ಪ್ರತಿಯೊಬ್ಬ ಕಲಾವಿದ ಮತ್ತು ನಿರ್ದೇಶಕರಿಗೆ ಒಂದು ಕನಸಿರುತ್ತೆ. ತಮ್ಮ ಚಿತ್ರಗಳನ್ನು ತಾವು ಇಷ್ಟಪಡುವ ನಟ, ನಿರ್ದೇಶಕ, ತಂತ್ರಜ್ಞರು ನೋಡಿ ಮೆಚ್ಚಬೇಕು ಎನ್ನುವ ಕನಸದು. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿರೋ ಕೆಜಿಎಫ್ಗೆ ಈಗ ಅಂತಹ ದಿಗ್ಗಜರ ಮೆಚ್ಚುಗೆ ಸಿಕ್ಕಿದೆ.
ಸಂಗೀತ ಲೋಕದ ಧ್ರುವತಾರೆ ಇಳಯರಾಜಾ, ಕಮಲ್ಹಾಸ್ ಕೆಜಿಎಫ್ ಚಾಪ್ಟರ್ 2 ನೋಡಿ ಮೆಚ್ಚಿದ್ದಾರೆ. ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಕೂಡಾ ಚಿತ್ರವನ್ನು ನೋಡಿ ಯಶ್ ಮತ್ತು ಪ್ರಶಾಂತ್ ನೀಲ್ ಅವರನ್ನು ಹೊಗಳಿದ್ದರು.
ಇದಕ್ಕೂ ಮೊದಲು ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ಪ್ರಭಾಸ್, ಕಂಗನಾ ರಣಾವತ್, ಸಿಬಿ ಸತ್ಯರಾಜ್, ಸುಮಂತ್, ಗುರುಕಿರಣ್, ವಿಶಾಲ್, ಕೃತಿ ಕರಬಂಧ, ರವಿಶಂಕರ್ ಗೌಡ, ರಾಮ್ ಪೊತ್ತಿನೇನಿ, ರಾಣಾ ದಗ್ಗುಬಾಟಿ, ಕಾರ್ತಿ, ಖುಷ್ ಬೂ, ಅಮೃತಾ ಅಯ್ಯಂಗಾರ್, ಬೀರ್ಬಲ್ ಶ್ರೀನಿ, ಶ್ರೀಮುರಳಿ, ಅಥರ್ವ, ಕಾರ್ತಿಕೇಯ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ಸುಮಲತಾ ಅಂಬರೀಷ್, ಕಾರ್ತಿಕ್ ಸುಬ್ಬರಾಜ್, ನವೀನ್ ಚಂದ್ರ, ಶಿವಕಾರ್ತಿಕೇಯನ್, ಪವನ್ ಒಡೆಯರ್, ರಾಘವೇಂದ್ರ ರಾಜಕುಮಾರ್, ಸಾಯಿ ಧರಮ್ತೇಜ್, ಸಂತೋಷ್ ಆನಂದರಾಮ್, ಹೇಮಂತ್ ರಾವ್, ಎಪಿ ಅರ್ಜುನ್, ಪ್ರೀತಂ ಗುಬ್ಬಿ.. ಹೀಗೆ ಎಲ್ಲರೂ ಹೊಗಳಿದ್ದವರೇ. ಹೊಗಳಿದವರ ಲಿಸ್ಟು ತುಂಬಾ ತುಂಬಾ ದೊಡ್ಡದು.
ಇವರೆಲ್ಲರ ಸಾಲಿನಲ್ಲೀಗ ಇಳಯರಾಜ, ಕಮಲ್ ಹಾಸನ್ ಕೂಡಾ ಸೇರಿರೋದು ಎಂತಹ ಕಲಾವಿದ, ತಂತ್ರಜ್ಞನಿಗೂ ಖುಷಿ ಕೊಡುವ ಸಂಗತಿಯೇ...