` vijaylakshmi, - chitraloka.com | Kannada Movie News, Reviews | Image

vijaylakshmi,

  • ``ನಿಮ್ಮ ಮಗು ಮತ್ತೆ ಹುಟ್ಟಿದೆ ಎಂದು ಭಾವಿಸಿ ಆಶೀರ್ವದಿಸಿ''

    ``ನಿಮ್ಮ ಮಗು ಮತ್ತೆ ಹುಟ್ಟಿದೆ ಎಂದು ಭಾವಿಸಿ ಆಶೀರ್ವದಿಸಿ''

    ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಚೇತರಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ವಿಜಯಲಕ್ಷ್ಮಿ, ಈಗ ಗುಣಮುಖರಾಗುತ್ತಿದ್ದು, ಅಲ್ಲಿಂದಲೇ ಎರಡು ವಿಡಿಯೋ ಸಂದೇಶ ನೀಡಿದ್ದಾರೆ. ತಮಿಳುನಾಡಿನವರಿಗೆ ಒಂದು ವಿಡಿಯೋ, ಕನ್ನಡದವರಿಗೆ ಇನ್ನೊಂದು ವಿಡಿಯೋ.

    ನಾನು ಬದುಕುತ್ತೇನೆ ಎಂದುಕೊಂಡಿರಲಿಲ್ಲ. ಬದುಕೋದು ಬೇಡ ಎಂದು ತೀರ್ಮಾನಿಸಿಬಿಟ್ಟಿದ್ದೆ. ಸೋಮವಾರದಿಂದ ತೀವ್ರತರವಾದ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಊಟ ಮಾಡಿಲ್ಲ. ಡ್ರಿಪ್ಸ್‍ನಲ್ಲೇ ಇದ್ದೇನೆ. ಒಬ್ಬ ಹೆಣ್ಣಾಗಿ ಏನೇನೆಲ್ಲ ಕೇಳಬಾರದೋ, ಎಲ್ಲವನ್ನೂ ಕೇಳಿದ್ದೇನೆ. ನರಕ ನೋಡಿ ಆಯ್ತು. ನಿಮ್ಮ ಮಗುವೊಂದು ಮತ್ತೆ ಹುಟ್ಟಿ ಬಂದಿದೆ ಎಂದುಕೊಳ್ಳಿ, ಆಶೀರ್ವಾದವಿರಲಿ' ಎಂದಿದ್ದಾರೆ ವಿಜಯಲಕ್ಷ್ಮಿ.

    ತಮಿಳು ವಿಡಿಯೋದಲ್ಲಿ ನಟ ಸೀಮನ್ ವಿರುದ್ಧ ಕೆಂಡಕಾರಿದ್ದಾರೆ. ಇದನ್ನು ರಾಜಕೀಯಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ. 

  • Vijayalakshmi To Act In 'Fighter'

    vijaylakshmi in fighter

    Actress Vijayalakshmi who made her debut with T S Nagabharana's 'Nagamandala' is all set to make a comeback with Vinod Prabhakar's new film 'Fighter' to Kannada films once again.

    In the last few years, Vijayalakshmi was acting in Tamil films and recently Vijayalakshmi had come before the media and requested Kannada producers to give her a chance to act in Kannada as she is facing a lot of problems. A few producers had even promised to give her a chance to act in their films. However, the makers of 'Fighter' has roped her first for their film.

    The new film is being directed by Nutan Umesh who had earlier directed 'Krishnan Marriage Story' and 'Astitva'. 'Fighter' is being produced by Katigenahalli Somashekhar.  The film was launched at the Kanteerava Studios in Bangalore and the shooting for the film will start in the month of August.

  • Vijayalakshmi Used Me Like A Tissue Paper & Then Made False Accusation: Raviprakash

    vijaylakshmi used me like tissue paper says ravi prakash

    Following actress Vijayalakshmi who cried for help before the media, expressing disappointment that no one from the film industry came forward to extend financial and moral support to her, several including Abhinaya Chakaravarthy Kichcha Sudeepa came to her aid by donating Rs 1 lakh for her medical expenses. 

    That apart, she was even offered work in films. Amongst others, actor Ravi Prakash, also an engineer who helped the actress by donating Rs. 1 lakh towards her medical expenditures along with buying her clothes and basic necessities, has been accused of giving mental torture by none other than the actress herself!

    raviprakash_vijaylakshmi_co.jpgSpeaking to Chitraloka, Raviprakash says, “After seeing the actress requesting for help on television, I called her up on February 25th offering her help. Two days later, I got a call from the actress and I went and met her sister at the Mallya Hospital reception and gave her Rs 1 lakh. Later she got herself admitted in Jayadeva Hospital, to where I met her for the first time along with my sister and my brother-in-law. We bought her clothes and other basic necessities including food and other materials. I always visited her along with my sister and my brother in law.”

    The actress's sister Usha Devi has fallen on my feet thrice, saying that their father has come to help them through me, says Raviprakash, adding that he has all the messages, call records and all the audio conversations seeking assistance from him on several occasion.

    raviprakash_vijaylaksh_conv.jpgFew days after later, according to Raviprakash, when the actress did not respond, he came to know that they have yet again shifted to another hospital and this time, to Apollo Hospital. “I tried calling but the actress did not respond and finally when I contacted through my sister, the actress accused me of giving her 'tension’. I was shocked and felt very disappointed. I kept quiet thereafter. I felt like I was used like a tissue paper. I as an artist helped another artist who is a woman and for my humanitarian gesture, I had to listen to such accusation,” he adds.

    Later, Raviprakash says that he got a call from the Puttenahalli police saying that actress has orally complained to them against me. “I met the police and explained everything with all the evidence. The police were convinced. I will definitely file a complaint if the actress continues it and files any written complaint,” he concludes.

  • ಆಸ್ಪತ್ರೆ ಸೇರಿದ ನಾಗಮಂಡಲ ವಿಜಯಲಕ್ಷ್ಮಿ ಆರ್ಥಿಕ ಸಂಕಷ್ಟದಲ್ಲಿ..

    nagamandala vijaylakshmi hospitalized

    ನಾಗಮಂಡಲ, ಸೂರ್ಯವಂಶ, ಜೋಡಿಹಕ್ಕಿ.. ಮೊದಲಾದ ಚಿತ್ರಗಳಲ್ಲಿ ನಟಿಸಿ, ಕನ್ನಡಿಗರ ಮನಸೂರೆಗೊಂಡಿದ್ದ ನಟಿ ವಿಜಯಲಕ್ಷ್ಮಿ ಈಗ ಆಸ್ಪತ್ರೆ ಸೇರಿದ್ದಾರೆ. ಅನಾರೋಗ್ಯಕ್ಕೊಳಗಾಗಿರುವ ವಿಜಯಲಕ್ಷ್ಮಿ, ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವಂತಾಗಿದೆ.

    ವೈಯಕ್ತಿಕ ಬದುಕಿನಲ್ಲಿ ನಾನಾ ತೊಂದರೆ ಎದುರಿಸಿದ ವಿಜಯಲಕ್ಷ್ಮಿ, ಚಿತ್ರರಂಗದಲ್ಲಿ ಮಿಂಚಿದಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿದುಬಿಟ್ಟರು. ಇತ್ತೀಚೆಗೆ ನನಗೆ ಆರ್ಥಿಕ ಸಂಕಷ್ಟವಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ವಿಜಯಲಕ್ಷ್ಮಿ, ಪೋಷಕ ಪಾತ್ರ ಮಾಡಲೂ ಕೂಡಾ ನಾನು ಸಿದ್ಧ ಎಂದು ಹೇಳಿದ್ದರು. ಆದರೆ, ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ನೀಗಲೇ ಇಲ್ಲ.

    ಈಗ ಆಸ್ಪತ್ರೆ ಸೇರಿರುವ ವಿಜಯಲಕ್ಷ್ಮಿ ಚೇತರಿಸಿಕೊಳ್ಳುತ್ತಿದ್ದು, ಚಿತ್ರರಂಗದವರೇ ಯಾರಾದರೂ ನೆರವು ನೀಡಿ ಎಂದು ವಿಜಯಲಕ್ಷ್ಮಿ ಸೋದರಿ ಉಷಾ ಬೇಡಿಕೊಂಡಿದ್ದಾರೆ. 

  • ಜಗ್ಗೇಶ್`ಗೆ ನಾನು ಚಪ್ಪಲಿಯಲ್ಲಿ ಹೊಡೆದಿರಲಿಲ್ಲ : ವಿಜಯಲಕ್ಷ್ಮಿ

    ಜಗ್ಗೇಶ್`ಗೆ ನಾನು ಚಪ್ಪಲಿಯಲ್ಲಿ ಹೊಡೆದಿರಲಿಲ್ಲ : ವಿಜಯಲಕ್ಷ್ಮಿ

    ನಾಗಮಂಡಲ, ಸೂರ್ಯವಂಶ, ಹಬ್ಬ, ಜೋಡಿಹಕ್ಕಿ ಚಿತ್ರಗಳ ಖ್ಯಾತಿಯ ನಟಿ ವಿಜಯಲಕ್ಷ್ಮಿ ಇತ್ತೀಚೆಗೆ ವಿವಾದ ಮತ್ತು ಕಣ್ಣೀರಿನಿಂದಲೇ ಖ್ಯಾತರಾಗಿದ್ದಾರೆ. ಅದರ ಮುಂದುವರಿದ ಭಾಗ ಇದು. ನಟಿ ವಿಜಯಲಕ್ಷ್ಮಿ ಫೇಸ್ ಮಾಡಿದ ಮೊದಲ ವಿವಾದ ಜಗ್ಗೇಶ್ ಚಪ್ಪಲಿ ಪ್ರಸಂಗ. ವಿಜಯಲಕ್ಷ್ಮಿ ಜಗ್ಗೇಶ್ ಜೊತೆ ರಂಗಣ್ಣ ಮತ್ತು ಮಾತಿನ ಮಲ್ಲ ಎಂಬ ಎರಡು ಚಿತ್ರಗಳಲ್ಲಿ ನಾಯಕಿ. ಈ ಚಿತ್ರಗಳ ಶೂಟಿಂಗ್ ವೇಳೆ ಜಗ್ಗೇಶ್ ಅವರಿಗೆ ವಿಜಯಲಕ್ಷ್ಮಿ ಚಪ್ಪಲಿಯಲ್ಲಿ ಹೊಡೆದರು ಎನ್ನುವುದು ಆಗ ವಿವಾದವಾಗಿತ್ತು.

    ನನಗೆ ಏನಾಗಿದೆ ಎನ್ನವುದು ಗೊತ್ತಾಗಲಿಲ್ಲ. ಯಾರು ಯಾರ ಬಳಿಯೋ ಕ್ಷಮೆ ಕೇಳಿದೆ. ಜಗ್ಗೇಶ್ ನಾನು ಮಾಡದ ತಪ್ಪನ್ನು ನನ್ನ ಮೇಲೆ ಹೊರಿಸಿದ್ದರು. ಜಗ್ಗೇಶ್ ಅವರಿಗೆ ನಾನು ಚಪ್ಪಲಿಯಲ್ಲಿ ಹೊಡೆದಿರಲಿಲ್ಲ. ಆಗ ನನ್ನನ್ನು ಆ ವಿವಾದದಿಂದ ರಕ್ಷಿಸಿದ್ದು ಪಾರ್ವತಮ್ಮ ರಾಜ್‍ಕುಮಾರ್ ಎಂದು ಹೇಳಿಕೊಂಡಿದ್ದಾರೆ ನಟಿ ವಿಜಯಲಕ್ಷ್ಮಿ.

  • ಜಯಲಕ್ಷ್ಮಿಗೆ ಮದಗಜನ ಮಮಕಾರ

    nagamandala fame vijaylakshmi gets role in madagaka

    ಆಸ್ಪತ್ರೆ ಸೇರಿ, ಚಿಕಿತ್ಸೆಗೂ ಪರದಾಡುತ್ತಿರುವ ನಟಿ ವಿಜಯಲಕ್ಷ್ಮಿಗೆ ಮದಗಜ ಚಿತ್ರತಂಡ ನೆರವು ನೀಡಲು ಮುಂದಾಗಿದೆ. ಫಿಲಂ ಚೇಂಬರ್ ಪದಾಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಮದಗಜ ಚಿತ್ರತಂಡ ವಿಜಯಲಕ್ಷ್ಮಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಲು ನಿರ್ಧರಿಸಿದೆ.

    ಶ್ರೀಮುರಳಿ ಅಭಿನಯದ ಸಿನಿಮಾಗೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಕ. ಸದ್ಯಕ್ಕೆ ಕಲಾವಿದರು, ತಂತ್ರಜ್ಞರ ಆಯ್ಕೆಯಲ್ಲಿರುವ ಮಹೇಶ್ `ನನ್ನ ಚಿತ್ರದಲ್ಲಿ ವಿಜಯಲಕ್ಷ್ಮಿ ಅವರಿಗಾಗಿ ಪ್ರಧಾನ ಪಾತ್ರವೊಂದನ್ನು ನೀಡುತ್ತಿದ್ದೇನೆ. ಆ ಪಾತ್ರದ ನಂತರ ಖಂಡಿತಾ ಅವರಿಗೆ ಇನ್ನಷ್ಟು ಮತ್ತಷ್ಟು ಅವಕಾಶಗಳು ಸಿಗಲಿವೆ'' ಎಂದಿದ್ದಾರೆ.

  • ನನ್ನ 1 ಲಕ್ಷ ವಾಪಸ್ ಕೊಡಿಸಿ - ವಿಜಯಲಕ್ಷ್ಮಿ ವಿರುದ್ಧ ನಟ ರವಿಪ್ರಕಾಶ್ ದೂರು

    actor ravi prakash demnads hsi  lkah back

    ನಾಗಮಂಡಲ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿರುವ, ಅಸಭ್ಯ ವರ್ತನೆಯ ಆರೋಪ ಹೊತ್ತಿರುವ ನಟ ರವಿಪ್ರಕಾಶ್, ಈಗ ವಿಜಯಲಕ್ಷ್ಮೀ ವಿರುದ್ಧ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. `ವಿಜಯಲಕ್ಷ್ಮಿ

    ಅವರ ಕಷ್ಟವನ್ನು ಮಾಧ್ಯಮಗಳ ಮೂಲಕ ತಿಳಿದು ಸಹಾಯ ಮಾಡಿದ್ದೆ. ಈಗ ಅವರು ನನ್ನ ವಿರುದ್ಧ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ನನ್ನ ಹಣ ನನಗೆ ವಾಪಸ್ ಕೊಡಿಸಿ' ಎಂದು ಚೇಂಬರ್ ಅಧ್ಯಕ್ಷ ಚಿನ್ನೇಗೌಡರಿಗೆ ದೂರು ನೀಡಿದ್ದಾರೆ.

    ಮಲ್ಯ ಆಸ್ಪತ್ರೆ, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಟಿ ವಿಜಯಲಕ್ಷ್ಮಿ, ಈಗ ಅಪೋಲೋ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿದ್ಧಾಗ ನಟ ರವಿಪ್ರಕಾಶ್, ವಿಜಯಲಕ್ಷ್ಮಿ ಅವರಿಗೆ 1 ಲಕ್ಷ ರೂ. ಸಹಾಯ ಮಾಡಿದ್ದರು. ಅದಾದ ನಂತರ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ನಟ ರವಿಪ್ರಕಾಶ್ ಅಸಭ್ಯವಾಗಿ ವರ್ತಿಸುತ್ತಿದ್ಧಾರೆ ಎಂದು ವಿಜಯಲಕ್ಷ್ಮಿ ಪೊಲೀಸ್ ದೂರು ಕೊಟ್ಟಿದ್ದಾರೆ. ನಾನು ಹಾಗೆ ವರ್ತಿಸಿಲ್ಲ ಎಂದಿರುವ ರವಿಪ್ರಕಾಶ್, ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿರುವ, ಮೆಸೇಜ್ ಮಾಡಿರುವ ವಿವರಗಳನ್ನು, ಆಡಿಯೋ ದಾಖಲೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

  • ನಾಗಮಂಡಲ ವಿಜಯಲಕ್ಷ್ಮಿ ತಾಯಿ ನಿಧನ

    ನಾಗಮಂಡಲ ವಿಜಯಲಕ್ಷ್ಮಿ ತಾಯಿ ನಿಧನ

    ಇತ್ತೀಚೆಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ನಿಧನರಾಗಿದ್ದಾರೆ. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಗಾಂಧಿನಗರದಲ್ಲಿರೋ ಸಂತೃಪ್ತಿ ರೆಸಿಡೆನ್ಸಿಯಲ್ಲಿ ವಿಜಯಲಕ್ಷ್ಮಿ, ತಾಯಿ ವಿಜಯ ಸುಂದರಂ ಮತ್ತು ಅಕ್ಕ ಉಷಾ ತಂಗಿದ್ದರು. ಚೆನ್ನೈಗೆ ಹೊರಡಲು ತಯಾರಾಗುತ್ತಿದ್ದ ವೇಳೆಯಲ್ಲೇ ತಾಯಿ ನಿಧನರಾಗಿದ್ದಾರೆ. ಎಲ್ಲಿ ಸಂಸ್ಕಾರ ಮಾಡಬೇಕು, ಏನು ಮಾಡಬೇಕು ಎಂದು ತೋಚದೆ ನಿಂತಿದ್ದ ವಿಜಯಲಕ್ಷ್ಮಿ ಅವರ ನೆರವಿಗೆ ಹೋಗಿದ್ದು ಫಿಲಂ ಚೇಂಬರ್ ಮಾಜಿ ಕಾರ್ಯದರ್ಶಿ ಭಾ.ಮಾ.ಹರೀಶ್. ವಿಜಯಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದ್ದಲ್ಲದೆ, ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

    ನನ್ನ ಅಕ್ಕನಿಗೆ ಸಮಸ್ಯೆ ಇದೆ. ನನ್ನ ತಾಯಿ ಇದರಿಂದಾಗಿ ಮಾನಸಿಕವಾಗಿ ನೊಂದಿದ್ದರು. ಈಗ ಅಮ್ಮನೂ ಇಲ್ಲ. ನಾನು ಖಂಡಿತಾ ಬದಲಾಗುತ್ತೇನೆ. ಇಲ್ಲಿಯೇ ಇರುತ್ತೇನೆ. ದಯವಿಟ್ಟು ಸಹಾಯ ಮಾಡಿ. ಭಿಕ್ಷೆ ಎಂದುಕೊಂಡರೂ ಪರವಾಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

  • ಪ್ಲೀಸ್.. 1 ಲಕ್ಷ ಕೊಟ್ಟು ಹೆಲ್ಪ್ ಮಾಡಿ - ವಿಜಯಲಕ್ಷ್ಮಿ ಮತ್ತೊಮ್ಮೆ ಮನವಿ

    vijaylakshmi seeks monetary help once again

    ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ, ಮತ್ತೊಮ್ಮೆ ಅಭಿಮಾನಿಗಳ ಎದುರು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಸ್ಪತ್ರೆಯಲ್ಲಿರುವ ವಿಜಯಲಕ್ಷ್ಮಿ ಅವರಿಗೆ ತುರ್ತಾಗಿ ಒಂದು ಆಪರೇಷನ್ ಆಗಬೇಕಿದೆ. ಆ ಆಪರೇಷನ್ ಶುರುವಾಗುವ ಮುನ್ನ 1 ಲಕ್ಷ ರೂ. ಕಟ್ಟಬೇಕು. ಮುಗಿದ ಮೇಲೆ ಉಳಿದ 1 ಲಕ್ಷ ರೂ. ಕಟ್ಟಬೇಕು. ಆದರೆ, ನನ್ನ ಬಳಿ ಹಣ ಇಲ್ಲ. ದಯವಿಟ್ಟು ಸಹಾಯ ಮಾಡಿ ಎಂದಿದ್ದಾರೆ ವಿಜಯಲಕ್ಷ್ಮಿ.

    ಚಿತ್ರರಂಗದಲ್ಲಿ ನಟ ಸುದೀಪ್ ಬಿಟ್ಟರೆ ಬೇರೆಯವರು ಯಾರು ಕೂಡ ನನ್ನ ಸಹಾಯಕ್ಕೆ ಬಂದಿಲ್ಲ. ಆಪರೇಷನ್ ಲೇಟ್ ಆದಷ್ಟೂ ನೋವು ಹೆಚ್ಚಾಗುತ್ತೆ. ಅಭಿಮಾನಿಗಳನ್ನು ಬಿಟ್ಟರೆ ನನಗೆ ಬೇರೆ ಯಾರೂ ಇಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ ವಿಜಯಲಕ್ಷ್ಮಿ.

    ಇತ್ತೀಚೆಗೆ ಕಿರುತೆರೆ ನಟ ರವಿಪ್ರಕಾಶ್ ಎಂಬುವವರು 1 ಲಕ್ಷ ರೂ. ನೀಡಿ ಸಹಾಯ ಮಾಡಿದ್ದರು. ಆದರೆ, ಅವರ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು ವಿಜಯಲಕ್ಷ್ಮಿ. ಅದಾದ ನಂತರ ರವಿಪ್ರಕಾಶ್, ನಾನು ನೀಡಿದ್ದ 1 ಲಕ್ಷ ರೂ. ಹಣವನ್ನು ವಾಪಸ್ ಕೊಡಿಸಿ ಎಂದು ಚೇಂಬರ್‍ಗೆ ದೂರು ಕೊಟ್ಟಿದ್ದರು. ಈಗ ಮತ್ತೊಮ್ಮೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

  • ಮಬ್ಬು ಹರಿಯುವುದೇನಾ.. ಹಬ್ಬವಾಗುವುದೇನಾ..

    vijaylakshmi is waiting for acting chance

    ಈ ಹಸಿರು ಸಿರಿಯಲಿ.. ಎಂದು ಹಾಡುತ್ತಾ ಬಂದಾಗ ಆ ಹುಡುಗಿಗೆ ಇನ್ನೂ 16ರ ವಯಸ್ಸು. 10ನೇ ಕ್ಲಾಸು ಓದುತ್ತಿದ್ದ ಹಾಲುಗಲ್ಲದ ಹುಡುಗಿ ನಾಗಮಂಡಲದ ನಾಯಕಿಯಾಗಿಬಿಟ್ಟಿದ್ದರು. ಪ್ರಕಾಶ್ ರೈ, ಜಯಶ್ರೀ ಎಂಬ ಕಲಾವಿದರ ಎದುರು, ನಾಗಾಭರಣರಂತ ನಿರ್ದೇಶಕರ ಕೈಕೆಳಗೆ ನಾನೇನು ಕಡಿಮೆ ಎಂದು ನಟಿಸಿ ಬೆರಗುಗೊಳಿಸಿದ್ದರು. ಗೆದಿಯಬೇಕು ಮಗಳಾ ಗೆದಿಯಬೇಕು ಅನ್ನೋದನ್ನ ಸಾಧಿಸಿ ತೋರಿಸಿದ್ದರು ವಿಜಯಲಕ್ಷ್ಮಿ.

    ವಿಜಯಲಕ್ಷ್ಮಿಯಲ್ಲಿನ ಪ್ರತಿಭೆ ಮತ್ತು ಸೌಂದರ್ಯವನ್ನು ಗುರುತಿಸಿದ ಮೊದಲಿಗ ರವಿಚಂದ್ರನ್. ಆಗಿನ್ನೂ ಬಾಲಾಜಿ(ಈಶ್ವರ್) ಚಿತ್ರರಂಗಕ್ಕೆ ಪರಿಚಿತರಾಗಿರಲಿಲ್ಲ. ತಮ್ಮನ ಚಿತ್ರವನ್ನು ಅದ್ಧೂರಿಯಾಗಿ ಮಾಡುವ ಕನಸು ಕಂಡಿದ್ದ ರವಿಚಂದ್ರನ್, ತಮ್ಮನ ಚಿತ್ರಕ್ಕೆ ವಿಜಯಲಕ್ಷ್ಮಿಯನ್ನು ನಾಯಕಿಯನ್ನಾಗಿಸಿದ್ದರು. ಆದರೆ, ಪ್ರಾಜೆಕ್ಟ್ ನಿಧಾನವಾಗುತ್ತಾ ಸಾಗಿತ್ತು. ವಿಜಯಲಕ್ಷ್ಮಿ ನಾಗಾಭರಣರ ಸಿನಿಮಾಗೆ ಜಿಗಿದಿದ್ದರು.

    ಮೊದಲ ಚಿತ್ರದ ಯಶಸ್ಸಿನ ನಂತರ ವಿಜಯಲಕ್ಷ್ಮಿ ಕನ್ನಡ, ತಮಿಳು ಚಿತ್ರಗಳ ನಿರ್ದೇಶಕರ ಅಚ್ಚುಮೆಚ್ಚಿನ ನಾಯಕಿಯಾಗಿಬಿಟ್ಟರು. ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಜಗ್ಗೇಶ್, ವಿಷ್ಣುವರ್ಧನ್, ಸಾಯಿಕುಮಾರ್, ಪಾರ್ಥಿಬನ್.. ಹೀಗೆ ಹಲವು ಸ್ಟಾರ್‍ಗಳ ಜೊತೆ ನಟಿಸಿದ್ರು. ಕನ್ನಡದಲ್ಲಿಯೇ ಸೂರ್ಯವಂಶ, ಜೋಡಿಹಕ್ಕಿ, ಅರುಣೋದಯ, ಭೂಮಿತಾಯಿಯ ಚೊಚ್ಚಲ ಮಗ, ರಂಗಣ್ಣ ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟರು. ಆದರೆ ಅದೇ ವೇಳೆ ವೈಯಕ್ತಿಕ ಬದುಕು ಗಾಳಿಪಟವಾಗಿ ಹೋಗಿತ್ತು.

    ನಿರ್ದೇಶಕರೊಬ್ಬರ ಜೊತೆ ಪ್ರೀತಿಯಲ್ಲಿದ್ದ ವಿಜಯಲಕ್ಷ್ಮಿ, ಅನುಭವಿಸಿದ್ದು ನೋವು ಮಾತ್ರ.  ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದರು ವಿಜಯಲಕ್ಷ್ಮಿ. ಸೃಜನ್ ಲೋಕೇಶ್ ಜೊತೆ ಫಿಕ್ಸ್ ಆದ ಮದುವೆ, ನಿಗೂಢ ಕಾರಣಕ್ಕೆ ಮುರಿದು ಬಿತ್ತು. ಇನ್ನು ಚಿತ್ರರಂಗದಲ್ಲಲಿ ರಂಗಣ್ಣ ಚಿತ್ರದ ವೇಳೆ ದೊಡ್ಡ ರಂಪಾಟವೇ ನಡೆದು ಹೋಗಿತ್ತು.

    ಯಾವುದೇ ಕಲಾವಿದೆ ಪದೇ ಪದೇ ವಿವಾದಗಳಿಗೆ ಸಿಕ್ಕಿಕೊಳ್ಳುತ್ತಾ ಹೋದರೆ, ಚಿತ್ರರಂಗ ಅಂತಹವರನ್ನು ದೂರವಿಡುತ್ತಾ ಹೋಗುತ್ತೆ. ವಿಜಯಲಕ್ಷ್ಮಿಗೆ ಆಗಿದ್ದೂ ಅದೇ. 2011ರಲ್ಲಿ ಬಂದ ನಾನಲ್ಲ ಚಿತ್ರವೇ ಕೊನೆ. ವಿಜಯಲಕ್ಷ್ಮಿ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ನಂದಿನಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವೈಯಕ್ತಿಕ ಬದುಕು ತಲ್ಲಣಗೊಂಡಿದೆ.

    ವಿಜಯಲಕ್ಷ್ಮಿಯ ಅಕ್ಕ ಜಯಪ್ರದಾ ಅವರ ಸೋದರನನ್ನು ಮದುವೆಯಾಗಿದ್ದರು. ಆದರೆ, ಆತ ಮಗುವಿನ ಸಮೇತ ದೂರ ಹೋಗಿದ್ದಾನೆ. ಅಕ್ಕ, ಈಗ ವಿಜಯಲಕ್ಷ್ಮಿ ಮನೆಯಲ್ಲಿದ್ದಾರೆ. ತಾಯಿ ಮತ್ತು ಅಕ್ಕನ ಹೊಣೆ ವಿಜಯಲಕ್ಷ್ಮಿ ಹೆಗಲಮೇಲೆ. ಹೀಗಾಗಿಯೇ ವಿಜಯಲಕ್ಷ್ಮಿ ಹೊರ ಬಂದಿದ್ದಾರೆ. ಏನೇ ಆಗಿದ್ದರೂ, ಇಷ್ಟು ವರ್ಷಗಳಲ್ಲಿ ಯಾವತ್ತೂ ಹೊರಜಗತ್ತಿಗೆ ಹಠಮಾರಿ ಹೆಣ್ಣಾಗಿಯೇ ಕಾಣಿಸುತ್ತಿದ್ದ ವಿಜಯಲಕ್ಷ್ಮಿ ಇದೇ ಮೊದಲ ಬಾರಿಗೆ ಕಣ್ಣೀರಿಟ್ಟಿದ್ದಾರೆ.

    ಅವರು ಕೇಳ್ತಿರೋದು ಇಷ್ಟೆ. ನಟಿಸೋಕೆ ನಾನು ರೆಡಿ. ಅವಕಾಶ ಕೊಡಿ. ನನಗೆ ನಾಯಕಿಯ ಪಾತ್ರ ಸಿಗಲ್ಲ. ಅದು ನನಗೆ ಗೊತ್ತಿದೆ. ಆದರೆ, ಪೋಷಕ ಪಾತ್ರಗಳನ್ನು ನೀಡಿ ಎಂದು ಅಂಗಲಾಚುತ್ತಿದ್ದಾರೆ ವಿಜಯಲಕ್ಷ್ಮಿ.

    ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಹಲವರು ಸೂಕ್ತ ನೆರವಿನ ಭರವಸೆ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಬದುಕಿನಲ್ಲಿ ಮತ್ತೊಮ್ಮೆ ಸೇವಂತಿ ಅರಳೀತಾ..?

     

  • ರವಿಪ್ರಕಾಶ್ ಅರೆಸ್ಟ್ ಮಾಡಿ.. ಇಲ್ಲಾಂದ್ರೆ ಅನ್ನ, ನೀರು ಮುಟ್ಟಲ್ಲ - ವಿಜಯಲಕ್ಷ್ಮಿ

    vijaylakshmi demands raviprakash's arrest

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ ಈಗ ಉಪವಾಸ ಕುಳಿತಿದ್ದಾರೆ. ನಟ ರವಿಪ್ರಕಾಶ್ ಅವರನ್ನ ಅರೆಸ್ಟ್ ಮಾಡಬೇಕು, ಇಲ್ಲದೇ ಹೋದರೆ ನಾನು ಅನ್ನ, ನೀರು ಮುಟ್ಟಲ್ಲ ಎಂದು ಶಪಥ ಮಾಡಿದ್ದಾರೆ ವಿಜಯಲಕ್ಷ್ಮಿ.

    ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ನಟ ರವಿಪ್ರಕಾಶ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನಾನು ವಿಜಯಲಕ್ಷ್ಮಿ ಅವರಿಗೆ 1 ಲಕ್ಷ ರೂ. ನೀಡಿದ್ದೆ. ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಈಗಿನ ದೂರು ಸಹಿಸೋಕೆ ಆಗ್ತಿಲ್ಲ ಎಂದಿರೋ ನಟ ರವಿಪ್ರಕಾಶ್, ನಾನು ಕೊಟ್ಟ ಹಣ ನನಗೆ ವಾಪಸ್ ಕೊಡಿಸಿ ಎಂದು ಫಿಲಂಚೇಂಬರ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿಗೆ ನಾನು ಯಾವುದೇ ಕಿರುಕುಳ ನೀಡಿಲ್ಲ ಎಂದು ಆಡಿಯೋ ಮತ್ತು ಮೆಸೇಜ್ ದಾಖಲೆ ನೀಡಿದ್ದಾರೆ.

  • ವಿಜಯಲಕ್ಷ್ಮಿ ಖಾತೆಗೆ ಹರಿದು ಬಂದ ಹಣ ಎಷ್ಟು?

    ವಿಜಯಲಕ್ಷ್ಮಿ ಖಾತೆಗೆ ಹರಿದು ಬಂದ ಹಣ ಎಷ್ಟು?

    ನಾಗಮಂಡಲ ವಿಜಯಲಕ್ಷ್ಮಿ ಇತ್ತೀಚೆಗೆ ಹಲವು ಬಾರಿ ಹಣಕಾಸಿನ ನೆರವಿಗೆ ಮನವಿ ಮಾಡಿದ್ದರು. ನೆರವು ಸಿಗದಾದಾಗ ಅಸಹಾಯಕತೆಯಿಂದ  ಆಕ್ರೋಶದಲ್ಲಿ ಮಾತನಾಡಿದ್ದರು. ಇದೇ ವೇಳೆ ತಾಯಿಯನ್ನೂ ಕಳೆದುಕೊಂಡ ವಿಜಯಲಕ್ಷ್ಮಿ ನೆರವಿಗೆ ಕನ್ನಡಿಗರು ಮುಂದಾಗಿದ್ದಾರೆ. ತಾಯಿಯ ಅಂತ್ಯ ಸಂಸ್ಕಾರಕ್ಕೂ ಪರದಾಡುತ್ತಿದ್ದ ವಿಜಯಲಕ್ಷ್ಮಿ ನೆರವಿಗೆ ಧಾವಿಸಿದ್ದಾರೆ. ವಿಜಯಲಕ್ಷ್ಮಿ ಪರವಾಗಿ ನೆರವು ಕೇಳಿದ್ದ ಜನಸ್ನೇಹಿ ಅನಾಥಾಶ್ರಮಕ್ಕೆ ಸಾವಿರಾರು ಮಂದಿ ನೆರವು ಕೊಟ್ಟಿದ್ದಾರೆ. ಹೀಗೆ ಸಂಗ್ರಹವಾದ ಒಟ್ಟು ಹಣ 6 ಲಕ್ಷದ 92 ಸಾವಿರದ 350 ರೂ.

    ಇಷ್ಟೂ ಹಣವನ್ನು ಫಿಲ್ಮ್ ಚೇಂಬರ್‍ನಲ್ಲಿ ಎಲ್ಲರ ಸಮ್ಮುಖದಲ್ಲಿಯೇ ವಿಜಯಲಕ್ಷ್ಮಿ ಅವರ ಖಾತೆಗೆ ವರ್ಗಾವಣೆ ಮಾಡಿದ ಜನಸ್ನೇಹಿ ಅನಾಥಾಶ್ರಮ, ಅಕೌಂಟ್ ಲೆಕ್ಕವನ್ನೂ ನೀಡಿದೆ. ಈ ಮೂಲಕ ಅನುಮಾನ ವ್ಯಕ್ತಪಡಿಸಿದ್ದವರಿಗೂ ಉತ್ತರ ಕೊಟ್ಟಿದೆ.

    ಇದೇ ವೇಳೆ ಮಾತನಾಡಿದ ವಿಜಯಲಕ್ಷ್ಮಿ ನೆರವು ನೀಡಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಶಿವಣ್ಣ, ಸುದೀಪ್, ಯಶ್, ಶ್ರುತಿ, ಪ್ರೇಮಾ, ಸುಧಾರಾಣಿ ಸೇರಿದಂತೆ ಹಲವರು ಮಾತನಾಡಿದ್ದಾರೆ. ನೆರವು ನೀಡಿದ್ದಾರೆ ಎಂದಿರುವ ವಿಜಯಲಕ್ಷ್ಮಿ, ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುತ್ತೇನೆ. ಇಲ್ಲೇ ಇರುತ್ತೇನೆ. ಇಲ್ಲೇ ಬದುಕುತ್ತೇನೆ ಎಂದಿದ್ದಾರೆ.

  • ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    vijaylahsmi used me like a tissue paper says raviprakash

    ನಾಗಮಂಡಲ, ಸೂರ್ಯವಂಶ, ರಂಗಣ್ಣ, ಅರುಣೋದಯ, ಜೋಡಿಹಕ್ಕಿ.. ಖ್ಯಾತಿಯ ನಟಿ ವಿಜಯಲಕ್ಷ್ಮಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ವಿಜಯಲಕ್ಷ್ಮಿ, ನೆರವು ನೀಡಿ ಎಂದು ಬಹಿರಂಗವಾಗಿಯೇ ಚಿತ್ರರಂಗದ ಗಣ್ಯರಿಗೆ ಮನವಿ ಮಾಡಿದ್ದರು. ನಟ ಸುದೀಪ್ 1 ಲಕ್ಷ ರೂ. ಕೊಟ್ಟಿದ್ದರು. ಹಲವರು ನೆರವಿಗೆ ಧಾವಿಸಿ ಬಂದಿದ್ದರು. ಹಾಗೆ ನೆರವಿಗೆ ಹೋದವರಲ್ಲಿ ಒಬ್ಬರು ನಟ ರವಿಪ್ರಕಾಶ್.

    raviprakash_vijaylaksh_conv.jpg

    raviprakash_vijaylakshmi_co.jpgವಿಜಯಲಕ್ಷ್ಮಿ ಅವರ ಕಷ್ಟಕ್ಕೆ ಕರಗಿದ ರವಿಪ್ರಕಾಶ್, 1 ಲಕ್ಷ ರೂ. ಹಣ ನೀಡಿದ್ದಷ್ಟೇ ಅಲ್ಲದೆ, ಬಟ್ಟೆ, ಔಷಧಿಗಳನ್ನು ಕೂಡಾ ಒದಗಿಸಿದ್ದಾರೆ. ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಕಷ್ಟಸುಖ ವಿಚಾರಿಸಿದ್ದಾರೆ. ಆದರೆ, ಇದೇ ಈಗ ರವಿಪ್ರಕಾಶ್ ಅವರಿಗೆ ಮುಳುವಾದಂತೆ ಕಾಣುತ್ತಿದೆ.

    ರವಿಪ್ರಕಾಶ್ ಆರೋಗ್ಯ ವಿಚಾರಿಸುವ ನೆಪದಲ್ಲಿ ಪ್ರತಿದಿನ ಕರೆ ಮಾಡಿ, ಮೆಸೇಜ್ ಮಾಡಿ ಹಿಂಸಿಸುತ್ತಿದ್ದರು. ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿಜಯಲಕ್ಷ್ಮಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ನೆರವು ನೀಡಿದ್ದೆ. ಮಾನವೀಯತೆಯಿಂದ ಸ್ಪಂದಿಸಿದ್ದೆ. ನಾನು ಅವರಿಗೆ ಮಾಡಿರುವ ಮೆಸೇಜ್, ಮಾಡಿರುವ ಎಲ್ಲ ಕರೆಗಳ ಆಡಿಯೋ ರೆಕಾರ್ಡಿಂಗ್ ಇದೆ. ಬೇಕಾದರೆ ಚೆಕ್ ಮಾಡಿಕೊಳ್ಳಿ ಎಂದು ರವಿಪ್ರಕಾಶ್ ತಿರುಗೇಟು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮೆಸೇಜ್ ಮತ್ತು ಕಾಲ್ ರೆಕಾರ್ಡ್‍ಗಳನ್ನು ಬಹಿರಂಗ ಮಾಡಿದ್ದಾರೆ.

    ಮೆಸೇಜ್‍ಗಳಲ್ಲಾಗಲೀ, ಕರೆಗಳಲ್ಲಾಗಲೀ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯದ ಅಥವಾ ಅಸಭ್ಯ ವರ್ತನೆಯ ಸುಳಿವು ಕಾಣಿಸುತ್ತಿಲ್ಲ. ಹಾಗಾದರೆ, ವಿಜಯಲಕ್ಷ್ಮಿ ಹೇಳ್ತಿರೋದು ಸುಳ್ಳಾ..?

  • ವಿನೋದ್ ಪ್ರಭಾಕರ್ ತಾಯಿಯಾಗಿ ನಾಗಮಂಡಲ ವಿಜಯಲಕ್ಷ್ಮಿ

    vijaylakshmi in fighter as vinod prabhakar's mother

    ನಾಗಮಂಡಲ ವಿಜಯಲಕ್ಷ್ಮಿ, ಮತ್ತೊಮ್ಮೆ ವೃತ್ತಿ ಜೀವನ ಆರಂಭಿಸಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಯಾವುದೇ ಪಾತ್ರದಲ್ಲಾದರೂ ಸೈ, ನಟಿಸೋಕೆ ರೆಡಿ ಎಂದು ಕಣ್ಣೀರಿಟ್ಟಿದ್ದ ವಿಜಯಲಕ್ಷ್ಮಿಗೆ, ವಿನೋದ್ ಪ್ರಭಾಕರ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ನೂತನ್ ಉಮೇಶ್ ನಿರ್ದೇಶನದ ಫೈಟರ್ ಸಿನಿಮಾದಲ್ಲಿ ವಿಜಯಲಕ್ಷ್ಮಿ ಜಿಲ್ಲಾಧಿಕಾರಿಯಾಗಿ ಹಾಗೂ ವಿನೋದ್ ಪ್ರಭಾಕರ್ ತಾಯಿಯಾಗಿ ನಟಿಸಲಿದ್ದಾರೆ.

    ಚಿತ್ರದ ಪಾತ್ರಕ್ಕೆ ಸಹಜ ಸುಂದರ ನಟಿಯೊಬ್ಬರು ಬೇಕಿತ್ತು. ಅವರನ್ನು ನನ್ನ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಕ್ಷಕರಿಗೆ ತೋರಿಸುತ್ತಿದ್ದೇನೆ ಎನ್ನುವುದೇ ನನಗೊಂದು ಹೆಮ್ಮೆ ಎಂದಿದ್ದಾರೆ ನಿರ್ದೇಶಕ ನೂತನ್ ಉಮೇಶ್. ಸೋಮಶೇಖರ್ ನಿರ್ಮಾಣದ ಚಿತ್ರದ ಚಿತ್ರೀಕರಣ ಶುರುವಾಗಿದೆ.