` aditi prabhudeva, - chitraloka.com | Kannada Movie News, Reviews | Image

aditi prabhudeva,

  • ಜಮಾಲಿಗುಡ್ಡದಲ್ಲಿ ಡಾಲಿ ಆದಿತಿ ರೊಮ್ಯಾನ್ಸ್

    ಜಮಾಲಿಗುಡ್ಡದಲ್ಲಿ ಡಾಲಿ ಆದಿತಿ ರೊಮ್ಯಾನ್ಸ್

    ರೌಡಿ, ರಫ್ & ಟಫ್ ಪಾತ್ರಗಳಲ್ಲೇ ಇತ್ತೀಚೆಗೆ ಹೆಚ್ಚಾಗಿ ನಟಿಸಿದ್ದ ಡಾಲಿ ಧನಂಜಯ್ ರೊಮ್ಯಾಂಟಿಕ್ ಟ್ರ್ಯಾಕ್ಗೆ ವಾಪಸ್ ಆಗಿದ್ದಾರೆ. ಅವರಿಗೆ ಜೊತೆಯಾಗಿರೋದು ಆದಿತಿ ಪ್ರಭುದೇವ. ಒನ್ಸ್ ಅಪಾನ್ ಎ ಟೈಂ ಜಮಾಲಿಗುಡ್ಡದಲ್ಲಿ ಅವರಿಬ್ಬರ ರೊಮ್ಯಾನ್ಸ್ಗೆ ಌಕ್ಷನ್ ಕಟ್ ಹೇಳ್ತಿರೋದು ಕುಶಾಲ್ ಗೌಡ.

    ಕನ್ನಡಕ್ಕಾಗಿ ಒಂದನ್ನು ಒತ್ತಿ ಅನ್ನೋ ವಿಭಿನ್ನ ಶೀರ್ಷಿಕೆಯ ಸಿನಿಮಾದಿಂದ ಗಮನ ಸೆಳೆದಿದ್ದ ಕುಶಾಲ್ ಗೌಡ, ಈ ಬಾರಿಯೂ ಡಿಫರೆಂಟ್ ಟೈಟಲ್ನ್ನೇ ಇಟ್ಟಿದ್ದಾರೆ.  ಒನ್ಸ್ ಅಪಾನ್ ಎ ಟೈಂ ಜಮಾಲಿಗುಡ್ಡದಲ್ಲಿ ಮಾಸ್ ಎಂಟರ್ಟೈನರ್ ರೊಮ್ಯಾಂಟಿಕ್ ಸ್ಟೋರಿ ಇದೆಯಂತೆ.

    ಜಮಾಲಿಗುಡ್ಡ ಅನ್ನೋದು ನಾವೇ ಸೃಷ್ಟಿಸಿರೋ ಒಂದು ಕಾಲ್ಪನಿಕ ಜಾಗ. ಅಲ್ಲಿ ನಡೆಯೋ ಲವ್ ಸ್ಟೋರಿಯನ್ನು ನಾವು ವಿಭಿನ್ನವಾಗಿ ಹೇಳ್ತೇವೆ ಅನ್ನೋದು ಕುಶಾಲ್ ಗೌಡ ಮಾತು. ಚಿತ್ರಕ್ಕೆ ಈಗಾಗಲೇ ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ತ್ರಿವೇಣಿ, ಪ್ರಕಾಶ್ ಶೆಣೈ, ನಂದಗೋಪಾಲ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀಹರಿ ಚಿತ್ರದ ನಿರ್ಮಾಪಕರು.

  • ಜಮಾಲಿಗುಡ್ಡದಲ್ಲಿ ಭಾವನೆಗಳದ್ದೇ ಆಟ..

    ಜಮಾಲಿಗುಡ್ಡದಲ್ಲಿ ಭಾವನೆಗಳದ್ದೇ ಆಟ..

    ಅಲ್ಲಿ ಪುಟ್ಟ ಮಗು ಮತ್ತು ಮಾಮನ ಪ್ರೀತಿಯಿದೆ.. ಅಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಅನ್ನೋ ಗೆಳೆಯರ ಸ್ನೇಹವಿದೆ. ಆದಿತಿ ಮತ್ತು ಕೃಷ್ಣರ ನಡುವಿನ ಪ್ರೀತಿಯ ಕಥೆಯೂ ಇದೆ..

    ಹೋರಾಟವಿದೆ.. ಭಾವನೆಗಳಿವೆ. ಕೊಲೆಗಳಿವೆ..ಕ್ರೈಂ ಇದೆ.. ಇವೆಲ್ಲವುಗಳ ಜೊತೆ ಜೊತೆಯಲ್ಲೇ ಭಾವನೆಗಳ ತಾಕಲಾಟವಿದೆ. ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರದ ಟ್ರೇಲರಿನಲ್ಲಿ ಈ ಎಲ್ಲವುಗಳ ಸ್ಪರ್ಶವಿದೆ.

    ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರವನ್ನು ನಿರ್ದೇಶಿಸಿದ್ದ ಕುಶಾಲ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಧನಂಜಯ, ಆದಿತಿ ಪ್ರಭುದೇವ, ಪ್ರಾಣ್ಯ ಪಿ.ರಾವ್, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಮಯೂರಿ ನಟರಾಜ್.. ಹೀಗೆ ಘಟಾನುಘಟಿಗಳ ದಂಡೇ ಚಿತ್ರದಲ್ಲಿದೆ. ಎಲ್ಲರ ನಿರೀಕ್ಷೆಯೂ ಇರುವುದು ಬಾಲನಟಿ ಪ್ರಾಣ್ಯ ಪಿ.ರಾವ್ ಅವರ ಮೇಲೆ. ಇಡೀ ಕಥೆ ನಡೆಯುವುದು ಅವರ ಸುತ್ತಲೇ ಎನ್ನುವುದು ವಿಶೇಷ.

    ನಿಹಾರಿಕಾ ಮೂವೀಸ್‍ನಲ್ಲಿ ಶ್ರೀಹರಿ ನಿರ್ಮಾಣ ಮಾಡಿರುವ ಚಿತ್ರ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಈ ಚಿತ್ರಕ್ಕೆ ಇಬ್ಬರು ಮ್ಯೂಸಿಕ್ ಡೈರೆಕ್ಟರ್ಸ್ ಇದ್ದಾರೆ. ಹಿನ್ನೆಲೆ ಸಂಗೀತ ಅನೂಪ್ ಸಿಳೀನ್ ಅವರದ್ದಾದರೆ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರದ್ದು. ಡಾಲಿ ಧನಂಜಯ್ ಅವರ ಬೇರೆಯದೇ ತೆರನಾದ ಲುಕ್ ನೋಡೋಕೇ ವಿಭಿನ್ನವಾಗಿಯೂ ಇದೆ. ಅಂದಹಾಗೆ ಈ ವರ್ಷವೇ ರಿಲೀಸ್ ಆಗುತ್ತಿರುವ ಈ ಚಿತ್ರ, ಈ ವರ್ಷದ ಧನಂಜಯ್ ನಟನೆಯ 6ನೇ ಸಿನಿಮಾ. ಡಿ.30ರಂದು ಸಿನಿಮಾ ತೆರೆ ಕಾಣಲಿದೆ.

  • ಡಬಲ್ ಮೀನಿಂಗ್ ಇದ್ದರೂ ತೋತಾಪುರಿಯಲ್ಲಿ ಒಂದೊಳ್ಳೆ ಸಂದೇಶವಿದೆ : ಸುಮನ್ ರಂಗನಾಥ್

    ಡಬಲ್ ಮೀನಿಂಗ್ ಇದ್ದರೂ ತೋತಾಪುರಿಯಲ್ಲಿ ಒಂದೊಳ್ಳೆ ಸಂದೇಶವಿದೆ : ಸುಮನ್ ರಂಗನಾಥ್

    ವಿಜಯ್ ಪ್ರಸಾದ್ ಅವರ ಕಥೆಗಳು ಮತ್ತು ಆಲೋಚನೆಗಳೇ ವಿಭಿನ್ನ. ಕೆಲವು ವಿಚಾರಗಳ ಬಗ್ಗೆ ಒಳಗೊಳಗೇ ಯೋಚಿಸುವ ಜನ ಅದನ್ನು ಗಟ್ಟಿಯಾಗಿ ಮಾತನಾಡಲು ಹೆದರುತ್ತಾರೆ. ಆದರೆ ವಿಜಯ ಪ್ರಸಾದ್ ಅದನ್ನು ಹಾಸ್ಯದ ಮೂಲಕ ಹೇಳುತ್ತಾರೆ. ಡಬಲ್ ಮೀನಿಂಗ್ ಹಾಸ್ಯವಿದ್ದರೂ ಅಲ್ಲೊಂದು ಸಂದೇಶವಂತೂ ಇರುತ್ತೆ.

    ಇದು ಸುಮನ್ ರಂಗನಾಥ್ ಮಾತು. ತೋತಾಪುರಿ ಚಿತ್ರದಲ್ಲಿ ಅವರು ಕ್ರೈಸ್ತ ಸನ್ಯಾಸಿನಿ ವಿಕ್ಟೋರಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ ವಿಜಯ್ ಪ್ರಸಾದ್ ಜೊತೆ  ಸಿದ್ಲಿಂಗು, ನೀರ್ ದೋಸೆ, ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ನಟಿಸಿರುವ ಸುಮನ್ ಅವರಿಗೆ ವಿಜಯ್ ಪ್ರಸಾದ್ ಇಷ್ಟವಾಗುವ ನಿರ್ದೇಶಕ.

    ಚಿತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪಾತ್ರಗಳಿವೆ. ಆದರೆ ವಿವಾದಾತ್ಮಕ ದೃಶ್ಯಗಳಿಲ್ಲ. ಸಂಭಾಷಣೆಗಳ ಮೂಲಕವೇ ಭಾವನೆ ಹೇಳಿದ್ದೇವೆ. ಸಾಮರಸ್ಯದಿಂದ ಬದುಕುವುದು ಹೇಗೆ ಅನ್ನೋ ಕಥೆಯೂ ಚಿತ್ರದಲ್ಲಿದೆ.ವಾಸ್ತವ ಮುಂದಿಡೋಕೆ ನಿರ್ದೇಶಕರಿಗೆ ಯಾವುದೇ ಭಯವಿಲ್ಲ. ಇನ್ನು ನನ್ನ ಪಾತ್ರದ ಜೊತೆಗಾರ ಡಾಲಿ ಧನಂಜಯ್ ಅವರ ಪಾತ್ರದ ಮೂಲಕ ಶಾಶ್ವತ ಪ್ರೀತಿಯನ್ನು ನೋಡುತ್ತೇವೆ ಎನ್ನುವುದು ಸುಮನ್ ಮಾತು.

    ಜಗ್ಗೇಶ್, ಆದಿತಿ ಪ್ರಭುದೇವ ನಟಿಸಿರುವ ಚಿತ್ರ ತೋತಾಪುರಿ ಭಾಗ 1 ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ.

     

  • ತೋತಾಪುರಿಯನ್ನು ಮಹಿಳಾ ಪ್ರೇಕ್ಷಕರೂ ಇಷ್ಟಪಟ್ಟಿದ್ದಾರೆ. ಕಲೆಕ್ಷನ್ ಚೆನ್ನಾಗಿದೆ : ಜಗ್ಗೇಶ್. ವಿಜಯ ಪ್ರಸಾದ್

    ತೋತಾಪುರಿಯನ್ನು ಮಹಿಳಾ ಪ್ರೇಕ್ಷಕರೂ ಇಷ್ಟಪಟ್ಟಿದ್ದಾರೆ. ಕಲೆಕ್ಷನ್ ಚೆನ್ನಾಗಿದೆ : ಜಗ್ಗೇಶ್. ವಿಜಯ ಪ್ರಸಾದ್

    ತೋತಾಪುರಿ ಕಳೆದ ವಾರ ಬಿಡುಗಡೆಯಾದ ಸಿನಿಮಾ. ಸಿನಿಮಾ ಥಿಯೇಟರ್‍ಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಜಗ್ಗೇಶ್-ಆದಿತಿ ಪ್ರಭುದೇವ, ಡಾಲಿ-ಸುಮನ್ ರಂಗನಾಥ್, ಹೇಮಾ ದತ್ ಪ್ರಮುಖ ಪಾತ್ರದಲ್ಲಿ ನಟಿಸಿರೋ ಸಿನಿಮಾಗೆ ವಿಜಯ್ ಪ್ರಸಾದ್ ನಿರ್ದೇಶನವಿದೆ. ಚಿತ್ರಕ್ಕೆ ಚಿತ್ರರಂಗದವರಿಂದಲೇ ನೆಗೆಟಿವ್ ಪ್ರಚಾರ ನಡೆಯುತ್ತಿದೆ ಎಂದು ಜಗ್ಗೇಶ್ ಕಿಡಿಕಾರಿದ್ದಾರೆ.

    ನಮ್ಮ ತೋತಾಪುರಿ ಗಜ ಗಂಭೀರದ ಹಾಗೆ. ಸ್ಥಿರತೆ ಕಾಯ್ದುಕೊಂಡಿದೆ. ಚೆನ್ನಾಗಿ ಹೋಗುತ್ತಿದೆ. ತೋತಾಪುರಿ ಜಾತೀಯತೆ ವಿರೋಧಿ ಸಿನಿಮಾ. ನಾನು 20ನೇ ವಯಸ್ಸಿನಲ್ಲೇ ಅಂತರ್ಜಾತಿ ಮದುವೆ ಆಗಿ ಮನೆಯಿಂದ ಹೊರದಬ್ಬಿಸಿಕೊಂಡವನು. ನಾನು ರಾಯರ ಭಕ್ತ. ರಾಯರೂ ಯಾವತ್ತೂ ಜಾತಿ ಧರ್ಮ ನೋಡಿದವರಲ್ಲ. ರಾಯರ ಮಠಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳಿಗೆ ವಿರೋಧ ವ್ಯಕ್ತವಾಗಿದೆ. ರಾಯರು ಮನುಷ್ಯನನ್ನಷ್ಟೇ ನೋಡಿದವರು. ಜಾತಿ ಧರ್ಮವನ್ನಲ್ಲ ಎಂದಿದ್ದಾರೆ ಜಗ್ಗೇಶ್.

    ಅಲ್ಲದೆ ತಮಿಳುನಾಡಿನಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರದ ಪ್ರಚಾರಕ್ಕೆ ಇಡೀ ತಮಿಳು ಚಿತ್ರರಂಗವೇ ಬಂದಿತ್ತು. ಆದರೆ ಕನ್ನಡದಲ್ಲಿ ಪರಿಸ್ಥಿತಿ ಹೀಗಿಲ್ಲ. ನಾವು ಬೇಲಿ ಹಾಕಿಕೊಂಡಿದ್ದೇವೆ. ನಮ್ಮದು ಮಾತ್ರ ಬೆಸ್ಟ್ ಎಂದು ಬೀಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ನಿರ್ದೇಶಕ ವಿಜಯ್ ಪ್ರಸಾದ್ ಚಿತ್ರದ ಕಲೆಕ್ಷನ್ ಚೆನ್ನಾಗಿದೆ. ಮಹಿಳಾ ಪ್ರೇಕ್ಷಕರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಸಿನಿಮಾದಲ್ಲಿನ ಗಟ್ಟಿ ವಿಚಾರ, ಚೇಷ್ಟೆಯನ್ನೂ ಜನ ಮೆಚ್ಚಿಕೊಂಡಿದ್ದಾರೆ ಎಂದರು.

  • ತ್ರಿಬ್ಬಲ್ ರೈಡಿಂಗ್ ವಿಜಯ ಯಾತ್ರೆ..

    ತ್ರಿಬ್ಬಲ್ ರೈಡಿಂಗ್ ವಿಜಯ ಯಾತ್ರೆ..

    ಗೋಲ್ಡನ್ ಸ್ಟಾರ್ ಗಣೇಶ್, ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ನಟಿಸಿರುವ ತ್ರಿಬ್ಬಲ್ ರೈಡಿಂಗ್ ಚಿತ್ರದ ಸಕ್ಸಸ್ ಟೂರ್ ಭರ್ಜರಿಯಾಗಿ ನಡೆಯುತ್ತಿದೆ. ಆದಿತಿ ಪ್ರಭುದೇವ ಮದುವೆಯ ಸಂಭ್ರಮದಲ್ಲಿದ್ದಾರೆ. ಗಣೇಶ್ ಮತ್ತೊಂದು ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದು ನಾಯಕಿಯರಾದ ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಹಾಗೂ ನಿರ್ದೇಶಕ ಮಹೇಶ್ ಗೌಡ ಚಿತ್ರತಂಡದ ಯಾತ್ರೆಯ ನೇತೃತ್ವ ವಹಿಸಿ ಮುನ್ನಡೆಯುತ್ತಿದ್ದಾರೆ. ನಿರ್ಮಾಪಕ ರಾಮ್ ಗೋಪಾಲ್ ಇಡೀ ತಂಡದ ಜೊತೆಯಲ್ಲಿಯೇ ಸಾಗುತ್ತಿದ್ದಾರೆ.

    ಬಿಡುಗಡೆಗೂ ಮೊದಲೇ ಲಾಭದಲ್ಲಿದ್ದ ತ್ರಿಬ್ಬಲ್ ರೈಡಿಂಗ್ ಕಲೆಕ್ಷನ್ ಸಮಾಧಾನಕರವಾಗಿದೆ. ಮೌತಿಂಗ್ ಪಬ್ಲಿಸಿಟಿಯೂ ಚೆನ್ನಾಗಿದ್ದು ಕಾಮಿಡಿಗಾಗಿಯೇ ಜನ ಥಿಯೇಟರಿಗೆ ಬರುತ್ತಿದ್ದಾರೆ. ಮೂವರು ಚೆಲುವೆಯರ ಜೊತೆ ಸಕ್ಕತ್ ರೊಮ್ಯಾನ್ಸ್ ಮಾಡಿರುವ ಗಣೇಶ್ ಅವರ ಕಾಮಿಡಿ ಟೈಮಿಂಗ್ ಮತ್ತೊಮ್ಮೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ ಡಬ್ಬಲ್ ಮೀನಿಂಗ್ ಇಲ್ಲದ ಹಾಸ್ಯ ಕುಟುಂಬಗಳಿಗೆ ಇಷ್ಟವಾಗಿದೆ.  ಸಂಸಾರ ಸಮೇತ ಮಕ್ಕಳೊಂದಿಗೆ ನೋಡಬಹುದಾದ ಕಾಮಿಡಿ ಚಿತ್ರ ತ್ರಿಬ್ಬಲ್ ರೈಡಿಂಗ್. ಮೈಸೂರು, ದಾವಣಗೆರೆ ಸೇರಿದಂತೆ ವಿವಿಧೆಡೆ ಚಿತ್ರತಂಡ ಯಾತ್ರೆ ಹೊರಟಿದೆ.

  • ನನ್ನ ಪಾತ್ರಕ್ಕೆ ಡಬಲ್ ಮೀನಿಂಗ್ ಡೈಲಾಗ್ ಇಲ್ಲ : ಆದಿತಿ ಪ್ರಭುದೇವ

    ನನ್ನ ಪಾತ್ರಕ್ಕೆ ಡಬಲ್ ಮೀನಿಂಗ್ ಡೈಲಾಗ್ ಇಲ್ಲ : ಆದಿತಿ ಪ್ರಭುದೇವ

    ಕೆಲವೊಂದು ನಲ್ಲಿಯಲ್ಲಿ ನೀರು ಜೋರಾಗಿ ಬರುತ್ತೆ. ಕೆಲವೊಂದರಲ್ಲಿ ಬರಲ್ಲ. ನಿಮ್ಮ ನಲ್ಲಿ ಹೇಗೆ.. ಎನ್ನುವ ಡೈಲಾಗ್ ನೆನಪಿದೆಯಾ? ತೋತಾಪುರಿ ಚಿತ್ರದ ಆ ಡೈಲಾಗ್ ಹೇಳೋದು ಆದಿತಿ ಪ್ರಭುದೇವ ಅನ್ನೋ ಟೀಚರ್ ಕ್ಯಾರೆಕ್ಟರ್.

    ತೋತಾಪುರಿ ಚಿತ್ರದ ಟ್ರೇಲರ್ ನೋಡಿದವರಿಗೆ ಅದು ಡಬಲ್ ಮೀನಿಂಗೋ.. ಸಿಂಗಲ್ ಮೀನಿಂಗೋ.. ಡೈರೆಕ್ಟ್ ಮೀನಿಂಗೋ.. ಅರ್ಥವಾಗಲ್ಲ. ಆದರೆ.. ಆದಿತಿ ಹೇಳೋದೇ ಬೇರೆ.

    ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಅಷ್ಟಾಗಿ ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲ. ಎಲ್ಲೋ ಮೂರ್ನಾಲ್ಕು ಕಡೆ ಬರುತ್ತದಷ್ಟೇ. ಬೇರೆ ಪಾತ್ರಗಳು ನಲ್ಲಿ, ಮೂಳೆ ಅಂತೆಲ್ಲ ಮಾತನಾಡ್ತಿರೋವಾಗ.. ಅದು ಏನು ಎಂದು ಅರ್ಥ ಮಾಡಿಕೊಂಡು ನಾನೂ ಹಾಗೆ ಮಾತನಾಡಬಹುದಾ ಎಂದೆಲ್ಲ ಯೋಚಿಸುವ ಹೊತ್ತಿಗೆ ಶೂಟಿಂಗೇ ಮುಗಿದು ಹೋಯ್ತು ಎನ್ನುತ್ತಾರೆ ಆದಿತಿ ಪ್ರಭುದೇವ.

    ಟ್ರೇಲರ್ ನೋಡಿದವರು ಕೆಲವರು ಮೆಚ್ಚಿದ್ದಾರೆ. ಕೆಲವರು ಹೀಗಳೆದೂ ಇದ್ದಾರೆ. ಎರಡನ್ನೂ ಸ್ವೀಕರಿಸಬೇಕು ಎನ್ನುವ ಆದಿತಿಗೆ ಜಗ್ಗೇಶ್ ಜೊತೆ ನಟಿಸಿದ ಖುಷಿ ಇದೆ. ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಒಳ್ಳೆಯ ಸಿನಿಮಾ. ಧರ್ಮ, ಜಾತಿ ಅನ್ನೋದನ್ನೆಲ್ಲ ಮೀರಿ ನಾವೆಲ್ಲ ಒಳ್ಳೆಯ ಮನುಷ್ಯರು ಎಂದು ಹೇಳೋ ಪ್ರಯತ್ನ ಚಿತ್ರದಲ್ಲಿದೆಯಂತೆ. ತೋತಾಪುರಿ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ.

  • ಫೆಬ್ರವರಿ 25ಕ್ಕೆ ಹಳೆ ಸನ್ಯಾಸಿ..!

    ಫೆಬ್ರವರಿ 25ಕ್ಕೆ ಹಳೆ ಸನ್ಯಾಸಿ..!

    ಓಲ್ಡ್ ಮಾಂಕ್. ಹಲವು ಕುಡುಕರ ಹಾರ್ಟ್ ಫೇವರಿಟ್. ಕುಡುಕರು ಇದನ್ನ ಪ್ರೀತಿಯಿಂದ ಹಳೆ ಸನ್ಯಾಸಿ ಅಂತಾನೇ ಕರೆದು ಖುಷಿ ಪಡ್ತಾರೆ. ಅದನ್ನೇ ತಮ್ಮ ಚಿತ್ರದ ಟೈಟಲ್ ಮಾಡಿಕೊಂಡ ಶ್ರೀನಿ ಈಗ ಸಿನಿಮಾ ರಿಲೀಸ್ ಮಾಡೋಕೆ ಶುಭ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

    ಎಂ.ಜಿ.ಶ್ರೀನಿವಾಸ್ ತಾವೇ ಹೀರೋ ಆಗಿ, ಡೈರೆಕ್ಷನ್ ಮಾಡಿರೋ ಸಿನಿಮಾ ಓಲ್ಡ್ ಮಾಂಕ್. ಕೊರೊನಾ, ವಿಕ್ರಾಂತ್ ರೋಣ, ಆರ್‍ಆರ್‍ಆರ್.. ಎಲ್ಲವನ್ನೂ ಮೈಂಡ್‍ನಲ್ಲಿಟ್ಟುಕೊಂಡು ನಾಲ್ಕು ಡೇಟ್ ಕೊಟ್ಟಿದ್ದ ಶ್ರೀನಿ, ಫೆಬ್ರವರಿ 25ನ್ನು ಫೈನಲ್ ಮಾಡಿದ್ದಾರೆ.

    ಶ್ರೀನಿಗೆ ಇಲ್ಲಿ ಅದಿತಿ ಪ್ರಭುದೇವ ಹೀರೋಯಿನ್. ಎಸ್.ನಾರಾಯಣ್, ಕಲಾತಪಸ್ವಿ ರಾಜೇಶ್, ಸುನಿಲ್ ರಾವ್, ಸುಜಯ್ ಶಾಸ್ತ್ರಿ, ಸಿಹಿಕಹಿ ಚಂದ್ರು ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.

  • ಬ್ರಹ್ಮಚಾರಿ : ಜಾಸ್ತಿ ಸೀರಿಯಸ್.. ಸ್ವಲ್ಪ ಪೋಲಿ.. ಅದೇ ವೀಕ್ನೆಸ್

    bramhachari trailer relased

    ಬ್ರಹ್ಮಚಾರಿ ಟೀಸರ್ ರಿಲೀಸ್ ಆಗಿದೆ. ಟೀಸರ್ ತುಂಬಾ ಕಚಗುಳಿಯಿಡುವ ಡೈಲಾಗ್ಸ್ ಇವೆ. ಬ್ರಹ್ಮಚಾರಿ ಟೀಸರ್ ಸ್ಪೆಷಾಲಿಟಿ ಏನೆಂದರೆ, ಅಲ್ಲಿ ನೀನಾಸಂ ಸತೀಶ್ ಪಾತ್ರ ನರಳುತ್ತಿದ್ದರೆ, ನೋಡುವವರು ನಗುತ್ತಿರುತ್ತಾರೆ. ಬ್ರಹ್ಮಚಾರಿ ಟೀಸರ್ ತುಸು ಪೋಲಿತನದಿಂದಲೇ ಶುರುವಾದರೂ, ಅಲ್ಲೇನೋ ಸೀರಿಯಸ್ ಪ್ರಾಬ್ಲಂ ಇದೆ.

    ಡಬಲ್ ಮೀನಿಂಗ್ ಇಲ್ಲವೇ ಇಲ್ಲ. ಎಲ್ಲವೂ ನೇರಾನೇರ. ಹಾಗಂತ ಕೆಟ್ಟಾ ಕೊಳಕ ಭಾಷೆಯೇನೂ ಇಲ್ಲ. ನೀನಾಸಂ ಸತೀಶ್ ಜೊತೆ ಮಾತನಾಡುವ ಪ್ರತಿಯೊಂದು ಪಾತ್ರವೂ ಸೀರಿಯಸ್ಸಾಗಿಯೇ ಮಾತನಾಡುತ್ತೆ. ಆದಿತಿಯೂ ಸೇರಿದಂತೆ.. ಕೇಳುವವರು ಕೆಟ್ಟದಾಗಿ ಕೇಳಿಸಿಕೊಂಡ್ರೆ ನಿರ್ದೇಶಕರು ಪಾಪ ಏನ್ ಮಾಡೋಕಾಗುತ್ತೆ.

    ಮದುವೆಯಾಗೋ ಬ್ರಹ್ಮಚಾರಿಗೆ ಅದೊಂದೇ ವೀಕ್ನೆಸ್. ಅದರ ಸುತ್ತಲೇ ಇದೆ ಟೀಸರ್. ಸತೀಶ್, ಆದಿತಿ ಪ್ರಭುದೇವ ಹಿಡ್ಕ ಹಿಡ್ಕ ಸಾಂಗಿನ ಝಲಕ್ಕೂ ಇರೋ ಟೀಸರಿನಲ್ಲಿ ದತ್ತಣ್ಣ ಡಾಕ್ಟರ್ ಆಗಿ, ಶಿವರಾಜು, ಅಶೋಕ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಆದಿತಿಯ ತಾಯಿಯಾಗಿ ಪದ್ಮಜಾ ರಾವ್, ಸರ್ಕಾರಿ ನೌಕರನಾಗಿ ಅಚ್ಯುತ್ ಕುಮಾರ್ ಇದ್ದಾರೆ.

    ಉದಯ್ ಕೆ.ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್.

  • ಬ್ರಹ್ಮಚಾರಿ ಗೆದ್ದನಲ್ಲ.. ಹಿಡ್ಕೊಳ್ಳೋದು ಹೆಂಗ.

    bramhachari screenings increased post movie release

    ಹಿಡ್ಕ ಹಿಡ್ಕ ಹಿಡ್ಕ ಹಿಡ್ಕ.. ಎನ್ನುತ್ತ ಹಾಡಿನ ಹವಾ ಸೃಷ್ಟಿಸಿದ್ದ ಬ್ರಹ್ಮಚಾರಿ ಗೆದ್ದೇ ಬಿಟ್ಟಿದ್ದಾನೆ. ಸಿನಿಮಾ ರಿಲೀಸ್ ಮಾಡಿದ್ದು 200 ಸೆಂಟರುಗಳಲ್ಲಿ. 2ನೇ ವಾರ ಪೂರೈಸುತ್ತಿರುವ ಬ್ರಹ್ಮಚಾರಿ, ಈಗ 225 ಸೆಂಟರುಗಳಲ್ಲಿ ನಕ್ಕು ನಲಿಸುತ್ತಿದ್ದಾರೆ. ಸಿನಿಮಾ ಗೆದ್ದಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲವೇನೊ..

    ನೀನಾಸಂ ಸತೀಶ್, ಆದಿತಿ ಪ್ರಭುದೇವ ಅಭಿನಯದ ಬ್ರಹ್ಮಚಾರಿ 45 ಸಿನಿಮಾಗಳ ಜೊತೆ ರಿಲೀಸ್ ಆಗಿದ್ದ ಸಿನಿಮಾ. ಅಷ್ಟು ದೊಡ್ಡ ರೇಸ್‌ನಲ್ಲಿ ಗೆದ್ದ ಸಿನಿಮಾ. ಉದಯ್ ಕುಮಾರ್ ಮೆಹ್ತಾ-ಸತೀಶ್ ಕಾಂಬಿನೇಷನ್ ಮತ್ತೊಮ್ಮೆ ವರ್ಕೌಟ್ ಆಗಿದೆ. ಚಂದ್ರಮೋಹನ್ ತುಂಟಾಟ ಆಡಿಸಿ ಮತ್ತೊಮ್ಮೆ ಹಿಟ್ ಹಿಡ್ಕೊಂಡಿದ್ದಾರೆ. 

  • ಮರಾಠಿಗೆ ಹೊರಟ ಶ್ಯಾನೆ ಟಾಪ್ ಹುಡ್ಗಿ

    aditi prabhudeva enters marathi films

    ಕನ್ನಡದಲ್ಲಿ ಇತ್ತೀಚೆಗೆ ಅತ್ಯಂತ ಭರವಸೆ ಹುಟ್ಟಿಸಿರುವ ಪ್ರತಿಭೆ ಆದಿತಿ ಪ್ರಭುದೇವ. ಶ್ಯಾನೆ ಟಾಪಾಗವ್ಳೆ ಚಿತ್ರದ ಹಾಡಿನ ಮೂಲಕ, ಹಿಡ್ಕ ಹಿಡ್ಕ ಹಾಡಿನಲ್ಲಿ ಮ್ಯಾಜಿಕ್ ಮಾಡಿದ್ದ ಆದಿತಿ, ರಂಗನಾಯಕಿ ಚಿತ್ರದಲ್ಲಿ ಬೆಚ್ಚಿ ಬೀಳಿಸುವ ಅಭಿನಯವನ್ನೂ ನೀಡಿದ್ದರು. ಈಗ ಅವರು ಮರಾಠಿ ಚಿತ್ರರಂಗಕ್ಕೆ ಹೊರಟು ನಿಂತಿದ್ದಾರೆ.

    ರಾಹುಲ್ ಶಿಂಧೆ ನಿರ್ದೇಶನದ ಹೊಸ ಮರಾಠಿ ಚಿತ್ರ ಚಾಂಪಿಯನ್ ಚಿತ್ರದಲ್ಲಿ ಆದಿತಿ ಹೀರೋಯಿನ್. ಸಚಿನ್ ಧಮಾಲ್ ಆ ಚಿತ್ರದಲ್ಲಿ ಹೀರೋ.

     

  • ಮಾಫಿಯಾಗೆ ಪ್ರಜ್ವಲ್, ಆದಿತಿ ಎಂಟ್ರಿ

    ಮಾಫಿಯಾಗೆ ಪ್ರಜ್ವಲ್, ಆದಿತಿ ಎಂಟ್ರಿ

    ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ಪೊಲೀಸ್ ಆಗುತ್ತಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ ನಂತರ ಮತ್ತೊಮ್ಮೆ ಖಾಕಿಧಾರಿಯಾಗುತ್ತಿದ್ದಾರೆ ಪ್ರಜ್ವಲ್. ಪ್ರಜ್ವಲ್ಗೆ ಜೋಡಿಯಾಗಿರೋದು ಬೆಣ್ಣೆ ಬಾಲೆ ಆದಿತಿ ಪ್ರಭುದೇವ. ಲೋಹಿತ್ ನಿರ್ದೇಶನದ ಚಿತ್ರ ಮಾಫಿಯಾ.

    ಇದು ಮಾನವ ಕಳ್ಳಸಾಗಾಣಿಕೆ ಕುರಿತ ಥ್ರಿಲ್ಲರ್ ಕಥೆಯಾಗಿದ್ದು, ಚಿತ್ರದಲ್ಲಿ ದೇವರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಬಿ.ಕುಮಾರ್ ನಿರ್ಮಾಣದ ಸಿನಿಮಾ ಈಗ ಸೆಟ್ಟೇರಿದೆ. ಅನೂಪ್ ಸಿಳೀನ್ ಸಂಗೀತ ನೀಡುತ್ತಿದ್ದಾರೆ. ವೀರಂ ಚಿತ್ರಕ್ಕಾಗಿ ಉದ್ದನೆ ಕೂದಲು ಬಿಟ್ಟಿದ್ದ ಪ್ರಜ್ವಲ್, ಈ ಚಿತ್ರಕ್ಕಾಗಿ ಹೇರ್ ಕಟ್ ಮಾಡಿಸಿದ್ದಾರೆ. ಕಟ್ ಮಾಡಿದ ಕೂದಲನ್ನು ಕ್ಯಾನ್ಸರ್ ಸಂತ್ರಸ್ತರಿಗೆ ನೀಡಿದ್ದಾರೆ.

  • ಯೋಗಿಯ ‘ಒಂಭತ್ತನೇ ದಿಕ್ಕು’ ಆದಿತಿಯೇ ಅಧಿಪತಿ

    arya claps for ombattane dikku movie

    ಲೂಸ್ ಮಾದ ಯೋಗಿ ದಯಾಳ್ ಪದ್ಮನಾಭನ್ ಇದೇ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ನಾಯಕಿ ಆದಿತಿ ಪ್ರಭುದೇವ ರಂಗನಾಯಕಿ ಚಿತ್ರದ ನಂತರ ಮತ್ತೊಮ್ಮೆ ದಯಾಳ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒನ್ಸ್ ಎಗೇಯ್ನ್ ಒಂದು ಥ್ರಿಲ್ಲರ್ ಕಥೆಯನ್ನಿಟ್ಟುಕೊಂಡೇ ಬಂದಿದ್ದಾರೆ ದಯಾಳ್. ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ತಮಿಳು ನಟ ಆರ್ಯ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ.

    ಸರಳವಾದ ಕಥೆಗಳನ್ನು ಮನಮುಟ್ಟುವಂತೆ ಹೇಳೋದ್ರಲ್ಲಿ ಯಶಸ್ಸು ಕಂಡಿರುವ ದಯಾಳ್, ರಂಗನಾಯಕಿ ಚಿತ್ರವನ್ನು ಮುಗಿಸಿದ್ದಾರೆ. ಅದು ರಿಲೀಸ್ ಆಗುವ ಮೊದಲೇ ಎಂದಿನಂತೆ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅಫ್ಕೋರ್ಸ್, ಈ ಚಿತ್ರದಲ್ಲೂ ದಯಾಳ್ ಜೊತೆ ನವೀನ್ ಕೃಷ್ಣ ಜೊತೆಯಾಗಿದ್ದಾರೆ.

  • ರಂಗನಾಯಕಿ : ಮಹಿಳೆಯರಿಗಾಗಿಯೇ ಸ್ಪೆಷಲ್ ಶೋ

    ranganayaki special show for women

    ದಯಾಳ್ ಪದ್ಮನಾಭ್ ನಿರ್ದೇಶನದ ರಂಗನಾಯಕಿ ಚಿತ್ರದಲ್ಲಿರೋದು ಅತ್ಯಾಚಾರಕ್ಕೊಳಗಾದ ಮಹಿಳೆ, ನ್ಯಾಯಕ್ಕಾಗಿ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಡುವ ಕಥೆ. ಆದಿತಿ ಪ್ರಭುದೇವ ನಟಿಸಿರುವ ಕಥೆಯ ಕೇಂದ್ರ ಬಿಂದು ಮಹಿಳೆ.

    ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣವೇ ಇದಕ್ಕೆ ಪ್ರೇರಣೆ. ಆ ನಿರ್ಭಯಾ ಬದುಕಿದ್ದರೆ ಏನು ಮಾಡುತ್ತಿದ್ದಳು.. ನ್ಯಾಯಕ್ಕಾಗಿ ಹೇಗೆಲ್ಲ ಹೋರಾಡಬೇಕಿತ್ತು ಎಂಬ ಕಲ್ಪನೆಯಲ್ಲಿ ಅರಳಿರುವ ಕಥೆಯೇ ರಂಗನಾಯಕಿ. ಹೀಗಾಗಿ ಈ ಚಿತ್ರದ ವಿಶೇಷ ಪ್ರದರ್ಶನವೊಂದನ್ನು ಮಹಿಳೆಯರಿಗಾಗಿಯೇ ಏರ್ಪಡಿಸಲಿದ್ದೇವೆ ಎಂದಿದ್ದಾರೆ ದಯಾಳ್.

    ಎಸ್.ವಿ.ನಾರಾಯಣ್ ನಿರ್ಮಾಣದ ಚಿತ್ರ ನವೆಂಬರ್ ರಾಜ್ಯೋತ್ಸವಕ್ಕಾಗಿಯೇ ರಿಲೀಸ್ ಆಗುತ್ತಿದೆ. ಬ್ರಿಡ್ಜ್ ಚಿತ್ರಗಳ ಎಕ್ಸ್‍ಪರ್ಟ್ ಆಗಿರುವ ದಯಾಳ್ ಅವರ ರಂಗನಾಯಕಿ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

  • ರಂಗನಾಯಕಿ ಚಾಲೆಂಜ್

    ranganayaki is an experiment

    ರಂಗನಾಯಕಿ, ಅತ್ಯಾಚಾರ ಸಂತ್ರಸ್ತೆಯೊಬ್ಬಳ ಕಾನೂನು ಹೋರಾಟದ ಸಿನಿಮಾ. ಬೆಳ್ಳಿತೆರೆಯ ಮೇಲೆ ಅತ್ಯಾಚಾರದ ಸೀನ್ ಹೊಸದಲ್ಲವಾದರೂ, ಅತ್ಯಾಚಾರ ಸಂತ್ರಸ್ತೆಯ ಹೋರಾಟವನ್ನೇ ಸಿನಿಮಾ ಮಾಡಿರುವುದು ಬಹುಶಃ ಬೆಳ್ಳಿತೆರೆಯ ಮೇಲೆ ಇದೇ ಮೊದಲು. ಅಂಥಾದ್ದೊಂದು ಸಾಹಸಕ್ಕೆ ಕೈ ಹಾಕಿ ಗೆಲುವಿನ ಹೆಜ್ಜೆ ಇಟ್ಟಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್.

    ಇದೊಂದು ಪ್ರಯೋಗಾತ್ಮಕ ಚಿತ್ರ. ಈ ತರಹದ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡುವವರೇ ಕಡಿಮೆ ಎನ್ನುವ ದಯಾಳ್, ಇಡೀ ಚಿತ್ರದ ಕತೆ, ಚಿತ್ರಕಥೆಯನ್ನು ಹತ್ತಾರು ಬಾರಿ ತಿದ್ದಿದ್ದಾರಂತೆ. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪನೋರಾಮದಿಂದ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ರಂಗನಾಯಕಿ. ಚಿತ್ರವನ್ನು ನೋಡಿದವರು ಆಡುತ್ತಿರುವ ಮೆಚ್ಚುಗೆ ಮಾತುಗಳು ದಯಾಳ್ ಅವರಿಗೆ ತೃಪ್ತಿ ಕೊಟ್ಟಿವೆ.

    ಎಸ್.ವಿ.ನಾರಾಯಣ್ ಎಂಟರ್‍ಟೈನ್‍ಮೆಂಟ್ ಬ್ಯಾನರ್‍ನಲ್ಲಿ ಎಸ್.ವಿ.ನಾರಾಯಣ್ ನಿರ್ಮಾಣ ಮಾಡಿರುವ ಚಿತ್ರ ರಂಗನಾಯಕಿ. ಆದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿದ್ದು, ಜೊತೆಯಲ್ಲಿ ಶ್ರೀನಿ, ತ್ರಿವಿಕ್ರಂ, ಸುಚೇಂದ್ರ ಪ್ರಸಾದ್, ಸಿಹಿಕಹಿ ಚಂದ್ರು, ಸುಂದರ್ ರಾಜ್, ರವಿಭಟ್ ಮೊದಲಾದವರು ನಟಿಸಿದ್ದಾರೆ.

  • ರಂಗನಾಯಕಿ ಹೀರೋ ಯಾರು..?

    who is the hero of ranganayaki ?

    ಇದೇ ವಾರ ರಿಲೀಸ್ ಆಗುತ್ತಿರುವ ರಂಗನಾಯಕಿ ಚಿತ್ರದ ನಾಯಕಿ ಎಲ್ಲರಿಗೂ ಗೊತ್ತಿದೆ. ಆದಿತಿ ಪ್ರಭುದೇವ ಎಂಬ ಸ್ಯಾಂಡಲ್‍ವುಡ್‍ನಲ್ಲಿ ಅರಳುತ್ತಿರುವ ಪ್ರತಿಭೆ ಆದಿತಿ. ವೃತ್ತಿ ಜೀವನದ ಆರಂಭದ ದಿನಗಳಲ್ಲೆ ಸವಾಲಿನ ಪಾತ್ರ ಎದುರಿಸಿದ್ದಾರೆ ಆದಿತಿ. ಅತ್ಯಾಚಾರಕ್ಕೊಳಗಾಗಿ.. ನಂತರ ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುವ ಯುವತಿಯ ಪಾತ್ರ ಆದಿತಿಯದ್ದು. ಇಷ್ಟು ನಾಯಕಿ ಓರಿಯಂಟೆಡ್ ಆಗಿರೋ ಚಿತ್ರದ ಹೀರೋ ಯಾರು..?

    ಟೋಪಿವಾಲಾ, ಬೀರ್‍ಬಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳನ್ನು ನಿರ್ದೇಶಿಸಿದ್ದ, ನಾಯಕರಾಗಿಯೂ ಗೆದ್ದಿರುವ ಶ್ರೀನಿವಾಸ್, ಈ ಚಿತ್ರದ ಹೀರೋ. ಬೀರ್‍ಬಲ್ ನಂತರ ಮುಂದಿನ ಚಿತ್ರಕ್ಕೆ ರೆಡಿಯಾಗುತ್ತಿದೆ. ಆಗ ದಯಾಳ್ ಈ ಚಿತ್ರದ ಕಥೆ ಹೇಳಿ, ಪಾತ್ರದ ಆಫರ್ ಕೊಟ್ಟರು. ಕಥೆಯೂ ಇಷ್ಟವಾಯ್ತು. ಪಾತ್ರವೂ ಇಷ್ಟವಾಯ್ತು. ಒಂದೊಳ್ಳೆ ಸಂದೇಶ ಹೇಳುವ ಚಿತ್ರ ಮತ್ತು ಪಾತ್ರ ಎಂದಿದ್ದಾರೆ ಶ್ರೀನಿ.

    ತ್ರಿವಿಕ್ರಮ್ ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ನವೆಂಬರ್ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ.

  • ರಂಗನಾಯಕಿ.. ಆ ಚಿತ್ರವೂ ಕ್ರಾಂತಿ.. ಈ ಚಿತ್ರವೂ ಕ್ರಾಂತಿ..!!!

    ranganayaki  then and now

    ರಂಗನಾಯಕಿ ಟೈಟಲ್ಲಿನ ಸಿನಿಮಾ ರಾಜ್ಯೋತ್ಸವದ ದಿನ ಪ್ರೇಕ್ಷಕರ ಎದುರು ಬರಲಿದೆ. ಚಿತ್ರದಲ್ಲಿರೋದು ಒಂದು ಕ್ರಾಂತಿಕಾರಕ ಸಬ್ಜೆಕ್ಟ್. ಇಡೀ ಚಿತ್ರ ಅತ್ಯಾಚಾರಕ್ಕೊಳಗಾದ ಹೆಣ್ಣೊಬ್ಬಳು ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟ ಹಾಗೂ ಆಕೆ ಸಮಾಜದಲ್ಲಿ ಎದುರಿಸುವ ಸವಾಲುಗಳ ಸುತ್ತ ಇದೆ. ಅದೇ ಆ ರಂಗನಾಯಕಿಯಂತೆ... ಈ ರಂಗನಾಯಕಿಯೂ ಕ್ರಾಂತಿಕಾರಿಯೇ..

    ಆ ರಂಗನಾಯಕಿ ನೆನಪಾಗಿದ್ದು ಈ ಕಾರಣಕ್ಕೆ. ಪುಟ್ಟಣ್ಣ ನಿರ್ದೇಶನದ ಆ ರಂಗನಾಯಕಿಯಲ್ಲಿ ನಾಟಕದ ಕಲಾವಿದೆಯೊಬ್ಬಳು.. ಸಿನಿಮಾ ತಾರೆಯಾಗಿ ಖ್ಯಾತಳಾಗುತ್ತಾಳೆ. ಈ ಹಾದಿಯಲ್ಲಿ ಆಕೆ ತನ್ನ ಪತಿ, ಮಗುವಿಂದ ದೂರವಾಗುತ್ತಾಳೆ. ಖ್ಯಾತಿಯ ಉತ್ತುಂಗದಲ್ಲಿರುವಾಗ ಆಕೆಯನ್ನು ಒಬ್ಬ ಕಾಲೇಜು ಹುಡುಗ ಮೋಹಿಸುತ್ತಾನೆ. ವಿಚಿತ್ರವೆಂದರೆ.. ಆಕೆಯನ್ನು ಮೋಹಿಸುವುದು ಆಕೆಯೇ ಹೆತ್ತ ಮಗ. ತಾಯಿಯೇ ಮಗನನ್ನು ಪ್ರೀತಿಸುವ ಆ ಕಥೆ ಆಗಿನ ಕಾಲಕ್ಕಷ್ಟೇ ಅಲ್ಲ, ಈಗಿನ ಕಾಲಕ್ಕೂ ಕ್ರಾಂತಿಕಾರಕವೇ...

    ಈಗ ದಯಾಳ್ ಪದ್ಮನಾಭನ್ ಕೂಡಾ ಅಂಥದ್ದೇ ಒಂದು ಕ್ರಾಂತಿಕಾರಕ ಸಬ್ಜೆಕ್ಟ್‍ಗೆ ಕೈ ಹಾಕಿದ್ದಾರೆ. ನನ್ನ ಮೇಲೆ ರೇಪ್ ಆಯಿತು ಎಂದು ಹೇಳಿಕೊಳ್ಳುವುದೇ ಅಪಮಾನಕರ ಎನ್ನುವ ಮನಸ್ಥಿತಿ, ಈಗಲೂ ಸಮಾಜದಲ್ಲಿದೆ. ಸಂತ್ರಸ್ತೆಗೆ ಧೈರ್ಯ ಹೇಳುವುದಕ್ಕಿಂತ ಹೆಚ್ಚಾಗಿ ಆಕೆಯನ್ನು ಮಾನಸಿಕವಾಗಿ ಹಿಂಸಿಸುವವರೇ ಹೆಚ್ಚು. ಅಂಥದ್ದರಲ್ಲಿ ಅದನ್ನು ಎದುರಿಸಿ ನಿಲ್ಲುವ ಸಬ್ಜೆಕ್ಟ್ ಹಿಡಿದು ಬಂದಿದ್ದಾರೆ ದಯಾಳ್. ಅದೇ ರಂಗನಾಯಕಿ ಟೈಟಲ್ಲಿನ ಜೊತೆ.

    ಅತ್ಯಾಚಾರದಂತಹ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕುವವರ ನಡುವೆ ಆದಿತಿ ಪ್ರಭುದೇವ.. ಆಗಿನ ರಂಗನಾಯಕಿಯಲ್ಲಿ ಆರತಿ ಮಾಡಿದ್ದಂತಹುದೇ ಧೈರ್ಯ ತೋರಿಸಿದ್ದಾರೆ.

  • ರಂಗನಾಯಕಿಯಲ್ಲೂ ಇದೆಯಾ ನಿರ್ಭಯಾ ಪ್ರಕರಣದ ಭೀಕರತೆ..?

    ranganayaki reminds of delhi's nirbhaya case

    ನಿರ್ಭಯಾ ಪ್ರಕರಣವನ್ನು ಆಧರಿಸಿಯೇ ಸಿದ್ಧವಾದ ಕಾದಂಬರಿ ರಂಗನಾಯಕಿ. ಆ ಕಾದಂಬರಿಯನ್ನೇ ಸಿನಿಮಾ ಆಗಿಸಿದ್ದಾರೆ ನಿರ್ದೇಶಕ ದಯಾಳ್. ಎಸ್.ವಿ.ನಾರಾಯಣ್ ನಿರ್ಮಾಪಕರಾಗಿರುವ ಚಿತ್ರದಲ್ಲಿರೋದು ನಿರ್ಭಯಾ ಪ್ರಕರಣದಂತೆಯೇ ನಡೆಯುವ ಒಂದು ಅತ್ಯಾಚಾರ ಹಾಗೂ ಅದಾದ ಮೇಲೆ ಬದುಕಿದ ಯುವತಿ, ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದ ಕಥೆ. ಚಿತ್ರದಲ್ಲಿ ಆದಿತಿ ಪ್ರಭುದೇವ ನಾಯಕಿ.

    ಚಿತ್ರದ ಬಗ್ಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಪನೋರಾಮಾಗೂ ಆಯ್ಕೆಯಾಗಿರುವ ಸಿನಿಮಾ ಇದು. ಆದರೆ, ಅತ್ಯಾಚಾರವನ್ನು ಭಯಂಕರವಾಗಿ ತೋರಿಸಿಲ್ಲ ಎನ್ನುತ್ತಿದ್ದರೂ, ಎಲ್ಲರಿಗೂ ಪದೇ ಪದೇ ಕಾಡುತ್ತಿರುವುದು ನಿರ್ಭಯಾ ಪ್ರಕರಣದ ಭೀಕರತೆ.

    ಡಿಸೆಂಬರ್ 16, 2012ರಲ್ಲಿ ನಡೆದಿದ್ದ ಪ್ರಕರಣ ಅದು. ವೈದ್ಯ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಹೆಸರನ್ನು ನಿರ್ಭಯಾ ಎಂದೇ ಕರೆಯಲಾಯಿತಾದರೂ, ಕೆಲವು ವರ್ಷಗಳ ನಂತರ ಆಕೆಯ ತಾಯಿಯೇ ತಮ್ಮ ಮಗಳ ಹೆಸರನ್ನು ಹೇಳೋಕೆ ಭಯವಿಲ್ಲ ಎಂದಿದ್ದರು. ಇಷ್ಟಾದರೂ ಇಡೀ ಪ್ರಕರಣ ನೆನಪಾಗಿರುವುದು ನಿರ್ಭಯಾ ಕೇಸ್ ಎಂದೇ.

    ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 6 ಮಂದಿ ಕಿರಾತಕರು ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದರು. ಅತ್ಯಂತ ದಾರುಣವಾಗಿ ಗುಪ್ತಾಂಗಕ್ಕೆ ಸರಳುಗಳನ್ನು ಚುಚ್ಚಿ, ಮೈಕೈಯನ್ನೆಲ್ಲ ಕಚ್ಚಿ ಭೀಕರಾಗಿ ರೇಪ್ ಮಾಡಿದ್ದರು. ನಂತರ ಆಕೆಯನ್ನು ರಸ್ತೆಯಲ್ಲಿಯೇ ಬೆತ್ತಲೆಯಾಗಿ ಎಸೆದು ಹೋಗಿದ್ದರು. ಸತತ 13 ದಿನ ಆಸ್ಪತ್ರೆಯಲ್ಲಿ ನರಳಿದ ಯುವತಿ, ಕೊನೆಗೆ ಪ್ರಾಣಬಿಟ್ಟರು. ಆಗ ಅದು ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಪ್ರಕರಣ.

    ಆ ಕಥೆಯಲ್ಲಿ ಆಕೆಯೇನೋ ಸತ್ತಳು. ಅಕಸ್ಮಾತ್ ಬದುಕಿದ್ದರೆ.. ಕಾನೂನಿನಲ್ಲಿ ನ್ಯಾಯಕ್ಕಾಗಿ ಹೋರಾಡಲು ಮುಂದಾಗಿದ್ದರೆ.. ಆ ಕಲ್ಪನೆಯೇ ರಂಗನಾಯಕಿ.

  • ರಾಜ್ಯೋತ್ಸವಕ್ಕೆ ರಂಗನಾಯಕಿ

    ranganayak for rajyotsava

    ದಯಾಳ್ ಪದ್ಮನಾಭನ್ ನಿರ್ದೇಶನದ ಹೊಸ ಸಿನಿಮಾ ರಂಗನಾಯಕಿ. ಇದೇ ನವೆಂಬರ್ 1ಕ್ಕೆ ತೆರೆ ಮೇಲೆ ಬರುತ್ತಿದೆ. ಈಗಾಗಲೇ ಭಾರತೀಯ ಪನೋರಮಾಗೆ ಆಯ್ಕೆಯಾಗಿ ಮೊದಲ ಮೆಚ್ಚುಗೆ ಗಳಿಸಿರುವ ಚಿತ್ರವಿದು. ಅಂದಹಾಗೆ ಇದು ಕಾದಂಬರಿ ಆಧರಿತ ಸಿನಿಮಾ. ದಯಾಳ್ ಅವರು ಮೊದಲು ಕಾದಂಬರಿ ಬರೆದು, ನಂತರ ಅದನ್ನೇ ಸಿನಿಮಾ ರೂಪಕ್ಕಿಳಿಸಿದ್ದಾರೆ.

    ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವೇ ಚಿತ್ರದ ಕಥೆಗೆ ಸ್ಫೂರ್ತಿ. ಅಕಸ್ಮಾತ್ ನಿರ್ಭಯಾ ಆ ದುರಂತದ ನಂತರ ಬದುಕಿದ್ದರೆ, ನ್ಯಾಯಕ್ಕಾಗಿ ಹೋರಾಡುವ ಮನಸ್ಸು ಮಾಡಿದ್ದರೆ ಆಕೆ ಏನೇನೆಲ್ಲ ಸವಾಲು ಎದುರಿಸಬೇಕಾಗಿತ್ತು ಎನ್ನುವುದರ ಸುತ್ತವೇ ಚಿತ್ರದ ಕಥೆ ಇದೆ ಎನ್ನುತ್ತಾಳೆ ದಯಾಳ್.

    ಶ್ಯಾನೆ ಟಾಪಾಗವ್ಳೆ ಹಾಡಿನ ಮೂಲಕ ಕರ್ನಾಟಕದ ಮನೆ ಮಾತಾದ ಆದಿತಿ ಪ್ರಭುದೇವ ಈ ಚಿತ್ರದಲ್ಲಿ ಮೆಚ್ಯೂರ್ಡ್ ಲುಕ್‍ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಎಸ್.ವಿ. ನಾರಾಯಣ್ ಚಿತ್ರದ ನಿರ್ಮಾಪಕ. ಶ್ರೀನಿ, ತ್ರಿವಿಕ್ರಮ್ ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ.

  • ಲವ್..ಬ್ರೇಕಪ್..ಕಾಮಿಡಿ.. : ತ್ರಿಬ್ಬಲ್ ರೈಡಿಂಗ್ ಕಮಾಲ್

    ಲವ್..ಬ್ರೇಕಪ್..ಕಾಮಿಡಿ.. : ತ್ರಿಬ್ಬಲ್ ರೈಡಿಂಗ್ ಕಮಾಲ್

    ಗಣೇಶ್ ಚಿತ್ರಗಳೆಂದರೆ ಕಾಮಿಡಿ ಇರಬೇಕು. ಒಂದು ಮುದ್ದಾದ ಲವ್ ಸ್ಟೋರಿ ಟ್ರ್ಯಾಕ್ ಇರಬೇಕು. ಅವರೆಡರ ಮಧ್ಯೆ ಚೆಂದವಾದ ಹಾಡುಗಳೂ ಇರಬೇಕು. ಹೀರೋಯಿನ್ ಸುಂದರವಾಗಿರಬೇಕು.. ಇದೆಲ್ಲವೂ ಪ್ರೇಕ್ಷಕರ ನಿರೀಕ್ಷೆಯೂ ಹೌದು. ಅದಕ್ಕೆ ಡಬ್ಕುಡಬಲ್ ಆಗಿ ತ್ರಿಬಲ್ ರೈಡಿಂಗ್ ಬರುತ್ತಿದ್ದಾರೆ ಮಹೇಶ್ ಗೌಡ. ಹಾಡು ಚೆಂದಾಗಿವೆ. ಕಾಮಿಡಿ ಮಸ್ತಾಗಿದೆ. ಸುಂದರ ಹೀರೋಯಿನ್.. ಒಬ್ಬರ್ಯಾಕೆ.. ಮೂರ್ ಜನ ಇದ್ದಾರೆ ಎಂದು ಹೇಳಿ ಮೂರು ಸುಂದರಿಯರ ಜೊತೆ ಲವ್ ಟ್ರ್ಯಾಕ್ ಸಿದ್ಧ ಮಾಡಿದ್ದಾರೆ ಮಹೇಶ್ ಗೌಡ.

    ಗಣೇಶ್ ಎದುರು ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಹೀರೋಯಿನ್ಸ್.

    ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರು, ಈ ಪಾತ್ರಕ್ಕೆ ಗಣೇಶ್ನ ಬಹುಮುಖತೆಯು ಸಂಪೂರ್ಣವಾಗಿ ಸರಿಹೊಂದುತ್ತದೆ ಎಂದು ಭಾವಿಸಿದ್ದು ಅವರನ್ನೇ ಟ್ರಿಬಲ್ ರೈಡಿಂಗ್ಗೆ ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು. ಅವರು ಟ್ರಿಬಲ್ ರೈಡಿಂಗ್ನಲ್ಲಿ ವೈದ್ಯರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಮಹೇಶ್ ಹೇಳುತ್ತಾರೆ. ಯೋಗರಾಜ್ ಭಟ್, ದುನಿಯಾ ಸೂರಿಯವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಹಿಂದೆ ವಿನೋದ್ ಪ್ರಭಾಕರ್ ಅವರಿಗೆ ರಗಡ್ ಚಿತ್ರವನ್ನು ನಿರ್ದೇಶಿಸಿದ್ದರು. ಆಗ ಆಕ್ಷನ್ ನೀಡಿದ್ದ ಡೈರೆಕ್ಟರ್, ಈಗ ಲವ್ ಬ್ರೇಕಪ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಇನ್ನೂ ಒಬ್ಬ ಹೀರೋಯಿನ್ ಇದ್ದಾರಂತೆ. ಅವರ್ ಯಾರು ಅನ್ನೋದನ್ನ ಸಿನಿಮಾ ಥಿಯೇಟರಲ್ಲೇ ನೋಡಿ ಎಂದು ಸಸ್ಪೆನ್ಸ್ ಇಟ್ಟಿದ್ದಾರೆ ಮಹೇಶ್ ಗೌಡ.

     ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ಗೋಪಾಲ್ ಅವರು ಬಂಡವಾಳ ಹೂಡಿರುವ ಟ್ರಿಬಲ್ ರೈಡಿಂಗ್ ನವೆಂಬರ್ 25ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ಸಂಯೋಜಿಸಿದ್ದಾರೆ.

  • ಶ್ಯಾನೆ ಟಾಪ್ ಹುಡುಗಿ ಆದಿತಿ ನಿಶ್ಚಿತಾರ್ಥ

    ಶ್ಯಾನೆ ಟಾಪ್ ಹುಡುಗಿ ಆದಿತಿ ನಿಶ್ಚಿತಾರ್ಥ

    ನಟಿ ಆದಿತಿ ಪ್ರಭುದೇವ ಮದುವೆಯಾಗುತ್ತಿದ್ದಾರೆ. ಈಗಾಗಲೇ ನಿಶ್ಚಿತಾರ್ಥವೂ ಆಗಿ ಹೋಗಿದೆ. ಹುಡುಗನ ಹೆಸರು ಯಶಸ್. ರೈತ. ಕಾಫಿ ಪ್ಲಾಂಟರ್. ಚಿಕ್ಕಮಗಳೂರಿನ ಈ ಹುಡುಗನ ಜೊತೆ ಲವ್ ಆಗಿದೆ. ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥವೂ ಆಗಿ ಹೋಗಿದೆ. ಮದುವೆ ಈಗಲ್ಲ. ಅದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮದಿಂದ ಮಾಡಿಕೊಳ್ತೇವೆ ಎಂದಿದ್ದಾರೆ ಆದಿತಿ.

    ಕಿರುತೆರೆಯಲ್ಲಿ ಗುಂಡ್ಯಾನ್ ಮದುವೆ ಮತ್ತು ನಾಗಕನ್ನಿಕೆಯಾಗಿ ಪರಿಚಿತರಾದ ಆದಿತಿ ನಂತರ ಧೈರ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಬಜಾರ್, ಸಿಂಗ, ಬ್ರಹ್ಮಚಾರಿ, ಆನ.. ಚಿತ್ರಗಳು ರಿಲೀಸ್ ಆಗಿವೆ. ರಿಲೀಸ್ ಆಗಬೇಕಿರುವ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಒಂಭತ್ತನೇ ದಿಕ್ಕು, ತೋತಾಪುರಿ ಭಾಗ 1 & 2, ಗಜಾನನ & ಗ್ಯಾಂಗ್, ಓಲ್ಡ್ ಮಾಂಕ್, ತ್ರಿಬಲ್ ರೈಡಿಂಗ್, ಅಂದೊಂದಿತ್ತು ಕಾಲ, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, ಮಾಫಿಯಾ.. ಹೀಗೆ ಹಲವು ಚಿತ್ರಗಳಿವೆ.