` social awarness programme, - chitraloka.com | Kannada Movie News, Reviews | Image

social awarness programme,

  • ಆ್ಯಂಬುಲೆನ್ಸ್‍ಗೆ ದಾರಿ ಬಿಡಿ.. ಅಂತಿದ್ದಾರೆ ಪುನೀತ್

    ouneeth rajkumar creates social awarness

    ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಟ್ರಾಫಿಕ್‍ನದ್ದೇ ದೊಡ್ಡ ಸಮಸ್ಯೆ. ಅದರಲ್ಲೂ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿರುವ ಆ್ಯಂಬುಲೆನ್ಸ್‍ಗಳನ್ನು ನೋಡಿದಾಗ ಅಯ್ಯೋ ಎನಿಸದೇ ಇರದು. ಯಾರ ಜೀವವೋ.. ಏನು ಕಷ್ಟವೋ.. 

    ಹಾಗೆ ಟ್ರಾಫಿಕ್‍ನಲ್ಲಿ ನರಳುವ ಆ್ಯಂಬುಲೆನ್ಸ್‍ಗಳಿಗೆ ದಾರಿ ಬಿಡಿ ಎಂಬ ಸಂದೇಶ ಸಾರುತ್ತಿದ್ದಾರೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಅಷ್ಟೇ ಅಲ್ಲ, ಅಪಘಾತ ನಡೆದ ಸ್ಥಳಗಳಲ್ಲಿ ಗಾಯಾಳುಗಳನ್ನು ನೀವೇ ಆಸ್ಪತ್ರೆಗೆ ಸೇರಿಸಿ, ಜೀವವನ್ನು ಉಳಿಸಿ. ಪೊಲೀಸರಿಂದಾಗಲೀ, ಕೋರ್ಟುಗಳಿಂದಾಗಲೀ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಸಂದೇಶ ಸಾರುತ್ತಿದ್ದಾರೆ.

    ಅಂದಹಾಗೆ ಇದು ಪೊಲೀಸ್ ಇಲಾಖೆಯ ಅಭಿಯಾನ. ಬಿ ಎ ಗುಡ್ ಸಮರಿಟಾನ್ ಲಾ ಅನ್ನೋ ಅಭಿಯಾನ ಆಯೋಜಿಸಿರುವ ಪೊಲೀಸ್ ಇಲಾಖೆ, ಪುನೀತ್ ಅವರಿಂದ ಈ ಸಂದೇಶ ರವಾನಿಸುತ್ತಿದೆ.

    ಆ್ಯಂಬುಲೆನ್ಸ್‍ಗಳಿಗೆ ದಾರಿ ಬಿಡುವ ಪ್ರಯತ್ನ ಈಗಾಗಲೇ ಜಾರಿಯಲ್ಲಿದೆ. ರಸ್ತೆಯಲ್ಲಿ ಜಾಗವೇ ಇಲ್ಲದಿದ್ದರೂ, ಸವಾರರು ಅದು ಹೇಗೋ ಸರ್ಕಸ್ ಮಾಡಿ ಆ್ಯಂಬುಲೆನ್ಸ್‍ಗೆ ದಾರಿ ಮಾಡಿಕೊಡುತ್ತಿದ್ದಾರೆ. ರಸ್ತೆಯೇ ಕಿರಿದಾಗಿರುವ ಪ್ರದೇಶಗಳಲ್ಲಿ ಅದನ್ನು ಮೆಚ್ಚಲೇಬೇಕು. ಆದರೆ, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ತಲುಪಿಸುವ ಬಗ್ಗೆ ಜನರಲ್ಲಿ ಇನ್ನೂ ಜಾಗೃತಿ ಮೂಡಬೇಕಿದೆ.

  • ಯಶ್‍ರಿಂದ ಮಕ್ಕಳ ಕಳ್ಳರ ಸುಳ್‍ಸುದ್ದಿ ಕುರಿತು ಜಾಗೃತಿ

    yash appears in social awarness programme

    ಮಕ್ಕಳ ಕಳ್ಳರು ಬಂದಿದ್ದಾರಂತೆ. ಅವರು ಮಕ್ಕಳನ್ನು ಹೊತ್ತೊಯ್ದು, ಹಾಗ್‍ಹಾಗೇ ತಿಂದುಬಿಡ್ತಾರಂತೆ ಅನ್ನೋ ಸುಳ್ಳುಸುದ್ದಿ, ಎಷ್ಟರಮಟ್ಟಿಗೆ ಭೀತಿ ಹುಟ್ಟಿಸಿತ್ತೆಂದರೆ, ಹಳ್ಳಿಹಳ್ಳಿಗಳಲ್ಲಿ ಗ್ರಾಮಸ್ಥರು ರಾತ್ರಿಯೆಲ್ಲ ಕಾವಲಿಗೆ ನಿಂತಿದ್ದರು. ಅದರ ಪರಾಕಾಷ್ಠೆಯಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಮಾಯಕನೊಬ್ಬನನ್ನು ಹೊಡೆದು ಕೊಂದಿದ್ದರು. ಈ ಕುರಿತು ಈಗಲೂಪೊಲೀಸ್ ಇಲಾಖೆ ವಿವಿಧ ರೂಪದಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ.

    ಈ ಅಭಿಯಾನಕ್ಕೆ ಯಶ್ ಕೂಡಾ ಕೈ ಜೋಡಿಸಿರುವುದು ವಿಶೇಷ. ಅದೂ ಆಕಸ್ಮಿಕವಾಗಿ. ಜಿಮ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯಶ್‍ಗೆ ಪೊಲೀಸ್ ಪೇದೆಗಳು ಈ ಜಾಗೃತಿ ಕುರಿತ ಕರಪತ್ರ ನೀಡಿದ್ದಾರೆ. ಕರಪತ್ರ ಸ್ವೀಕರಿಸಿರುವ ಯಶ್, ಕರಪತ್ರ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈಗ ಯಶ್ ಫೋಟೋವನ್ನೂ ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.

    ಒಂದೊಳ್ಳೆ ಕೆಲಸಕ್ಕೆ ಯಶ್ ಅವರನ್ನು ಬಳಸಿಕೊಂಡಿರುವ ಪೊಲೀಸ್ ಇಲಾಖೆ ಯಶ್‍ಗೆ ಥ್ಯಾಂಕ್ಸ್ ಹೇಳಿದೆ.