` chennai, - chitraloka.com | Kannada Movie News, Reviews | Image

chennai,

  • ಅಡಚಣೆಗಾಗಿ ಕ್ಷಮಿಸಿ'ಗೆ ಚೆನ್ನೈನಿಂದ ಸ್ವೀಟ್ ನ್ಯೂಸ್

    adachanegagi kshamisi to release in chennai

    ಹೊಸಬರೇ ನಟಿಸಿ ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಚಿತ್ರ ಅಡಚಣೆಗಾಗಿ ಕ್ಷಮಿಸಿ. ಈಗಾಗಲೇ ನಾರ್ವೆಯಲ್ಲಿ ನಡೆದ ಚಿತ್ರೋತ್ಸವದಲ್ಲಿ ಕನ್ನಡಿಗರು ಮೆಚ್ಚಿಕೊಂಡಿದ್ದರು. ಅದಾದ ಮೇಲೆ ಆಸ್ಟ್ರೇಲಿಯ, ರ್ಮನಿಯ ಕನ್ನಡಿಗರಿಗೂ ಸಿನಿಮಾ ಇಷ್ಟವಾಗಿತ್ತು. ಇದು ಮತ್ತೊಂದು ಆಪ್ತಮಿತ್ರ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೆಲ್ಲದರ ನಡುವೆ ಈಗ ಚಿತ್ರತಂಡಕ್ಕೆ ಖುಷಿ ಕೊಡುವ ಸುದ್ದಿ ಚೆನ್ನೈನಿಂದ ಬಂದಿದೆ.

    ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ ಚೆನ್ನೈನ ಪಿವಿಆರ್‍ನಲ್ಲಿ ಅದೇ ದಿನ ರಿಲೀಸ್ ಆಗುತ್ತಿದೆ. ಹೊಸಬರ ಚಿತ್ರವೊಂದಕ್ಕೆ ಈ ಮಟ್ಟದ ಬೇಡಿಕೆ ಸಿಗುವುದು ಅಪರೂಪ. ಚಿತ್ರದ ನಾಯಕ ಮತ್ತು ನಿರ್ಮಾಪಕ ಪ್ರದೀಪ್ ವರ್ಮಾಗೆ ಈ ರೀತಿಯ ಮೆಚ್ಚುಗೆಯೇ ಖುಷಿ ಕೊಟ್ಟಿದೆ. ಭರತ್ ನಾವುಂದ ನಿರ್ದೇಶನದ ಸಿನಿಮಾ 60ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ.

  • ತಮಿಳುನಾಡಲ್ಲಿ ಹುಚ್ಚನಂತೆ ಅಲೆಯುತ್ತಿದ್ದಾನೆ ಹುಚ್ಚ ವೆಂಕಟ್

    huccha venkat roams around chennai streets

    ಹುಚ್ಚ ವೆಂಕಟ್ ಹುಚ್ಚನಾಗಿಬಿಟ್ಟನಾ..? ಚಿತ್ರನಟ ಭುವನ್ ಪೊನ್ನಣ್ಣ ಬಹಿರಂಗಪಡಿಸಿರುವ ಅ ವಿಡಿಯೋ ಮರುಕ ಹುಟ್ಟಿಸಿದೆ. ಚೆನ್ನೈನ ಒಡಪಳನಿ ಅನ್ನೋ ಏರಿಯಾದಲ್ಲಿ ರಾಂಧವ ಚಿತ್ರದ ನಿರ್ದೇಶಕ ಸುನಿಲ್ ಆಚಾರ್ಯ ಹೋಗುತ್ತಿದ್ದಾಗ ಹುಚ್ಚ ವೆಂಕಟ್ ಕಣ್ಣಿಗೆ ಬಿದ್ದಿದ್ದಾರೆ.

    ಕಾಲಲ್ಲಿ ಚಪ್ಪಲಿಯಿಲ್ಲ. ಕೊಳಕು ಬಟ್ಟೆ ಹಾಕಿಕೊಂಡಿದ್ದ ಹುಚ್ಚ ವೆಂಕಟ್, ಚೆನ್ನೈನ ಹೋಟೆಲ್‍ವೊಂದರಲ್ಲಿ ರೂಮ್ ಕೇಳಿದ್ದಾರೆ. ಆದರೆ, ವೆಂಕಟ್ ಅವತಾರ ನೋಡಿದ ಹೋಟೆಲ್‍ನವರು ರೂಂ ಕೊಟ್ಟಿಲ್ಲ. ಇದನ್ನು ಗಮನಿಸಿದ ಸುನಿಲ್ ಆಚಾರ್ಯ ಹುಚ್ಚ ವೆಂಕಟ್ ಅವರಿಗೆ ಸಹಾಯ ನೀಡಲು ಮುಂದಾಗಿದ್ದಾರೆ. ಆದರೆ, ಹುಚ್ಚ ವೆಂಕಟ್ ಸಹಕರಿಸಿಲ್ಲ.

    ಹುಚ್ಚ ವೆಂಕಟ್ ಅವರ ಈ ಅವತಾರ.. ಅವರ ನನ್ ಮಗಂದ್.. ಸ್ಟೈಲಿಗಿಂತಲೂ ಭಯಂಕರವಾಗಿದೆ. ಮರುಕ ಹುಟ್ಟಿಸುತ್ತಿದೆ.