` rakshabandan, - chitraloka.com | Kannada Movie News, Reviews | Image

rakshabandan,

  • ಡೈರೆಕ್ಟರ್‍ಗೆ ಒಂದ್ ರಾಖಿ ಜೊತೆ ಸೆಲ್ಫಿ

    haripriya ties rakhi to dinakar

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ನಡುವೆಯೇ ಚಿತ್ರದ ನಿರ್ದೇಶಕ ತೂಗುದೀಪ್ ದಿನಕರ್‍ಗೆ ಹೊಸ ತಂಗಿ ಸಿಕ್ಕಿದ್ದಾರೆ. ಅವರೇ ಹರಿಪ್ರಿಯಾ.

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಾಯಕಿಯೂ ಆಗಿರುವ ಹರಿಪ್ರಿಯಾ, ದಿನಕರ್ ಬಗ್ಗೆ, ದಿನಕರ್ ತಮ್ಮ ಚಿತ್ರತಂಡದವರ ವಹಿಸುವ ಕಾಳಜಿಯ ಬಗ್ಗೆ ಮಾತನಾಡಿದ್ದರು. ದಿನಕರ್ ಅವರ ಈ ಗುಣವೇ ಇರಬೇಕು, ಹರಿಪ್ರಿಯಾ ತಮ್ಮ ಪ್ರೀತಿಯ ನಿರ್ದೇಶಕರಿಗೆ ಸೋದರನ ಸ್ಥಾನ ಕೊಟ್ಟು, ರಕ್ಷಾ ಬಂಧನ ಆಚರಿಸಿದ್ದಾರೆ. ದಿನಕರ್‍ಗೆ ರಾಖಿ ಕಟ್ಟಿದ್ದಾರೆ.

  • ಥಿಯೇಟರ್ ಬಾಡಿಗೆಯೂ ಹುಟ್ಟಲಿಲ್ಲ : ಲಾಲ್ ಸಿಂಗ್ ಚಡ್ಡಾ, ರಕ್ಷಾಬಂಧನ್ ಢಮಾರ್

    ಥಿಯೇಟರ್ ಬಾಡಿಗೆಯೂ ಹುಟ್ಟಲಿಲ್ಲ : ಲಾಲ್ ಸಿಂಗ್ ಚಡ್ಡಾ, ರಕ್ಷಾಬಂಧನ್ ಢಮಾರ್

    ಕಳೆದ ವಾರ ರಿಲೀಸ್ ಆದ ಎರಡು ಬಾಲಿವುಡ್ ಚಿತ್ರಗಳು ಭಯಂಕರ ನಿರೀಕ್ಷೆ ಹುಟ್ಟುಹಾಕಿದ್ದವು. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರಕ್ಷಾಬಂಧನ್. ಅಮೀರ್ ಈ ಹಿಂದೆ ಭಾರತ ಸುರಕ್ಷಿತ ರಾಷ್ಟ್ರವಲ್ಲ ಎಂದು ಹೇಳಿದ್ದದ್ದು ಹಾಗೂ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಸಿನಿಮಾಗಳಲ್ಲಿ ಟೀಕಿಸಿದ್ದರು. ಇತ್ತ ರಕ್ಷಾಬಂಧನ್ ಚಿತ್ರದ ಕತೆಗಾರ್ತಿ ಹಿಂದೂ ಧರ್ಮದ ನಂಬಿಕೆಗಳನ್ನು ಲೇವಡಿ ಮಾಡಿದ್ದರು. ಹೀಗಾಗಿ ಎರಡೂ ಚಿತ್ರಗಳ ವಿರುದ್ಧ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು. ಈಗ ಒಂದು ವಾರ ಕಳೆದಿದೆ. ಪಕ್ಕಾ ರಿಸಲ್ಟ್ ಹೊರಬಿದ್ದಿದೆ.

    ಮೊದಲ ದಿನ ಲಾಲ್ ಸಿಂಗ್ ಚಡ್ಡಾ 11 ಕೋಟಿ ಬಿಸಿನೆಸ್ ಮಾಡಿದ್ದರೆ, ರಕ್ಷಾ ಬಂಧನ್ 8 ಕೋಟಿ ಕಲೆಕ್ಷನ್ ಗಳಿಸುವಷ್ಟರಲ್ಲಿ ಸುಸ್ತಾಗಿತ್ತು. ಅದಾದ ಮೇಲೆ ಎರಡೂ ಚಿತ್ರಗಳು ಚೇತರಿಸಿಕೊಳ್ಳಲೇ ಇಲ್ಲ. ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ್ ಚಿತ್ರಗಳ ಬಗ್ಗೆ ವಿಮರ್ಶಕರಲ್ಲಿಯೂ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಕೆಲವರು ಅದ್ಭುತ ಎಂದರೆ, ಇನ್ನೂ ಕೆಲವರು ಡಬ್ಬಾ ಎಂದರು.

    ಈಗ ವಾರ ಕಳೆಯುವ ಹೊತ್ತಿಗೆ ಲಾಲ್ ಸಿಂಗ್ ಚಡ್ಡಾ 50 ಕೋಟಿ ಬಿಸಿನೆಸ್ ಮಾಡುವಷ್ಟರಲ್ಲಿ ಏದುಸಿರು ಬಿಡುತ್ತಿದ್ದರೆ, ರಕ್ಷಾಬಂಧನ್ 40-45 ಕೋಟಿಯ ಆಸುಪಾಸಿನಲ್ಲಿ ಸುಸ್ತಾಗಿದೆ. ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕ್ಷಮೆ ಯಾಚಿಸಿದ್ದು ಚಡ್ಡಾಗೆ ವರ್ಕೌಟ್ ಆಗಲಿಲ್ಲ. ಅಕ್ಷಯ್ ಕುಮಾರ್ ಅವರಿಗೆ ಇರೋ ಇಮೇಜ್ ರಕ್ಷಾಬಂಧನ್‍ಗೆ ಮ್ಯಾಜಿಕ್ ಮಾಡಲಿಲ್ಲ.

    ಸಿನಿಮಾ ವಾರದ ಕೊನೆಯ ದಿನ ಲಾಲ್ ಸಿಂಗ್ ಚಡ್ಡಾ 1.5 ಕೋಟಿ ಗಳಿಸಿದೆ. ರಕ್ಷಾಬಂಧನ್ ಕೂಡಾ 1 ಕೋಟಿ ತಲುಪೋಕೂ ತಿಣುಕಿದೆ. ಎರಡೂ ಚಿತ್ರಗಳು ಪ್ರದರ್ಶನವಾಗುತ್ತಿರೋ ಸ್ಕ್ರೀನ್ ಮತ್ತು ಥಿಯೇಟರುಗಳ ಲೆಕ್ಕ ಗಣನೆಗೆ ತೆಗೆದುಕೊಂಡರೆ ಬಾಡಿಗೆಯೂ ಹುಟ್ಟದಂತಾ ಪರಿಸ್ಥಿತಿ. ಸರಾಸರಿ ಪ್ರಕಾರ ಎರಡೂ ಚಿತ್ರತಂಡಗಳಿಗೆ ಸಿಗುವುದು ಒಂದೊಂದು ಶೋನಿಂದ 3 ಸಾವಿರ ಚಿಲ್ಲರೆ ಹಣವಷ್ಟೆ. ಹೀಗಾಗಿ ಸಿನಿಮಾ ವಾರದ 2ನೇ ವಾರವೇ ಎರಡೂ ಚಿತ್ರಗಳ ಸ್ಕ್ರೀನ್‍ಗಳ ಸಂಖ್ಯೆ ಶೇ.85ರಷ್ಟು ಕಡಿಮೆಯಾಗಿವೆ. ಈಗ ಮತ್ತೊಮ್ಮೆ ವೀಕೆಂಡ್ ಇದ್ದರೂ, ರಜಾ ಇದ್ದರೂ ಚೇತರಿಸಿಕೊಳ್ಳೋ ಯಾವುದೇ ಸೂಚನೆಗಳೂ ಇಲ್ಲ.

    ಇದರ ಮಧ್ಯೆ ಕನ್ನಡದಲ್ಲಿ ಗಾಳಿಪಟ 2 ಬೊಂಬಾಟ್ ಆಗಿ ಗೆದ್ದಿದೆ. ತೆಲುಗಿನಲ್ಲಿ ಸೀತಾರಾಮನ್ ಹಾಗೂ ಕಾರ್ತಿಕೇಯ 2 ಚಿತ್ರಗಳು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿವೆ. ತಮಿಳಿನಲ್ಲಿ ಧನುಷ್ ಚಿತ್ರ ಮೋಡಿ ಮಾಡುತ್ತಿದೆ.

  • ಬಾಯ್ಕಾಟ್ ಬಿಸಿ : ಅಮೀರ್ ಸಿನಿಮಾ ವಿರುದ್ಧ ಇವರು.. ಅಕ್ಷಯ್ ಸಿನಿಮಾ ವಿರುದ್ಧ ಅವರು..

    ಬಾಯ್ಕಾಟ್ ಬಿಸಿ : ಅಮೀರ್ ಸಿನಿಮಾ ವಿರುದ್ಧ ಇವರು.. ಅಕ್ಷಯ್ ಸಿನಿಮಾ ವಿರುದ್ಧ ಅವರು..

    ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಇದೇ ಆಗಸ್ಟ್ 11ಕ್ಕೆ ರಿಲೀಸ್. ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಕೂಡಾ ಇದೇ ಆಗಸ್ಟ್ 11ಕ್ಕೆ ರಿಲೀಸ್.

    ಅಮೀರ್ ಖಾನ್ ಹಿಂದೂಗಳ ಧಾರ್ಮಿಕ ಭಾವನೆ, ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ. ಮಾಡುತ್ತಿದ್ದಾರೆ. ಜೊತೆಗೆ ಭಾರತ ಸುರಕ್ಷಿತ ರಾಷ್ಟ್ರವಲ್ಲ ಎನ್ನುವ ಮೂಲಕ ಭಾರತದ ಬಗ್ಗೆ ವಿದೇಶಗಳಲ್ಲಿ ಕೆಟ್ಟ ಇಮೇಜ್ ಸೃಷ್ಟಿಸಿದವರು. ನಮ್ಮ ನೆಲದ ಸಂಸ್ಕøತಿ ಗೌರವಿಸದ ಈತನ ಚಿತ್ರವನ್ನು ನಾವೇಕೆ ನೋಡಬೇಕು ಎನ್ನುವುದು ಎನ್ನುವುದು ಕೆಲವರ ವಾದ. ಹೀಗಾಗಿ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂದು ಅಭಿಯಾನವೇ ಶುರುವಾಗಿದೆ. ಸ್ವತಃ ಅಮೀರ್ ಖಾನ್ ನಾನು ಭಾರತವನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಸಿನಿಮಾ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ.. ಈ ಹಿಂದೆ ಅಮೀರ್ ಖಾನ್ ಹಾಗೂ ಕರೀನ ಕಪೂರ್ ನಮ್ಮ ಸಿನಿಮ ಇಷ್ಟವಿಲ್ಲದೇ ಹೋದರೆ ನೋಡಲೇಬೇಡಿ ಎಂದು ಹೇಳಿದ್ದನ್ನು ನೆನಪಿಸಿಕೊಂಡು ಬಾಯ್ಕಾಟ್ ಅಭಿಯಾನವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹಾಗಂತ ಇದು ಅಮೀರ್ ಖಾನ್ ಅವರಿಗಷ್ಟೇ ತಟ್ಟುತ್ತಿರುವ ಬಿಸಿ ಅಲ್ಲ.

    ಇದೇ ವೇಳೆ ರಿಲೀಸ್ ಆಗುತ್ತಿರುವ ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಚಿತ್ರಕ್ಕೂ ಇದೇ ರೀತಿ ಬಾಯ್ಕಾಟ್ ಅಭಿಯಾನ ನಡೆಯುತ್ತಿದೆ. ಹಾಗಂತ ಅಕ್ಷಯ್ ಕುಮಾರ್ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ತಂದರಾ ಎಂದರೆ ವಿಷಯ ಅದಲ್ಲ. ಅಕ್ಷಯ್ ಕುಮಾರ್ ಬಹಿರಂಗವಾಗಿ ನರೇಂದ್ರ ಮೋದಿಯನ್ನು ಹೊಗಳಿದವರು. ಜೊತೆಗೆ ಅಕ್ಷಯ್ ಚಿತ್ರಗಳ ಕಥೆಗಳು ಮೋದಿ ಸರ್ಕಾರದ ಯೋಜನೆಗಳಿಗೆ ಪೂರಕವಾಗಿದ್ದವು. ಹಿಂದೂ ರಾಜರ ಹಾಗೂ ಭಾರತದ ಗೂಢಚಾರರ ಕಥೆ ಹೇಳಿದ ಚಿತ್ರಗಳು. ಇದರ ಹೊರತಾಗಿ ಅವರೇನು ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದವರಲ್ಲ. ಅಕ್ಷಯ್ ಕುಮಾರ್ ಅವರಿಗೆ ಮೋದಿ ಬೆಂಬಲಿಗ ಎಂಬ ಇಮೇಜ್, ರಕ್ಷಾ ಬಂಧನ್ ಚಿತ್ರದ ವಿರುದ್ಧ ಅಭಿಯಾನಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ರಾಣಾ ಪ್ರತಾಪ್ ಚಿತ್ರದ ಹೀನಾಯ ಸೋಲಿನ ನಂತರ ಅಕ್ಷಯ್ ಕುಮಾರ್ ಅವರಿಗೂ ಗೆಲುವು ಬೇಕಿದೆ. ಎಂದಿನಂತೆ ವರ್ಷಗಳ ಗ್ಯಾಪ್ ನಂತರ ಬರುತ್ತಿರುವ ಅಮೀರ್ ಖಾನ್ ಅವರಿಗೂ ಗೆಲುವು ಬೇಕಿದೆ. ಇದರ ನಡುವೆ ಬಾಯ್ಕಾಟ್ ಅಭಿಯಾನಗಳು.. ಯಾರ ಬಾಯ್ಕಾಟ್ ಗೆಲ್ಲುತ್ತೋ.. ಕಾದು ನೋಡಬೇಕು.

  • ರಕ್ಷಾಬಂಧನಕ್ಕೆ ಅಪ್ಪು ರಾಖಿ

    ರಕ್ಷಾಬಂಧನಕ್ಕೆ ಅಪ್ಪು ರಾಖಿ

    ಅಪ್ಪು.. ಹಿರಿಯರ ಪಾಲಿಗೆ ಮಗನಾಗಿ.. ಕಿರಿಯರ ಪಾಲಿಗೆ ಅಣ್ಣನಾಗಿ.. ಯುವಜನತೆಯ ಪಾಲಿಗೆ ಸ್ಫೂರ್ತಿಯಾಗಿದ್ದ ನಟ. ಬಡವರ ಪಾಲಿಗೆ ದೇವರಾಗಿದ್ದ ವಿಷಯ ಗೊತ್ತಾಗಿದ್ದು ಅಪ್ಪು ದೂರವಾದ ಬಳಿಕ. ಪುನೀತ್ ಅವರಲ್ಲಿ ಅಣ್ಣ-ತಮ್ಮಂದಿರನ್ನು ಅದೆಷ್ಟು ಜೀವಗಳು ಕಂಡಿವೆಯೋ.. ಗೊತ್ತಿಲ್ಲ. ಅಪ್ಪು ಈಗ ರಕ್ಷಾ ಬಂಧನವಾಗಿದ್ದಾರೆ.

    ಇದೇ ಆಗಸ್ಟ್ 11-12ಕ್ಕೆ ರಾಖಿ ಹಬ್ಬವಿದೆ.  ತಂಗಿಯರು ಅಣ್ಣನಿಗೆ.. ಅಕ್ಕಂದಿರು ತಮ್ಮನಿಗೆ ರಾಖಿ ಕಟ್ಟಿ ರಕ್ಷಾಬಂಧನ ಮಾಡುತ್ತಾರೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಅಪ್ಪು ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿರೋದು ಈ ಬಾರಿಯ ರಕ್ಷಾಬಂಧನದ ವಿಶೇಷ. ಹಾಗೆ ನೋಡಿದರೆ.. ರಕ್ಷಾಬಂಧನ ಕನ್ನಡಿಗರಿಗೆ ಹೊರಗಿನಿಂದ ಬಂದ ಹಬ್ಬ. ಉತ್ತರ ಭಾರತೀಯರಿಂದ ಬಂದು ಇಲ್ಲಿಯೂ ಜನಪ್ರಿಯವಾಗಿರುವ ಹಬ್ಬ. ನಮ್ಮಲ್ಲಿ ನಾಗರಪಂಚಮಿಯಂದೇ ಅಣ್ಣ-ತಂಗಿ, ಅಕ್ಕ-ತಮ್ಮ ಹಬ್ಬ ನಡೆಯುತ್ತೆ. ಆ ದಿನ ಕಂಕಣ ಕಟ್ಟುತ್ತಾರೆ. ಆದರೆ.. ಸೋದರ ಸೋದರಿಯರ ಹಬ್ಬಕ್ಕೆ.. ಭಾಷೆ..ಪ್ರದೇಶಗಳ ಗಡಿಯಾದರೂ ಏಕೆ ಅಲ್ಲವೇ.. ಈ ಬಾರಿಯ ಹಬ್ಬಕ್ಕೆ ಅಪ್ಪು ಕೂಡಾ ಇರುತ್ತಾರೆ.