` mandya elections, - chitraloka.com | Kannada Movie News, Reviews | Image

mandya elections,

  • Darshan and Yash Campaign For Third Consecutive Day

    darshan and yash campaign for third consecutive day

    Actors Darshan and Yash campaigned for the third consecutive day for Sumalatha Ambarish at the Mandya constituency on Wednesday.

    Darshan and Yash are campaigning for Sumalatha from the past three days and will be continuing until the campaign ends on the 16th April. Actors Prem, Ravichetan and others also participated in the campaign on Tuesday. More members from the film fraternity is expected to support Sumalatha in the coming days.

    Actress Sumalatha Ambarish is contesting against Nikhil Kumaraswamy for the upcoming Lok Sabha polls from the Mandya constituency. Sumalatha is contesting as an independent candidate and is backed by Bharatiya Janatha Party

  • ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸ್ತಾರಾ ನಿಖಿಲ್ ಕುಮಾರಸ್ವಾಮಿ..?

    will it be abishek ambareesh vs nikhil gowda this elections

    ಜೆಡಿಎಸ್‍ನ ವರಿಷ್ಠರು ಟಿಕೆಟ್ ಕೊಟ್ಟರೆ, ಮಂಡ್ಯದಿಂದ ಸ್ಪರ್ಧಿಸೋಕೆ ನಾನ್ ರೆಡಿ. ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರೋ ನಿಖಿಲ್, ರಾಜಕೀಯದ ಇಂಗಿತವನ್ನೂ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅಕಸ್ಮಾತ್ ಮಂಡ್ಯದಲ್ಲಿ ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸಬೇಕು ಎಂದರೆ ಅದಕ್ಕೂ ಸಿದ್ಧ ಎಂದಿದ್ದಾರೆ ನಿಖಿಲ್.

    ನನ್ನ ಮತ್ತು ಅಭಿ ನಡುವೆ ಇಂದಿಗೂ ಅತ್ಯುತ್ತಮ ಸ್ನೇಹವಿದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ರಾಜಕೀಯ ಫ್ಯಾಮಿಲಿಯಿಂದ ಬಂದವನು. ರಾಜಕೀಯಕ್ಕೆ ಹೋಗುವುದು ಸುಲಭವಿದ್ದರೂ, ಅಲೆಗಳ ವಿರುದ್ಧ ಈಜಲೆಂದು ಸಿನಿಮಾಗೆ ಬಂದಿದ್ದೇನೆ. ಸಿನಿಮಾದಲ್ಲಿ ಗೆಲ್ಲುತ್ತೇನೆ. ಸೀತಾರಾಮ ಕಲ್ಯಾಣ ಚಿತ್ರದ ಮೇಲೆ ವಿಶ್ವಾಸವಿದೆ ಎಂದಿದ್ದಾರೆ ನಿಖಿಲ್.

  • ಮಂಡ್ಯದ ನಡುವೆಯೂ ಒಡೆಯನ ಮರೆತಿಲ್ಲ ದರ್ಶನ್

    darshan did not miss odeya shooting amidst mandya election campaigning

    ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಟೊಂಕ ಕಟ್ಟಿದ್ದಾರೆ. ಇನ್ನು ಏಪ್ರಿಲ್ 18ರವರೆಗೆ ನಮ್ಮ ಪರೇಡ್ ಮಂಡ್ಯದಲ್ಲಿ ಎಂದಿದ್ದ ದರ್ಶನ್, ಸಿನಿಮಾಗಳಿಗೆ ಬ್ರೇಕ್ ಕೊಡ್ತಾರೆ ಎಂದು ಭಾವಿಸಲಾಗಿತ್ತು. ಹಾಗೇನೂ ಆಗಿಲ್ಲ. ಒಂದು ಕಡೆ ಪ್ರಚಾರ ಮಾಡುತ್ತಲೇ, ಹಳೆಯ ಕಮಿಟ್‍ಮೆಂಟ್ ಆಗಿದ್ದ ಒಡೆಯ ಚಿತ್ರದ ಶೂಟಿಂಗ್‍ನ್ನೂ ಮುಂದುವರಿಸಿದ್ದಾರೆ ದರ್ಶನ್.

    ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ, ಹೈದರಾಬಾದ್‍ಗೆ ತೆರಳಿರುವ ದರ್ಶನ್, ಸಿನಿಮಾ ತಂಡದ ಜೊತೆಯಲ್ಲಿದ್ದಾರೆ.

    ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ, ಕೊಡಗಿನ ಚೆಲುವೆ ರಾಘವಿ ನಾಯಕಿ. ತಾರಕ್, ಯಜಮಾನ ಚಿತ್ರದಂತೆ, ಈ ಚಿತ್ರದಲ್ಲೂ ದೇವರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಎಸ್.ನಾರಾಯಣ್ ಪುತ್ರ ಪಂಕಜ್, ದರ್ಶನ್ ತಮ್ಮಂದಿರಲ್ಲಿ ಒಬ್ಬನಾಗಿ ನಟಿಸಿದ್ದಾರೆ. 

  • ಸುಮಲತಾಗೆ ದರ್ಶನ್ ಮಾಡಿರೋ ಪ್ರಾಮಿಸ್ ಇದು

    sumalatha talks about darshan and yash in mandya

    ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ ಎನ್ನುತ್ತಿದ್ದರು ಅಂಬರೀಷ್. ದರ್ಶನ್ ಕೂಡಾ ಹಾಗೆಯೇ ಇದ್ದಾರೆ. ಅಭಿಷೇಕ್‍ರನ್ನು ಅಷ್ಟೇ ಪ್ರೀತಿಯಿಂದ ತಮ್ಮ ಎನ್ನುತ್ತಾರೆ. ಅದೇ ಮಾತನ್ನು ಈಗ ಸುಮಲತಾ ಕೂಡಾ ಹೇಳಿದ್ದಾರೆ. 

    ದರ್ಶನ್ ನನ್ನ ದೊಡ್ಡ ಮಗ. ಯಶ್ ಮನೆ ಮಗ ಎಂದಿರೋ ಸುಮಲತಾ ದರ್ಶನ್‍ಗೆ ನೋಡಪ್ಪ, ನಾನು ಅಭಿಷೇಕ್ ಕಡೆಯಿಂದ ಏನೇನೆಲ್ಲ ನಿರೀಕ್ಷೆ ಮಾಡ್ತೀನೋ, ನಿನ್ನಿಂದಲೂ ಅದನ್ನೇ ನಿರೀಕ್ಷೆ ಮಾಡ್ತೀನಿ ಅಂತಾರಂತೆ. ಆಗೆಲ್ಲ ದರ್ಶನ್ ಹೇಳೋದು ಒಂದೇ ಮಾತು. ನೀವು ಅಭಿಷೇಕ್ ಕಡೆಯಿಂದ ಏನೇನು ನೋಡ್ತೀರೋ, ನನ್ನಿಂದ ಅದರ ಎರಡರಷ್ಟು ನಿರೀಕ್ಷೆ ಮಾಡಿ ಅಂತಾನೆ.

    ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ, ಸ್ವತಃ ಈ ಮಾತು ಹೇಳಿದ್ದಾರೆ. ಅಲ್ಲಿಗೆ ದರ್ಶನ್ ಮತ್ತು ಯಶ್ ಸುಮಲತಾ ಪರ ಪ್ರಚಾರಕ್ಕೆ ಬರೋದು ಹೆಚ್ಚು ಕಡಿಮೆ ಕನ್‍ಫರ್ಮ್.

    ದರ್ಶನ್ ಅವರಂತೂ ನಾನು ಸುಮಲತಾ ಅವರ ಜೊತೆ ಇರ್ತೇನೆ. ನನಗೆ ಪಕ್ಷ ಬೇಕಿಲ್ಲ. ನನ್ನವರು ಮುಖ್ಯ ಎಂದಿದ್ದಾರೆ.