` bramhachari, - chitraloka.com | Kannada Movie News, Reviews | Image

bramhachari,

  • 'Bramhachari' Is This Generation's 'Anubhava'

    bramhachari is this generation's anubhava

    Satish Neenasam starrer 'Bramhachari' is all set to release tomorrow across Karnataka. Chandra Mohan has scripted the film apart from directing it. Till now, there was no news about who had written the story. Now it has been revealed that producer Uday Mehta himself has written the story of the film.

    Uday Mehta in a recent press meet has announced that he has written the story of the film and Kashinath is a big inspiration for him to write the story. 'I have grown up watching his films. That's when the idea of this film came. I would like to call the film as this generation's 'Anubhava'' says Uday Mehta.

    Though Uday Mehta wrote this story in 2015, it is being made into a film only in 2019. One of the highlight is, Satish Neenasam starrer 'Love in Mandya' produced by Uday Mehta was released on 29th November 2014. Now Satish and Uday Mehta's second outing is getting released on the same day five years later. The film will be released in more than 250 theaters across Karnataka.

  • 'Bramhachari' Trailer Released

    bramhachari trailer released

    The trailer of Satish Neenasam starrer 'Bramhachari',was released in an event organised in Bangalore on Monday. The trailer has been released through Anand Audio channel of You Tube.

    The trailer event of the film was organised at the Kalavidara Sangha on Monday evening at 4 PM. Satish had invited his fans and friends for the trailer release event through a special video. Many fans of the actor was present and the trailer was released amidst much fan fare.

    'Bramhachari' stars Satish Neenasam, Aditi Prabhudeva, Shivaraj K R Pet, Dattanna, Padmaja Rao and others in prominent roles. Dharma Vish is the music director, while Ravi is the cinematographer. The film is directed by Chandra Mohan and being produced by Uday Mehta.

  • A Teaser For A Teaser

    a teaser for a teaser

    It has become quite natural for every film team to release the teaser of their film. But one team has decided not only to release the teaser of the film, but also the teaser of the teaser. The film is none other than Satish Neenasam starrer 'Bramhachari'.

    The team of 'Bramhachari' is planning to release the teaser of the film on the 20th of this month. Before the launch, the team has planned to release a teaser of the teaser on the 10th of June. The teaser will depict the making of the teaser and will be the first of its kind in Kannada cinema.

    The shooting for 'Bramhachari' is almost complete and the team intends to complete the remaining portions soon. The film stars Satish Neenasam, Aditi Prabhudeva, Shivaraj K R Pet, Dattanna, Padmaja Rao and others in prominent roles. 'Bramhachari' is directed by Chandra Mohan and being produced by Uday Mehta.

  • Aditi Prabhudeva roped in for 'Bhramachari'

    aditi prabhudeva roped in for bramhachari

    Satish Neenasam's new film 'Bramhachari' was launched on the festival of Ugadi. The shooting for the film will start soon and before that Aditi Prabhudeva has been roped in as the heroine of the film.

    'Bramhachari' is being scripted and directed by Chandra Mohan who had earlier directed 'Bombay Mitai' and 'Double Engine'. 

    'Bramachari' which has a sub-title called '100% Virgin' is being produced by Uday Mehta. 

  • Dhruva Sarja Sounds Clap For 'Bramhachari'

    dhruva sarja sounda clap fpr bramhachari

    Satish Neenasam's new film 'Bramhachari' was supposed to be launched on the festival of Ugadi. Due to various reasons, the launch was postponed and finally the film was launched today morning at a temple in Bangalore.

    Actors Satish Neenasam, Aditi Prabhudeva, Shivaraj K R Pet and others were present during the launch. Dhruva Sarja came over as the chief guest and sounded the clap for the first shot of the film.

    'Bramhachari' is being scripted and directed by Chandra Mohan who had earlier directed 'Bombay Mitai' and 'Double Engine'. The film is being produced by Uday Mehta. 

     

  • First Look Of 'Bramhachari' on May 24th

    first look of bramhachari on may 24th

    Satish Neenasam's new film 'Bramhachari' has completed the first schedule and the team is planning to release the first look of the film on the 24th of May.

    Recently, the team has completed 27 days of shoot and most of the talkie portion is completed in this schedule. Satish Neenasam, Aditi Prabhudeva, Shivaraj K R Pet, Dattanna, Padmaja Rao and others participated in the first schedule.

    'Bramhachari' is being scripted and directed by Chandra Mohan who had earlier directed 'Bombay Mitai' and 'Double Engine'. The film is being produced by Uday Mehta. 

  • KRG Studios To Distribute 'Bramhachari'

    krg studios to distribute bramhachari

    Satish Neenasam starrer 'Bramhachari' is all set to release in the month of December. Meanwhile, KRG Studios has acquired the distribution rights of the film.

    Producer Uday Mehta on Thursday finalised a deal with KRG Studios regarding the distribution of the film and KRG Studios is said to have acquired the distribution rights for a good price. Karthik Howda of KRG Studios will be distributing the film across Karnataka.

    'Bramhachari' stars Satish Neenasam, Aditi Prabhudeva, Shivaraj K R Pet, Dattanna, Padmaja Rao and others in prominent roles. Dharma Vish is the music director, while Ravi is the cinematographer. The film is directed by Chandra Mohan.

  • Satish Invites His Fans To 'Bramhachari' Trailer Launch Event

    sathish invites his fans to bramhachari trailer launch event

    Satish Neenasam starrer 'Bramhachari', is all set for release this November. Meanwhile, the trailer of the film is all set to be launched on the 04th of November.

    The trailer event of the film has been organised at the Kalavidara Sangha on Monday evening at 4 PM. Satish has invited his fans and friends for the trailer release event through a special video. The trailer is of three minutes duration and Satish hopes that everybody likes the trailer of the film.

    'Bramhachari' is directed by Chandra Mohan and being produced by Uday Mehta.

    The film stars Satish Neenasam, Aditi Prabhudeva, Shivaraj K R Pet, Dattanna, Padmaja Rao and others in prominent roles. Dharma Vish is the music director, while Ravi is the cinematographer.

     

  • ಅಕ್ಟೋಬರ್ 18ರವರೆಗೆ ಹಿಡ್ಕ ಹಿಡ್ಕ ವಸಿ ತಡ್ಕ ತಡ್ಕ

    bramachari songs to release on oct 18th

    ಬ್ರಹ್ಮಚಾರಿ 100% ವರ್ಜಿನ್ ಚಿತ್ರ ರಿಲೀಸ್ ಆಗುವ ಸಮಯ ಹತ್ತಿರವಾಗುತ್ತಿದ್ದಂತೆ. ಚಿತ್ರದ ಒಂದು ಲಿರಿಕಲ್ ವಿಡಿಯೋ ಬಿಡುಗಡೆಗೆ ಚಿತ್ರತಂಡ ಮುಂದಡಿಯಿಟ್ಟಿದೆ. ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ..  ತಡ್ಕ ತಡ್ಕ ವಸಿ ತಡ್ಕ ತಡ್ಕ.. ಹಾಡು. ನೀನಾಸಂ ಸತೀಶ್ ಮತ್ತು ಆದಿತಿ ಪ್ರಭುದೇವ ಹೆಜ್ಜೆ ಹಾಕಿರುವ ಅರ್ಧಪೋಲಿ ಗೀತೆ ಎನ್ನುವ ಸುಳಿವು ಇದೆ.

    ಧರ್ಮ ವಿಶ್ ಅವರಿಗೆ ಇದು ಕೂಡಾ ತಮ್ಮ ಶ್ಯಾನೆ ಟಾಪಾಗವ್ಳೆ ಶೈಲಿಯಲ್ಲಿ ಹಿಟ್ ಆಗತ್ತೆ ಅನ್ನೋ ನಂಬಿಕೆಯಿದೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿ ಇದೆ. ಅವರ ಜೊತೆ ನಾನು ಮಾಡಿದ ಹಾಡುಗಳೆಲ್ಲ ಹಿಟ್ ಎಂದು ನೆನಪಿಸಿಕೊಳ್ತಾರೆ ಸತೀಶ್.

    ಡ್ರಾಮಾ ಚಿತ್ರದ ತುಂಡೈಕ್ಳ ಸಾವಾಸ, ಲೂಸಿಯಾದ ಜುಮ್ಮ ಜುಮ್ಮ, ಲವ್ ಇನ್ ಮಂಡ್ಯದ ಎಲ್ಲ ಹಾಡು, ಅಯೋಗ್ಯ ಚಿತ್ರದ ಇಂಟ್ರೊಡಕ್ಷನ್ ಸಾಂಗ್.. ಹೀಗೆ ಎಲ್ಲ ಹಾಡುಗಳೂ ಹಿಟ್. ಇದೂ ಹಿಟ್ ಆಗಲಿದೆ ಎನ್ನುವುದು ಸತೀಶ್ ನಂಬಿಕೆ.

    ಭರಾಟೆ ಚಿತ್ರ ರಿಲೀಸ್ ಆಗುವ ದಿನ ಅಕ್ಟೋಬರ್ 18ರಂದು ಅದೇ ಚಿತ್ರದ ನಿರ್ದೇಶಕ ಚೇತನ್ ಬರೆದಿರುವ ಈ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ. ಇದು ಬರಹಗಾರನಿಗೆ ನಿರ್ಮಾಪಕ ಉದಯ್ ಕೆ. ಮೆಹ್ತಾ, ನಿರ್ದೇಶಕ ಚಂದ್ರಮೋಹನ್ ನೀಡುತ್ತಿರುವ ಕೊಡುಗೆ ಎನ್ನಬಹುದು.

  • ಅದೇ ಲಕ್ಕಿ ನವೆಂಬರ್ : ಬ್ರಹ್ಮಚಾರಿಗೆ ಲವ್ ಇನ್ ಮಂಡ್ಯ ನೆನಪು

    lucky,november for bramhachari producer and hero

    ಬ್ರಹ್ಮಚಾರಿ ರಿಲೀಸ್ ಸಂಭ್ರಮದಲ್ಲಿರೋ ನಟ ನೀನಾಸಂ ಸತೀಶ್ ಮತ್ತು ನಿರ್ಮಾಪಕ ಉದಯ್ ಕೆ.ಮೆಹ್ತಾ ಇಬ್ಬರಿಗೂ ನವೆಂಬರ್ ಎಂದರೆ ಲಕ್ಕಿ ಎನ್ನಿಸೋಕೆ ಕಾರಣವೂ ಇದೆ. ಕಾರಣ ಇಷ್ಟೆ, 2014ರ ನವೆಂಬರ್ 28ರಂದು ಲವ್ ಇನ್ ಮಂಡ್ಯ ರಿಲೀಸ್ ಆಗಿತ್ತು. ಈಗ ನವೆಂಬರ್ 29, ಬ್ರಹ್ಮಚಾರಿ ರಿಲೀಸ್ ಆಗುತ್ತಿದೆ.

    ಆ ಚಿತ್ರದ ನಿರ್ಮಾಪಕ ಮತ್ತು ನಾಯಕ ಇಬ್ಬರೂ ಈ ಚಿತ್ರದಲ್ಲೂ ಜೊತೆಯಾಗಿದ್ದಾರೆ. ಆ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸಿಂಧು ಲೋಕನಾಥ್ ನಾಯಕಿ. ಇಲ್ಲಿ ಸತೀಶ್ ಜೊತೆ ಆದಿತಿ ಪ್ರಭುದೇವ ನಾಯಕಿ.

    ಬ್ರಹ್ಮಚಾರಿಯಂತೆಯೇ ಲವ್ ಇನ್ ಮಂಡ್ಯದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು. ಈ ಬ್ರಹ್ಮಚಾರಿಯಲ್ಲಿ ಹಿಡ್ಕ ಹಿಡ್ಕ ಹಾಡು ಸೃಷ್ಟಿಸಿದ್ದ ರೋಮಾಂಚನದAತೆಯೇ.. ಲವ್ ಇನ್ ಮಂಡ್ಯದಲ್ಲಿ ಕರೆಂಟು ಹೋದ ಟೈಮಲಿ.. ಹಾಡು ರೊಮ್ಯಾಂಟಿಕ್ ಸೆನ್ಸೇಷನ್ ಆಗಿತ್ತು.

  • ಅಪ್ಪಿಕೊಳ್ಳಲೂ ಬಿಡದೆ ಹಿಡ್ಕ ಹಿಡ್ಕ ಹಾಡು ಮಾಡಿದ್ರಂತೆ..!!!

    interesting facts about hidka hidka song

    ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ರೊಮ್ಯಾಂಟಿಕ್ ಸೆನ್ಸೇಷನ್ ಹಿಡ್ಕ ಹಿಡ್ಕ ಸಾಂಗ್. ಎಷ್ಟು ರೊಮ್ಯಾಂಟಿಕ್ ಅಂದ್ರೆ, ಚಿತ್ರದ ಲಿರಿಕಲ್ ಮತ್ತು ಮೇಕಿಂಗ್ ವಿಡಿಯೋವನ್ನೇ ಪಡ್ಡೆಗಳು ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಾರೆ. ಆದರೆ, ಈ ಭರ್ಜರಿ ರೊಮ್ಯಾಂಟಿಕ್ ಸಾಂಗ್‌ನ ವಿಶೇಷತೆ ಏನು ಗೊತ್ತೇ..?

    ಇಡೀ ಹಾಡು ರೊಮ್ಯಾಂಟಿಕ್ ಆಗಿದ್ದರೂ, ಹಾಡಿನಲ್ಲಿ ಹೀರೋ ಹೀರೋಯಿನ್ ಒಂದ್ಸಲ ಕೂಡಾ ಕನಿಷ್ಠ ಅಪ್ಪಿಕೊಳ್ಳುವುದೂ ಇಲ್ಲವಂತೆ.. ಅರೆ.. ಅದು ಹೇಗೆ..?

    ಹೌದು, ಆ ಹಾಡಿನ ವಿಶೇಷತೆಯೇ ಅದು. ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ. ಆದರೆ ಕೇಳೋಕೆ ಮಾತ್ರ. ದೃಶ್ಯಗಳಲ್ಲಿ ಒಂದು ಅಪ್ಪುಗೆಯ ದೃಶ್ಯವೂ ಇಲ್ಲ ಎನ್ನುತ್ತಾರೆ ಆದಿತಿ ಪ್ರಭುದೇವ.

    ಇಡೀ ಚಿತ್ರದಲ್ಲಿ ಕಾಮಿಡಿ ಇದೆ. ಅದು ಸೆಕ್ಸ್ ಕಾಮಿಡಿ ಅಲ್ಲ. ಸಿಚುಯೇಷನ್ ಕಾಮಿಡಿ ಎನ್ನುವ ಆದಿತಿ ನೀನಾಸಂ ಸತೀಶ್ ಕಷ್ಟ ನೆನಪಿಸಿಕೊಂಡು ಈಗಲೂ ನಗ್ತಾರೆ. ಅಷ್ಟರಮಟ್ಟಿಗೆ ಕ್ಯಾರೆಕ್ಟರ್ ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕ ಚಂದ್ರಮೋಹನ್. ಉದಯ್ ಕುಮಾರ್ ನಿರ್ಮಾಣದ ಬ್ರಹ್ಮಚಾರಿ ಚಿತ್ರ ಇದೇ ವಾರ ರಿಲೀಸ್. ಹಿಡ್ಕ.. ಹಿಡ್ಕ.. ಹಿಡ್ಕ..

     

  • ಅಬ್ಬಾ..! ಈ ವಾರ ರಿಲೀಸ್ ಆಗುತ್ತಿರೋದು 42 ಸಿನಿಮಾಗಳು..!!

    42 films to release in karnataka this week

    ಇದು ಪ್ರವಾಹಗಳ ವರ್ಷ. ಸಿನಿಮಾ ರಂಗವೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಪ್ರವಾಹವೇ ಹರಿದಿದೆ. ಅದರಲ್ಲೂ ಈ ವಾರ.. ಒಂದಲ್ಲ.. ಎರಡಲ್ಲ.. ಒಟ್ಟು 42 ಸಿನಿಮಾಗಳು ಶುಕ್ರವಾರ ರಿಲೀಸ್ ಆಗುತ್ತಿವೆ. ಬೆಂಗಳೂರಿನಲ್ಲಿ.

    ಈ ವಾರ ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ 9. 8 ತೆಲುಗು, 6 ಬೆಂಗಾಲಿ ಮತ್ತು 6 ಹಿಂದಿ. ಮಲಯಾಳಂನ 4 ಹಾಗೂ ತಮಿಳು ಮತ್ತು ಇಂಗ್ಲಿಷ್‌ನ ತಲಾ 3, ಗುಜರಾತಿ ಮತ್ತು ಮರಾಠಿಯ ತಲಾ 2, ಒಂದು ಪಂಜಾಬಿ ಸಿನಿಮಾ. ತಿಂಗಳಿಗೆ ಕನಿಷ್ಠ ಎರಡಾದರೂ ಬೋಜ್‌ಪುರಿ(ಬಿಹಾರ) ಸಿನಿಮಾಗಳು ರಿಲೀಸ್ ಆಗುತ್ತವೆ. ಈ ಬಾರ ಮೊದಲೇ ಪ್ಲಾನ್ ಆಗಿರುವ ಲಿಸ್ಟಿನಲ್ಲಿಲ್ಲ, ಅಷ್ಟೆ. ಈ ಎಲ್ಲವೂ ಸೇರಿ ಒಟ್ಟು 42 ಸಿನಿಮಾಗಳಾಗುತ್ತಿವೆ.

    ಎಲ್ಲರೂ ತೆಲುಗು, ತಮಿಳು, ಹಿಂದಿ ಅಷ್ಟೇ ಪರಭಾಷೆ ಚಿತ್ರಗಳೆಂದುಕೊAಡಿರುವಾಗ ಅವುಗಳಿಗೆ ಪೈಪೋಟಿ ಕೊಡುವಂತೆ ಬೆಂಗಾಳಿ, ಗುಜರಾತಿಗಳು ಬೆಂಗಳೂರಿಗೆ ಪ್ರವೇಶಿಸಿ ಆಗಿದೆ. ರಾಜ್ಯದಲ್ಲಿ.. ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡವೂ ಸೇರಿ ಒಟ್ಟು 10 ಭಾಷೆಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಜಪಾನೀಸ್, ಅಸ್ಸಾಮೀ ಭಾಷೆಯ ಚಿತ್ರಗಳೂ ಆಗಾಗ್ಗೆ ಥಿಯೇಟರುಗಳಲ್ಲಿ ಪ್ರತ್ಯಕ್ಷವಾಗುತ್ತಿವೆ. ಇವೆಲ್ಲವುಗಳ ಜೊತೆಗೆ ಕನ್ನಡ ಸ್ಪರ್ಧೆ ಮಾಡಲೇಬೇಕು, ಅದು ಅನಿವಾರ್ಯ.

    ಬೆಂಗಳೂರಿನಲ್ಲಿ ಇರುವುದೇ 100+ ಸಿಂಗಲ್ ಸ್ಕಿçÃನ್ ಮತ್ತು 100+ ಮಲ್ಟಿಪ್ಲೆಕ್ಸುಗಳು. ಇವುಗಳಲ್ಲಿ ಹಿಂದಿ ಬಿಟ್ಟರೆ, ಆಲ್‌ಮೋಸ್ಟ್ ಎಲ್ಲ ಭಾಷೆಗಳವರೂ ಸಿಂಗಲ್ ಸ್ಕಿçÃನ್‌ಗೆ ಲಗ್ಗೆಯಿಡುತ್ತಾರೆ. ಸದ್ಯಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದಷ್ಟೇ ದೊಡ್ಡ ಮಟ್ಟದಲ್ಲಿ ತೆಲುಗು, ತಮಿಳು ಚಿತ್ರಗಳೂ ರಿಲೀಸ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಾಳಿ, ಭೋಜ್‌ಪುರಿ, ಮಲಯಾಳಂ ಇದೇ ರೀತಿಯಲ್ಲಿ ರಿಲೀಸ್ ಆಗಲು ಕ್ಯೂನಲ್ಲಿವೆ.

    ಇನ್ನು ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳನ್ನಷ್ಟೇ ನೋಡೋಣ. ಬ್ರಹ್ಮಚಾರಿ,  ಮುಂದಿನ ನಿಲ್ದಾಣ, ರಣಹೇಡಿ, ಮೂಕಜ್ಜಿಯ ಕನಸುಗಳು, ಮಾರ್ಗರೇಟ್, ಕಿರು ಮಿಂಕAಜ, ರಿವೀಲ್, ದಮಯಂತಿ, ನಾನೇ ರಾಜ ಚಿತ್ರಗಳು. 

  • ತುಂಟ ಶಿಖಾಮಣಿ ಬ್ರಹ್ಮಚಾರಿಯನ್ನು ಹಿಡ್ಕೊಂಡ್ ಬಿಟ್ರು ಪ್ರೇಕ್ಷಕರು

    bramhachari is appreciated by audience

    ಹಿಡ್ಕ ಹಿಡ್ಕ ಹಿಡ್ಕ ಎನ್ನುತ್ತಲೇ ರೋಮಾಂಚನ ಹುಟ್ಟಿಸಿದ್ದ ಬ್ರಹ್ಮಚಾರಿಯನ್ನು ಪ್ರೇಕ್ಷಕರು ಅಷ್ಟೇ ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ಸತೀಶ್ ಮತ್ತು ಆದಿತಿಯ ತುಂಟಾಟ, ರನೌಟ್ ಕಥೆಗೆ ಬೆರೆಸಿರುವ ಕಾಮಿಡಿಯ ಒಗ್ಗರಣೆ, ಪ್ರೇಕ್ಷಕರಿಗೆ ನಗೆಯೂಟದ ಮೃಷ್ಟಾನ್ನ ಭೋಜನವನ್ನೇ ನೀಡಿದೆ. ಥಿಯೇಟರಿಗೆ ಎಂಟ್ರಿ ಕೊಟ್ಟು ಸಿನಿಮಾ ಶುರುವಾದ ಮೇಲೆ ನಗಲು ಶುರು ಮಾಡುವ ಪ್ರೇಕ್ಷಕ, ಸಿನಿಮಾ ಮುಗಿಯುವವರೆಗೂ ನಗುತ್ತಲೇ ಇರುತ್ತಾನೆ ಎನ್ನುವುದರಲ್ಲಿಯೇ ಚಿತ್ರತಂಡದ ಗೆಲುವಿದೆ.

    ನಿರ್ದೇಶಕ ಚಂದ್ರಮೋಹನ್, ನಿರ್ಮಾಪಕ ಉದಯ್ ಇಬ್ಬರೂ ಕೂಡಾ ಚಿತ್ರದಲ್ಲಿ ಲೈಂಗಿಕ ಸಮಸ್ಯೆಯ ಕಥೆ ಇದ್ದರೂ, ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ ಎಂದು ಭರವಸೆ ಕೊಟ್ಟಿದ್ದರು. ಭರವಸೆ ಹುಸಿಯಾಗಿಲ್ಲ. ತುಂಟಾಟಕ್ಕೆ ಮಿತಿಯಿಲ್ಲ.

    ಧರ್ಮವಿಶ್ ಸಂಗೀತದಲ್ಲಿ ಬರುವ ಹಾಡುಗಳು ಹುಚ್ಚೆಬ್ಬಿಸಿದರೆ, ಆದಿತಿಯ ನೋಟಕ್ಕೇ ಪ್ರೇಕ್ಷಕ ಫಿದಾ ಆಗಿಬಿಡುತ್ತಾನೆ. ಸತೀಶ್ ಜೊತೆ ನಗಿಸಲು ಪೈಪೋಟಿಗೆ ಬೀಳುವುದು ಕೆ.ಆರ್.ಪೇಟೆ ಶಿವರಾಜ್. ಫೈನಲಿ.. ಪ್ರೇಕ್ಷಕರೂ ಹ್ಯಾಪಿ.. ನಿರ್ಮಾಪಕರು ಡಬಲ್ ಹ್ಯಾಪಿ.

  • ನಗೆಯ ಹಬ್ಬದ ಸಂಭ್ರಮ ಬ್ರಹ್ಮಚಾರಿ

    be a part of laugh riot with bramhachari

    ನೀನಾಸಂ ಸತೀಶ್, ಉದಯ್ ಮೆಹ್ತಾ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಸಿನಿಮಾ ಬ್ರಹ್ಮಚಾರಿ. ಲವ್ ಇನ್ ಮಂಡ್ಯ ನಂತರ ಹೀರೋ ಮತ್ತು ನಿರ್ಮಾಪಕರು ಮತ್ತೆ ಒಂದಾಗಿರುವ ಚಿತ್ರವಿದು. ಚಿತ್ರದ ನಿರ್ದೇಶಕರು ಡಬಲ್ ಎಂಜಿನ್, ಬಾಂಬೆ ಮಿಠಾಯಿ ಚಿತ್ರಗಳ ಚಂದ್ರಮೋಹನ್. ಆ ಚಿತ್ರಗಳಲ್ಲಿ ಚಂದ್ರಮೋಹನ್ ಡಬಲ್ ಮೀನಿಂಗ್ ಸಂಭಾಷಣೆಯನ್ನು ಹೆಚ್ಚು ಬಳಸಿದ್ದರು. ಹೀಗಾಗಿಯೇ ಇವರ ಜೊತೆ ಚಿತ್ರ ಮಾಡೋದಾ ಎಂಬ ಯೋಚನೆಯಲ್ಲಿದ್ದೆ. ಅವರ ಸಹವಾಸವೇ ಬೇಡ ಎಂದುಕೊಂಡಿದ್ದೆ. ಆದರೆ, ಕಥೆ ಕೇಳುವಾಗಲೇ ನಗು ತಡೆಯೋಕೆ ಆಗಲಿಲ್ಲ. ಹೀಗಾಗಿ ಒಪ್ಪಿಕೊಂಡೆ ಎನ್ನುವ ಸತೀಶ್, ಚಿತ್ರದಲ್ಲಿ ಮುಜುಗರ ತರುವ ಹಾಸ್ಯ ಇಲ್ಲ ಎನ್ನುತ್ತಾರೆ. 

    ನಾಯಕಿಯಾಗಿ ನಟಿಸಿರುವ ಆದಿತಿ ಪ್ರಭುದೇವ ಅವರಿಗೆ ಸತೀಶ್ ಎದುರು ನಗು ಕಂಟ್ರೋಲ್ ಮಾಡಿಕೊಂಡು ನಟಿಸುವುದೇ ದೊಡ್ಡ ಚಾಲೆಂಜ್ ಆಗಿತ್ತಂತೆ. ದತ್ತಣ್ಣ, ಕೆಆರ್‍ಪೇಟೆ ಶಿವರಾಜ್, ಅಚ್ಯುತ್ ಕುಮಾರ್, ಪದ್ಮಜಾ ರಾವ್ ನಟಿಸಿರುವ ಚಿತ್ರ, ವಿಶೇಷವಾಗಿ ಹುಡುಗರಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರತಂಡದವರು ಅದರಲ್ಲೂ ಚಿತ್ರದ ನಾಯಕಿ ಆದಿತಿ ಕಾನ್ಫಿಡೆನ್ಸು.

  • ನೀನಾಸಂ ಸತೀಶ್ ಬ್ರಹ್ಮಚಾರಿ 100% ವರ್ಜಿನ್

    sathis ninasam's next titled bramhachari

    ಅರೆ.. ನೀನಾಸಂ ಸತೀಶ್ ಅವರಿಗೆ ಮದುವೆಯಾಗಿ ಮುದ್ದಾದ ಮಗು ಇರುವ ಸುದ್ದಿ ಓದಿದ್ದೆನಲ್ಲ.. ಅವರು ಮತ್ತೆ ಬ್ರಹ್ಮಚಾರಿಯಾಗೋಕೆ ಹೇಗೆ ಸಾಧ್ಯ ಎಂದು ತಲೆಗೆ ಹುಳ ಬಿಟ್ಕೋಬೇಡಿ. ಇದು ಸಿನಿಮಾ ಫೀಲ್ಡು. ಏನ್ ಬೇಕಾದ್ರೂ ಆಗಬಹುದು. ಹೀಗಾಗಿ ನೀನಾಸಂ ಸತೀಶ್ ಬ್ರಹ್ಮಚಾರಿ ಆಗಿದ್ದಾರೆ.

    ಲವ್ ಇನ್ ಮಂಡ್ಯ ಕಾಂಬಿನೇಷನ್ ಸತೀಶ್ ಮತ್ತು ಉದಯ್ ಮೆಹ್ತಾ ಒಟ್ಟಿಗೇ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಯ ಅಪ್‍ಡೇಟ್ ಸುದ್ದಿ ಇದು. ಆ ಚಿತ್ರದ ಹೆಸರು ನೀನಾಸಂ ಸತೀಶ್ ಬ್ರಹ್ಮಚಾರಿ 100% ವರ್ಜಿನ್. ಡೈರೆಕ್ಟರ್ ಡಬಲ್ ಎಂಜಿನ್, ಬಾಂಬೆ ಮಿಠಾಯಿ ಸಿನಿಮಾ ನಿರ್ದೇಶಿಸಿದ್ದ ಚಂದ್ರಮೋಹನ್. ಯುಗಾದಿ ಹಬ್ಬಕ್ಕೆ ಸಿನಿಮಾ ಶುರು.

  • ಬ್ರಹ್ಮಚಾರಿ : ಜಾಸ್ತಿ ಸೀರಿಯಸ್.. ಸ್ವಲ್ಪ ಪೋಲಿ.. ಅದೇ ವೀಕ್ನೆಸ್

    bramhachari trailer relased

    ಬ್ರಹ್ಮಚಾರಿ ಟೀಸರ್ ರಿಲೀಸ್ ಆಗಿದೆ. ಟೀಸರ್ ತುಂಬಾ ಕಚಗುಳಿಯಿಡುವ ಡೈಲಾಗ್ಸ್ ಇವೆ. ಬ್ರಹ್ಮಚಾರಿ ಟೀಸರ್ ಸ್ಪೆಷಾಲಿಟಿ ಏನೆಂದರೆ, ಅಲ್ಲಿ ನೀನಾಸಂ ಸತೀಶ್ ಪಾತ್ರ ನರಳುತ್ತಿದ್ದರೆ, ನೋಡುವವರು ನಗುತ್ತಿರುತ್ತಾರೆ. ಬ್ರಹ್ಮಚಾರಿ ಟೀಸರ್ ತುಸು ಪೋಲಿತನದಿಂದಲೇ ಶುರುವಾದರೂ, ಅಲ್ಲೇನೋ ಸೀರಿಯಸ್ ಪ್ರಾಬ್ಲಂ ಇದೆ.

    ಡಬಲ್ ಮೀನಿಂಗ್ ಇಲ್ಲವೇ ಇಲ್ಲ. ಎಲ್ಲವೂ ನೇರಾನೇರ. ಹಾಗಂತ ಕೆಟ್ಟಾ ಕೊಳಕ ಭಾಷೆಯೇನೂ ಇಲ್ಲ. ನೀನಾಸಂ ಸತೀಶ್ ಜೊತೆ ಮಾತನಾಡುವ ಪ್ರತಿಯೊಂದು ಪಾತ್ರವೂ ಸೀರಿಯಸ್ಸಾಗಿಯೇ ಮಾತನಾಡುತ್ತೆ. ಆದಿತಿಯೂ ಸೇರಿದಂತೆ.. ಕೇಳುವವರು ಕೆಟ್ಟದಾಗಿ ಕೇಳಿಸಿಕೊಂಡ್ರೆ ನಿರ್ದೇಶಕರು ಪಾಪ ಏನ್ ಮಾಡೋಕಾಗುತ್ತೆ.

    ಮದುವೆಯಾಗೋ ಬ್ರಹ್ಮಚಾರಿಗೆ ಅದೊಂದೇ ವೀಕ್ನೆಸ್. ಅದರ ಸುತ್ತಲೇ ಇದೆ ಟೀಸರ್. ಸತೀಶ್, ಆದಿತಿ ಪ್ರಭುದೇವ ಹಿಡ್ಕ ಹಿಡ್ಕ ಸಾಂಗಿನ ಝಲಕ್ಕೂ ಇರೋ ಟೀಸರಿನಲ್ಲಿ ದತ್ತಣ್ಣ ಡಾಕ್ಟರ್ ಆಗಿ, ಶಿವರಾಜು, ಅಶೋಕ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಆದಿತಿಯ ತಾಯಿಯಾಗಿ ಪದ್ಮಜಾ ರಾವ್, ಸರ್ಕಾರಿ ನೌಕರನಾಗಿ ಅಚ್ಯುತ್ ಕುಮಾರ್ ಇದ್ದಾರೆ.

    ಉದಯ್ ಕೆ.ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್.

  • ಬ್ರಹ್ಮಚಾರಿ ಮಾಡೋಕೆ ಧೈರ್ಯ ಬೇಕು - ನೀನಾಸಂ ಸತೀಶ್

    bramhachari is a darin experiment

    ಬ್ರಹ್ಮಚಾರಿ, ಇದೇ ವಾರ ರಿಲೀಸ್ ಆಗುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಚಿತ್ರದ ಸಬ್ಜೆಕ್ಟ್ ಹೇಗಿದೆಯೆಂದರೆ, ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಅಂತಾರೆ ನೀನಾಸಂ ಸತೀಶ್.

    ಇಮೇಜ್‌ಗಳನ್ನೆಲ್ಲ ಪಕ್ಕಕ್ಕಿಟ್ಟು ಹೊಸ ಸಾಹಸಕ್ಕೆ ಕೈ ಹಾಕುವುದು ಅಷ್ಟು ಸುಲಭ ಅಲ್ಲ. ಹಾಗೆ ಸಿನಿಮಾ ಮಾಡಿ, ಜನ ಮೆಚ್ಚುವಂತೆ ಮಾಡುವುದೂ ಸುಲಭವಲ್ಲ. ಜನ ಮೆಚ್ಚಿರುವ ಯಾವುದೇ ಮಾದರಿಯ ಸಿನಿಮಾ ಮಾಡುವುದು ಸುಲಭ. ಆದರೆ, ಇದು ಬೇರೆಯದೇ ದಾರಿ. ರಿಸ್ಕ್ ತೆಗೆದುಕೊಂಡಿದ್ದೇವೆ. ಗೆಲ್ಲುವ ವಿಶ್ವಾಸವೂ ಇದೆ ಅಂತಾರೆ ಸತೀಶ್.

    ಒಂದು ಸಣ್ಣ ವಿಷಯ ಡೈವೋರ್ಸ್ವರೆಗೆ ಹೋಗುತ್ತೆ. ಇಂಥವು ಸಾಮಾನ್ಯವಾಗಿ ಎಲ್ಲರ ಫ್ಯಾಮಿಲಿಗಳಲ್ಲೂ ಆಗುತ್ತೆ. ಸೆಕ್ಷÄವಲ್ ಪ್ರಾಬ್ಲಂ ಕಥೆ, ಆದರೆ ಎಲ್ಲಿಯೂ ಅದನ್ನು ನೇರವಾಗಿ ಹೇಳೋದೇ ಇಲ್ಲ. ನೋಡುವವರು ನಗುತ್ತಾರೆಯೇ ಹೊರತು, ಮಜುಗರಪಡುವುದಿಲ್ಲ ಎನ್ನುವ ಕಾನ್ಫಿಡೆನ್ಸ್ ಸತೀಶ್ ಅವರದ್ದು.

    ಸತೀಶ್, ಆದಿತಿ ಕೌಂಟರ್ ಆ್ಯಕ್ಟಿಂಗ್ ಚಿತ್ರದ ಹೈಲೈಟ್. ಚಂದ್ರಮೋಹನ್ ಒಂದು ಸೂಕ್ಷö್ಮ ಸಬ್ಜೆಕ್ಟ್ನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ದಾರೆ ಎನ್ನುವ ಸತೀಶ್, ನಿರ್ಮಾಪಕ ಉದಯ್ ಕುಮಾರ್ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

  • ಬ್ರಹ್ಮಚಾರಿ, ಫಸ್ಟ್ ನೈಟಲ್ಲೇ ರನೌಟ್..!!!

    bramhachari teaser brings smile

    ನೀನಾಸಂ ಸತೀಶ್ ಹುಟ್ಟುಹಬ್ಬದ ದಿನವೇ ರನೌಟ್ ಆಗಿ ಪ್ರೇಕ್ಷಕರ ಮುಖದಲ್ಲಿ ನಗು ಅರಳಿಸಿದ್ದಾರೆ. ಬ್ರಹ್ಮಚಾರಿ ಚಿತ್ರದ ಟೀಸರ್ ಅಷ್ಟರಮಟ್ಟಿಗೆ ನಗು ಉಕ್ಕಿಸಿದೆ. ಚಿತ್ರದ ಕಥೆ ಏನಿರಬಹುದು..? ಹೇಗಿರಬಹುದು.? ಎಂಬ ಕುತೂಹಲಕ್ಕೂ ಟೀಸರ್‍ನಲ್ಲಿ ಚಿಕ್ಕ ಉತ್ತರ ಸಿಕ್ಕಿದೆ. ಇನ್ನು ಬಾಯಿಚಪ್ಪರಿಸಿಕೊಂಡು, ಕಿವಿ ಅಗಲಿಸಿಕೊಂಡು ಚಿತ್ರಕ್ಕೆ ವೇಯ್ಟ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

    ಉದಯ್ ಮೆಹ್ತಾ ಬ್ಯಾನರ್‍ನಲ್ಲಿ ಸತೀಶ್ ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್‍ನಲ್ಲಿ ಕಾಮಿಡಿಯ ಟಚ್ ಇದೆ. ಫಸ್ಟ್ ನೈಟ್ ದಿನವೇ ಆದಿತಿ ಪ್ರಭುದೇವ ಎದುರು ರನೌಟ್ ಆಗುವ ಸತೀಶ್, ಡಾಕ್ಟರ್ ದತ್ತಣ್ಣನ ಬಳಿ ಕಷ್ಟ ಹೇಳಿಕೊಳ್ಳುವ ಪುಟ್ಟ ಬಿಟ್ ಟೀಸರ್‍ನಲ್ಲಿದೆ. ನಾಯಕನ ಕಷ್ಟ ಹೇಳೋದು ಶಿವರಾಜ್ ಕೆಆರ್ ಪೇಟೆ.

    ಇದು ಬಾಂಬೆ ಮಿಠಾಯಿ, ಡಬಲ್ ಎಂಜಿನ್ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ನಿರ್ದೇಶನದ ಸಿನಿಮಾ.

  • ಬ್ರಹ್ಮಚಾರಿಗೆ ಬಜಾರ್ ಬ್ಯೂಟಿ

    bazaar beauty joins bramhachaari

    ನೀನಾಸಂ ಸತೀಶ್, ಉದಯ್ ಮೆಹ್ತಾ ಜೋಡಿ, ಲವ್ ಇನ್ ಮಂಡ್ಯ ಚಿತ್ರದ ನಂತರ ಮತ್ತೆ ಒಂದಾಗಿರುವ ಸಿನಿಮಾ ಬ್ರಹ್ಮಚಾರಿ 100% ವರ್ಜಿನ್. ಈ ಬ್ರಹ್ಮಚಾರಿಯ ಚಿತ್ತ ಚಂಚಲಗೊಳಿಸಲು ಬಂದಿರುವ ಚೆಲುವೆ ಆದಿತಿ ಪ್ರಭುದೇವ.

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಆದಿತಿ, ಸ್ಯಾಂಡಲ್‍ವುಡ್‍ನ ಬ್ಯುಸಿ ನಟಿಯಾಗುತ್ತಿದ್ದಾರೆ. ಬಜಾರ್ ನಂತರ ಚಿರಂಜೀವಿ ಸರ್ಜಾ ಎದುರು ಸಿಂಗದಲ್ಲಿ ನಟಿಸುತ್ತಿರುವ ಆದಿತಿ, ಈಗ ನೀನಾಸಂ ಸತೀಶ್‍ಗೆ ಜೋಡಿಯಾಗಿದ್ದಾರೆ.

    ಆದಿತಿ ಕೈಲಿ ಈಗಾಗಲೇ ತೋತಾಪುರಿ, ರಂಗನಾಯಕಿ, ಸಿಂಗ ಹಾಗೂ ದುನಿಯಾ ವಿಜಯ್ ಜೊತೆ ಒಂದು ಸಿನಿಮಾ ಇದೆ. 

  • ಮದುವೆಯಾದ 80% ಜನರ ಕಥೆ : ಬ್ರಹ್ಮಚಾರಿ ಫ್ಯಾಮಿಲಿ ಸ್ಟೋರಿ

    80 percent of couples problems in brmhachari

    ಬ್ರಹ್ಮಚಾರಿ ಚಿತ್ರಕ್ಕೆ ಯು/ಎ ಸೆನ್ಸಾರ್ ಪತ್ರ ಸಿಕ್ಕಿದೆ. ಇದೇ ವಾರ ರಿಲೀಸ್ ಕೂಡಾ ಆಗ್ತಿದೆ. ಆದರೆ, ಚಿತ್ರದ ಟ್ರೇಲರ್, ಹಾಡು ನೋಡಿದವರು ಇದು ಸೆಕ್ಸ್ ಕಾಮಿಡಿ ಚಿತ್ರನಾ ಎಂಬ ಡೌಟಿಗೆ ಬಿದ್ದಿದ್ದಾರೆ. ಆದರೆ, ರಿಯಾಲಿಟಿ ಅದಲ್ಲ. ಚಿತ್ರದಲ್ಲಿ ಮದುವೆಯಾದ 80% ಜನ ಎದುರಿಸುವ ಸೂಕ್ಷö್ಮ ಸಮಸ್ಯೆಯೊಂದರ ಸುತ್ತ ಕಥೆ ಇದೆ. ಎಲ್ಲಿಯೂ ಅಶ್ಲೀಲತೆಯಿಲ್ಲ. ಬದಲಿಗೆ ಅದನ್ನು ಕಾಮಿಡಿಯಾಗಿ ಹೇಳಿದ್ದೇವೆ. ವಲ್ಗಾರಿಟಿ ಇಲ್ಲ ಎಂದು ವಿಶ್ವಾಸದಿಂದ ಹೇಳ್ತಾರೆ ನಿರ್ದೇಶಕ ಚಂದ್ರಮೋಹನ್.

    ಇನ್ನು ಚಿತ್ರದ ನಾಯಕಿ ಆದಿತಿ ಪ್ರಭುದೇವಗೆ, ನೀನಾಸಂ ಸತೀಶ್ ಅವರನ್ನು ನೋಡಿದರೇನೇ ನಗು ಬರುತ್ತಿತ್ತಂತೆ. ಅಷ್ಟರಮಟ್ಟಿಗೆ ಅವರು ಇನ್ವಾಲ್ವ್ ಆಗಿದ್ದರು. ತುಂಬಾ ಕಡೆ ಕೋಡ್ ವರ್ಡ್ ಸಂಭಾಷಣೆ ಇದೆ ಎನ್ನುವ ಆದಿತಿ, ನೋ ವಲ್ಗಾರಿಟಿ ಎನ್ನುತ್ತಾರೆ.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಇದುವರೆಗೆ ಫ್ಯಾಮಿಲಿ ಸಬ್ಜೆಕ್ಟ್ಗಳನ್ನೇ ಸಿನಿಮಾ ಮಾಡಿದವರು  ಮತ್ತು ಪ್ರತಿ ಬಾರಿಯೂ ಗೆದ್ದವರು. ಹೀಗಾಗಿ ಅಶ್ಲೀಲತೆಯ ಸೋಂಕು ಇರಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಸ್ಸೋ.. ಗೋ ವಿತ್ ಫ್ಯಾಮಿಲಿ.