` sayyesha, - chitraloka.com | Kannada Movie News, Reviews | Image

sayyesha,

  • ಅಪ್ಪು + ಪೃಥ್ವಿ = ಯುವರತ್ನ..?

    ಅಪ್ಪು + ಪೃಥ್ವಿ = ಯುವರತ್ನ..?

    ಯುವರತ್ನ ಚಿತ್ರದ ಟ್ರೇಲರ್ ನೋಡಿದವರಿಗೆ ಕಾಡುತ್ತಿರೋ ಪ್ರಶ್ನೆ ಇದು. ಅಪ್ಪು, ಪುನೀತ್ ಹೀರೋ ಆಗಿ ನಟಿಸಿದ ಫಸ್ಟ್ ಮೂವಿ. ಡೋಂಟ್ ಕೇರ್.. ಗೋಲಿಮಾರ್ ಶೈಲಿಯ ಕ್ಯಾರೆಕ್ಟರ್ ಅದು. ಅಂತಹ ಪಾತ್ರವನ್ನು ಮತ್ತೊಮ್ಮೆ ಇನ್ನೊಬ್ಬರು ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ಅಷ್ಟೊಂದು ಫೋರ್ಸ್ ಇದ್ದ ಪಾತ್ರ ಅಪ್ಪು. ಯುವರತ್ನದಲ್ಲಿ ಅಂತಹದೊಂದು ಶೇಡ್ ಕಾಣಿಸ್ತಿರೋದು ಸತ್ಯ.

    ಇನ್ನೊಂದು ಪೃಥ್ವಿ. ಪುನೀತ್ಗೆ ಬೇರೆಯದೇ ಇಮೇಜ್ ಕೊಟ್ಟ ಜಿಲ್ಲಾಧಿಕಾರಿಯ ಪಾತ್ರ. ಆ ಚಿತ್ರವನ್ನು ನೋಡಿ ಪ್ರಕಾಶ್ ರೈ ಸ್ವತಃ ಪುನೀತ್ ಅವರಿಗೆ ಪೋನ್ ಮಾಡಿ ಸೂಪರ್ ಎಂದಿದ್ದರಂತೆ. ಈಗ ಯುವರತ್ನ ನೋಡಿದವರಿಗೆ ಕಾಡುತ್ತಿರೋದು ಇದೇ ಪ್ರಶ್ನೆ. ಪುನೀತ್ ಅವರಿಗೆ ಚಿತ್ರದಲ್ಲಿ ಅಪ್ಪು ಮತ್ತು ಪೃಥ್ವಿ ಎರಡೂ ಪಾತ್ರಗಳ ಶೇಡ್ ಇದೆಯಾ..?

    ಈ ಪ್ರಶ್ನೆಗೆ ಪುನೀತ್ ಅವರ ಉತ್ತರ ಹೌದು. ಹಾಗಾದರೆ ಕಥೆ ಏನು ಎಂದರೆ.. ನೋ.. ಅದನ್ನೆಲ್ಲ ಕೇಳೋದಿದ್ರೆ ಸಂತೋಷ್ ಆನಂದ ರಾಮ್ ಅವರನ್ನೇ ಕೇಳಿ ಅಂತಾರೆ ಅಪ್ಪು. ಸದ್ಯಕ್ಕಂತೂ ಪುನೀತ್ ಅವರಿಗೆ ಯುವರತ್ನ ಚಿತ್ರದ ಕಥೆ ಮತ್ತು ಸಿನಿಮಾ ಇಷ್ಟವಾಗಿದೆ. ಒಂದೊಳ್ಳೆ ಮನರಂಜನೆ ಮತ್ತು ಸಂದೇಶ ಎರಡೂ ಇರೋ ಸಿನಿಮಾ. ನೋಡಿ ಎನ್ನುತ್ತಿರೋ ಅಪ್ಪುಗೆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  • ಏಪ್ರಿಲ್ 1ಕ್ಕೆ ಯುವರತ್ನ

    ಏಪ್ರಿಲ್ 1ಕ್ಕೆ ಯುವರತ್ನ

    ಸ್ಟಾರ್ ಚಿತ್ರಗಳು ರಿಲೀಸ್ ಆದರೆ ಥಿಯೇಟರಿಗೆ ಮತ್ತೆ ಜನ ಬರುತ್ತಾರೆ ಎಂಬ ನಿರೀಕ್ಷೆ ಥಿಯೇಟರು ಮಾಲೀಕರದ್ದು. ಇತ್ತೀಚೆಗೆ ರಿಲೀಸ್ ಆಗಿ ಜನಮನ ಸೆಳೆದ ಕೆಲ ಚಿತ್ರಗಳಿಗೆ ಭರಪೂರ ಮೆಚ್ಚುಗೆ ಸಿಕ್ಕಿತೇ ಹೊರತು, ದುಡ್ಡಲ್ಲ. ಹೀಗಾಗಿ ದೊಡ್ಡವರ ಚಿತ್ರಗಳಿಗೆ ಕಾಯುತ್ತಿದ್ದವರಿಗೆ ಈಗ ಮೊದಲ ಗುಡ್ ನ್ಯೂಸ್ ಸಿಕ್ಕಿದೆ. ಏಪ್ರಿಲ್ 1ಕ್ಕೆ ಯುವರತ್ನ ರಿಲೀಸ್.

    ಯುವರತ್ನ, ಪುನೀತ್, ಸಂತೋಷ್ ಆನಂದ್ ರಾಮ್, ಹೊಂಬಾಳೆ, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ. ರಾಜಕುಮಾರ ನಂತರ ಅವರೆಲ್ಲರೂ ಒಟ್ಟಿಗೇ ನಟಿಸಿರುವ ಚಿತ್ರ. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿಯೂ ಏಕಕಾಲಕ್ಕೆ ಯುವರತ್ನ ರಿಲೀಸ್ ಆಗಲಿದೆ.

    ಪುನೀತ್‍ಗೆ ಸಯ್ಯೇಷಾ ನಾಯಕಿ. ಧನಂಜಯ್, ದಿಗಂತ್, ಪ್ರಕಾಶ್ ರೈ, ರಾಧಿಕಾ, ಕಾವ್ಯಾ ಶೆಟ್ಟಿ, ಸೋನು ಗೌಡ ಕೂಡಾ ನಟಿಸಿರುವ ಚಿತ್ರವಿದು.

  • ಕನ್ನಡದ ಹುಡುಗಿಯರಿಗೆ ಯುವರಾಣಿ ಚಾಲೆಂಜ್

    ಕನ್ನಡದ ಹುಡುಗಿಯರಿಗೆ ಯುವರಾಣಿ ಚಾಲೆಂಜ್

    ಈಕೆಯನ್ನು ಸದ್ಯಕ್ಕೆ ಯುವರಾಣಿ ಎನ್ನೋಣ. ಏಕೆಂದರೆ ಇವರು ಯುವರತ್ನ ಚಿತ್ರದ ನಾಯಕಿ. ಸಯೇಶಾ.. ಇವರೀಗ ಕನ್ನಡದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ.

    ಕರ್ನಾಟಕದ ಹುಡುಗಿಯರಿಗೆ ಒಂದು ಚಾಲೆಂಜ್. ನೀವು ನಿಮ್ಮ ಪವರ್ ತೋರಿಸಿ. ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡಿಗೆ ಕುಣಿದು ಡ್ಯಾನ್ಸ್ ಪವರ್ ತೋರಿಸಿ.

     #PowerOfYouthDanceChallenge 

    #Yuvarathnaa   

     ಹ್ಯಾಷ್ ಟ್ಯಾಗ್‍ನಲ್ಲಿ ಅಪ್‍ಲೋಡ್ ಮಾಡಿ ಎಂದಿದ್ದಾರೆ ಸಯೇಶಾ.

    ಬೆಸ್ಟ್ ಪರ್ಫಾಮೆನ್ಸ್‍ಗೆ ಯುವರತ್ನ ಚಿತ್ರದಿಂದ ಸರ್‍ಪ್ರೈಸ್ ಗಿಫ್ಟ್ ಇದೆಯಂತೆ. ನಿರ್ದೇಶಕ ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್ ಅವರಿಂದಲೇ ಈ ಉಡುಗೊರೆ ಸಿಗಲಿದೆಯಂತೆ. ಯುವರತ್ನ ಕ್ರೇಜ್ ಶುರುವಾಗುತ್ತಿದೆ.

  • ಗಟ್ಟಿ ಕಥೆಯ ಸುಳಿವು ಕೊಟ್ಟ ಯುವರತ್ನ ಟ್ರೇಲರ್

    ಗಟ್ಟಿ ಕಥೆಯ ಸುಳಿವು ಕೊಟ್ಟ ಯುವರತ್ನ ಟ್ರೇಲರ್

    ಶಿಕ್ಷಣ ಅನ್ನೋದು ವ್ಯಾಪಾರ ಅಲ್ಲ.. ಅದೊಂದು ಸೇವೆ.. ಒಳ್ಳೆಯ ಕಾಲೇಜು ಅನ್ನಿಸ್ಕೊಳ್ಳೋದು ಅದರ ಫೀಸು, ಡೊನೇಷನ್ನಿಂದ ಅಲ್ಲ.. ಆ ಸಂಸ್ಥೆಯ ಸ್ಟೂಡೆಂಟ್ಸ್ಗಳಿಂದ..

    ಇಂಥಾದ್ದೊಂದು ಚೆಂದದ ಡೈಲಾಗ್ನೊಂದಿಗೇ ಶುರುವಾಗುವ ಟ್ರೇಲರ್ ಯುವರತ್ನ. ಟ್ರೇಲರ್ನಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರೋ ಸಂಭಾಷಣೆಗಳೇ ಚಿತ್ರದಲ್ಲಿ ಒಂದು ಗಟ್ಟಿ ಕಥೆ ಮತ್ತು ಮನಮುಟ್ಟುವ ಸಂದೇಶ ಇದೆ ಅನ್ನೋದನ್ನ ಸಾರಿಬಿಡುತ್ವೆ.

    ವಿದ್ಯೆಯನ್ನು ವ್ಯಾಪಾರ ಮಾಡೋಕೆ ಹೊರಟರೆ, ಪ್ರತಿ ಅಕ್ಷರಕ್ಕೂ ಅದು ಬೆಲೆ ಕಟ್ಟುತ್ತೆ. ವಿದ್ಯೆ ಕಲಿತನಿಗಲ್ಲ..  2 ನಿಮಿಷ 17 ಸೆಕೆಂಡ್ನ ಟ್ರೇಲರ್ನಲ್ಲಿ ಇಂತಹ ಡೈಲಾಗುಗಳ ಜೊತೆ ಅಭಿಮಾನಿಗಳನ್ನು ಖುಷಿ ಪಡಿಸೋ ಸಂಭಾಷಣೆಗಳೂ ಇವೆ.

    ಓಂ ಫಿಲಂ ನೋಡಿದ್ದೀಯಾ ಅನ್ನೋ ವಿಲನ್ ಡೈಲಾಗ್ಗೆ ಅಪ್ಪು ಕೊಡೋ ಉತ್ತರ.. ನಾವೇ ಪ್ರೊಡ್ಯೂಸ್ ಮಾಡಿದ್ದು. ಶಿಳ್ಳೆ ಹಾಕೋಕೆ ಆ ಡೈಲಾಗ್ ಸಾಕು.

    ಅಂದವಾದ ಹೀರೋಯಿನ್, ಟ್ರೇಲರಿನದ್ದಕ್ಕೂ ಕಾಣಿಸಿಕೊಳ್ಳೋ ಪ್ರಕಾಶ್ ರೈ, ಮೈ ನವಿರೇಳಿಸುವ ಸ್ಟಂಟ್ಸ್.. ಜೊತೆಗೆ ಯುವರತ್ನ ಚಿತ್ರದಲ್ಲಿ ಈಗ ಪೆಡಂಭೂತವಾಗಿ ಕಾಡುತ್ತಿರೋ ಡ್ರಗ್ಸ್ ಕಥೆಯೂ ಇರುವ ಸುಳಿವಿದೆ.

    ಚಿತ್ರದ ಕಥೆ ಏನಿರಬಹುದು ಅನ್ನೋದರ ಸುಳಿವನ್ನು ಅಲ್ಲಿ ಕೊಟ್ಟಿದ್ದಾರೆ ಸಂತೋಷ್ ಆನಂದರಾಮ್. 30ಕ್ಕೂ ಹೆಚ್ಚು ಕಲಾವಿದರ ದಂಡನ್ನೇ ಇಟ್ಟುಕೊಂಡು ಒಂದೊಳ್ಳೆ ಮೆಸೇಜ್ ಇರುವ ಸಿನಿಮಾ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ವಿಜಯ್ ಕಿರಗಂದೂರು.

    ಇಡೀ ಚಿತ್ರತಂಡ ಚಿತ್ರದಲ್ಲಿರೋ ಕಥೆ ಮತ್ತು ಚಿತ್ರ ಅಂತಿಮವಾಗಿ ಕೊಡಲಿರೋ ಸಂದೇಶದ ಬಗ್ಗೆಯೇ ಪ್ರೀತಿಯಿಂದ ಮಾತನಾಡುತ್ತಿದೆ. ಹಾಗಂತ.. ಅಭಿಮಾನಿಗಳಿಗೆ ಇಷ್ಟವಾಗದಂತೇನೂ ಇಲ್ಲ. ಈಗಾಗಲೇ ಟ್ರೇಲರ್ ನೋಡಿದವರ ಸಂಖ್ಯೆ ಮಿಲಿಯನ್ ಮಿಲಿಯನ್ ಮಿಲಿಯನ್ ದಾಟಿದೆ. ಏಪ್ರಿಲ್ 1ಕ್ಕೆ ಯುವರತ್ನ ಪ್ರೇಕ್ಷಕರಿಗೆ ಭರ್ಜರಿ ಔತಣ ಫಿಕ್ಸ್.

  • ನಾನು ಒಳ್ಳೆಯ ಡ್ಯಾನ್ಸರ್. ಆದರೆ..

    ನಾನು ಒಳ್ಳೆಯ ಡ್ಯಾನ್ಸರ್. ಆದರೆ..

    ಸಯ್ಯೇಷಾ ಸೈಗಲ್. ಪುನೀತ್ ಎದುರು ಯುವರತ್ನ ಚಿತ್ರದಲ್ಲಿ ನಾಯಕಿಯಾಗಿರುವ ಮುಂಬೈ ಬೆಡಗಿ. ಈಗಾಗಲೇ ಹಿಂದಿ, ತಮಿಳು, ತೆಲುಗಿನಲ್ಲಿ ಅಜಯ್ ದೇವಗನ್, ಕಾರ್ತಿ, ವಿಜಯ್ ಸೇತುಪತಿ, ಆರ್ಯ ಎದುರು ನಟಿಸಿರುವ ಸಯ್ಯೇಷಾ, ಇತ್ತೀಚೆಗೆ ಆರ್ಯ ಜೊತೆ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ಯುವರತ್ನ ಚಿತ್ರವನ್ನು ಒಪ್ಪಿಕೊಂಡ ಟೈಮಿನಲ್ಲೇ ಮದುವೆಯಾದ ಸಯ್ಯೇಷಾ ಯುವರತ್ನ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದುವರೆಗೆ ರಿಲೀಸ್ ಆಗಿರುವ ಟ್ರೇಲರ್ ಮತ್ತು ಹಾಡುಗಳಲ್ಲಿ ಎಲ್ಲರ ಕಣ್ಣು ಕುಕ್ಕಿರುವುದು ಆಕೆಯ ಸೌಂದರ್ಯ ಮತ್ತು ಡ್ಯಾನ್ಸ್.

    ನಾನು ಹುಟ್ಟಿದ್ದು, ಬೆಳೆದಿದ್ದು ಮುಂಬೈನಲ್ಲಿ. ಡ್ಯಾನ್ಸ್ ಗೊತ್ತು. ನನಗೆ ನಾನೊಬ್ಬ ಒಳ್ಳೆಯ ಡ್ಯಾನ್ಸರ್ ಅನ್ನೋ ಹೆಮ್ಮೆಯೂ ಇತ್ತು. ಒಂದು ಡ್ಯಾನ್ಸ್ ಬೇಸ್ ಸಿನಿಮಾ ಮಾಡಿದರೂ ನಟಿಸಬಲ್ಲೆ ಎನ್ನುವ ಕಾನ್ಫಿಡೆನ್ಸ್ ಇತ್ತು. ಆದರೆ, ಯುವರತ್ನ ಚಿತ್ರಕ್ಕೆ ಓಕೆ ಎಂದ ಮೇಲೆ ಪುನೀತ್ ಅವರ ಒಂದಿಷ್ಟು ಡ್ಯಾನ್ಸ್ ವಿಡಿಯೋ ನೋಡಿದೆ. ಅವರ ಸ್ಟೆಪ್ಸ್ ನೋಡಿದ ಮೇಲೆ.. ನನಗೆ ಒಳಗೊಳಗೇ ಒಂದಿಷ್ಟು ಟೆನ್ಷನ್ ಶುರುವಾಯ್ತು. ಇವರ ಲೆವೆಲ್ಲಿಗೆ ನಾನು ಡ್ಯಾನ್ಸ್ ಮಾಡೋಕೆ ಸಾಧ್ಯನಾ ಅನ್ನೋ ಆತಂಕವದು. ಫೈನಲಿ.. ಡ್ಯಾನ್ಸ್ ಚೆನ್ನಾಗಿ ಮಾಡಿದ್ದೇನೆ ಎನ್ನುವ ತೃಪ್ತಿಯಿದೆ. ಥ್ಯಾಂಕ್ಸ್ ಟು ಪುನೀತ್ ಸರ್ ಮತ್ತು ಸಂತೋಷ್ ಆನಂದರಾಮ್ ಎಂದಿದ್ದಾರೆ ಸಯ್ಯೇಷಾ.

    ಹೊಂಬಾಳೆ ಪ್ರೊಡಕ್ಷನ್ಸ್, ಸಂತೋಷ್ ಮತ್ತು ಪುನೀತ್ ಕಾಂಬಿನೇಷನ್ನ ಯುವರತ್ನ, ಕನ್ನಡಕ್ಕೆ ಬರೋಕೆ ನನಗೆ ಒಳ್ಳೆಯ ಆಯ್ಕೆಯಾಗಿತ್ತು. ಅದನ್ನು ಮಿಸ್ ಮಾಡಿಕೊಳ್ಳಲಿಲ್ಲ ಎಂದಿರೋ ಸಯ್ಯೇಷಾ, ಸದ್ಯಕ್ಕೆ ದುಬೈನಲ್ಲಿ  ತಮಿಳು ಚಿತ್ರವೊಂದರ ಶೂಟಿಂಗ್ನಲ್ಲಿದ್ದಾರೆ. ಕೊರೊನಾ ರೂಲ್ಸ್ ಕಾರಣ ಪ್ರಚಾರಕ್ಕೆ ಬರೋಕೆ ಸಾಧ್ಯವಾಗ್ತಿಲ್ಲ. ನಾನು ಬರಬೇಕು ಎಂದರೆ ಮತ್ತೊಮ್ಮೆ ಟೆಸ್ಟ್, ಕ್ವಾರಂಟೈನ್ ಎಲ್ಲವನ್ನೂ ಮಾಡಬೇಕು. ಚಿತ್ರದ ಪ್ರಚಾರವನ್ನು ಮಿಸ್ ಮಾಡಿಕೊಳ್ತಿದ್ದೇನೆ ಅನ್ನೋದು ಸಯ್ಯೇಷಾ ಮಾತು.

     

  • ಫಸ್ಟ್ ಶೋ ಮುಗಿಯೋ ಹೊತ್ತಿಗೆ ಯುವರತ್ನ ಪೈರಸಿ

    ಫಸ್ಟ್ ಶೋ ಮುಗಿಯೋ ಹೊತ್ತಿಗೆ ಯುವರತ್ನ ಪೈರಸಿ

    ಯುವರತ್ನ ಚಿತ್ರಕ್ಕೂ ಪೈರಸಿ ಕಾಟ ಬಿಟ್ಟಿಲ್ಲ. ಪುನೀತ್ ಅಭಿನಯದ ಯುವರತ್ನ ಚಿತ್ರದ ಫಸ್ಟ್ ಶೋ ಮುಗಿದು ಥಿಯೇಟರಿನಿಂದ ಹೊರಬರುವ ಹೊತ್ತಿಗೆ ಪೈರಸಿ ಮಾಡಿ ಲಿಂಕ್ ಬಿಟ್ಟಿದ್ದಾರೆ ಪೈರಸಿ ಕ್ರಿಮಿನಿಲ್ಸ್. ಹೊಂಬಾಳೆ ಫಿಲಮ್ಸ್ ಇದನ್ನು ನಿರೀಕ್ಷೆ ಮಾಡಿದ್ದ ಕಾರಣ, ಅಲ್ಲಿ ಲಿಂಕ್ ಬರುತ್ತಿದ್ದಂತೆ ಡಿಲೀಟ್ ಮಾಡುವ ಕೆಲಸ ಶುರು ಹಚ್ಚಿದೆ.

    ಇತ್ತೀಚೆಗೆ ಪೈರಸಿಯನ್ನು ವಿಪರೀತವಾಗಿ ಎದುರಿಸಿದ್ದ ಚಿತ್ರಗಳು ರಿಷಬ್ ಶೆಟ್ಟಿಯವರ ಹೀರೋ ಮತ್ತು ದರ್ಶನ್ ಅಭಿನಯದ  ರಾಬರ್ಟ್. ಈಗ ಸಹಜವಾಗಿಯೇ ಪವರ್ ಸ್ಟಾರ್ ಚಿತ್ರದ ಮೇಲೂ ಪೈರಸಿ ವೀರರು ಕಣ್ಣು ಹಾಕಿದ್ದಾರೆ.

    ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ. ಇದು ಚಿತ್ರಲೋಕದ ಕಳಕಳಿಯೂ ಹೌದು.

  • ಫೆ. 24 ಟ್ರಂಪ್ ಇಂಡಿಯಾಗೆ.. ಯುವರತ್ನ ಯೂರೋಪ್‍ಗೆ..

    yuvaratna movie team geared up for europe shoot

    ಫೆಬ್ರವರಿ 24, ಭಾರತ ಮತ್ತು ಅಮೆರಿಕ ಬಾಂಧವ್ಯಕ್ಕೆ ಮಹತ್ವದ ದಿನ. ಆ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲಿದ್ದಾರೆ. ಅದೇ ದಿನ ಯುವರತ್ನ ಚಿತ್ರಕ್ಕೂ ಮಹತ್ವದ ದಿನ. ಚಿತ್ರತಂಡ ಫೆ.24ರಂದು ಯೂರೋಪ್‍ನತ್ತ ಹೊರಟಿದೆ.

    ಯುವರತ್ನ ಚಿತ್ರದ ಡ್ಯುಯೆಟ್ ಸಾಂಗ್ ಶೂಟಿಂಗ್‍ಗಾಗಿ ಪುನೀತ್ ರಾಜ್‍ಕುಮಾರ್, ಸಯೇಷಾ ಯೂರೋಪ್‍ಗೆ ತೆರಳಲಿದ್ದಾರೆ. ಹೀರೋ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆಯಂತೆ.

    ಎಜುಕೇಷನ್ ಮಾಫಿಯಾ ಕುರಿತ ಚಿತ್ರದ ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಯುವರತ್ನ ಚಿತ್ರದಲ್ಲಿ ತಾರಾಬಳಗವೇ ತುಂಬಿ ತುಳುಕುತ್ತಿದೆ. ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು.. ರಾಜಕುಮಾರ ಚಿತ್ರದ ನಂತರ ಮತ್ತೆ ಒಂದುಗೂಡಿರುವ ಚಿತ್ರವಿದು.

  • ಮಠಾಧೀಶರುಗಳೂ ಮೆಚ್ಚಿದ ಯುವರತ್ನ

    ಮಠಾಧೀಶರುಗಳೂ ಮೆಚ್ಚಿದ ಯುವರತ್ನ

    ಸಿನಿಮಾವೊಂದು ಇಷ್ಟೆಲ್ಲ ರೀತಿಯಲ್ಲಿ ಸಂಚಲನ ಸೃಷ್ಟಿಸಬಹುದೇ ಎಂಬ ಪ್ರಶ್ನೆ ಹುಟ್ಟಿಸಿರುವುದು ಯುವರತ್ನ. ಸರ್ಕಾರದಿಂದ ಉದ್ಭವವಾದ ಸಡನ್ ಪ್ರಾಬ್ಲಂನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯುವರತ್ನ ಸಿನಿಮಾ, ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈಗ ಮಠಾಧೀಶರ ಸರದಿ.

    ಕಾಗಿನೆಲೆಯ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿವೈಎಸ್‍ಪಿ ಶ್ರೀ ನರಸಿಂಹ ತಾಮ್ರಧ್ವಜ, ಹರಿಹರಿ ಸಿಪಿಐ ಸತೀಶ್, ಪಿಎಸ್‍ಐ ವೀರೇಶ್ ಮೊದಲಾದವರು ಒಟ್ಟಿಗೇ ಹೋಗಿ ಸಿನಿಮಾ ನೋಡಿದ್ದಾರೆ.

    ಸಿನಿಮಾ ನೋಡಿ ಬಂದ ಮೇಲೆ ಸ್ವತಃ ಪುನೀತ್ ಅವರಿಗೆ ಕರೆ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ ಎಂದು ಹಾರೈಸಿದ್ದಾರೆ. ವಿವಿಧ ಸಮುದಾಯದ ಪ್ರಮುಖ ಸ್ವಾಮೀಜಿಗಳು ಒಟ್ಟಿಗೇ ಸಿನಿಮಾ ನೋಡಿದ್ದೇ ವಿಶೇಷವಾಗಿತ್ತು.

    ಇತ್ತ ಥಿಯೇಟರುಗಳಿಗೆ 50% ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಥಿಯೇಟರುಗಳ ಜೊತೆಗೆ ಒಟಿಟಿಯಲ್ಲೂ ರಿಲೀಸ್ ಆಗಿರುವ ಸಿನಿಮಾ ಯುವರತ್ನ, ಎಲ್ಲ ಕಡೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ಯುವ ಘರ್ಜನೆ ಶುರು

    ಯುವ ಘರ್ಜನೆ ಶುರು

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಚಿತ್ರದ ಘರ್ಜನೆ ಶುರುವಾಗಿದೆ. ಬೆಳಗ್ಗೆಯಿಂದಲೇ ಜೋಶ್ ಎಲ್ಲೆಲ್ಲೂ ಕಂಡುಬಂದಿದೆ. ಪುನೀತ್ ಫ್ಯಾನ್ಸ್ ಕ್ರೇಜ್ ಗೊತ್ತಿದ್ದ ಪೊಲೀಸರು, ರಾತ್ರಿಯೇ ಸೆಕ್ಯುರಿಟಿ ಟೈಟ್ ಮಾಡಿದ್ದ ಕಾರಣ ಎಲ್ಲಿಯೂ ಗದ್ದಲ, ಗಲಾಟೆಗಳಾಗಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಶುರುವಾಗಿವೆ.

    ಪವರ್ ಆಫ್ ಯೂಥ್ ಹಾಡು ಬರುತ್ತಿದ್ದಂತೆ ಸ್ಕ್ರೀನ್ ಎದುರೇ ಕುಣಿದು ಕುಪ್ಪಳಿಸಿದ್ದಾರೆ. ಸಿನಿಮಾ ಶುರುವಾಗೋಕೂ ಮುನ್ನ ಪೂಜೆ ಮಾಡಿ, ಈಡುಗಾಯಿ ಹೊಡೆದು ಶುಭ ಕೋರಿದ್ದಾರೆ. ನೂರಾರು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳೂ ನಡೆದಿವೆ. ಪಟಾಕಿಗಳು ಪಟಪಟನೆ ಸಿಡಿದಿವೆ.

  • ಯುವರತ್ನನ ಪ್ರೇಮಗೀತೆಯ ಸಂಭ್ರಮ

    ಯುವರತ್ನನ ಪ್ರೇಮಗೀತೆಯ ಸಂಭ್ರಮ

    ಪವರ್ ಆಫ್ ಯೂಥ್ ಹಾಡಿನ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಯುವರತ್ನ, ಈಗ ಪ್ರೇಮದ ಮೃದಂಗ ಬಾರಿಸಿದ್ದಾನೆ. ನೀನಾದೆ ನಾ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ನಿಧಾನವಾಗಿ ಪ್ರೇಕ್ಷಕರ ಎದೆಗಿಳಿಯುತ್ತಿದೆ.. ಥೇಟು ಪ್ರೀತಿಯಂತೆ..

    ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಕಾಂಬಿನೇಷನ್ನಿನ 2ನೇ ಸಿನಿಮಾ ಇದು. ಎಸ್. ತಮನ್ ಸಂಗೀತ ನೀಡಿರುವ ಚಿತ್ರದ ಹಾಡು, ಕನ್ನಡ ಮತ್ತು ತೆಲುಗು 2 ಭಾಷೆಗಳಲ್ಲೂ ರಿಲೀಸ್ ಆಗಿದೆ. ಅರ್ಮಾನ್ ಮಲಿಕ್, ತಮನ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ಕ್ಲಾಸ್ ಹಾಡಿದು. ಸಾಹಿತ್ಯ ಬರೆದಿರುವುದು ಗೌಸ್ ಪೀರ್. ತೆಲುಗಿನಲ್ಲಿ ಸಾಹಿತ್ಯ ನೀಡಿರುವುದು ರಾಮಜೋಗಯ್ಯ ಶಾಸ್ತ್ರಿ.

  • ಯುವರತ್ನನ ಯುವರಾಣಿ ಮದುವೆ ಆಗೋಯ್ತ್

    yuvaratna heroine sayyesha ties knot with arya

    ಸಯ್ಯೇಶಾ ಸೈಗಲ್. ಪುನೀತ್ ರಾಜ್‍ಕುಮಾರ್ ಜೊತೆ ಯುವರತ್ನ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕಲಾವಿದೆ. ಯುವರತ್ನ ಶೂಟಿಂಗ್ ಟೀಂ ಸೇರಿಕೊಳ್ಳೋ ಮೊದಲೇ ಮದುವೆಯನ್ನೂ ಮುಗಿಸಿಕೊಂಡಿದ್ದಾರೆ.

    ಅಫ್‍ಕೋರ್ಸ್, ಕೆಲವು ತಿಂಗಳ ಹಿಂದೆಯೇ ಸಯ್ಯೇಶಾ ಮದುವೆ ತಮಿಳು ಸ್ಟಾರ್ ನಟ ಆರ್ಯ ಜೊತೆ ಫಿಕ್ಸ್ ಆಗಿತ್ತು. ಈಗ ಮದುವೆ ಮುಗಿದಿದೆ. 

  • ಯುವರಾಣಿಯ ಜೊತೆ ಯುವರತ್ನನ ಫಾರಿನ್ ಟೂರ್

    yuvaratna song sequence shooting in australia and slovenia

    ಯುವರತ್ನ ಚಿತ್ರದ ದೃಶ್ಯಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಬಾಕಿ ಉಳಿದಿದ್ದದ್ದು ಹಾಡುಗಳ ಚಿತ್ರೀಕರಣ ಮಾತ್ರ. ಈಗ ಹಾಡುಗಳ ಚಿತ್ರೀಕರಣವೂ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಮತ್ತು ಸಯ್ಯೇಷಾ ವಿದೇಶಕ್ಕೆ ಹೊರಟಿದ್ದಾರೆ. ಯುವರತ್ನ ಟೀಂ ಹೋಗುತ್ತಿರುವುದು ಆಸ್ಟ್ರಿಯಾ ಮತ್ತು ಸ್ಲೊವೇನಿಯಾಗೆ.

    ಸ್ಲೊವೇನಿಯಾ ಮತ್ತು ಆಸ್ಟ್ರಿಯಾ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರೋದೇ ಅಪರೂಪ. ಇಲ್ಲವೇ ಇಲ್ಲ ಎನ್ನಬಹುದು. ಈ ದೇಶಗಳ ಅದ್ಭುತ ಪ್ರದೇಶಗಳನ್ನು ಸೆರೆಹಿಡಿಯಲು ಹೊರಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

    ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು 2ನೇ ಬಾರಿ ಜೊತೆಯಾಗಿರುವ ಸಿನಿಮಾ ಯುವರತ್ನ ಚಿತ್ರ, 2020ರ ಸೆನ್ಸೇಷನ್ ಚಿತ್ರ. ವೇಯ್ಟಿಂಗ್ ವೇಯ್ಟಿಂಗ್ ವೇಯ್ಟಿಂಗ್..