` fire - chitraloka.com | Kannada Movie News, Reviews | Image

fire

  • Priyanka Upendra Clarifies On Resigning From FIRE

    priyanka upendra clarifies on resigning from FIRE

    Stating that it was conflicting views and ideologies which made her resign from Film Industry for Rights & Equality (FIRE), actress Priyanka Upendra has clarified in detail her journey in FIRE and what led her to leave it, and her goals ahead in making Kannada film industry a safe place for everyone.

    “The concept of having an Internal Complaints Committee (ICC) appealed to me as well as many like minded ones, and thus when Chethan approached me with the idea of an organisation that helps everyone in the Kannada Film Industry cope with sexual harassment along with various other issues, that appealed to me a great deal,” says Priyanka.

    She goes on to explain her association with FIRE since January 2017 and how she persuaded like minded personalities in the industry in being part of the body. While coming clean on her stand on AMMA, a Malayalam film association, she says that she wanted time to understand the current situation and wanted to do something substantial, that would benefit the cause. “I did tell Chethan that I had worked with Dileep, but that had nothing do with this issue. I just wanted some time to assess and understand the situation first, so as to know how our organisation could be involved properly and significantly as it pertained to the Malayalam industry,” she explains, adding that she gave her consent to go ahead with the letter addressing AMMA.

    “This was in no way connected to my decision to leave FIRE. Allegations that I was not comfortable as I knew Dileep are completely untrue.”

    “... My decision to leave this organisation was based on many things and I had decided to step down from the president’s position sometime earlier this year, but I thought I would remain a member. Because of conflicting views and ideologies, I have decided not to be a part of FIRE. I wish them all the best in their efforts and hope the continue to strive in their goals to make KFI a safe place for everyone,” she wraps up saying that she will continue to work on her favourite area which is women’, children's’, human rights , animals and Environmental I which are very close to her heart in her my own capacity towards these causes through Uppi Foundation or with any others who are working towards a change.

  • ಚೇತನ್‍ಗೆ ಪ್ರಚಾರದ ಹುಚ್ಚು - ಫೈರ್‍ನಿಂದ ಪ್ರಿಯಾಂಕಾ ಉಪೇಂದ್ರ ನಿರ್ಗಮನ

    chethan is crazy for publicity 0 priyanka upendra

    ಮೀಟೂ ಅಭಿಯಾನ ಹಲವು ಸ್ಟಾರ್‍ಗಳನ್ನು ಮಾಧ್ಯಮಗಳ ಕಟಕಟೆಯಲ್ಲಿ ನಿಲ್ಲಿಸಿದ್ದರೆ, ಮೀಟೂ ಅಭಿಯಾನಕ್ಕೆ ಆಸರೆ ಎನಿಸಿದ್ದ ಫೈರ್ ಸಂಸ್ಥೆಯೇ ಬಿರುಕುಬಿಟ್ಟಿದೆ. ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ನಿರ್ಗಮಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದ ಶೃತಿ ಹರಿಹರನ್ ಜೊತೆಗೆ ನಿಂತಿದ್ದದ್ದು, ಇದೇ ಫೈರ್ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪ್ರಿಯಾಂಕಾ ಉಪೇಂದ್ರ. ಈಗ ತಾವೇ ಸ್ಥಾಪಿಸಿದ್ದ ಸಂಸ್ಥೆಯಿಂದ ಹೊರನಡೆದಿದ್ದಾರೆ ಪ್ರಿಯಾಂಕಾ ಉಪೇಂದ್ರ. ಅವರ ನಿರ್ಗಮನಕ್ಕೆ ಕಾರಣ, ದಾರಿ ತಪ್ಪುತ್ತಿರುವ ಮೀಟೂ ಅಭಿಯಾನ ಮತ್ತು ಸಂಸ್ಥೆಯ ಸದಸ್ಯನಾಗಿರುವ ನಟ ಚೇತನ್‍ರ ಆತುರ, ಅತಿರೇಕದ ವರ್ತನೆ.

    ಹೆಣ್ಣು ಮಕ್ಕಳ ನೋವಿಗೆ ದನಿಯಾಗುತ್ತಿದ್ದ ಫೈರ್‍ನಲ್ಲಿ ಪ್ರಿಯಾಂಕ 2 ವರ್ಷಗಳಿಂದ ಅಧ್ಯಕ್ಷೆಯಾಗಿದ್ದರು. ಈಗ..

    ಪ್ರಿಯಾಂಕಾ ಉಪೇಂದ್ರ, ನಟ ಚೇತನ್ ಸಂಸ್ಥೆಯ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಯುವುದಕ್ಕಿಂತ, ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಎದುರು ಹೋಗಿ ಪ್ರಚಾರ ಗಿಟ್ಟಿಸುವುದೇ ಮುಖ್ಯವಾಗಿದೆ ಎಂದಿದ್ದಾರೆ. ಪ್ರಿಯಾಂಕಾ ಅಷ್ಟೇ ಅಲ್ಲ, ಸಂಸ್ಥೆಯಿಂದ ವೀಣಾ ಸುಂದರ್ ಕೂಡಾ ಹೊರಬಂದಿದ್ದಾರೆ.

    ಚಿತ್ರರಂಗ ಒಂದು ಮನೆಯಿದ್ದಂತೆ. ಮನೆಯಲ್ಲಿ ಏನಾದರೂ ಗಲಾಟೆ ಆದಾಗ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೋ.. ಅಥವಾ ಹಿರಿಯರ ಜೊತೆ ಕುಳಿತು ಬಗೆಹರಿಸಿಕೊಳ್ಳುತ್ತೇವೋ.. ಚಿತ್ರರಂಗ ಒಂದು ಫ್ಯಾಮಿಲಿ ಅನ್ನೋದನ್ನ ಮೀಟೂ ಅಥವಾ ಫೈರ್ ಸಂಸ್ಥೆಯನ್ನು ದಾರಿ ತಪ್ಪಿಸುತ್ತಿರುವವರೇ ಹೇಳಬೇಕು ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಚಿತ್ರರಂಗದಲ್ಲಿ ತೊಂದರೆಗೊಳಗಾದ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳುವುದು, ಕಾನೂನು ನೆರವು ನೀಡುವುದು ಹಾಗೂ ಸಮಸ್ಯೆ ಬಗೆಹರಿಸುವುದು ನಮ್ಮ ಉದ್ದೇಶವಾಗಿತ್ತು. ಹಿರಿಯರನ್ನು ಒಳಗೊಂಡೇ ಫೈರ್ ಸಂಸ್ಥೆ ರೂಪಿಸಿದ್ದೆವು. ಅಲ್ಲಿಯೂ ಸಮಸ್ಯೆ ಬಗೆಹರಿಯದೇ ಹೋದಾಗ ಕಾನೂನಿನ ಮೊರೆ ಹೋಗುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಸಂಸ್ಥೆಗೆ ಸೇರಿದ ಚೇತನ್‍ಗೆ ಬೇರೆಯದೇ ಉದ್ದೇಶಗಳಿದ್ದವು. ಪ್ರತಿಯೊಂದನ್ನೂ ಸುದ್ದಿ ಮಾಡುವ, ದೊಡ್ಡದಾಗಿ ಮಾತನಾಡುವ, ಎಲ್ಲದಕ್ಕೂ ಮೀಡಿಯಾಗಳ ಮುಂದೆ ಹೋಗುವ ಹುಚ್ಚು. ಸೂಕ್ಷ್ಮ ವಿಚಾರಗಳನ್ನು ಬೀದಿಯಲ್ಲಿ ಮಾತನಾಡಬಾರದು ಎಂಬ ಸೂಕ್ಷ್ಮತೆಯೇ ಅವರಿಗೆ ಇಲ್ಲ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಪ್ರತಿಯೊಂದನ್ನೂ ದೊಡ್ಡ ದನಿಯಲ್ಲೇ ಮಾತನಾಡುವ ಚೇತನ್, ಅಂಬರೀಶ್ ಅವರ ಎದುರೂ ಕೂಗಾಡಿದ್ದರಂತೆ. ಆಗ ಪ್ರಿಯಾಂಕಾ ಉಪೇಂದ್ರ ಬುದ್ದಿ ಹೇಳಿದ್ದರಂತೆ. ಅಷ್ಟೇ ಅಲ್ಲ, ವಾಣಿಜ್ಯ ಮಂಡಳಿಗೆ ಕೊಡುವ ದೂರುಗಳನ್ನು ನಮಗೇ ಕೊಡಿ ಎನ್ನುತ್ತಿದ್ದಾರೆ ಚೇತನ್. ಏನು ಅದರ ಅರ್ಥ..? ನಿಮಗಿಂತ ನಾವೇ ದೊಡ್ಡವರು ಎಂದು ಹೇಳಿದಂತೆ ಅಲ್ಲವಾ ಅದು..? ಇದು ಪ್ರಿಯಾಂಕಾ ಉಪೇಂದ್ರ ಪ್ರಶ್ನೆ.

    ಈಗಿನ ಶೃತಿ ಹರಿಹರನ್ ವಿವಾದವನ್ನು ಪ್ರಸ್ತಾಪಿಸಿರುವ ಪ್ರಿಯಾಂಕಾ, ಗಲಾಟೆಯಾಯಿತು. ಸುದ್ದಿಯಾಯಿತು. ವಿವಾದವಾಯಿತು. ಏನೂ ಆಗದೇ ಹೋದಾಗ.. ನೊಂದವರ ಧ್ವನಿಯನ್ನೇ ಅನುಮಾನದಿಂದ ನೋಡುವಂತಾಗುತ್ತೆ. ಅಷ್ಟೇ ಎಂದಿದ್ದಾರೆ.

  • ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್ - ಚೇತನ್‍ಗೆ ಧ್ರುವ ಚಾಲೆಂಜ್

    Dhruva Sarja, Chethan Image

    ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿರೋ ಆರೋಪಗಳಿಗೆ ಆರಂಭದ ದಿನದಿಂದಲೂ ಕೆಂಡಾಮಂಡಲವಾಗಿರುವ ನಟ ಧ್ರುವ ಸರ್ಜಾ, ಶೃತಿ ಹರಿಹರನ್ ಬೆಂಬಲಕ್ಕೆ ನಿಂತಿರುವ ಚೇತನ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್. ನನ್ನ ಮಾವ ಏನು ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.

    ಹಾಗಾದರೆ, ನಾವು ನಾಯಿ, ನರಿ, ಕ್ರಿಮಿ, ಕೀಟಗಳಾ ಎಂದು ಪ್ರಶ್ನೆ ಹಾಕಿದ್ದಾರೆ ಚೇತನ್. ಅಲ್ಲದೆ ಏನು..? ನಿಮ್ಮ ಬಳಿ ಸತ್ಯ ಇದ್ದರೆ, ಸಾಕ್ಷಿ ಇದ್ದರೆ, ಈ ರೀತಿ ಪಬ್ಲಿಸಿಟಿ ಮಾಡ್ಕೊಂಡು ಇರುತ್ತಿರಲಿಲ್ಲ. ನಿಮ್ಮ ಹಿಂದೆ ಯಾರ್ಯಾರೆಲ್ಲ ಇದ್ದಾರೆ ಎನ್ನುವುದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.

    ಕಾನೂನಿನ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದೀರಿ ಎಂಬ ಚೇತನ್ ಮಾತಿಗೆ, ನಿಮ್ಮ ಬಗ್ಗೆ ಮಾತ್ರ ಕಾನೂನು ರೀತಿ ನೋಡಬೇಕು ಎನ್ನುವವರು  ಬೇರೆಯವರ ಬಗ್ಗೆಯೂ ಕಾನೂನಿನ ರೀತಿಯಲ್ಲೇ ನೋಡಬೇಕಿತ್ತಲ್ವಾ..? ಈಗ ನಿಮ್ಮ ವಿರುದ್ಧ ಯಾರೋ ಒಬ್ಬ ಮಹಿಳೆ ಆರೋಪ ಮಾಡಿದ್ರೆ, ನೀವು ನಂಬ್ತೀರಾ.. ಎನ್ನುವುದು ಧ್ರುವ ಸರ್ಜಾ ಪ್ರಶ್ನೆ.

    ನಿಮ್ಮ ಫೈರ್ ಸಂಘಟನೆಗೆ ಶೃತಿ ಹರಿಹರನ್ 8 ತಿಂಗಳ ಹಿಂದೆಯೇ ಸದಸ್ಯೆಯಾಗಿದ್ದಾರೆ. ಹಾಗಿದ್ದರೆ 8 ತಿಂಗಳಿಂದ ಏನ್ ಮಾಡ್ತಾ ಇದ್ರಿ..? ನಿಮ್ಮ ಸಂಸ್ಥೆ ಕೂಡಾ ಕಾನೂನಿನ ಅಡಿಯಲ್ಲೇ ಬರುತ್ತೆ. ಆ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಆ ಕಾರಣಕ್ಕಾಗಿ ಗೌರವ ನೀಡುತ್ತಿದ್ದೇನೆ. ಇಲ್ಲದೆ ಇರುವ ವಿವಾದ ಸೃಷ್ಟಿ ಮಾಡುತ್ತಿದ್ದೀರಿ ಎನ್ನುವುದು ಇಡೀ ಕರ್ನಾಟಕಕ್ಕೇ ಗೊತ್ತಿದೆ ಎಂದಿದ್ದಾರೆ ಧ್ರುವ ಸರ್ಜಾ.

    ಸಾ.ರಾ.ಗೋವಿಂದು ಕುರಿತು ಚೇತನ್ ಮಾಡಿರುವ ಟೀಕೆಗೆ, ಅವರ ವಿರುದ್ಧ ಟೀಕೆ ನಿನಗ್ಯಾವ ಅರ್ಹತೆ ಇದೆ ಎಂದು ಕೆಂಡಕಾರಿದ್ದಾರೆ ಧ್ರುವ ಸರ್ಜಾ.

  • ಪ್ರಿಯಾಂಕಾ ಉಪೇಂದ್ರ V/s  ಚೇತನ್ ಮೀಟೂ ಫೈರ್

    chethan speaks negative against priyanka upendra

    ಮೀಟೂ ವಿವಾದ, ಪ್ರಿಯಾಂಕ ಉಪೇಂದ್ರ ಮತ್ತು ಚೇತನ್ ಮಧ್ಯೆ ವಾರ್ ಸೃಷ್ಟಿಸಿದೆ. ಫೈರ್ ಸಂಸ್ಥೆಯಿಂದ ಹೊರಬಂದ ಪ್ರಿಯಾಂಕಾ ಉಪೇಂದ್ರ, ತಮ್ಮ ಕನಸಿನ ಫೈರ್ ಸಂಸ್ಥೆ ಹಾದಿ ತಪ್ಪುತ್ತಿದೆ. ನಟ ಚೇತನ್, ಪ್ರಚಾರದ ಹುಚ್ಚಿಗೆ ಬಿದ್ದು, ಸಂಸ್ಥೆಯ ಧ್ಯೇಯೋದ್ದೇಶವನ್ನೇ ಹಾಳು ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಾಗಿ ಪಬ್ಲಿಸಿಟಿಯೇ ಮುಖ್ಯವಾಗಿದೆ ಎಂದು ದೂರಿದ್ದರು. ಈಗ ಪ್ರಿಯಾಂಕಾ ಉಪೇಂದ್ರ ಅವರ ಬಗ್ಗೆ ನಟ ಚೇತನ್ ದೂರಿದ್ದಾರೆ.

    ಪ್ರಿಯಾಂಕಾ ಉಪೇಂದ್ರ ಅವರಿಗೆ ಧೈರ್ಯವೂ ಇರಲಿಲ್ಲ. ಕಾರ್ಯಕ್ರಮ ದಕ್ಷತೆ, ಸಾಮಥ್ರ್ಯ, ಎಲ್ಲರನ್ನೂ ಒಳಗೊಳ್ಳುವ ಸಾಮಥ್ರ್ಯ ಇರಲಿಲ್ಲ ಎಂದಿದ್ದಾರೆ ಚೇತನ್.

    ಚೇತನ್ ಮಾತಿಗೆ ಬೇಸರ ವ್ಯಕ್ತಪಡಿಸಿರುವ ಪ್ರಿಯಾಂಕಾ, ಧೈರ್ಯ ಎಂದರೆ ಕೂಗಾಡುವುದಲ್ಲ. ನನ್ನ ಕಾರ್ಯವೈಖರಿಯ ಶೈಲಿಯೇ ಬೇರೆ. ಫೈರ್ ಸಂಸ್ಥೆ ಕಟ್ಟಲು ನಾನು ದುಡಿದಿದ್ದೇನೆ. ಹಲವು ಮಂತ್ರಿ, ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ವಕೀಲರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬಗ್ಗೆ ಸ್ಪಷ್ಟ ಅರಿವಿಟ್ಟುಕೊಂಡಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

  • ಭಜರಂಗಿ 2 ಸೆಟ್ಟಿನಲ್ಲಿ ಬೆಂಕಿ. ಕಾಪಾಡಿದ್ದು ಗೋಣಿಚೀಲ..!

    Bhajarangi 2 image

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಶೂಟಿಂಗ್ ವೇಳೆ ಅಗ್ನಿ ಅನಾಹುತ ಸಂಭವಿಸಿದೆ. ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಸಂಭವಿಸಿರೋ ದುರಂತದಲ್ಲಿ ಇಡೀ ಸೆಟ್ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.

    ಇಡೀ ಸೆಟ್ಟಿನಲ್ಲಿ ನೆಲಕ್ಕೆ ಗೋಣಿಚೀಲ ಬಳಸಿದ್ದೆವು. ಇದರಿಂದಾಗಿ ಬೆಂಕಿ ಹಬ್ಬಲು ಸಾಧ್ಯವಾಗಲಿಲ್ಲ. ಸೆಟ್ಟಿನಲ್ಲಿ ತಂತ್ರಜ್ಞರು ಹಾಗೂ ಸುಮಾರು 200 ಜ್ಯೂನಿಯರ್ ಆರ್ಟಿಸ್ಟುಗಳ ಜೊತೆ 20 ಕಲಾವಿದರಿದ್ದೆವು. ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ತಿಳಿಸಿದ್ದಾರೆ ಶಿವಣ್ಣ.

    ಶಿವಣ್ಣ ಕ್ಯಾರವಾನ್‍ನಲ್ಲಿದ್ದರು. ಅವರು ಸುರಕ್ಷಿತರಾಗಿದ್ದಾರೆ. ಸುಮಾರು 1 ಕೋಟಿ ಬೆಲೆ ಬಾಳುವ ಸೆಟ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹರ್ಷ ನಿರ್ದೇಶನದ ಭಜರಂಗಿ 2ಗೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು.

    ಆಂಜನೇಯನೇ ನಮ್ಮನ್ನು ಕಾಪಾಡಿದ್ದಾನೆ ಎಂದು ಭಜರಂಗಿಗೇ ಧನ್ಯವಾದ ಅರ್ಪಿಸಿದ್ದಾರೆ ಶಿವರಾಜ್‍ಕುಮಾರ್.