದೇ ರಮ್ಯಾ ಎನ್ನುವುದು ಗೊತ್ತಿರಲಿಲ್ಲವೆನೋ.. ಅದನ್ನು ಸ್ವತಃ ರಮ್ಯಾ ಟ್ವೀಟ್ ಮಾಡಿದರು. ನನ್ನನ್ನು ಬೆಳೆಸಿದ್ದು ರಾಹುಲ್ ಗಾಂಧಿಯೇ ಹೊರತು ಇನ್ಯಾರೂ ಅಲ್ಲ ಎಂದರು ರಮ್ಯಾ. ಬೆಂಕಿ ಹೊತ್ತಿಕೊಳ್ತು.

    ರಮ್ಯಾ-ಡಿಕೆ ಗಲಾಟೆಯಲ್ಲಿ ನಲಪ್ಪಾಡ್ ಬಂದಾಗ..

    ಇದಾದ ಮೇಲೆ ಡಿಕೆಶಿ ರಮ್ಯಾ ಅವರ ಬಗ್ಗೆ ಒಂದಿಷ್ಟು ವ್ಯಂಗ್ಯವಾಗಿಯೇ ರಿಯಾಕ್ಷನ್ ಕೊಟ್ಟರು. ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಕೂಡಾ ರಮ್ಯಾ ಅವರ ಬಗ್ಗೆ ಮಾತನಾಡಿದಾಗ ಜಾಮೀನಿನ ಮೇಲಿರೋ ಕಾಂಗ್ರೆಸ್ ಮುಖಂಡ ನಲಪ್ಪಾಡ್ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು ರಮ್ಯಾ. ಆ ಮೂಲಕ ವರ್ಷಗಳ ಹಿಂದೆ 2018ರಲ್ಲಿ ಇದೇ ನಲಪಾಡ್ ವಿದ್ವತ್ ಅನ್ನೋ ಯುವಕನ ಮೇಲೆ ಸಿಲ್ಲಿ ಕಾರಣಕ್ಕೆ ನಡೆಸಿದ್ದ ಹಲ್ಲೆಯನ್ನೂ ನೆನಪಿಸಿದರು. ಆ ಘಟನೆಯಲ್ಲಿ ಆ ಯುವಕನನ್ನು ರಕ್ಷಿಸಿದ್ದವರು ಗುರು ರಾಜಕುಮಾರ್. ಇನ್ನೊಂದು ಘಟನೆಯಲ್ಲಿ ಕಾರನ್ನು ಯರ್ರಾಬಿರ್ರಿ ಓಡಿಸಿ, ಆಕ್ಸಿಡೆಂಟ್ ಮಾಡಿ ಓಡಿಹೋಗಿದ್ದ ಘಟನೆಯನ್ನೂ ನೆನಪಿಸಿದರು. ಅಲ್ಲಿಗೆ ಯುದ್ಧ ಘೋಷಣೆಯಾಗಿತ್ತು.

    ಏನಿದು 8 ಕೋಟಿ ಕೇಸ್..?

    ಇದೆಲ್ಲಕ್ಕೂ ಕಾರಣ ಏನು ಎಂದು ಹುಡುಕಿದಾಗ ರಮ್ಯಾ ಅವರೇ ಆ ಕಥೆ ನೆನಪಿಸಿದರು. ನಾನು ಕಾಂಗ್ರೆಸ್ ಬಿಟ್ಟಾಗ ಕೆಲವರು ನಾನು 8 ಕೋಟಿ ಎತ್ತಿಕೊಂಡು ಹೋಗಿದ್ದೇನೆ ಎಂದು ಸುದ್ದಿ ವಾಹಿನಿಗಳಲ್ಲಿ ಸುದ್ದಿಯಾಗುವಂತೆ ನೋಡಿಕೊಂಡರು. ನನ್ನ ಗೌರವವನ್ನು ಹರಾಜು ಮಾಡಿದರು. ನಾನು ನನ್ನ ಪರ್ಸನಲ್ ಕಾರಣಕ್ಕೆ ಕಾಂಗ್ರೆಸ್ ಬಿಟ್ಟೆನೇ ಹೊರತು, ಇನ್ಯಾವುದೂ ಕಾರಣ ಇರಲಿಲ್ಲ. ಆವತ್ತು ನಾನು ಮಾಡಿದ ತಪ್ಪು ಮೌನವಾಗಿದ್ದು. ಇನ್ನೂ ಅದನ್ನು ಸಹಿಸಿಕೊಂಡಿರೋಕೆ ಸಾಧ್ಯವಿಲ್ಲ. ವೇಣುಗೋಪಾಲ್ ಅವರೇ.. ನೀವು ಬೆಂಗಳೂರಿಗೆ ಬಂದಾಗ ಈ ವಿಷಯವನ್ನು ಸ್ಪಷ್ಟಪಡಿಸಿ. ಇದೇ ನೀವು ನನಗೆ ಮಾಡಬಹುದಾದ ಉಪಕಾರ ಎಂದಿದ್ದಾರೆ ರಮ್ಯಾ.

  • ಡಾರ್ಲಿಂಗ್ ಕೃಷ್ಣ ಹೇಳಿದ್ದು ಸತ್ಯ : ರಮ್ಯಾ

    ಡಾರ್ಲಿಂಗ್ ಕೃಷ್ಣ ಹೇಳಿದ್ದು ಸತ್ಯ : ರಮ್ಯಾ

    ಇತ್ತೀಚೆಗೆ ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ``ಅಪ್ಪುಗೆ ನಾ ನಿನ್ನ ಮರೆಯಲಾರೆ ಚಿತ್ರವನ್ನು ರಿಕ್ರಿಯೇಟ್ ಮಾಡಬೇಕು ಎಂಬ ನಸ್ಸಿತ್ತು. ಡಾ.ರಾಜ್ ಪಾತ್ರದಲ್ಲಿ ಅಪ್ಪು ಹಾಗೂ ಲಕ್ಷ್ಮಿ ಪಾತ್ರದಲ್ಲಿ ರಮ್ಯಾ ನಟಿಸಬೇಕಿತ್ತು'' ಎಂದಿದ್ದರು.

    ನಾ ನಿನ್ನ ಮರೆಯಲಾರೆ. 1976ರಲ್ಲಿ ತೆರೆಗೆ ಬಂದಿದ್ದ ಸಿನಿಮಾ. ಟ್ರೆಂಡ್ ಸೆಟ್ಟರ್. ಕನ್ನಡದಲ್ಲಿ ಒಂದು ಪಕ್ಕಾ ಲವ್ ಸ್ಟೋರಿಗೆ ಮುನ್ನುಡಿ ಬರೆದಿದ್ದ ಸಿನಿಮಾ. ವೀರಸ್ವಾಮಿ ನಿರ್ಮಾಣ ಮಾಡಿದ್ದ ಚಿತ್ರದಲ್ಲಿ ರೊಮ್ಯಾಂಟಿಕ್ ಜೋಡಿಯಾಗಿ ರಾಜ್-ಲಕ್ಷ್ಮಿ ಮಿಂಚಿದ್ದರು. ಚಿತ್ರದ ಹಾಡುಗಳು ಇವತ್ತಿಗೂ ಚಿತ್ರರಸಿಕರ ಫೇವರಿಟ್. ಲೀಲಾವತಿ ಮಗಳ ಪ್ರೀತಿಗೇ ದ್ರೋಹ ಮಾಡುವ ಅಮ್ಮನಾಗಿ ನಟಿಸಿದ್ದರು. ಬೈಕ್ ರೇಸಿಂಗ್‍ನ್ನು ಕನ್ನಡದಲ್ಲಿ ತೆರೆಯ ಮೇಲೆ ತಂದ ಮೊದಲ ಸಿನಿಮಾ ಕೂಡಾ ನಾ ನಿನ್ನ ಮರೆಯಲಾರೆ. ಆ ಸಿನಿಮಾವನ್ನು ಮರುಸೃಷ್ಟಿ ಮಾಡುವ ಕನಸು ಕಂಡಿದ್ದರು ಅಪ್ಪು ಎಂಬ ಸುದ್ದಿ ಸಂಚಲನ ಮೂಡಿಸಿದ್ದು ಸುಳ್ಳಲ್ಲ.

    ಡಾರ್ಲಿಂಗ್ ಕೃಷ್ಣ ಹೇಳಿದ್ದು ಸತ್ಯ. ಇದೇ ಪ್ರಾಜೆಕ್ಟ್ ಬಗ್ಗೆ ನಾನು ಮತ್ತು ಅಪ್ಪು ಮಾತನಾಡಿದ್ವಿ ಎಂದಿದ್ದಾರೆ ರಮ್ಯಾ.

    ರಮ್ಯಾ ಈಗ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ಇದ್ದಿದ್ದರೆ ಪುನೀತ್ ಜೊತೆಗೆ ಸಿನಿಮಾ ಮಾಡುವ ಮೂಲಕ ಚಿತ್ರರಂಗಕ್ಕೆ ರೀ-ಎಂಟ್ರಿ ಮಾಡುತ್ತಿದ್ದೆ ಎಂದಿದ್ದರು ರಮ್ಯಾ.

    ಈಗ ಪುನೀತ್ ಲಕ್ಕಿಮ್ಯಾನ್ ಮೂಲಕ ಬೆಳ್ಳಿತೆರೆಯ ಮೇಲೆ ಕೊನೆಯ ಬಾರಿಗೆ ನಟಿಸಿದ್ದಾರೆ. ನವೆಂಬರ್‍ನಲ್ಲಿ ಗಂಧದಗುಡಿ ರಿಲೀಸ್ ಆದರೂ, ಅದು ಡಾಕ್ಯುಮೆಂಟರಿಯೇ ಹೊರತು ಸಿನಿಮಾ ಅಲ್ಲ.

  • ಡಾಲಿ ಜೊತೆ ರಮ್ಯಾ ಉತ್ತರಕಾಂಡ : ಸುದ್ದಿ ಸತ್ಯಾನಾ?

    ಡಾಲಿ ಜೊತೆ ರಮ್ಯಾ ಉತ್ತರಕಾಂಡ : ಸುದ್ದಿ ಸತ್ಯಾನಾ?

    ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಕ್ರೇಜ್ ಕಿಂಚಿತ್ತೂ ಕಮ್ಮಿಯಾಗಿಲ್ಲ. ಇವತ್ತಿಗೂ ರಮ್ಯಾ ಎಂದರೆ ಥ್ರಿಲ್ಲಾಗುವವರಿಗೆ ರಮ್ಯಾ ಸ್ವೀಟ್ ಸುದ್ದಿಯನ್ನೂ ಕೊಟ್ಟು ಬೆನ್ನಲ್ಲೇ ಶಾಕ್ ಕೊಟ್ಟಿದ್ದರು. ಸ್ವತಃ ರಮ್ಯಾ ನಿರ್ಮಾಣ ಮಾಡುತ್ತಿರುವ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿ ಚಿತ್ರದಲ್ಲಿ ನಟಿಸೋದಾಗಿ ಹೇಳಿದ್ದರು. ರಿಷಬ್, ರಮ್ಯಾ ಸೇರಿ ಎಲ್ಲರೂ ಪಕ್ಕಾ ಎಂದಿದ್ದರು. ಸ್ವತಃ ತಾವೇ ಘೋಷಿಸಿಕೊಂಡಿದ್ದ ಚಿತ್ರವನ್ನು ಬಿಟ್ಟ ರಮ್ಯಾ ತಮ್ಮ ಜಾಗಕ್ಕೆ ಬೇರೊಬ್ಬರನ್ನು ಕರೆತಂದಿದ್ದರು. ಸಕುಟುಂಬ ಸಮೇತ ಚಿತ್ರದಲ್ಲಿ ನಟಿಸಿದ್ದ ಸಿರಿ ರವಿಕುಮಾರ್ ರಮ್ಯಾ ಸ್ಥಾನಕ್ಕೆ ರೀ-ಪ್ಲೇಸ್ ಆಗಿದ್ದರು. ಈಗ ಮತ್ತೊಮ್ಮೆ ಸುದ್ದಿಯೆದ್ದಿದೆ.

    ರಮ್ಯಾ ಡಾಲಿ ಧನಂಜಯ್ ಜೊತೆಗಿನ ಉತ್ತರಕಾಂಡ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರಂತೆ. ಡಾಲಿ ಧನಂಜಯ್ ನಟಿಸುತ್ತಿರುವ ಉತ್ತರಕಾಂಡ ಚಿತ್ರಕ್ಕೆ ನಾಳೆ ಅಂದರೆ ನವೆಂಬರ್ 6ರಂದು ಸ್ಕ್ರಿಪ್ಟ್ ಪೂಜೆಯಿಂದೆ. ಇದು ರತ್ನನ್ ಪ್ರಪಂಚ ಟೀಂ ಮತ್ತೊಮ್ಮೆ ಒಂದಾಗಿರೋ ಸಿನಿಮಾ. ಡಾಲಿ ಧನಂಜಯ್ ಜೊತೆ ಯೋಗಿ ಬಿ.ರಾಜ್ ಮತ್ತು ಕಾರ್ತಿಕ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶಕರು. ಉತ್ತರ ಕರ್ನಾಟಕದಲ್ಲಿಯೇ ಬಹುತೇಕ ಶೂಟಿಂಗ್ ನಡೆಯಲಿದ್ದು ಚಿತ್ರತಂಡದಲ್ಲಿ ರಮ್ಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    ಸುದ್ದಿ ಸತ್ಯವಾ ಸುಳ್ಳಾ ಅನ್ನೋದನ್ನ ತಿಳ್ಕೊಳ್ಳೋಕೆ ತುಂಬಾ ದಿನ ಕಾಯಬೇಕಿಲ್ಲ. ನಾಳೆಯ ಸ್ಕ್ರಿಪ್ಟ್ ಪೂಜೆ ಹೊತ್ತಿಗೆ ಚಿತ್ರತಂಡ ಅನೌನ್ಸ್ ಮಾಡುವ ಸಾಧ್ಯತೆಗಳಿವೆ. ಅಲ್ಲಿಯವರೆಗೂ ಕಾಯಬೇಕಷ್ಟೆ. ರಮ್ಯಾ ಅಂದ್ರೆ ಸೆನ್ಸೇಷನ್ ಕ್ರಿಯೇಟ್ ಮಾಡ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.

  • ಡಾಲಿ ಟೀಂಗೆ ರಮ್ಯಾ ಎಂಟ್ರಿ : ಹೊಂಬಾಳೆಯೋ..? ಕೆಆರ್`ಜಿ ಸ್ಟುಡಿಯೋ ಸಿನಿಮಾನೋ?

    ಡಾಲಿ ಟೀಂಗೆ ರಮ್ಯಾ ಎಂಟ್ರಿ : ಹೊಂಬಾಳೆಯೋ..? ಕೆಆರ್`ಜಿ ಸ್ಟುಡಿಯೋ ಸಿನಿಮಾನೋ?

    ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರೋದು ಹೆಚ್ಚೂ ಕಡಿಮೆ ಕನ್‍ಫರ್ಮ್ ಆಗಿದೆ. ವಾಪಸ್ ಬರುವುದಾದರೆ ಪುನೀತ್ ಚಿತ್ರದಲ್ಲೇ ಬರುತ್ತೇನೆ ಎಂದು ಓಪನ್ ಆಗಿ ಹೇಳಿದ್ದರು ರಮ್ಯಾ. ಮೂಲಗಳ ಪ್ರಕಾರ ದ್ವಿತ್ವ ಚಿತ್ರಕ್ಕೆ ರಮ್ಯಾ ಓಕೆ ಎಂದೂ ಆಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಈಗ ಮತ್ತೊಮ್ಮೆ ರಮ್ಯಾ ಚಿತ್ರರಂಗಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.

    ಇತ್ತೀಚೆಗೆ ರಮ್ಯಾ ಕನ್ನಡ ಚಿತ್ರಗಳ ಬಗ್ಗೆ ವಿಶೇಷ ಪ್ರೀತಿ ತೋರಿಸುತ್ತಿದ್ದಾರೆ. ಬಹುಶಃ ರಾಜಕೀಯದ ಜಂಜಾಟಗಳಿಂದ ಮುಕ್ತರಾದ ಬಳಿಕ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ. ರಮ್ಯಾ 777 ಚಾರ್ಲಿ ಚಿತ್ರದ ಬಗ್ಗೆ ಸುದೀರ್ಘ ರಿವ್ಯೂ ಕೊಟ್ಟಿದ್ದರು. ಕೆಲವು ಚಿತ್ರಗಳನ್ನು ಪ್ರಮೋಟ್ ಮಾಡಿದ್ದರು. ಡಾಲಿ ಧನಂಜಯ್ ಅವರ ಆರ್ಕೆಸ್ಟ್ರಾ ಮೈಸೂರು ಚಿತ್ರದ ಟೀಸರ್ ರಿಲೀಸ್ ಮಾಡಿ, ಅದನ್ನು ನೇರವಾಗಿ ನರೇಂದ್ರ ಮೋದಿಯವರಿಗೇ ಟ್ಯಾಗ್ ಮಾಡಿ ಹುಬ್ಬೇರುವಂತೆ ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಹೊಯ್ಸಳ ಸೆಟ್`ನಲ್ಲಿ ಪ್ರತ್ಯಕ್ಷರಾಗಿದ್ದಾರೆ.

    ಅಂದಹಾಗೆ ಹೊಯ್ಸಳ, ಕೆಆರ್`ಜಿ ಸ್ಟುಡಿಯೋಸ್ ಸಿನಿಮಾ. ಕಾರ್ತಿಕ್ ಗೌಡ ಬ್ಯಾನರ್ ಚಿತ್ರವಿದು. ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೇ ನಟಿಸುತ್ತಿರೋ ಸಿನಿಮಾ. ಈಗ ಕಾರ್ತಿಕ್ ಗೌಡ ಅವರ ಚಿತ್ರದ ಸೆಟ್ಟಿಗೆ ಭೇಟಿ ಕೊಟ್ಟಿರೋ ರಮ್ಯಾ ಒಂದು ಕುತೂಹಲವನ್ನಂತೂ ಹುಟ್ಟುಹಾಕಿದ್ದಾರೆ.

    ಮೂಲಗಳ ಪ್ರಕಾರ ರಮ್ಯಾ ಕೆಆರ್`ಜಿ ಸ್ಟುಡಿಯೋಸ್ ಅವರ ಜೊತೆ ಕಥೆಯೊಂದರ ಡಿಸ್ಕಷನ್`ನಲ್ಲಿದ್ದಾರೆ. ಆದರೆ ಇಲ್ಲಿ ಇನ್ನೂ ಒಂದು ಕನ್‍ಫ್ಯೂಷನ್ ಇದೆ. ಕಾರ್ತಿಕ್ ಗೌಡ ಹೊಂಬಾಳೆಯ ಬೇರುಗಳಲ್ಲಿ ಒಬ್ಬರು. ಕಾರ್ತಿಕ್ ಗೌಡ ಅವರ ಟೀಮಿನ ಜೊತೆ ಇರೋ ರಮ್ಯಾ, ಕೆಆರ್`ಜಿ ಸ್ಟುಡಿಯೋ ಸಿನಿಮಾ ಮಾಡ್ತಾರಾ? ಅಥವಾ ಹೊಂಬಾಳೆ ಜೊತೆ ಸಿನಿಮಾ ಮಾಡ್ತಾರಾ? ನಿರೀಕ್ಷೆಗಳು ಚಾಲ್ತಿಯಲ್ಲಿವೆ.

  • ಡಾಲಿ ಲಕ್ಕು..ರಮ್ಯಾ ಕಮ್ ಬ್ಯಾಕು : ಉತ್ತರಕಾಂಡ

    ಡಾಲಿ ಲಕ್ಕು..ರಮ್ಯಾ ಕಮ್ ಬ್ಯಾಕು : ಉತ್ತರಕಾಂಡ

    ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟ, ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ.. ನಿರ್ದೇಶಕ ರೋಹಿತ್ ಪದಕಿ ಅವರ ಪ್ರಕಾರ ಉತ್ತರಕಾಂಡ ಚಿತ್ರದ ಕಥೆಯ ಎಳೆ ಇದು. ಈ ಚಿತ್ರದ ಮೂಲಕವೇ ರಮ್ಯಾ ಮತ್ತೊಮ್ಮೆ ತೆರೆ ಮೇಲೆ ನಟಿಸುತ್ತಿದ್ದಾರೆ. ಈ ಸಿನಿಮಾನೇ ಒಂದು ಸೆಲಬ್ರೇಷನ್. ಉತ್ತರಕರ್ನಾಟಕದ ಅಧ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ ಎಂದಿದ್ದಾರೆ ರೋಹಿತ್ ಪದಕಿ. ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ ಅನ್ನೋ ಟ್ಯಾಗ್‍ಲೈನ್ ಇರೋ ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರಮ್ಯಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ಅಂದಹಾಗೆ ರತ್ನನ್ ಪ್ರಪಂಚ ಚಿತ್ರಕ್ಕೇ ರಮ್ಯಾಗೆ ಆಫರ್ ಬಂದಿತ್ತಂತೆ. ಆಗ ಕಾರಣಾಂತರಗಳಿಂದ ಮಾಡೋಕೆ ಆಗಿರಲಿಲ್ಲ. ಈ ಬಾರಿ ಮಿಸ್ ಮಾಡಲಿಲ್ಲ. ಚಿತ್ರತಂಡದವರು ತೋರುತ್ತಿರುವ ಪ್ರೀತಿ, ಬಾಂಧವ್ಯ ನೋಡುತ್ತಿದ್ದರೆ ನಾನು ಒಳ್ಳೆಯ ಜಾಗದಲ್ಲಿದ್ದೇನೆ ಅನ್ನೋ ಫೀಲಿಂಗ್ ಇದೆ ಎಂದಿದ್ದಾರೆ ರಮ್ಯಾ.

    ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ ಕೊಡುಗೆ ನೀಡಿದಾಗ ಅದ್ಭುತಗಳು ಸಂಭವಿಸುತ್ತವೆ. ಇದು ನನ್ನ ನಂಬಿಕೆ. ಅದೇ  ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು 'ರತ್ನನ್ ಪ್ರಪಂಚ'. ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ  ಪ್ರಯತ್ನ, ಕಾರ್ತಿಕ್ ಹಾಗು ಯೋಗಿ ಯಂತ ನಿರ್ಮಾಪಕ ಘಟರ ಜೊತೆ ಸತತವಾಗಿ ಮೂರನೆ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ 'ಉತ್ತರಕಾಂಡ. ರಮ್ಯಾ ಅವರ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ'" ಎಂದಿದ್ದಾರೆ ಧನಂಜಯ. ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಮೆರೆಸಿ  ಎಂದು ಮನವಿ ಮಾಡಿದ್ದಾರೆ ಧನಂಜಯ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದ್ದು ಇನ್ನಷ್ಟು ತಾರೆಯರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಪೂಜೆಯಷ್ಟೇ ಈಗ ನೆರವೇರಿದೆ. ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಮತ್ತು ಡಾಲಿ ಮತ್ತೊಮ್ಮೆ ಜೊತೆಗೂಡಿದ್ದು ಚಿತ್ರತಂಡ ಚಿತ್ರೀಕರಣವನ್ನೇ ದೊಡ್ಡ ಮಟ್ಟದಲ್ಲಿ ಸೆಲಬ್ರೇಟ್ ಮಾಡುತ್ತಿದೆ.

  • ಡಾಲಿ, ಅಮೃತಾ ಜೋಡಿಗೆ ಉಘೇ ಎಂದರು ರಮ್ಯಾ

    ಡಾಲಿ, ಅಮೃತಾ ಜೋಡಿಗೆ ಉಘೇ ಎಂದರು ರಮ್ಯಾ

    ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಹೊಯ್ಸಳದಲ್ಲಿ ಡಾಲಿ ಮತ್ತು ಅಮೃತಾ ಅವರದ್ದು ಗಂಡ-ಹೆಂಡತಿ ಪಾತ್ರ. ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಬಡವ ರಾಸ್ಕಲ್ ಚಿತ್ರಗಳಿಗಿಂತಲೂ ಅದ್ಭುತವಾಗಿ ತೆರೆಯ ಮೇಲೆ ಬಂದಿದೆ ಜೋಡಿ. ಡಾಲಿ-ಅಮೃತಾರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಪ್ರೇಕ್ಷಕರಷ್ಟೇ ಅಲ್ಲ, ಮೋಹಕತಾರೆ ರಮ್ಯಾ ಕೂಡಾ ಸಿನಿಮಾ ನೋಡಿ ಜೋಡಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

    ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಹೇಗಿದೆ? ನೀವೂ ಎಷ್ಟು ಮಾರ್ಕ್ಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ ಎಂದಿದ್ದಾರೆ.

    ಹೊಯ್ಸಳ ಚಿತ್ರದ ಕಥೆ ಇಷ್ಟು. ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿಯ ಹುಡುಕಾಟಕ್ಕೆ ಖಡಕ್ ಅಧಿಕಾರಿ ಗುರುದೇವ್ ಬರುತ್ತಾನೆ. ಅಲ್ಲಿಂದ ಮುಂದೆ ಮರಳು ಮಾಫಿಯಾ, ಪೀತಿ, ಮರ್ಯಾದಾ ಹತ್ಯೆ..ಎಲ್ಲವೂ ಬರುತ್ತವೆ. ಈ ಎಲ್ಲವನ್ನೂ ಅದ್ಭುತವಾಗಿ ಬ್ಲೆಂಡ್ ಮಾಡಿ ಒಂದರೊಳಗೊಂದು ಹೆಣೆದಿರುವ ನಿರ್ದೇಶಕರ ಜಾಣ್ಮೆಗೆ ತಲೆಗೂಗಬೇಕು. ಹಾಗೆ ನೋಡಿದರೆ ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್ ಪಾತ್ರಕ್ಕೆ ಹೆಚ್ಚು ಸ್ಪೇಸ್ ಇಲ್ಲ. ಆದರೆ ಇರುವಷ್ಟು ಹೊತ್ತಿನಲ್ಲಿ ತೆರೆಯನ್ನು ಆವರಿಸಿಕೊಂಡು ಬಿಡುತ್ತಾರೆ ಅಮೃತಾ ಅಯ್ಯಂಗಾರ್. ಕಣ್ಣಲ್ಲೇ ಕೊಂದುಬಿಡುತ್ತಾರೆ.

    ನಿರ್ದೇಶಕ ವಿಜಯ್ ಚೆಂದದ ಕಥೆಯನ್ನು ಸುಂದರವಾಗಿ ಅದ್ಧೂರಿಯಾಗಿ ಕಮರ್ಷಿಯಲ್ಲಾಗಿ ಹೇಳಿದ್ದಾರೆ. ಬಾಕ್ಸಾಫೀಸ್ ತುಂಬಿ ತುಳುಕುತ್ತಿದ್ದು, ನಿರ್ಮಾಪಕ ಯೋಗಿ ಬಿ.ರಾಜ್ ಫುಲ್ ಹ್ಯಾಪಿ.

  • ಡ್ರಗ್ಸ್ ಕೇಸ್ : ಬಾಯ್ತೆರೆದ ರಮ್ಯಾ ಬುದ್ದಿ ಹೇಳಿದ್ದು ಯಾರಿಗೆ..?

    ಡ್ರಗ್ಸ್ ಕೇಸ್ : ಬಾಯ್ತೆರೆದ ರಮ್ಯಾ ಬುದ್ದಿ ಹೇಳಿದ್ದು ಯಾರಿಗೆ..?

    ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ ಡ್ರಗ್ಸ್ ವಿಚಾರದಲ್ಲಿ ಮೊದಲ ಬಾರಿಗೆ ಬಾಯಿತೆರೆದಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪ್ರತ್ಯಕ್ಷವಾಗಿರೋ ರಮ್ಯಾ ನಿಧಾನವಾಗಿ ಆಕ್ಟಿವ್ ಆಗುತ್ತಿದ್ದಾರೆ. ರಮ್ಯಾ ಕೆಲವೊಂದು ಬುದ್ದಿಮಾತುಗಳನ್ನೂ ಹೇಳಿದ್ದಾರೆ. ಆ ಬುದ್ದಿಮಾತುಗಳೆಲ್ಲ ಬಾಲಿವುಡ್‍ನಲ್ಲಿ ಬೆಂಕಿಯನ್ನೇ ಹೊತ್ತಿಸಿರುವ ನಟಿ ಕಂಗನಾ ರಣಾವತ್‍ಗೆ ಅನ್ನೋದು ವಿಶೇಷ.

    ನೀವು ಡ್ರಗ್ಸ್ ವ್ಯಸನಿಗಳ ವಿವರ ಬಹಿರಂಗಪಡಿಸುವ ಮಾತನಾಡುತ್ತಿದ್ದೀರಿ. ಸಾಧ್ಯವಾದರೆ ಅದರ ಬದಲು ಅಂತಹವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿ. ದೀಪಿಕಾ ಪಡುಕೋಣೆ ಅವರನ್ನು ನೋಡಿ ಕಲಿಯಿರಿ. ನಾನೂ ಡ್ರಗ್ಸ್ ವ್ಯಸನಿಯಾಗಿದ್ದೆ ಎಂದು ಒಪ್ಪಿಕೊಂಡು ಧೈರ್ಯ ತೋರಿಸಿದ್ದೀರಿ. ನೀವು ಆ ವ್ಯಸನದಿಂದ ಮುಕ್ತರಾಗಿದ್ದು ಹೇಗೆ ಅನ್ನೊದನ್ನು ಬಹಿರಂಗಪಡಿಸಿ. ಖಿನ್ನತೆಯಿಂದ ತಾನು ಹೇಗೆ ಹೊರಬಂದೆ ಅನ್ನೋದನ್ನು ಹೇಳಿಕೊಂಡು ಹಲವರಿಗೆ ಮಾದರಿಯಾಗಿರೋ ದೀಪಿಕಾ ಪಡುಕೋಣೆ ಅವರನ್ನು ಅನುಸರಿಸಿ' ಎಂದು ಸಲಹೆ ನೀಡಿದ್ದಾರೆ ರಮ್ಯಾ.

  • ದರ್ಶನ್ ಮದಕರಿಗೆ ರಮ್ಯಾ ನಾಯಕಿ..!

    will eamya return with darshan's madakari

    ರಾಜಕಾರಣಕ್ಕೆ ಹೋಗಿ, ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಮಾಜಿ ನಟಿಯೇ ಆಗಿಹೋಗಿದ್ದ ರಮ್ಯಾ, ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ.

    ಈ ಸುದ್ದಿ ನಿಜವೇ ಆಗಿಬಿಟ್ಟರೆ, ದತ್ತ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿದ್ದ ರಮ್ಯಾ, 12 ವರ್ಷಗಳ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್‍ಗೆ ನಾಯಕಿಯಾಗುತ್ತಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನಲ್ಲಿ ಬೊಂಬಾಟ್ ಚಿತ್ರದ ನಾಯಕಿಯಾಗಿದ್ದ ರಮ್ಯಾ, ರಾಕ್‍ಲೈನ್ ಅವರ ಬೀಗರಾದ ಮುನಿರತ್ನ ಅವರ ಕಠಾರಿವೀರ ಸುರುಸುಂದರಾಂಗಿ ಚಿತ್ರದಲ್ಲಿ ಸುರಸುಂದರಿಯಾಗಿ ಕಾಣಿಸಿಕೊಂಡಿದ್ದರು. ಮುನಿರತ್ನ ಕಾಂಗ್ರೆಸ್ ಶಾಸಕರು.  ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಹೀಗಾಗಿ ರಮ್ಯಾ ಮತ್ತೆ ಬಂದರೂ ಅಚ್ಚರಿಯಿಲ್ಲ.

    ರಮ್ಯಾ ಅಭಿನಯದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ನಾಗರಹಾವು. ಆ ಚಿತ್ರದಲ್ಲಿ ನಾಗಕನ್ನಿಕೆಯಾಗಿ ಕಾಣಿಸಿಕೊಂಡಿದ್ದ ರಮ್ಯಾ, ಮದಕರಿ ನಾಯಕಿಯಾಗ್ತಾರಾ..? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

  • ದಿಲ್ ಕಾ ರಾಣಿ ರಮ್ಯಾ ವಾಪಸ್ ಬಂದ್ರಾ..?

    will ramya return

    ಸ್ಯಾಂಡಲ್‍ವುಡ್ ಕ್ವೀನ್ ಎಂದೇ ಹೆಸರಾಗಿದ್ದ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಬಂದ್ರಾ..? ರಾಜಕೀಯದಿಂದ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿರುವ ರಮ್ಯಾ ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಿದ್ರಾ..? ಇಂಥಾದ್ದೊಂದು ಕುತೂಹಲ ಮೂಡೋಕೆ ಕಾರಣವಾಗಿರೋದು ದಿಲ್ ಕಾ ರಾಜಾ ಸಿನಿಮಾ.

    ದಿಲ್ ಕಾ ರಾಜಾ ರಮ್ಯಾ ನಟಿಸಿರುವ ಕೊನೆಯ ಸಿನಿಮಾ. ವಿಶೇಷ ಅಂದ್ರೆ, ಆ ಚಿತ್ರದ ಶೂಟಿಂಗ್ ಇನ್ನೂ ಮುಗಿಯುವ ಮೊದಲೇ ರಮ್ಯಾ ಚಿತ್ರದಿಂದ ಹೊರನಡೆದಿದ್ದರು. ಪ್ರಜ್ವಲ್ ದೇವರಾಜ್ ಹೀರೋ ಆಗಿದ್ದ ಸಿನಿಮಾ ಅಲ್ಲಿಗೇ ನಿಂತು ಹೋಗಿತ್ತು. ಈಗ ಇದ್ದಕ್ಕಿದ್ದಂತೆ ಆ ಚಿತ್ರದ ಸುದ್ದಿ ಹೊರಬಿದ್ದಿದೆ. ಚಿತ್ರದ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆಯಂತೆ.

    ಹಾಗಾದರೆ ರಮ್ಯಾ ವಾಪಸ್ ಬಂದ್ರಾ..? ವರ್ಷಗಳ ಹಿಂದೆ ನಿಂತು ಹೋಗಿದ್ದ ಸಿನಿಮಾ ಮತ್ತೆ ಶುರುವಾಗುತ್ತಾ.? ಹಾಗೆ ಶುರುವಾಗೋ ಚಿತ್ರದಲ್ಲಿ ರಮ್ಯಾ ಇರ್ತಾರಾ..? ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

  • ನಟಿ ರಮ್ಯಾಗೆ ಕನ್ನಡ ಬರಲ್ವಾ..?

    ನಟಿ ರಮ್ಯಾಗೆ ಕನ್ನಡ ಬರಲ್ವಾ..?

    ಸ್ಯಾಂಡಲ್`ವುಡ್ ಕ್ವೀನ್, ಮೋಹಕ ತಾರೆ, ಪದ್ಮಾವತಿ.. ಹೀಗೆ ಅಭಿಮಾನಿಗಳಿಂದ ಕರೆಸಿಕೊಳ್ಳೋ ನಟಿ ರಮ್ಯಾ, ವಯಸ್ಸು 40 ದಾಟಿದ್ದರೂ ಸೃಷ್ಟಿಸಿರೋ ಕ್ರೇಜ್ ಬೇರೆ. ಹೀಗಾಗಿಯೇ ಈ ಬಾರಿ ಶುರುವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ನಟಿ ರಮ್ಯಾ ಬಂದಿದ್ದರು. ನಟಿಯಾಗಿ, ರಾಜಕಾರಣಿಯಾಗಿ, ಒಮ್ಮೆ ಸಂಸದೆಯಾಗಿ, ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಮಹತ್ವದ ಹುದ್ದೆ ನಿರ್ವಹಿಸಿ.. ಇದೀಗ ಮತ್ತೊಮ್ಮೆ ಸಿನಿಮಾ ರಂಗಕ್ಕೆ ನಿರ್ಮಾಪಕಿಯಾಗಿ ಬಂದಿರುವ ರಮ್ಯಾ ಸಾಧಕರ ಕುರ್ಚಿಯಲ್ಲಿ ಕೂರಲು ಬೇಕಾದ ಅರ್ಹತೆಯನ್ನೇನೋ ಹೊಂದಿದ್ದರು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

    ಅಭಿ ಚಿತ್ರದ ಮೂಲಕ ಪುನೀತ್ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಬಂದ ರಮ್ಯಾ,  ಪಾರ್ವತಮ್ಮ ರಾಜಕುಮಾರ್ ಬಗ್ಗೆ ಅಭಿಮಾನದಿಂದ ಮಾತನಾಡಿದರು. ಶಿವಣ್ಣ ತಮ್ಮ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದು ನೋಡಿ ಥ್ರಿಲ್ ಆದರು. ತಮ್ಮ ಬಾಲ್ಯ, ಕಾಲೇಜು ದಿನ, ರಾಜಕಾರಣ, ರಾಹುಲ್ ಗಾಂಧಿ ನೀಡಿದ ಧೈರ್ಯ.. ಹೀಗೆ ಎಲ್ಲವನ್ನೂ ಹೇಳಿಕೊಂಡರು. ಆದರೆ ಟ್ರೋಲ್ ಆಗಿದ್ದು ಮಾತ್ರ ವಿಪರೀತ ಎನ್ನುವ ಇಂಗ್ಲಿಷಿಗೆ.

    ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ಝೀ ಕನ್ನಡದ ರಾಘವೇಂದ್ರ ಹುಣಸೂರು ಅವರಿಗೆ ಒಂದು ಪ್ರಶ್ನೆ ಬಂದಿತ್ತು. ಡಾ.ಬ್ರೊ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆತನ್ನಿ ಎಂಬ ಅಭಿಪ್ರಾಯ ಕೇಳಿತ್ತು. ಆ ಬಗ್ಗೆ ಮಾತನಾಡುತ್ತಾ ಟಿವಿ ನೋಡುವ ಹಿರಿಯರಿಗೆ, ಅಜ್ಜ-ಅಜ್ಜಿಯರಿಗೆ ಡಾ.ಬ್ರೋ ಗೊತ್ತಿಲ್ಲ ಎಂದಿದ್ದರು ರಾಘವೇಂದ್ರ. ಅದನ್ನೇ ಇಟ್ಟುಕೊಂಡು ಮೊದಲು ಶುರುವಾದ ಟ್ರೋಲ್ ನಟಿ ರಮ್ಯಾಗೆ ಕನ್ನಡ ಬರಲ್ವಾ ಎಂಬಲ್ಲಿಗೆ ಹೋಗಿದೆ.

    ನಮ್ಮ ಅಜ್ಜ-ಅಜ್ಜಿಯರಿಗೂ ಇಂಗ್ಲಿಷ್ ಬರಲ್ಲ ಎಂದು ಶುರುವಾದ ಟ್ರೋಲ್ ಕೊನೆಗೆ ಬಂದು ನಿಂತಿದ್ದು ಕನ್ನಡದ ನಟಿಯಾಗಿ, ಕನ್ನಡತಿಯಾಗಿ, ಕರ್ನಾಟಕದ ಸಂಸದೆಯೂ ಆಗಿದ್ದ, ಮಂಡ್ಯದ ಹುಡುಗಿಗೆ ಕನ್ನಡ ಬರಲ್ಲ ಅಂದ್ರೆ ಏನರ್ಥ ಎಂಬ ಮಟ್ಟಕ್ಕೆ ಬಂದು ನಿಂತಿದೆ. ನೆಟ್ಟಿಗರ ಕಮೆಂಟುಗಳಂತೂ ವಿಭಿನ್ನವಾಗಿವೆ.

    ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದ್ರು

    ಬರೀ ಇಂಗ್ಲಿಷ್ ಮಾತಾಡೋದೇ ಆಯ್ತು. ಸಾಧನೆ ಮಾಡಿರೋದು ಇಲ್ಲಿನ ಭಾಷೆಯಿಂದ…

    ಈ ಸೀಸನ್ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ? ಕನ್ನಡ ಸಬ್ಟೈಟಲ್ ಆದ್ರೂ ಹಾಕ್ರೋ ಕೆಳಗೆ..

    ಇದು ವೀಕೆಂಡ್ ವಿತ್ ರಮೇಶಾ..? ರಮೇಶ್ ಹಾ? ಅಥವಾ ವೀಕೆಂಡ್ ವಿತ್ ಇಂಗ್ಲಿಷಾ..?

    ನಿಮ್ಮ ಮೇಲೆ ಪ್ರೀತಿ ಅಭಿಮಾನ ಜಾಸ್ತಿ ಇದೆ. ಆದರೆ ನೀವು ಕನ್ನಡ ಜಾಸ್ತಿ ಬಳಸದೆ ಇದ್ದದ್ದು ಖಂಡಿತ ತಪ್ಪು..

    ಹೀಗೆ ಚಿತ್ರವಿಚಿತ್ರವಾಗಿ ರಮ್ಯಾ ಅವರನ್ನು ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನೂ ಲೇವಡಿ ಮಾಡುತ್ತಿದ್ದಾರೆ.

  • ನಾಪತ್ತೆಯಾಗಿದ್ದ ರಮ್ಯಾ ಮತ್ತೆ ಪ್ರತ್ಯಕ್ಷ

    divya spandana back on social media

    ನಟಿ, ಮಾಜಿ ಸಂಸದೆ, ಕಾಂಗ್ರೆಸ್ ನಾಯಕಿ ರಮ್ಯಾ ಎಲ್ಲಿ ಹೋದರು..? ಎಲ್ಲಿದ್ದಾರೆ..? ಹೇಗಿದ್ದಾರೆ..? ಏನು ಮಾಡುತ್ತಿದ್ದಾರೆ..? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳ ನಡುವೆ ಏಳುತ್ತಿದ್ದರೂ, ರಮ್ಯಾ ಉತ್ತರ ಕೊಟ್ಟಿರಲಿಲ್ಲ. ಕಾಂಗ್ರೆಸ್‍ನ ರಾಷ್ಟ್ರೀಯ ಮಟ್ಟದ ಸೋಷಿಯಲ್ ಮೀಡಿಯಾ ವಿಂಗ್‍ನ ಮುಖ್ಯಸ್ಥೆಯಾಗಿದ್ದ ರಮ್ಯಾ, ಸೋಷಿಯಲ್ ಮೀಡಿಯಾದಿಂದಲೇ ನಾಪತ್ತೆಯಾಗಿದ್ದರು. ಈಗ ಮತ್ತೆ ಬಂದಿದ್ದಾರೆ.

    ಯೆಸ್, 2019ರ ಜೂನ್ ನಂತರ ಡಿ-ಆಕ್ಟಿವೇಟ್ ಆಗಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಟ್ವಿಟರ್ ಅಕೌಂಟ್ ಮತ್ತೆ ಆಕ್ಟಿವೇಟ್ ಆಗಿದೆ. ಅರ್ಥಾತ್, ರಮ್ಯಾ ವಾಪಸ್ ಆಗಿದ್ದಾರೆ. ಆದರೆ, ಯಾವುದೇ ಹೊಸ ಟ್ವೀಟ್ ಮಾಡಿಲ್ಲ. ರಿಯಾಕ್ಷನ್ ಕೂಡಾ ಇಲ್ಲ. ರಮ್ಯಾ ಬಂದರು ಎನ್ನುವುದಷ್ಟೇ ಸುದ್ದಿ.

  • ನಿಖಿಲ್ ರೈಡರ್`ಗೆ ದಿವ್ಯ ಸ್ಪಂದನ ಶುಭ ಹಾರೈಕೆ

    ನಿಖಿಲ್ ರೈಡರ್`ಗೆ ದಿವ್ಯ ಸ್ಪಂದನ ಶುಭ ಹಾರೈಕೆ

    ರೈಡರ್ ನಾಳೆ ರಿಲೀಸ್ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಸುದೀರ್ಘ ಗ್ಯಾಪ್ ನಂತರ ತೆರೆಗೆ ಬರುತ್ತಿರೋ ಚಿತ್ರವಿದು. ಲಹರಿಯವರು ಬಹಳ ಕಾಲದ ನಂತರ ನಿರ್ಮಾಣಕ್ಕೆ ಕೈ ಹಾಕಿರೋ ಚಿತ್ರವೂ ರೈಡರ್. ಈಗಾಗಲೇ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದ್ದು, ಈಗ ನಟಿ ಹಾಗೂ ರಾಜಕಾರಣಿ ರಮ್ಯಾ ಅರ್ಥಾತ್ ದಿವ್ಯಸ್ಪಂದನ ಕೂಡಾ ನಿಖಿಲ್ ರೈಡರ್‍ಗೆ ಶುಭ ಕೋರಿದ್ದಾರೆ.

    ಈ ತಿಂಗಳು ಒಳ್ಳೊಳ್ಳೆ ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿವೆ. ಆಯ್ಕೆಗೆ ಸೀಮಿತರಾಗಬೇಡಿ. ಎಲ್ಲ ಚಿತ್ರಗಳನ್ನೂ ನೋಡಿ. ಬೆಸ್ಟ್ ವಿಷಸ್ ಟು ನಿಖಿಲ್ ಕುಮಾರ್ ಎಂದಿದ್ದಾರೆ ರಮ್ಯಾ. ಬಡವ ರಾಸ್ಕಲ್ ಚಿತ್ರಕ್ಕೂ ರಮ್ಯಾ ಶುಭ ಕೋರಿದ್ದಾರೆ. ಆದರೆ ನಿಖಿಲ್ ಅವರಿಗೆ ಶುಭ ಕೋರಿರುವುದಕ್ಕೆ ವಿಶೇಷ ಅರ್ಥವನ್ನು ಅವರ ರಾಜಕಾರಣದಲ್ಲಿ ಹುಡುಕಬೇಕು.. ಹಾಗಾಗಿಯೇ ಈ ಹಾರೈಕೆಗೆ ವಿಶೇಷ ಅರ್ಥ.

    ನಿಖಿಲ್ ಅವರ ಎದುರು ರೈಡರ್‍ನಲ್ಲಿ ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು ವಿಜಯ್ ಕುಮಾರ್ ಕೊಂಡ ನಿರ್ದೇಶಕ.

  • ನೀರ್ ದೋಸೆ ಕೇಸ್ - ರಮ್ಯಾಗೆ ಮುಖಭಂಗ

    neerdose photo case dismissed

    ನೀರ್‍ದೋಸೆ. ಜಗ್ಗೇಶ್-ವಿಜಯ್ ಪ್ರಸಾದ್-ದತ್ತಣ್ಣ-ಹರಿಪ್ರಿಯಾ-ಸುಮನ್ ರಂಗನಾಥ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾಗೆ ಮೊದಲು ನಾಯಕಿಯಾಗಿದ್ದವರು ರಮ್ಯಾ. ಆಗಿನ್ನೂ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಆನಂತರ ಸಿನಿಮಾದಿಂದ ಹೊರನಡೆದಿದ್ದರು. ಆದರೆ, ಆ ಚಿತ್ರದ ಶೂಟಿಂಗ್ ವೇಳೆ ವಿವಾದವೊಂದನ್ನು ಸೃಷ್ಟಿಸಿದ್ದರು ರಮ್ಯಾ. ಅದು ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್‍ನಲ್ಲಿ ರಮ್ಯಾ ವಾದಕ್ಕೆ ಹಿನ್ನಡೆಯಾಗಿದ್ದು, ಕೇಸ್‍ನ್ನು ನ್ಯಾಯಾಲಯ ವಜಾ ಮಾಡಿದೆ.

    ಪತ್ರಕರ್ತ ಶ್ಯಾಂ ಪ್ರಸಾದ್, ಫೋಟೋ ಜರ್ನಲಿಸ್ಟ್ ನಾಗೇಶ್ ಕುಮಾರ್ ಕುಮಾರ್ ಮತ್ತು ಮನೋಹರ್ ವಿರುದ್ಧ ತಮ್ಮ ಅನುಮತಿಯಿಲ್ಲದೆ ಆಕ್ಷೇಪಾರ್ಹ ಫೋಟೋ ತೆಗೆದಿದ್ದಾರೆ ಎಂದು ರಮ್ಯಾ ಕೇಸ್ ಹಾಕಿದ್ದರು. ಅನುಮತಿಯಿಲ್ಲದೆ ಫೋಟೋ ತೆಗೆಯಲಾಯಿತು ಎಂಬ ರಮ್ಯಾ ವಾದಕ್ಕೆ ಯಾವುದೇ ಸಮರ್ಥನೆ ಅಥವಾ ಸಾಕ್ಷ್ಯ ಸಿಗದ ಕಾರಣ, ಕೋರ್ಟ್ ಕೇಸ್‍ನ್ನು ವಜಾ ಮಾಡಿದೆ. ಎಲ್ಲ ಪತ್ರಕರ್ತರನ್ನೂ ದೋಷಮುಕ್ತಗೊಳಿಸಿದೆ.

    ಪ್ರಧಾನಿ ನರೇಂದ್ರ ಮೋದಿಯನ್ನು ಕಳ್ಳ ಎಂಬಂತೆ ಬಿಂಬಿಸಿದ ಫೋಟೋ ಹಾಕಿದ್ದಕ್ಕೆ ರಮ್ಯಾ ವಿರುದ್ಧ ಎರಡು ಕೇಸ್ ದಾಖಲಾದ ಮರುದಿನವೇ, 2013ರಲ್ಲಿ ರಮ್ಯಾ ಹಾಕಿದ್ದ ಕೇಸ್ ವಜಾ ಆಗಿರುವುದು ವಿಶೇಷ.