` gaalipata2, - chitraloka.com | Kannada Movie News, Reviews | Image

gaalipata2,

  • Gaalipata 2 Movie Review, Chitraloka Rating 4/5

    Gaalipata 2 Movie Review, Chitraloka Rating 4/5

    Gaalipata 2 Movie Review 

    Director: Yograj Bhat

    Cast: Ganesh, Diganth, Anant Nag, Sharmila Mandre, Vaibhavi Shandilya, Samyuktha Menon, Pawan Kumar

    Duration: 2 hours 38 minutes

    Stars: 4/5

     Sunshine of emotions amidst rain and snow

    Working together seems to get the best out of director Yograj Bhat and actor Ganesh. They haven’t been prolific together but all their films together have been well-made and designed to transport audience to a world of emotions.

     Gaalipata 2 comes nearly a decade and half after the original and had much riding on it. The template of the original is followed; three college students meet three girls they fall in love with. How these relationships change the dandies is a script that Bhat has been writing all along.

     If the template is the same, how does Gaalipata 2 become special or watchable? To Bhat’s credit, he comes up with saying all the familiar things in a new way. The dialogues, which is usually the high-point of his films oozes with freshness.

     The usual wit and humour is present in a considerable dose. But he does not overdo it this time. Usually, his films seem to have more than the quantity of dialogues required. He has managed to hold his horses and deliver only what is required here.

    The songs, which are another highlights of Bhat’s films contain meaningful lyrics rather than pop philosophy. So unlike his regular songs which become instant hits, these songs grow up on you. After hearing it once, you are compelled to remember the lyrics and long to listen to them again.

     The youthful banter, jokes, fun, irreverence, tapori characters all combine to make Gaalipata 2 a perfect recipe for a new generation of audience who may not have watched Mungaru Male and Gaalipata in theatres in the first decade of the 21st Century. This is the third decade of the Century and the words, jokes and fun are updated. What remains the same are the emotions.

     Technically, this is a brilliant film. The camera work of Santhosh Rai Pathaje deserves an award or two. He is so flawless in executing brilliant shots that look so simple. The editing is another department that deserves special mention. The art work in some places is amazing and you are left wondering how they did it. The canvas is really colorful and Gaalipata is best enjoyed on the big screen, for all its vibrancy.

    On the acting front Ganesh nails it like a pro. He is king of emotions, a real golden performance. Among the other cast, Anant Nag is his usual best and you cannot even think of another actor in his place.

     Forget the story, forget the relevance and forget the past films. Go to Gaalipata 2 and soak in the wet emotions, cool breeze of fun and soft kisses of snowy fun. This may not be a landmark film, but has the right amount of everything to draw all kinds of audience.

  • Ganesh And Diganth Back With Yogaraj Bhatt

    ganesh and diganh back with yogaraj bhatt

    If everything had gone right, then Yogaraj Bhatt's new directorial 'Galipata' should have been launched by now. But there is a major change in the film and Ganesh and Diganth have replaced actors Sharan and Rishi in this film.

    Director Yogaraj Bhatt himself has confirmed that Ganesh and Diganth have come on board of 'Galipata 2' and have replaced Sharan and Rishi for various reasons. Ganesh and Diganth had played main roles in 'Galipata' along with Rajesh Krishnan and will be continuing in this film also. Though Rajesh Krishnan is acting in this film, he will be seen in a cameo role and 'Lucia' Pavan will be seen in the third lead.

    Apart from them, Ananth Nag and Rangayana Raghu who had acted in 'Galipata' will also continue to act in this film. While, 'Galipata' was produced by Suryaprakash Rao, this film is being produced by Mahesh Danannavar. The shooting for this film will start from August.

  • More Dhamaka Awaits Sandalwood in 2020

    More Dhamaka Awaits Sandalwood in 2020

    Kannada film industry wrapped 2019 on a high with the blockbuster Avane Srimannarayana after a series of other films did their magic at the box office for the calendar year.

    As we welcome 2020, Sandalwood is all set to greet some of the most anticipated ventures, which are lined up for release including Roberrt, KGF Chapter 2, Yuvarathna, Pogaru, Bhajarangi 2, Popcorn Monkey Tiger, Kotigobba 3, Ek Love Ya, Raymo, Gaalipata 2, Buddhivantha 2, amongst others.

    While Santhosh Anandraam returns after Raajakumara with Yuvarathna, Pawan Wadeyar's Raymo is expected to hit the theatres in 2020 and according to sources, he could even take up sequel to his most successful film - Googly 2.

    Real Star Upendra will also be busy at the box office in 2020, one with R Chandru Kabza and another next is his other anticipated sequel - Buddhivantha 2.

    Prem too returns to direction in 'Ek Love Ya' which is produced by actress Rakshita under her home banner Rakshita Film Factory which marks the debut of her brother Raanna.

    Tharun Sudhir too returns, and this time with Challenging Star Darshan in the lead as Robbert. Even Rudra Prayag by Bell Bottom actor Rishabh Shetty has raised a lot of expectations.

    Next year will also mark the return of Kichcha Sudeepa as director after a sizeable gap since he last directed Maanikya. He has announced that he will soon reveal about his next directorial. Whereas, Shivanna will continue with his run at the box office.

    Whereas, next big pan-India release would be KGF Chapter 2, which marks the debut of Bollywood actor Sanjay Dutt. Along with starry projects, Sandalwood has umpteen number of experimental projects helmed by new breed of filmmakers, as there are more surprises to be unveiled in the coming year. 

     

    Chitraloka wishes all its readers, the film industry, KFCC, the film body, actors, technicians and most of all the audience of Kannada movies, a very happy new year.

  • ಉದಯೋನ್ಮುಖ ಪ್ರೇಮಿಗೆ ಮೇಡಮ್ ಮೇಲೇ ಪ್ರೀತಿ..

    ಉದಯೋನ್ಮುಖ ಪ್ರೇಮಿಗೆ ಮೇಡಮ್ ಮೇಲೇ ಪ್ರೀತಿ..

    ಯೋಗರಾಜ್ ಭಟ್ಟರು ಪ್ರೀತಿ ಮಾಡಿಸೋಕೆ ಹೊರಟರೆ ಹಾಗೇ.. ಗಣೇಶ್, ದಿಗಂತ್, ರಾಜೇಶ್ ಕೃಷ್ಣ ಅವರಿಗೆಲ್ಲ ಪ್ರೇಮ ಪಾಠ ಕಲಿಸಿದ ಲವ್ ಮೇಷ್ಟ್ರು ಭಟ್ಟರು. ಈ ಬಾರಿ ಭಟ್ಟರ ಕೈಗೆ ಸಿಕ್ಕಿರುವ ಉದಯೋನ್ಮುಖ ಪ್ರೇಮಿ ಪವನ್ ಕುಮಾರ್. ಗಾಳಿಪಟ 2 ಚಿತ್ರದ ಉದಯೋನ್ಮುಖ ಪ್ರೇಮಿಯಾಗಿ ನಟಿಸಿರುವುದು ಲೂಸಿಯಾ ಪವನ್. ಹೀರೋ ಆಗಿ ಅವರಿಗಿದು ಮೊದಲ ಸಿನಿಮಾ.

    ಇಲ್ಲಿ ಅವರು ಕಾಲೇಜ್ ಸ್ಟೂಡೆಂಟ್ ಆಗಿ ಲೆಕ್ಚರರ್`ಗೇ ಲೈನ್ ಹಾಕ್ತಾರೆ. ಸ್ಟೂಡೆಂಟ್ ಲವ್ ಮಾಡೋಕೆ ಕಷ್ಟವಾಗಿ ಲೆಕ್ಚರರ್ ಶರ್ಮಿಳಾ ಮಾಂಡ್ರೆ ಮನೆಯ ಬಾಗಿಲು ಕ್ಲೋಸ್ ಮಾಡ್ತಾರೆ. ಮನಸ್ಸಿನ ಬಾಗಿಲೂ ಕ್ಲೋಸ್ ಆಗಿ ಹೋಯ್ತಾ.. ಆಗಸ್ಟ್ 12ಕ್ಕೆ ಥಿಯೇಟರಿಗೆ ಹೋದರೆ ಪೂರ್ತಾ ಕಥೆಯನ್ನ ಅಲ್ಲೇ ಹೇಳ್ತಾರೆ ಯೋಗರಾಜ್ ಭಟ್ರು.

    ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ , ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್ ಜೋಡಿ ಜೋಡಿಯಾಗಿ ನಟಿಸಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಅಂದಹಾಗೆ ನಾಳೆ ಅಂದ್ರೆ ಜುಲೈ 31ಕ್ಕೆ ಗಾಳಿಪಟ 2 ಚಿತ್ರದ ಟ್ರೇಲರ್ ಹಾರಿಸಲಿದ್ದಾರೆ.

  • ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..!

    ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..!

    ಇದು ಖಂಡಿತಾ ಟೈಪಿಂಗ್ ಮಿಸ್ಟೇಕ್ ಅಲ್ಲ. ತಡವರಿಸುವಿಕೆಗೆ ದಿವ್ಯೌಷಧಿ ಸಿಗದೇ ಹುಡುಕಾಡಿದಾಗ ಡಾಕ್ಟರ ಹಿಡಿತಕ್ಕೂ ಸಿಗದೆ ಆದ ದುಷ್ಟ್ಪರಿಣಾಮವಿದು. ಅಂದಹಾಗೆ ಇವತ್ತು.. ಅಂದ್ರೆ ಆಗಸ್ಟ್ 14ನೇ ತಾರೀಕು ಸಂಜೆ 5ಕ್ಕೆ ರಿಲೀಸು.

    ಬರೆದಿರೋದು ಯೋಗರಾಜ್ ಭಟ್ಟರು. ಹಾಡಿರೋದು ವಿಜಯ್ ಪ್ರಕಾಶ್. ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.

    ಯೋಗರಾಜ್ ಭಟ್ ಎಣ್ಣೆ ಸಾಂಗು ಎಂದರೆ.. ಕುಡುಕರು ನಮ್ಮನ್ನೂ ಸೀರಿಯಸ್ ಆಗಿ ತಗೊಳ್ಳೋವ್ರು ಇದ್ದಾರಲ್ಲ ಎಂದು ಖುಷಿಯಾಗಿ ಎರಡು ಪೆಗ್ ಹೆಚ್ಚಿಗೇ ಹಾಕ್ತಾರೆ. ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..

    ನಾವ್ ಮನೆಗ್ ಹೋಗೋದಿಲ್ಲ..

    ಬಾಯಾರಿದೆ ಬೈಬೇಡಿ.. ಒಂಚೂರೇ ನಾ ಕುಡಿದೆನು..

    ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ..

    ಹಾಲು ಕುಡ್ದ ಮಕ್ಳೆ ಬದುಕಲ್ಲ..

    ಹೊಡಿ ಒಂಭತ್..

    ಹೀಗೆ ಎಣ್ಣೆ ಹೊಡೆಯುವವರಿಗಾಗಿಯೇ ಹಲವು ಹಾಡುಗಳಿವೆ. ಆದರೆ.. ಭಟ್ಟರ ಹಾಡುಗಳ ಕಿಕ್ಕೇ ಬೇರೆ. ಈಗ ಗಾಳಿಪಟ 2 ಚಿತ್ರದ ದೇವ್ಲೇ ದೇವ್ಲೇ ಹಾಡು ರಿಲೀಸ್ ಆಗುತ್ತಿದೆ.

    ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು. ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿರೋ ಗಾಳಿಪಟ 2 ಚಿತ್ರ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನಿಂದಾಗಿಯೇ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ.

  • ಕುದುರೆಮುಖದಲ್ಲಿ ಭಟ್ಟರ 2ನೇ ಗಾಳಿಪಟ

    yogaraj bhat in kudremukha for gaalipata 2 shooting

    ಗಾಳಿಪಟ ಅನ್ನೊ ಸೂಪರ್ ಡ್ಯೂಪರ್ ಹಿಟ್ ಕೊಟ್ಟಿದ್ದ ಯೋಗರಾಜ್ ಭಟ್, ಈಗ ಗಾಳಿಪಟ 2 ಮಾಡುತ್ತಿದ್ದಾರೆ. ಹೆಸರು ಬಿಟ್ಟರೆ, ಮತ್ಯಾವುದೇ ಲಿಂಕ್ ಇಲ್ಲ ಎಂದಿರುವ ಭಟ್ಟರು, ಇಲ್ಲಿಯೂ ಮೂವರೂ ಹೀರೋಗಳನ್ನೇ ಹಾಕಿಕೊಂಡಿದ್ದಾರೆ.

    ಗಣೇಶ್ ಮತ್ತು ವೈಭವಿ ಅಭಿನಯದ ರೊಮ್ಯಾಂಟಿಕ್ ಹಾಡಿನ ಶೂಟಿಂಗಿಗಾಗಿ ಕುದುರೆಮುಖದಲ್ಲಿರೋ ಭಟ್ಟರ ಟೀಂ, ಹಾಡನ್ನು ರಿಚ್ ಆಗಿ ಶೂಟ್ ಮಾಡುತ್ತಿದೆ. ನಾತಿಚರಾಮಿ ಖ್ಯಾತಿಯ ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2ನಲ್ಲಿ ಗಣೇಶ್ ಜೊತೆಗೆ ಪವನ್ ಕುಮಾರ್, ದಿಗಂತ್, ಶರ್ಮಿಳಾ ಮಾಂಡ್ರೆ ಮೊದಲಾದವರು ನಟಿಸುತ್ತಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.

  • ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ?

    ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ?

    ಕಲಾವಿದರಿಗೆ ಬಹಳ ಅಪರೂಪವಾಗಿ ಒಲಿಯುವ ಕಲೆ ಅದು. ನಗಿಸುತ್ತಲೇ ಅಳಿಸುವ ಕಲೆ. ನೋಡುಗರನ್ನು ನಗಿಸುತ್ತಲೇ ಭಾವುಕರನ್ನಾಗಿಸುವ ಕಲೆ. ಅದನ್ನು ಗಣೇಶ್ ಅದ್ಭುತವಾಗಿ ಮಾಡುತ್ತಾರೆ. ಗಾಳಿಪಟ 2 ಚಿತ್ರದ ಅವರ ಪಾತ್ರ ಪರಿಚಯ ನೋಡಿದವರಿಗೆ ಮತ್ತೊಮ್ಮೆ ಗಣೇಶ್ ದರ್ಶನವಾಗಿದೆ.

    ನಗುವಿನೊಂದಿಗೇ ಶುರುವಾಗುತ್ತೆ ಗಣಿಯ ಪರಿಚಯ. ಕನ್ನಡಿಗ.. ಆದರೆ ಕನ್ನಡ ಬರಲ್ಲ. ಕಾಪಿ ಹೊಡೆಯೋಕೆ  ಕ್ವಶ್ಚನ್ ಯಾವ್ದು.. ಆನ್ಸರ್ ಯಾವ್ದು ಎನ್ನುವುದೂ ಗೊತ್ತಿಲ್ಲದ ಪ್ರತಿಭಾವಂತ. ಮಧ್ಯದಲ್ಲೊಂದು ಯುವ ಜನಾಂಗ ರೋಮಾಂಚಿತರಾಗುವ ವಿಚಿತ್ರ ಲವ್ ಸ್ಟೋರಿ..  ನಗು ನಗಿಸುತ್ತಲೇ ಸಾಗುವ ಟೀಸರ್.. ಸನ್ನಿವಶೇವೇನೆಂದು ಗೊತ್ತಾಗದೇ ಹೋದರೂ ಗಣಿ ಅವರ ಆ ದೃಶ್ಯ ನೋಡಿದರೆ ಭಾವುಕರಾಗುವುದು ಗ್ಯಾರಂಟಿ.

    ಗಾಳಿಪಟ 2 ಚಿತ್ರದ ಗಣಿ ಪಾತ್ರದ ಪರಿಚಯ ಇದು. ರಿಯಲ್ ಸ್ಟಾರ್ ಉಪೇಂದ್ರ ಗಣಿ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡಿದ್ದಾರೆ. ಜುಲೈ 31ಕ್ಕೆ ಟ್ರೇಲರ್ ರಿಲೀಸ್ ಮಾಡಿ ಆಗಸ್ಟ್ 12ಕ್ಕೆಲ್ಲ ಸಿನಿಮಾ ತೆರೆ ಮೇಲೆ ತರೋದು ಗಾಳಿಪಟ 2 ಚಿತ್ರದ ಪ್ಲಾನ್.

    ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  • ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..?

    ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..?

    ಗಾಳಿಪಟದಲ್ಲೂ ಅಷ್ಟೆ, ಗಣಿ ಪಾತ್ರಕ್ಕೆ ಕನ್ನಡ ಬರ್ತಾ ಇರಲ್ಲ. ಆದರೆ, ಟೀಚರ್ ಡೈಸಿ ಬೋಪಣ್ಣ ಮೇಲೆ ಪ್ರೀತಿ ಹುಟ್ಟುತ್ತೆ. ನನಗೆ ಕನ್ನಡ ಬರದೇ ಇರೋದಕ್ಕೆ ಕಾರಣ ನಾನಲ್ಲ, ನನ್ನ ಅಪ್ಪ ಎನ್ನುವ ನಾಯಕ ಕಷ್ಟಪಟ್ಟು ಕನ್ನಡ ಕಲಿತು ನಾಯಕಿಯ ಹೃದಯ ಗೆಲ್ತಾನೆ. ಇಲ್ಲಿಯೂ ಗಣಿ ಸ್ಟೂಡೆಂಟು.

    ಅಂದಹಾಗೆ ಗಣಿಯ ಎದುರು ಜೋಡಿಯಾಗಿರೋದು ವೈಭವಿ ಶಾಂಡಿಲ್ಯ. ಚಿತ್ರದಲ್ಲಿ ವೈಭವಿಯವರದ್ದು ಕನ್ನಡವನ್ನು ಪ್ರೀತಿಸುವ ವಿದ್ಯಾರ್ಥಿನಿಯ ಪಾತ್ರ. ಶ್ವೇತಾ ಅನ್ನೋದು ವೈಭವಿಯ ಹೆಸರು. ಭಾಷೆಯನ್ನು ಪ್ರೀತಿಸುವ, ಆರಾಧಿಸುವ ವ್ಯಕ್ತಿತ್ವ ಶ್ವೇತಾಳದ್ದು. ಸಿನಿಮಾದಲ್ಲಿ ಕನ್ನಡವನ್ನು ಪ್ರೀತಿಸುವ ಹುಡುಗಿಯ ಪಾತ್ರ ಮಾಡಿರುವ ವೈಭವಿಗೆ ರಿಯಲ್ ಲೈಫಲ್ಲಿ ಕನ್ನಡ ಬರಲ್ಲ.  ಏಕೆಂದರೆ ಮೂಲ ಮುಂಬೈ.

    ನನಗೆ ಕನ್ನಡ ಬರಲ್ಲ. ಆದರೆ ನಾನು ಮಾಡುವ ಚಿತ್ರ ಮತ್ತು ಪಾತ್ರದ ಕುರಿತು ತಿಳಿದುಕೊಳ್ಳೋದು ನನ್ನ ಆದ್ಯತೆಯಾಗಿತ್ತು. ಅದಕ್ಕಾಗಿಯೇ ಗಾಳಿಪಟ ಚಿತ್ರವನ್ನು ನೋಡಿದೆ. ಒಂದ್ಸಲ ಸಬ್ ಟೈಟಲ್ ಜೊತೆ ನೋಡಿ, ಇನ್ನೊಂದ್ಸಲ ಸಬ್ ಟೈಟಲ್ ಇಲ್ಲದೆ ನೋಡಿದೆ. ಚಿತ್ರ ಇಷ್ಟವಾಯಿತು. ಯೋಗರಾಜ್ ಭಟ್ ಅವರ ವರ್ಕಿಂಗ್ ಸ್ಟೈಲ್ ಕೂಡಾ ಗೊತ್ತಾಯ್ತು ಎಂದಿದ್ದಾರೆ ವೈಭವಿ.

    ಯೋಗರಾಜ್ ಭಟ್ ಅವರ ಬಳಿ ಸೀನ್ ಮತ್ತು ಡೈಲಾಗ್ ಮೊದಲೇ ತೆಗೆದುಕೊಂಡು ಸಂಪೂರ್ಣ ಸಿದ್ಧವಾಗಿಯೇ ಸೆಟ್‍ಗೆ ಹೋಗುತ್ತಿದೆ. ಅವರು ಬರೆಯುವ ಒಂದೊಂದು ಸಾಲೂ ಮುತ್ತು ಪೋಣಿಸಿದಂತೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ನನ್ನ ಬೆಸ್ಟ್ ಕೊಟ್ಟಿದ್ದೇನೆ ಎನ್ನುತ್ತಾರೆ ವೈಭವಿ.

    ಗಣೇಶ್ ಜೊತೆ ನಟಿಸಿದ್ದು ಒಂಥರಾ ಸುಂದರ ಅನುಭವ. ಈ ಚಿತ್ರ ನನಗೆ ಖಂಡಿತಾ ಬ್ರೇಕ್ ಕೊಡಲಿದೆ ಎನ್ನುವುದು ವೈಭವಿ ಅವರ ವಿಶ್ವಾಸ.

  • ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ

    ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ

    ಯೋಗರಾಜ್ ಭಟ್ ನಿರ್ದೇಶನದ ಇನ್ನೇನು ರಿಲೀಸ್ ಆಗಬೇಕಿರುವ ಚಿತ್ರ ಗಾಳಿಪಟ 2. ಮತ್ತೊಮ್ಮೆ ಗಣೇಶ್, ದಿಗಂತ್ ಜೊತೆಗೂಡಿ ನಿರ್ದೇಶಿಸಿರುವ ಸಿನಿಮಾ. ಲೂಸಿಯಾ ಪವನ್‍ರನ್ನು ಈ ಚಿತ್ರದಿಂದ ಹೀರೋ ಮಾಡುತ್ತಿರೋ ಭಟ್ಟರ ಜೊತೆಗೆ ಗಾಳಿಪಟ ಹಾರಿಸೋಕೆ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಇದ್ದಾರೆ. ಇವರೆಲ್ಲರಿಗೂ ಸೀನಿಯರ್ ಗುರುವಾಗಿ ಅನಂತ್ ನಾಗ್ ಇದ್ದಾರೆ. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು ಯು ಸರ್ಟಿಫಿಕೇಟ್ ಪಡೆದುಕೊಂಡಿದೆ.

    ಇದು ಹೊಸದೇನಲ್ಲ. ವಿಚಿತ್ರವೂ ಅಲ್ಲ. ಭಟ್ಟರ ಸಿನಿಮಾಗಳು ಸಕುಟುಂಬ ಸಮೇತರಾಗಿ ನೋಡುವಂತೆಯೇ ಇರುತ್ತವೆ. ದ್ವಂದ್ವಾರ್ಥ ಇರಲ್ಲ. ಅಶ್ಲೀಲತೆಯೂ ಇರಲ್ಲ. ಎಂದಿನಂತೆ ತಮಾಷೆಯಾಗಿಯೇ ಸೀರಿಯಸ್ ಕಥೆ ಹೇಳುವ ಭಟ್ಟರು ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ? ಅದನ್ನು ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ಹೇಳಬೇಕು.

  • ಗಾಳಿಪಟ 2ಗೆ ಕುಂಭಳಕಾಯಿ

    ಗಾಳಿಪಟ 2ಗೆ ಕುಂಭಳಕಾಯಿ

    ಯೋಗರಾಜ್ ಭಟ್, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ ಗಾಳಿಪಟ 2. ಕೊರೊನಾ ಕಾರಣದಿಂದಾಗಿ ಚಿತ್ರೀಕರಣಕ್ಕೇ ಸುದೀರ್ಘ ಸಮಯ ತೆಗೆದುಕೊಂಡಿದ್ದ ಚಿತ್ರವೀಗ ಶೂಟಿಂಗ್ ಮುಗಿಸಿ ಕುಂಭಳಕಾಯಿ ಒಡೆದಿದೆ. ಡೈರೆಕ್ಟರ್ ಲೂಸಿಯಾ ಪವನ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ,ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ನಾಯಕಿಯರು. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಗಾಳಿಪಟ 2 ಚಿತ್ರ 2022ರ ಆರಂಭದಲ್ಲಿ ಬಿಡುಗಡೆಯಾಗುವ ಎಲ್ಲ ಸೂಚನೆಗಳೂ ಇವೆ.

  • ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್

    ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್

    ಕನ್ನಡ ಸಿನಿಮಾಗಳಿಗೆ ಈಗ ಇಡೀ ವಿಶ್ವದಾದ್ಯಂತ ದೊಡ್ಡ ಮಾರ್ಕೆಟ್ ಸೃಷ್ಟಿಯಾಗಿದೆ. ಹೀಗಾಗಿಯೇ ಗಣೇರ್ಶ ಮತ್ತು ಯೋಗರಾಜ್ ಭಟ್ ಜೋಡಿಯ ಗಾಳಿಪಟ 2 ಚಿತ್ರ ಆಸ್ಟ್ರೇಲಿಯಾ, ಅಮೆಇರಕ ಸೇರಿದಂತೆ ವಿಶ್ವದ ಹಲವೆಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಬುಕ್ಮೈ ಶೋನಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಅದೂ ಜೋರಾಗಿಯೇ ಇದೆ. ಭಟ್ಟರು ಮತ್ತು ಗಣಿ ಜೋಡಿ ಮತ್ತೊಮ್ಮೆ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಹೀಗಾಗಿಯೇ ಚಿತ್ರಕ್ಕೆ ಮಾರ್ನಿಂಗ್ ಶೋ 6 ಗಂಟೆಗೇ ಶುರು ಮಾಡಲು ಸಿದ್ಧತೆಯಾಗುತ್ತಿದೆ.

    ಗಣೇಶ್ & ಭಟ್ಟರ ಕಾಂಬಿನೇಷನ್ ಜೊತೆ ಶರ್ಮಿಳಾ ಮಾಂಡ್ರೆ-ಪವನ್, ದಿಗಂತ್-ಸಂಯುಕ್ತಾ ಮೆನನ್ ಜೋಡಿಯೂ ಇದೆ. ಗಾಳಿಪಟ ಬಂದಾಗ ಗಣೇಶ್ ಅವರಿಗೆ ಒಂದು ಕೋಟಿ ಸಂಭಾವನೆ ಕೊಡಲಾಗಿತ್ತು.ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ದಾಖಲೆ ಇವತ್ತಿಗೂ ಗಣೇಶ್ ಹೆಸರಲ್ಲೆ ಇದೆ. ಆ ಗಾಳಿಪಟ 175 ದಿನ ಓಡಿತ್ತು. ಈಗ ಈ ಗಾಳಿಪಟ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿ ನಿಂತಿದೆ.

    ಆಗಸ್ಟ್ 12ರಂದು ವಿಶ್ವದೆಲ್ಲೆಡೆ ಗಾಳಿಪಟ 2 ಹಾರಲಿದೆ. ಒಂದು ಕ್ಯೂಟ್ ಲವ್ ಸ್ಟೋರಿಯಂತೂ ಪಕ್ಕಾ. ಜೊತೆಗೆ ಸ್ನೇಹ ಸಂದೇಶವೂ ಇರಲಿದೆ. ಭಟ್ಟರ ಜೊತೆ ಈ ಬಾರಿ ಸಂಗೀತದ ಮೋಡಿ ಮಾಡಿರುವುದು ಅರ್ಜುನ್ ಜನ್ಯಾ. ಗಾಳಿಪಟ ಹಾರೋದು ನೋಡೋಕೆ ರೆಡಿಯಾಗಿ..

  • ಟೀಚರ್ ಸ್ಟೂಡೆಂಟ್ ಲವ್ ಸ್ಟೋರಿ ಮಿಸ್ಟರಿ ಏನು?

    ಟೀಚರ್ ಸ್ಟೂಡೆಂಟ್ ಲವ್ ಸ್ಟೋರಿ ಮಿಸ್ಟರಿ ಏನು?

    ಗಾಳಿಪಟದಲ್ಲಿ ಡೈಸಿ ಬೋಪಣ್ಣ ಟೀಚರ್. ಗಣೇಶ್ ಸ್ಟೂಡೆಂಟ್ ಅಲ್ಲ. ಅಲ್ಲಿ ಅದೊಂಥ....ರಾ ಲವ್ ಸ್ಟೋರಿಯಿತ್ತು. ಇಲ್ಲಿ ಪವನ್ ಸ್ಟೂಡೆಂಟ್. ಶರ್ಮಿಳಾ ಮಾಂಡ್ರೆ ಟೀಚರ್. ಇದು ಇನ್ನೊಂದ್‍ತರಾ ಲವ್ ಸ್ಟೋರಿ... ಇದು ಭಟ್ಟರ ಗಾಳಿಪಟ 2.

    ಟೀಚರ್ ಹೌದು. ಹಾಗಂತ ತುಂಬಾ ವಯಸ್ಸಾದ ಟೀಚರ್ ಅಲ್ಲ. ಹಾಗಂತ ಇದು ಕಂಪ್ಲೀಟ್ ಸ್ಟೂಡೆಂಟ್ ಟೀಚರ್ ಲವ್ ಸ್ಟೋರಿಯೂ ಅಲ್ಲ. ಪವನ್ ಕುಮಾರ್ ಪಾಯಿಂಟ್ ಆಫ್ ವ್ಯೂನಿಂದ ಲವ್ ಶುರುವಾಗುತ್ತೆ. ಶಾಲೆ, ಕಾಲೇಜುಗಳಲ್ಲಿ ಪ್ರತಿಯೊಬ್ಬರಿಗೂ ಟೀಚರ್ ಮೇಲೆ ಕ್ರಷ್ ಇರುತ್ತದೆ. ಅದನ್ನೇ ಯೋಗರಾಜ್ ಭಟ್ರು ತೆರೆ ಮೇಲೆ ಲವಲವಿಕೆಯಿಂದ ತಂದಿದ್ದಾರೆ ಎಂದಿರೋದು ಶರ್ಮಿಳಾ ಮಾಂಡ್ರೆ.

    ಜೊತೆಗೆ ಗಾಳಿಪಟದಲ್ಲಿ ಶರ್ಮಿಳಾ ಮಾಡಿರೋ ಫಿಶ್ ಡೈ ಸಖತ್ತಾಗಿ ಕ್ಲಿಕ್ ಆಗಿದೆ. ಗಾಳಿಪಟಕ್ಕೂ ನಾನೇ ಹೀರೋಯಿನ್ ಆಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು. ಈಗ ಮತ್ತೊಮ್ಮೆ ಗಾಳಿಪಟ 2ನಲ್ಲಿ ಹೀರೋಯಿನ್. ಅದೇ ಖುಷಿ. ನನಗೂ ತೆರೆ ಮೇಲೆ ಬಂದು ತುಂಬಾ ವರ್ಷಗಳಾಗಿವೆ. ಹೀಗಾಗಿ ನನಗೂ ಕ್ಯೂರಿಯಾಸಿಟಿ ಇದೆ ಎಂದಿದ್ದಾರೆ ಶರ್ಮಿಳಾ ಮಾಂಡ್ರೆ.

    ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಬೇರೆಯದೇ ಕ್ರೇಜ್ ಸೃಷ್ಟಿಸಿದೆ.

  • ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್

    ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್

    ಹೊಲ್ಟೋಗಿರೋ ಹುಡ್ಗೀರೆಲ್ಲ ಹಂಗೇ ವಾಪಸ್ ಬಂದವ್ರಲ್ಲ..

    ಪ್ರೀತಿಸ್ಬೇಕಾ... ಪ್ರೀತಿಸ್ಬಾರ್ದಾ ಕರೆಕ್ಟಾಗಿ ಹೇಳು ದೇವ್ಲೇ ..

    ಮಕಾಡೆ ಮಲ್ಲಿಕ್ಕಂಡ್ರೆ ತುಕಾಲಿ ಕನಸುಗಳು.. ಅಂಗಾತ ಮಲ್ಲಿಕ್ಕಂಡ್ರೆ ಫ್ಲಾಷ್ ಬ್ಯಾಕೆಲ್ಲ ಬೆಂಕಿ ದೇವ್ಲೇ..

    ಗಟ ಗಟ ಬೀರು.. ಕುಡಿದರೆ ನೀರು..

    ನಾವು ಎಣ್ಣೇ ಬಿಟ್ರೂ ಎಣ್ಣೆ ನಮ್ಮನ್ ಬಿಡ್ತಾ ಇಲ್ಲ..

    ಭಟ್ಟರ ಫಿಲಾಸಫಿಯನ್ನು ಎಣ್ಣೆಯೊಂದಿಗೆ ಬೆರೆಸಿ ಕ್ಲಾಸಿಕ್ ಎಣ್ಣೆ ಸಾಂಗ್ ಕೊಟ್ಟಿದ್ದಾರೆ ಭಟ್ಟರು.

    ಭಟ್ಟರ ಸಾಹಿತ್ಯಕ್ಕೆ ಅಷ್ಟೇ ಖಡಕ್ಕಾಗಿ.. ಫುಲ್ ಟೈಟಾಗಿ ಹಾಡಿರೋದು ವಿಜಯ್ ಪ್ರಕಾಶ್. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಗಣೇಶ್-ದಿಗಂತ್-ಪವನ್ ಜೋಡಿ ಕುಣಿದಾಡಿದೆ.

    ಭಟ್ಟರ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ಇದ್ದರೆ ಸಾಕು. ಹಾಗೆಯೇ ಕಿಕ್ಕೇರಿಸುತ್ತೆ. ಎಣ್ಣೆ ಹೊಡೀಬೇಕಿಲ್ಲ ಅನ್ನೋದು ಗಣೇಶ್ ಕಾಂಪ್ಲಿಮೆಂಟು. ಈ ಮೊದಲಿನ ಎಣ್ಣೆ ಸಾಂಗುಗಳಿಗಿಂತ ಈ ಹಾಡು ಸ್ವಲ್ಪ ಡಿಫರೆಂಟ್ ಎನ್ನಿಸೋದು ರ ಜಾಗದಲ್ಲಿ ಲ ಸೇರಿಸಿರೋದು. ಅದನ್ನು ಸೇರಿಸಿದ ಮೇಲೆ ಹಾಡಿಗೆ ಬೇರೆಯದ್ದೇ ಖದರ್ ಬಂತು ಅಂತಾರೆ ಭಟ್ಟರು.

  • ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ..

    ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ..

    ಯೋಗರಾಜ್ ಭಟ್ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳಿಗೆ ನಾಂದಿ ಹಾಡಿದವರು. ಭಟ್ಟರು ಮತ್ತು ಗಣೇಶ್ ಇಬ್ಬರದ್ದೂ ಸೂಪರ್ ಹಿಟ್ ಕಾಂಬಿನೇಷನ್. ಈ ಜೋಡಿ 4ನೇ ಬಾರಿಗೆ ಒಂದಾಗಿರುವ ಚಿತ್ರವೇ ಗಾಳಿಪಟ 2. ಈ ಚಿತ್ರದ ಹಾಡುಗಳು ಈಗಾಗಲೇ ಗುಂಗು ಹಿಡಿಸುತ್ತಿವೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಪ್ರಚಾರವನ್ನೂ ಜೋರಾಗಿಯೇ ಇಟ್ಟುಕೊಂಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.

    ಇವತ್ತು ಅಂದ್ರೆ ಜುಲೈ 26ನೇ ತಾರೀಕು ಸಂಜೆ 5 ಗಂಟೆ 2 ನಿಮಿಷಕ್ಕೆ ಗಾಳಿಪಟ 2 ಚಿತ್ರದ ಮೊದಲ ಟೀಸರ್ ಹೊರಬೀಳಲಿದೆ. ಅದರಲ್ಲಿ ಗಣೇಶ್ ಪಾತ್ರದ ಕಥೆ ಇರಲಿದೆಯಂತೆ. ಅದನ್ನ ರಿಲೀಸ್ ಮಾಡೋದು ಉಪ್ಪಿ.

    ನಾನಾಡದ ಮಾತೆಲ್ಲವ ಕದ್ದಾಲಿಸು..

    ದೇವ್ಲೇ ದೇವ್ಲೇ..

    ನೀನು ಬಗೆಹರಿಯದ ಹಾಡು..

    ಹಾಗೂ ಎಕ್ಸಾಂ ಸಾಂಗ್‍ಗಳು ಹಿಟ್ ಆಗಿವೆ. ಈಗ ಮೊದಲ ಟೀಸರ್ ಬರಲಿದೆ. ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಸಂಯುಕ್ತಾ ಮೆನನ್, ಪವನ್, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್, ಬುಲೆಟ್ ಪ್ರಕಾಶ್ ಸೇರಿದಂತೆ ಬೃಹತ್ ತಾರಾಗಣದ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು.

  • ಪ್ರಾಯಶಃ.. ಇಂತ ಹಾಡು ಬಂದು ವರ್ಷಗಳಾಗಿರಬಹುದು..

    ಪ್ರಾಯಶಃ.. ಇಂತ ಹಾಡು ಬಂದು ವರ್ಷಗಳಾಗಿರಬಹುದು..

    ನಾನು ಬದುಕಿರಬಹುದು..

    ಪ್ರಾಯಶಃ ಇಲ್ಲ ಕನಸಿರಬಹುದಿದು..

    ಪ್ರಾಯಶಃ ಇಲ್ಲ ಸರಿ ಇರಬಹುದು.

    ಭಾಗಶಃ ಇಲ್ಲ ಸೆರೆ ಇರಬಹುದಿದು.

    ಮೂಲತಃ ಜೀವ ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ.. ಪ್ರಾಯಶಃ..

    ಹಾಡಿನ ಸಾಹಿತ್ಯ ಕೇಳಿದವರಿಗೆ ಇದು ಜಯಂತ ಕಾಯ್ಕಿಣಿಯವರದ್ದೇನೋ ಅನ್ನಿಸಿದರೂ.. ಅದು ಸುಳ್ಳು. ಸಾಹಿತ್ಯ ಯೋಗರಾಜ್ ಭಟ್ಟರದು. ಇತ್ತೀಚೆಗೆ ಇಂತಹ ಮಾಧುರ್ಯದ ಗೀತೆಗಳನ್ನು ಬರೆಯದೆ ಸ್ವಲ್ಪ ದೂರವೇ ಉಳಿದಿದ್ದ ಕವಿ ಯೋಗರಾಜ್ ಭಟ್ ಮತ್ತೊಮ್ಮೆ ಬಂದಿದ್ದಾರೆ. ಪ್ರಾಯಶಃ..

    ಗಾಳಿಪಟ 2 ಚಿತ್ರದ ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್ ಇಂತಹ ಹಾಡನ್ನು ಕೇಳದೆ ಯಾವುದೋ ಕಾಲವಾಗಿತ್ತು ಎಂದ ಮಾತಿನಲ್ಲಿ ಪ್ರಾಯಶಃ ಅತಿಶಯೋಕ್ತಿ ಇರಲಿಲ್ಲ.

    ಭಟ್ಟರ ಭಾವತೀವ್ರತೆಯ ಪದಗಳಿಗೆ ಪ್ರಾಯಶಃ ಅದ್ಭುತ ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ ಅವರಾದರೆ.. ಪ್ರಾಯಶಃ ಅಷ್ಟೇ ತೀವ್ರತೆಯಿಂದ ಹಾಡಿರೋದು ಸೋನು ನಿಗಮ್. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಗಾಳಿಪಟ 2, ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್-ಶರ್ಮಿಳಾ ಮಾಂಡ್ರೆ ಜೋಡಿಯಾಗಿರೋ ಚಿತ್ರದಲ್ಲಿ ಚೆಂದದ ಪ್ರೇಮಕಥೆಯೊಂದು ಕೈ ಬೀಸಿ ಕರೆಯುತ್ತಿದೆ.

  • ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ

    ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ

    ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಎಂದ ಕೂಡಲೇ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬಿಡುಗಡೆಯಾದ ಹಾಡುಗಳು, ಟ್ರೇಲರ್ ಹೊಸ ಲೆವೆಲ್ಲಿನಲ್ಲಿದ್ದವು. ಆ ನಿರೀಕ್ಷೆಗೆ ತಕ್ಕಂತೆಯೇ ಭಟ್ ಮತ್ತು ಗಣಿ ಜೋಡಿ ಗೆಲುವಿನ ನಗು ಬೀರಿದೆ. ಮೊದಲ ದಿನದ ಕಲೆಕ್ಷನ್ 20 ಕೋಟಿಯ ಗಡಿ ದಾಟಿದೆ.

    ಗಾಳಿಪಟ 2 ಮಲ್ಟಿಪ್ಲೆಕ್ಸ್‍ಗಳಲ್ಲಿ 250ಕ್ಕೂ ಹೆಚ್ಚು ಶೋ ಕಂಡರೆ, 150 ಸಿಂಗಲ್ ಸ್ಕ್ರೀನ್‍ಗಳಲ್ಲಿ 600+ ಶೋ ಪ್ರದರ್ಶನಗೊಂಡಿದೆ. ಎಲ್ಲ ಶೋಗಳೂ ಹೌಸ್‍ಫುಲ್ ಅನ್ನೋದು ರಮೇಶ್ ರೆಡ್ಡಿಯವರ ಖುಷಿಗೆ ಕಾರಣ. ಹೊರರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಶೋಗಳಿದ್ದವರು. ವಿದೇಶಗಳಲ್ಲಿ 50+ ಶೋಗಳಿದ್ದವು. ಎಲ್ಲೆಡೆ ಚಿತ್ರಮಂದಿರ ತುಂಬಿದೆ ಸಂದೇಶಗಳು ಬಂದಿವೆ. ಒಂದು ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ ಹೆಚ್ಚೂ ಕಡಿಮೆ 20 ಕೋಟಿ ಎನ್ನಲಾಗಿದೆ. ಗಾಳಿಪಟದ ಜೊತೆ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ.. ಆ ಎರಡೂ ಚಿತ್ರಗಳ ದೊಡ್ಡ ಮಾರುಕಟ್ಟೆಯನ್ನೂ ಮೀರಿ ಗಾಳಿಪಟ ಕಲೆಕ್ಷನ್ ಮಾಡಿದೆ.

    ಇದು ಇಡೀ ಗಾಳಿಪಟ 2 ತಂಡದ ಗೆಲುವು. ನನ್ನ ಮತ್ತು ಭಟ್ಟರ ಕಾಂಬಿನೇಷನ್ ಗೆಲ್ಲಬೇಕು ಎನ್ನುವ ಕನಸನ್ನು ಪ್ರೇಕ್ಷಕರು ಎತ್ತಿ ಹಿಡಿದಿದ್ದಾರೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಗಣೇಶ್.

  • ಫಾರಿನ್ನಲ್ಲೂ ಗಾಳಿಪಟ ಹವಾ ಭಲೇ ಜೋರು

    ಫಾರಿನ್ನಲ್ಲೂ ಗಾಳಿಪಟ ಹವಾ ಭಲೇ ಜೋರು

    ಗೋಲ್ಡನ್ ಸ್ಟಾರ್ ಗಣೇಶ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡ ಮೊದಲ ಕನ್ನಡದ ನಟರೂ ಅವರೇ. ಈಗ ಗಾಳಿಪಟ 2 ಕೂಡಾ ಅದೇ ಹಾದಿಯಲ್ಲಿದೆ.

    ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗಿದ್ದ ಗಾಳಿಪಟ 2 ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಥಿಯೇಟರುಗಳು ತುಂಬಿ ತುಳುಕುತ್ತಿವೆ. ಪ್ರೇಕ್ಷಕರಿಗೆ ನಗು ಮತ್ತು ಅಳು ಎರಡನ್ನೂ ಕೈತುಂಬಾ ನೀಡಿ ಭಾವುಕರನ್ನಾಗಿಸಿ ಕಳಿಸುತ್ತಿದೆ ಗಾಳಿಪಟ. ಸ್ನೇಹ-ಪ್ರೀತಿಗಳ ನಡುವಿನ ಕಥೆಯಲ್ಲಿ ಕನ್ನಡದ ಕಥೆಯೂ ಇರುವುದು ಪ್ರೇಕ್ಷಕರಿಗೆ ಖುಷಿಯೋ ಖುಷಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರ ನೋಡಿದೆ ಎಂದು ಹೇಳಿಕೊಳ್ಳೋದು ಹೆಮ್ಮೆಯಾಗಿದೆ.

    ಇದೆಲ್ಲದರ ಜೊತೆ ಗಣೇಶ್ ಅವರ ವಿದೇಶಿ ಮಾರುಕಟ್ಟೆ ವಿಸ್ತರಿಸಿರೋದು. ವಿದೇಶಗಳಲ್ಲಿ 150ಕ್ಕೂ ಹೆಚ್ಚು ಕಡೆ ರಿಲೀಸ್ ಮಾಡಿದ್ದು ಈಗ ಮತ್ತಷ್ಟು ಶೋಗಳ ಸಂಖ್ಯೆ ಸೇರ್ಪಡೆಗೊಳ್ಳುತ್ತಿದೆ. ಕಲೆಕ್ಷನ್ ಕೂಡಾ ನಿರೀಕ್ಷೆಗಿಂತ ಹೆಚ್ಚಾಗಿದೆ.

    ಕಲೆಕ್ಷನ್ ಖುಷಿ ಕೊಟ್ಟಿದೆ. ಈ ಹಿಂದೆ ನನ್ನ ಚಿತ್ರಗಳು ಸೋತಿದ್ದವು. ಆದರೆ ಗಾಳಿಪಟ 2 ಆ ಎಲ್ಲ ಸೋಲುಗಳನ್ನೂ ಮರೆಯುವಂತಾ ಗೆಲುವು ಕೊಟ್ಟಿದೆ. ಗೆದ್ದಿದ್ದೇನೆ.ಲಾಭ ಎಷ್ಟು ಅನ್ನೋದನ್ನ ಮಾಕ್ರ್ಸ್‍ಕಾರ್ಡ್ ಬಂದ ಮೇಲೆ ಹೇಳುತ್ತೇನೆ ಎಂದಿದ್ದಾರೆ ರಮೇಶ್ ರೆಡ್ಡಿ.

    ಚಿತ್ರದ ಗೆಲುವನ್ನು ಯೋಗರಾಜ್ ಭಟ್ ಮತ್ತು ರಮೇಶ್ ರೆಡ್ಡಿಗೆ ನೀಡಿದ್ದಾರೆ ಗಣೇಶ್. ಗಣೇಶ್-ವೈಭವಿ ಶಾಂಡಿಲ್ಯ, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ, ದಿಗಂತ್-ಸಂಯುಕ್ತಾ ಮೆನನ್ ಜೋಡಿಯ ಜೊತೆ ಅನಂತನಾಗ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಗಾಳಿಪಟ 2.

  • ಹೀರೋಯಿನ್ ಯಕ್ಷಗಾನದ ಗಾಳಿಪಟ 2

    gaalipata 2 will have yakshagana by heroine

    ಗಾಳಿಪಟ 2 ಚಿತ್ರದಲ್ಲಿ ಡಿಫರೆಂಟ್ ಡಿಫರೆಂಟ್ ಲವ್ ಸ್ಟೋರಿಗಳಿವೆ ಅನ್ನೊದನ್ನು ಭಟ್ಟರು ಹೇಳಿದ್ದರು. ಅಲ್ಲೊಂದು ಯಕ್ಷಗಾನ ಲವ್ ಸ್ಟೋರಿ ಇದೆ ಅನ್ನೋ ಸುಳಿವು ಈಗ ಬರ್ತಾ ಇದೆ. ಪಂಚತಂತ್ರದ ಶೃಂಗಾರದ ಹೊಂಗೆಮರದ ಹೂವು ಸೋನಲ್, ಈಗ ಯಕ್ಷಗಾನ ಕಲಿಯೋಕೆ ಹೊರಟಿದ್ದಾರೆ.

    ಗಾಳಿಪಟ 2 ಚಿತ್ರದ ನಾಯಕಿಯಾಗಿರೋ ಸೋನಲ್ ಅವರಿಗೆ ಗಾಳಿಪಟ 2ನದಲ್ಲಿರೋದು ಯಕ್ಷಗಾನ ಕಲಾವಿದೆಯ ಪಾತ್ರ. ಕರಾವಳಿಯವರಾದರೂ ಯಕ್ಷಗಾನ ನೋಡಿದ್ದರೂ.. ಯಕ್ಷಗಾನ ಕಲಿತಿಲ್ಲ. ಆದರೆ, ಈಗ ಪಾತ್ರಕ್ಕಾಗಿ 2 ವಾರ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಸೋನಲ್.

    ನಾಯಕಿಯೊಬ್ಬಳು ಯಕ್ಷಗಾನ ಕಲಾವಿದೆಯಾಗಿ ನಟಿಸುವುದು ಕನ್ನಡ ಚಿತ್ರರಂಗಕ್ಕೆ ಹೊಸದು. ಯಕ್ಷಗಾನದಲ್ಲಿ ಹಲವಾರು ಮಹಿಳಾ ಕಲಾವಿದೆಯರಿದ್ದರೂ, ಸಿನಿಮಾದಲ್ಲಿ ಯಕ್ಷಗಾನ ಮಾಡುವ ಸಾಹಸಕ್ಕೆ ಯಾವುದೇ ಕಲಾವಿದೆ ಪ್ರಯತ್ನ ಮಾಡಿಲ್ಲ. ಹೀಗಾಗಿ ನನಗೆ ಇದು ಚಾಲೆಂಜಿಂಗ್ ಎಂದಿದ್ದಾರೆ ಸೋನಲ್.