` kgf chapter 2, - chitraloka.com | Kannada Movie News, Reviews | Image

kgf chapter 2,

  • ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?

    ಕೆಜಿಎಫ್ ಎದುರು ಶರಣಾದ ಸಿನಿಮಾಗಳೆಷ್ಟು..?

    ಕೆಜಿಎಫ್ ಚಾಪ್ಟರ್ 1ನಲ್ಲಿ ಒಂದು ಡೈಲಾಗ್ ಇದೆ. ಯಾರ್ ಯಾರನ್ನೋ ಹೊಡೆದು ಡಾನ್ ಆದವನಲ್ಲ.. ನಾನು. ನಾನು ಹೊಡೆದವರೆಲ್ಲ ಡಾನ್‍ಗಳೇ.. ಕೆಜಿಎಫ್ 2 ರಿಲೀಸ್ ಆದ ನಂತರ ಆ ಡೈಲಾಗ್ ಮತ್ತೆ ಮತ್ತೆ ನೆನಪಾಗುವಂತೆ ಮಾಡಿದೆ ನಂತರ ರಿಲೀಸ್ ಆದ ಚಿತ್ರಗಳ ಹೀನಾಯ ಸೋಲುಗಳು. ಹಾಗೆ ನೋಡಿದರೆ.. ಹಿನ್ನಡೆ ಅನುಭವಿಸಿಯೂ ಲಾಭ ಮಾಡಿದ್ದು ತಮಿಳಿನ ಬೀಸ್ಟ್ ಮಾತ್ರ.

    ಕೆಜಿಎಫ್ 2 ರಿಲೀಸ್ ಆದ 2 ವಾರದ ನಂತರ ರಿಲೀಸ್ ಆಗಿದ್ದು ಹಿಂದಿಯಲ್ಲಿ ಅಜಯ್ ದೇವಗನ್ ಅವರ ರನ್ ವೇ 34. ಆ ಚಿತ್ರ ಮೇ 1ರಂದು ಗಳಿಸಿರೋ ಬಾಕ್ಸಾಫೀಸ್ ಕಲೆಕ್ಷನ್ 7.25 ಕೋಟಿ. ಈ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಅಮಿತಾಭ್ ಬಚ್ಚನ್ ಕೂಡಾ ಇದ್ದರು.

    ಅದರ ಜೊತೆಯಲ್ಲೇ ರಿಲೀಸ್ ಆದ ಚಿತ್ರ ಹೀರೋಪಂತಿ 2. ಹೀರೋ ಟೈಗರ್ ಶ್ರಾಫ್. ಆ ಚಿತ್ರದ ಮೇ 1ನೇ ತಾರೀಕಿನ ರಿಪೋರ್ಟ್ 4.25 ಕೋಟಿ.

    ಇದೇ ವೇಳೆ ಇದೇ ಮೇ 1ರಂದು ಕೆಜಿಎಫ್ 2ನ ಕಲೆಕ್ಷನ್ ರಿಪೋರ್ಟ್ ಹಿಂದಿಯಲ್ಲಿ 11.25 ಕೋಟಿ. ಅಂದ ಹಾಗೆ ಕೆಜಿಎಫ್ 2 ರಿಲೀಸ್ ಆಗಿ ಎರಡು ವಾರವಾಗಿದೆ ಅನ್ನೋದು ನೆನಪಿರಲಿ.

    ಇದಕ್ಕೂ ಮೊದಲು ಕೆಜಿಎಫ್ 2 ಎದುರು ಬರಬೇಕಿದ್ದ ಜೆರ್ಸಿ, ಒಂದು ವಾರ ಲೇಟ್ ಆಗಿ ಬಂದರೂ ಬಾಕ್ಸಾಫೀಸಿನಲ್ಲಿ ಡುಮ್ಕಿ ಹೊಡೀತು.

    ತೆಲುಗಿನಲ್ಲಿ ಕೆಜಿಎಫ್‍ಗೆ ರಿಲೀಸ್ ಆದ 2 ವಾರದ ನಂತರವೂ ಫೈಟ್ ಕೊಟ್ಟಿದ್ದು ರಾಜಮೌಳಿಯ ಆರ್.ಆರ್.ಆರ್. ತೆಲುಗಿನ ಎರಡೂ ರಾಜ್ಯಗಳಲ್ಲಿ ಈಗಲೂ ಸದ್ಯಕ್ಕೆ ಆರ್.ಆರ್.ಆರ್. ನಂ.1 ಸ್ಥಾನದಲ್ಲೇ ಇದೆ. ಇನ್ನು ಈ ಗ್ಯಾಪಲ್ಲಿ ಬಂದ ತೆಲುಗಿನ ಕೆಲವು ಚಿತ್ರಗಳು ಸೋತವು. 2 ವಾರದ ನಂತರ ಬಂದ ಮೆಗಾಸ್ಟಾರ್ ಆಚಾರ್ಯ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ ಪೈಪೋಟಿ ಕೊಡುತ್ತಿದೆ.

    ತಮಿಳಿನಲ್ಲಿ ಬೀಸ್ಟ್ ಆರಂಭದ ಫೈಟ್‍ನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ. ನಿರ್ದೇಶಕರ ಕನ್‍ಫ್ಯೂಸ್‍ನಿಂದಾಗಿ ಬೀಸ್ಟ್ ಆವರೇಜ್ ಆದರೆ, ಅಲ್ಲಿ ಕೆಜಿಎಫ್ ದಾಖಲೆಯನ್ನೇ ಬರೆಯಿತು.

  • ಕೆಜಿಎಫ್ ಕುಟುಂಬ ಸಂಭ್ರಮ..

    ಕೆಜಿಎಫ್ ಕುಟುಂಬ ಸಂಭ್ರಮ..

    ಒಂದು ಸಿನಿಮಾ ಶುರುವಾಗಿ ಮುಗಿಯುವ ಹೊತ್ತಿಗೆ ಅಲ್ಲಿ ಒಂದಿಷ್ಟು ಸ್ನೇಹ ಸಂಬಂಧಗಳು ಚಿಗುರೊಡೆಯುತ್ತವೆ. ಅಂಥಾದ್ದರಲ್ಲಿ ಕೆಜಿಎಫ್ ಟೀಂ ಒಟ್ಟಿಗೇ 5 ವರ್ಷ ಕೆಲಸ ಮಾಡಿದೆ. ಹೀಗಾಗಿ ಅದು ಈಗ ಒಂದು ಕುಟುಂಬವೇ ಆಗಿ ಹೋಗಿದೆ. ಜುಲೈ 16ಕ್ಕೆ ರಿಲೀಸ್ ಆಗ್ತಿರೋ ಕೆಜಿಎಫ್ ಟೀಂ. ಈಗ ಇಡೀ ತಂಡವನ್ನು ಒಟ್ಟಿಗೇ ಸೇರಿಸಿಕೊಂಡು ಸಂಭ್ರಮ ಆಚರಿಸಿದೆ.

    ಈ ಪಯಣ ಎಂದಿಗೂ ಮುಕ್ತಾಯವಾಗಬಾರದು ಎಂದು ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಕೆಜಿಎಫ್ ಕುಟುಂಬ ಒಟ್ಟಿಗೆ ಸೇರಿ ಗೆಟ್ ಟುಗೆದರ್ ಪಾರ್ಟಿ ಮಾಡಿದ್ದಾರೆ. ಆ ಫೋಟೋಗಳನ್ನ ಪ್ರಶಾಂತ್ ನೀಲ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಕೆಜಿಎಫ್ ಕ್ಲೈಮಾಕ್ಸ್‍ನಲ್ಲಿ ಇಂಡಿಯನ್ ಆರ್ಮಿ

    indina army for kgf chapter 2 climax shoot

    ಕೆಜಿಎಫ್ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಹೈದರಾಬಾದ್‍ನಲ್ಲೀಗ ಕ್ಲೈಮಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಭಾರತೀಯ ಸೇನೆ ಬಳಕೆಯಾಗುತ್ತಿದೆ. ಕ್ಲೈಮಾಕ್ಸ್ ಚಿತ್ರೀಕರಣದ ಒಂದು ಫೋಟೋ ಹೊರಬಿದ್ದಿದ್ದು, ನೂರಾರು ಇಂಡಿಯನ್ ಆರ್ಮಿ ವಾಹನಗಳು ಸಾಲಾಗಿ ಸಂಚರಿಸುತ್ತಿರುವ ಫೋಟೋ ಕುತೂಹಲ ಹೆಚ್ಚಿಸಿದೆ.

    ಕೆಜಿಎಫ್ ಚಾಪ್ಟರ್ 2ನಲ್ಲಿ ರವೀನಾ ಟಂಡನ್, ದೇಶದ ಪ್ರಧಾನಿಯ ಪಾತ್ರ ಮಾಡುತ್ತಿದ್ದಾರೆ. ಯಶ್ ಅಲಿಯಾಸ್ ರಾಕಿಭಾಯ್ ಡೆತ್ ವಾರೆಂಟ್‍ಗೆ ಸಹಿ ಹಾಕೋದೇ ಅವರು. ನಂತರ ರಾಕಿ ಭಾಯ್ ಸಾಮ್ರಾಜ್ಯಕ್ಕೆ ನುಗ್ಗುತ್ತೆ ಇಂಡಿಯನ್ ಆರ್ಮಿ.

    ಹೇಗಿರುತ್ತೆ ಕ್ಲೈಮಾಕ್ಸ್.. ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾವನ್ನು ಥ್ರಿಲ್ ಆಗುವಂತೆ ತೋರಿಸ್ತಾರೆ. ವಿಜಯ್ ಕಿರಗಂದೂರು ಅದರ ಅದ್ಧೂರಿತನಕ್ಕೆ ಮೋಸ ಮಾಡಲ್ಲ. ವೇಯ್ಟ್.. ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತೆ

  • ಕೆಜಿಎಫ್ ಚಾಪ್ಟರ್ 2 : ಪ್ರಚಾರವೂ ತೂಫಾನ್..!

    ಕೆಜಿಎಫ್ ಚಾಪ್ಟರ್ 2 : ಪ್ರಚಾರವೂ ತೂಫಾನ್..!

    ಕೆಜಿಎಫ್ ಚಾಪ್ಟರ್ 2ನ ಮೊದಲ ಹಾಡು ತೂಫಾನ್ ರಿಲೀಸ್ ಆಗಿದೆ. ಲಿರಿಕಲ್ ವಿಡಿಯೋಗೆ ಎಲ್ಲೆಡೆ ಮೆಚ್ಚುಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಅತೀ ಹೆಚ್ಚು ವೀಕ್ಷಣೆ ಪಡೆದಿದೆ ತೂಫಾನ್ ಸಾಂಗ್.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋದು ಏಪ್ರಿಲ್ 14ಕ್ಕೆ. ಆ ಸಮಯಕ್ಕೆ ದೊಡ್ಡ ದೊಡ್ಡ ಚಿತ್ರಗಳ ಪೀಕ್ ಟೈಂ ಡೌನ್ ಆಗಿರುತ್ತೆ. ಹೀಗಾಗಿಯೇ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ. ಇದೆಲ್ಲವೂ ನಿರೀಕ್ಷಿತವೇ ಆಗಿದ್ದರೂ ಚಿತ್ರತಂಡ ಪ್ರಚಾರವನ್ನು ವಿಭಿನ್ನವಾಗಿಯೇ ಮಾಡುತ್ತಿದೆ.

    ಅಭಿಮಾನಿಗಳು ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕಳಿಸಬೇಕು. ಅದೇನ್ ಮಹಾ ಎಂದುಕೊಳ್ಳಬೇಡಿ. ಅದನ್ನು ಬರೆದು ಕಳಿಸಬೇಕು. ಆ ಪೋಸ್ಟರ್‍ನ್ನು ಚಿತ್ರದ ಪ್ರಚಾರದ ಹೋರ್ಡಿಂಗ್‍ಗಳಲ್ಲಿ ಬಳಸಿಕೊಳ್ಳುತ್ತೆ ಕೆಜಿಎಫ್ ಟೀಂ. ಗೆಟ್ ರೆಡಿ..

  • ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್

    ಕೆಜಿಎಫ್ ಚಾಪ್ಟರ್ 2 : ಮತ್ತೆ ಶೂಟಿಂಗ್

    ಯಾವುದೇ ಸಮಸ್ಯೆ ಬರದೇ ಹೋಗಿದ್ದರೆ ಕೆಜಿಎಫ್ ಚಾಪ್ಟರ್ 2, 2021ರ ಜುಲೈನಲ್ಲೇ ರಿಲೀಸ್ ಆಗಬೇಕಿತ್ತು. ಈಗ 2022ರ ಏಪ್ರಿಲ್‍ಗೆ ಪೋಸ್ಟ್ ಪೋನ್ ಆಗಿದೆ. ಇದರ ನಡುವೆ ಮತ್ತೆ ಚಿತ್ರದ ಶೂಟಿಂಗ್ ನಡೆದಿದೆ. 2020ರ ಡಿಸೆಂಬರ್‍ನಲ್ಲೇ ಕ್ಲೈಮಾಕ್ಸ್ ಶೂಟಿಂಗ್ ಮುಗೀತು ಎಂದಿದ್ದ ಕೆಜಿಎಫ್ ಟೀಂ, ಈಗ ಮತ್ತೊಮ್ಮೆ ಶೂಟಿಂಗ್ ಮಾಡಿದೆ.

    ನಿರ್ದೇಶಕ ಪ್ರಶಾಂತ್ ನೀಲ್ ಅವರಿರೋದೇ ಹಾಗೆ. ಸ್ಕ್ರೀನ್‍ನಲ್ಲಿ ಕಾಂಪ್ರೊಮೈಸ್ ಆಗುವವರಲ್ಲ. ಎಡಿಟಿಂಗ್ ಟೇಬಲ್ ಮೇಲೆ ಕುಳಿತಾಗ ಒಂದಿಷ್ಟು ಶಾಟ್ಸ್ ಬೇಕು ಎನ್ನಿಸಿ ಮತ್ತೆ ಚಿತ್ರೀಕರಣ ಮಾಡಿದ್ದಾರೆ ನೀಲ್. ನೈಸ್ ರೋಡ್‍ನಲ್ಲಿ ಒಂದು ಚೇಸಿಂಗ್ ಸೀನ್‍ನ ದೃಶ್ಯ ಚಿತ್ರೀಕರಿಸಲಾಗಿದೆ. ನೀಲ್ ಜೊತೆ ಕ್ಯಾಮೆರಾಮನ್ ಭುವನ್ ಗೌಡ ಭಾಗಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರಂತೂ ಇತ್ತ ಕೆಜಿಎಫ್ ಚಾಪ್ಟರ್ 2 ಪೋಸ್ಟ್ ಪ್ರೊಡಕ್ಷನ್ ಮತ್ತು ಅತ್ತ ಸಲಾರ್ ಶೂಟಿಂಗ್.. ಎರಡೂ ಕಡೆ ಬ್ಯುಸಿ. ಇನ್ನೊಂದೆಡೆ ಬಘೀರ ವೇಯ್ಟಿಂಗ್.

  • ಕೆಜಿಎಫ್ ಚಾಪ್ಟರ್ 2 50 ದಿನ : ಇದೂ ದಾಖಲೆಯೇ..

    ಕೆಜಿಎಫ್ ಚಾಪ್ಟರ್ 2 50 ದಿನ : ಇದೂ ದಾಖಲೆಯೇ..

    ಕೆಜಿಎಫ್ ಚಾಪ್ಟರ್ 2, 50 ದಿನ ಪೂರೈಸಿದೆ. ಇಂಡಿಯಾದಲ್ಲಿ 390ಕ್ಕೂ ಹೆಚ್ಚು ಕೇಂದ್ರಗಳಲ್ಲಿ, ವಿದೇಶಗಳಲ್ಲಿ 10 ಕೇಂದ್ರಗಳಲ್ಲಿ 50 ದಿನ ಪೂರೈಸಿರುವುದು ಒಂದು ದಾಖಲೆಯೇ. ವಿಶ್ವದಾಖಲೆಯೇ.

    ಈ ಹಾದಿಯಲ್ಲಿ ಕೆಜಿಎಫ್ ಎದುರು ನಿಂತ ಚಿತ್ರಗಳು ಸಣ್ಣ ಚಿತ್ರಗಳೇನೂ ಅಲ್ಲ. ಪ್ರಾದೇಶಿಕ ಚಿತ್ರಗಳ ಜೊತೆಗೆ ಬಾಲಿವುಡ್ ಚಿತ್ರಗಳೂ ಬಂದವು. ಹಾಲಿವುಡ್ ಚಿತ್ರಗಳೂ ಬಂದವು. ಕೆಲವು ಗೆದ್ದವು. ಇನ್ನೂ ಕೆಲವು ಬಿದ್ದವು. ಅವೆಲ್ಲವನ್ನೂ ಎದುರಿಸಿಯೇ ಗೆದ್ದ ಚಿತ್ರ ಕೆಜಿಎಫ್ ಚಾಪ್ಟರ್ 2.

    ಅಂದಹಾಗೆ ಇವತ್ತಿನಿಂದ ಕೆಜಿಎಫ್ ಚಾಪ್ಟರ್ 2, ಒಟಿಟಿಯಲ್ಲಿ ನೇರವಾಗಿಯೇ ಸಿಗಲಿದೆ. ಅಂದರೆ ಇದುವರೆಗೆ ಇದ್ದ ದುಡ್ಡು ಕೊಟ್ಟು ವೀಕ್ಷಿಸುವ ಅಗತ್ಯವಿಲ್ಲ. ಅಮೇಜಾನ್ ಪ್ರೈಂ ಇದ್ದವರು ಉಚಿತವಾಗಿಯೇ ನೋಡಬಹುದು. ಇದುವರೆಗೆ ಸಬ್‍ಸ್ಕ್ರಿಪ್ಷನ್ ಇದ್ದರೂ, 199 ರೂ. ಕೊಟ್ಟು ನೋಡಬೇಕಿತ್ತು.

    ಅಂದಹಾಗೆ ಇದುವರೆಗೆ ಈ ಚಿತ್ರ ಥಿಯೇಟರುಗಳಲ್ಲಿ 1240 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಇದೂ ದಾಖಲೆಯೇ..

  • ಕೆಜಿಎಫ್ ಚಾಪ್ಟರ್ 2 ಕಥೆಯ ಗುಟ್ಟು ಬಿಟ್ಟುಕೊಟ್ಟ ಯಶ್

    yash reveals kgf chapter 2 secret

    KGF ಚಾಪ್ಟರ್ 2 ಚಿತ್ರದ ಕಥೆ ಏನು..? ನಿರ್ದೇಶಕ ಪ್ರಶಾಂತ್ ನೀಲ್ ಗುಟ್ಟು ಗುಟ್ಟಾಗಿಯೇ ಇಟ್ಟಿದ್ದಾರೆ. ಕೆಜಿಎಫ್ ಟೀಂನಿಂದ ಯಾವುದೇ ಸೀಕ್ರೆಟ್ ಹೊರಬರುತ್ತಿಲ್ಲ. ಆದರೆ.. ಯಶ್ ಮಾಡಿರುವ ಒಂದು ಟ್ವೀಟ್.. ಕಥೆಯ ಗುಟ್ಟು ಹೇಳಿಬಿಟ್ಟಿದೆ. ಅಂದಹಾಗೆ ಇದು ಅಭಿಮಾನಿಗಳೇ ಊಹಿಸಿರುವ ಕಥೆ.

    ಇಷ್ಟಕ್ಕೂ ಆಗಿದ್ದೇನಂದ್ರೆ.. ಇತ್ತೀಚೆಗೆ ರವೀನಾ ಟಂಡನ್ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ರಲ್ಲ. ಆಗ ಅವರ ಪಾತ್ರದ ಹೆಸರು ರಮಿಕಾ ಸೇನ್ ಎಂದೂ.. ಡೆತ್ ವಾರೆಂಟ್ ಕೊಡಲು ಬರುವ ಪ್ರಧಾನಿಯೆಂದೂ ಗೊತ್ತಾಗಿತ್ತು. ಈಗ ಯಶ್ ಮಾಡಿರುವ ಟ್ವೀಟ್ನಲ್ಲಿ ಆ ರಹಸ್ಯ ಭೇದಿಸಿದ್ದಾರೆ ರಾಕಿಭಾಯ್ ಫ್ಯಾನ್ಸ್.

    ಶೂಟಿಂಗ್‌ ವೇಳೆ ರವೀನಾ ಟಂಡನ್‌ ಜೊತೆಗಿರುವ ಫೋಟೋ ಹಾಕಿರುವ ಯಶ್ ‘ರಾಕಿ ಭಾಯ್‌ ಟೆರಿಟರಿಯೊಳಗೆ ರಮಿಕಾ ಸೇನ್‌ಗೆ ಸ್ವಾಗತ ಸಿಗದೇ ಇರಬಹುದು. ಆದರೆ ರವೀನಾ ಮೇಡಮ್‌ ಅವರನ್ನು ಯಶ್‌ ಹೋಮ್‌ಟೌನ್‌ಗೆ ಸ್ವಾಗತಿಸುತ್ತಿದ್ದೇವೆ. ನೀವು ನಮ್ಮ ಸಿನಿಮಾ ತಂಡದ ಭಾಗವಾಗಿರುವುದಕ್ಕೆ ಖುಷಿ ಆಗುತ್ತಿದೆ. ಲೆಟ್ಸ್‌ ಹ್ಯಾವ್‌ ಎ ಬ್ಲಾಸ್ಟ್‌’ ಎಂದು ಬರೆದಿದ್ದಾರೆ.

    ಮಿಕ್ಕಿದ್ದು ನಿಮಗೇ ಗೊತ್ತಾಗಿರಬಹುದು. ರಮಿಕಾ ಸೇನ್ ಎಂದರೆ ಪ್ರಧಾನಿಯ ಪಾತ್ರ. ಅಂದರೆ.. ಪ್ರಧಾನಿಗೂ ಎಂಟ್ರಿಯಿಲ್ಲದ ಕೋಟೆ ಕಟ್ಟಿಕೊಳ್ತಾನಾ ರಾಕಿಭಾಯ್..? ಅದಕ್ಕಾಗಿಯೇ ಆತನ ವಿರುದ್ಧ ಪ್ರಧಾನಿ ಡೆತ್ ವಾರೆಂಟ್ ಹೊರಡಿಸ್ತಾರಾ..? ಇದು ಅಭಿಮಾನಿಗಳು ಊಹಿಸಿರುವ ಕಥೆ.

    ಇರಿ.. ಇರಿ.. ಸ್ವತಃ ಪ್ರಶಾಂತ್ ನೀಲ್ ಅವರೇ ನಿಬ್ಬೆರಗಾಗಿ ನೋಡುವ ಕಥೆಯನ್ನು ಅಭಿಮಾನಿಗಳೇ ಸೃಷ್ಟಿಸ್ತಾರೆ. ಯಾರಿಗ್ಗೊತ್ತು.. ಅದೇ ಇನ್ನೊಂದು ಕೆಜಿಎಫ್ ಆದರೂ ಆಗಬಹುದು.

  • ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಮುಗಿಸಿದ ಶ್ರೀನಿಧಿ ಶೆಟ್ಟಿ

    ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಮುಗಿಸಿದ ಶ್ರೀನಿಧಿ ಶೆಟ್ಟಿ

    ಕನ್ನಡ ಚಿತ್ರರಂಗಕ್ಕೆ ಹೊಸ ಚರಿತ್ರೆ ಬರೆಯಲಿದೆ ಎಂಬ ನಿರೀಕ್ಷೆ ಮೂಡಿಸಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರುವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಚಿತ್ರದ ನಾಯಕಿ ರೀನಾ ದೇಸಾಯಿ ಪಾತ್ರದಲ್ಲಿ ನಟಿಸಿರೋ ಶ್ರೀನಿಧಿ ಶೆಟ್ಟಿ, ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್ ಚಾಪ್ಟರ್ 2. ಯಶ್ ಹೀರೋ ಆಗಿದ್ದರೆ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇನ್ನಿತರ ಪಾತ್ರಗಳಲ್ಲಿದ್ದಾರೆ. ಈಗಾಗಲೇ ಚಿತ್ರದ ಉಳಿದವರ ಡಬ್ಬಿಂಗ್ ಮುಗಿದಿದೆ.

    ಇನ್ನು ನಾಯಕಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಬಿಟ್ಟರೆ ಒಪ್ಪಿಕೊಂಡಿರುವ ಇನ್ನೊಂದು ಸಿನಿಮಾ ತಮಿಳಿನ ಕೋಬ್ರಾ. ಆ ಚಿತ್ರದಲ್ಲಿ ವಿಕ್ರಂ ಹೀರೋ.

  • ಕೆಜಿಎಫ್ ಚಾಪ್ಟರ್ 2 ಡೈಲಾಗ್ಸ್

    kgf chapter 2 dialogues

    ಕೆಜಿಎಫ್ ಚಾಪ್ಟರ್ 1ನಲ್ಲಿ ಹಲವು ಸ್ಪೆಷಾಲಿಟಿಗಳಿದ್ದವು. ಅಂತಹ ಸ್ಪೆಷಾಲಿಟಿಗಳಲ್ಲಿ ಒಂದು ಡೈಲಾಗ್ಸ್. ಗುಂಡು ಹೊಡೆದಂತಿದ್ದ ಸಂಭಾಷಣೆ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈಗ ಕೆಜಿಎಫ್ 2ನಲ್ಲೂ ಅಷ್ಟೆ, ಅಂಥದ್ದೇ ಡೈಲಾಗ್ಸ್ ಇವೆ. ಹುಟ್ಟುಹಬ್ಬದ ವೇಳೆ ಸ್ವತಃ ಯಶ್, ಟೀಸರ್ ಬಿಡದೇ ಇರುವುದಕ್ಕೆ ಕ್ಷಮೆ ಕೋರಿ, ಚಿತ್ರದ ಒಂದೆರಡು ಡೈಲಾಗ್‍ಗಳನ್ನು ಅಭಿಮಾನಿಗಳ ಎದುರು ಹೇಳಿ ಥ್ರಿಲ್ ಕೊಟ್ಟಿದ್ದಾರೆ.

    ಏನಂದೇ.. ಒಂದು ಹೆಜ್ಜೆ ಮುಂದೆ ಇಟ್ಟು ಬಂದವ್ನು ಅಂದ್ಕೊಂಡಿದ್ದೀರಾ.. ಗಡಿಯಾರದಲ್ಲಿ ಒಂದು ಹೆಜ್ಜೆ ಮುಂದಿಡೋಕೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದಿಡಬೇಕು. ಆದರೆ, ಚಿಕ್ಕ ಮುಳ್ಳು ಒಂದೇ ಹೆಜ್ಜೆ ಮುಂದಿಟ್ರೆ ಸಾಕು.

    ನಾನು ಹೆಜ್ಜೆ ಇಟ್ಟಾಗಿದೆ. ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮುಂದೆ ಈ ಟೆರಟರಿ ನಂದು.. ಆ ಟೆರಟರಿ ನಂದು ಅನ್ನೋದನ್ನೆಲ್ಲ ಬಿಟ್ಟುಬಿಡಿ. ವಲ್ರ್ಡ್ ಇನ್ನು ಮುಂದೆ ನನ್ನ ಟೆರಟರಿ.

    ಯಶ್ ಡೈಲಾಗ್ ಹೊಡೆದು ಥ್ರಿಲ್ ಕೊಟ್ಟಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಚಿತ್ರದ ಹೊಸ ಪೋಸ್ಟರ್ ಕೊಟ್ಟು ಥ್ರಿಲ್ ಕೊಟ್ಟಿದ್ದಾರೆ.

  • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ ಅಲ್ಲ..!

    news about kgf chapter 2 telugu remake rights is false

    ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ರೈಟ್ಸ್ 40 ಕೋಟಿಗೆ ಸೇಲ್ ಆಗುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಭ್ರಮ ಸೃಷ್ಟಿಸಿತ್ತು. ಚಿತ್ರಲೋಕದಲ್ಲೂ ಈ ವರದಿ ನೋಡಿದ್ದೀರಿ. ಆದರೆ.. ಅದು ಸುಳ್ಳು ಎಂದಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೊಂಬಾಳೆ ಫಿಲಂಸ್ನ ಪ್ರಮುಖರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, 40 ಕೋಟಿಯ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.

    ಆದರೆ.. ಕೆಜಿಎಫ್ ಚಿತ್ರಕ್ಕೆ ತೆಲುಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಇರುವುದಂತೂ ನಿಜ. ಏಕೆಂದರೆ, ಕೆಜಿಎಫ್ ನಂತರ ಅಲ್ಲೀಗ ಯಶ್ ಫ್ಯಾನ್ಸ್ ಕ್ಲಬ್ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ಚಿತ್ರ ಸೃಷ್ಟಿಸಿದ್ದ ಸಂಚಲನ, ಚಾಪ್ಟರ್ 2ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬುದರಲ್ಲಿ ಡೌಟೇ ಇಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರ್ಪಡೆಗೊಂಡಿದ್ದಾರೆ. ಕೆಜಿಎಫ್ 2 ಮಾರ್ಕೆಟ್ ವ್ಯಾಲ್ಯೂ ತಿಳಿಯೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

  • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ..!!!

    kgf chapter 2 telugu rights goes up for 40 crores

    ಕೆಜಿಎಫ್ ಚಾಪ್ಟರ್ 2 ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಆದರೆ ಚಿತ್ರಕ್ಕೆ ಸೃಷ್ಟಿಯಾಗಿರುವ ಡಿಮ್ಯಾಂಡ್ ಮಾತ್ರ ಆಕಾಶಕ್ಕೇರಿದೆ. ಕೆಜಿಎಫ್ ಚಾಪ್ಟರ್ 2 ತೆಲುಗು ವರ್ಷನ್‍ಗೆ 40 ಕೋಟಿ ಡಿಮ್ಯಾಂಡ್ ಮಾಡಲಾಗುತ್ತಿದೆ. ಈ ಬಿಸಿನೆಸ್ ಫೈನಲ್ ಸ್ಟೇಜ್‍ನಲ್ಲಿದೆ.

    ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ ರಿಲೀಸ್ ಆಗಲಿದ್ದು, ವಿತರಕರು 30 ಕೋಟಿಯ ಆಫರ್ ಕೊಟ್ಟರಂತೆ. ಅಫ್‍ಕೋರ್ಸ್.. ಕನ್ನಡದ ಮಟ್ಟಿಗೆ ಅದೂ ಕೂಡಾ ದಾಖಲೆಯೇ. ಈಗ 40 ಕೋಟಿಯ ಆಸುಪಾಸು ವ್ಯವಹಾರ ಕುದುರಿದೆ ಎನ್ನಲಾಗಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸೃಷ್ಟಿಸಿದ ಹವಾ ಎಫೆಕ್ಟ್, ಚಾಪ್ಟರ್ 2ಗೆ ಡಿಮ್ಯಾಂಡ್ ಬಂದಿದೆ. ಸಿನಿಮಾ ಡಿಸೆಂಬರ್‍ನಲ್ಲಿ ರಿಲೀಸ್ ಆಗುವ ಚಾನ್ಸ್ ಇದೆ.

  • ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ

    ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ

    ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅತ್ತ ಲಾಕ್‍ಡೌನ್ ಮತ್ತು ಕೊರೊನಾ ತೊಲಗುವ ಲಕ್ಷಣ ಕಾಣಿಸುತ್ತಿಲ್ಲ. ಅಭಿಮಾನಿಗಳ ಕನವರಿಕೆಯೂ ನಿಂತಿಲ್ಲ. ಇದರ ನಡುವೆಯೇ ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ ಬರೆದಿದೆ.

    ಯೂಟ್ಯೂಬ್‍ನಲ್ಲಿ ಈಗಾಗಲೇ 18 ಕೋಟಿ ವೀಕ್ಷಣೆ ಪಡೆದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್, ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನ ವೀಕ್ಷಿಸಿದ ಟ್ರೇಲರ್ ಎಂಬ ದಾಖಲೆ ಬರೆದಿದೆ.

    ಈಗ ಈ ಚಿತ್ರದ ಟ್ರೇಲರ್‍ಗೆ 10 ಲಕ್ಷಕ್ಕೂ ಹೆಚ್ಚು ಜನ ಕಮೆಂಟ್ಸ್ ಮಾಡಿದ್ದಾರೆ. ಇದೂ ಕೂಡಾ ದಾಖಲೆಯೇ.

    ಬುಕ್ ಮೈ ಶೋನಲ್ಲಿ ಮತ್ತು ಸಿನಿಮಾ ಪ್ರೇಕ್ಷಕರ ಸಮೀಕ್ಷೆಯಲ್ಲಿ ಈ ವರ್ಷ ಅತೀ ಹೆಚ್ಚು ಜನ ನೋಡಲು ಬಯಸಿರುವ ಚಿತ್ರ ಕೆಜಿಎಫ್ ಚಾಪ್ಟರ್ 2. ಒಟ್ಟಿನಲ್ಲಿ ರಿಲೀಸ್‍ಗೂ ಮೊದಲು ದಾಖಲೆಗಳ ಸುರಿಮಳೆಯನ್ನೇ ಸುರಿಸುತ್ತಿರುವ ಹೊಂಬಾಳೆ ಬ್ಯಾನರ್‍ನ ಕೆಜಿಎಫ್ ಚಾಪ್ಟರ್ 2, ರಿಲೀಸ್ ಆದ ನಂತರ ಮುರಿಯಬೇಕಾದ ದಾಖಲೆಗಳ ಪಟ್ಟಿಯೇ ಮೈಲುದ್ದ ಇದೆ. 

  • ಕೆಜಿಎಫ್ ಚಾಪ್ಟರ್ 2 ಮೊದಲ ವಿಮರ್ಶೆ

    ಕೆಜಿಎಫ್ ಚಾಪ್ಟರ್ 2 ಮೊದಲ ವಿಮರ್ಶೆ

    ಕೆಜಿಎಫ್ ಚಾಪ್ಟರ್ 1ನ ಮಾತು ಬಿಡಿ.. ನಿರೀಕ್ಷೆಗಳು ಕಡಿಮೆಯಿದ್ದವು. ಸಿಕ್ಕ ಗೆಲುವು ಬೋನಸ್. ಆದರೆ ಕೆಜಿಎಫ್ ಚಾಪ್ಟರ್ 2 ಹಾಗಲ್ಲ.. ನಿರೀಕ್ಷೆಗಳು ಬೆಟ್ಟದಷ್ಟಿವೆ. ಆ ಬೆಟ್ಟದಷ್ಟು ನಿರೀಕ್ಷೆ ಹುಟ್ಟೋಕೆ ಕಾರಣ ಚಾಪ್ಟರ್ 1 ಸೃಷ್ಟಿಸಿದ ಇತಿಹಾಸ. ಹಾಗಾದರೆ ಚಾಪ್ಟರ್ 2 ಹೇಗಿದೆ? ಅರೆ.. ಸಿನಿಮಾ ರಿಲೀಸ್ ಆಗೋಕೆ ಇನ್ನೂ ಒಂದೂವರೆ ತಿಂಗಳು ಟೈಮಿದೆ. ಈಗ್ಲೇ ಹೇಗ್ ಹೇಳೋಕಾಗುತ್ತೆ ಅನ್ನಬೇಡಿ. ಅದನ್ನು ನೋಡಿದವರೊಬ್ಬರು ಮೊದಲ ವಿಮರ್ಶೆ ಕೊಟ್ಟಿದ್ದಾರೆ.

    ಕೆಜಿಎಫ್ 2 ಸಿನಿಮಾ ನೋಡಿದ್ದು ಮನಸ್ಸಿಗೆ ಮುದ ನೀಡಿತು. ವಿಜಯ್ ಕಿರಗಂದೂರು ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಪ್ರಶಾಂತ್ ನೀಲ್ ಹೊಸ ಸ್ಟಾಂಡರ್ಡ್ ಸೆಟ್ ಮಾಡಿದ್ದಾರೆ. ಇದು ಪೃಥ್ವಿರಾಜ್ ಸುಕುಮಾರನ್ ಕೊಟ್ಟಿರೋ ವಿಮರ್ಶೆ.

    ಕೆಜಿಎಫ್ ಪ್ರಚಾರಕ್ಕೆ ತಯಾರಿ ಆರಂಭಿಸಿರುವ ಚಿತ್ರತಂಡ ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಅವರನ್ನು ಭೇಟಿ ಮಾಡಿದೆ. ಮಲಯಾಳಂಣಲ್ಲಿ ಕೆಜಿಎಫ್ ವಿತರಣೆ ಹಕ್ಕು ಅವರದ್ದೇ. ಮಲಯಾಳಂನಲ್ಲಿ ವಿಭಿನ್ನ ಕಥಾಹಂದರದ ಚಿತ್ರಗಳಿಂದಲೇ ಸಕ್ಸಸ್ ಕಂಡಿರೋ ನಟ ಪೃಥ್ವಿರಾಜ್. ಈಗ ಕೆಜಿಎಫ್ 2 ವಿತರಣೆ ಮಾಡುತ್ತಿದ್ದಾರೆ. ಮಲಯಾಳಂನಲ್ಲಿ. 

  • ಕೆಜಿಎಫ್ ಚಾಪ್ಟರ್ 2 ವಿರುದ್ಧದ ಅರ್ಜಿ ವಜಾ ಮಾಡಿದ ಹೈಕೋರ್ಟ್

    kgf 2 image

    ಕೆಜಿಎಫ್ ಚಾಪ್ಟರ್ 2 ಚಿತ್ರದ ವಿರುದ್ಧ ದಾಖಲಾಗಿದ್ದ ಅರ್ಜಿಯೊಂದನ್ನು ಹೈಕೋರ್ಟ್ ವಜಾ ಮಾಡಿದೆ. ಹುಬ್ಬಳ್ಳಿಯ ಸಿ.ಶಿವಶಂಕರ್ ಎಂಬ ವ್ಯಕ್ತಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು ಕೊಟ್ಟಿದ್ದ ಕಾರಣವೂ ವಿಚಿತ್ರವಾಗಿತ್ತು. ಚಿತ್ರದಲ್ಲಿ ಸಂಜಯ್ ದತ್ ನಟಿಸುತ್ತಿದ್ದು, ಆತನೊಬ್ಬ ದೇಶದ್ರೋಹಿ. ಅಂತಹವನು ಕರ್ನಾಟಕಕ್ಕೇ ಕಾಲಿಡಬಾರದು. ಕನ್ನಡ ಸಿನಿಮಾಗಳಲ್ಲಿ ನಟಿಸಬಾರದು ಎಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

    you_tube_chitraloka1.gif

    ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆ ಅನುಭವಿಸಿರುವ ಸಂಜಯ್ ದತ್, 2016ರಲ್ಲಿ ರಿಲೀಸ್ ಆಗಿದ್ದಾರೆ. ಆದರೆ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದಿರುವ ಹೈಕೋರ್ಟ್, ಅರ್ಜಿಯನ್ನು ವಜಾ ಮಾಡಿದೆ.

  • ಕೆಜಿಎಫ್ ಚಾಪ್ಟರ್ 2 ವಿಶ್ವದಾಖಲೆ

    ಕೆಜಿಎಫ್ ಚಾಪ್ಟರ್ 2 ವಿಶ್ವದಾಖಲೆ

    ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ವಿಶ್ವದಾಖಲೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಪ್ರಶಾಂತ್ ನೀಲ್ ಮ್ಯಾಜಿಕ್ ಇರೋ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಈಗ ವಿಶ್ವ ದಾಖಲೆಯನ್ನೇ ಬರೆದುಬಿಟ್ಟಿದೆ.

    ಯೂಟ್ಯೂಬ್‍ನಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾದ ಟೀಸರ್ ಅನ್ನೋ ಹೆಗ್ಗಳಿಕೆ ಈಗ ಕೆಜಿಎಫ್ 2 ಟೀಸರ್‍ನದ್ದು. ವೀಕ್ಷಿಸಿದವರ ಸಂಖ್ಯೆ 18 ಕೋಟಿ ದಾಟಿದೆ. 175 ಮಿಲಿಯನ್‍ಗೆ ಹೊಂಬಾಳೆ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಸಂಭ್ರಮಿಸಿದೆ.

    ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಮಾಳವಿಕಾ ಅವಿನಾಶ್, ಪ್ರಕಾಶ್ ರೈ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳೆಲ್ಲ ನಟಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಜುಲೈನಲ್ಲಿ ರಿಲೀಸ್ ಆಗುತ್ತಿದೆ.

  • ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಲೇಟು. ಏನ್ ಕಾರಣ ಗೊತ್ತಾ..?

    dela in kgf chapter 2 shooting

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಚಾಪ್ಟರ್ 2 ಭಯಂಕರ ಸಕ್ಸಸ್ ಕಂಡಿರುವ ಹಿನ್ನೆಲೆಯಲ್ಲಿ ಚಾಪ್ಟರ್ 2 ಬಗ್ಗೆ ನಿರೀಕ್ಷೆಗಳೂ ಮೌಂಟ್ ಎವರೆಸ್ಟ್ ಎತ್ತರದಲ್ಲಿವೆ. ಇನ್ನು ಚಿತ್ರದ ಕೆಲವು ಪಾತ್ರಗಳಿಗಾಗಿ ಭರ್ಜರಿಯಾಗಿಯೇ ಅಡಿಷನ್ ನಡೆಸಿದೆ ಕೆಜಿಎಫ್ ಟೀಂ. ಆದರೆ, ಶೂಟಿಂಗ್ ಮಾತ್ರ ಇನ್ನೂ ಶುರುವಾಗಿಲ್ಲ. 

    ಕೆಜಿಎಫ್ ಶೂಟಿಂಗ್ ವಿಳಂಬಕ್ಕೆ ಏನು ಕಾರಣ ಎಂದು ಹುಡುಕುತ್ತಾ ಹೋದರೆ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೆಟ್ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬವೇ ಶೂಟಿಂಗ್ ವಿಳಂಬಕ್ಕೂ ಕಾರಣ ಎನ್ನಲಾಗುತ್ತಿದೆ. 

    ನಿರ್ದೇಶಕ ಪ್ರಶಾಂತ್ ನೀಲ್, ವಿಭಿನ್ನ ಕಲ್ಪನೆಯ ಸೆಟ್ ಹಾಕಿಸುತ್ತಿದ್ದು, ಅದು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಕೇಳುತ್ತಿದೆಯಂತೆ. ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ, ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್ ಎಂದಿದ್ದಾರೆ. ಯಶ್ ಕೂಡಾ ಚೆನ್ನಾಗಿ ಬರುವವರೆಗೆ ಕಾಯೋಣ ಎನ್ನುತ್ತಿದ್ದಾರಂತೆ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ವಿಳಂಬವಾಗುತ್ತಿದೆ.

  • ಕೆಜಿಎಫ್ ಚಾಪ್ಟರ್ 2ಗಾಗಿ ಮೋದಿ ಪತ್ರ ಬರೆದ್ರಂತೆ..! ಏನ್ ಕಥೆ?

    ಕೆಜಿಎಫ್ ಚಾಪ್ಟರ್ 2ಗಾಗಿ ಮೋದಿ ಪತ್ರ ಬರೆದ್ರಂತೆ..! ಏನ್ ಕಥೆ?

    ನಮ್ಮದು ಜಗತ್ತಿನ ಅತ್ಯಂತ ದೊಡ್ಡ ದೇಶ. ನೂರಾ ಮೂವತ್ತು ಕೋಟಿ ಜನರ ಪರವಾಗಿ ಕೇಳುತ್ತಿದ್ದೇನೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಅಪ್‍ಡೇಟ್ ಮಾಹಿತಿಗಳನ್ನು ಕೊಡಿ.

    ಇಂತಿ

    ನರೇಂದ್ರ ಮೋದಿ

    ಪ್ರಧಾನ ಮಂತ್ರಿ

    ಹೀಗೊಂದು ಪತ್ರ ಹೊಂಬಾಳೆ ಪಿಕ್ಚರ್ಸ್‍ನವರಿಗೆ ಬಂದರೆ ಏನಾಗಬೇಡ. ಅಂತಾದ್ದೊಂದು ಪತ್ರ ಸೃಷ್ಟಿಸಿ ಹೊಂಬಾಳೆಯವರಿಗೆ ತಲೆನೋವು ತಂದಿಟ್ಟಿದ್ದಾನೊಬ್ಬ ಅಭಿಮಾನಿ. ಆತನ ಹೆಸರು ಚೇತನ್. ತಾನು ಇದನ್ನು ತಮಾಷೆಗಾಗಿ ಮಾಡಿದ್ದೇನೆ ಎಂದು ಆತ ಬರೆದುಕೊಂಡಿದ್ದನಾದರೂ, ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ಲೆಟರ್ ಹೆಡ್ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಆತನನ್ನು ಅರೆಸ್ಟ್ ಮಾಡಿ, ಎಚ್ಚರಿಕೆ ನೀಡಿ ಕಳಿಸಿದ್ದಾರೆ ಪೊಲೀಸರು.

    ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ಮಾಳವಿಕಾ, ನಾಗಾಭರಣ, ವಸಿಷ್ಠ ಸಿಂಹ.. ಹೀಗೆ ಬೃಹತ್ ತಾರಾಗಣದ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕ.

  • ಕೆಜಿಎಫ್ ಚಾಪ್ಟರ್ 2ಗೆ ಫೇಕ್ ಅಭಿಮಾನಿಗಳ ಕಾಟ..

    ಕೆಜಿಎಫ್ ಚಾಪ್ಟರ್ 2ಗೆ ಫೇಕ್ ಅಭಿಮಾನಿಗಳ ಕಾಟ..

    ಅದನ್ನು ನೋಡಿ ಖುಷಿ ಪಡಬೇಕೋ.. ಏನ್ ಮಾಡೋದಪ್ಪಾ ಎಂದು ತಲೆ ಮೇಲೆ ಕೈ ಹೊತ್ಕೋಬೇಕೋ.. ಗೊತ್ತಾಗದ ಸ್ಥಿತಿ ಕೆಜಿಎಫ್ ಟೀಂನದ್ದು. ಅದು ಕೆಜಿಎಫ್ ಸೃಷ್ಟಿಸಿರೋ ಹವಾ. ಹೀಗಾಗಿ ಪ್ರತಿಯೊಂದನ್ನೂ ಸಹಿಸಿಕೊಳ್ಳಬೇಕು. ಇತ್ತೀಚೆಗೆ ಮಾರ್ಚ್ 8ರಂದು, ಸಂಜೆ 6.18ಕ್ಕೆ ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಆಗುತ್ತೆ ಅನ್ನೋ ಸುದ್ದಿಯೊಂದು ಹೊರಬಿದ್ದಿತ್ತು. ನೋಡಿದರೆ ಅದು ಕೆಜಿಎಫ್ ಟೀಂನದ್ದೇ ಟ್ವೀಟ್ ಅನ್ನೋ ರೀತಿಯಲ್ಲಿರೋ ಪೋಸ್ಟ್. ವಿಚಿತ್ರವೆಂದರೆ ಕೆಜಿಎಫ್ ಹವಾದಲ್ಲಿ ಅದೂ ಕೂಡಾ ಟ್ರೆಂಡ್ ಸೃಷ್ಟಿಸಿಬಿಡ್ತು.

    ದಯವಿಟ್ಟು ಇಂತಹ ಸುದ್ದಿಗಳನ್ನೆಲ್ಲ ನಂಬಬೇಡಿ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತೆ. ಚಿತ್ರದ ಪ್ರಚಾರವೂ ಶುರುವಾಗುತ್ತೆ. ಸಂಬಂಧಪಟ್ಟ ವಿಷಯಗಳನ್ನು ಅಫಿಷಿಯಲ್ ಪೇಜ್‍ಗಳಲ್ಲಷ್ಟೇ ನೋಡಿ ಎಂದು ಸ್ವತಃ ಕಾರ್ತಿಕ್ ಗೌಡ ಮನವಿ ಮಾಡಿದ್ದಾರೆ. ಕಾರ್ತಿಕ್ ಗೌಡ, ಕೆಜಿಎಫ್ ಚಾಪ್ಟರ್ 2ನ ಕಾರ್ಯಕಾರಿ ನಿರ್ಮಾಪಕ.

    ಕೆಜಿಎಫ್ ಚಾಪ್ಟರ್ 1 ಹಿಟ್ ಆಗಿದ್ದರ ಜೊತೆಗೆ, ಚಾಪ್ಟರ್ 2ಗೆ ಇನ್ನಷ್ಟು ನಿರೀಕ್ಷೆ ಬಂದುಬಿಟ್ಟಿದೆ. ಪ್ರಶಾಂತ್ ನೀಲ್ ತಮ್ಮ ತಂಡಕ್ಕೆ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಪ್ರಕಾಶ್ ರೈ, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರನ್ನೆಲ್ಲ ಸೇರಿಸಿಬಿಟ್ಟಿದ್ದಾರೆ. ನಿರೀಕ್ಷೆ ಮೌಂಟ್ ಎವರೆಸ್ಟ್ ಎತ್ತರಕ್ಕೇರಿರುವಾಗ ಇಂತಹದ್ದನ್ನೆಲ್ಲ ಸಹಿಸಿಕೊಳ್ಳಲೇಬೇಕು.

  • ಕೆಜಿಎಫ್‌ ಚಾಪ್ಟರ್‌ 2ಗೆ ರೌಡಿ ತಂಗಂ ಟ್ರಬಲ್

    kgf chapter 2 lands in new trouble

    ಇತ್ತೀಚೆಗಷ್ಟೇ ಸೈನೇಡ್ ಗುಡ್ಡದ ಶೂಟಿಂಗ್ ಸಂಕಟದಿಂದ ಪಾರಾಗಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಅದು ಬಂದಿರೋದು ರೌಡಿ ತಂಗಂ ತಾಯಿಯಿಂದ. ಕೆಜಿಎಫ್ 1 ಸಿನಿಮಾದಲ್ಲಿ ನನ್ನ ಮಗನನ್ನು ಒಳ್ಳೆಯ ರೀತಿ ತೋರಿಸುತ್ತೇವೆ ಎಂದು ಹೇಳಿ, ಅವನನ್ನು

     ಕೆಟ್ಟದಾಗಿ ತೋರಿಸಿದ್ದಾರೆ. ಹೀಗಾಗಿ ಕೆಜಿಎಫ್‌ ಚಾಪ್ಟರ್‌ 2 ಚಿತ್ರೀಕರಣಕ್ಕೆ ತಡೆ ನೀಡಬೇಕು ಎಂದು ತಂಗಂ ತಾಯಿ ಪೌಳಿ, 2ನೇ  ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    ರೌಡಿ ತಂಗಂ ಹಲವು ವರ್ಷಗಳ ಹಿಂದೆ, ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ರೌಡಿ. ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮತ್ತು ಬಿಜಿಎಂಎಲ್‌ ಕಂಪೆನಿಗೆ ಸಮನ್ಸ್ ನೀಡಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 9ಕ್ಕೆ ನಿಗಧಿಯಾಗಿದೆ.

  • ಕೆಜಿಎಫ್ ಚಾಪ್ಟರ್ 2ನಿಂದ ಸಿಕ್ಕ ಹೊಸ ಸ್ಟಾರ್..!

    ಕೆಜಿಎಫ್ ಚಾಪ್ಟರ್ 2ನಿಂದ ಸಿಕ್ಕ ಹೊಸ ಸ್ಟಾರ್..!

    ಕೆಜಿಎಫ್ ಬರುವುದಕ್ಕೂ ಮೊದಲೇ ಯಶ್ ಕರ್ನಾಟಕದಲ್ಲಿ ರಾಕಿಂಗ್ ಸ್ಟಾರ್ ಆಗಿದ್ದರು. ಸಂಜಯ್ ದತ್ ಆಗಲೀ, ರವೀನಾ ಟಂಡನ್ ಆಗಲೀ ಹೊಸದಾಗಿ ಉದಯಿಸಿದ ಸ್ಟಾರ್‍ಗಳಲ್ಲ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆ ಸ್ಟಾರ್ ನಿರ್ಮಾಣ ಸಂಸ್ಥೆಯೇನೋ ಹೌದು. ಹೊಂಬಾಳೆಯ ಬ್ಯಾಕ್ ಬೋನ್ ವಿಜಯ್ ಕಿರಗಂದೂರು ಅನುಮಾನವೇ ಇಲ್ಲದಂತೆ ಚಿತ್ರರಂಗದ ಶಕ್ತಿ ಎನ್ನಬಹುದು. ಆದರೆ, ಕೆಜಿಎಫ್ ಚಾಪ್ಟರ್ 2ನಿಂದ ಹುಟ್ಟಿಕೊಂಡ ಹೊಸ ಸ್ಟಾರ್ ಯಾರು ಗೊತ್ತೇ.. ಪ್ರಶಾಂತ್ ನೀಲ್.

    ಒಂದು ಚಿತ್ರ ಹಿಟ್ ಆದಾಗ.. ಸೂಪರ್ ಹಿಟ್ ಎನ್ನಿಸಿಕೊಂಡಾಗ.. ಬ್ಲಾಕ್ ಬಸ್ಟರ್ ಹಿಟ್ ಲಿಸ್ಟಿಗೆ ಸೇರಿದಾಗ.. ಚರಿತ್ರೆಯನ್ನೇ ಸೃಷ್ಟಿಸಿದಾಗ.. ಸಾಮಾನ್ಯವಾಗಿ ಸ್ಟಾರ್ ಪಟ್ಟ ದಕ್ಕುವುದು ಹೀರೋಗೆ. ತೀರಾ ಇತ್ತೀಚಿನವರೆಗೆ ಆಗುತ್ತಿದ್ದುದೇ ಅದು. ತಪ್ಪೇನಿಲ್ಲ.

    ಆದರೆ ಅದನ್ನು ಮೀರಿ ನಿರ್ದೇಶಕರ ಹೆಸರಿನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದು ತರುವ ಶಕ್ತಿ ಕೆಲವೇ ಕೆಲವರಿಗೆ ಮಾತ್ರ ಇದೆ. ಕನ್ನಡದಲ್ಲಿ ಆ ಖ್ಯಾತಿ ಪಡೆದ ಮೊದಲ ನಿರ್ದೇಶಕ ಉಪೇಂದ್ರ. ನಂತರ ಯೋಗರಾಜ್ ಭಟ್, ಪ್ರೇಮ್, ಸೂರಿ ಮೊದಲಾದವರಿಗೆ ಆ ಪಟ್ಟ ಸಿಕ್ಕಿತಾದರೂ.. ಅದು ಆಗಾಗ್ಗೆ ಅಲುಗಾಡುತ್ತಲೇ ಇರುತ್ತೆ.

    ಬೇರೆ ಭಾಷೆಗೆ ಹೋದರೆ ನಿರ್ದೇಶಕನ ಹೆಸರಲ್ಲೇ ಸಿನಿಮಾ ಮಾರ್ಕೆಟಿಂಗ್ ನಡೆಯೋದು ಹೊಸದೇನಲ್ಲ. ಸದ್ಯಕ್ಕೆ ಇಂಡಿಯಾದ ನಂ.1 ಸ್ಥಾನದಲ್ಲಿರೋದು ಒನ್ & ಓನ್ಲಿ ರಾಜಮೌಳಿ. ಅದು ಏಕಾಏಕಿ ಬಂದಿದ್ದಲ್ಲ. 12 ಚಿತ್ರಗಳನ್ನು ನಿರ್ದೇಶಿಸಿರೋ ರಾಜಮೌಳಿ, ಅಷ್ಟೂ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಮಾಡಿದ ಮೇಲೆ ಬಂದಿರೋದು. ಉಳಿದಂತೆ ತೆಲುಗಿನಲ್ಲಿ ಸುಕುಮಾರ್, ತ್ರಿವಿಕ್ರಮ್ ಮೊದಲಾದವರಿಗೆ ಆ ಖ್ಯಾತಿ ಇದೆ. ತಮಿಳಿನಲ್ಲಿ ಮಣಿರತ್ನಂ, ಮುರುಗದಾಸ್, ಶಂಕರ್.. ಮೊದಲಾದವರಿದ್ದಾರೆ. ಸದ್ಯಕ್ಕೆ ಸ್ಟಾರ್ ನಿರ್ದೇಶಕರ ಕೊರತೆ ಕಾಡುತ್ತಿರೋದು ಹಿಂದಿಯಲ್ಲೇ. ಹಿಂದಿಯಲ್ಲಿ ಸ್ಟಾರ್ ಡೈರೆಕ್ಟರ್ ಪಟ್ಟ ಪಡೆದಿದ್ದವರ ಪಟ್ಟಗಳೆಲ್ಲ ಸೌತ್ ನಿರ್ದೇಶಕರ ಎದುರು ಅಲುಗಾಡುತ್ತಿವೆ.

    ಹೀಗಿರುವಾಗಲೇ ಕನ್ನಡದ ನೆಲದಲ್ಲೊಬ್ಬ ಹೊಸ ಸ್ಟಾರ್ ಡೈರೆಕ್ಟರ್ ಆಗಿ ಉದ್ಭವವಾಗಿದ್ದಾರೆ ಪ್ರಶಾಂತ್ ನೀಲ್. ಏಕಾಏಕಿ ಆಗಿದ್ದೇನಲ್ಲ. ಮೊದಲ ಚಿತ್ರ ಉಗ್ರಂ, ಶ್ರೀಮುರಳಿಗೆ ಪುನರ್ಜನ್ಮ ನೀಡಿದ ಚಿತ್ರ ಎನ್ನೋಕೆ ಅಡ್ಡಿಯಿಲ್ಲ. ಜೊತೆಗೆ ಅದು ಹೊಸ ಶೈಲಿಯ ಕಥೆ ಹೇಳುವ ಮೂಲಕ ಟ್ರೆಂಡ್ ಬದಲಿಸಿತು. ನಂತರ ಪ್ರಶಾಂತ್ ನೀಲ್ ಕೆಜಿಎಫ್ ಮೂಲಕ ಚರಿತ್ರೆ ಬರೆದರು. ಈಗ ಚಾಪ್ಟರ್ 2 ಮೂಲಕ.. ಹಿಂದಿನ ಎರಡೂ ಹಿಟ್ ಫ್ಲೂಕ್ ಅಲ್ಲ. ಆಕಸ್ಮಿಕ ಅಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಹೊಸ ಸ್ಟಾರ್ ಉದಯಿಸಿದ್ದಾರೆ.

    ಅಂದಹಾಗೆ ಪ್ರಶಾಂತ್ ನೀಲ್ ಈಗಾಗಲೇ ಬಾಹುಬಲಿ ಪ್ರಭಾಸ್ ಜೊತೆ  ಸಲಾರ್ ಮಾಡುತ್ತಿದ್ದಾರೆ. ನಂತರದ ಸಿನಿಮಾ ಎನ್.ಟಿ.ಆರ್. ಜೊತೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಮೂಲಕ ಕನ್ನಡದ ಇನ್ನಷ್ಟು ಸ್ಟಾರ್‍ಗಳು ಇಂಡಿಯಾ ಸ್ಟಾರ್‍ಗಳಾಗಲಿ. ಏಕೆಂದರೆ ಸ್ಟಾರ್`ಗಳನ್ನು ಹುಟ್ಟು ಹಾಕುವ ತಾಕತ್ತಿರೋದು ನಿರ್ದೇಶಕರಿಗೆ ಮಾತ್ರ.